POLICE BHAVAN KALABURAGI

POLICE BHAVAN KALABURAGI

22 January 2015

Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಜಗದೀಶ ತಂದೆ ವಿಶ್ವನಾಥ ಹಿರೆಮಠ ಇವರು ದಿನಾಂಕ: 12-01-2015 ರಂದು ಬೆಳಿಗ್ಗೆ ತನ್ನ ಮಗಳಾದ ವೈಷ್ಣವಿ ಮತ್ತು ಮಗನಾದ ವಿಶ್ವನಾಥ ಇವರು ಬೈಸಿಕಲ್ ಮೇಲೆ ಚಾಣುಕ್ಯ ಶಾಲೆಗೆ ಹೋಗುತ್ತಿದ್ದಾಗ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಸಿಧ್ಧಾರ್ಥ ಮೆಡಿ ಸೆಂಟರ ಎದುರಿನ ರೋಡ ಮೇಲೆ  ಎಮ್.ಎಸ್.ಕೆ.ಮಿಲ್ ರೋಡ ಕಡೆಯಿಂದ ಮೋ/ಸೈಕಲ್ ನಂ;ಕೆಎ 32-6447-49 ರ ಸವಾರನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಕ್ಕಳು ಹೋಗುತ್ತಿದ್ದ ಬೈಸಿಕಲ್ ಗೆ ಡಿಕ್ಕಿ ಪಡಿಸಿ ಫಿರ್ಯಾದಿ ಮಕ್ಕಳಿಗೆ ಗಾಯಗೊಳಿಸಿ ಮೋ/ಸೈಕಲ ಸಮೇತ ಹೊರಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ಕುಮಾರಿ ಇವಳು  ದಿನ ನಿತ್ಯ ಶಾಲೆಗೆ ಹೋಗುವ ವೇಳೆಯಲ್ಲಿ ತಾಜೋದ್ದಿನ್ ಈತನು ನನಗೆ ಚುಡಾಯಿಸುವದು ಮಾಡುತ್ತಿದ್ದನು ಆದರೂ ನಾನು ಮರ್ಯಾದಿಗೆ ಅಂಜಿ ಸುಮ್ಮನಿದ್ದೇನು. ಆದರು ಕೂಡಾ ಅವನು ಅದೇ ರೀತಿ ಚೂಡಾಯಿಸುವದು ಮಾಡುತ್ತಿರುವದನ್ನು ನಾನು ಮನೆಯಲ್ಲಿ ವಿಷಯ ತಿಳಿಸಿರುತ್ತೇನೆ. ದಿನಾಂಕ 10-1-15 ರಂದು ಸಾಯಂಕಾಲ 6-00 ಗಂಟೆಗೆ ಸುಮಾರಿಗೆ ನಾನು ಮನೆಯ ಪಕ್ಕದ ಹಿಂದೆ ಇರುವ ನಮ್ಮೂರ ಅಕ್ಬರಗೌಡ ಇವರ ಹತ್ತಿ ಹೊಲದ ಕಡೆಗೆ ಸಂಡಾಸಕ್ಕೆ ಹೋದಾಗ ಸ್ವಲ್ಪ ಸಮಯದ ನಂತರ ತಾಜೋದ್ದಿನ್ ಈತನು ನನ್ನಲ್ಲಿಗೆ ಬಂದು ನನಗೆ ನೆಲಕ್ಕೆ ಕಡೆವಿ ನನ್ನ ಚಡ್ಡಿ ಕಳೆದು ಬಾಯಿ ಒತ್ತಿ ಹಿಡಿದು ಜಬರದಸ್ತಿಯಿಂದ ಸಂಬೋಗ ಮಾಡಿದನು. ನಂತರ ಅವನು ನೀನು ಯಾರಿಗಾದರು ಹೇಳಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಭಯ ಹಾಕಿ ಅವನು ಅಲ್ಲಿಂದ ಓಡಿ ಹೋದನು. ಆಗ್ ನಾನು ಅಳುತ್ತಾ ಮನೆಗೆ ಬಂದು ನಮ್ಮ ತಂದೆ ತಾಯಿಯವರಿಗೆ ಸದರಿ ವಿಷಯ ತಿಳಿಸಿರುತ್ತೇನೆ. ಮನೆಯಲ್ಲಿ ನಮ್ಮ ತಂದೆ ತಾಯಿಯವರು ಮರ್ಯಾದಿಗೆ ಅಂಜಿ ಯಾರಿಗೂ ಈ ವಿಷಯ ತಿಳಿಸುವದು ಬ್ಯಾಡ ಅಂತಾ ನನಗೆ ಮರು ದಿವಸ ಕಲಬುರಗಿಯ ಖಾದರಿ ಚೌಕ ಹತ್ತಿರ ಜಿ. ಆರ್. ನಗರದಲ್ಲಿರುವ ನಮ್ಮ ಮಾವನ ಮನೆಯಲ್ಲಿ ಬಿಟ್ಟಿದ್ದು  ಇಂದು ದಿನಾಂಕ 21-01-15 ರಂದು ಮುಂಜಾನೆ 10 ಗಂಟೆ ಸುಮಾರಿಗೆ ನಾನು ಕಲಬುರಗಿಯ ನಮ್ಮ ಮಾವನ ಮನೆಯ ಮುಂದೆ ನಿಂತಿದ್ದ ವೇಳೆಗೆ ತಾಜೋದ್ದಿನ್ ಈತನು ಅಲ್ಲಿಗೆ ಬಂದು ನನಗೆ ನೀನು ಅಲ್ಲಿಂದ ಇಲ್ಲಿ ಬಂದಿದ್ದಿಯಾ ಅಂತಾ ನನಗೆ ಕೈ ಹಿಡಿದು ಬಲತ್ಕಾರ ಮಾಡುವ ಸುಲುವಾಗಿ ಎಳೆದುಕೊಂಡು ಹೋಗುತ್ತಿದ್ದಾಗ ನಾನು ಚೀರಾಡುವ ಶಬ್ದ ಕೇಳಿ ಜನರು ಬರುವದನ್ನು ನೋಡಿ ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಸಾಯಂಕಾಲ 4 ಗಂಟೆ ಸುಮಾರಿಗೆ ಪುನಃ ಅವನು ಅಲ್ಲಿಯೇ ತಿರುಗಾಡುತ್ತಿರುವದನ್ನು ನೋಡಿ ನಾನು ನಮ್ಮ ಮಾವನಾದ ಸರದಾರ್ ಪಟೇಲ, ಬಾಬಾ ಪಟೇಲ ಇವರಿಗೆ ಹೇಳಿದೆನು. ಅವರು ಅವನಿಗೆ ಹಿಡಿದುಕೊಂಡಾಗ ನೆರೆದ ಜನರು ಅವನಿಗೆ ಹೊಡೆ ಬಡಿ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಯಲ್ಲಪ್ಪ ತಂದೆ  ಮಲ್ಲಿಕಾರ್ಜುನ ಹೊನ್ನಳ್ಳಿ  ಸಾ : ಅಂಬಿಗರ ಚೌಡಯ್ಯ ನಗರ ಶರಣ ಸಿರಸಗಿ ಮಡ್ಡಿ  ರವರು ದಿನಾಂಕ 04-12-2014 ರಂದು ಶಾಲಾ  ಹುಡುಗರಿಗೆ ಶಾಲೆ ಬಿಡಲು ಆಟೋ ತೆಗೆದುಕೊಂಡು ಹೋಗಿದ್ದು ಸಾಯಂಕಾಲ 4-30 ಗಂಟೆಗೆ ನಮ್ಮ ಅತ್ತಿಗೆ ಮಾಲಾಶ್ರೀ ಇವರು ಪೋನ ಮಾಡಿ ತಿಳಿಸಿದ್ದೇನೆಂದರೆ ನನ್ನ ಹೆಂಡತಿಯಾದ ಶಾಂತಾ ಬಾಯಿ @ ರೇಣುಕಾ ಇವಳು ಮಧ್ಯಾಹ್ನ 3 ಗಂಟೆಗೆ ಸಂಡಾಸಕ್ಕೆ ಹೋಗುತ್ತೇನೆ ಅಂತಾ ತಂಬಿಗೆ ತೆಗೆದುಕೊಂಡು ಹೋದವಳು ವಾಪಾಸ್ಸ ಬಂದಿರುವುದಿಲ್ಲಾ ಅಂದಿನಿಂದ ಇಲ್ಲಿಯವರೆಗು ಹುಡುಕಾಡಿದರು ಪತ್ತೆಯಾಗಿರುವುದಿಲ್ಲಾ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.