POLICE BHAVAN KALABURAGI

POLICE BHAVAN KALABURAGI

10 February 2016

Kalaburagi District Reported Crimes

ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಸುಮಾರು 5-6 ವರ್ಷಗಳ ಹಿಂದೆ ಮಾಲಗತ್ತಿ ಗ್ರಾಮದ  ಬಾಗಪ್ಪಾ ಇವರ ಮಗನಾದ ಮಲ್ಲಿಕಾರ್ಜುನ ಇವನೊಂದಿಗೆ  ಮದುವೆ ಮಾಡಿಕೊಟ್ಟಿದ್ದು ಸದ್ಯ ನನ್ನ ಮಗಳಿಗೆ ಮೂರು ವರ್ಷದ ಹೆಣ್ಣು ಮಗಳು ಇರುತ್ತಾಳೆ.  ಹೀಗಿದ್ದು  ಮಾಲಗತ್ತಿಯಲ್ಲಿನ  ಶರಣಪ್ಪಾ  ಕೋನಳ್ಳಿ  ಇತನು  ನನ್ನ  ಮಗಳೊಂದಿಗೆ  ಮೈ  ಕೈ ಮುಟ್ಟಿ  ಮಾತನಾಡುವದು,  ಚುಡಾಯಿಸುವದು  ಮಾಡುತ್ತಿದ್ದನು  ಈ ಬಗ್ಗೆ  ನನ್ನ  ಅಳಿಯ  ಮತ್ತು  ಅವರ  ಮನೆಯವರು  ಹಾಗೂ  ನಾನು ಶರಣಪ್ಪನಿಗೆ  ನನ್ನ ಮಗಳಿಗೆ  ಮದುವೆ ಆಗಿ ಒಂದು  ಮಗು  ಇದೆ ಈ ರೀತಿ  ಮಾಡಿದರೆ ಅವಳ ಸಂಸಾರ  ಹಾಳಾಗುತ್ತದೆ ಅಂತಾ  ಹೇಳಿದರೂ  ಕೂಡ  ಆತನು  ಕೇಳುತ್ತಿರಲಿಲ್ಲಾ ತನ್ನ ಚಾಳಿ ಬಿಟ್ಟಿರಲಿಲ್ಲಾ. ಹೀಗಿದ್ದು   ದಿನಾಂಕ 06/02/2016 ರಂದು ಸಾಯಂಕಾಲ ನನ್ನ ಅಳಿಯನಾದ ಮಲ್ಲಿಕಾರ್ಜುನ ಮಾಲಗತ್ತಿ ಇತನು ಪೋನ ಮಾಡಿ ತಿಳಿಸಿದ್ದೆನೆಂದರೆ, ನಿನ್ನ ಮಗನ್ನು ನಮ್ಮೂರ ಶರಣಪ್ಪಾ ತಂದೆ ಸಾಬಣ್ಣಾ ಕೊನಳ್ಳಿ ಇತನು ಮದ್ಯಾನ್ನ ವೇಳೆ ಮನೆಯಲ್ಲಿ ಯಾರು ಇಲ್ಲದಾಗ ಇವಳಿಗೆ ಹೆದರಿಸಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ. ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಅಕ್ಕ ಸುಮಂಗಲಾ ನನ್ನ ಮಾವ ಬಸವರಾಜ ಎಲ್ಲರೂ ಕೂಡಿಕೊಂಡು ಮಾಲಗತ್ತಿಗೆ ಬಂದು ಊರಲ್ಲಿ ವಿಚಾರಿಸಲಾಗಿ ನನ್ನ ದೊಡ್ಡ ಅಳಿಯ ಸೂರ್ಯಕಾಂತ ಇತನು ತಿಳಿಸಿದ್ದೆನೆಂದರೆ, ನಮ್ಮೂರ ಶರಣಪ್ಪಾ ಇತನು ಪೂಜಾ ಇವಳಿಗೆ ಇಂದು ಮದ್ಯಾನ್ನ 02-00 ಗಂಟೆಯ ಸುಮಾರಿಗೆ ನಾನು ಹನುಮಾನ ದೇವರ ಗುಡಿಯ ಹತ್ತಿರ ಕುಳಿತಾಗ ಶರಣಪ್ಪಾ ಕೊನಳಿ ಇತನು ಕರೆದುಕೊಂಡು ಹೋಗುವುದು ನಾನು ನೋಡಿರುತ್ತೇನೆ ಅಂತಾ ತಿಳಿಸಿದಾಗ.  ನಾವೆಲ್ಲರು  ಕೂಡಿ ಅಂದಿನಿಂದ  ವಾಡಿ, ಚಿತ್ತಾಪೂರ,  ದಂಡೋತಿ,  ಟೆಂಗಳಿ,  ಮಾಡಬೂಳ,  ಮತ್ತು ಇತರೆ ಕಡೆ ಹುಡಿಕಾಡಿದರೂ  ಸಿಕ್ಕಿರುವದಿಲ್ಲಾ.   ನನ್ನ ಮಗಳಿಗೆ  ಶರಣಪ್ಪಾ  ಕೋನಳ್ಳಿ  ಇತನು ಹೆದರಿಸಿ  ಪುಸಲಾಯಿಸಿ  ಹಠಸಂಬೋಗ  ಮಾಡುವ  ಉದ್ದೇಶದಿಂದ ಅಪಹರಿಸಿಕೊಂಡು  ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ-09/02/2016 ರಂದು ರಾತ್ರಿ 7-30 ಪಿ.ಎಮ್ ದ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಮಹಮ್ಮದ ಇಸ್ಲಾಂ ಮುತ್ತಗಿ ಇತನ ಹತ್ತಿರ ವಿದ್ದ ಕೆಎ-32 ಇಇ-9607 ನೇದ್ದು ಮೋಟಾರ ಸೈಕಲ ತೆಗೆದುಕೊಂಡು ಖಾಸಗಿ ಕೆಲಸದ ನಿಮಿತ್ಯ ಕಲಬುರಗಿಗೆ ಹೋಗಿ ಬರೋಣ ಅಂತಾ ನಾವಿಬ್ಬರೂ ಕೊಡಿಕೊಂಡು ಸದರ ಮೋ.ಸೈಕಲ ಮೇಲೆ ಹೊರಟು ಸದರ ಮೋಟಾರ ಸೈಕಲ ನಾನು ಚಲಾಯಿಸುತ್ತಿದ್ದು ಮಹಮ್ಮದ ಇಸ್ಲಾಂ ಹಿಂದುಗಡೆ ಕುಳಿತುಕೊಂಡಿದ್ದು ನಮ್ಮಂತೆ  ನಮ್ಮ ಗ್ರಾಮದ ಮಹಮ್ಮದ ಇಸಾಕ ಹಾಗೂ ವಕಿಲ್ ತಂದೆ ರಸೂಲಸಾಬ ಇವರಿಬ್ಬರೂ ತಮ್ಮ ಮೋಟಾರ ಸೈಕಲ ಮೇಲೆ ನಮ್ಮ ಹಿಂದುಗಡೆ ಕಲಬುರಗಿಗೆ ಹೊರಟ್ಟಿದ್ದು. ನಾವುಗಳು ಮುಗುಟಾ ಕ್ರಾಸ್ ದಾಟಿ ವೇರ ಹೌಸ ಹತ್ತಿರ ರೊಡಿನ ಮೇಲೆ ಹೋಗುತ್ತಿರುವಾಗ ನನ್ನ ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಯಾವುದೋ ಒಂದು ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಕೊಂಡು ಬಂದವನೆ ನಮ್ಮ ಮೋಟಾರ ಸೈಕಲಗೆ ಸೈಡಿನಿಂದ ಡಿಕ್ಕಿ ಪಡಿಸಿದ ಪರಿಣಾಮ ನಾವಿಬ್ಬರೂ ಮೋ.ಸೈಕಲ ಸಮೇತ ರೊಡಿನ ಪಕ್ಕದಲ್ಲಿ ಬಿದ್ದೆವು ನಮ್ಮ ಹಿಂದುಗಡೆ ಬರುತ್ತಿದ್ದ ನಮ್ಮ ಗ್ರಾಮದ ಮಹಮ್ಮದ ಇಸಾಕ ಹಾಗೂ ವಕಿಲ್ ಇವರಿಬ್ಬರೂ ಬಂದು ನಮಗೆ ಎಬ್ಬಿಸಿದರು. ನನಗೆ ಬಲಗೈ ಹಾಗೂ ಬಲಗಾಲಿಗೆ ಭಾರಿ ರಕ್ತಗಾಯವಾಗಿ ಮುರಿದಂತಾಗಿರುತ್ತದೆ. ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು. ನಂತರ ಮಹಮ್ಮದ ಇಸ್ಲಾಂ ಇತನಿಗೆ ನೋಡಲಾಗಿ ಬಲಗಾಲು ಹಾಗೂ ಬೆರಳು ಹತ್ತಿರ ಭಾರಿ ರಕ್ತಗಾಯವಾಗಿ ಬಲಗಾಲು ಮುರಿದಂತಾಗಿರುತ್ತದೆ. ಹಾಗೂ ಗುಪ್ತಗಾಯ ಹಾಗೂ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲ್ಲಿಲ್ಲಾ ನಂತರ ನಮ್ಮ ಗ್ರಾಮದವರು ಜಿ.ವ್ಹಿ.ಆರ್. ಅಂಬಿಲೈನ್ಸಗೆ ಪೋನ್ ಮಾಡಿ ಕರೆಯಿಸಿ ನನಗೆ ಹಾಗೂ ಮಹಮ್ಮದ ಇಸ್ಲಾಂ ಇಬ್ಬರಿಗೆ ಹಾಕಿಕೊಂಡು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಸದರಿ ಮಹಮ್ಮದ ಇಸ್ಲಾಂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಉಮರ ತಂದೆ ಇಲಿಯಾಸ ನಾಲವಾರ ಸಾ : ದಂಡೋತಿ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲ;ಇಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 28/29/01/2016 ರಂದು ಯಾರೋ ಅಪರಿಚಿತ ಕಳ್ಳರು ಸೊಂತ ಗ್ರಾಮದ ಶ್ರೀ ಚಂದ್ರಶೇಖರ ಸ್ಮಾರಕ ಸರ್ಕಾರಿ ¥Ëæಢ ಶಾಲೆಯ ಕೊಣೆಯಲ್ಲಿ ಇಟ್ಟ 8 ಬ್ಯಾಟರಿಗಳು ಅ.ಕಿ. 8ರಿಂದ 10 ಸಾವಿರ ರೋಪಾಯಿ ಬೆಲೆಬಾಳುವ ಬ್ಯಾಟರಿಗಳನ್ನು ರಾತ್ರಿ ವೇಳೆಯಲ್ಲಿ ಶಾಲೆಯ ಕೊಣೆಯ ಬೀಗ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ದಿನಾಂಕ 09-02-2016 ರಂದು ಹಾವಳಗಾ ಗ್ರಾಮಕ್ಕೆ ಹೊಂದಿಕೊಂಡಿರುವ ಭಿಮಾನದಿಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿದರಾಯ ಭೋಸಗಿ  ಪಿ.ಎಸ್.ಐ  ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ರೇಣುಕಾ ಸಕ್ಕರೆ ಕಾರ್ಖಾನೆ ಹತ್ತಿರ ಹಾವಳಗಾ ರೋಡಿಗೆ ಹೋಗುತಿದ್ದಾಗ   ನಮ್ಮ ಎದುರಿನಿಂದ ಎರಡು ಟಿಪ್ಪರಗಳು ಬರುತಿದ್ದು, ಸದರಿ ಟಿಪ್ಪರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟಿಪ್ಪರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಎರಡು ಟಿಪ್ಪರಗಳಿದ್ದು   ಚೆಕ್ ಮಾಡಿ ನೋಡಲು ಸದರಿ ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1) ಟಾಟಾ ಕಂಪನಿಯ ಟಿಪ್ಪರ ನಂ ಕೆಎ-28 ಸಿ-1916 ಅ.ಕಿ 5,00,000/-ರೂ 2) ಟಾಟಾ ಕಂಪನಿಯ ಟಿಪ್ಪರ ನಂ ಕೆಎ-28 ಸಿ-1917 ಅ.ಕಿ 5,00,000/-ರೂ ಈ ರೀತಿ ಇರುತ್ತವೆ. ಸದರಿ ಟಿಪ್ಪರಗಳಲ್ಲಿನ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಎರಡು ಟಿಪ್ಪರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲ;ಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.