POLICE BHAVAN KALABURAGI

POLICE BHAVAN KALABURAGI

06 April 2016

Kalaburagi District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 08-02-2016 ರಂದು ಸಾಯುಂಕಾಲ 6=00 ಗಂಟೆ ಸುಮಾರಿಗೆ ರೇವಣಸಿದ್ದಯ್ಯಾ ಸ್ವಾಮಿ ಈತನು ತನ್ನ ಮೊ/ಸೈಕಲ್ ನಂ; ಕೆಎ 32 ಡಬ್ಲೂ 9856 ನೆದ್ದರ ಮೇಲೆ ಹಿಂದುಗಡೆ ಸಚೀನ ಈತನಿಗೆ ಕೂಡಿಸಿಕೊಂಡು ಗಂಜ ಬಸ್ ನಿಲ್ದಾಣ ದಿಂದ ಸುಪರ ಮಾರ್ಕೇಟ ರೋಡ ಕಡೆಗೆ ರೇವಣಸಿದ್ದಯ್ಯಾ ಈತನು ತನ್ನ ಮೋ/ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನೆಹರು ಗಂಜ ಎಸ್.ಬಿ.ಹೆಚ್. ಬ್ಯಾಂಕ ಹತ್ತಿರ ಇರುವ ಶಿವಾಜಿ ಕಟ್ಟಿಗೆ ಅಡ್ಡಾ ಎದುರಿನ ರೋಡ ಮೇಲೆ ಮೋ/ಸೈಕಲ್ ಸ್ಕಿಡ್ಡಾಗಿ ಮೋ/ಸೈಕಲ್ ಸಮೇತ ಕೆಳಗೆ ಬಿದ್ದಿದರಿಂದ ಸದರ ಅಪಘಾತದಲ್ಲಿ ಸಚೀನ ಈತನ  ತಲೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸ್ರಾವ ಆಗುತ್ತಿದ್ದರಿಂದ ಉಪಚಾರ ಕುರಿತು ಆನಂದ ತಂದೆ ಅಣ್ಣಪ್ಪಾ ಮತ್ತು ಸತ್ಯನಾರಾಯಣ ಇಬ್ಬರು ಕೂಡಿ ಒಂದು ಅಟೋರೀಕ್ಷಾದಲ್ಲಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿರುತ್ತಾರೆ. ಸಚೀನ ಈತನು ರಸ್ತೆ ಅಪಘಾತದಲ್ಲಿ ಭಾರಿ ಗಾಯಹೊಂದಿ  ದಿನಾಂಕ: 08-02-2016 ರಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ: 05/04/2016 ರಂದು ಬೆಳಿಗ್ಗೆ 5=30 ಎ.ಎಮ್.ಕ್ಕೆ ಅಪಘಾತದಲ್ಲಿ ಆದ ಗಾಯವು ಉಪಚಾರ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 02-04-2016 ರಂದು ಕೆರಕನಹಳ್ಳಿ ಗ್ರಾಮದ ಅಗಸಿ ಹತ್ತಿರ ಇರುವ ಶಾಂತಾಬಾಯಿ ರವರ ಹೊಟೇಲ್ ಮುಂದೆ ನಾನು ನಿಂತಿದ್ದು ಅದೇ ಸಮಯಕ್ಕೆ ಸದರಿ ಮಹಾರಾಜ ಈತನು ತನ್ನ ಮೊ.ಸೈ ಮೇಲೆ ಬಂದು ಸದರಿ ಶಾಂತಾಬಾಯಿ ರವರ ಹೊಟೇಲ್ ಮುಂದೆ ನಿಲ್ಲಿಸಿ ನಿಂತಿದ್ದು ನಾನು ಅವನ ಹತ್ತಿರ ಹೋಗಿ ನಮಗೆ ಕೆಳದೆ ನಮ್ಮ ಹೊಲದ ಬಾಂದಾರಿ ಯಾಕೆ ಜೆ.ಸಿ.ಬಿ ಯಿಂದ ಹಡ್ಡಿದಿ ಅಂತ ಕೇಳಿದಕ್ಕೆ ನಾ ಏನಾದ್ರು ಮಾಡ್ತಿನಿ ಲೇ ಭೋಸಡಿ ಮಗನೆ ನೀ ಯಾರಲೆ ಕೇಳಕ್ಕೆ ಮಗನಾ ನಿಂದು ಬಾಳ ನಡದದ ಅಂತ ಅವಾಚ್ಯವಾಗಿ ಬೈಯುತ್ತಿದ್ದು ಆಗ ನಾನು ಊರಿನ ಹಿರಯರಿಗೆ ಕರೆದುಕೊಂಡು ಹೋಗಿ ತೊರಿಸ್ತಿನಿ ಅಂತ ಹೇಳಿದಕ್ಕೆ ತನ್ನ ಹತ್ತಿರ ಇರುವ ಸೈಕಲ್ ಚೈನ್ ದಿಂದ ಏಕಾ ಏಕಿ ನನ್ನ ತಲೆಗೆ & ಬೆನ್ನಿಗೆ ಹೊಡೆದು ರಕ್ತಗಾಯ & ಗುಪ್ತಗಾಯ ಪಡಿಸಿರುತ್ತಾರೆ ಆಗ ಅಲ್ಲೆ ಇದ್ದ ಶರಣಪ್ಪ ಹೂಗಾರ & ಭಾಗಪ್ಪ ಜಮಾದಾರ ಇವರು ಸದರಿ ಜಗಳವನ್ನು ಬಿಡಿಸಿದ್ದು ನಂತರ ಸದರಿ ಮಹಾರಾಜನು ಸುಳೆ ಮಗನೆ ಈಗ ನೀ ಉಳಕ್ಕೊಂಡಿದಿ ನೀನಗ ಜೀವ ಸಹಿತಾ ಬಿಡುವುದಿಲ್ಲ ಮಗನಾ ನಿನ್ನ ಸಾಯಿಸ್ತಿನಿ ಅಂತ ನನಗೆ ಜೀವ ಭಯ ಹಾಕಿರುತ್ತಾನೆ ಅಂತಾ ಶ್ರೀ ಟಾಘವೇಂದ್ರ ತಂದೆ ದತ್ತಪ್ಪಾ ಜಮಾದಾರ ಸಾ : ಕೆರಕನಳ್ಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ವಶ :
ದೇವಲಗಾಣಗಾಪೂರ ಠಾಣೆ : ದಿನಾಂಕ 05-04-2016 ರಂದು ದೇವಲಗಾಣಗಾಪೂರದ ಗ್ರಾಮದ ಮಾಣಿಕೇಶ್ವರಿ ಚೌಕ ಮುಖಾಂತರ ಅಕ್ರಮವಾಗಿ 01 ಟಿಪ್ಪರ ಕಳ್ಳತನದಿಂದ ಮರಳು ತುಂಬಿ ಕೊಂಡು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ದೇವಲಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಣಿಕೇಶ್ವವರಿ ಚೌಕ ಸಮೀಪ ಜೀಪ ನಿಲ್ಲಿಸಿ ನೋಡಲು ತೆಲ್ಲೂರ ಗ್ರಾಮದ ರೋಡಿನ ಮುಂದಿನಿಂದ 1) ಟಿಪ್ಪರ ನಂ ಕೆಎ 32 ಸಿ 5433 ನೇದ್ದರಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾಗ ಟಿಪ್ಪರ ಮೇಲೆ ದಾಳಿ ಮಾಡಲು ಟಿಪ್ಪರ ಚಾಲಕ ತನ್ನ ಟಿಪ್ಪರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು . ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ ಮಾಡಲು ಟಿಪ್ಪರ ನಂ 1) ಟಿಪ್ಪರ ನಂ ಕೆಎ 32 ಸಿ 5433 ಇದ್ದು ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಸದರಿಯವನು ಅನದಿಕೃತವಾಗಿ ಕಳ್ಳತನದಿಂದ ಮರಳು ತಗೆದು ಟಿಪ್ಪರದಲ್ಲಿ ಸಾಗಿಸುತ್ತಿದ್ದಾಗ ಟಿಪ್ಪರನ್ನು ಪಂಚರ ಸಮಕ್ಷಮ 5-45 ಪಿ.ಎಂ ದಿಂದ 6-45 ಪಿ.ಎಂ ವರೆಗೆ ಟಿಪ್ಪರಗಳ ಜಪ್ತಿ ಪಂಚ ನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಟಿಪ್ಪರದಲ್ಲಿನ ಟಿಪ್ಪರ ಮರಳಿನ ಅಂದಾಜ ಕಿಮ್ಮತ್ತು 5000/- ರೂ ಟಿಪ್ಪರಿನ ವಾಹನದ ಅಂದಾಜು ಕಿಮ್ಮತ್ತು 6,0000/- ಲಕ್ಷ ರೂಪಾಯಿ ನೇದ್ದನ್ನು ವಶಪಡಿಸಿಕೊಂಡು ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.