POLICE BHAVAN KALABURAGI

POLICE BHAVAN KALABURAGI

16 June 2016

Kalaburagi District Reported Crimes

ಹಲ್ಲೆ ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ : ಶ್ರೀ ಚಂದ್ರಶಾ ತಂದೆ ದೇವಿಂದ್ರಪ್ಪ ಹಳ್ಳಿ ಸಾ||ದೇವಲಗಾಣ ಗಾಪುರ ಇವರು ದಿನಾಂಕ:14-06-2016 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ನನ್ನ ಗೆಳೆಯನಾದ ಅಂಬಾರಾಯ ತಂದೆ ಮರೆಪ್ಪ ಹಳ್ಳಿ ಇತನೊಂದಿಗೆ ನಮ್ಮೂರಿನ ಕಮಿಟಿ ಹಾಲ ಹತ್ತಿರ ಇರುವ ರಾಕೇಶ ತಂದೆ ಸುಕಾಂತ ದೊಡ್ಡಮನಿ ಇವರ ಕಿರಾಣಾ ಅಂಗಡಿಯ ಮುಂದೆ ಕಟ್ಟೆಯ ಮೇಲೆ ಕುಳಿತಾಗ  ಆ ಸಮಯಕ್ಕೆ ಚಂದ್ರಶಾ ತಂದೆ ಅಂಬಣ್ಣ ನಡಗಟ್ಟಿ ಈತನು ಕುಡಿದು ಬಂದು ಏ ರಂಡಿ ಮಗನೇ ಬೋಸಡಿ ಮಗನೆ ನಿಂದು ಜಾಸ್ತಿಯಾಗಿದೆ ಅಂತಾ ಅವಾಚ್ಯ ಬೈಯುತ್ತಿರುವಾಗ ನಾನು ಅಲ್ಲಿಂದ ಎದ್ದು ಮನೆಗೆ ಹೋಗುತ್ತಿರುವಾಗ ಚಂದ್ರಶಾ ಈತನು ಹಿಂದಿನಿಂದ ಬಂದು ಚಪ್ಪಲಿಯಿಂದ ನನಗೆ ಹೊಡೆದು ತೆಕ್ಕೆ ಕುಸ್ತಿಗೆ ಮಾಡುತ್ತಿರುವಾಗ ಚಂದ್ರಶಾ ಈತನ ಮಗ ಅಂಬಣ್ಣ ಈತನು ತಮ್ಮ ಮನೆಯಲ್ಲಿದ್ದ ತಲವಾರ ತೆಗದುಕೊಂಡು ಬಂದು ನಮ್ಮ ಅಪ್ಪನೊಂದಿಗೆ ಜಗಳ ಮಾಡುತ್ತಿ ಅಂತಾ ಅವಾಚ್ಯ ಬೈದು ತನ್ನ ಕೈಯಲ್ಲಿದ್ದ ತಲವಾರದಿಂದ ನನ್ನ ತಲೆಗೆ ಬಲಗೈ ಅಂಗೈಗೆ ಬಲಗೈ ಮೋಣಗೈಗೆ ಬಲಗೈ ಭುಜದ ಮೇಲೆ ಹಾಗು ಎಡಗೈಯ ಅಂಗೈಗೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀಮತಿ ಶಿವಮ್ಮ ತಂದೆ ಚೋಳಪ್ಪ ದಾಸರ ಸಾ|| ಯಲಗೋಡ ಗ್ರಾಮ ತಾ|| ಜೇವರಗಿ ರವರ ಗಂಡ ಸುಮಾರು 20 ವರ್ಷ ಗಳ ಹಿಂದೆ ತೀರಿಕೊಂಡಿದ್ದು, ಅಂದಿನಿಂದ ನಾನು ಯಲಗೋಡ ಗ್ರಾಮದಲ್ಲಿರುವ ನಮ್ಮ ತವರು ಮನೆಯಲ್ಲೇ ಇದ್ದಿರುತ್ತೇನೆ, ನಮ್ಮ ತಮ್ಮನಾದ ಬಸವರಾಜ ಇವನಿಗೆ 6 ಜನ ಗಂಡು ಮಕ್ಕಳಿರುತ್ತಾರೆ ಈಗ 04 ವರ್ಷಗಳ ಹಿಂದೆ ನಮ್ಮ ತಮ್ಮ ಬಸವರಾಜ ಇವನು ತೀರಿಕೊಂಡಿರುತ್ತಾನೆ.  ದಿನಾಂಕ 14-06-2016 ರಂದು ಸಾಯಂಕಾಲ 6;00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಮ್ಮನ ಮಗನಾದ ಪ್ರಭುರಾಯ ಮನೆಯ ಮುಂದೆ ಮಾತಾಡುತ್ತಾ ಕುಳಿತಾಗ ನಮ್ಮೂರ 1] ಹಣಮಂತ ತಂದೆ ರಾಮಣ್ಣ ಕುರಡೇಕರ, 2] ರಾಮಣ್ಣ ಕುರಡೆಕರ, ಹಾಗು ಯಡ್ರಾಮಿ ಗ್ರಾಮದ 3] ಅವಿನಾಶ ತಂದೆ ಶಿವಕಾಂತ ಕುಸ್ತಿ, 4] ಗಣೇಶ ತಂದೆ ಶಿವಕಾಂತ ಕುಸ್ತಿ, 5] ರಘು ತಂದೆ ಬಸಣ್ಣ ಕುಸ್ತಿ, 6] ಶರಣಪ್ಪ ತಂದೆ ಲವಕುಶ ಕಲಬುರಗಿ ರವರೆಲ್ಲರು ಗುಂಪು ಕಟ್ಟಿಕೊಂಡು ಪ್ರಭುರಾಯನ ಹತ್ತಿರ ಬಂದು ಅವನಿಗೆ ಹಣಮಂತ ಇವನು ಏ ಸುಳಿಮಗನೆ ಪ್ರಬ್ಯಾ ಇವತ್ತ ಮರಗಮ್ಮ ಗುಡಿ ಹತ್ತಿರ ಚಕ್ಕಾರ ಆಡುವಾಗ ನಿನ್ನ ಎದಿರಿನವನಿಗೆ ಆಟದ ಬಗ್ಗೆ ಹೇಳಿದ್ದಕ್ಕೆ ನನ್ನೊಂದಿಗೆ ಜಗಳಮಾಡಿದಿ, ನಿನಗ ಸೊಕ್ಕ ಬಹಳಾಗ್ಯಾದ ಇವತ್ತ ನಿನಗ ಖಲಾಸೆ ಮಾಡುತ್ತೇವೆ ಅಂತಾ ಅಂದು ಅವನ ಕೈಯಲ್ಲಿದ್ದ ಬಡಿಗೆಯಿಂದ ಪ್ರಭುರಾಯನ ತೆಲೆಗೆ ಜೋರಾಗಿಹೊಡೆದನು ಆಗ ಪ್ರಭುರಾಯ ನೆಲದ ಮೇಲೆ ಬಿದ್ದಾಗ ರಾಮಣ್ಣ, ಅವಿನಾಶ, ರವರು ತಮ್ಮ ಕೈಯಲ್ಲಿದ್ದ ಬಡಿಗೆಗಳಿಂದ ಪ್ರಭುರಾಯನ ಬೆನ್ನಿನ ಮೇಲೆ ಮುಂಡಿಯ ಮೇಲೆ ಹೊಡೆದು ಗುಪ್ತ ಪೆಟ್ಟು ಪಡಿಸಿರುತ್ತಾರೆ, ರಘು ಇವನು ಪ್ರಭುರಾಯನಿಗೆ ಅಲ್ಲೆ  ಬಿದ್ದಿದ್ದ ಕಲ್ಲಿನಿಂದ ಬೆನ್ನಿನ ಮೇಲೆ ಗುದ್ದಿದ್ದನು, ಗಣೇಶ ಮತ್ತು ಶರಣಪ್ಪ ರವರು ಕೈಯಿಂದ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾರೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀ ಚಂದ್ರಶೇಖರ ಪೊಲೀಸ್ ಪಾಟೀಲ್ ಸಾ||ಅವರಳ್ಳಿ ಇವರು ದಿನಾಂಕ 14-06-2016 ರಂದು ಮದ್ಯಾಹ್ನ ನಾನು ಮತ್ತು ನನ್ನ ಗೆಳೆಯ ಸಿದ್ದರಾಮ ಚಿಕ್ಕೌಲಗಿ ಇಬ್ಬುರ ಕೂಡಿ ವ್ಯಯಕ್ತಿಕ ಕೆಲಸ ನಿಮಿತ್ಯ ತನ್ನ ಮೊಟರ್ ಸೈಕಲ ನಂ. KA 34 W-5439 ನೇದ್ದರ ಮೇಲೆ ಅವರಳ್ಳಿಯಿಂದ  ಗೊಬ್ಲುರ (ಬಿ)  ಗ್ರಾಮದ ಹತ್ತಿರ ಬಲ ಇಂಡಿಕೇಟರ ಹಾಕಿಕೊಂಡು ರೋಡ ಕ್ರಾಸ ಮಾಡುತ್ತಿದ್ದಾಗ ಸಾಯಂಕಾಲ 5:30 ಗಂಟೆ ಸುಮಾರಿಗೆ ಹಿಂದುಗಡೆಯಿಂದ ಮೊಟರ್ ಸೈಕಲ ನಂ. KA-32 EH 3327 ನೇದ್ದರ ಸವಾರ ತನ್ನ ಮೊಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನನ್ನ ಮೊಟರ್ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಕೆಳಗೆ ಬಿದ್ದು ನನ್ನ ಬಲಗಾಲ ಹಿಂಬಡಿಯ ಮೇಲೆ ಭಾರಿ ಪೆಟ್ಟಾಗಿ ಕಾಲು ಮುರಿದಿರುತ್ತದೆ. ಮತ್ತು ಎಡಗೈ ಅಂಗೈ ಹತ್ತಿರ ತರಚಿದ ಗಾಯವಾಗಿರುತ್ತದೆ. ನನ್ನ ಗೆಳೆಯ ಸಿದ್ದರಾಮ ಈತನಿಗೆ ತಲೆಗೆ ಸ್ವಲ್ಪ ರಕ್ತಗಾಯವಾಗಿದ್ದು  ತಲೆ, ಬೆನ್ನು ಎದೆ ಹಾಗೂ ಎಡಗಡೆ ಬುಜಕ್ಕೆ ಗುಪ್ತಗಾಯವಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.