POLICE BHAVAN KALABURAGI

POLICE BHAVAN KALABURAGI

10 October 2013

ಮಟಕಾ ಜುಜಾಟ ನಿರತ ವ್ಯಕ್ತಿಯ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ: 10-10-2013 ರಂದು ಮದ್ಯಾಹ್ನ 1200 ಗಂಟೆಗೆ ನಾನು ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಯವರಾದ ಮಾರುತಿ ಎ,ಎಸ್,, ಶಿವಕುಮಾರ ಹೆಚ್.ಸಿ 08, ಶಿವಪ್ಪ ಹೆಚ್.ಸಿ 386, ರಫೀಯೋದ್ದೀನ ಸಿಪಿಸಿ 370,ಶಿವಪ್ರಕಾಶ ಸಿಪಿಸಿ 615, ರಾಮು ಪವಾರ ಸಿಪಿಸಿ 761, ದೇವಿಂದ್ರಪ್ಪ 212, ಸುಭಾಷ ಸಿಪಿಸಿ 447 ರವರೆಲ್ಲರೂ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೆನಂದರೆ, ಮಕ್ತಂಪೂರ ಬಡಾವಣೆಯ ಶಂಕರಲಿಂಗ ಗುಡಿ  ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ  ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಕೊಡುತ್ತಿದ್ದಾನೆ ಎಂಬ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಹಾಗು ಸಿಬ್ಬಂದಿಯವರೊಂದಿಗೆ ಹೊರಟು ಶಂಕರಲಿಂಗ ಗುಡಿ  ಹತ್ತಿರ ಹೊಗಿ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಕೊಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದೊಂದಿಗೆ ಮದ್ಯಾಹ್ನ 1230 ಗಂಟೆಗೆ ಮಟಕಾ ಬರೆದುಕೊಳ್ಳುತ್ತಿದ್ದವನ ಮೇಲೆ ದಾಳಿ ಮಾಡಲಾಗಿ ಮಟಕಾ ಬರೆಯಿಸುತ್ತಿದ್ದವರು ಓಡಿ ಹೋಗಿದ್ದು, ಬರೆದುಕೊಳ್ಳುತ್ತಿದ್ದವನು ಸಿಕ್ಕಿಬಿದ್ದಿದ್ದು ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರಾಜಶೇಖರ ತಂದೆ ಗುರಪ್ಪ ಖಜೂರಿ ಸಾ|| ಮಕ್ತಂಪೂರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ 1) ನಗದು ಹಣ 3,110/- ರೂಪಾಯಿ 2) ಎರಡು ಮಟಕಾ ಚೀಟಿ3)  ಒಂದು ಬಾಲ ಪೇನ್ನ ಅ||ಕಿ|| 00 ದೊರೆತವು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಬರೆಯಿಸಿಕೊಂಡು  ಆರೋಪಿಯೊಂದಿಗೆ ಮರಳಿ ಠಾಣೆಗೆ  ಬಂದು ಸದರಿಯವನ  ವಿರುದ್ದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಚಿಂಚೋಳಿ ಠಾಣೆ : ಶ್ರೀಮತಿ ಸರೋಜಾಬಾಯಿ ಗಂಡ ಭೀಮರಾವ್ ಪವಾರ ಸಾ: ಪೊಲಕಪಳ್ಳಿ ತಾ: ಚಿಂಚೋಳಿ ರವರು ದಿನಾಂಕ 09-10-2013 ರಂದು ಸಾಯಾಂಕಾಲ 05.00 ಗಂಟೆಯ ಸುಮಾರಿಗೆ ನನ್ನ ಗಂಡನು ನಮ್ಮ ಮನೆಯ ಕಟ್ಟೆಯ ಮೇಲೆ ಕುಳುಕೋಂಡಿದ್ದನು ಆಗ ನಮ್ಮ ಪಕ್ಕದ ಮನೆಯ ನೀಲಾಬಾಯಿ ಗಂಡ ಪಾಂಡು ರಾಠೊಡ ಮತ್ತು ಸೀನು ತಂದೆ ಪಾಂಡು  ರಾಠೋಡ ಎಂಬುವವರು ಕೂಡಿಕೊಂಡು ಬಂದು ನಮ್ಮ ಮನೆಯ ಅಂಗಳದಲ್ಲಿ ಕಟ್ಟೆಯ ಮೇಲೆ ಕುಳಿತುಕೊಂಡ ನನ್ನ ಗಂಡನಾದ ಭಿಮರಾವ್ ಪವಾರ ಎಂಬುವವಿನಿಗೆ ನಿನ್ನ ಹೆಂಡತಿ ಎಲ್ಲಿದ್ದಾಳೆ ಸೂಳೆ ರಂಡಿ ಮಗನೇ ಅವಳಿಗೆ ಇವತ್ತು ಬಿಡುವದಿಲ್ಲಾ  ಹೋಡೆದು ಖಲಾಸ ಮಾಡುತ್ತೆವೆ. ಅಂತ ಬೈಯಲು ಪ್ರಾಂಬಿಸಿದರು ಆಗ ನನ್ನ ಗಂಡನು ಏನು ಬೈಯುವದು ಇದೆ ಮತ್ತು ಜಗಳ ಮಾಡುವದು ಇದೆ ಅದೇಲ್ಲಾ ನನ್ನ ಹೆಂಡತಿಯೊಂದಿಗೆ ಮಾಡರಿ ಅಂತ ಅಂದನು ಅದಕ್ಕೆ ನೀಲಾಬಾಯಿಯು ಇವತ್ತು ಬೇಳಗ್ಗೆ ನಿನ್ನ ಹೆಂಡತಿ ನಮ್ಮೋಂದಿಗೆ ತಕರಾರು ಮಾಡಿದ್ದಾಳೆ ಅವಳಿಗೆ ಏನೋ ನೀನು ಹೇಳುವದಿಲ್ಲಾ ಅಂತಾ ಅಂದಳು  ಅಷ್ಟರಲ್ಲಿಯೇ ನಮ್ಮ ಮನೆಯೋಳಗಿ ಇದ್ದ ನಾನು ಮನೆಯಿಂದ ಹೋರೆಗೆ ಬಂದು ಅವರಿಗೆ ಯಾಕೇ ? ಅಂಗೆ ಬೈಯುತ್ತಿದ್ದಿರಿ ಅಂತ ಅಂದೆನು ಅಷ್ಟರಲ್ಲಿಯೇ  ಸೀನು ಎಂಬುವವನು  ನಡೆ ಒಳಗೆ ಇಂದು ನಿನಗೆ ಬಿಡುವದಿಲ್ಲಾ ಹಡುತ್ತೆನೆ ಅಂತಾ  ಅಂದನು ಅವನು ಆಗ ಮಾತಾನಾಡಿದಕ್ಕೆ ನಾನು ನಮ್ಮ ಮನೆಯೋಳಗೆ ಹೋದೆನು. ನಾನು ಮನೆಯೋಳಗೆ ಹೋದ ತಕ್ಷಣವೇ ಸೀನು ಎಂಬುವವನು ನಮ್ಮ ಮನೆ  ಅತೀ ಕ್ರಮ ಪ್ರವೇಶ ಮಾಡಿ ಬಂದವನೇ ನನ್ನ ತಲೆಗೂದಲು ಹಿಡಿದು ಜಗ್ಗಾಡಿ ನೇಲಕ್ಕೆ ಕೆಡವಿ ಕೈಯಿಂದ ಹಣೆಗೆ ಹೋಡೆದು ಮತ್ತು ಕಾಲಿಂದ ಕಿಬ್ಬಹೋಟ್ಟೆಯ ಮೇಲೆ ಒದ್ದು ಗುಪ್ತಗಾಯ ಗೊಳಿಸಿದನು ಆಗ ನಾನು ಚಿರಾಡುತ್ತಿದ್ದಾಗ ನನ್ನ ಮಗಳಾದ ಜ್ಯೋತಿಬಾಯಿ ಎಂಬುವವಳು ಜಗಳ ಬಿಡಿಸಲು ಬಂದರೆ ಸೀನು ಎಂಬುವವನು ಅವಳ ಕೂದಲು ಹಿಡಿದು ಏಳೆದಾಡಿ ಅವಮಾನ ಮಾಡಿದರೇ ಮೋಹನ ತಂದೆ ಪಾಂಡು ಎಂಬುವನು ಒಂದು ಕಾಲಿನಿಂದ ನನ್ನ ಮಗಳ ಎದೆಗೆ , ಹೋಟ್ಟೆಗೆ , ಕಿಬ್ಬಹೋಟ್ಟೆಗೆ ಹೋದ್ದು ಗುಪ್ತಗಾಯಪಡಿಸಿರುತ್ತಾನೆ. ನೀಲಾಬಾಯಿಯು ನನ್ನ ಸೀರೆಯ ಸೆರಗನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ  ಚನ್ನಪ್ಪ ತಂದೆ ಮಲ್ಲೇಶಪ್ಪಾ ಕಣ್ಣಾಕರ ಸಾ: ಬೆಳಮಗಿ ತಾಲೂಕು ಆಳಂದ ದಿನಾಂಕ 08-10-2013 ರಂದು ಮುಂಜಾನೆ ನಮ್ಮ ಮನೆಯ ಕರ ಪವತಯಿಸುವ ಸಲುವಾಗಿ ನಾನು ನಮ್ಮ ಊರ ಗ್ರಾಮ ಪಂಚಾಯತ ಕಾರ್ಯಲಯಕ್ಕೆ ಹೋಗಿದ್ದು, ಕಾರ್ಯದರ್ಶಿರವರು ಬರದೆ ಇದ್ದ ಕಾರಣ ನಾನು ಮತ್ತು ನಮ್ಮ ಗ್ರಾಮದ ಸಿದ್ದಪ್ಪಾ ತಂದೆ ಚಂದ್ರಕಾಂತ ಬಸನಕರ ಮತ್ತು ರಾಜಕುಮಾರ ತಂದೆ ಸಿದ್ರಾಮಪ್ಪಾ ಕಸನಕರ ಅವರಗಳ ಕೂಡಿ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಮಾತಾಡುತ್ತಾ ಕುಳಿತುಕೊಂಡಾಗ  ನಮ್ಮ ಗ್ರಾಮದ ಅಂಬಾರಾಯ ತಂದೆ ಶರಣಪ್ಪ ಜಿಂಜೆ ಪ್ರಸ್ತುತ ಗ್ರಾಮ ಪಂಚಾಯತ ಉಪಾಧ್ಯಕ್ಷರು ಇವರು ಸಭಾಂಗಣದಲ್ಲಿ ಬಂದು ನನಗೆ ಎದ್ದು ನಿಂತುಕೊಳ್ಳುವ ಬದಲಾಗಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಡುತ್ತಿಯಾ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ನನ್ನ ಎಡ ಕೆನ್ನೆಯ ಮೇಲೆ ಹೊಡೆಯಹತ್ತಿದ್ದನು. ಅದಕ್ಕೆ ನಾನು ವಿನಾಕಾರಣವಾಗಿ ನನಗೆಕೆ ಹೊಡೆತ್ತಿರುವೆ ಅಂತಾ ಸಭಾಂಗಣದಿಂದ ಹೊರಗೆ ಬರುವಾಗ ನನ್ನ ಅಂಗಿ ಹಿಡಿದು ನನ್ನನ್ನು ತಡೆದು ನಿಲ್ಲಿಸಿ ಕೈ ಮುಷ್ಟಿ ಮಾಡಿ ನನ್ನ ಹಣೆಯ ಮೇಲೆ ಗುದ್ದಿ ಇನ್ನು ಮುಂದೆ ನನ್ನ ಕಣ್ಣಿಗೆ ಕಂಡರೆ ನಿನಗೆ ಖಲಾಸ ಮಾಡುತ್ತೇನೆ ಜೀವದ ಭಯ ಹಾಕರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಡಿಪ್ಲೋಮಾ ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಅಮೃತಸಿಂಗ ಗಂಡ ಮಲ್ಲಿಕಾರ್ಜುನ ಗೋಪಾಳೆ ಸಾ: ಮುನ್ನೊಳ್ಳಿ ತಾ: ಆಳಂದ ಜಿ: ಗುಲಬರ್ಗಾ ಇವರ ಹಿರಿಯ ಮಗ ಸುನೀಲಕುಮಾರ ಇತನು ಗುಲಬರ್ಗಾದ ಪಾಲಟೆಕ್ನಿಕ ಕಾಲೆಜದಲ್ಲಿ 2 ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದು ಪರೀಕ್ಷೆಯಲ್ಲಿ 3 ವಿಷಯದಲ್ಲಿ ಅನುತ್ತೀರ್ಣನಾಗಿದ್ದು  ಅವನಿಗೆ  ಸ್ವಲ್ಪ ಬೈದು ಅವನಿಗೆ ಕೊಟ್ಟಂತಹ ಮೋಬೈಲ ಕಸಿದುಕೊಂಡಿದ್ದರಿಂದ ಅವನು ಮನಸಿಗೆ ಬೇಜಾರ ಮಾಡಿಕೊಂಡು ದಿನಾಂಕ 07-10-2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಅವನು ವಾಸವಾಗಿದ್ದ ಸರಕಾರಿ ಬಾಲಕರ ವಸತಿ ನಿಲಯ ಕೋಟನೂರ ದರಿಯಾಪೂರ ಬಡವಾಣೆಯಿಂದ ಹೋದವನು ಮರಳಿ ಬಂದಿರುವದಿಲ್ಲ, ಅವನ ಸಂಗಡಿಗರು ಪೋನ ಮಾಡಿ ತಿಳಿಸಿದ್ದರಿಂದ ಮರು ದಿವಸ ಬೆಳಿಗ್ಗೆ ವಸತಿ ನಿಲಯಕ್ಕೆ ಹೋಗಿ ಎಲ್ಲಾ ಕಡೆ ಹುಡಕಾಡಿದ್ದು ಮತ್ತು ಸಂಬಂದಿಕರಿಗೆ ವಿಚಾರಿಸಿದ್ದು ಸುಳಿವು ಸಿಕ್ಕಿರುವದಿಲ್ಲ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಾಜೀದ ಅಹ್ಮದ ತಂದೆ ಸಹೀದ ಅಹ್ಮದ ಸಾ: ರೋಜಾ ಪೊಲೀಸ್ ಠಾಣೆ ಹತ್ತಿರ ರೋಜಾ (ಬಿ) ಗುಲಬರ್ಗಾ ರವರು ದಿನಾಂಕ: 09-10-2013  ರಂದು ಸಾಯಂಕಾಲ 6-30 ಪಿ.ಎಮ್.ಕ್ಕೆ ಜಗತ ಸರ್ಕಲ್ ಹತ್ತಿರ ಸುಪರ ಮಾರ್ಕೇಟ ರೋಡಿಗೆ ಬರುವ ಅಟೋ ಸ್ಟ್ಯಾಂಡ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಗೋವಾ ಹೊಟೇಲ ರೋಡ ಕಡೆಯಿಂದ ಕಾರ ನಂ: ಕೆಎ 32 ಎನ್ 2740 ನೆದ್ದರ ಚಾಲಕ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತಪಡಿಸಿ  ಭಾರಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 10-10-2013 ರಂದು 01-30 ಎ.ಎಮ್ ಕ್ಕೆ ಫಿರ್ಯಾದಿ ತನ್ನ ಮೋಟಾರ ಸೈಕಲ ನಂ. ಕೆ.ಎ 32  ಡಬ್ಲು 3218 ನೇದ್ದು ಚಲಾಯಿಸಿಕೊಂಡು ಸೇಡಂ ರಿಂಗ ರೋಡ ಕಡೆಗೆ ಹೋಗುವ ಕುರಿತು ಗುಬ್ಬಿ ಕಾಲೂನಿ ಕ್ರಾಸ್ ಹತ್ತಿರ ಇರುವ ಎಚ್.ಡಿ.ಎಪ್.ಸಿ ಬ್ಯಾಂಕ ಎದರುಗಡೆ ಹೋಗುತ್ತಿದ್ದಾಗ ಡಾಃ ಹಾನುತೇಜ ಇವರು ತನ್ನ ಕಾರ ನಂ. ಎ.ಪಿ 5 ಬಿ.ಕೆ 2738ನೇದ್ದನ್ನು ಎದರುಗಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಭಾರಿಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಪತ್ರಿಕಾ ಪ್ರಕಟಣೆ
ಮಾರಕ ಆಯುಧಗಳಿಂದ ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ದಿನಾಂಕ 10-10-2013 ರಂದು ಖಚಿತ ಬಾತ್ಮಿಯ ಪ್ರಕಾರ ರೌಡಿ ನಿಗ್ರಹದಳದ ಅಧಿಕಾರಿಯಾದ ಶರಣಬಸವೇಶ್ವರ ಬಿ, ಪಿಐ ಬ್ರಹ್ಮಪೂರ ಠಾಣೆಯ ಮತ್ತು ಬಿ.ಬಿ ಭಜಂತ್ರಿ ಪಿಐ ಸ್ಟೇಶನ ಬಜಾರ್ ಠಾಣೆ ಅಲ್ಲದೆ ರೌಡಿ ನಿಗ್ರಹದಳದ ಸಿಬ್ಬಂಧಿಯವರಾದ ಮಾರುತಿ ಎಎಸ್ಐ, ಶಿವಕುಮಾರ ಸಿಹೆಚಸಿ, ಶಿವಪ್ಪ ಸಿಹೆಚಸಿ, ದೇವಿಂದ್ರಪ್ಪ ಸಿಪಿಸಿ, ರಾಮು ಪವಾರ ಪಿಸಿ, ರಫೀಯೊದ್ದೀನ್ ಪಿಸಿ, ಶಿವಪ್ರಕಾರ ಪಿಸಿ, ಆನಂದ ಪಿಸಿ, ಮಲ್ಲಣ್ಣ ಪಿಸಿ ರವರೊಂದಿಗೆ ಸ್ಟೇಶನ ಬಜಾರ್ ಪೊಲೀಸ್ ಠಾಣೆಯ ಹದ್ದಿಯಲ್ಲಿನ ದಿನಾಂಕ 10-10-2013 ರಂದು ಬೆಳಗಿನ ಜಾವ 2-00 ಗಂಟೆಗೆ ಬಾತ್ಮಿಯ ಪ್ರಕಾರ ಕೊರಂಟಿ  ಹನುಮಾನ ಗುಡಿಗೆ ಹೊಗುವ ದಾರಿಯಲ್ಲಿ ಕೆಲವು ಜನರು ಸಂಚು ರೂಪಿಸಿ ದರೋಡೆ ಮಾಡುವ ಉದ್ದೇಶದಿಂದ ಮಾರಕಾಸ್ರ್ತಗಳನ್ನು ಹಾಗೂ ಖಾರದ ಪುಡಿ ಅಲ್ಲದೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಅಡಗಿ ಕುಳಿತ ಬಗ್ಗೆ ಅಪರಾಧ ಸ್ಥಳಕ್ಕೆ ಬೆಳಗಿನ ಜಾವ 02-30 ಗಂಟೆಗೆ ಹೋಗಿ ಸ್ಥಳ ಪರಿಶೀಲನೆ ಮಾಡಲು ದಾರಿಯ ಪಕ್ಕದಲ್ಲಿರುವ ತಗ್ಗಿನಲ್ಲಿ ದರೋಡೆ ಕೋರರು ಗುಜು ಗುಜು ಮಾತನಾಡುವ ಶಬ್ಧ ಕೇಳಿಸಿತು, ಆಗ ನಾವೆಲ್ಲರು ಬರುವುದನ್ನು ಗಮನಿಸಿ ಓಡಿರೊ ಓಡಿರೋ ಅನ್ನುತ್ತಾ ಒಂದೇ ಸಮನೆ ಓಡತೊಡಗಿದರು ಕೂಡಲೆ ನಾವೆಲ್ಲರು ಬೆನ್ನಟ್ಟಿ 1) ಶೇಕ್ಯಾ. @ ಶೇಖರ ತಂದೆ ಹಣುಮಂತ ಛತ್ರಿ ಸಾ: ಆಳಂದ ಚೆಕ್ ಪೊಸ್ಟ್ ಗುಲಬರ್ಗಾ 2) ಅಜೀಮ ತಂದೆ ರಹೀಂ ಖಾನ್ ಆದರ್ಶನಗರ ಗುಲಬರ್ಗಾ 3) ದತ್ತು ತಂದೆ ನಾರಾಯಣರಾವ ಕ್ಷತ್ರಿಯ ಸಾ: ಆಳಂದ ಚೆಕ್ ಪೊಸ್ಟ್ ಗುಲಬರ್ಗಾ 4) ಸಂತೋಷ @ ಬಾಳಿಕಾಯಿ ಸಂತ್ಯಾ ತಂದೆ ವಿಠ್ಠಲ್ ರಾವ ಸಿಂಘೆ 5) ಜಹಾಂಗಿರ ತಂದೆ ಮ.ಸಾಹೇಬ ಸಾ: ವಿದ್ಯಾನಗರ ಗುಲಬರ್ಗಾ ಅಂತಾ ತಿಳಿಸಿದ್ದು, ಸದರಿಯವರಿಗೆ ತಪ್ಪಿಸಿಕೊಂಡು ಓಡಿಹೊದವರ ಬಗ್ಗೆ ವಿಚಾರಿಸಲು ಅವರ ಹೆಸರು ಆದಿಲ್ ವಿದ್ಯಾನಗರ ಗುಲಬರ್ಗಾ, ಸಮದ ವಿದ್ಯಾನಗರ ಗುಲಬರ್ಗಾ ಚಪ್ಪಲಿ ಸಿಧ್ಯಾ ಆದರ್ಶನಗರ ಅಂತ ತಿಳಿಸಿದರು ಇವರುಗಳು ಕೃತ್ಯಕ್ಕೆ ಉಪಯೊಗಿಸಲು ತಂದಿದ್ದ 1,30,000-00 ಬೆಲೆ ಬಾಳುವ ಮೋಟಾರ್ ಸೈಕಲಗಳನ್ನು ಹಾಗೂ ಖಾರ ಪುಡಿ ಮತ್ತು ಮಾರಾಕಾಸ್ರ್ತಗಳನ್ನು ವಶಪಡಿಸಿಕೊಳ್ಳಲಾಗಿದೆ.  ದಿನಾಂಕ 10-10-2013 ರಂದು ಬೆಳಿಗಿನ ಜಾವ ದರೋಡೆ ಮತ್ತು ಸುಲಿಗೆ ಮಾಡಲು ಸಂಚು ರೂಪಿಸಿ ಸಿದ್ದತೆ ಮಾಡಿಕೊಂಡು ಸಜ್ಜಾಗಿ ಕುಳಿತ ಮೇಲ್ಕಂಡ 5 ಜನ ಆರೋಪಿತರನ್ನು ವಶಕ್ಕೆ ಪಡೆದಿದ್ದು ಇನ್ನೂಳಿದ ಮೂರು ಜನ ಆರೋಪಿಗಳು ಓಡಿಹೊಗಿದ್ದು ಅವರ ಶೋಧನೆಗಾಗಿ ಜಾಲ ಬಿಸಲಾಗಿದೆ ಈ ಬಗ್ಗೆ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:228/2013 ಕಲಂ 399,120(ಬಿ), 402, 75ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.  ಶ್ರೀ ಅಮೀತಸಿಂಗ್ ಐಪಿಎಸ್ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು ಗುಲಬರ್ಗಾ ಹಾಗೂ ಶ್ರೀ ಬಿ.ಎಸ್ ಸವಿಶಂಕರ ನಾಯಕ್ ಪೊಲೀಸ್ ಉಪಾಧೀಕ್ಷಕರು ಎ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಆರೋಪಿತರನ್ನು  ದಸ್ತಗಿರಿ ಮಾಡಲಾಗಿದೆ.
ಇಸ್ಪೀಟ ಜುಜಾಟದ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 09-10-2013 ರಂದು 02-00 ಗಂಟೆ ಸುಮಾರಿಗೆ ಕಮಲಾಪೂರ ಗ್ರಾಮದ ಕೋಳಿ ಸಮಾಜದ ಜೈ ಭವಾನಿ ಮಂದರ  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆನಾನುಪಂಚರು ಮತ್ತು ಠಾಣೆಯ ಸಿಬ್ಬಂದಿ ಜನರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ಜನರು  ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದನ್ನು ನೋಡಿಪಂಚರ ಸಮಕ್ಷಮದಲ್ಲಿ ನಾನುಮತ್ತು ಸಿಬ್ಬಂದಿಯವರು ದಾಳಿ ಮಾಡಿ. ಜೂಜಾಟ ಆಡುತ್ತಿದ್ದ 10 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಿಅಂಗ ಶೋಧನೆ ಮಾಡಲಾಗಿ, 1. ಕಲಿಂ ತಂದೆ ಮದರಸಾಬ ಪ್ಯಾಚಿ 2. ಶ್ಯಾಮಶೋದ್ದಿನ ತಂದೆ ಮದರಸಾಬ ನಾಗೂರೆ 3. ಈರಪ್ಪಾ ತಂದೆ ಬಂಡೆಪ್ಪಾ ಶೇರಿ 4. ಅಕ್ಬರ ತಂದೆ ಶೇಖಸಾಬ ಟಪ್ಪಾ 5. ಬಾಬುರಾವ ತಂದೆ ನಾಗಪ್ಪಾ ಕೂಳ್ಳರೆ 6. ಲಕ್ಷ್ಮಣ ತಂದೆ ಮಾರುತಿ ಉದರಿ 7. ತಪೀಕ್ ತಂದೆ ಪಾಶಾ ತಂದೆ ಬಾಬುಮಿಯಾ 8. ಇಕ್ಬಾಲ ತಂದೆ ಹಸನಸಾಬ ಪ್ಯಾಟೆ 9. ಚಂದ್ರಕಾಂತ ತಂದೆ ಗಂಗಾರಾಮ ಅಲಕುಂಟೆ  10. ಬಸವರಾಜ ತಂದೆ ಸಾಯಿಬಣ್ಣಾ ಪಂಗರಗಿ ಸಾ: ಎಲ್ಲರು ಕಮಲಾಪೂರ ಎಲ್ಲರ ನಡುವೆ ಒಟ್ಟು 15,250 ರೂ ಮತ್ತು 52 ಇಸ್ಪೆಟ್ ಎಲೆಗಳು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 09-10-13 ರಂದು  ಸಂಜೆ 6-30 ಗಂಟೆಯಿಂದ 7-00 ಗಂಟೆಯ ಅವಧಿಯಲ್ಲಿ  ಮೃತ ಮಲಕಾಜಪ್ಪ ಇತನು ಶೇಖ ರೋಜಾ ಪಠಾಣ ಎಂಬುವವರ ಹೊಲದಿಂದ  ಬಿತ್ತನೆ ಕೆಲಸ ಮುಗಿಸಿಕೊಂಡು ಮನೆ ಕಡೆ ನಡೆದುಕೊಂಡು ಹೊರಟಾಗ ಆಳಂದ ರೋಡಿಗೆ ಇರುವ ವಿಶ್ವರಾಧ್ಯ ಗುಡಿ ದಾಟಿ ಸ್ವಲ್ಪ ಮುಂದೆ  ಹೊಸದಾಗಿ ನಿರ್ಮಾಣ ಗೊಂಡಿರುವ ರೇಲ್ವೆ ಓವರ ಬ್ರೀಡ್ಜ ರೋಡಿನ ಮೇಲೆ ಯಾವುದೋ ಮೋಟಾರ ಸೈಕಲ ಚಾಲಕ ಎಕ್ಸಿಡೆಂಟ್ ಮಾಡಿ ಹಾಗೇ ಓಡಿಸಿಕೊಂಡು ಹೋಗಿದ್ದು ಇದರಿಂದಾಗಿ ಮೃತನ ತಲೆ ಹಿಂದೆ ರಕ್ತಗಾಯವಾಗಿ ಬಲಕಿವಿಯಿಂದ ಸೋರ ಹತ್ತಿತ್ತು ಅವನಿಗೆ ಉಪಚಾರ ಕುರಿತು ಸರಕಾರಿ ದವಾಖಾನೆಗೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿದಾಗ, ವೈದ್ಯರು ಉಪಚಾರ ಮಾಡುತ್ತಿದ್ದ ಕಾಲಕ್ಕೆ ರಾತ್ರಿ 9-00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಯಾವುದೋ ಮೋಟಾರ ಸೈಕಲ ಚಾಲಕನನ್ನು ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮೃತನ ಮಗಳು ಶ್ರೀಮತಿ ಶಿವಲೀಲಾ ಗಂಡ ವಿಶ್ವನಾಥ ಮರತೂರ ಸಾ: ಮರತೂರ ಹಾ:ವ: ದುಬೈಕಾಲನಿ ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಕಲ್ಯಾಣರಾವ ತಂದೆ ದೇವಿಂದ್ರಪ್ಪಾ ಸೋಲಳ್ಳಿ ಸಾಃ ಹೀರಾಪೂರ ಗುಲಬರ್ಗಾ ರವರು ದಿನಾಂಕ 08-10-2013 ರಂದು 20-00 ಪಿ.ಎಮ್ ಕ್ಕೆ ಪ್ರಕಾಶ ಟಾಕೀಸ್ ಕಡೆಯಯಿಂದ ಶಹಾಬಜಾರ ನಾಕಾ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಸಾ ಮಿಲ್ ಹತ್ತಿರ ರೋಡಿನ ಮೇಲೆ ಅಕ್ಟಿವಾ ಹೊಂಡಾ ಮೋಟಾರ ಸೈಕಲ ನಂ. ಕೆ.ಎ 32 ಇ.ಡಿ 7546 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ ಪ್ರಕಾಶ ಟಾಕೀಸ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ನನ್ನ ತಲೆಗೆ ರಕ್ತಗಾಯ ಮತ್ತು ಎಡಗಾಲಿಗೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಸ್ವತ್ತನ್ನು ಹಾಳು ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಮಸ್ತಾನ ತಂದೆ ಚಂದ್ರಶಾ ದಂಡೆ ಸಾ|| ದಸ್ತಾಪೂರ ತಮ್ಮ ಗ್ರಾಮದ ಗುಲಬರ್ಗಾ ಹುಮನಾಬಾದ ರೋಡಿನ ಹತ್ತಿರ ಕ್ರಾಸಿನಲ್ಲಿ ಸಾರ್ವಜನಿಕರಿಗೆ ಕುಡುವ ಸಂಬಂದ ಸರಕಾರದಿಂದ ಒಂದು ಬಸ್ಸ ನಿಲ್ದಾಣ ಕಟ್ಟಿಸಿದ್ದು ಸದರಿ ಬಸ್ಸ ನಿಲ್ದಾಣವು ಸೂಮಾರು 20 ವರ್ಷದಿಂದ ಇರುತ್ತದೆ ದಿನಾಂಕ  09-10-13 ರಂದು ಬೆಳಗ್ಗೆ 10.00 ಗಂಟೆಯಿಂದ ಸಾಯಂಕಾಲ 7.00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ದುಸ್ಕರ್ಮಿಗಳು ಬಸ್ಸ ನಿಲ್ದಾಣವನ್ನು ಕೆಡವಿ ಸೂಮಾರು 6, ಲಕ್ಷ ರೂಪಾಯಿ ಅಷ್ಟು ಕಿಮ್ಮತ್ತಿನದು ಸರಕಾರಕ್ಕೆ ಲುಕ್ಸಾನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಗಿದೆ
ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀಮತಿ ಭಾಗಮ್ಮಾ ಗಂಡ ಬಾಬುರಾವ ಸೋನಾಯಿ ಸಾ; ಡೊಂಗರಗಾಂವ  ಗ್ರಾಮ  ಇವರ ಮನೆಯಲ್ಲಿ ದಿನಾಂಕ 09-10-2013 ರಂದು ಬೆಳಗಿನ ಜಾವದಲ್ಲಿ ತುಳಜಾಪೂರಕ್ಕೆ ಹೋಗುವ ಸಲುವಾಗಿ ರೋಟಿ ಮಾಡುತ್ತಿರುವಾಗ ಶೇಖರ ಡಿಗ್ಗಿ ಇವನು ಪಿರ್ಯಾದಿಗೆ ಇಷ್ಟು ಬೇಗೆ ರೋಟಿ ಮಾಡುವ ಶಬ್ದ ಕೇಳಿ ನನ್ನ ನಿದ್ದೆ ಹಾಳು ಮಾಡುತ್ತಿ ಅಂತ ಪಿರ್ಯಾದಿ ಜೋತೆಗೆ ಜಗಳ ತೆಗೆದು ಅವಚ್ಯಾವಾಗಿ ಬೈದ್ದು , ಕೈ ಹಿಡಿದು ಎಳೆದಾಡಿ , ಬಡಿಗೆಯಿಂದ ಹೋಡೆ ಮಾಡಿ ಗುಪ್ತಗಾಯ ಮಾಡಿ, ಜೀವದ ಭಯ ಹಾಕಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನ ಹಿಪ್ಪರಗಾ ಠಾಣೆ : ಶ್ರೀಮತಿ.ಮಲ್ಲಮ್ಮ ಗಂಡ ಶಾಂತಪ್ಪಾ ಬಜಾರೆ ಸಾ:ಮಾದನ ಹಿಪ್ಪರಗಾ ತಾ: ಆಳಂದ.ಇವರು ದಿನಾಂಕ: 22-09-2013 ರಂದು ಸಾಯಂಕಾಲ 05:30 ಗಂಟೆಗೆ ನಾನು ಮಾದನ ಹಿಪ್ಪರಗಾ ಗ್ರಾಮದ ಅರಗಲ ಮಡ್ಡಿಯ ನಮ್ಮ ಕಿರಾಣಿ ಅಂಗಡಿಯಲ್ಲಿದ್ದಾಗ ನಮ್ಮೂರ 1) ಲಗಮಣ್ಣಾ ತಂದೆ ಮಾಳಪ್ಪಾ ಜವಳಿ ಮತ್ತು 2) ಗಂಗಣ್ಣಾ ತಂದೆ ಹಣಮಂತ ಮೇತ್ರೆ ಇಬ್ಬರೂ ನಮ್ಮ ಅಂಗಡಿಯ ಎದರು ಬಂದು ಚೀರಾಡುತ್ತಿದ್ದರು. ನಾನು ಅವರಿಗೆ ಇಲ್ಲಿಂದ ಹೋಗರಿ ಗಿರಾಕಿಗಳು ಬರುತ್ತವೆ ಚೀರಾಡಬೇಡಿರಿ ಹೋಗರಿ ಎಂದು ಹೇಳಿದಾಗ ಲಗಮಣ್ಣ ಇವನು ಅವಾಚ್ಯ ಶಬ್ದಗಳಿಂದ ಬೈದು ನಾವು ನೀಮ್ಮ ಅಂಗಡಿಗೆ ಬಂದು ತೊಂದರೆ ಕೊಡುತ್ತಿಲ್ಲಾ ಎಂದು ಬೈದಿರುತ್ತಾರೆ. ನಾನು ಅಂಗಡಿಯಿಂದ ಹೊರಗೆ ಬಂದು ನಮ್ಮ ಅಂಗಡಿಯ ಎದುರಿಗೆ ಚೀರಾಡುತ್ತಿದಿರಿ ಇಲ್ಲಿಂದ ಹೋಗರಿ ಎಂದರೆ ನನಗೆ ಹೊಲಸು ಶಬ್ಬಗಳಿಂದ ಬೈಯತ್ತಿರಿ ಎಂದು ಕೇಳಿದಾಗ ಗಂಗಣ್ಣಾ ಮೇತ್ರೆ ಇತನು ಈ ಬೋಸಡಿಗೆ ಸೊಕ್ಕು ಬಹಳ ಇದೆ ಒಂದು ಕೈ ನೋಡಿಯೆ ಬೀಡೊಣ ಎಂದು ತನ್ನ ಕೈಯಿಂದ ನನ್ನ ಕಪಾಳದ ಮೇಲೆ ಜೋರಾಗಿ ಹೊಡೆದಿರುತ್ತಾನೆ ಮತ್ತು ನನ್ನ ಮೈಮೇಲಿನ ಸೀರೆ ಸೆರಗು ಹಿಡಿದು ಜಗ್ಗಿ ಜನರ ಎದುರಿಗೆ ಅವಮಾನ ಮಾಡಿರುತ್ತಾನೆ. ನನಗೆ ಅಡ್ಡಗಟ್ಟಿ ನಿಂತು ಮುಂದೆ ಹೋಗದಂತೆ ತಡೆದು ನಿಲ್ಲಿಸಿರುತ್ತಾರೆ. ಇವತ್ತು ನಿನ್ನ ಜೀವ ಸಹಿತ ಬೀಡುವುದಿಲ್ಲಾ ಎಂದು ಪ್ರಾಣ ಬೇದರಿಕೆ ಹಾಕಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.