POLICE BHAVAN KALABURAGI

POLICE BHAVAN KALABURAGI

10 October 2013

ಪತ್ರಿಕಾ ಪ್ರಕಟಣೆ
ಮಾರಕ ಆಯುಧಗಳಿಂದ ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ದಿನಾಂಕ 10-10-2013 ರಂದು ಖಚಿತ ಬಾತ್ಮಿಯ ಪ್ರಕಾರ ರೌಡಿ ನಿಗ್ರಹದಳದ ಅಧಿಕಾರಿಯಾದ ಶರಣಬಸವೇಶ್ವರ ಬಿ, ಪಿಐ ಬ್ರಹ್ಮಪೂರ ಠಾಣೆಯ ಮತ್ತು ಬಿ.ಬಿ ಭಜಂತ್ರಿ ಪಿಐ ಸ್ಟೇಶನ ಬಜಾರ್ ಠಾಣೆ ಅಲ್ಲದೆ ರೌಡಿ ನಿಗ್ರಹದಳದ ಸಿಬ್ಬಂಧಿಯವರಾದ ಮಾರುತಿ ಎಎಸ್ಐ, ಶಿವಕುಮಾರ ಸಿಹೆಚಸಿ, ಶಿವಪ್ಪ ಸಿಹೆಚಸಿ, ದೇವಿಂದ್ರಪ್ಪ ಸಿಪಿಸಿ, ರಾಮು ಪವಾರ ಪಿಸಿ, ರಫೀಯೊದ್ದೀನ್ ಪಿಸಿ, ಶಿವಪ್ರಕಾರ ಪಿಸಿ, ಆನಂದ ಪಿಸಿ, ಮಲ್ಲಣ್ಣ ಪಿಸಿ ರವರೊಂದಿಗೆ ಸ್ಟೇಶನ ಬಜಾರ್ ಪೊಲೀಸ್ ಠಾಣೆಯ ಹದ್ದಿಯಲ್ಲಿನ ದಿನಾಂಕ 10-10-2013 ರಂದು ಬೆಳಗಿನ ಜಾವ 2-00 ಗಂಟೆಗೆ ಬಾತ್ಮಿಯ ಪ್ರಕಾರ ಕೊರಂಟಿ  ಹನುಮಾನ ಗುಡಿಗೆ ಹೊಗುವ ದಾರಿಯಲ್ಲಿ ಕೆಲವು ಜನರು ಸಂಚು ರೂಪಿಸಿ ದರೋಡೆ ಮಾಡುವ ಉದ್ದೇಶದಿಂದ ಮಾರಕಾಸ್ರ್ತಗಳನ್ನು ಹಾಗೂ ಖಾರದ ಪುಡಿ ಅಲ್ಲದೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಅಡಗಿ ಕುಳಿತ ಬಗ್ಗೆ ಅಪರಾಧ ಸ್ಥಳಕ್ಕೆ ಬೆಳಗಿನ ಜಾವ 02-30 ಗಂಟೆಗೆ ಹೋಗಿ ಸ್ಥಳ ಪರಿಶೀಲನೆ ಮಾಡಲು ದಾರಿಯ ಪಕ್ಕದಲ್ಲಿರುವ ತಗ್ಗಿನಲ್ಲಿ ದರೋಡೆ ಕೋರರು ಗುಜು ಗುಜು ಮಾತನಾಡುವ ಶಬ್ಧ ಕೇಳಿಸಿತು, ಆಗ ನಾವೆಲ್ಲರು ಬರುವುದನ್ನು ಗಮನಿಸಿ ಓಡಿರೊ ಓಡಿರೋ ಅನ್ನುತ್ತಾ ಒಂದೇ ಸಮನೆ ಓಡತೊಡಗಿದರು ಕೂಡಲೆ ನಾವೆಲ್ಲರು ಬೆನ್ನಟ್ಟಿ 1) ಶೇಕ್ಯಾ. @ ಶೇಖರ ತಂದೆ ಹಣುಮಂತ ಛತ್ರಿ ಸಾ: ಆಳಂದ ಚೆಕ್ ಪೊಸ್ಟ್ ಗುಲಬರ್ಗಾ 2) ಅಜೀಮ ತಂದೆ ರಹೀಂ ಖಾನ್ ಆದರ್ಶನಗರ ಗುಲಬರ್ಗಾ 3) ದತ್ತು ತಂದೆ ನಾರಾಯಣರಾವ ಕ್ಷತ್ರಿಯ ಸಾ: ಆಳಂದ ಚೆಕ್ ಪೊಸ್ಟ್ ಗುಲಬರ್ಗಾ 4) ಸಂತೋಷ @ ಬಾಳಿಕಾಯಿ ಸಂತ್ಯಾ ತಂದೆ ವಿಠ್ಠಲ್ ರಾವ ಸಿಂಘೆ 5) ಜಹಾಂಗಿರ ತಂದೆ ಮ.ಸಾಹೇಬ ಸಾ: ವಿದ್ಯಾನಗರ ಗುಲಬರ್ಗಾ ಅಂತಾ ತಿಳಿಸಿದ್ದು, ಸದರಿಯವರಿಗೆ ತಪ್ಪಿಸಿಕೊಂಡು ಓಡಿಹೊದವರ ಬಗ್ಗೆ ವಿಚಾರಿಸಲು ಅವರ ಹೆಸರು ಆದಿಲ್ ವಿದ್ಯಾನಗರ ಗುಲಬರ್ಗಾ, ಸಮದ ವಿದ್ಯಾನಗರ ಗುಲಬರ್ಗಾ ಚಪ್ಪಲಿ ಸಿಧ್ಯಾ ಆದರ್ಶನಗರ ಅಂತ ತಿಳಿಸಿದರು ಇವರುಗಳು ಕೃತ್ಯಕ್ಕೆ ಉಪಯೊಗಿಸಲು ತಂದಿದ್ದ 1,30,000-00 ಬೆಲೆ ಬಾಳುವ ಮೋಟಾರ್ ಸೈಕಲಗಳನ್ನು ಹಾಗೂ ಖಾರ ಪುಡಿ ಮತ್ತು ಮಾರಾಕಾಸ್ರ್ತಗಳನ್ನು ವಶಪಡಿಸಿಕೊಳ್ಳಲಾಗಿದೆ.  ದಿನಾಂಕ 10-10-2013 ರಂದು ಬೆಳಿಗಿನ ಜಾವ ದರೋಡೆ ಮತ್ತು ಸುಲಿಗೆ ಮಾಡಲು ಸಂಚು ರೂಪಿಸಿ ಸಿದ್ದತೆ ಮಾಡಿಕೊಂಡು ಸಜ್ಜಾಗಿ ಕುಳಿತ ಮೇಲ್ಕಂಡ 5 ಜನ ಆರೋಪಿತರನ್ನು ವಶಕ್ಕೆ ಪಡೆದಿದ್ದು ಇನ್ನೂಳಿದ ಮೂರು ಜನ ಆರೋಪಿಗಳು ಓಡಿಹೊಗಿದ್ದು ಅವರ ಶೋಧನೆಗಾಗಿ ಜಾಲ ಬಿಸಲಾಗಿದೆ ಈ ಬಗ್ಗೆ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:228/2013 ಕಲಂ 399,120(ಬಿ), 402, 75ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.  ಶ್ರೀ ಅಮೀತಸಿಂಗ್ ಐಪಿಎಸ್ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು ಗುಲಬರ್ಗಾ ಹಾಗೂ ಶ್ರೀ ಬಿ.ಎಸ್ ಸವಿಶಂಕರ ನಾಯಕ್ ಪೊಲೀಸ್ ಉಪಾಧೀಕ್ಷಕರು ಎ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಆರೋಪಿತರನ್ನು  ದಸ್ತಗಿರಿ ಮಾಡಲಾಗಿದೆ.
ಇಸ್ಪೀಟ ಜುಜಾಟದ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 09-10-2013 ರಂದು 02-00 ಗಂಟೆ ಸುಮಾರಿಗೆ ಕಮಲಾಪೂರ ಗ್ರಾಮದ ಕೋಳಿ ಸಮಾಜದ ಜೈ ಭವಾನಿ ಮಂದರ  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆನಾನುಪಂಚರು ಮತ್ತು ಠಾಣೆಯ ಸಿಬ್ಬಂದಿ ಜನರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ಜನರು  ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದನ್ನು ನೋಡಿಪಂಚರ ಸಮಕ್ಷಮದಲ್ಲಿ ನಾನುಮತ್ತು ಸಿಬ್ಬಂದಿಯವರು ದಾಳಿ ಮಾಡಿ. ಜೂಜಾಟ ಆಡುತ್ತಿದ್ದ 10 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಿಅಂಗ ಶೋಧನೆ ಮಾಡಲಾಗಿ, 1. ಕಲಿಂ ತಂದೆ ಮದರಸಾಬ ಪ್ಯಾಚಿ 2. ಶ್ಯಾಮಶೋದ್ದಿನ ತಂದೆ ಮದರಸಾಬ ನಾಗೂರೆ 3. ಈರಪ್ಪಾ ತಂದೆ ಬಂಡೆಪ್ಪಾ ಶೇರಿ 4. ಅಕ್ಬರ ತಂದೆ ಶೇಖಸಾಬ ಟಪ್ಪಾ 5. ಬಾಬುರಾವ ತಂದೆ ನಾಗಪ್ಪಾ ಕೂಳ್ಳರೆ 6. ಲಕ್ಷ್ಮಣ ತಂದೆ ಮಾರುತಿ ಉದರಿ 7. ತಪೀಕ್ ತಂದೆ ಪಾಶಾ ತಂದೆ ಬಾಬುಮಿಯಾ 8. ಇಕ್ಬಾಲ ತಂದೆ ಹಸನಸಾಬ ಪ್ಯಾಟೆ 9. ಚಂದ್ರಕಾಂತ ತಂದೆ ಗಂಗಾರಾಮ ಅಲಕುಂಟೆ  10. ಬಸವರಾಜ ತಂದೆ ಸಾಯಿಬಣ್ಣಾ ಪಂಗರಗಿ ಸಾ: ಎಲ್ಲರು ಕಮಲಾಪೂರ ಎಲ್ಲರ ನಡುವೆ ಒಟ್ಟು 15,250 ರೂ ಮತ್ತು 52 ಇಸ್ಪೆಟ್ ಎಲೆಗಳು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 09-10-13 ರಂದು  ಸಂಜೆ 6-30 ಗಂಟೆಯಿಂದ 7-00 ಗಂಟೆಯ ಅವಧಿಯಲ್ಲಿ  ಮೃತ ಮಲಕಾಜಪ್ಪ ಇತನು ಶೇಖ ರೋಜಾ ಪಠಾಣ ಎಂಬುವವರ ಹೊಲದಿಂದ  ಬಿತ್ತನೆ ಕೆಲಸ ಮುಗಿಸಿಕೊಂಡು ಮನೆ ಕಡೆ ನಡೆದುಕೊಂಡು ಹೊರಟಾಗ ಆಳಂದ ರೋಡಿಗೆ ಇರುವ ವಿಶ್ವರಾಧ್ಯ ಗುಡಿ ದಾಟಿ ಸ್ವಲ್ಪ ಮುಂದೆ  ಹೊಸದಾಗಿ ನಿರ್ಮಾಣ ಗೊಂಡಿರುವ ರೇಲ್ವೆ ಓವರ ಬ್ರೀಡ್ಜ ರೋಡಿನ ಮೇಲೆ ಯಾವುದೋ ಮೋಟಾರ ಸೈಕಲ ಚಾಲಕ ಎಕ್ಸಿಡೆಂಟ್ ಮಾಡಿ ಹಾಗೇ ಓಡಿಸಿಕೊಂಡು ಹೋಗಿದ್ದು ಇದರಿಂದಾಗಿ ಮೃತನ ತಲೆ ಹಿಂದೆ ರಕ್ತಗಾಯವಾಗಿ ಬಲಕಿವಿಯಿಂದ ಸೋರ ಹತ್ತಿತ್ತು ಅವನಿಗೆ ಉಪಚಾರ ಕುರಿತು ಸರಕಾರಿ ದವಾಖಾನೆಗೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿದಾಗ, ವೈದ್ಯರು ಉಪಚಾರ ಮಾಡುತ್ತಿದ್ದ ಕಾಲಕ್ಕೆ ರಾತ್ರಿ 9-00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಯಾವುದೋ ಮೋಟಾರ ಸೈಕಲ ಚಾಲಕನನ್ನು ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮೃತನ ಮಗಳು ಶ್ರೀಮತಿ ಶಿವಲೀಲಾ ಗಂಡ ವಿಶ್ವನಾಥ ಮರತೂರ ಸಾ: ಮರತೂರ ಹಾ:ವ: ದುಬೈಕಾಲನಿ ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಕಲ್ಯಾಣರಾವ ತಂದೆ ದೇವಿಂದ್ರಪ್ಪಾ ಸೋಲಳ್ಳಿ ಸಾಃ ಹೀರಾಪೂರ ಗುಲಬರ್ಗಾ ರವರು ದಿನಾಂಕ 08-10-2013 ರಂದು 20-00 ಪಿ.ಎಮ್ ಕ್ಕೆ ಪ್ರಕಾಶ ಟಾಕೀಸ್ ಕಡೆಯಯಿಂದ ಶಹಾಬಜಾರ ನಾಕಾ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಸಾ ಮಿಲ್ ಹತ್ತಿರ ರೋಡಿನ ಮೇಲೆ ಅಕ್ಟಿವಾ ಹೊಂಡಾ ಮೋಟಾರ ಸೈಕಲ ನಂ. ಕೆ.ಎ 32 ಇ.ಡಿ 7546 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ ಪ್ರಕಾಶ ಟಾಕೀಸ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ನನ್ನ ತಲೆಗೆ ರಕ್ತಗಾಯ ಮತ್ತು ಎಡಗಾಲಿಗೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಸ್ವತ್ತನ್ನು ಹಾಳು ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಮಸ್ತಾನ ತಂದೆ ಚಂದ್ರಶಾ ದಂಡೆ ಸಾ|| ದಸ್ತಾಪೂರ ತಮ್ಮ ಗ್ರಾಮದ ಗುಲಬರ್ಗಾ ಹುಮನಾಬಾದ ರೋಡಿನ ಹತ್ತಿರ ಕ್ರಾಸಿನಲ್ಲಿ ಸಾರ್ವಜನಿಕರಿಗೆ ಕುಡುವ ಸಂಬಂದ ಸರಕಾರದಿಂದ ಒಂದು ಬಸ್ಸ ನಿಲ್ದಾಣ ಕಟ್ಟಿಸಿದ್ದು ಸದರಿ ಬಸ್ಸ ನಿಲ್ದಾಣವು ಸೂಮಾರು 20 ವರ್ಷದಿಂದ ಇರುತ್ತದೆ ದಿನಾಂಕ  09-10-13 ರಂದು ಬೆಳಗ್ಗೆ 10.00 ಗಂಟೆಯಿಂದ ಸಾಯಂಕಾಲ 7.00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ದುಸ್ಕರ್ಮಿಗಳು ಬಸ್ಸ ನಿಲ್ದಾಣವನ್ನು ಕೆಡವಿ ಸೂಮಾರು 6, ಲಕ್ಷ ರೂಪಾಯಿ ಅಷ್ಟು ಕಿಮ್ಮತ್ತಿನದು ಸರಕಾರಕ್ಕೆ ಲುಕ್ಸಾನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಗಿದೆ
ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀಮತಿ ಭಾಗಮ್ಮಾ ಗಂಡ ಬಾಬುರಾವ ಸೋನಾಯಿ ಸಾ; ಡೊಂಗರಗಾಂವ  ಗ್ರಾಮ  ಇವರ ಮನೆಯಲ್ಲಿ ದಿನಾಂಕ 09-10-2013 ರಂದು ಬೆಳಗಿನ ಜಾವದಲ್ಲಿ ತುಳಜಾಪೂರಕ್ಕೆ ಹೋಗುವ ಸಲುವಾಗಿ ರೋಟಿ ಮಾಡುತ್ತಿರುವಾಗ ಶೇಖರ ಡಿಗ್ಗಿ ಇವನು ಪಿರ್ಯಾದಿಗೆ ಇಷ್ಟು ಬೇಗೆ ರೋಟಿ ಮಾಡುವ ಶಬ್ದ ಕೇಳಿ ನನ್ನ ನಿದ್ದೆ ಹಾಳು ಮಾಡುತ್ತಿ ಅಂತ ಪಿರ್ಯಾದಿ ಜೋತೆಗೆ ಜಗಳ ತೆಗೆದು ಅವಚ್ಯಾವಾಗಿ ಬೈದ್ದು , ಕೈ ಹಿಡಿದು ಎಳೆದಾಡಿ , ಬಡಿಗೆಯಿಂದ ಹೋಡೆ ಮಾಡಿ ಗುಪ್ತಗಾಯ ಮಾಡಿ, ಜೀವದ ಭಯ ಹಾಕಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನ ಹಿಪ್ಪರಗಾ ಠಾಣೆ : ಶ್ರೀಮತಿ.ಮಲ್ಲಮ್ಮ ಗಂಡ ಶಾಂತಪ್ಪಾ ಬಜಾರೆ ಸಾ:ಮಾದನ ಹಿಪ್ಪರಗಾ ತಾ: ಆಳಂದ.ಇವರು ದಿನಾಂಕ: 22-09-2013 ರಂದು ಸಾಯಂಕಾಲ 05:30 ಗಂಟೆಗೆ ನಾನು ಮಾದನ ಹಿಪ್ಪರಗಾ ಗ್ರಾಮದ ಅರಗಲ ಮಡ್ಡಿಯ ನಮ್ಮ ಕಿರಾಣಿ ಅಂಗಡಿಯಲ್ಲಿದ್ದಾಗ ನಮ್ಮೂರ 1) ಲಗಮಣ್ಣಾ ತಂದೆ ಮಾಳಪ್ಪಾ ಜವಳಿ ಮತ್ತು 2) ಗಂಗಣ್ಣಾ ತಂದೆ ಹಣಮಂತ ಮೇತ್ರೆ ಇಬ್ಬರೂ ನಮ್ಮ ಅಂಗಡಿಯ ಎದರು ಬಂದು ಚೀರಾಡುತ್ತಿದ್ದರು. ನಾನು ಅವರಿಗೆ ಇಲ್ಲಿಂದ ಹೋಗರಿ ಗಿರಾಕಿಗಳು ಬರುತ್ತವೆ ಚೀರಾಡಬೇಡಿರಿ ಹೋಗರಿ ಎಂದು ಹೇಳಿದಾಗ ಲಗಮಣ್ಣ ಇವನು ಅವಾಚ್ಯ ಶಬ್ದಗಳಿಂದ ಬೈದು ನಾವು ನೀಮ್ಮ ಅಂಗಡಿಗೆ ಬಂದು ತೊಂದರೆ ಕೊಡುತ್ತಿಲ್ಲಾ ಎಂದು ಬೈದಿರುತ್ತಾರೆ. ನಾನು ಅಂಗಡಿಯಿಂದ ಹೊರಗೆ ಬಂದು ನಮ್ಮ ಅಂಗಡಿಯ ಎದುರಿಗೆ ಚೀರಾಡುತ್ತಿದಿರಿ ಇಲ್ಲಿಂದ ಹೋಗರಿ ಎಂದರೆ ನನಗೆ ಹೊಲಸು ಶಬ್ಬಗಳಿಂದ ಬೈಯತ್ತಿರಿ ಎಂದು ಕೇಳಿದಾಗ ಗಂಗಣ್ಣಾ ಮೇತ್ರೆ ಇತನು ಈ ಬೋಸಡಿಗೆ ಸೊಕ್ಕು ಬಹಳ ಇದೆ ಒಂದು ಕೈ ನೋಡಿಯೆ ಬೀಡೊಣ ಎಂದು ತನ್ನ ಕೈಯಿಂದ ನನ್ನ ಕಪಾಳದ ಮೇಲೆ ಜೋರಾಗಿ ಹೊಡೆದಿರುತ್ತಾನೆ ಮತ್ತು ನನ್ನ ಮೈಮೇಲಿನ ಸೀರೆ ಸೆರಗು ಹಿಡಿದು ಜಗ್ಗಿ ಜನರ ಎದುರಿಗೆ ಅವಮಾನ ಮಾಡಿರುತ್ತಾನೆ. ನನಗೆ ಅಡ್ಡಗಟ್ಟಿ ನಿಂತು ಮುಂದೆ ಹೋಗದಂತೆ ತಡೆದು ನಿಲ್ಲಿಸಿರುತ್ತಾರೆ. ಇವತ್ತು ನಿನ್ನ ಜೀವ ಸಹಿತ ಬೀಡುವುದಿಲ್ಲಾ ಎಂದು ಪ್ರಾಣ ಬೇದರಿಕೆ ಹಾಕಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: