POLICE BHAVAN KALABURAGI

POLICE BHAVAN KALABURAGI

26 August 2020

KALABURAGI DISTRICT REPORTED CRIMES

 ರಸ್ತೆ ಅಪಘಾತ:-

ವಾಡಿ ಪೊಲೀಸ ಠಾಣೆ 

               ದಿನಾಂಕಃ 25/08/2020 ರಂದು ಫಿರ್ಯಾದಿ ಶ್ರೀದತ್ತು ತಂದೆ ಮಾರುತಿ ನಾಯಿಕೋಡಿ ಸಾಃ ಕರುಣೇಶ್ವರ ನಗರ ಕಲಬುರಗಿ ರವರು ನೀಡಿದ  ದೂರು ಅರ್ಜಿ ಸಾರಂಶವೇನೆಂದರೆ, ದಿನಾಂಕಃ 25/08/2020 ರಂದು ರಾತ್ರಿ 00.15 ಎ.ಎಮ್.ಕ್ಕೆ ನಮ್ಮ ಟ್ಯಾಂಕರ ನಂ ಕೆಎ-30/9954 ನೇದ್ದರ ಚಾಲಕ ಅಣ್ಣಪ್ಪ ಇತನು ಟ್ಯಾಂಕರದಲ್ಲಿದ್ದ ಪೆಟ್ರೋಲನ್ನು ರಾಯಚೂರ ಶಕ್ತಿ ನಗರದಲ್ಲಿ ಖಾಲಿ ಮಾಡಿ ಮರಳಿ ಎನ್.ಹೆಚ್.-150 ಮುಖಾಂತರ ಕಲಬುರಗಿಗೆ ಬರುವಾಗ ಲಾಡ್ಲಾಪೂರ ದಾಟಿ ಹಲಕಟ್ಟಾ ಇನ್ನು ಒಂದು ಕಿಮಿ ಇರುವಾಗ ಚಾಲಕನು ಒಮ್ಮಲೆ ಬ್ರೇಕ ಹಾಕಿದ್ದರಿಂದ ಟ್ಯಾಂಕರ ಕಂಟ್ರೋಲ ಆಗದೆ ರಸ್ತೆ ಎಡಬದಿಗೆ ಪಲ್ಟಿಆಗಿದ್ದರಿಂದ  ಈ ಅಪಘಾತದಲ್ಲಿ ಚಾಲಕ ಅಣ್ಣಪ್ಪನಿಗೆ  ತಲೆಗೆ ರಕ್ತಗಾಯ ವಾಗಿದ್ದು , ಮೈಕೈಗೆ  ತರಚಿದ ರಕ್ತಗಾಯವಾಗಿದ್ದು ಮತ್ತು ಮೈಗೆ ಮತ್ತು ಕಾಲುಗಳಿಗೆ  ಒಳಪೆಟ್ಟಗಿರುತ್ತದೆ. ಕಾರಣ ನಮ್ಮ ಟ್ಯಾಂಕರ ನಂ ಕೆಎ-30/9954 ನೇದ್ದರ  ಚಾಲಕ ಅಣ್ಣಪ್ಪ ಇತನು ಟ್ಯಾಂಕರನ್ನು  ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ಒಮ್ಮೆಲೆ  ಬ್ರೇಕ ಹಾಕಿದ್ದರಿಂದ ಟ್ಯಾಂಕರ ರಸ್ತೆ ಎಡಬದಿಗೆ ಪಲ್ಟಿಮಾಡಿದ್ದು ಈತನ ಮೇಲೆ  ಕಾನೂನು ಕ್ರಮ  ಕೈಕೊಳ್ಳಬೇಕು ಅಂತಾ ಇರುವ ದೂರು ಅರ್ಜಿಯ ಸಾರಂಶದ ಮೇಲಿಂದ ವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 

 ಎ.ಟಿ.ಎಂ ಕಳ್ಳತನಕ್ಕೆ ಪ್ರಯತ್ನ :-

ಶಹಾಬಾದ ನಗರ ಪೊಲೀಸ ಠಾಣೆ 

           ದಿನಾಂಕ: 25/08/2020 ರಂದು ಪಿರ್ಯಾದಿ ಶ್ರೀ ಸಂತೋಷ ತಂದೆ ಶರಣಪ್ಪ ಜವಳಿ ಸಾ: ದೇವಿ ನಗರ ಆಳಂದ ರೋಡ ಕಲಬುರಗಿ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಗಣಕಿಕೃತ ಮಾಡಿಸಿದ ಪಿರ್ಯಾದಿ ಅರ್ಜಿ ಹಾಜರ ಪಡಿಸಿದ ಸಾರಂಶವೆನೆಂದರೆ ದಿನಾಂಕ: 25/08/2020 ರಂದು 10-00 ಗಂಟೆಗೆ ನಮ್ಮ ಎಸ್ ಬಿ ಬ್ಯಾಂಕಿನ ಟಿ ಎಮ್ ಗಳಿಗೆ ಕ್ಯಾಶ ಲೋಡ ಮಾಡುವ ಶ್ರೀ ವಿಕ್ರಮ ಸಿ ಅರ್ ರವರು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ತಾನು ಶಹಾಬಾದ ಪಟ್ಟಣದ ಭಾರತ ಚೌಕದಲ್ಲಿರುವ ಎಸ್ ಬಿ ಬ್ಯಾಂಕಿನ ಟಿ ಎಮ್ ಮಶೀನಗೆ ಹಣ ಲೋಡ ಮಾಡಲು ಬಂದಿದ್ದು ಸದರಿ ಮಶೀನ ಯಾರೋ ಜಖಂಗೊಳಿಸಿದ್ದಾರೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಕಿರಣಸಿಂಗ ಠಾಕೂರ ಚಾನಲ್ ಕಾರ್ಯನಿರ್ವಾಹಕರು, ಮತ್ತು ಮಲ್ಲಣ್ಣ ತಂದೆ ಹಣಮಂತರಾಯ ತಳವಾರ ಎಸ್.ಬಿಐ ಬ್ಯಾಂಕ ಶಹಾಬಾದನ ಪಿಯೋನ ರವರು ಕೂಡಿಕೊಂಡು ಭಾರತಚೌಕ ಶಹಾಬಾದ ಎಸ್ ಬಿ ಬ್ಯಾಂಕಿನ ಎಟಿಎಮ್ ಮಶೀನ ಬಂದು ಪರಿಶೀಲಿಸಿ ನೋಡಲಾಗಿ ಮಶೀನಿನ ಡಿಸಪ್ಲೇ ಓಡಿದಿದ್ದು , ಮತ್ತು ಹೂಡ್ಡ ಡೋರ ಲಾಕ ಮುರಿದಿದ್ದು  ಹಾಗೂ ಎಸ್ ಎನ್ ಜಿ ಲಾಕರ ಮುರಿದಿದ್ದು ಮತ್ತು ಡಿಸಪ್ಲೇ ಹಿಂದುಗಡೆ ಕೂಡ ಓಡಿದಿದ್ದು ಯಾರೋ ಕಳ್ಳರು ಟಿ ಎಮ್ ಮಸೀನಿನಲ್ಲಿ ಇರುವ ಹಣ ಕಳವು ಮಾಡುವ ಉದ್ದೇಶದಿಂದ ಮಶೀನ ಮುರಿದು  ಕಳವು ಮಾಡಲು  ಪ್ರಯತ್ನಿಸಿದ್ದು ಇರುತ್ತದೆ.  ನಿನ್ನೆ ದಿನಾಂಕ: 24/08/2020 ರಂದು ರಾತ್ರಿ 11-30 ಪಿ ಎಮ್ ದಿಂದ ದಿನಾಂಕ: 25/08/2020 ರಂದು 6-00 ಎ ಎಮ್  ಅವದಿಯಲ್ಲಿ ಯಾರೋ ಕಳ್ಳರು ಶಹಾಬಾದ ಪಟ್ಟಣದ ಭಾರತ ಚೌಕದಲ್ಲಿರುವ ಎಸ್ ಬಿ ಐ ಬ್ಯಾಂಕಿನ ಎ ಟಿ ಎಮ್ ಮಸೀನ ರೂಮಿನ ಒಳಗಡೆ ಹೋಗಿ ಮಶೀನ ಮುರಿದು ಹಣ ಕಳವು ಮಾಡಲು ಪ್ರಯತ್ನಿಸಿದ್ದು ಕಾರಣ ಸೂಕ್ತ ಕ್ರಮ ಜರುಗಿಸಿ ಪತ್ತೆ ಮಾಡಬೇಕು  ನೀಡಿದ ಅರ್ಜಿ ಸಾರಾಂಶದ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.