POLICE BHAVAN KALABURAGI

POLICE BHAVAN KALABURAGI

31 May 2016

Kalaburagi District Reported Crimes

ಅಪಹರಿಸಿ ಅತ್ಯಾಚಾರವೇಸಗಿದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-08-05-2016 ರಂದು ಸಂಜೆ 08-30 ಗಂಟೆ ಸುಮಾರಿಗೆ ಫಿರ್ಯಾದಿ ಅಪ್ರಾಪ್ತ ಮಗಳು ತನ್ನ ಮನೆಯ ಮುಂದೆ ನಿಂತಾಗ ಗಂಗಾನಗರದ ನಿವಾಸಿಯಾದ 1) ನಾರಾಯಣ ಮತ್ತು ಅವಳ ತಾಯಿಯಾದ 2) ವಿಮಲಾಬಾಯಿ ಇಬ್ಬರು ಕೂಡಿಕೊಂಡು ಫಿರ್ಯಾದಿ ಮಗಳಿಗೆ ಬಜರದಸ್ತಯಿಂದ ಒತ್ತಾಯಪೂರ್ವಕವಾಗಿ ಬಾಯಿ ಒತ್ತಿ ಹಿಡಿದು ಮೋಟಾರ ಸೈಕಲದ ಮೇಲೆ ಕೂಡಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದು:ಖಾಪತಗೊಂಡ ನನ್ನ ಮಗಳು ದಿನಾಂಕ:- 08-05-2016ರಂದು ರಾತ್ರಿ 08-30 ಗಂಟೆ ಸುಮಾರಿಗೆ ನೀರು ತುಂಬಲು ಬಂದಾಗ ಆರೋಪಿತರಾದ 1) ನಾರಾಯಣ ಮತ್ತು 2) ವಿಮಲಾಬಾಯಿ ಇವರು ಜಬರದಸ್ತಯಿಂದ ಅಪಹರಿಸಿಕೊಂಡು ಹೋಗಿ ಕೇಂದ್ರ ಬಸ ನಿಲ್ದಾಣದಿಂದ ಭಯ ಹಾಕಿ ಪೂನಾ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಯಾವುದೋ ಒಂದು ರೂಮಿನಲ್ಲಿ ಅಕ್ರಮವಾಗಿ ಇಟ್ಟು ದಿನಾಲು ಹಗಲು ಮತ್ತು ರಾತ್ರಿ ಅನ್ನದೇ ಅತ್ಯಾಚಾರ ಮತ್ತು ಹಟಸಂಭೋಗವೆಸಗಿರುತ್ತಾನೆ ಅಂತಾ ಹೇಳಿಕೆ ಕೊಟ್ಟಿದ್ದರ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಚಂದ್ರಶೇಖರ ತಂದೆ ಮರಿಯಪ್ಪಾ ಬಿಳೆಯಲಿ ಸಾ: ಮನೆ ನಂ 11-864 ಬಸವನಗರ ಎಮ್ಎಸ್‌‌‌ಕೆಮಿಲ್ ರೋಡ ಕಲಬುರಗಿ ಇವರು ಕಂದಾಯ ನಿರೀಕ್ಷಕರು ಫರಹತಾಬಾದ ಹಾಗೂ  ಗ್ರಾಮಲೆಕ್ಕಿಗನಾದ ನಾನು ಮಾನ್ಯ ತಹಸೀಲ್ದಾರವರು ಕಲಬುರಗಿರವರ ಆದೇಶ ಸಂ/ಕಂ/ಆರ್ ಓ ಆರ್/2015-16/34 ದಿನಾಂಕ: 29/03/2016 ರ ಪ್ರಕಾರ ಮೈನಾಳ ಸರ್ವೆ ನಂ 80/2,4,5 ಹಾಗೂ ಸರ್ವೇ ನಂಬರ 2/9 83 ರ ಜಮೀನಿನ ಮೇಲೆ ಸ್ಥಳಿಯ ವಿಚಾರಣೆ ಹಾಗೂ ಪಂಚನಾಮೆ ಜರುಗಿಸಲು ಇಂದು ದಿನಾಂಕ; 27/05/2016 ರ ಅಪರಾಹ್ನ 4.30 ರ ಸುಮಾರು ಮೈನಾಳ ಗ್ರಾಮಕ್ಕೆ ತೆರಳಿದ್ದು ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ. ಶ್ರೀ ಮಲ್ಲಯ್ಯಾ ತಂದೆ ರಾಚಯ್ಯಾ ಇವರು ನಮ್ಮ ಹತ್ತಿರ ಬಂದು ನೀವು ಯಾರು, ಎಲ್ಲಿಂದ ಬಂದಿದ್ದಿರಿ ನಿಮ್ಮ ಕೆಲಸವೇನು ಎಂದು ಪ್ರಶ್ನೀಸಿದರು. ಆಗ ನಾನು ಗ್ರಾಮ ಲೆಕ್ಕಿಗ ಇವರು ಕಂದಾಯ ನಿರೀಕ್ಷಕರು ವಾಸ್ತವ ಸ್ಥಿತಿ ತಿಳಿಸಿ ಇಲ್ಲಿ ಜಮೀನಿನ ಪಂಚನಾಮೆಗಾಗಿ ಬಂದಿರುವುದಾಗಿ ತಿಳಿಸಿದ್ದೇನೆ. ಆವಾಗ ಮಲ್ಲಯ್ಯಾ ಅವರ ಬೆಂಬಲಿಗ ಸಹೋದರ ಗುರುಪಾದಯ್ಯಾ ಇವರು ತಲಾಟಿಯೆಂದು ಪರಿಚಯಿಸಿದರು ಅವರು ನಮ್ಮ ಪರಿಚಯ ಮಾಡುತ್ತಿದ್ದಂತೆ ಮಲ್ಲಯ್ಯಾ ತಂದೆ ರಾಚಯ್ಯಾ ಇವರು ನೀನು ಗ್ರಾಮ ಲೆಕ್ಕಿಗನಾಗಿದ್ದರೆ ನನ್ನ ಕೆಲಸ ಯಾಕೆ ಮಾಡಿಲ್ಲಾ ಎಂದು ಕೋಪದಿಂದ ಕೇಳಿದರು ಆಗ ನಾನು ನನ್ನ ಹತ್ತಿರ ಯಾವುದು ಬಾಕಿ ಕೆಲಸ ಇಲ್ಲಾ ಏನಿದೆ ನಿಮ್ಮ ಕೆಲಸವೆಂದು ಕೇಳಿದೆ ಅದಕ್ಕೆ ಅವರು ನಮ್ಮ ತಂದೆಯವರ ಹೆಸರಿನಲ್ಲಿದ್ದ ಜಮೀನು ನನ್ನ ಹೆಸರಿಗೆ ವರ್ಗಾವಣೆ ಮಾಡಲು ನಿನ್ನ ಕಛೇರಿಗೆ ಅರ್ಜಿ ಸಲ್ಲಿಸಿದೆ ಅದನ್ನು ಏನು ಮಾಡಿದೆ.ಫರಹತಾಭಾದ ಕಛೇರಿಗೆ ಯಾಕೇ ಕಳಿಸಿದೆ ಎಂದು ಕೇಳಿದರು.ಆಗ ನಾನು ನಿಮ್ಮ ವರ್ಗಾವಣೆ ನಮ್ಮ ಕಛೇರಿಗೆ ಬಂದಿತ್ತು ಕಡತದಲ್ಲಿ ಮಾನ್ಯ ಭೂಮಿ ಕೇಂದ್ರದ ಉಪ-ತಹಸಿಲ್ದಾರರವರು ನಿಮ್ಮ ವಂಶಾವಳಿಯ ಪ್ರಕಾರ ನೀವು ಇಬ್ಬರೂ ಮಕ್ಕಳಿದ್ದು ನಿಮ್ಮಿಬ್ಬರ ಹೆಸರಿಗೆ ಜಂಟಿಯಾಗಿ ವಿರಾಸತ ವರ್ಗಾವಣೆ ಮಾಡಲು ಸೂಚಿದ್ದು ಅದರಂತೆ ಮಾನ್ಯ ಕಂದಾಯ ನಿರೀಕ್ಷಕರು ವಿಚಾರಣೆಗಾಗಿ ಉಪತಹಸೀಲ್ದಾರರು ಫರಹತಾಬಾದರವರಿಗೆ ಕಡತ ಸಲ್ಲಿಸಿದ್ದು ಅವರ ವಿಚಾರಣೆ ನೋಟಿಸ್ ಈಗಾಗಲೇ ತಮ್ಮಗೆ ನೀಡಿದ್ದು ಮಾನ್ಯ ಉಪತಹಸೀಲ್ದಾರ ರವರ ಆದೇಶಕ್ಕಾಗಿ ನಾವು ಕಾಯುತ್ತಿದ್ದೆವೆ ಎಂದು ಹೇಳಿದ ತಕ್ಷಣ ಶ್ರೀ ಮಲ್ಲಯ್ಯಾರವರು ನನ್ನ ಕಪಾಳ ಮೋಕ್ಷ ಮಾಡಿದರು. ನಂತರ ನಾನು ಅವರಿಗೆ ಸರ್ ನೀವು ಬೆಂಗಳೂರಿನಲ್ಲಿ ಇರುವವರು ನಿಮ್ಮ ವರ್ಗಾವಣೆ ಪ್ರಗತಿಯಲ್ಲಿದೆ  ಅನ್ನುವಷ್ಟರಲ್ಲಿ ಮತ್ತೋಮ್ಮೆ ನನ್ನ ಕಪಾಳಕ್ಕೆ ಜೋರಾಗಿ ಹೊಡೆದರು. ಇದೆಲ್ಲಾ ತಲಾಟೆ ಮಾಡುವ ಕೆಲಸ ಉಪ ತಹಸೀಲ್ದಾರ ಏನು ಬದನೆಕಾಯಿ ಮಾಡಬೇಕು ನೀನು ಸುಳ್ಳು ಹೇಳುತ್ತಿದ್ದಿಯ್ಯಾ ಅಂತಾ ಕಾಲಿನಿಂದ ಒದ್ದರು. ಅಷ್ಟರಲ್ಲಿ ಕಂದಾಯ ನಿರೀಕ್ಷಕರು ಅವರನ್ನು ಸಮಜಾಯಿಸಿ ತಿಳಿಸಿದರು ನೀವು ಯಾರು ನನಗೆ ಗೊತ್ತಿಲ್ಲಾ ಇದರಲ್ಲಿ ಮಧ್ಯೆಪ್ರವೆಶ ಮಾಡಬೇಡಿ ಎಂದು ಗದರಿಸಿದರು. ಆಗ ಮಾನ್ಯ ಕಂದಾಯ ನಿರೀಕ್ಷಕರು ನಾನು ಈ ಗ್ರಾಮಕ್ಕೆ ಸಂಬಂಧಪಟ್ಟ ಆರ್‌‌‌ಐ ಫರಹತಾಬಾದ ವಲಯದ ಆರ್ ಐ ಎಂದು ತಿಳಿಸುತ್ತಿದಂತೆ ಗ್ರಾಮದ ಕೆಲ ಜನ ನನ್ನನ್ನು ಶಾಲೆಯ ಒಳಗಡೆ ಕರೆದು ಕೂಡಿಸಿದರು. ಆದರೂ ಸಹ ಸುಮ್ಮನ್ನಿರದ ಶ್ರೀ ಮಲ್ಲಯ್ಯಾ ಇವರು ಶಾಲೆಯ ಕೊಠಡಿಯ ಒಳಗಡೆ ನುಗ್ಗಿ ಶಾಲೆಯಲ್ಲಿ ಕುಳಿತ್ತಿದ್ದ ನನ್ನ ಹಿಂದಿನಿಂದ ಬಂದು ಬೆನ್ನಿಗೆ ಜೋರಾಗಿ ಒದ್ದರು. ಹಾಗೂ ನಾನು ಕುರ್ಚಿಯಿಂದ ಕೆಳಗೆ ಬೀಳುತ್ತಿದ್ದಂತೆ ಇಂವ ಹೊಲೆಯ ರಂಡಿ ಮಗ ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡುತ್ತಾನೆ ನಾನು ದುಡ್ಡು ಕೊಟ್ಟಿಲ್ಲಾ ಅಂತಾ ನನ್ನ ಕೆಲಸ ಮಾಡಿಲ್ಲಾ ಬೊಳಿಮಗ ನಾನು ಬೆಂಗಳೂರಿನಲ್ಲಿ 5 ವರ್ಷ ಫಿಲ್ಮ ಎಕ್ಟರ ಆಗಿ ಕೆಲಸ ಮಾಡಿ ಬಂದಿದ್ದಿನಿ ಇಂತಹ ಎಷ್ಟು ಜನರಿಗೆ ನೋಡಿದ್ದೆನೆ ಇವನು ಯಾರಿಗೆ ಹೇಳುತ್ತಾನೋ ಹೇಳಲ್ಲಿ ಯಾರನ್ನು ಕರೆಯಿಸುತ್ತಾನೋ ಕರೆಯಿಸಲಿ ಇವನಿಗೆ ಕಲಬುರಗಿಯಲ್ಲಿ ಎಲ್ಲಿಯಾದರೂ ಇರಲಿ ಹೋಗಿ ಒದ್ದೆಯುತ್ತೆನೆ ಎಂದರು. ಅಷ್ಟರಲ್ಲಿ ಕಂದಾಯ ನಿರೀಕ್ಷಕರು ನನ್ನನ್ನು ಬಿಡಿಸಲು ಪ್ರಯತ್ನಿಸುವಾಗ ಇವರ ಸಹೋದರ ಹಾಗೂ ಬೆಂಬಲಿಗರಾದ ಶಕೀಲ ಅಹ್ಮದ ಮಾನ್ಯ ಕಂದಾಯ ನಿರೀಕ್ಷಕರನ್ನು ಅಡ್ಡಗಟ್ಟಿ ನೀನು ಬಿಡಿಸಲು ಹೋದರೆ ನಿನಗೂ ಅದೇ ರೀತಿ ಹೊಡೆಯುತ್ತೆವೆ ಎಂದು ಅವರನ್ನು ನಿಲ್ಲಿಸಿದರು ನಂತರ ಸಾರ್ವಜನಿಕರು ಕಂದಾಯ ನಿರೀಕ್ಷಕರುನ್ನು ನನ್ನ ಹತ್ತಿರ ಕರೆದು ಕೂಡಿಸಿದರು. ತದನಂತರ ನಾವು ಬಂದ ಕೆಲಸ ಸರ್ವೆ ನಂ 80/2,4,5 ರ ಜಮೀನಿನ ಪಂಚನಾಮೆ ಜರೂಗಿಸಿ ಸರ್ವೇ ನಂ 2/9 ಮತ್ತು 83 ಜಮೀನುಗಳ ವಿಕ್ಷಣೆಗೆಂದು ಹೋಗುವಾಗ ಮತ್ತೆ ನನ್ನನ್ನು ಶ್ರೀ ಮಲ್ಲಯ್ಯಾರವರು ತಡೆದು ನನ್ನ ಕರ್ತವ್ಯಕ್ಕೆ ಅಡ್ಡಮಾಡಿ ಮತ್ತೆ ನನ್ನನ್ನು ನಾನು ಬೆಂಗಳೂರಿನಲ್ಲಿ ಎಲ್ಲವನ್ನು ಮಾಡಿದ್ದೆನೆ ಪೊಲೀಸ ಕಂಪ್ಲೇಟ ಅಂತಾ ಹೋದರೆ ಯಾವುದೇ ಸಾಕ್ಷಿವು ಸುಳ್ಳಿವು ಸಿಗದ ಹಾಗೇ ನಿನ್ನನ್ನು ಮೇಲೆ ಕಳುಹಿಸುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣಯಲ್ಲಿ ಪ್ರಕರಣ ದಾಖಲಾಗಿದೆ. 

29 May 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 28.05.2016 ರಂದು ಮುಂಜಾನೆ 05:30 ಗಂಟೆಗೆ ಕೆಲ್ಲೂರು ಗ್ರಾಮದ ಬರ್ಡ್ಸ ಹಿಲ್ಸ ಶಾಲೆಯ ಕ್ರಾಸ್ ಹತ್ತಿರ ಜೇವರಗಿ ಶಹಾಪುರ ರಸ್ತೆಯ ಮೇಲೆ ಕಾರ್‌ ನಂ ಕೆ.ಎ 41 ಝಡ್ 5218 ನೇದ್ದರ ಚಾಲಕನು ತನ್ನ ಕಾರ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನಲ್ಲಿ ಒಮ್ಮೆಲೆ ಕಟ್ ಹೊಡೆದು ಕಾರ್‌ ಪಲ್ಟಿ ಮಾಡಿದ್ದರಿಂದ ನನಗೆ ಮತ್ತು ಸದರಿ ಕಾರ್‌ ಚಾಲಕನಿಗೆ ಗಾಯ-ಪೆಟ್ಟು ಆಗಿರುತ್ತವೆ ಅಂತ ಶ್ರೀ ಅನೀಸ್ ತಂದೆ ಹಸನಸಾಬ್ ಸಾ|| ನವರತ್ನ ಅಪಾರ್ಟಮೆಂಟ್ ಐವಾನ್‌‌ಶಾಹಿ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಜೇವರಗಿ ಠಾಣೆ : ದಿನಾಂಕ  28.05.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ  ಹತ್ತಿರ ಸಾರ್ವಜನಿಕ ರೋಡನಲ್ಲಿ ಒಬ್ಬ ಮನುಷ್ಯನು ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆರವರು ಹಾಗು ಸಿಬ್ಬಂದ ಮತ್ತು ಪಂಚರೊಂದಿಗೆ ಕೃಷಿ ಕಚೇರಿ ಸ್ವಲ್ಪ ದೂರು ಇರುವಾಗಲೇ ರೋಡಿನ ಸೈಡಿನಲ್ಲಿ ಮನೆಯ ಗೊಡೆ  ಮರೆಯಲ್ಲಿ ನಿಂತು ನೋಡಲಾಗಿ ಕೃಷಿ ಇಲಾಖೆ ಕಚೇರಿ ಎದರು ಸಾರ್ವಜನಿಕ ರಸ್ತೆ ಮೇಲೆ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅಂತಾ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಯ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಹ್ಮದ್ ಖಾಜಾಸಾಬ ತಂದೆ ಮಹ್ಮದ್ ಜಾಫರ್ ಸಾಬ ಶೇಖ್  ಸಾ: ಶಾಸ್ತ್ರಿ ಚೌಕ :ಜೇವರ್ಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 1800/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ನೇದ್ದವುಗಳು ಸಿಕ್ಕಿದ್ದು ಅವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಚಂದ್ರಕಲಾ ಗಂಢ ಹಿರಗಣ್ಣಾ ಹಿರಗಪ್ಪನವರ್ ಸಾ: ಹುಲಗುತ್ತಿ ತಾಃ ಬಸವಕಲ್ಯಾಣ ಜಿಲ್ಲೆಃ ಬಿದರ ರವರ ಮಾವನಿಗೆ ಮೂವರು ಗಂಡು ಮಕ್ಕಳಿರುತ್ತಾರೆ, ಎಲ್ಲರೂ ಬೇರೆ ಬೇರೆಯಾಗಿ ವಾಸಮಾಡಿಕೊಂಡಿರುತ್ತಾರೆ. ನನ್ನ ಗಂಡನ ಹೆಸರಿನಲ್ಲಿ ನಾರಾಯಣಪೂರ ಸೀಮಾಂತರದಲ್ಲಿ ಹೊಲ ಸರ್ವೆ ನಂ 250 ರಲ್ಲಿ ಒಟ್ಟು 1 ಎಕರೆ ಜಮಿನು ಇರುತ್ತದೆ. ನನ್ನ ಗಂಡನು ಡ್ರೈವರ್ ಮತ್ತು ನಮ್ಮ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದನು, ಹೋದ ವರ್ಷ ನಮ್ಮ ಹೊಲದಲ್ಲಿನ ಬೆಳೆಗಾಗಿ, ಕ್ರಿಮಿನಾಶ ಔಷದ ಬೀಜ ಇನ್ನಿತರ ಸಾಮಾನುಗಳು ಖರೀದಿ ಸಲುವಾಗಿ ನಮ್ಮೂರಲ್ಲಿ ಖಾಸಗಿಯಾಗಿ 1,50,000/- ರೂ ಸಾಲ  ಮಾಡಿಕೊಂಡಿದ್ದನು, ಅಲ್ಲದೆ ಸದರಿ ಜಮೀನು ಮೇಲೆ ಸಿಂಡಿಕೇಟ್ ಬ್ಯಾಂಕ್ ನಾರಾಯಣಪೂರದಲ್ಲಿ 1,00,000/- ರೂ ಸಾಲ, ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘ ನಾರಾಯಣಪೂರದಲ್ಲಿ 40,000/- ರೂ ಸಾಲ ಇರುತ್ತದೆ. ಹೀಗೆ ಖಾಸಗಿ ಸಾಲ ಮತ್ತು ಬ್ಯಾಂಕ ಸಾಲ ಕೂಡಿ ಒಟ್ಟು 2,90,000/- ರೂ ಸಾಲ ಮಾಡಿದ್ದನು. ಹೋದ ವರ್ಷ ಮತ್ತು ಈ ವರ್ಷ ಸರಿಯಾಗಿ ಮಳೆ ಬಾರದೆ ಇರುವದರಿಂದ ಹೊಲದಲ್ಲಿ ಬೆಳೆ ಬಂದಿರುವದಿಲ್ಲಾ. ಬೇರೆಯವರ ಹತ್ತಿರ ಖಾಸಗಿ ಸಾಲ ಕೂಡಾ ಕಟ್ಟಲು ಆಗಿರುವದಿಲ್ಲಾ. ಈ ವಿಷಯದಲ್ಲಿ ನನ್ನ ಗಂಡನು ನನ್ನ ಮುಂದೆ ನಾವು ಮಾಡಿದ ಸಾಲ ಹೇಗೆ ತೀರಿಸಬೇಕು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದನು. ನಾನು ಮತ್ತು ನಮ್ಮ ಮಾವ ಎಲ್ಲರೂ ನನ್ನ ಗಂಡನಿಗೆ ಮುಂದಿನ ವರ್ಷ ಕಟ್ಟಿದರಾಯಿತು ಅಂತ ಹೇಳುತ್ತಿದ್ದೇವು ಆದರೂ ಕೂಡಾ ಅವನು ನಾನು ಸಾಯುತ್ತೇನೆ ಅಂತ ಅನ್ನುತ್ತಿದ್ದನು. ಈಗ 8 ದಿವಸಗಳ ಹಿಂದೆ ಅಂದರೆ ದಿ: 21.05.2016  ರಂದು ನಾನು ಲಾರಿ ಡ್ರೈವರ್ ಕೆಲಸಕ್ಕೆ ಮೈಸೂರಿಗೆ ಹೋಗುತ್ತೆನೆ ಅಂತಾ ಮನೆಯಲ್ಲಿ ನನಗೆ ಹೇಳಿ ಹೋದನು 3-4 ದಿವಸಗಳ ಹಿಂದೆ ನನ್ನ ಮೊಬೈಲಿಗೆ ಪೊನ ಮಾಡಿ ನಾನು ಮೈಸೂರನಲ್ಲಿದ್ದೆನೆ ನನಗೆ ಕೆಲಸ ಸಿಕ್ಕಿರುವುದಿಲ್ಲಾ ಮರಳಿ ಮನೆಗೆ ಬರುತ್ತಿದ್ದೆನೆ ಅಂತಾ ಹೇಳಿರುತ್ತಾನೆ.  ಇಂದು ದಿ. 28.05.2016 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಪೋನ ಮೂಲಕ ಗೊತ್ತಾಗಿದ್ದೆನೆಂದರೆ ನನ್ನ ಗಂಡ ಹಿರಗಣ್ಣ ಇತನು ಜೇವರಗಿ ಪಟ್ಟಣದ ಹೊರ ವಲಯದ ಗಡ್ಡಿ ಪೂಲ್ ಹತ್ತಿರ ಗುಂಡೆರಾವ ಕುಲಕರ್ಣಿ ಅನ್ನುವವರ ಹೊಲದಲ್ಲಿ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ವಿಷಯ ಗೊತ್ತಾದ ಕೂಡಲೆ ನಾನು ನನ್ನ ಬಾವಂದಿರಾದ ಜಗನ್ನಾಥ ತಂದೆ ಭೀಮಣ್ಣಾ ಹಿರಗಪ್ಪನವರ್, ವೀರಪಣ್ಣ ತಂದೆ ಭೀಮಣ್ಣಾ ಹಿರಗಪ್ಪನವರ್ ನನ್ನ ತಂದೆಯಾದ ವೈಜನಾಥ ತಂದೆ ಮಾಣಿಕಪ್ಪ ಹುಮನಾಬದೆ, ತಾಯಿ ಶಾಂತಾಬಾಯಿ ಹಾಗೂ ಅಣ್ಣತಮ್ಮಕೀಯ ವಾಸುದೇವ ತಂದೆ ಶರಣಪ್ಪ ಹಿರಗಪ್ಪನವರ್ ಇವರಿಗೆ ವಿಷಯ ತಿಳಿಸಿ ನಾವು ಎಲ್ಲರೂ ಕೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ ಹೆಣ ಜೇವರಗಿ ಸರಕಾರಿ ಆಸ್ಪತ್ರೆ ಶವಗಾರದಲ್ಲಿ ಹಾಕಿರುತ್ತಾರೆ ಅಂತಾ ಗೊತ್ತಾದ ಮೇಲೆ ನಾವು ಜೇವರಗಿ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಗಂಡನ ಹೆಣ ನೊಡಿ ಗುರುತಿಸಿರುತ್ತೆನೆ. ಅವನ ಕೊರಳಿಗೆ ಹಗ್ಗದ ಗಾಯವಾಗಿತ್ತು. ಅಲ್ಲಿಯೇ ಇದ್ದ ಮರೆಪ್ಪ ತಂದೆ ಭೀಮಾಶಂಕರ ಜೆಡಿ ಇವರು ಹೆಳಿದ್ದನೆಂದರೆ ಇಂದು ಮುಂಜಾನೆ 10.45 ಗಂಟೆಯ ಸುಮಾರಿಗೆ ನಾನು ನಮ್ಮೂರಿನಿಂದ ಜೇವರಗಿಗೆ ಹೋಗುವಾಗ ನೀನ್ನ ಗಂಡನು ಹೊಲದಲ್ಲಿನ ಗಿಡಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಸತ್ತಿದ್ದನ್ನು  ನೋಡಿ ನಾನು ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿರುತ್ತೆನೆ. ಆಂತಾ ಹೇಳಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 May 2016

Kalaburagi District Press Reporte.

ಪತ್ರಿಕಾ ಪ್ರಕಟಣೆ


ದಿನಾಂಕ 05/03/2014 ರಂದು ಶಾಹಬಾದ ಪಟ್ಟಣದಿಂದ ಮಹಮ್ಮದ ಹಾಜಿ ತಂದೆ ಬಾಬುಮಿಯ್ಯ ವಯ -07ವರ್ಷ, ಸಾ|| ಇಂಜಿನ್ ಪೈಲ್ ಶಹಬಾದ ಬಡವಣೆಯಿಂದ ಕಾಣೆಯಾಗಿದ್ದು ಈ ವಿಷಯದಲ್ಲಿ ಮಗುವಿನ ತಾಯಿ ಶ್ರೀಮತಿ ಫಾತಿಮಾ ಗಂಡ ಬಾಬುಮಿಯ್ಯಾ ಸಾ|| ಇಂಜಿನ್ ಪೈಲ್ ಶಾಹಬಾದ ರವರು ಶಾಹಬಾದ ನಗರ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದರ ಮೇರೆಗೆ ಠಾಣೆ ಗುನ್ನೆ ನಂ 161/2014 ಕಲಂ 363(ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಸುಮಾರು ದಿನಗಳಾದರೂ ಸದರ ಗುನ್ನೆ ಪತ್ತೆಯಾಗದೆ ಇರುವುದರಿಂದ ಈ ಗುನ್ನೆ ಹೆಚ್ಚಿನ ತನಿಖೆ ಕುರಿತು ಕಲಬುರಗಿಯ ಡಿಸಿಐಬಿ ಘಟಕಕ್ಕೆ ವರ್ಗಾಯಿಸಿದ್ದು ಇರುತ್ತದೆ.

        ಮಾನ್ಯ,ಎಸ್.ಎಸ್.ಹುಲ್ಲೂರು, ಡಿ.ಎಸ್.ಪಿ,  ಡಿ.ಸಿ.ಆರ.ಬಿ ರವರ ನಿರ್ದೇಶನದಲ್ಲಿ ಮತ್ತು ಶ್ರೀ ಕೆ.ಎಮ್ ಸತೀಶ ಪಿ.ಐ,  ಡಿಸಿಐಬಿ ಘಟಕ ಕಲಬುರಗಿ ರವರ ನೇತೃತ್ವದಲ್ಲಿ ಡಿಸಿಐಬಿ ಘಟಕ ಸಿಬ್ಬಂದಿಯವರಾದ ಶ್ರೀ ಬಸವರಾಜ ಎ.ಎಸ್.ಐ. ಶ್ರೀ, ದತ್ತಾತ್ರೇಯ ಎ.ಎಸ್.ಐ, ಶ್ರೀ ಆನಂದ ಪ್ರಸಾದ, ಶ್ರೀ, ಸೈಯದ ಅಯ್ಯುಬ, ಶ್ರೀ.ಪ್ರಕಾಶ, ಶ್ರೀ.ಅಂಬಾರಾಯ, ಶ್ರೀ ಚಂದ್ರಕಾಂತ, ಮತ್ತು ಶ್ರೀಮತಿ ಸವಿತಾ ರವರು ಪತ್ತೆ ಕಾರ್ಯದಲ್ಲಿ ನಿರತರಾಗಿ ಸದರ ಕಾಣೆಯಾದ ಮಗುವಿಗೆ ಇಂದು ದಿನಾಂಕ 28/05/2016 ರಂದು ಯಾದಗಿರ ಪಟ್ಟಣದಲ್ಲಿ ಪತ್ತೆ ಹಚ್ಚಿದ್ದು ಇರುತ್ತದೆ. ಈ ವಿಷಯವನ್ನು ತಿಳಿದ ಮಗುವಿನ ಪಾಲಕರು ಮಗುವನ್ನು ಕಂಡು ಸಂತೋಷಭರಿತರಾಗಿ ಪೊಲೀಸರು ಈ ಶ್ಲಾಘನೀಯ ಕೆಲಸಕ್ಕೆ ಪಾಲಕರು ಕೊಂಡ್ಡಾಡಿದರು. 

Kalaburagi District Reported Crimes

ನ್ಯಾಯಾಲಯದಲ್ಲಿ ಬೆಂಕಿ ಹಚ್ಚಿದ್ದರಿಂದ ವಸ್ತಗಳು ಭಸ್ಮ :
ಅಫಜಲಪೂರ ಠಾಣೆ : ಶ್ರಿ ಗುರುಮೂರ್ತಿ ಆರ್.ಡಿ ಪ್ರಥಮ ದರ್ಜೆ ಸಹಾಯಕ ಪ್ರಭಾರಿ ನ್ಯಾಯಾಲಯ ಸೀರೇಸ್ತೆದಾರ ಮಾನ್ಯ ಸಿ.ಜೆ. ಮತ್ತು ಜೆ.ಎಮ್.ಎಫ್.ಸಿ ಕೋರ್ಟ ಅಫಜಲಪೂರ ನಮ್ಮ ನ್ಯಾಯಾಲಯ ಸೀರೇಸ್ತೇದಾರರಾದ ವೈ.ಕೆ ನಡವೀನಕೇರಿ ಇವರು ದಿನಾಂಕ 27-05-2016 ಮತ್ತು 28-05-2016 ರಂದು ಆಕಸ್ಮಿಕ ರಜೆ ಹಾಕಿದ್ದು ನನಗೆ ಪ್ರಭಾರ ವಹಿಸಿರುತ್ತಾರೆ. ನಾನು ದಿನಾಂಕ 27-05-2016 ರಂದು ರಾತ್ರಿ ನಮ್ಮ ಮನೆಯಲ್ಲಿ ನಾನು ಮಲಗಿದ್ದಾಗ ಅಫಲಪೂರ ಪೊಲೀಸ್ ಠಾಣೆಯ ಪಿಸಿ ಸಂತೋಷ ರವರು ನನ್ನ ಮೋಬಾಯಿಲಗೆ ಕರೆ ಮಾಡಿ ನಿಮ್ಮ ನ್ಯಾಯಾಲಯದಲ್ಲಿ ಬೆಂಕಿ ಹತ್ತಿಕೊಂಡಿದೆ ಬನ್ನಿ ಎಂದು ತಿಳಿಸಿದರು. ಆಗ ನಾನು ತಕ್ಷಣ ಕೋರ್ಟಿ ಬಂದು ನೋಡಲಾಗಿ ನಮ್ಮ ನ್ಯಾಯಾಲಯದ ಸೀಪಾಯಿ ಯಾದ ಅಶೋಕ ಸ್ಥಳದಲ್ಲಿ ಹಾಜರಿದ್ದು ನಾನು ಹೇಗೆ ಆಯಿತು ಎಂದು ಕೇಳಿದಾಗ ನನಗೆ ಗೊತ್ತಿಲ ಎಂದು ತಿಳಿಸಿದರು. ಆಗ ನಾನು ಮತ್ತು ಸೀಪಾಯಿ ಅಶೋಕ ಮತ್ತು ಸಿಪಿಸಿ ಸಂತೋಷ, ಸಿಪಿಸಿ ಅಕ್ತರಪಟೇಲ ಹಾಗೂ ಅಗ್ನಿ ಶಾಮಕದ ಸಿಬ್ಬಂದಿಗಳು ಸೇರಿಕೊಂಡು ಬೆಂಕಿಯನ್ನು ಆರೀಸಿದೇವು ತದನಂತರ ತಿಳಿದು ಬಂದ ವಿಷಯ ಏನೆಂದರೆ ನಮ್ಮ ನ್ಯಾಯಾಲಯದ ಆವರಣದಲ್ಲಿರುವ ಕ್ಯಾಂಟೀನಗೆ ನುಗ್ಗಿ ಸೀಲೇಂಡರ ತಗೆದುಕೊಂಡು ಬಂದು ನ್ಯಾಯಾಲಯದ ನ್ಯಾಯಾದೀಶ ಕೋಣೆ ಬಾಗಿಲನ್ನು ಮುರಿದು  ಒಳ ಪ್ರವೇಶಿಸಿದಾಗ ಯಾರೋ ದುಷ್ಕರ್ಮೀಗಳು ಸಿಲೇಂಡರ ಅನ್ನು ಸ್ಪೋಟಿಸಿ ಬೆಂಕಿ ಹಚ್ಚಿರುವುದು ಕಂಡು ಬಂದಿರುತ್ತೇ ಮತ್ತು ನ್ಯಾಯಾದೀಶರ ಕೋಣೆಯ ಎಲ್ಲಾ ವಸ್ತುಗಳು ಸುಟ್ಟು ಭಸ್ಮ ವಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ವೆಂಕಯ್ಯ ತಂದೆ ನೌಸಯ್ಯ ದೇವರಮನಿ ಸಾ:ಯಡ್ರಾಮಿ ರವರ ಹಿರಿಯ ಮಗ ಹಣಮಂತ ಇತನ ಹೆಂಡತಿ ಈಗ ಮೂರು ವರ್ಷಗಳಿಂದ ಹೊಟ್ಟೆಪಾಡಿಗಾಗಿ ಮಂಗಳೂರಿಗೆ ಹೋಗಿರುತ್ತಾಳೆ. ಅವರಿಗೆ ಮೂರು ಹೆಣ್ಣು ಮಕ್ಕಳು ಮತ್ತು ಮೂರು ಗಂಡು ಮಕ್ಕಳಿರುತ್ತಾರೆ. ಹಣಮಂತನ ಹಿರಿಯ ಮಗಳಾದ ರೇಣುಖಾ ಇವಳಿಗೆ ಹುಬ್ಬಳ್ಳಿಯ ಶ್ರೀನಿವಾಸ ಪೂಜಾರಿ ಎಂಬುವನಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ನನ್ನ ಮೊಮ್ಮಗಳಾದ ರೇಣುಖಾ ಇವಳು ತನ್ನ ಗಂಡನ ಮನೆಯಿಂದ ನಿನ್ನೆ ನಮ್ಮೂರಿಗೆ ಬಂದಿರುತ್ತಾಳೆ. ನನ್ನ ಮಗ ಹಣಮಂತನು ಒಬ್ಬಂಟಿಗ ಇದ್ದು, ಅಲ್ಲಿ ಇಲ್ಲಿ ಬೇಡಿಕೊಂಡು ಉಪಜಿವನ ಮಾಡುತ್ತಿದ್ದನು. ನನ್ನ ಮಗ ಹಣಮಂತ ಇತನು ರಾತ್ರಿ 9 ಗಂಟೆಗೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ದಿನಾಂಕ: 27-05-16 ರಂದು ಬೆಳಗ್ಗೆ ನಾನು ಮತ್ತು ನನ್ನ ಹೆಂಡತಿ ಮನಯಲ್ಲಿದ್ದಾಗ ಓಣಿಯವರೆಲ್ಲರೂ ನಿನ್ನ ಮಗ ಹಣಮಂತನಿಗೆ ಯಾರೋ ಕೊಲೆ ಮಾಡಿ ಕೋಣಸಿರಸಗಿ ರಸ್ತೆಗೆ ಹೊಂದಿಕೊಂಡಿರುವ ಮಹೆಬೂಬ ಪಟೇಲ ಮೊರಟಗಿ ರವರ ಹೊಲದಲ್ಲಿ ಬಿಸಾಕಿರುತ್ತಾರೆ ಅಂತಾ ಹೆಳಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಗಾಬರಿಗೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಿಗೆ ಯಾರೋ ಕೇಲವು ಜನರು ಅವನ ಕೊರಳಲ್ಲಿದ್ದ ಟಾವೆಲನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಡಿರುತ್ತಾರೆ. ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ , ಯಾವುದೋ ಉದ್ದೇಶಕ್ಕಾಗಿ ನನ್ನ ಮಗ ಹಣಮಂತನಿಗೆ ಕೊಲೆ ಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 May 2016

Kalaburagi District Reported Crimes

ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪುಷ್ಪಾವತಿ ಗಂಡ  ನರಸಿಂಗ ತಾಳಮಡಗಿ ಸಾ:ಚಂದಾಪೂರ ತಾ:ಚಿಂಚೋಳಿ ಇವರ ಮಗಳಾದ ಕುಮಾರಿ ಇವಳನ್ನು  ದಿನಾಂಕ 9-4-2016 ರಂದು 3 ಗಂಟೆಯ ಸುಮಾರಿಗೆ  ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲಾ. ಸವಿತಾ  ಓದುವ ದಿಶಾ ಕಾಲೇಜಿಗೆ ಹೋಗಿ ವಿಚಾರಿಸಿದ್ದು  ಕಾಲೇಜಿಗೆ ಬಂದಿರುವುದಿಲ್ಲಾ   ನಮ್ಮ ಸಂಬಂಧಿಕರಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಆಗಿರುವುದಿಲ್ಲಾ  ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಯಾರೋ ಅಪಹರಣ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 26-05-2016 ರಂದು ಅಪಹರಣಕ್ಕೊಳಗಾದ ವಿದ್ಯಾರ್ಥಿಣಿ ಠಾಣೆಗೆ ಹಾಜರಾಗಿ ನನ್ನ ವಿದ್ಯಾಬ್ಯಾಸ ಸಲುವಾಗಿ ನಾನು ನನ್ನ ಅಕ್ಕ ಕೂಡಿ ಕಲಬುರಗಿಯ ಅಪ್ಪರ ಲೈನಗ ಸ್ಟೇಷನ ಬಜಾರ ಎರಿಯಾದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇರುತ್ತಿದ್ದು ಸುಮಾರು 6,7ತಿಂಗಳಿಂದ ನಾನು ಕಾಲೇಜಿಗೆ ಹೋಗುವಾಗ ಮತ್ತು ಮನೆಗೆ ಬರುವಾಗ ಶರಣು ಎಂಬುವ ಹುಡುಗ ನನ್ನ ಹಿಂದೆ ಹಿಂಬಾಲಿಸುವುದು.ನನಗೆ ಮಾತನಾಡಲು ಪ್ರಯತ್ನ ಮಾಡುತ್ತಿದ್ದನು.ಮತ್ತು ಆಗಾಗ ಶರಣು ಇತನು ನಾನು ನಿನಗೆ ತುಂಬಾ ಪ್ರೀತಿಸುತ್ತೇನೆ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಕೂಡ ಹೇಳುತ್ತಿದ್ದನು. ಆಗ ನಾನು ಅವನಿಗೆ ನೀನು ಹೀಗೆ ನನಗೆ ಸತಾಯಿಸಿದರೆ ನಮ್ಮ ತಂದೆ ತಾಯಿಗೆ ಹೇಳುತ್ತೇನೆ ಅಂತಾ ಕೂಡ ಹೇಳಿದ್ದು ಇರುತ್ತದೆ, ದಿನಾಂಕ; 09.04.2016 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನಾನು ಕಾಲೇಜಿಗೆ ಹೋಗಬೇಕು ಅಂತಾ ನಮ್ಮ ಮನೆಯಿಂದ ಹೊರಗಡೆ ಬಂದು ರೋಡಿನ ಹತ್ತಿರ ಆಟೋಗಾಗಿ ನಿಂತುಕೊಂಡಾಗ ಶರಣು ಇತನು ಅಲ್ಲಿಗೆ ಬಂದು ನಾನು ನಿನಗೆ ಪ್ರೀತಿಸುತ್ತೇನೆ ಅಂತಾ ಹೇಳಿದರು ನೀನು ನನ್ನ ಮಾತು ಕೇಳದೆ ನಿರಾಕರಿಸುತ್ತಿದ್ದಿಯಾ ಇವತ್ತು ನಿನಗೆ ಬಿಡುವದಿಲ್ಲ ಅಂತಾ ಅಂದವನೇ ತನ್ನ ಆಟೋ ಕೆಎ 32 ಬಿ 4021 ನೇದ್ದರಲ್ಲಿ ಕೂಡಿಸಿಕೊಂಡು ತಮ್ಮ ಗ್ರಾಮವಾದ ಸಿರನೂರ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದು ಆಗ ಅವರ ಮನೆಯಲ್ಲಿ ಯಾರು ಇರಲಿಲ್ಲ  ಆಗ ಶರಣು ಇತನು ನನಗೆ ಪ್ರೀತಿ ಮಾಡು ಅಂತಾ ಹೇಳಿದರೆ ನನ್ನ ಮಾತು ಕೇಳದೆ ನನಗೆ ನಿರಾಕರಿಸುತ್ತಿದ್ದಿಯಾ ಇವತ್ತು ನಿನಗೆ ಬಿಡುವದಿಲ್ಲ ಅಂತಾ ಹೇಳಿ ನನಗೆ ಹೆದರಿಸಿ ನನ್ನೊಂದಿಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿದನು. ಆಗ ನಾನು ಅಳುತ್ತಾ ಕುಳಿತುಕೊಂಡಾಗ ಶರಣು ಇತನು ನನಗೆ ಅಲ್ಲಿಂದ ಕೇಂದ್ರ ಬಸ್ಸ ಸ್ಟ್ಯಾಂಡಿಗೆ ಕರೆದುಕೊಂಡು ಅಲ್ಲಿಂದ ಬಸ್ಸ ಮುಖಾಂತರ ಬಿಜಾಪೂರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಮತ್ತೋಂದು ಬಸ್ಸ ಮುಖಾಂತರ ಕೊಲ್ಲಾಪೂರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಸಿಯಾಪೇಠದ ಅವನ ತಂಗಿಯ ಮನೆಯಲ್ಲಿ ನನಗೆ ಇಟ್ಟಿರುತ್ತಾನೆ. ಅಲ್ಲಿಂದ ಇಲ್ಲಿಯವರೆಗೆ ನನಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

25 May 2016

Kalaburagi District Reported Crimes

ಅಪಹರಣ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಚಂದ್ರಕಾಂತ ತಂದೆ ಸಾಯಿಬಗೌಡ ಕನ್ನೂರ ಸಾ:ಅತನೂರ ತಾ:ಅಫಜಲಪುರ ಹಾವ: ಅಕ್ಕಮಹಾದೇವಿ ಕಾಲೋನಿ ಹೈಕೊರ್ಟ ಹತ್ತಿರ ಕಲಬುರಗಿ ಇವರ ದಿನಾಂಕ : 08-05-2016 ರಂದು ರಾತ್ರಿ ಅಪ್ರಾಪ್ತ ಮಗಳಾದ ಕುಃ ಬಸಮ್ಮ ವಯಾ|| 15ವರ್ಷ ಇವಳು ತನ್ನ ಮನೆಯ ಮುಂದೆ ನೀರು ತುಂಬಲು ಹೋದಾಗ ಆಪಾದಿತರಾದ 1) ನಾರಾಯಣ 2) ವಿಮಲಾಬಾಯಿ ಸಾ|| ಗಂಗಾ ನಗರ ಕಲಬುರಗಿ ಇವರೀಬ್ಬರೂ ಕುಃ ಬಸಮ್ಮ ಇವಳಿಗೆ ಜಬರದಸ್ತಿಯಿಂದ ಒತ್ತಾಯ ಪೂರ್ವಕವಾಗಿ ಮೋ.ಸೈ ಮೇಲೆ ಕೂಡಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂಬರ್ಗಾ ಠಾಣೆ : ಶ್ರೀ ಪರಶುರಾಮ ತಂದೆ ಕಲ್ಲಪ್ಪ ಜೋಗನ ಸಾ|| ಹಡಲಗಿ ಗ್ರಾಮ, ತಾ|| ಆಳಂದ ಇವರು ದಿನಾಂಕ 24/05/2016 ರಂದು ಹಡಲಗಿ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸದ ನಿಮಿತ್ಯ ಮತ್ತು ಗುಡಿ ಪೂಜಾರಿಕೆ ಚಾಜಾ ನಮ್ಮ ಹೆಸರಿಗೆ ಇರುವದರಿಂದ ನಾನು ಮತ್ತು ನನ್ನ ಹೆಂಡತಿಯಾದ ರೇಖಾ ಇಬ್ಬರೂ ಸಿಡಿ ಕಾರ್ಯಕ್ರಮ ನಿಮಿತ್ಯ ಅಂದಾಜ ಮಧ್ಯಾಹ್ನ 0230 ಗಂಟೆಗೆ ಗುಡಿಯ ಕಡೆಗೆ ಬಂದು ಸಿಡಿ ಕಾರ್ಯಕ್ರಮದಲ್ಲಿ ಇದ್ದು ಮನೆಯಲ್ಲಿ ನನ್ನ ಮಕ್ಕಳಾದ ರೇಣುಕಾ ವ|| 7 ವರ್ಷ, ರೋಹನ ವ|| 4 ವರ್ಷ, ರೋಹಿತ ವ|| 3 ವರ್ಷ, ಲಕ್ಷ್ಮಿ ವ|| 1 ವರ್ಷ ಇವರಷ್ಟೆ ಇದ್ದು, ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಜಾತ್ರೆಯಲ್ಲಿ ಸಿಡಿ ಕಾರ್ಯಕ್ರಮ ಮುಗಿಸಿಕೊಂಡು ಅಂದಾಜ ಸಾಯಂಕಾಲ 0600 ಗಂಟೆಗೆ ಮನೆಗೆ ಹೋಗಿ ನೋಡಿದ್ದು ನನ್ನ ಮಗನಾದ ರೋಹಿತ ವ|| 3 ವರ್ಷ, ಇತನು ಕಾಣದೆ ಇದ್ದುದರಿಂದ ನಾನು ಮತ್ತು ನನ್ನ ಹೆಂಡತಿ ಗಾಬರಿಯಾಗಿ ನಮ್ಮ ಮನೆಯ ಹಿಂದೆ, ಹಡಲಗಿ ಗ್ರಾಮದ ಜಾತ್ರಾ ಸ್ಥಳದಲ್ಲಿ ಹುಡುಕಾಡಲಾಗಿ ನನ್ನ ಮಗ ರೋಹಿತ ವ|| 3 ವರ್ಷ, ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಾಣಿಕ ರೆಡ್ಡಿ ತಂದೆ ಅಯ್ಯಪ್ಪಗೌಡ ಪಾಟೀಲ ಸಾಃ ದರ್ಶನಾಪೂರ ಇವರು ದಿನಾಂಕ 24.05.2016 ರಂದು ಮುಂಜಾನೆ ಕೆಲಸದ ನಿಮಿತ್ಯವಾಗಿ ನಾನು ನಮ್ಮೂರಿನಿಂದ ಕಲಬುರಗಿಗೆ ನನ್ನ ಗಳೆಯ ಸಂತೊಷ ರೆಡ್ಡಿ ನಡೆಸುವ ಕಾರ ನಂ ಕೆಎ- 28-ಎನ್-0864 ನೇದ್ದರಲ್ಲಿ ಕುಳಿತು ಕಲಬುರಗಿಗೆ ಬಂದು ಕೆಲಸ ಮುಗಿಸಿಕೊಂಡು ಕಲಬುರಗಿಯಿಂದ ಮರಳಿ ನಮ್ಮೂರಿಗೆ ಅದೇ ಕಾರಿನಲ್ಲಿ ಬರುತ್ತಿದ್ದೆನು ಕಾರನ್ನು ಸಂತೊಷ ರೆಡ್ಡಿ ಇತನು ನಡೆಸುತ್ತಿದ್ದನು. ಮದ್ಯಾಹ್ನ 2.30. ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ರಾಸ್ ಸಮೀಪ್ ಜೇವರಗಿ ಶಹಾಪೂರ ರೊಡ ಮೇಲೆ ಸಂತೊಷನು ತನ್ನ ಕಾರನ್ನು  ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿದ್ದರಿಂದ ಕಾರಿನ ಮುಂದಿನ ಟಯಾರ ಬಸ್ಟಯಾಗಿ ಕಾರು ಪಲ್ಟಿಯಾಗಿದ್ದರಿಂದ ಕಾರಿನಲ್ಲಿ ಕುಳಿತ ನನಗೆ ಬಾರಿ ಗಾಯವಾಗಿದ್ದು ಮತ್ತು ಕಾರ ಚಾಲಕನಿಗೂ ಗಾಯವಾಗಿದ್ದು ಕಾರಣ ಸದರಿ ಕಾರ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳಬೇಕು  ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 May 2016

Kalaburagi District Reported Crimes

ಅಪಘಾತ  ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ಮಲಕಣ್ಣಾ ವಾಲಿಕಾರ ಸಾ:ರುದ್ರವಾಡಿ ತಾ:ಆಳಂದ ಜಿ:ಕಲಬುರಗಿ ರರರ ತಾಯಿಯಾದ ರುಕ್ಕಮ್ಮಾ @ ರುಕ್ಮಣಿ ಇವಳು ಕಲಬುರಗಿ ನಗರದ ಸೈಯ್ಯದ ಚಿಂಚೋಳಿ ರೋಡಿಗೆ ಇರುವ ರುದ್ರಾಶ್ರಮದಲ್ಲಿ  ಇರುತ್ತಿದ್ದು  ದಿನಾಂಕ:-22/05/2016 ರಂದು ಸಂಜೆ 05:30 ಗಂಟೆ ಸುಮಾರಿಗೆ ನಿಮ್ಮ ತಾಯಿಯವರಾದ ರುಕ್ಕಮ್ಮಾ @ ರುಕ್ಮಣಿ ಇವರು ಸೈಯ್ಯದ ಚಿಂಚೋಳಿ ಕ್ರಾಸ ದಾಟಿ ಸ್ವಲ್ಪ ಮುಂದುಗಡೆ ರುದ್ರಾಶ್ರಮಕ್ಕೆ ಹೋಗಬೆಕೆಂದು ರೋಡ ದಾಟುತ್ತಿದ್ದಾಗ ಆಗ ಅದೇ ವೇಳೆಗೆ ಹುಮನಾಬಾದ ರಿಂಗ ರೋಡ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದವನೇ ರೋಡ ದಾಟುತ್ತಿದ್ದ ನಿಮ್ಮ ತಾಯಿಯವರಿಗೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ಲಾರಿಯನ್ನು ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದನು ಆಗ ಇದನ್ನು ನೋಡಿ ನಾನು ಮತ್ತು ನನ್ನಂತೆ ರುದ್ರಾಶ್ರಮದಲ್ಲಿ ಕೆಲಸ ಮಾಡುವ ಶೋಭಾ ಚವ್ಹಾಣ ಇಬ್ಬರು ಹೋಗಿ ನಿಮ್ಮ ತಾಯಿಯವರಿಗೆ ನೋಡಲಾಗಿ ಅವಳಿಗೆ ಎಡ ತಲೆಗೆ ಭಾರಿ ರಕ್ತಗಾಯ, ಎಡಗಾಲ ಪಾದದ ಮೇಲಭಾಗಕ್ಕೆ ಹಾಗು ಪಾದಕ್ಕೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಸ್ರಾವವಾಗಿ ಬೇಹೊಸ ಆಗಿದ್ದು ಅವಳಿಗೆ 108 ಅಂಬುಲೆನ್ಸದಲ್ಲಿ ಹಾಕಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದೇವೆ. ಅಪಘಾತಪಡಿಸಿದ ಲಾರಿ ನಂ ಕೆಎ-28 ಎ-3035 ಅಂತಾ ಇದ್ದು ಅದರ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ ನಿಮ್ಮ ತಾಯಿಯವರಿಗೆ ಉಪಚಾರ ಕುರಿತು 108 ಅಂಬುಲೆನ್ಸದಲ್ಲಿ ತರುವಾಗ ಸಾಯಂಕಾಲ 07:00 ಗಂಟೆಗೆ ಮಾರ್ಗಮದ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ರುದ್ರಾಶ್ರಮದಲ್ಲಿ ಸಹಾಯಕಿ ಅಂತಾ ಕೆಲಸ ಮಾಡುವ ಜಲಜಾಕ್ಷಿ ಕೋರೆ  ರವರು ಫೊನಮೂಲಕ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಗಳು :
ಚೌಕ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಹಣಮಂತಪ್ಪಾ ದ್ಯಾಗಾಂವ ಸಾಃ ಕಪನೂರ ಗ್ರಾಮ ತಾಃಜಿಃ ಕಲಬುರಗಿ. ಇವರು ಟ್ಯಾಕ್ಸಿ ಡ್ರೈವರನಾಗಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಶಾಂತಕುಮಾರ ತಂದೆ ಸಾಃ ಬಸವೇಶ್ವರ ಕಾಲೋನಿ ಕಲಬುರಗಿ ಇವರು ನನ್ನ ಗೆಳೆಯನಿರುತ್ತಾನೆ.  ಹೀಗಿದ್ದು ನಿನ್ನೆ ದಿನಾಂಕಃ 21.05.2016 ರಂದು ಬೆಳಿಗ್ಗೆ 10.00ಎ.ಎಮ್ ಕ್ಕೆ ಡಾ. ಬಾಬಾ ಸಹೇಬ ಅಂಬೇಡ್ಕರ್ ರವರ ಬುದ್ದ ಪೂರ್ಣಿಮೆ ಜಯಂತಿ ಕಾರ್ಯಕ್ರಮ ಇರುವುದರಿಂದ ನಾನು ಕಲಬುರಗಿ ನಗರಕ್ಕೆ ಬೆಳಿಗ್ಗೆ ಬಂದಿದ್ದು ಮಧ್ಯಾಹ್ನ 2.00 ಪಿ.ಎಮ್ ವರಗೆ ಸದರಿ ಕಾರ್ಯಕ್ರಮ ಮುಕ್ತಾಯವಾಗಿದ್ದು ನಂತರ ನಾನು ಮತ್ತು ನನ್ನ ಗೆಳೆಯನಾದ ಶಾಂತಕುಮಾರ ತಂದೆ ಬಸವರಾಜ ಬಿರಾದಾರ ಇತನು ಜಗತ್ ಸರ್ಕಲದಲ್ಲಿ ಸಿಕ್ಕಿದ್ದು ನಾವು ಇಬ್ಬರೂ ಕೂಡಿಕೊಂಡು ಉಟ ಮಾಡುವ ಕುರಿತು ಅಂದಾಜು 2.30 ಪಿ.ಎಮ್ ಸುಮಾರಿಗೆ ಕಲಬುರಗಿ ನಗರದ ಸಿಟಿ ಬಸ್ ಸ್ಯ್ಟಾಂಡ ಸೂಪರ್ ಮಾರ್ಕಿಟ್ ಹತ್ತಿರ ಬಿ.ಎಸ.ಎನ್.ಎಲ್ ಆಫೀಸ್ ಏದುರುಗಡೆ ಇರುವ ಹೆರಿಟೇಜ್ ಇನ್ ಹೋಟೆಲದಲ್ಲಿ ಉಟಕ್ಕೆ ಬಂದು ಅಲ್ಲಿ ನಾನು & ನನ್ನ ಗೆಳೆಯ ಇಬ್ಬರೂ ಕೂಡಿಕೊಂಡು ಬಿಯರ್, ಮಟನ್ ಇತ್ಯಾದಿಯಾಗಿ ಉಟ ತಿಂಡಿಯನ್ನು ಅಂದಾಜು 5.00ಪಿ.ಎಮ್ ವರೆಗೆ ಹೋಟೆಲದಲ್ಲಿ ಮುಗಿಸಿಕೊಂಡು ಅಂದಾಜು 1100/- ಬಿಲ್ ಆಗಿದ್ದು ಅದನ್ನು ಪಾವತಿ ಮಾಡಿದ್ದು ನಂತರ ಹೊರಗಡೆ 5.30ಪಿ.ಎಮ್ ಕ್ಕೆ ಬಂದು ಹೆರಿಟೇಜ್ ಇನ್ ಹೋಟೆಲ್ ಗೇಟ್ ಹತ್ತೀರ ಇರುವ ಪಾನ್ ಅಂಗಡಿಗೆ ಬಂದು ನನ್ನ ಗೆಳೆಯನಾದ ಶಾಂತಕುಮಾರ ಇತನು ಸಿಗರೇಟ್ ಸೇದುವ ಚಟದವನಿರುವುದರಿಂದ ಅವನು ಪಾನ್ ಅಂಗಡಿಯಲ್ಲಿ ಸಿಗರೇಟ್ ಸೇದುತ್ತಾ ನಿಂತನು. ನನಗೂ ಸಹ ಅದೆ ಸಮಯಕ್ಕೆ ಮೂತ್ರ ಬಂದಿದ್ದರಿಂದ ನಾನು ಗೆಳೆಯ ಶಾಂತಕುಮಾರ ಇತನಿಗೆ ನಾನು ಹೇರಿಟೆಜ್ ಹೋಟೆಲನಲ್ಲಿ ಹೋಗಿ ಮೂತ್ರ ವಿಸರ್ಜನೆ ಮಾಡಿಕೊಂಡು ಬರುತ್ತೇನೆ ಅಂತಾ ಹೇಳಿ ಹೇರಿಟೇಜ್ ಹೋಟೆಲದಲ್ಲಿ ಶೌಚಾಲಯಕ್ಕೆ ಹೊಗಿ ಮೂತ್ರ ವಿಸರ್ಜನೆಗೆ ಹೊದಾಗ ಶೌಚಾಲಯದ ಹತ್ತೀರವೆ ಹೋಟೆಲದವರು, ಪಕ್ಕದಲ್ಲಿ ನೀರು ಕುಡಿಯುವ ಗ್ಲಾಸಗಳು ಇತರೆ ಸಾಮಾನುಗಳನ್ನು ಟೇಬಲ್ ಮೇಲೆ ಇಟ್ಟಿದ್ದು ನಾನು ಮೂತ್ರ ವಿಸರ್ಜನೆಗೆ ಹೋಗುವಾಗ ಆಕಸ್ಮೀಕವಾಗಿ ನನ್ನ ಕೈ ಗ್ಲಾಸ ಇಟ್ಟಿರುವ ಟೇಬಲಕ್ಕೆ ಬಡಿಯಲು 1-2 ಗ್ಲಾಸಗಳು ಕೆಳಗಡೆ ಬಿದ್ದು ಒಡೆಯಲು ಅದನ್ನು ನೋಡಿ ಕೌಂಟರ್ ಹತ್ತೀರ ಇದ್ದಂತಹ ಹೆರಿಟೇಜ್ ಹೋಟೆಲ್ ಮಾಲೀಕ ಬಾಲರಾಜ ಗುತ್ತೇದಾರ,ಮ್ಯಾನೇಜರ್ ಸಂಜು ಅಲ್ಲೀಯೆ ಇದ್ದ ಈರಣ್ಣಾ ವಾಚಮೇನ್ ಇವರೇಲ್ಲರೂ ಬಂದವರೇ ಏ ರಂಡಿ ಮಗನೇ, ಬೋಸಡಿ ಮಗನೇ, ಕಣ್ಣು ಕಾಣಿಸೋದಿಲ್ಲಾ ರಂಡೀ ಮಗನೇ ಅಂತಾ ನನಗೆ ಅವಾಚ್ಯವಾಗಿ ಬೈಯ್ಯಲು ಶುರು ಮಾಡಿದ್ದರಿಂದ ನನಗೆ ಯ್ಯಾಕೆ ಬೈಯ್ಯುತ್ತೀದ್ದೀರಿ, ಮರ್ಯಾದೆ ಕೋಟ್ಟು ಮಾತಾಡಿರಿ ಅಂತಾ ನಾನು ಹೇಳಿದ್ದಕ್ಕೆ , ನನ್ನ ಹೋಟೇಲಗೆ ಬಂದು ನನಗೆ ಏದುರು ಕೇಳುತ್ತೀ ಸೂಳಿ ಮಗನೇ ಅಂತಾ ಬೈಯುತ್ತಾ, ಮಾಲೀಕನಾದ ಬಾಲರಾಜ ಇತನು ಹಿಡಿರೂ ಸೂಳಿ ಮಗನಿಗೆ ಬಾಳ ಸೋಕ್ಕು ಬಂದಿದೆ ಹೋಲೆ ಮಾದರಿಗೆ ಕಲ್ಲು ಎತ್ತಿ ಹಾಕಿ ಹೊಡೆಯಿರಿ ಅಂತಾ ಹೇಳಲು ಮ್ಯಾನೇಜರ್ ಸಂಜು ಇತನು ಬಂದವನೇ ಕೈಯಲ್ಲಿ ಒಂದು ರಾಡು ತೆಗೆದುಕೊಂಡು ಬಂದವನೆ ಬಲಗಾಲಿನ ಪೆಂಡ್ರಿ ಮೇಲೆ ಹೊಡೆದು ಗುಪ್ತಗಾಯ ಪಡಿಸಿದನು, ವಾಚಮೇನ್ ಈರಣ್ಣಾ ಇತನು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ನನ್ನ ಬೇನ್ನಿನ ಮೇಲೆ ಹಾಗೂ ಕೈ ಮೇಲೆ ಹೊಡೆದನು. ಅಷ್ಠರಲ್ಲೀಯೆ ಅಲ್ಲೇ ಇದ್ದಂತಹ 5-6 ಜನ ವೇಟರಗಳು ಕೂಡಿಕೊಂಡು ಬಂದು ನನ್ನ ಕುತ್ತೀಗೆ ಒತ್ತೀ ಹಿಡಿದು ನೆಲೆಕ್ಕೆ ಕೆಡವಿ ಕೈಯಿಂದ ಹೊಟ್ಟೆಯಲ್ಲಿ ಬೆನ್ನಿನಲ್ಲಿ ಹೊಡೆದು ಗುಪ್ತಗಾಯ ಪಡಿಸಿದ್ದು ಇದರಿಂದ ನಾನು ಕೆಳಗಡೆ ಬಿದ್ದು ಚಿರಾಡುವುದನ್ನು ಕಂಡು ಅಲ್ಲೇ ಇದ್ದ ನನ್ನ ಗೆಳೆಯ ಶಾಂತಕುಮಾರ ತಂದೆ ಬಸವರಾಜ ಬಿರಾದರ ಇತನು ಜಗಳ ಬಿಡಿಸಲು ಬಂದಾಗ ಅವನಿಗೂ ಸಹ ಮ್ಯಾನೇಜರ್ ಸಂಜು ಇತನು ರಾಡದಿಂದ ಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲೇ ಅವರ ಹಿಂದೆ ಇದ್ದ 5-6 ಜನರು ಅವನಿಗೂ ಸಹ ಕೈಯಿಂದ ಹೊಟ್ಟೆಯಲ್ಲಿ ಬೇನ್ನೀನನ್ನಲ್ಲಿ ಹೊಡೆದು ರಕ್ತಗಾಯ ಪಡಿಸಿದ್ದು ಅಷ್ಟರಲ್ಲೀಯೆ ನಮಗೆ ಹೊಡೆಯುತ್ತೀರುವುದರಿಂದ ನಾವಿಬ್ಬರೂ ಚೀರಾಡುತ್ತೀರುವುದನ್ನು ಕಂಡು ಏದುರುಗಡೆ ಇದ್ದಂತಹ ಅಶೋಕ ಜಗತ್ ಕೂಗನೂರ, ಸುರೇಶ ಹೋಳ್ಕರ್, ವಿರುಪಾಕ್ಷಿ ಅನ್ನುವವರು ಒಡಿಬಂದು ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಸಂಜಯಕುಮಾರ ತಂದೆ ಜಗದೇವಪ್ಪಾ ನಾಟೀಕರ ಸಾಃ ಹಳಿಯಾಳ ತಾಃ ಅಫಜಲಪೂರ ಜಿಃ ಕಲಬುರಗಿ  ಅಫಜಲಪೂರ ತಾಲೂಕಿನ ಹಳಿಯಾಳ ಗ್ರಾಮದ ನಿವಾಸಿಯಾಗಿದ್ದು ಕಲಬುರಗಿ ನಗರದ ಸಿಟಿ ಬಸ ಸ್ಟ್ಯಾಂಡ ಹತ್ತಿರದ ಹೊಟೆಲ್‌ ಹೆರೆಟೆಜ್‌ ಇನ್‌ ನಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡುತ್ತಿದೆನೆ ದಿನಾಂಕಃ 21.05.2016 ರಂದು  ನಮ್ಮ ಹೋಟೆಲ್‌ನಲ್ಲಿ ನಡೆದ ಘಟನೆ ಮಾನ್ಯರೆ ನಾನು ಸುಮಾರು ನಾನು ಸುಮಾರು 3 ತಿಂಗಳಿಂದ ಈ ಹೋಟೆಲ್‌ ನಲ್ಲಿ  ಕೆಲಸ ಮಾಡುತ್ತಿದ್ದು ನಾನು ಬೆಳಿಗ್ಗೆ 11.00 ಗಂಟೆಯಿಂದ ರಾತ್ರಿ 11.30 ಗಂಟೆಯವರೆಗೆ ಹೆರೆಟೆಜ ಹೋಟೆಲ್‌ ನಲ್ಲಿ ಕೆಲಸ ಮಾಡುತ್ತೇನೆ ಹೀಗಿದ್ದು ನಮ್ಮ ಹೊಟೆಲ್‌ನಲ್ಲಿ ಶಾಂತಕುಮಾರ ಹಾಗೂ ಆತನ ಸ್ನೇಹಿತ ಶರಣಬಸಪ್ಪಾ ಆಗಾಗೆ ನಮ್ಮ ಹೋಟೆಲ್‌ಗೆ ಬರುತ್ತಿರುವದರಿಂದ  ನನಗೆ ಅವರ ಪರಿಚಯ ಇರುತ್ತದೆ. ಹೀಗೆ ಇರುವಾಗ ದಿನಾಂಕಃ 21.05.216 ರಂದು  ಮದ್ಯಾಹ್ನ 2.30 ಗಂಟೆಯ ಸುಮಾರಿಗೆ ನಮ್ಮ ಹೋಟೆಲೆಗೆ ಬಂದು ಏಸಿ ರೂಂ ನಲ್ಲಿ ಟೇಬಲ್ ನಂ 8 ರ ಮೇಲೆ  ಕುಡಿಯವದಕ್ಕೆ ಕುಳಿತಿಕೊಂಡಿದ್ದು ಆಗ ನಮ್ಮ ಹೊಟೆಲ್‌ನಲ್ಲಿ ವೇಟರ್‌ ಕೆಲಸ ಮಾಡುವ ಹುಡಗನಾದ ಸುರೇಶ ಇತನು  ಸಪ್ಲೈ ಮಾಡಿರುತ್ತಾನೆ. ಶಾಂತಕುಮಾರ ಹಾಗೂ ಅವನ ಗೆಳೆಯರು ಕೂಡಿ ಸುಮಾರು ಸಾಯಂಕಾಲ 5.00 ಗಂಟೆಯವರೆಗೆ ಕುಡಿದು ನಂತರ ನಮ್ಮ ಹೋಟೆಲ್ಲಿನ ಬಿಲ್ಲ ಪಾವತಿಸಿ ಹೊರಗೆ ಹೋಗಿ ಮರಳಿ ನಮ್ಮ ಹೋಟೆಲಿನಲ್ಲಿ ಶಾಂತಕುಮಾರ ಹಾಗೂ ಅವನ್ ಗೆಳೆಯ ಶರಣಬಸಪ್ಪಾ ಹೋಟೆಲ್‌ ಒಳಗೆ ಬಂದು ಶೌಚಾಲಯಕ್ಕೆ ಹೋಗುವಾಗ ಶರಣಬಸಪ್ಪ ಇತನು ಅಲ್ಲೆ  ಇರುವ ಸುಮಾರು 3-4 ಗ್ಲಾಸ್‌ಗಳು ಕೆಳಗೆ ಬಳಿಸಿ ಒಡೆದು ಶೌಚಾಲಯದ ಒಳಗೆ ಹೋಗಿ ನಂತರ ನನ್ನ ಕಣೆದುರು ಮತ್ತೆ 10-15 ಗ್ಲಾಸ್‌ಗಳು ಒಡೆದು ಹಾಳು ಮಾಡಿರುತ್ತಾರೆ ಅದನು ಕೇಳುವದಕ್ಕೆ ಹೋಗಿದ್ದಾಗ ಏ ಬೋಸಿಡಿ ರಂಡಿ ಮಗನೆ ಏನು ಸೆಂಟಾ ಕಿತ್ತಕೊತ್ತೇ ಸುಳೆ ಮಗನೆ ನಾನು ಯಾರೂ ಇದ್ದಿನಿ ಗೊತ್ತಾ ನಾನು ಕಪನೂರ ರಾಜು ಕಾರ್ಪೋರೆಟರ್‌ನ ತಮ್ಮ ಹಾಗೂ ಗೆಳೆಯರಿದೆವೆ ಏ ಸೋಳೆ ಮಗನ್ನೆ ಹೊಲೆಯ ಸೋಳೆ ಮಗನೆ ಎಂದು ಶಾಂತಕುಮಾರ ಇತನು ನನಗೆ ಜಾತಿ ನಿಂದನೆ ಮಾಡಿರುತ್ತಾನೆ. ಹಾಗೂ ಎದೆಯ ಮೇಲಿನ ಅಂಗಿ ಹಿಡಿದ್ದು ಕೈ ಮುಷ್ಠಿ ಮಾಡಿ ಜೋರಾಗಿ ನನ ಕಪಾಳದ ಎಡ ಕಪಾಳಕ್ಕೆ  ಹೋಡೆದನು ಅಲ್ಲದೇ ಈ ಹೊಲೆಯ ಸೋಳ್ಳೆ ಮಗನದ್ದು  ಬಾಹಳ ಸೊಕ್ಕು ಇದೆ ಎಂದು ಶಾಂತಕುಮಾರ ಹಾಗೂ ಶರಣಬಸಪ್ಪಾ ನನ್ನು ಹೊಡೆಯ ತೊಡಗಿದ್ದರು, ಹಾಗೂ ಅಲ್ಲೇ ಇರವ ಸುಮಾರ  25 ರಿಂದ 30 ಗ್ಲಾಸಗಳು ಒಡೆದು ಏ ಸೋಳ್ಳೆ ಮಗನೆ ನಿಲ್ಲು ನಮ್ಮ ಅಣ್ಣನಿಗೆ ಕರೆಯಿಸಿ ನೋಡು ನಿನಗೆ ಹಾಗೂ ನಿಮ್ಮ ಹೊಟೆಲ್‌ಕ್ಕೆ ಹೇಗೆ ಮಾಡುತ್ತೇವೆ ಅಂತಾ ಬೈದು ಹೊರೆಗೆ ಬಂದು ಯಾರಿಗೋ ಪೋನ್‌ ಮಾಡಿ ಕರೆಯಿಸಿದ್ದು ಸ್ವಲ್ಪ ಸಮಯ ಬಿಟ್ಟು ರಾಜು ಕಪನೂರ ಹಾಗೂ ಅವನ 7-8 ಜನರು ಮೋಟಾರ ಸೈಕಿಲ್‌ ಮೇಲೆ ಬಂದು ನನ್ನಗೆ ಹೊಡೆಯ ತೊಡಗಿದ್ದರು ಮತ್ತು ನಮ್ಮ ತಮ್ಮ ಹಾಗೂ ಸ್ನೇಹಿತರಿಗೆ ಬೈಯುತ್ತಿರಾ ಅಂತಾ ಎಳೆದುಕೊಂಡು ಹೋಗುತ್ತಿರುವಾಗ  ನಮ್ಮ ಹೋಟೆಲ್‌ನಲ್ಲಿ ವೇಟರ್‌ಗಳಾದ  ರಾಜು,  ನಾಗು, ಅಂಬರೇಶ ಸುರೇಶ ಹಾಗೂ ವಾಚಮ್ಯಾನ ಈರಣ್ಣ ಇವರಗಳು ಓಡಿ ಬಂದರು  ಜೀವ ಸಹಿತ ಬಿಡಬ್ಯಾಡರಿ ಅಂತಾ ನನಗೆ  ಎಳೆದು ಕೊಂಡು ಹೋಗುತ್ತಿರುವಾಗ ನನ್ನ ಸ್ಟಾಫ ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲೀಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

22 May 2016

Kalaburagi District Reported Crimes.

ರೇವೂರ ಠಾಣೆ : ಜಿಲ್ಲಾ ಸರಕಾರಿ ಆಸ್ಪತ್ರೆ  ಕಲಬುರಗಿಯಲ್ಲಿ   ಉಪಚಾರ  ಕುರಿತು  ದಾಖಲಾಗಿದ್ದ ಶ್ರೀ ಲಕ್ಕಪ್ಪಾ ತಂದೆ ಹಣಮಂತರಾಯ ಮಾಂಗ ವಯಾ;20 ಜಾತಿ;ಮಾಂಗ ಸಾ:ನೀಲೂರ(ಬಿ) ಗ್ರಾಮ  ತಾ||ಅಫಜಲಪೂರ   ಇವರು   ಎಮ್,ಎಲ್,ಸಿ  ಹೇಳಿಕೆಯನ್ನು  ಪಡೆದುಕೊಂಡು  ಪರುತಪ್ಪಾ  ಸಿಹೆಚ್,ಸಿ 406 ರವರು  ಪಡೆದುಕೊಂಡು ಠಾಣೆಗೆ ತಂದು  ಹಾಜರು  ಪಡಿಸಿದ್ದು. ಸದರಿ  ಹೇಳಿಕೆ ಸಾರಾಂಶ ವೆನೆಂದರೆ ನಾನು  ಈ ಮೇಲ್ಕಂಡ  ವಿಳಾಸದ  ನಿವಾಸಿತನಿದ್ದು  ಕೂಲಿ ಕೆಲಸ ಮಾಡಿಕೊಂಡು  ಪರಿವಾರದೊಂದಿಗೆ  ಉಪಜೀವನ ಸಾಗಿಸುತ್ತಿದ್ದೇನೆ.ನಿನ್ನೆ ದಿನಾಂಕಃ20/05/2016 ರಂದು 2 ಪಿಎಮ್ ಕ್ಕೆ ನನ್ನ ದೊಡ್ಡಪ್ಪನ ಮಗಳಾದ ಶೃತಿ ಇವಳು ಮನೆಯ ಮಾಳಿಗೆ ಮೇಲೆ ಬಟ್ಟೆ ತೆಗೆಯುತ್ತಿದ್ದಾಗ ಅಲ್ಲೆ ಪಕ್ಕದಲ್ಲಿರುವ ಹಾಲ ಕಟ್ಟಿಯ ಹತ್ತಿರ ಕುಳಿತ ನಮ್ಮ ಗ್ರಾಮದ ಶಿವಕುಮಾರ ತಂದೆ ಸಾಯಬಣ್ಣಾ ಮಾಂಗ ಈತನು  ಅವಳಿಗೆ ಏ ರಂಡಿ ಅಂತಾ ಬೈದ್ದಿರುತ್ತಾನೆ. ಆಗ ನನ್ನ ದೊಡ್ಡಮ್ಮಳಾದ ಮಹಾದೇವಿ ಇವಳು ಶಿವಕುಮಾರ ಬೈದ್ದಿರುವುದನ್ನು ಕೇಳಿ ಶಿವಕುಮಾನಿಗೆ  ನನ್ನ ಮಗಳಿಗೆ ಏಕೆ ಬೈಯುತ್ತಿದ್ದಿಯಾ ಅಂತಾ ಕೇಳಿದಾಗ ಶಿವಕುಮಾರನು ಬೈಯುತ್ತೇನೆ ಏನ್ನ ಮಾಡಕೊಳ್ಳತ್ತಿರಿ ಮಾಡಕೊಳ್ಳಿ ಅಂತಾ ಅಂದಿರುತ್ತಾನೆ.ಈ  ವಿಷಯ  ನಮ್ಮ  ದೊಡ್ಡಮ್ಮಳು  ನನಗೆ  ಮತ್ತು  ನನ್ನ ದೊಡ್ಡಪ್ಪನಾದ  ನಾಗಪ್ಪರವರಿಗೆ   ತಿಳಿಸಿದಾಗ   ನಾನು ನನ್ನ ದೊಡ್ಡಪ್ಪನಾದ ನಾಗಪ್ಪ, ನನ್ನ ತಾಯಿಯಾದ ಭಾರತಿಬಾಯಿ, ನನ್ನ ದೊಡ್ಡಮ್ಮಳಾದ ಮಹಾದೇವಿ ಎಲ್ಲರೂ ಕೂಡಿಕೊಂಡು ರಾತ್ರಿ 8-00 ಗಂಟೆ ಸುಮಾರಿಗೆ  ಶಿವಕುಮಾರನ ಮನೆಯವರಿಗೆ ಈ ವಿಷಯ ತಿಳಿಸಲು ಅವರ ಮನೆಗೆ ಹೋಗುತ್ತಿದ್ದಾಗ   ಅವರ ಮನೆಯ  ಹತ್ತಿರ ಇರುವ  ರಸ್ತೆಯಲ್ಲಿ  ಶಿವಕುಮಾರ ಮತ್ತು ಆತನ ಅಣ್ಣನಾದ ಲಕ್ಕಪ್ಪನು  ಇಬ್ಬರೂ  ನಿಂತಿದ್ದರು ಆಗ ನನ್ನ  ದೊಡ್ಡಪ್ಪನಾದ  ನಾಗಪ್ಪನು         ಲಕ್ಕಪ್ಪನಿಗೆ ನಿಮ್ಮ ತಮ್ಮ ನನ್ನ ಮಗಳಿಗೆ ವಿನಾಕಾರಣ ಮದ್ಯಾನ್ಹ ಬೈದಾನ ಅವನಿಗೆ  ಈ ರೀತಿ ಮಾಡದಂತೆ ತಿಳಿಸಿ ಹೇಳು  ಅಂತಾ ಹೇಳಿದಾಗ  ಲಕ್ಕಪ್ಪನು ನನ್ನ ದೊಡ್ಡಪ್ಪನಿಗೆ  ಭೋಸ್ಡಿ ಮಕ್ಕಳೇ ನನ್ನ  ತಮ್ಮನ  ಮೇಲೆ ವಿನಾ ಕಾರಣ ಸುಳ್ಳು ಅಪವಾದ ಹೊರಸುತ್ತಿಯಾ ಅಂತಾ ಬೈದು ಅಲ್ಲೆ  ಬಿದ್ದಿದ  ಕಲ್ಲನು  ತೆಗೆದುಕೊಂಡು ತಲೆಯ ಮೇಲೆ ಹೊಡೆದು ರಕ್ತಗಾಯ ಗೋಳಿಸಿದ, ಶಿವಕುಮಾರನು ತನ್ನ ಕೈಯಲಿದ್ದ ಬಡಿಗೆಯಿಂದ  ನನ್ನ ದೊಡಪ್ಪನ ಸೊಂಟದ ಮೇಲೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನನ್ನ ದೊಡಪ್ಪನು ನೇಲಕ್ಕೆ ಬಿದ್ದಾಗ ಚಿದಾನಂದ ಮತ್ತು ಪ್ರಭುಲಿಂಗ ಇಬ್ಬರೂ ಕಾಲಿನಿಂದ ಬೆನ್ನ ಮೇಲೆ ಒದ್ದಿರುತ್ತಾರೆ. ಆಗ ನನ್ನ ತಾಯಿ ಏಕೆ  ಹೊಡೆಯುತ್ತಿರಿ ಅಂತಾ ಕೇಳಿದಾಗ ಲಕ್ಕಪ್ಪನು ನನ್ನ ತಾಯಿಯಾದ ಭಾರತಬಾಯಿ ಇವಳಿಗೆ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಬಲಭುಲದ ಮೇಲೆ ಹೊಡೆದು ತೆರೆಚಿದ ಗಾಯಮಾಡಿ, ನನಗೆ ಲಕ್ಕಪ್ಪನು ಕೈಯಿಂದ ನನ್ನ ಎಡಗಣ್ಣಿನ ಮೇಲೆ ಹೊಡೆದು ಗುಪ್ತಗಾಯ ಮಾಡಿದನು ಆಗ ಶಿವಕುಮಾರನು ಬಡಿಗೆಯಿಂದ ನನ್ನ ಬೆನ್ನ ಮೇಲೆ ಹೊಡೆದು  ಗುಪ್ತಗಾಯ  ಮಾಡಿದನು. ಆಗ ಶಿವಪ್ಪ ತಂದೆ ಚಂದಪ್ಪ  ದೊಡಮನಿ ಈತನು ಈ ರಂಡಿ ಮಕ್ಕಳ ಸೋಕ್ಕು ಬಹಾಳ ಆಗಿದೆ ಇವರಿಗೆ ಖಲಾಸ ಮಾಡಿರಿ ಅಂತಾ ಜೀವದ ಬೇದರಿಕೆ ಹಾಕುತ್ತಿದ್ದಾಗ ನಮ್ಮ ಓಣಿಯವರಾದ ಬಸಪ್ಪ ತಂದೆ ಅಂಬಣ್ಣಾ  ಮಾಂಗ & ಸಿದ್ರಾಮ  ತಂದೆ ಲಕ್ಕಪ್ಪ  ದೊಡಮನಿ  ರವರು  ಜಗಳ ನೋಡಿ  ಬಿಡಿಸಿರುತ್ತಾರೆ ನಂತರ ನನಗೆ, ತಾಯಿಗೆ ಮತ್ತು ನನ್ನ ದೊಡ್ಡಪನಿಗೆ ಉಪಚಾರ ಕುರಿತು ನಮ್ಮ ತಂದೆಯವರಾದ ಶ್ರೀ ಹಣಮಂತ ತಂದೆ ರಾಯಪ್ಪ ಮಾಂಗ ರವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು. ಅಲ್ಲಿಂದ ಮತ್ತೆ ಸರಕಾರಿ ಆಸ್ಪತ್ರೆಗೆ ಕೆರೆತಂದು ಸೇರಿಕೆ ಮಾಡಿರುತ್ತಾರೆ.          ಕಾರಣ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿ ಬರೆಯಿಸಿದ  ಹೇಳಿಕೆ ನೀಜವಿರುತ್ತದೆ. ಅಂತಾ ಹೇಳಿಕೆ  ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ- 22/16  ಕಲಂ 143,147,148,323,324,504,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಗೊಂಡೆನು.     
ರೇವೂರ ಠಾಣೆ : ಜಿಲ್ಲಾ ಸರಕಾರಿ ಆಸ್ಪತ್ರೆ  ಕಲಬುರಗಿಯಲ್ಲಿ   ಉಪಚಾರ  ಕುರಿತು  ದಾಖಲಾಗಿದ್ದ ಶ್ರೀ  ಚಿದಾನಂದ ತಂದೆ ಚಂದಪ್ಪ ಮಾಂಗ ವಯಃ 22 ಜಾಃ ಮಾಂಗ  ಉಃಒಕ್ಕಲುತನ ಸಾ|| ನೀಲೂರ  ತಾ|| ಅಫಜಲಪೂರ   ಇವರು   ಎಮ್,ಎಲ್,ಸಿ  ಹೇಳಿಕೆಯನ್ನು  ಪಡೆದುಕೊಂಡು  ಪರುತಪ್ಪಾ  ಸಿಹೆಚ್,ಸಿ 406 ರವರು  ಪಡೆದುಕೊಂಡು ಠಾಣೆಗೆ ತಂದು  ಹಾಜರು  ಪಡಿಸಿದ್ದು. ಸದರಿ  ಹೇಳಿಕೆ ಸಾರಾಂಶ ವೆನೆಂದರೆ ನಾನು  ಈ ಮೇಲ್ಕಂಡ  ವಿಳಾಸದ  ನಿವಾಸಿತನಿದ್ದು  ಒಕ್ಕಲುತನ ಕೆಲಸ ಮಾಡಿಕೊಂಡು  ಪರಿವಾರದೊಂದಿಗೆ  ಉಪಜೀವನ ಸಾಗಿಸುತ್ತಿದ್ದೇನೆ. ನಿನ್ನೆ ದಿನಾಂಕಃ20/05/2016  ರಂದು  ರಾತ್ರಿ 8-00 ಗಂಟೆ ಸುಮಾರಿಗೆ ನಾನು ಹಾಗೂ ಪ್ರಭುಲಿಂಗ ಇಬ್ಬರೂ  ನಮ್ಮ  ದೊಡ್ಡಪ್ಪನ ಮನೆಯ ಹತ್ತಿರ ಮಾತನಾಡುತ್ತಾ ನಿಂತಾಗ ಮನೆಯ ಹತ್ತಿರ ಇರುವ ರಸ್ತೆಯಲ್ಲಿ ಶಿವಕುಮಾರ ಮತ್ತು ಆತನ ಅಣ್ಣನಾದ ಲಕ್ಕಪ್ಪನು ಇಬ್ಬರೂ ಮಾತನಾಡುತ್ತಾ ನಿಂತಿದ್ದರು, ನಮ್ಮ ಸಮಾಜದವರಾದ ನಾಗಪ್ಪ. ಆತನ ಹೆಂಡತಿಯಾದ   ಮಹಾದೇವಿ, ಲಕ್ಕಪ್ಪ ತಂದೆ ಹಣಮಂತ ಮಾಂಗ ಮತ್ತು ಆತನ ತಾಯಿಯಾದ ಭಾರತಬಾಯಿ ಗಂಡ ಹಣಮಂತ ಮಾಂಗ  ಎಲ್ಲರೂ ಬಂದು ಅವರಲ್ಲಿ  ನಾಗಪ್ಪನು  ಲಕ್ಕಪ್ಪನಿಗೆ ಏ ಭೋಸ್ಡಿ ಮಗನೇ ನಿನ್ನ ತಮ್ಮನಿಗೆ ಬುದ್ದಿ ಹೇಳಿಕೆ ಬರೋಲ್ಲೇನೋ  ನಿನ್ನ ತಮ್ಮ ಶಿವ್ಯಾ ನನ್ನ ಮಗಳಿಗೆ ಮದ್ಯಾನ್ಹ ಬೈದಾನ ಅಂತಾ ಬೈದು ಅಲ್ಲೆ ಬಿದ್ದ  ಬಡಿಗೆಯನ್ನು  ತೆಗೆದುಕೊಂಡು ಲಕ್ಕಪ್ಪನ ಬಲಗಾಲ  ತೊಡೆಯ ಮೇಲೆ ಹೊಡೆದಿರುತ್ತಾನೆ. ಅವರ ನಾಗಪ್ಪನ ಸಂಬಂದಿಕರಾಧ ಹಣಮಂತ ತಂದೆ ರಾಯಪ್ಪ ಮಾಂಗ, ರಾಯಪ್ಪ ತಂದೆ ನಾಗಪ್ಪ ಮಾಂಗ, ಸಾಯಬಣ್ಣಾ ತಂದೆ ನಾಗಪ್ಪ ಮಾಂಗ, ಅನೀಲ ತಂದೆ ನಾಗಪ್ಪ ಮಾಂಗ, ಗಣಪತಿ ತಂದೆ ಹಣಮಂತ ಮಾಂಗ ಎಲ್ಲರೂ  ಬಂದರು ನಾನು ಹಾಗೂ  ಪ್ರಭೂ  ಇಬ್ಬರೂ ಹೋಗಿ ನಾನು ಏಕ್ಕೆ ಲಕ್ಕಪ್ಪನಿಗೆ  ಹೊಡೆಯುತ್ತಿದ್ದರಿ ಅಂತಾ  ಕೇಳಿದಾಗ  ಹಣಮಂತ ತಂದೆ ರಾಯಪ್ಪ ಮಾಂಗ ಈತನು  ನನಗೆ  ತನ್ನ ಕೈಯಲಿದ್ದ ಕಟ್ಟಿಗೆಯಿಂದ ನನ್ನ  ಎಡಗೈ ಮೇಲೆ  ಹೊಡೆದನು. ಪ್ರಭೂಗೆ ರಾಯಪ್ಪನು ಕಟ್ಟಿಗೆಯಿಂದ ತಲೆಯ ಎಡಭಾಗಕ್ಕೆ  ಹೋಡೆದು  ರಕ್ತಗಾಯ ಮಾಡಿದನು, ಶಿವಕುಮಾರನಿಗೆ  ಗಣಪತಿಯು ಬಲಗೈ ಮೇಲೆ  ಹೊಡೆದನು ಮನೆಯಿಂದ  ಬಂದಂತಹ  ಪಾರ್ವತಿಗೆ  ಭಾರತಿ ಕಲ್ಲಿನಿಂದ ಮೋಳಕಾಲ ಮೇಲೆ ಇಂದುಬಾಯಿಗೆ ಮಹಾದೇವಿ  ಕೈಯಿಂದ  ಕಪಳ ಮೇಲೆ  ಹೊಡೆದಿರುತ್ತಾಳೆ. ಆಗ ಬಸಪ್ಪ ತಂದೆ ಅಂಬಣ್ಣಾ  ಮಾಂಗ & ಪರಮೇಶ್ವರ ತಂದೆ ರಾಯಪ್ಪಾ  ಮಾಂಗ ರವರು ಜಗಳ  ಬಿಡಿಸಿರುತ್ತಾರೆ. ಆಗ ಲಕ್ಕಪ್ಪ ತಂದೆ ಹಣಮಂತ , ಸಾಯಬಣ್ಣಾ ತಂದೆ ನಾಗಪ್ಪ ಮಾಂಗ, ಅನೀಲ ತಂದೆ ನಾಗಪ್ಪ ಮಾಂಗ ಇವರು ಭೋಸ್ಡಿ ಮಕ್ಕಳೆ ಇವತ್ತು  ಇವರು  ಬಂದು  ಬಿಡಿಸಿದಕ್ಕೆ   ಉಳದಿರಿ ಇಲ್ಲಾ ಅಂದ್ರೆ ನಿಮಗೆ ಜೀವಸಹಿತ  ಬಿಡುತ್ತಿರಲಿಲ್ಲಾ ಅಂತಾ ಜೀವದ  ಬೇದರಿಕೆ  ಹಾಕಿದರು. ನಂತರ  ಪರಮೇಶ್ವರ ರವರು  ನನಗೆ, ಪ್ರಭುಗೆ,ಲಕ್ಕಪ್ಪನಿಗೆ ಶಿವಕುಮಾರನಿಗೆ ಇಂದು ಬಾಯಿಗೆ ಪಾರ್ವತಿಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ  ಕರೆದುಕೊಂಡು ಬಂದು ಜಿಲ್ಲಾ ಸರಕಾರಿ ಆಸ್ಪತ್ರೆ  ಕಲಬುರಗಿಯಲ್ಲಿ  ಸೇರಿಕೆ  ಮಾಡಿರುತ್ತಾನೆ.ಕಾರಣ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನಿನ ಕ್ರಮ ಜರುಗಿಸಲು ವಿನಂತಿ  ಅಂತಾ ಹೇಳಿಕೆ  ನೀಡಿದ್ದು.   ಸದರಿ ಹೇಳಿಕೆ  ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ- 23/16  ಕಲಂ 143,147,148,323,324,504,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಗೊಂಡೆನು.              
ದೇವಲಗಾಣಗಾಪೂರ ಠಾಣೆ : ದಿ:21-05-2016 ರಂದು 5:30 ಪಿಎಂಕ್ಕೆ ಪಿರ್ಯಾದಿ ಡಾ|| ನಾಮದೇವ ರಾಠೋಡ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ಶ್ರೀ ಮಹಿಬೂಬ ಪಟೇಲ್ ಪ್ರಭಾರೆ ಪಿಡಿಓ ಗ್ರಾ ಪಂ. ದೇವಲಗಾಣಗಾಪುರ ಹಾಗೂ ಚವಡಾಪೂರ ಇವರನ್ನು ದಿನಾಂಕ: 03-05-2016 ರಂದು ಸೇವೆಯಿಂದ ಅಮಾನತ್ತು ಗೋಲಿಸಿರುತ್ತಾರೆ. ಅಮಾನತ್ತು ಅವಧಿಯಲ್ಲಿ ಶ್ರೀ ಮಹಿಬೂಬ ಪಟೇಲ್ ಪಿ.ಡಿಓ ಇವರು ದೇವಲಗಾಣ ಗಾಪುರ ಗ್ರಾಮ ಪಂಚಾಯತಿಯ 72 ಹಾಗೂ ಚವಡಾಪುರ ಗ್ರಾಮ ಪಂಚಾಯಿತಿಯ 12. ಫಾರಂ ನಂ.9 ಮತ್ತು ಫಾರಂ. ನಂ. 11 ಎ ದಾಖಲೆಗಳನ್ನು ಪಂಚ ತಂತ್ರದಲ್ಲಿ ಅಳವಡಿಸಿರುತ್ತಾರೆ. ಇದು ಕಾನೂನು ಬಾಹಿರ ಅಪರಾಧವಾಗಿರುತ್ತದೆ. ಆದ್ದರಿಂದ ಸದರಿ ಸಿಬ್ಬಂದಿಯವರ ಮೇಲೆ ಕ್ರೀಮಿನಲ್ ಮೊಕದ್ದಮೆ ಹೂಡಿ ಸೂಕ್ತ ಕ್ರಮ ಜರುಗಿಸಸಲು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕಲಬುರಗಿ ರವರು ಆದೇಶಿಸಿದ ಮೇರೆ ಶ್ರೀ ಮಹಿಬೂಬ ಪಟೇಲ್ ಪ್ರಭಾರ ಪಿ.ಡಿ.ಓ ಗ್ರಾ. ಪಂ ದೇವಲ ಗಾಣಗಾಪುರ ಹಾಗೂ ಚವಡಾಪುರ ಇವರ ಮೇಲೆ ಕ್ರೀಮಿನಲ್ ಮೊಕದ್ದಮೆ ಹೂಡಿ ಕ್ರಮ ಜರುಗಿಸಲು ಕೋರಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 42/2016 U/s 166 (A) 188 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.
ನಿಂಬರ್ಗಾ ಠಾಣೆ : ದಿನಾಂಕ 21/05/2016 ರಂದು 1030 ಎ.ಎಮ ಕ್ಕೆ ಪಿ.ಎಸ್.ಐ ನಿಂಬರ್ಗಾ ರವರು ಠಾಣೆಗೆ ಬಂದು ತಾವು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಎಮ.ಎಲ.ಸಿ ವಿಚಾರಣೆ ಕುರಿತು ಹೋದಾಗ ಉಪಚಾರನಿರತ ಚಂದ್ರಕಾಂತ ತಂದೆ ಈರಣ್ಣಾ ಹೊಸಮನಿ ಇವರ ಲಿಖಿತ ಫಿರ್ಯಾದಿ ಸ್ವೀಕರಿಸಿ ಠಾಣೆಗೆ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ ಶಾರದಾಬಾಯಿ ಇವಳು ಅಂಗನವಾಡಿ ಕಾರ್ಯಕರ್ತೆ ಇದ್ದು ಅಂಗನವಾಡಿಯಲ್ಲಿ ಅಕ್ಕಿ, ಗೊಧಿ, ಸೆಂಗಾ ಕಾಳು ಇವುಗಳನ್ನು ಕದ್ದು ಮಾರಾಟ ಮಾಡುವಾಗ ಫೀರ್ಯಾದಿ ಹಿಡಿದು ಇಲಾಖೆಯ ಮತ್ತು ಊರವರ ಗಮನಕ್ಕೆ ತಂದಿದ್ದು ಸದರಿಯವಳು ಆರೋಪಿ ಲಕ್ಷ್ಮಣನೊಂದಿಗೆ ಅನೈತಿಕ ಸಂಭಂಧ ಹೊಂದಿದ್ದು ಅವಳ ಮೇಲು ಕಟ್ಟಿ ದ್ವೇಶ ಸಾಧೀಸಿ ಫಿರ್ಯಾದಿ ಮತ್ತು ಆತನ ಕಡೆಯವರಿಗೆ ಶಾರದಾಬಾಯಿ ಮತ್ತುಲಕ್ಷ್ಮಣನಕಡೆಯವರು ದಿನಾಂಕ 20/05/2016 ರಂದು 1930 ಗಂಟೆಗೆ ಅಂಗನವಾಡಿ ಕೇಂದ್ರದ ಎದುರು ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ಜಗಳ ಮಾಡಿ ಕೈಯಿಂದ, ಬಡಿಗೆಯಿಂದ ಹಲ್ಲೆ ಮಾಡಿ ಅವಾಚ್ಯವಾಗಿ ಬೈದು ಜೀವ ಭಯಪಡಿಸಿರುತ್ತಾರೆ.
ನಿಂಬರ್ಗಾ ಠಾಣೆ : ಇಂದು ದಿನಾಂಕ 21/05/2016 ರಂದು 0130 ಗಂಟೆಗೆ ಶ್ರೀ ನಾಗಮ್ಮ ಗಂಡ ಶ್ರೀಪತಿ ಕ್ಷೇತ್ರಿ @ ಕಟಬೂ ವ|| 75 ವರ್ಷ, ಜಾ|| ಕಟಬೂ, || ಮನೆಕೆಲಸ, ಸಾ|| ಹಿತ್ತಲಶಿರೂರ, ತಾ|| ಆಳಂದ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ನೀಡಿದ್ದು ಸಂಕ್ಷಿಪ್ತ ಸಾರಾಂಶವೇನೆಂದರೆ - ದಿನಾಂಕ 20/05/2016 ರಂದು 0730 ಪಿ.ಎಮ ಕ್ಕೆ ನನ್ನ ಮೊಮ್ಮಗಳು ಸುನಿತಾ ಕೂಡಿ ನಮ್ಮೂರಿನ ಶಾರದಾ ಅಂಗನವಾಡಿ ಟೀಚರ ಮನೆಗೆ ಹೊಸದಾಗಿ ಮದುವೆಯಾದವರ ಸರ್ವೆ ಹೆಸರು ಬರೆಸಲು ಹೋದಾಗ ಅಂಗನವಾಡಿ ಮುಂದೆ ಶಾರದಾ ಟೀಚರ ಮತ್ತು ನಾನು, ನನ್ನ ಮೊಮ್ಮಗಳು ಮಾತನಾಡುತ್ತಿದ್ದಾಗ ನಮ್ಮೂರಿನ 01] ಈರಣ್ಣಾ ತಂದೆ ಭೀಮಶಾ ಹೋಸಮನಿ, 02] ಪೂಜಾ ಗಂಡ ಈರಣ್ಣ, 03] ಭೀಮಶಾ ತಂದೆ ಈರಣ್ಣಾ ಹೊಸಮನಿ, 04] ಸುಶಿಲಾಬಾಯಿ ಗಂಡ ಭೀಮಶಾ ಹೊಸಮನಿ, 05] ಚಂದ್ರಶಾ ತಂದೆ ಈರಣ್ಣಾ ಹೊಸಮನಿ, 06] ಸುರೇಖಾ ಗಂಡ ಚಂದ್ರಶಾ ಹೊಸಮನಿ ಎಲ್ಲರೂ ಏ ರಂಡಿ ಮಕ್ಕಳೆ ಕಟಬುರ ಅಂತ ಬೈದನು ನಾನು ಕೇಳಲು ಹೋಗಿದ್ದಕ್ಕೆ ನನಗೆ ಚಂದ್ರಾಶಾನು ಬಡಿಗೆಯಿಂದ ಬಲ ಮುಂಡಿಯ ಮೇಲೆ ಹೊಡೆದಿರುತ್ತಾನೆ. ನನ್ನ ಮೊಮ್ಮಗಳಿಗೆ ಈರಣ್ಣನು ಚಾಕುವಿನಿಂದ ಎಡಗೈ ಮೇಲೆ ಹೊಡೆದು ನಿನಗೆ ಇವತ್ತು ಬಿಡಂಗಿಲ್ಲ ರಂಡಿ ಅಂತ ಹೊಲಸು ಬೈದಿರುತ್ತಾನೆ. ಅಂಬುಬಾಯಿ ಗಂಡ ರಾಮಚಂದ್ರ ಕಟಬು ಇವಳು ಬಿಡಿಸಲು ಬಂದಿದ್ದಕ್ಕೆ ಸುರೇಖಾ ಮತ್ತು ಸುಶಿಲಾಬಾಯಿ ಇಬ್ಬರೂ ಕೈ ಹಿಡಿದು ಜಗ್ಗಾಡಿ ಕೈಯಿಂದ ಹೊಟ್ಟೆ, ಬೆನ್ನಿನ ಮೇಲೆ ಹೊಡೆದಿರುತ್ತಾರೆ. ಪೂಜಾ ಇವಳು ನನ್ನ ಮೊಮ್ಮಗಳಿಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾಳೆ, ಆರೋಪಿತರೆಲ್ಲರೂ ಈ ರಂಡಿ ಮಕ್ಕಳಿಗೆ ಬಿಡಾದು ಬೇಡ ಅಂತ ಅನ್ನುತ್ತಿದ್ದಾಗ ಕಿರಣ ತಂದೆ ಲಕ್ಷ್ಮಣ ಕ್ಷೇತ್ರಿ ಮತ್ತು ರಾಮಚಂದ್ರ ತಂದೆ ಶ್ರೀಪತಿ ಇವರು ಬಿಡಿಸಿರುತ್ತಾರೆ. ಕಾರಣ ನಮಗೆ ಹೊಡೆ ಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 56/2016 ಕಲಂ 143, 147, 148, 323, 324, 354, 504, 506, ಸಂ. 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು .