POLICE BHAVAN KALABURAGI

POLICE BHAVAN KALABURAGI

22 August 2015

Kalaburagi District Reported Crimes.

ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 22/08/2015 ರಂದು 1630 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವಿಠ್ಠಲ ತಂದೆ ಬಳಿರಾಮ ಮೋರೆ ವ|| 54 ವರ್ಷ, ಜಾ|| ಮರಾಠಾ, || ಒಕ್ಕಲುತನ, ಸಾ|| ಭೂಸನೂರ. ಇವರು ಠಾಣೆಗೆ ಬಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ನನಗೂ ಮತ್ತು ನಮ್ಮ ಹೊಲದ ಬಾಜು ಹೊಲದವನಾದ ತುಳಜಾರಾಮ ತಂದೆ ನಿಂಗಪ್ಪ ಫುಲಾರ ಇವರಿಗೂ ನಮ್ಮ ಹೊಲ ಸರ್ವೆ ನಂ. 83/4 ನೇದ್ದರ ಸಂಭಂಧ ಸಿವಿಲ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಆದರೆ ದಿನಾಂಕ 20/08/2015 ರಂದು ಮಧ್ಯಾಹ್ನ 0300 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ನನ್ನ ಹೊಲಕ್ಕೆ ಹೋಗಿ ನೋಡಲಾಗಿ ನಮ್ಮ ಹೊಲದ ಬಂದಾರಿಯ ಮೇಲೆ 01] ಕಿಶನ ತಂದೆ ಸೋಪನ ಲವಟೆ, 02] ವಿಠ್ಠಲ ತಂದೆ ನಿಂಗಪ್ಪ ಫುಲಾರ, 03] ವಿಜಯಕುಮಾರ ತಂದೆ ನಿಂಗಪ್ಪಾ ಫುಲಾರ, 04] ಸಂಜು ತಂದೆ ವಿಠ್ಠಲ ಫುಲಾರ ಎಲ್ಲರೂ ಗಿಡಗಳನ್ನು ಕಡೆಯುತ್ತಿದ್ದು ಅದಕ್ಕೆ ನಾನು ನನ್ನ ತಕರಾರು ಇದ್ದ ಬಗ್ಗೆ ಹೇಳಿದ್ದಕ್ಕೆ ಕಿಶನನು ಏ ರಂಡಿಮಗನೆ ತಕರಾರು ಕೊಡಲಿಕ್ಕೆ ನೀನ್ಯಾರು ಅಂತ ಬೈದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕೈಯಿಂದ ಕಪಾಳ ಮೇಲೆ ಹೊಡೆದನು ನನ್ನ ಹೆಂಡತಿಯಾದ ಸುಭದ್ರಾ ಇವಳು ಬಿಡಿಸಲು ಬಂದಾಗ ಅವಳಿಗೆ ವಿಠ್ಠಲನು ಸೀರೆಯ ಸೆರಗು ಹಿಡಿದು ಜಗ್ಗಾಡಿ ಕೈಯಿಂದ ಬೆನ್ನ ಮೇಲೆ ಹೊಡೆದನು, ವಿಜಕುಮಾರ ಮತ್ತು ಸಂಜು ಇವರಿಬ್ಬರೂ ಈ ರಂಡಿಗೆ ಸೊಕ್ಕು ಬಹಳ ಬಂದಾದ ಖಲಾಸ ಮಾಡಿರಿ ಅಂತ ಜೀವ ಭಯ ಹಾಕಿದ್ದಲ್ಲದೆ ನಮ್ಮ ಹತ್ತಿರ 10 ಬಡಿಗೆ ಅದಾವ ಅಂತ ಭಯಪಡಿಸಿದ್ದಲ್ಲದೆ ನನಗೆ ಸಂಜು ಇತನು ಕಾಲಿನಿಂದ ಬೆನ್ನ ಮೇಲೆ ಒದ್ದಿರುತ್ತಾನೆ. ಅಷ್ಟರಲ್ಲಿ ಶಾಂತಮಲ್ಲಪ್ಪ ತಂದೆ ಈರಪ್ಪ ನೆಲ್ಲೂರ ಮತ್ತು ಶರಣಪ್ಪ ತಂದೆ ಶಿವಲಿಂಗಪ್ಪ ನೀಲೂರ ಇಬ್ಬರೂ ಓಡಿ ಬಂದು ಬಿಡಿಸಿರುತ್ತಾರೆ. ಜಗಳದಲ್ಲಿ ನನಗೆ ಮತ್ತು ನನ್ನ ಹೆಂಡತಿಗೆ ಗುಪ್ತಗಾಯಗಳಾಗಿದ್ದು ನಮಗೆ ದವಾಖಾನೆಯ ಉಪಚಾರದ ಅಗತ್ಯವಿಲ್ಲ ಅಲ್ಲದೆ ಇದರ ಬಗ್ಗೆ ನಾನು ಮತ್ತು ನನ್ನ ಹೆಂಡತಿ ವಿಚಾರ ಮಾಡಿ ಇಂದು ದಿನಾಂಕ 22/08/2015 ರಂದು ತಡವಾಗಿ ಠಾಣೆಗೆ ಬಂದು ಅರ್ಜಿ ಸಲ್ಲಿಸಿದ್ದು ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಿನಂತಿ ಅಂತ ಕೊಟ್ಟ ಲೀಖಿತ ಫಿರ್ಯಾದಿ ಸಾರಾಂಶದ ಮೇಲಿಂದ  ನಿಂಬರ್ಗಾ ಪೊಲೀಸ್ ಠಾಣೆಯ ಗುನ್ನೆ ನಂ 98/2015 ಕಲಂ 341, 447, 323, 354, 504, 506 ಸಂ. 34 ಐಪಿಸಿ ಪ್ರಕರಣ ದಾಖಲಾಗಿರುತ್ತದ.  
ಗ್ರಾಮೀಣ  ಠಾಣೆ : ದಿನಾಂಕ  20-08-15 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಕಲಬುರಗಿ ಹುಮನಾಬಾದ ರಿಂಗ ರೋಡಿನ ಹೊಸ ಬಸ ಸ್ಟಾಪ ಹತ್ತಿರ ಮೋಬಾಯಿಲನಲ್ಲಿ ಮಾತಾಡುತ್ತಾ ನಡೆದುಕೊಂಡು ಹೋಗುತ್ತಿದ್ದ ಶ್ರೀ ಇಸಾಕ ತಿಲಿಬಿನ  ಇತನಿಗೆ ಮೂರು ಜನ 20 ರಿಂದ 25 ವರ್ಷ ವಯಸ್ಸಿನವರು ಹಿರೋ ಮೆಸ್ಟ್ರೋ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಬಂದು ಇಸಾಕನಿಗೆ ಅಡ್ಡಗಟ್ಟಿ ನಿಲ್ಲಿಸಿ, ಚಾಕು ತೋರಿಸಿ,  ನಗದು ಹಣ 8000 ರೂ. ಮತ್ತು ನೋಕಿಯಾ ಆಶಾ ಅ:ಕಿ: 5000/- ರೂ. ಒಟ್ಟು 13,000 ರೂ. ಬೆಲೆಬಾಳುವದನ್ನು ಜಬರ ದಸ್ತಿಯಿಂದ ಕಸಿದುಕೊಂಡು ಹೋದ ಬಗ್ಗೆ  ಗ್ರಾಮೀಣ ಪೊಲೀಸ ಠಾಣೆಯಲ್ಲಿ ಗುನ್ನೆ ನಂ. 330/2015 ಕಲಂ 392 ಐಪಿಸಿ ಪ್ರಕರಣ ದಾಖಲಾಗಿರುತ್ತದೆ. ಮಾನ್ಯ ಪೊಲೀಸ ಅಧೀಕ್ಷರಾದ ಶ್ರೀ ಅಮಿತಸಿಂಗ ಐ.ಪಿ.ಎಸ್. , ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷರಾದ ಶ್ರೀ ಜಯಪ್ರಕಾಶ, ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ ಶ್ರೀ ವಿಜಯ ಅಂಚಿ ರವರ ಮಾರ್ಗದರ್ಶನದಲ್ಲಿ  ಪ್ರಕರಣದ ತನಿಖಾಧಿಕಾರಿಯಾದ  ಶ್ರೀ ಎ. ವಾಜೀದ ಪಟೇಲ್ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ಮತ್ತು ಅವರ ತಂಡದವರಾದ       ಶ್ರೀ ಉದಂಡಪ್ಪ.ಮಣ್ಣೂರಕರ್ ಪಿ.ಎಸ್.ಐ. (ಅ.ವಿ.) ಮತ್ತು ಶ್ರೀ ಶರಣಬಸಪ್ಪ ಕೋಡ್ಲಾ. ಪಿ.ಎಸ್.ಐ. (ಕಾ&ಸು), ಹಾಗೂ  ಸಿಬ್ಬಂದಿಯವರಾದ ಹುಸೇನಬಾಷಾ, ಶಿವುಕುಮಾರ, ಸಿದ್ರಾಮ ನಿಂಬರ್ಗಾ,  ಸಲೀಮೋದ್ದಿನ್, ಎಮ್.ಎ. ಬೇಗ, ದತ್ತಾತ್ರೇಯ, ಶರಣು ಸಲಗರ , ಅಂಬಾಜಿ, ವಿಶ್ವನಾಥ, ಯಶ್ವಂತರಾವ, ಶರಣಗೌಡ, ರಾಜು ಗಂದೆ, ಆರಿಫ್ ಇವರುಗಳು ಕೂಡಿಕೊಂಡು ಚುರುಕಿನ ದಾಳಿ ನಡೆಸಿ ದಿನಾಂಕ 22-08-15 ರಂದು  ಆರೋಪಿತರಾದ 1) ಮಹ್ಮದ ರಫೀಕ ತಂದೆ ಸರ್ದಾರಮಿಯ್ಯಾ ಖುರೇಷಿ ವ: 20 ವರ್ಷ ಜಾ:ಮುಸ್ಲಿಂ ಉ: ಖುರೆಷಿ ಕೆಲಸ ಸಾ: ಹಜ್ ಕಮಿಟಿ ಹತ್ತಿರ ಮಿಜಗುರಿ ಕಲಬುರಗಿ 2) ಗೌಸ ಪಾಶಾ ತಂದೆ  ಅನ್ವರ ಹುಸೇನ ಶೇಖ ಅಬ್ದುಲ್ಲಾ ವ: 25 ವರ್ಷ ಉ: ಕ್ಲಿನರ ಸಾ: ಪೀರ ಕಟ್ಟಾ ಹತ್ತಿರ ಮಿಜಗುರಿ ಕಲಬುರಗಿ 3) ಖಾಸಿಂ ಪಟೇಲ್ ತಂದೆ ಖಾಜಾ ಮೈನೊದ್ದಿನ್ ವಗ್ಡಡವಾಲೆ ವ:20 ವರ್ಷ ಉ: ಹಣ್ಣಿನ ವ್ಯಾಪಾರ ಸಾ: ಲಿಟಲ್ ಪ್ಲವರ ಶಾಲೆ ಹತ್ತಿರ ಇಸ್ಲಾಮಾಬಾದ ಕಾಲೊನಿ  ಕಲಬುರಗಿ ರವರನ್ನು ಹುಮನಾಬಾದ ರಿಂಗ ರೋಡಿನ ವಿಜಯಕರ್ನಾಟಕ ಪ್ರೆಸ ಹತ್ತಿರ ಇರುವ ಅತೀಕ ಗ್ಯಾರೇಜ ಮುಂದುಗಡೆ  ದಸ್ತಗಿರಿ ಮಾಡಿ ಅವರಿಂದ ಸುಲಿಗೆ ಮಾಡಿದ ನಗದು ಹಣ 7500/ ರೂ ಮತ್ತು ನೋಕಿಯಾ ಆಶಾ ಮೋಬಾಯಿಲ್ ಅ;ಕಿ: 5000/-ರೂ. ಮತ್ತು ಕೃತ್ಯಕ್ಕೆ ಬಳಸಿದ ಚಾಕು ಹಾಗೂ ಹಿರೋ ಮೆಸ್ಟ್ರೋ ಮೋಟಾರ ಸೈಕಲ ಕೆಎ 32 ಇಜಿ 8628  ಅ:ಕಿ: 40,000/- ರೂ. ಹೀಗೆ ಒಟ್ಟು  52,500/- ರೂ. ಮುದ್ದೆ ಮಾಲು ಜಪ್ತಿ ಪಡಿಸಿಕೊಂಡು, ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ. 
ಜೇವರ್ಗಿ  ಠಾಣೆದಿನಾಂಕ 22.08.2015 ರಂದು 15:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿ: 21.08.2015 ರಂದು ಸಾಯಂಕಾಲ ೦6:30 ಗಂಟೆಯ ಸುಮಾರಿಗೆ ಕೇನಾಲ್ ಹತ್ತಿರ ಆಂದೋಲಾ ಕೆಲ್ಲೂರ ರಸ್ತೆಯ ಮೇಲೆ ನನ್ನ ಮಗಳು ಕುಳಿತುಕೊಂಡು ಬರುತ್ತಿದ್ದ ಟಂಟಂ ನಂ ಕೆ.ಎ32ಸಿ4150 ನೇದ್ದಕ್ಕೆ ಎದುರುನಿಂದ ಬರುತ್ತಿದ್ದ ಆಟೋ ನಂ ಕೆ.ಎ32ಸಿ0884 ನೇದ್ದರ ಚಾಲಕನು ತನ್ನ ಟಂಟಂ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಾಲಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ನನ್ನ ಮಗಳಿಗೆ ಭಾರಿ ರಕ್ತ ಗಾಯಪಡಿಸಿ ಅಪಘಾತದ ನಂತರ ತನ್ನ ಟಂಟಂ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಕಾರಣ ಟಂಟಂ ನಂ ಕೆ.ಎ32ಸಿ0884 ನೇದ್ದರ ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಇತ್ಯಾದಿ ಫಿರ್ಯಾದಿ ಹೇಳಿಕೆ ಸಾರಾಂಶವನ್ನು ಪಡೆದುಕೊಂಡು ಮರಳಿ 23:15 ಗಂಟೆಗೆ ಠಾಣೆಗೆ ಬಂದು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 228/15 ಕಲಂ 279. 338 ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ . 

Kalaburagi District Reported Crimes.

ಗ್ರಾಮೀಣ ಠಾಣೆ  : ದಿನಾಂಕ: 20/08/2015 ರಂದು  4-00 ಎ.ಎಂ.ಕ್ಕೆ. ಶ್ರೀ.ರೇವಣಸಿದ್ದ ತಂದೆ ಜಗನಾಥ  ಬೆಡಸೂರ ವಯ;35 ವರ್ಷ ಜ್ಯಾತಿ;ಲಿಂಗಾಯತ ಉ;ನ್ಯೂಸುಪರ ಡ್ರೈಕ್ಲೀನರನಲ್ಲಿ ಕೆಲಸ ಸಾ;ಮರಗಮ್ಮ ಗುಡಿಯ ಹತ್ತಿರ ಶಹಾಬಜಾರ ಕಲಬುರಗಿ ಇವರು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಂಶ ಏನೆಂದರೆ ದಿನಾಂಕ. 19-8-2015 ರಂದು 5-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಡ್ರೈಕ್ಲೀನರ ಮಾಲಿಕರಾದ  ಸದಾಶಿವ  ರೇವಯ್ಯಾ ಮಠಪತಿ ಸಾ;ಗೋದು ತಾಯಿನಗರ ಕಲಬುರಗಿ ಇಬ್ಬರು ಕೂಡಿಕೊಂಡು ವಗ್ದರಿಯ ರಾಚೋಟೆಶ್ವರ ದೇವಸ್ಥಾನಕ್ಕೆ ಹೋಗಿ ಬರುವ ಕುರಿತು ಸದಾಶಿವಯ್ಯಾ ಮಠಪತಿ ಇವರ ಮೋಟಾರ ಸೈಕಲ್ ಬಜಾಜ ಪಲ್ಸರ ನಂ.ಕೆ.ಎ.32. ಇಇ.1726  ನೆದ್ದರ ಮೇಲೆ ಕಲಬುರಗಿಯಿಂದ ವಗ್ದರಿಗೆ ಹೋಗಿದ್ದು ದೇವರ ದರ್ಶನ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರುತ್ತಿರುವಾಗ ಪಟ್ಟಣ್ಣ ಟೂಲ್ ನಾಕಾ ದಾಟಿದ ನಂತರ ಪಟ್ಟಣ ಕ್ರಾಸ ಕ್ಕಿಂತ ಮುಂಚಿತ ಮೋಟಾರ ಸೈಕಲನ್ನು ನಿಲ್ಲಿಸಿ  ಎಕೀ ಗೆ ( ಮೂತ್ರ ವಿಸರ್ಜನೆ ) ಗೆ ಹೋಗಿ ಮರಳಿ ಬಂದು ಮೋಟಾರ ಸೈಕಲ್ ಮೇಲೆ ಕುಳಿತು ಸದಾಶಿವನು ಮೋಟಾರ ಸೈಕಲನ್ನು ಚಾಲು ಮಾಡಿದನು ನಾನು ಅವನ ಹಿಂದು ಕೂಡುವಷ್ಟರಲ್ಲಿ ನಮ್ಮ ಹಿಂದಿನಿಂದ ಅಂದರೆ ಆಳಂದ ಕಡೆಯಿಂದ ಒಂದು ವಾಹನವು ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ನಮಗೆ ಡಿಕ್ಕಿ ಹೋಡೆನು ಆಗ ನಾನೂ ರೋಡ ಕೆಳಗೆ ಬಿದ್ದೇನು ಮತ್ತು ಸದಾಶಿವನು ಕೂಡಾ ಕೆಳಗೆ ಬಿದ್ದನು   ಆಗ ರೋಡಿಗೆ ಹೋಗಿಬರುವ ವಾಹನಗಳ ಬೆಳಕಿನಲ್ಲಿ  ಡಿಕ್ಕಿ ಹೊಡೆದ ವಾಹನ ನೋಡಲಾಗಿ ಒಂದು ಬಿಳಿ ನಮೂನೆಯ ಜೀಪ /ಕಾರಿನಂತೆ ಇರುವ ವಾಹನವಿದ್ದು ಅದರ ಚಾಲಕನು  ಹಾಗೆ ಓಡಿಸಿಕೊಂಡು ಕಲಬುರಗಿಕಡೆಗೆ ಬಂದನು ,ಇದರಿಂದ ನನಗೆ ತಲೆಯ ಹಿಂದುಗಡೆ ರಕ್ತಗಾಯ ಮತ್ತು ಗುಪ್ತ ಪೆಟ್ಟಾಗಿರುತ್ತದೆ.ಎಡಕಿನ ಕಿವಿಯ ಮೇಲೆ ತರಚಿದಗಾಯ , ಎಡಗಡೆ ಗಲ್ಲದ ಮೇಲೆ ತರಚಿದಗಾಯ, ಎಡ ಮುಂಡಿಯ ಮೇಲೆ ತರಚಿದಗಾಯ,ಬಲಕಿನ ತೋಡೆಯ ಮೇಲೆ ಗುಪ್ತ ಪೆಟ್ಟಾಗಿರುತ್ತದೆ. ಎಡಗಾಲಿನ ಹಿಂಬಡಿಗೆ ತರಚಿದಗಾಯ ವಾಗಿರುತ್ತವೆ. ಹಾಗೂ ಸದಾಶಿವ ಮಠಪತಿ ಇತನಿಗೆ ತಲೆಯ ಹಿಂದುಗಡೆ ಭಾರಿ ಗುಪ್ತ ಪಟ್ಟಾಗಿದ್ದು,ಬಲಗೈ ಭುಜಕ್ಕೆಮೋಳಕೈಗೆ ರಕ್ತಗಾಯ ತರಚಿದ ಗಾಯಗಳಾಗಿದ್ದು ,ಸದರಿ ಘಟನೆ ಸಂಭವಿಸಿದ್ದಾಗ ರಾತ್ರಿ ಅಂದಾಜು 10-55 ಗಂಟೆಯಾಗಿತ್ತು, ಅಂತಾ ವಗೈರೆ ಕೊಟ್ಟ ಫಿರ್ಯಾದಿ ಸಾರಂಶಧ ಮೇಲಿಂದ ನಮ್ಮ ಠಾಣೆ ಗುನ್ನೆ ನಂ. 328/2015 ಕಲಂ. 279,337,338 ಐಪಿಸಿ ಸಂಗಡ 187 ಐಎಂವಿ ಎಕ್ಟ ನೆದ್ದರ ಪ್ರಕಾರ ಗುನ್ನೆ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ದಿನಾಂಕ.21-8-2015 ರಂದು 10-00 ಎ.ಎಂ.ಕ್ಕೆ. ಶ್ರೀ ಬಾಬು ತಂದೆ ರೇವಯ್ಯಾ ಮಠಪತಿ ವಯ;35 ವರ್ಷ ಜ್ಯಾತಿ;ಜಂಗಮ್ಮಾ ಉ;ಲೆಕ್ಚರ ಸಾ; ಮನೆ ನಂ.1-14-95-202 ಗೋದುತಾಯಿ ನಗರ  ಕಲಬುರ ಇವರು ಕೊಟ್ಟ ಪುರವಣೆ ಹೇಳಿಕೆ ಏನೆಂದರೆ ಸದರಿ ಪ್ರಕರಣದಲ್ಲಿ ಭಾರಿಗಾಯಗೊಂಡ ತನ್ನತಮ್ಮ ಸದಾಶಿವ ತಂದೆ ರೇವಯ್ಯಾ ಮಠಪತಿ ವಯ;28ವರ್ಷ ಇತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಿಗಿಂದ ಹೈದ್ರಾಬಾದ ಗ್ಲೋಬಲ್ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಅಲ್ಲಿದ್ದ ಮರಳಿ ಕಲಬುರಗಿಗೆ ಬರುವಾಗ ದಿನಾಂಕ. 21-8-2015 ರಂದು 1-00 ಎ.ಎಂ.ಕ್ಕೆ. ಮದ್ಯದ ಮಾರ್ಗದಲ್ಲಿ  ಮೃತ ಪಟ್ಟಿರುತ್ತಾನೆ ಅಂತಾ ವಗೈರೆ ಕೊಟ್ಟ ಪುರವಣೆ ಹೇಳಿಕೆ ಸಾರಂಶಧ ಮೇಲಿಂದ ಸದರಿ ಗುನ್ನೆ ನಂ.328/2015 ಕಲಂ. 279,337,338, ಐಪಿಸಿ ಸಂಗಡ 187 ಐಎಂವಿ ಎಕ್ಟ ನೆದ್ದರ ಪ್ರಕರಣದಲ್ಲಿ ಕಲಂ.304 (ಎ) ಐಪಿಸಿ ನೆದ್ದನ್ನು ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಜೇವರ್ಗಿ  ಠಾಣೆ  :      ದಿನಾಂಕ: 21.08.2015 ರಂದು 13:00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 21.08.2015 ರಂದು 11:15 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಕೋಳಕೂರ ಗ್ರಾಮದ ಈಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 4025/- ರೂ ಗಳು ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿದ್ದು ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಅಂತ ವರದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 226/2015 ಕಲಂ 87 ಕೆ.ಪಿ ಆಕ್ಟ್‌ ನೇದ್ದರ ಅಡಿಯಲ್ಲಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಜೇವರ್ಗಿ  ಠಾಣೆ    :    ದಿನಾಂಕ: 21.08.2015 ರಂದು 17:15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 21.08.2015 ರಂದು 16-00 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಕಟ್ಟಿಸಂಗಾವಿ ಬ್ರೀಡ್ಜ ಯಲ್ಲಾಲಿಂಗ ಗುಡಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 600/- ರೂ ಗಳು ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿದ್ದು ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಅಂತ ವರದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 227/2015 ಕಲಂ 87 ಕೆ.ಪಿ ಆಕ್ಟ್‌ ನೇದ್ದರ ಅಡಿಯಲ್ಲಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ ಠಾಣೆ  :     ಮೃತ ಆಶಮಾ ಬೇಗಂ ವಯಾ:20 ವರ್ಷ ಇವಳ ಮದುವೆಯು ದಿನಾಂಕ:-19/05/2015 ರಂದು ಆರೋಪಿ ನಸೀರ ಇತನೊಂದಿಗೆ ಆಗಿದ್ದು ಮದುವೆ ಕಾಲಕ್ಕೆ ಒಂದು ಲಕ್ಷ ರೂಪಾಯಿ ವರದಕ್ಷಣೆ ಮಾತಾಡಿದ್ದು ಅದೇ ಹಣವನ್ನು ಮದುವೆ ಮತ್ತು ಒಲಿಮಾಕ್ಕೆ ಖರ್ಚ ಮಾಡಬೇಕು ಅಂತಾ ಮಾತುಕತೆ ಆಗಿ ನಂತರ ಸದರಿ ಆರೋಪಿತರಾದ ನಸೀರ ಹಾಗು ಸೈಯದಮಾ ಇವರು ಇನ್ನು 20000/-ರೂ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರಿಂದ ಅವರ ತಾಪ ತಾಳಲಾರದೇ ಇಂದು ದಿನಾಂಕ:-21/08/2015 ರಂದು ಮದ್ಯಾಹ್ನ 03:30 ಗಂಟೆ ಸುಮಾರಿಗೆ ತನ್ನ ಗಂಡನ ಮನೆಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಆಗಿದಾಗ ಉಪಚಾರ ಫಲಕಾರಿಯಾಗದೇ ರಾತ್ರಿ 08:00 ಗಂಟೆಗೆ ಮೃತಪಟ್ಟಿದ್ದು ಈ ಮೇಲಿನಂತೆ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.