POLICE BHAVAN KALABURAGI

POLICE BHAVAN KALABURAGI

16 February 2013

GULBARGA DISTRICT REPORTED CRIMES


ಹೆತ್ತ ಮಗನಿಂದಲೆ ತಂದೆಯ ಕೊಲೆ:
ಯಡ್ರಾಮಿ ಪೊಲೀಸ್ ಠಾಣೆ:ದಿನಾಂಕ 15-02-2013 ರಂದು ರಾತ್ರಿ 8-00  ಗಂಟೆಗೆ ಕಲ್ಯಾಣಿ ತಂದೆ ಮಲ್ಲಣ್ಣ ಗಾಣಿಗೇರ ವಯ:22 ವರ್ಷ ಸಾ:ಕುಮ್ಮನಶಿರಸಗಿ ಇತನು ನ್ನ ತಂದೆಗೆ ಸರಾಯಿ ಕುಡಿಯಲು ಹಣ ಕೇಳಿದ್ದು ಆಗ ನನ್ನ ಹತ್ತಿರ ಹಣ ಇಲ್ಲ ಅಂತಾ ಅಂದಿದ್ದಕ್ಕೆ ಕಲ್ಯಾಣಿ ಇತನು ಹಣ ಕೊಡುವದಿಲ್ಲ ಮಗನೇ ಇವತ್ತು ನಿನಗೆ ಖಲಾಸ್ ಮಾಡಿಯೇ ಬಿಡುತ್ತೇನೆ ಅಂತಾ ತಕರಾರು ಮಾಡಿದ್ದನು. ತನ್ನ ತಂದೆ ಮಲ್ಲಣ್ಣ ಇತನು ಅರಳಗುಂಡಗಿ ಮಡ್ಡಿ ಹೊಲದಲ್ಲಿ ಮಲಗಿಕೊಂಡಾಗ ಕಲ್ಯಾಣಿ ಇತನು ಮಲಗಿಕೊಂಡ ತನ್ನ ತಂದೆಗೆ ಅಲ್ಲೇ ಇದ್ದ ಕೊಡಲಿಯಿಂದ ಕುತ್ತಿಗೆಗೆ ಹಾಗು ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ. ಕೊಲೆ ಮಾಡಿದ ಮಗನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮೃತನ ಹೆಂಡತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:32/2013 ಕಲಂ,302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಶಾಲೆಯಲ್ಲಿರುವ ಟಿವಿ ಕಳ್ಳತನ ಮಾಡಿದ ಬಗ್ಗೆ:
ವಾಡಿ ಪೊಲೀಸ್ ಠಾಣೆ: ನಮ್ಮ ಶಾಲೆಯ 1 ನೇ ತರಗತಿಯಲ್ಲಿಟ್ಟಿದ್ದ ಒಂದು ಸ್ಯಾಮಸಂಗ ಕಲರ್ ಟಿವಿ, ಮತ್ತು ಬ್ಯಾಟ್ರಿ ಯಾರೊ ಕಳ್ಳರು ದಿನಾಂಕ:10-02-2013 ರಿಂದ 13-02-2013 ರ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರಿಮತಿ ಮೆರಿಯಮ್ಮಾ ಗಂಡ ಸೊಮಶೇಖರ ಬೆಳ್ಳೆ ಸರಕಾರಿ ಮಾದರಿಯ ಪ್ರಾಥಮೀಕ ಶಾಲೆ ನಾಲವಾರದ ಪ್ರಭಾರ ಮುಖ್ಯ ಗುರುಗಳು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 454, 457, 380 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕರೆಂಟ ಮೋಟಾರ ವೈರ ಕಳ್ಳತನ ಮಾಡಿದ ಬಗ್ಗೆ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶರಣಬಸಪ್ಪ ತಂದೆ ಭೂತಾಳಿ ಕೌಲಗಿ ಸಾ:ಮಾದನ ಹಿಪ್ಪರಗಾ ರವರು ಖೇಡ ಉಮರ್ಗಾ ಸೀಮಾಂತರ ಹೊಲ ಸರ್ವೆ ನಂ:43/1 ರಲ್ಲಿನ ಬಾವಿಗೆ ಅಳವಡಿಸಿದ ಕರೆಂಟ್ ಮೋಟಾರ ವೈರ್ 600 ಪೀಟ್ ಗಳದ್ದು, ದಿನಾಂಕ:12/02/2013 ರ ರಾತ್ರಿ 10-00 ಗಂಟೆಯಿಂದ ಬೆಳಗಿನ ಜಾವ 5-00 ಮಧ್ಯದಲ್ಲಿ ವಾಲ್ಕು ತಂದೆ ಸಕ್ಕರಾಮ ಪವಾರ,ಸಕಾರಾಮ ತಂದೆ ಕಲ್ಲಪ್ಪ ಪವಾರ ಸಾ:ಝಳಕಿ (ಬಿ) ಹಾ:ವ: ಹಡಲಗಿ ತಾ:ಆಳಂದ  ಇವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶರಣಬಸಪ್ಪಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ. ನಂ:19/2013 ಕಲಂ: 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಗುಲಬರ್ಗಾ ಜಿಲ್ಲೆಯ ವಿಶೇಷ ಪೊಲೀಸ್ ಘಟಕ ಅಧಿಕಾರಿಗಳಿಂದ ಮಟಕಾ ಜೂಜುಕೊರರ ಬಂಧನ; ಬಂಧಿತರಿಂದ ನಗದು ಹಣ 17,650/- ರೂಪಾಯಿಗಳು ಜಪ್ತಿ.
        ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಮತ್ತು ಮಾನ್ಯ ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಗುಲಬರ್ಗಾ ನಗರದ ರಾಜಪೂರ ಅಟೋ ಸ್ಟಾಂಡ ಹತ್ತಿರ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಶೇಷ ಘಟಕದ ಪೊಲೀಸ್ ಅಧಿಕಾರಿಯಾದ ಶ್ರೀ ಎಸ್.ಎಸ್. ಹುಲ್ಳೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ, ಹಾಗೂ ಸಿಬ್ಬಂದಿಯವರಾದ ದತ್ತಾತ್ರಯ ಎ.ಎಸ.ಐ, ಹೆಚ.ಸಿ. ಗಳಾದ ಅಣ್ಣಪ್ಪಾ ಬೆಳ್ಳೆ, ವಿಜಯಕುಮಾರ, ಲಕ್ಕಪ್ಪಾ, ಪ್ರಕಾಶ, ಹಾಗೂ ಜೀಪ ಚಾಲಕನಾದ ವೀರಣ ಪಿಸಿ ರವರು ಹಾಗೂ ವಿಶ್ವ ವಿಧ್ಯಾಲಯ ಪೊಲೀಸ್ ಠಾಣೆಯ ಪಿ.ಎಸ.ಐ. ರವರಾದ ಶ್ರೀ ಪ್ರದೀಪ ಭಿ.ಸೆ, ಮತ್ತು ಅವರ ಸಿಬ್ಬಂದಿಯವರು ದಿನಾಂಕ:15-02-2013 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ರಾಜಾಪೂರ ಅಟೋಸ್ಟಾಂಡ್  ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ 3 ಜನರು ಮಟಕಾ ಜೂಜಾಟದಲ್ಲಿ ತೊಡಗಿವರ ಮೇಲೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತನಾದ ಭೀಮಶ್ಯಾ  ತಂದೆ ಅಡಿವೆಪ್ಪಾ ಮಾಶಳಕರ ಸಾ||ರಾಜಾಪೂರ ಇತನ ಹತ್ತಿರದಿಂದ ಮಟಕಾ ಜೀಟಿಗಳು ಮತ್ತು ನಗದು ಹಣ 17650/- ರೂಪಾಯಿಗಳು ಜಪ್ತಿ ಮಾಡಿಕೊಂಡಿರುತ್ತಾರೆ. ಹಾಗೂ ಬೀಮಶ್ಯಾ ಇತನ ಜೊತೆಗಿದ್ದ ಓಡಿ ಹೋದವರ ಹೆಸರುಗಳು ವಿಚಾರಿಸಲು ಸುನಿಲ, ಹಾಗೂ ಅನೀಲ ಅನ್ನುವವರು ಓಡಿ ಹೋಗಿರುತ್ತಾರೆ. ಸದರಿ ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. 

ಕೊಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:15/02/13 ರಂದು 5.45 ಎಎಂ ಸುಭಾಸ ತಂದೆ ಶರಣಪ್ಪಾ ಅನ್ನುವವರು ಪೋನ ಮಾಡಿ, ನಿಮ್ಮ ತಮ್ಮ ಚಂದ್ರಕಾಂತ ಇತನಿಗೆ ಯಾರೋ ದುಷ್ಕರ್ಮಿಗಳು ಮಾಲಗತ್ತಿ ಗ್ರಾಮದ ಹೊಡ್ಡಿನಮನಿ ಸಂಧಿಯಲ್ಲಿ ಎರಡು ಪರ್ಸಿಕಲ್ಲು ತುಕಡಿಗಳಿಂದ ತಲೆಯ ಮೇಲೆ ಹೊಡೆದು ತಲೆಯಲ್ಲಿ ಭಾರಿ ರಕ್ತಗಾಯವಾಗಿ ಮತ್ತು ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಪ್ರಕಾಶ ತಂದೆ ಶರಣಪ್ಪ ಹಾಗೂ ಹೊನ್ನಪ್ಪ ತಂದೆ ಸಂಗಣ್ಣಾ ಕೂಡಿ ಹೋಗಿ ನೋಡಲಾಗಿ ನನ್ನ ತಮ್ಮನ ಶವವು ಮಾಲಗತ್ತಿ ಗ್ರಾಮದ ಹೊಡ್ಡಿನ ಮನಿ ಸಂಧಿಯಲ್ಲಿ ಅಂಗಾತವಾಗಿ ಬಿದ್ದಿದ್ದು ಎಡಗೈ ಭುಜದವರೆಗೆ ಮಡಚಿದ್ದು, ಬಲಗೈ ಮಗ್ಗಲಲ್ಲಿ ಚಾಚಿದ್ದು ಎರಡು ಕಾಲುಗಳು ಸೀದಾ ಇದ್ದು ಹಣೆಯ ಮೇಲೆ 2 ಇಂಚು ಉದ್ದ ಮತ್ತು ½ (ಅರ್ಧ) ಇಂಚ ಅಗಲದಷ್ಟು ಸಿಳಿದಂತೆ ಕಂಡು ಬರುತ್ತಿದ್ದು ತಲೆಯ ಮೇಲಿಂದ ಹಣೆಯ ಮೇಲಿಂದ ರಕ್ತ ಬರುತ್ತಿದ್ದು ರಕ್ತದ ಮಡುವಿನಲ್ಲಿ ತಲೆಯ ಕಂಡುಬರುತ್ತಿದ್ದನನ್ನು ನೋಡಿರುತ್ತೆನೆ. ನನ್ನ ತಮ್ಮನಿಗೆ ಕೊಲೆ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂಬ ಅಂತಾಶ್ರೀ ಬಸವರಾಜ ತಂದೆ ನಾನಾಸಾಬ ಮಡಿವಾಳ ಉ:ಕೆ.ಎಸ್‌.ಆರ್‌‌.ಟಿ.ಸಿ ಮೆಕ್ಯಾನಿಕ್ ಕಾಳಗಿ ಡಿಪೋ ಸಾ:ಮಾಲಗತ್ತಿ ಹಾ:ವ:ಚನ್ನವೀರ ನಗರ ಪಿಲ್ಟರ ಬೇಡರೋಡ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ: 20/2013 ಕಲಂ, 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರುಕ್ನೋದ್ದಿನ ತಂದೆ ಅಬ್ದುಲ ಹಮೀದ ಮಜಾವರ ಸಾ||ಹೊನಗುಂಟಾ  ರವರು ದಿನಾಂಕ:11-02-2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನಾನು ಶಹಾಬಾದದ ಮೇನ ಬಜಾರದ ಡಾ||ಕೋರಿ ದವಾಖಾನೆ ಮೇಡಿಕಲ್ ಅಂಗಡಿ ಎದುರಿಗೆ ನಿಂತಾಗ ಮಲ್ಲಣ್ಣಾ ಗೋಳಾ ಅಂಗಡಿ ಕಡೆಯಿಂದ ಆಟೋ ನಂ.ಕೆಎ-32/3352 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಾನು ನನ್ನ ಮೋಟಾರ ಸೈಕಲ ನಂ.ಕೆಎ-32/ಎಲ್‌-9627 ನೇದ್ದರ ಹತ್ತಿರ ನಿಂತಿರುವಾಗ  ಡಿಕ್ಕಿ ಪಡಿಸಿದ್ದರಿಂದ  ನನಗೆ ಕಪಾಳ ಮೇಲೆ ಹಾಗೂ ಮೇಲಕಿನ ಹತ್ತಿರ ಮತ್ತು ಬಲಗೈ ಕಿರುಬೆರಳು ಮುರಿದಿದೆ ಹಾಗೂ ಎಡಭಾಗ ಹಲ್ಲುಗಳಿಗೆ ತೊಂದರೆಯಾಗಿದೆ ಅಂತಾ ದೂರು ಸಲ್ಲಿಸಿದ್ದರಿಂದ  ಠಾಣೆ ಗುನ್ನೆ ನಂ: 21/2013 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ: ಶಿವಕುಮಾರ ತಂದೆ ಅನಂತಪ್ಪ ಗೋಟಗಿ ಸಾ:ಹಾಬಾಳ (ಟಿ) ಗ್ರಾಮ ತಾ:ಸೇಡಂ ರವರು ನಾನು ಮತ್ತು ನಮ್ಮ ಗೆಳೆಯರಾದ ರಾಜು ತಂದೆ ಕಲ್ಲಪ್ಪ ಹೆಳೂರ,ಸಿದ್ದು ತಂದೆ ತಂದೆ ನರಸಪ್ಪ ವಡ್ಡರ, ರಾಜು ತಂದೆ ಹಣಮಂತ ಸಿನಿಮಾದೊರ ಹಾಗೂ ರಾಜು ಹೆಳೂರ ಇತನ ಸಂಭಂದಿಕರು ಕೂಡಿಕೊಂಡು ದಿನಾಂಕ:15-02-2013 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಹಣಮಂತ ತಂದೆ ಕಲ್ಲಪ್ಪ ಹೆಳೂರ ಇತನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ದಂತಾಪೂರ ಗ್ರಾಮಕ್ಕೆ ಎರಡು ಮೋಟಾರು ಸೈಕಲಗಳು, ಹಾಗೂ ಕ್ರೂಸರ್ ಜೀಪನಲ್ಲಿ ಹೋಗಿ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿರುವಾಗ ರಾತ್ರಿ 9-30 ಗಂಟೆ ಸುಮಾರಿಗೆ ಮೋಟಾರು ಸೈಕಲ್ ನಂ- ಕೆಎ-32 ಇಬಿ-1883 ನೇದ್ದು ಸಿದ್ದು ವಡ್ಡರ ನಡೆಸುತ್ತಿದ್ದನು. ನಾನು ಮತ್ತು ರಾಜು ಮೊಟಾರು ಸೈಕಲ್ ನಂ-ಕೆಎ-32 ಎಕ್ಸ್-7432 ನೇದ್ದರ ಮೇಲೆ ಅವರ ಹಿಂದೆ ಹೋಗುತ್ತಿದ್ದೆವು. ಸಿದ್ದು ಇತನು ತನ್ನ ಮೋಟಾರ ಸೈಕಲನ್ನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ರಂಜೋಳ ಗ್ರಾಮದ ನಂತರ ರೋಡ ಸಲುವಾಗಿ ಹಾಕಿದ ಕಂಕರಗಳು (ಕರಿಕಲ್ಲುಗಳು) ಇದ್ದುದ್ದರಿಂದ ಸಿದ್ದು ಇತನು ಮೋಟಾರು ಸೈಕಲಗೆ ಒಮ್ಮೆಲೆ ಬ್ರೇಕ್ ಹಾಕಿದಾಗ ಮೋಟಾರು ಸೈಕಲ್ ಒಮ್ಮೆಲೆ ಸ್ಕಿಡ್ ಆಗಿ ಬಿತ್ತು ಸಿದ್ದು ವಡ್ಡರ ಹಾಗೂ ರಾಜು ತಂದೆ ಕಲ್ಲಪ್ಪ ಹೆಳೂರ ಇಬ್ಬರೂ ಕೆಳಗೆ ಬಿದ್ದರು ನಂತರ ನೋಡಲು ರಾಜು ಹೇಳೂರ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಎರಡೂ ಕಿವಿಗಳಿಂದ ರಕ್ತ ಬರುತ್ತಿತ್ತು ಮತ್ತು ಬಲಗಾಲಿನ ಹಿಮ್ಮಡಿಗೆ ಸಹ ಭಾರಿ ರಕ್ತಗಾಯವಾಗಿತ್ತು ಆತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸಿದ್ದು ವಡ್ಡರ ಇತನಿಗೆ ಭಾರಿ ರಕ್ತಗಾಯವಾಗಿತ್ತು, ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇಡಂಕ್ಕೆ ತೆಗೆದುಕೊಂಡು ಬಂದಾಗ ರಾಜು ಹೆಳೂರ ಇತನು ಮೃತಪಟ್ಟಿರುತ್ತಾನೆ ಅಂತ ವೈದ್ಯಾಧಿಕಾರಿಗಳು ತಿಳಿಸಿದರು. ವೈದ್ಯಾಧಿಕಾರಿಗಳು ಸಿದ್ದು ವಡ್ಡರ ಇತನು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಆತನಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:42/2013 ಕಲಂ-279, 337, 338, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ: ನನ್ನ ಅಣ್ಣ ಮಹಮದ ಇಸೂಫ ಇತನಿಗೆ ನಾನು 2010 ನೇ ಸಾಲಿನಲ್ಲಿ ರೂ.1,40,000/- ಹಣವನ್ನು ಮನೆಯ ಅಡಚಣೆ ಸಲುವಾಗಿ ಕೊಟ್ಟಿದ್ದು, ಸದರಿ ಹಣವನ್ನು ಮರಳಿ ಕೊಡು ಅಂತಾ ಕೇಳಿದ್ದಕ್ಕೆ ದಿನಾಂಕ:16/02/2013 ರಂದು ಮಧ್ಯರಾತ್ರಿ 00.30 ಗಂಟೆ ಸುಮಾರಿಗೆ ಟವೇರಾ ವಾಹನ ನಂ.ಕೆಎ-01/ಎಮ್‌-9226 ನೇದ್ದರಲ್ಲಿ, ಮೊಹ್ಮದ ಇಸೂಫ ತಂದೆ ಹಾಜೀಕರೀಮ,ಮೊಹ್ಮದ ರಿಯಾಜ ತಂದೆ ಹಾಜಿ ಕರೀಮ, ಸಿದ್ದೀಕ ತಂದೆ ಇಸೂಫಸಾಬ, ಮೊಹ್ಮದ ಮೇರಾಜ ತಂದೆ ಹಾಜೀಕರೀಮ,ಹಾಜಿ ಕರೀಮ ತಂದೆ ಅಲಿಸಾಬಶೇಖ  ಹಾಗೂ ಶಾಹೇದ ಬೇಗಂ ಗಂಡ ಸೈಯಸದರೋದ್ದಿನ ರವರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಬಡಿಗೆಯಿಂದ ಮತ್ತು ಕೈಯಿಂದ ಎಡಗಾಲ ಮೊಳಕಾಲಿನ ಕೆಳಗೆ ಹೊಡೆದು ಒಳಪೆಟ್ಟು ಮಾಡಿದ್ದು ಅಲ್ಲಿಯೇ ಬಿದ್ದ ಕಲ್ಲಿನಿಂದ ಮನೆಯ ಕಿಟಕಿ ಗ್ಲಾಸಗಳಿಗೆ ಹೊಡೆದು ಪುಡಿಮಾಡಿದರು. ನನ್ನ ಅಣ್ಣ ಪಿರೋಜ ಖಾನ ಮತ್ತು ತಮ್ಮ ಮಹ್ಮದ ಫಯಾಜ ಇವರು ಜಗಳ ಬಿಡಿಸಲು ಬಂದಾಗ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತಿವಿಯಲು ಬಂದಾಗ ಬಲಗಡೆ ಕುತ್ತಿಗೆಗೆ ರಕ್ತಗಾಯವಾಗಿರುತ್ತದೆ ಬಲಗಡೆ ಭುಜಕ್ಕೆ ಚಾಕುವಿನಿಂದ ಚುಚ್ಚಿದ್ದರಿಂದ ರಕ್ತಗಾಯವಾಗಿರುತ್ತದೆ ಹಾಗೂ ಬಡಿಗೆಯಿಂದ ಎರಡು ಕೈಗಳ ಭುಜಕ್ಕೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಪಡಿಸಿರುತ್ತಾರೆ. ಶಾಹೀನ ಬೇಗಂ ಮತ್ತು ಫರಜಾನ ಬೇಗಂ ರವರಿಗೆ ಮಾನಭಂಗ ಮಾಡಲು ಪ್ರಯತ್ನ ಮಾಡಿ, ಕೈಯಿಂದ ಹೊಡೆದು ಬೈದಿರುತ್ತಾರೆ ಅಂತಾ ಶ್ರೀ ಮಹ್ಮದ ಅಮ್ಜದ ತಂದೆ ಹಾಜಿ ಕರೀಮ ಶೇಖ ಸಾ:ಮಜೀದ ಹಿಂದುಗಡೆ ಶಾಂತನಗರ ಭಂಕೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ  ನಂ:22/2013  ಕಲಂ: 147,148,323,324,504,307,354 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.