POLICE BHAVAN KALABURAGI

POLICE BHAVAN KALABURAGI

31 May 2015

Kalaburagi District Reported Crimes

ಅತ್ಯಾಚಾರ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಶಮಶೋದ್ದೀನ್ ತಂದೆ ಮೌಲಾನಸಾಬ ಸುಲ್ತಾನ ಸಾ: ದಂಡೋತಿ ರವರ ಮನೆಗೆ ಹೊಂದಿಕೊಂಡು ಸುನ್ನಿ ಮಜ್ಜಿದ ಇದ್ದು ಸುಮಾರು 8 ತಿಂಗಳಿಂದ ನಿಸಾರ ತಂದೆ ಮಹ್ಮದ ಅಬ್ಬಾಸ್ ವ: 22 ಸಾ: ಕೆ1-18/458 ಸಂಗಮ ವಿಹಾರ ಕಾಲಖಾಜಿ ದಕ್ಷಿಣ ದಿಲ್ಲಿ 110019 ಈತನು ನಮ್ಮ ಮುಸ್ಲಿಂ ಜನಾಂಗದ ಸಣ್ಣ ಮಕ್ಕಳಿಗೆ ಉದರ ಹಾಗೂ ಅರಬ್ಬಿಯ ಭಾಷಯಲ್ಲಿ ಕುರಾನ್ ಪಾಠ ಮಾಡುವುದು ಮತ್ತು ನಮಾಜ ಮಾಡಿಸುವುದು ಕೆಲಸ ಮಾಡುತ್ತಿದ್ದನು.  ಸದರಿ ನಿಸಾರ ಈತನು ಕೆಲವು ದಿವಸಗಳಿಂದ ನನ್ನ ಎರಡನೇ ಮಗಳಾದ ಜಬೀನ ಬೇಗಂ ಇವಳ ಸಂಗಡ ಮಾತನಾಡುವುದು ನೀರು ತರಿಸಿಕೊಂಡು ಕುಡಿಯುವುದು ಮಾಡುತ್ತಾ ಬಂದಿದ್ದು ನಾನು ಸದರಿ ನೀಸಾರ ಒಬ್ಬ ಧಾರ್ಮಿಕ ಶಿಕ್ಷಕನಿದ್ದು   ಒಳ್ಳೆಯ ವ್ಯಕ್ತಿ ಇರುತ್ತಾನೆ ಅಂತಾ ನಂಬಿ ನಾನು ಮತ್ತು ನನ್ನ ಹೆಂಡತ್ತಿ ಅವನಿಗೆ ಏನೋ ಅನ್ನದೆ ಸುಮ್ಮನೆ ಇರುತ್ತಿದ್ದೇವು. ದಿನಾಂಕ-30/05/2015 ರಂದು 10 ಎ.ಎಮ್ ಸುಮಾರಿಗೆ ನಾನು ನನ್ನ ದಿನನಿತ್ಯದ  ಕೆಲಸ ಕುರಿತು ಟಂ ಟಂ ತೆಗೆದುಕೊಂಡು ವಚ್ಚಾ, ಕಲಗುರತಿ ಗ್ರಾಮಗಳ ಹದ್ದಿಯಲ್ಲಿ ನಡೆದಿರುವ ಚಕ್ಕ ಡ್ಯಾಮ ಕಟ್ಟಡಗಳಿಗೆ ಸಾಮಾನುಗಳು ಒಯ್ದು ಇಳಿಸಿ ಮರಳಿ ರಾತ್ರಿ 1 ಎ.ಎಮ್ ಸುಮಾರಿಗೆ ಮನೆಗೆ ಬಂದು ಟಂ ಟಂ ನಿಲ್ಲಿಸಿ ಮನೆಯಲ್ಲಿ ಹೋಗಿ ನೋಡಲಾಗಿ ನನ್ನ 2 ನೇ ಮಗಳಾದ ಕುಮಾರಿ ಇವಳು ಹಾಸಿಗೆಯಲ್ಲಿ ಕಾಣಲ್ಲಿಲ ನಂತರ ನಾನು ನನ್ನ ಹೆಂಡತ್ತಿಗೆ ಎಬ್ಬಿಸಿ ಕೇಳಲಾಗಿ ರಾತ್ರಿ 8 ಗಂಟೆ ಸುಮಾರಿಗೆ ಎಲ್ಲರೂ ಊಟ ಮಾಡಿ ಇಲ್ಲೆ ಮಲಗಿದೇವು. ಎಲ್ಲಾದರೂ ಸಂಡಾಸಕ್ಕೆ ಅಥವಾ ಏಕಿಗೆ ಹೋಗಿರಬಹುದು ಅಂತಾ ತಿಳಿಸಿದಳು. ಆಗ ನಾನು ಮತ್ತು ನನ್ನ ಹೆಂಡತ್ತಿ ಸ್ವಲ್ಪ ಹೊತ್ತು ಕಾಯುತ್ತಾ ಇದ್ದಾಗ ನಮ್ಮ ಮನೆಯ ಬಾಜು ಇರುವ ಮಜೀದದಲ್ಲಿ ಗುಸು ಗುಸು ಮಾತನಾಡುವ ಸಪ್ಪಳ ಕೇಳಿ ಬಂದಿತ್ತು. ಆಗ ನಾವಿಬ್ಬರೂ ಮಜೀದದಲ್ಲಿ ಹೋಗಿ ನೀಸಾರ ವಾಸಮಾಡುವ ಕೋಣೆ ಹತ್ತಿರ ನಿಂತ್ತಾಗ ಒಳಗಿನಿಂದ ಮಾತನಾಡುವ ಸಪ್ಪಳ ಕೇಳಿ ಬಂದಿತ್ತು. ನಾವಿಬ್ಬರೂ ನಿಸಾರ ಈತನಿಗೆ ಬಾಗಿಲು ತೇರೆ ಅಂತಾ ಬಾಗಿಲು ಬಾರಿಸಿದರು ನಿಸಾರ ಈತನು ಬಾಗಿಲು ತೆರೆಯಲ್ಲಿಲ್ಲಾ ನಂತರ ನಾನು ನನ್ನ ಹೆಂಡತ್ತಿಗೆ ಅಲ್ಲೆ ಬಿಟ್ಟು ನಮ್ಮ ಮಜೀದ ಖಜಾಂಚಿ ಆದ ದಾದಾಮಿಯ್ಯಾ ಡೂಂಗಾ ಇವರ ಮನೆಗೆ ಹೋಗಿ ಅವರಿಗೆ ಎಬ್ಬಿಸಿ ಕರೆದುಕೊಂಡು ಬರವಷ್ಟರಲ್ಲಿ ಸದರಿ ನಿಸಾರ ಈತನು ಕೋಣೆಯ ಬಾಗಿಲು ತೆರೆದು ನನ್ನ ಮಗಳಿಗೆ ಹೊರಗೆ ಹೋಗು ಅಂತಾ ನೋಕಿಸಿ ಕೂಟ್ಟಿದನು. ಅಷ್ಟರಲ್ಲಿ ನಾವು ಬಂದು ಎಲ್ಲರೂ ಕೂಡಿ ನನ್ನ ಮಗಳಿಗೆ ಇಷ್ಟು ರಾತ್ರಿ ನಿಸಾರನ ಕೋಣೆಯಲ್ಲಿ ಏಕೆ ಹೋಗಿರಿವಿ ? ಅಂತಾ ವಿಚಾರಿಸಿದಾಗ ನನ್ನ ಮಗಳು ತಿಳಿಸಿದೇನೆಂದರೆ. ನಿಸಾರ ಈತನು ರಾತ್ರಿ 12-30 ಎ.ಎಮ್ ಸುಮಾರಿಗೆ ನಿನ್ನ ಸಂಗಡ ಸ್ವಲ್ಪ ಮಾತನಾಡುವುದು ಇದೆ ನನ್ನ ಕೋಣೆಗೆ ಬಾ ಅಂತಾ ಕರೆದನು. ಅದರಂತೆ ನಾನು ಆತನ ಕೋಣೆಗೆ ಹೋದಾಗ ನಿಸಾರ ಈತನು ನಾನು ನಿನಗೆ ಬಹಳ ಪ್ರೀತಿ ಮಾಡುತ್ತಿದ್ದೇನೆ ಹಾಗೂ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿ ಕೋಣೆಯ ಬಾಗಿಲ ಚಿಲಕ ಹಾಕಿ ನನಗೆ ವತ್ತಿ ಹಿಡಿದು ನನ್ನ ಅಂಗಾಂಗಗಳನ್ನು ಒತ್ತಿ ಹಿಡಿದು ಈಗ ಸದ್ಯ ಬೇಡ ಮದುವೆ ಆದ ನಂತರ ಮಾಡೋಣ ಅಂತಾ ತಿಳಿಸಿದರು ಕೂಡ  ನನ್ನ ಮಾತಿಗೆ ಬೆಲೆ  ಕೊಡದೆ  ಜಬ್ಬರದಸ್ತಿಯಿಂದ ನನ್ನ ಮೈಮೇಲಿನ ಚೋಡಿದಾರ ಪೈಜಾಮ ನಾಡಿ ಬಿಚ್ಚಿ ಕಳೆದು ಕೆಳಗೆ ಮಲಗಿಸಿ ಜಬರಿ ಸಂಭೋಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ 31-05-2015 ರಂದು ರಾತ್ರಿ 10 ಗಂಟೆ ಸುಮಾರಿಗೆ ಕಲ್ಲೂರ (ಕೆ) ಗ್ರಾಮದಲ್ಲಿ ಗ್ರಾಮ ಪಂಚಾಯತ ಚುನಾವಣೆ ಪ್ರಚರ ಸಂಬಂಧ ಎರಡು ಗುಂಪುಗಳ ಮಧ್ಯ ಗಲಾಟೆ ನಡೆಯುತ್ತಿದೆ ಅಂತಾ ತಿಳಿದು ಬಂದ ಮೇರೆಗೆ ಪಿ.ಎಸ್.ಐ. ಕಪೀಲ ದೇವ ಹಾಗು ಸಿಬ್ಬಂದಿಯವರಾದ ಚಂದ್ರಕಾಂತ ಹೆಚ್.ಸಿ. ಮಲ್ಲಣ್ಣ ಪಿ.ಸಿ. ಹಾಗು ಡಿ.ಎ.ಆರ. ಪ್ಹಾರ ಬಲವನ್ನು ತೆಗೆದುಕೊಂಡು ಸದರ ಗ್ರಾಮಕ್ಕೆ ಹೋದಾಗ ಕಲ್ಲೂರ (ಕೆ) ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಹರಿಜನ ಸಮಾಜದವರಿಗೂ ಮತ್ತು ಗ್ರಾಮಸ್ಥರ ಮಧ್ಯ ಬಾಯಿ ಮಾತಿನ ತಕರಾರು ನಡೆಯುತ್ತಿದ್ದುದನ್ನು ಗಮನಿಸಿ ಎರಡು ಗುಂಪಿನ ಜನರಿಗೆ ತಿಳಿಹೇಳಿದರು ಕೇಳದೆ ಗಲಾಟೆ ಮಾಡುತ್ತಿರುವಾಗ ನಾವು ಜನರಿಗೆ ಚದುರಿಸಲು ಮುಂದೆ ಹೋದಾಗ ಅವರಲ್ಲಿ ಭೂತಾಳಿ ತಂದೆ ಓಗಪ್ಪಾದಾವಜಿ, ರಮೇಶ ತಂದೆ ಓಗಪ್ಪಾ ದಾವಜಿ, ಶ್ರೀಶೈಲ ತಂದೆ ಮಲ್ಲೇಶಿ, ಶ್ರೀಕಾಂತ ತಂದೆ ಮಲ್ಕಣ್ಣ,ಬಾಬು ತಂದೆ ಸಿದ್ದಪ್ಪ, ಶಿವಕುಮಾರ ತಂದೆ ಓಗಪ್ಪಾ ದಾವಜಿ, ಸೋಮರಾಯ ದಾವಜಿ, ಬಾಪು ಎಲಗೋಡ, ರಮೇಶ ಕಲಶೆಟ್ಟಿ, ಹಾಗು ಇನ್ನು 15-20 ಜನರು ಕೈಯಲ್ಲಿ ಬಡಿಗಡ ,ಕಲ್ಲು, ರಾಡಗಳನ್ನು ಹಿಡಿದುಕೊಂಡು ಆಕ್ರಮ ಕೂಟ ರಚಿಸಿಕೊಂಡು ಬಂದು ನಮಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹೊಡೆ ಬಡೆ ಮಾಡಿ ಗಾಯಗೊಳಿಸಿ ಸರಕಾರಿ ವಾಹನಗಳನ್ನು ಜಕಂಗೊಳಿಸಿರುತ್ತಾರೆ ಅಂತಾ  ಶ್ರೀ ಕಪೀಲದೇವ ಪಿ.ಎಸ್.ಐ. ನೆಲೋಗಿ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.