POLICE BHAVAN KALABURAGI

POLICE BHAVAN KALABURAGI

07 October 2014

Gulbarga District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ :30-09-14 ರಂದು 6 ಪಿಎಂ ಕ್ಕೆ ಸಂತ್ರಾಸವಾಡಿ ಮೇಡಿಕೇರ್ ಆಸ್ಪತ್ರೆ ಎದರುಗಡೆ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ: 32 – ಇಸಿ 4706 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ಆಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ರಾಧಾಬಾಯಿ ಗಂಡ ಶಿವರಾಮ ಸಿಂಗ್ ಠಾಕೂರ ಸಾ: ನರೋಣಾ ಇವರ ಗಂಡನಾದ ಶಿವರಾಮ ಸಿಂಗ್ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ತನ್ನ ಗಂಡನಿಗೆ ತಲೆಗೆ ಭಾರಿ ಪಟ್ಟಾಗಿರುತ್ತದೆ ಅಂತಾ ಇತ್ಯಾಧಿ ಫಿರ್ಯಾಧಿಯ ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ: 30-09-14 ರಂದು ರಸ್ತೆ ಅಪಘಾತದಲ್ಲಿ ಭಾರಿ ಗಾಯಹೊಂದಿದ್ದ ನನ್ನ ಗಂಡನನ್ನು ಹೆಚ್ಚಿನ ಉಪಚಾರಕ್ಕೆ ನಗರದ ಸತ್ಯ ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ಆತನ ಉಪಚಾರಕ್ಕೆ ನಮ್ಮ ಹತ್ತಿರ ಹಣ ಇರದ ಕಾರಣ ಪುನಃ ನನ್ನ ಗಂಡನನ್ನು ಸತ್ಯ ಆಸ್ಪತ್ರೆಯಿಂದ ದಿನಾಂಕ; 02-10-14 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ ನಂತರ ಅಪಘಾತದಲ್ಲಿ ನನ್ನ ಗಂಡನಿಗೆ ತಲೆಗೆ ಆದ ಭಾರಿ ಪೆಟ್ಟಿನಿಂದ ನನ್ನ ಗಂಡ ಚೇತರಿಸಿಕೊಳ್ಳದೆ ಇಂದು ದಿನಾಂಕ: 06-10-14 ರಂದು 4-40 ಪಿಎಂ ಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾಗ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸಂಚಾರಿ ಠಾಣೆ : ದಿನಾಂಕ 06-10-2014 ರಂದು ಬೆಳಿಗ್ಗೆ 0600 ಘಮಟೆಯ ಸುಮಾರಿಗೆ ಸೇಡಂ ರೋಡ ದರ್ಶನ ಟಾವರ ಎದುರುಗಡೆ ರೋಡಿನ ಮೇಲೆ ಆರೋಪಿ ಸಿದ್ದಾರೂಢ ಈತನು ತನ್ನ ಗೂಡ್ಸ ಅಪೆ ಟಂ-ಟಂ ನಂಬರ ಕೆ.ಎ.32ಸಿ2432 ನೇದ್ದರಲ್ಲಿ ತರಕಾರಿ ತುಂಬಿಕೊಂಡು ಹಿಂದೆ ಟಂ-ಟಂ ದಲ್ಲಿ ಫಿರ್ಯಾಧಿ ಖಾಜಾಬೀ ಗಂಡ ಮೈನೂದ್ದೀನ್ ಮತ್ತು ಭೀಮಬಾಯಿ ಗಂಡ ಮಲ್ಕಣ್ಣ ಇವರನ್ನು ಕೂಡಿಸಿಕೊಂಡು ಕಣ್ಣಿ ಮಾರ್ಕೇಟದಿಂದ ಕಾಳಗಿಗೆ ಹೋಗುವ ಕುರಿತು ಸೇಡಂ ರೋಡ ಮೂಲಕ ಹೋಗುತ್ತಿದ್ದಾಗ ಟಂ-ಟಂ ಚಾಲಕನು ತನ್ನ ಗೂಡ್ಸ ವಾಹನವನ್ನು ಅತೀವೇಗ ಮತ್ತು ಅಲ್ಕಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಕಟ್ಟ ಹೊಡೆದಿದ್ದರಿಂದ ಟಂ-ಟಂದಲ್ಲಿ ಹಿಂದೆ ಕುಳಿತಿದ್ದ ಫಿರ್ಯಾದಿ ಕೆಳಗೆ ಬಿದ್ದು ಗಾಯಗೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 06-10-2014 ರಂದು 1400 ಪಿ.ಎಮ್ ಕ್ಕೆ ಸಂತ್ರಾಸ ವಾಡಿಯ ಮೇನ್ ರೋಡಿನಲ್ಲಿರುವ ಬಾಬು ತಹಾರಿ ಹೋಟೆಲ ಹತ್ತಿರ ರೋಡಿನ ಮೇಲೆ ಫಿರ್ಯಾದಿಯ ಮಗನಾದ ಮಹ್ಮದ ಜೋಹೆಬ ಈತನು ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಮೋಟರ ಸೈಕಲ್ ನಂಬರ ಕೆ.ಎ 32 ಡಬ್ಲ್ಯೂ1856 ನೇದ್ದರ ಚಾಲಕ ತನ್ನ ಮೋಟರ ಸೈಕಲ್  ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ಅಪಘಾತಮಾಡಿ ತನ್ನ ಮೋಟರ ಸೈಕಲ್ ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.