POLICE BHAVAN KALABURAGI

POLICE BHAVAN KALABURAGI

14 August 2017

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ಸುಭಾನ ಕಂದಾಯ ನಿರೀಕ್ಷಕರು ಶಹಾಬಾದ ರವರು ದಿನಾಂಕ: 13/08/2017 ರಂದು ಮರತೂರ ಗ್ರಾಮಕ್ಕೆ ಕೆಲಸದ ನಿಮಿತ್ಯ ನಾನು ಮತ್ತು ಸಂಗಡ ಗೊಳಾ ಗ್ರಾಮ ಸಹಾಯಕ ಮರಲಿಂಗ ರವರನ್ನು ಕರೆದುಕೊಂಡು ಹೋದಾಗ ಮದ್ಯಾಹ್ನ 3-00 ಗಂಟೆಗೆ ಭಂಕೂರ ಸೀಮಾಂತರದ ಕಾಗಿಣಾ ನದಿಯಿಂದ ಟ್ರಾಕ್ಟರನಲ್ಲಿ ಮರಳು ತುಂಬಿಕೊಂಡು ಮರತೂರ ಕಡೆಗೆ ಸಾಗಣೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಗ್ರಾಮ ಸಹಾಯಕ ಕೂಡಿ ಮರತೂರ ಗ್ರಾಮದ ನಬಿ ಹೊಟೇಲ ಹತ್ತಿರ ಹೋದಾಗ ಶಹಾಬಾದ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ ಬರುತ್ತಿದ್ದು ಟ್ರಾಕ್ಟರ ಚಾಲಕನು ನಮಗೆ ನೋಡಿ ಟ್ರಾಕ್ಟರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು  ಸದರಿ ಮರಳು ತುಂಬಿದ ಟ್ರಾಕ್ಟರ ಪರಿಶೀಲಿಸಿ ನೋಡಲು ಅದರ  ನಂಬರ ಕೆ.ಎ 32 ಟಿ.ಬಿ 1986 ಮಶಿ ಫರಗೂಷನ ಕಂಪನಿಯದ್ದು ಇರುತ್ತದೆ  ಅದರ ಅ.ಕಿ 100000-00 ರೂ ಅದರಲ್ಲಿಯ ಮರಳು ಅ.ಕಿ 1000-00 ರೂ ಸದರಿ ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ  ನಾನು ಬೇರೆಯವರ ಸಹಾಯದಿಂದ ಸದರಿ ಮರಳು ತುಂಬಿದ ಟ್ರಾಕ್ಟರ ಪೊಲೀಸ ಠಾಣೆಗೆ ಟ್ರಾಕ್ಟರ ಚಾಲಕ ಮತ್ತು ಮಾಲಿಕ ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟ್ರಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ಕುಪೇಂದ್ರ ಚವ್ಹಾಣ ಸಾ: ನಂದಿಕೂರ ತಾಂಡಾ  ತಾ: ಜಿ: ಕಲಬುರಗಿ  ರವರಿಗೆ 1) ಜಯಶ್ರೀ 2) ರಾಜಶ್ರೀ 3) ಪೂಜಾ 4) ಪೂನಂ 5) ಸುಸಮಿತಾ 6) ಪ್ರಿಯಂಕಾ  7) ರೇಣುಕಾ ಅಂತಾ 7 ಜನ ಹೆಣ್ಣು ಮಕ್ಕಳಿದ್ದು ಗಂಡು ಮಕ್ಕಳು ಇರುವುದಿಲ್ಲಾ  ಇದರಲ್ಲಿ ಜಯಶ್ರೀ  ಈಕೆಗೆ ಮದುವೆ  ಮಾಡಿಕೊಟ್ಟಿದ್ದು  ಉಳಿದ ಮಕ್ಕಳೊಡನೆ  ನಾವೆಲ್ಲರೂ  ಇರುತ್ತೇವೆ  ನನ್ನ ಗಂಡ ಈಗ ಸುಮಾರು ವರ್ಷಗಳಿಂದ ನಮಗೆ ಗಂಡು ಮಕ್ಕಳು ಇರುವು ದಿಲ್ಲಾ ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಲು ಸರಾಯಿ ಕುಡಿಯುವ ಚಟಕ್ಕೆ ಬಿದ್ದು ದಿನಾಲು ಮನೆಗೆ ಸರಾಯಿ ಕುಡಿದು ಬರುತಿದ್ದು ನಾನು ಗಂಡನಿಗೆ ಸಮಾದಾನ ಹೇಳಿದರು ಸಹ ಹಾಗೇ ಸರಾಯಿ ಕುಡಿಯುತ್ತಾ ಬಂದಿರುತ್ತಾನೆ.  ಹೀಗಿದ್ದು ದಿನಾಂಕ 11/08/2017 ರಂದು ರಾತ್ರಿ 10:30 ಗಂಟೆ ಸುಮಾರಿಗೆ ನಾನು ಮಕ್ಕಳೋಡನೆ  ಮನೆಯಲ್ಲಿದ್ದಾಗ  ಅದೇ ಸಮಯಕ್ಕೆ ನನ್ನ ಗಂಡ ವಿಪರೀತ ಸರಾಯಿ ಕುಡಿದು ಮನೆಗೆ ಬಂದು ಮನೆ ಯಲ್ಲಿ ಒಂದು ರೂಮಿನಲ್ಲಿ ಹೋಗಿ ಬಾಗಿಲು ಮುಚ್ಚಿದನು ಆಗ ನಾನು ಬಾಗಿಲು ತೆಗೆಯಲು ಹೇಳಿದಾಗ  ಗಂಡ ಚೀರಾಡುತ್ತಾ ಬಾಗಿಲು  ತೆಗೆದನು ಆತನ ಪೂರ್ತಿ ಮೈಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ನಾನು ಹಾಗೂ ಮಕ್ಕಳು ಕೂಡಿ  ಬೆಂಕಿ ಆರಿಸಿರು ತ್ತೇವೆ ಇದರಿಂದ ನನ್ನ ಗಂಡನ ಮೈ ಪೂರ್ತಿ ಸುಟ್ಟು ಕಪ್ಪಾಗಿ  ಅಲ್ಲಲ್ಲಿ  ಚರ್ಮ ಸುಲಿದು ಬೆಳ್ಳಗಾಗಿದ್ದರಿಂದ ಗಂಡನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಗಂಡ ಉಪ ಚಾರದಲ್ಲಿ ಗುಣ ಮುಖವಾಗದೇ ನಿನ್ನೆ ದಿನಾಂಕ 12/08/2017 ರಂದು ರಾತ್ರಿ 11:30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿ ಅತ್ಮಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ತಹಶೀನ ಗಂಡ ಗೌಸಪಟೇಲ ಮಾಲಿಪಟೇಲ್ ಸಾ : ಹಡಗಿಲ್ ಹಾರುತಿ ಹಾ.ವ. ರಾಜ ಫಂಕ್ಷನ ಹಾಲ ಹಿಂದುಗಡೆ ಡಬರಾಬಾದ ರೋಡ ಕಲಬುರಗಿ ರವರನ್ನು ಕಳೆದ 4 ವರ್ಷಗಳ ಹಿಂದೆ ನನ್ನಮದುವೆಯು ಹಡಗಿಲ ಹಾರುತಿಯ  ಉಸ್ಮಾನ ಪಟೇಲ್ ಇವರ ಮಗ ಗೌಸಪಟೇಲ್ ಇವರೊಂದಗಿ ಆಗಿರುತ್ತದೆ. ನನ್ನ ತವರು ಮನೆ ಜೇವರ್ಗಿ ತಾಲೂಕಿನ ಯಳವಾರ ಗ್ರಾಮ ಇರುತ್ತದೆ. ನನಗೆ ಈಗ  ಒಂದು ಹೆಣ್ಣು ಮಗಳು ಶೀಫಾ 2 ½ ವರ್ಷ , ಒಂದು ಗಂಡು ಮಗು ಅರಮಾನ ವಯ; 1 ವರ್ಷ ದವನಿರುತ್ತಾನೆ.ನನ್ನ ಮದುವೆಯಾದಾಗಿನಿಂದ ನನ್ನ ಗಂಡ ಗೌಸ ಪಟೇಲ್ ಮತ್ತು ನನ್ನ ಅತ್ತೆ ಉಮೇರಾಬೇಗಂ  ಇವರು ಮತ್ತು ನಾದನಿಯವರಾದ ಹೀನಾ , ನಲೂ @ ನಿಲೋಫರ ಹಾಗೂ ಶಮಾ ಇವರೆಲ್ಲರೂ ನನಗೆ ತುಮ ಅಚ್ಚಿ ನಹಿ ಹೈ , ಹಮಾರಿ ಘರಕೂ ಲಾಯಕ್ ನಹಿ ಹೈ , ಕಾಮ ದಂದಾ ಕರನೇ ನಹಿ ಆತಾ ಅಂತಾ ವಿನಾಕಾರಣ  ನನಗೆ ಅವಾಚ್ಯ ಶಬ್ದಗಳಿಂದ ಬೈಯುವದು ಹೊಡೆಬಡಿ ಮಾಡುತಾ ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ಕೊಟ್ಟಿರುವಾಗ 2 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರಿಗೆ ಹೇಳಿದಾಗ ಅವರು ಕಲಬುರಗಿಗೆ ಬಂದು ನನ್ನ ಗಂಡ ಅತ್ತೆಯವರಿಗೆ ತಿಳಿ ಹೇಳಿ ನನಗೆ ಸಮಜಾಯಿಸಿ ಹೋಗಿದ್ದು ಇರುತ್ತದೆ.  ಆದಾಗ್ಯೂ ಕೂಡಾ ನನಗೆ ಒಂದಿಲ್ಲಾ ಒಂದು ಕಾರಣದಿಂದ ನನಗೆ ಹಿಂಸೆ ಕೋಡುತ್ತಾ ಬಂದಿರುತ್ತಾರೆ.  ನನ್ನ ನಾದನಿ  ಹೀನಾ ಇವಳ ಗಂಡ ತೀರಿಕೊಂಡಿದ್ದು  ಅವಳು ನಮ್ಮ ಮನೆಯಲ್ಲಿರುತ್ತಾಳೆ ,  ಮತ್ತು ನಿಲಾ@ ನಿಲೋಫರ  ಗಂಡ ಸಿರಾಜ ಪಟೇಲ್ ಹಾಗು ಶಮಾ ಗಂಡ ಸೈಯದ ಪಟೇಲ್ ಇವರು  1 ½ ತಿಂಗಳಿಂದ ನಮ್ಮಲ್ಲಿಯೇ ಇರುತ್ತಾರೆ. ದಿನಾಂಕ. 12-8-2017 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ನನ್ನ ಗಂಡ ಕೆಲಸಕ್ಕೆ ಹೋಗಿದ್ದು  ಮನೆಯಲ್ಲಿ ನನ್ನ ಅತ್ತೆ ಉಮೇಗಾ ಬೇಗಂ. ನಾದನಿಯರಾದ ಹೀನಾ , ನೀಲೋಫರ , ಹಾಗೂ ಶಮಾ ಇವರು ನಾಲ್ಕು ಜನರಿದ್ದು  ಇವರೆಲ್ಲರು ನನಗೆ ರಾಂಡ ಕಾಮ ಜಲ್ದಿ ಜಲ್ದಿ ಕರನೇ ನಹಿ ಆತಾ,  ಅಂತಾ ಅವಾಚ್ಯ ಶಬ್ದಗಳಿ ಬೈಯ್ದು ನನ್ನ ಅತ್ತೆ ಯು  ರಂಡಿ ನಮ್ಮ ಮನಗೆ ನೀನು ಲಾಯಕ್ ಇಲ್ಲಾ  ನಿನಗೆ ಏನು ತಿಳಿಯುವದಿಲ್ಲಾ ಹುಚ್ಚರಿಂಡಿ ಮನೆ ಬಿಟ್ಟು ಎಲ್ಲಿಯಾದರೂ ಹೋಗು  ಇಲ್ಲದಿದ್ದರೆ ನಿನಗೆ ಮನಯಲ್ಲಿ ಇಟ್ಟುಕೊಳ್ಳುವದಿಲ್ಲಾ ಎಂದು ಬೆದರಿಕೆ ಹಾಕಿದರು ಇದರಿಂದ ನಾನು  ಹೆದರಿ ಜೀವನದಲ್ಲಿ ನೊಂದು  ಮದ್ಯಾನ 3-00 ಗಂಟೆಯ ಸುಮಾರಿಗೆ ನಾನು  ನಮ್ಮ ಬೆಡರೂಮಿನಲ್ಲಿ  ಸೀಮೆ ಎಣ್ಣಿ ನನ್ನ ಮೈ ಮೇಲೆ ಹಾಕಿಕೊಂಡು ಬೆಂಕಿಕಡ್ಡಿಯನ್ನು ಕೊರೆದು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ನನ್ನ ಮೈಗೆ ಹತ್ತಿ ಉರಿಯುತಿದ್ದಾಗ ನಾನು ಚೀರಾಡುವಾಗ ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ ನಿಲೋಫರ ಹಾಗೂ  ನಾದನಿಯ ಮಗ  ಜಾವೇದ  ಇವರು ಬಂದು ನನಗೆ ಹತ್ತಿರುವ ಬೆಂಕಿ ಆರಿಸಿ ನಂತರ 108 ಅಂಬುಲೆನ್ಸನ್ನು ಕರೆಯಿಸಿ ನನಗೆ ಉಪಚಾರ ಕುರಿತು ಕಲಬುರಗಿಯ ಜಿಲ್ಲಾ ಸರಕಾರಿ  ಆಸ್ಪತ್ರೆಯಲ್ಲಿ ಸೇರಿಕೆಮಾಡಿರುತ್ತಾರೆ. ಆದುದರಿಂದ ನನ್ನ ಗಂಡ ಮಹಮ್ಮದ ಗೌಶ , ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ ನಿಲಾ @ ನಿಲೋಫರರ,  ಶಮಾ ಗಂಡ ಸೈಯ್ಯದ್ ಇವರೆಲ್ಲರೂ ನನಗೆ ಅಡುಗೆ ಸರಿಯಾಗಿ ಮಾಡುವದಿಲ್ಲಾ , ವಿಳಂಬ ಮಾಡುತ್ತಿ , ನಮ್ಮ ಮನೆಗೆ ಲಾಯಕಿಲ್ಲಾ , ಮನೆಬಿಟ್ಟು ಹೋಗು ರಂಡಿ ಬೋಸಡಿ ಅಂತಾ ಬೈಯುವದು , ಹೊಡೆಬಡಿ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕೊಟ್ಟ ಕಿರಕುಳ ತಾಳಲಾರದೆ  ಮನಸಿನ ಮೇಲೆ ಪರೀಣಾಮ ಮಾಡಿಕೊಂಡು   ದಿನಾಂಕ. 12-8-2017 ರಂದು ಮದ್ಯಾನ 3-00 ಗಂಟೆಯಸುಮಾರಿಗೆ  ನಮ್ಮ ಮನೆಯಲ್ಲಿ ನಾನು ಮೈಮೇಲೆ ಸೀಮೆ ಎಣ್ಣಿ ಹಾಕಿಕೊಂಡು  ಬೆಂಕಿ ಹಚ್ಚಿಕೊಂಡು ಆತ್ಮ ಹತ್ತೆ ಮಾಡಿಕೊಳ್ಳಲು ನನ್ನ ಗಂಡ ಮಹಮ್ಮದ ಗೌಶ , ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ  ಹೀನಾ ಗಂಡ  ಇಮಾಮ ಪಟೇಲ್ ,ನಿಲಾ @ ನಿಲೋಫರರ,  ಶಮಾ ಗಂಡ ಸೈಯ್ಯದ್  ಸಾ; ರಾಜಾಫಕ್ಸನ ಹಾಲ ಹಿಂದುಗಡೆ ಡಬರಾಬಾದ ರೋಡ ಕಲಬುರಗಿ ಇವರೆಲ್ಲರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.