POLICE BHAVAN KALABURAGI

POLICE BHAVAN KALABURAGI

30 January 2020

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ರೇವೂರ ಠಾಣೆ : ದಿನಾಂಕ 29/01/2020 ರಂದು ನಮ್ಮ ಗ್ರಾಮದ ಗುಂಡಪ್ಪ ತಂದೆ ಸುಭಾಷ ಅಂತರಂಗಿ ರವರ ದೇವರ ಕಾರ್ಯಾಕ್ರಮ ಯಂಕಂಚಿಯಲ್ಲಿ ಇದ್ದ ಪ್ರಯುಕ್ತ ಸದರಿ ಕಾರ್ಯಕ್ರಮಕ್ಕೆ ನಮಗೆ ಹಾಗು ನಮ್ಮ ಗ್ರಾಮದ ಜನರಿಗೆ ಹೇಳಿರುತ್ತಾರೆ ಸದರಿ ದೇವರ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ನನ್ನ ಮಗ ನನಗೆ ತಿಳಿಸಿದ್ದೆನೆಂದರೆ ನಾನು ಹಾಗು ನಮ್ಮ ಗ್ರಾಮದ ಗುಂಡಪ್ಪ ತಂದೆ ಭೀಮರಾವ ಮಾನೆ, ರಾಜಕುಮಾರ ತಂದೆ ಪರಮೇಶ್ವರ ಖಂಡೇಕರ ಮೂರು ಜನರು ನಮ್ಮ ಗ್ರಾಮದ ವಿಠ್ಠಲ ತಂದೆ ವಿಶ್ವನಾಥ ಖಂಡೇಕರ ರವರ ಮೋಟಾರ ಸೈಕಲ್ ನಂ ಕೆಎ-32 ಇಎನ್-1284 ನೇದ್ದನ್ನು ತಗೆದುಕೊಂಡು ಹೋಗುತ್ತೇವೆ ಸದರಿ ಮೋಟಾರ್ ಸೈಕಲ್ ರಾಜಕುಮಾರ ಇತನು ಚಲಾಯಿಸುತ್ತಾನೆ ಅಂತ ಹೇಳಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹೋಗಿರುತ್ತಾರೆ  ದಿನಾಂಕ 30/01/2020 ಬೆಳಿಗ್ಗೆ 6.30 ಗಂಟೆಯ ಸುಮಾರಿಗೆ  ನನ್ನ ಮಗ ಮಹಾದೇವಪ್ಪನ ಮೊಬೈಲ್ ಪೊನದಿಂದ ನನಗೆ ಪೋನ ಮಾಡಿದ್ದು ಸದರಿಯವರು ತಮ್ಮ ಹೆಸರು ಮುತ್ತುಗೌಡ ಪಾಟೀಲ ಸಾ||ರೇವೂರ(ಬಿ) ಅಂತ ಹೇಳಿ ಈ ಮೋಬೈಲ ಪೊನ ಇದ್ದ ವ್ಯಕ್ತಿ ಮತ್ತು ಇನ್ನೂ ಇಬ್ಬರು ಮೋಟಾರ್ ಸೈಕಲ್ ನಂ ಕೆಎ-32 ಇಎನ್-1284  ನೇದ್ದು ಕುಲಾಲಿ ರೇವೂರ(ಬಿ) ರೋಡಿಗೆ ರೇವೂರ(ಕೆ) ಸಿಮಾಂತರದಲ್ಲಿ ಗುಂಡೇರಾವ ಪೋಲೀಸ ಪಾಟೀಲ ರವರ ಹೊಲದ ಹತ್ತಿರ ಮೋಟಾರ್ ಸೈಕಲ್  ರೋಡಿನ ಪಕ್ಕದಲ್ಲಿರುವ ಒಂದು ಗಿಡಕ್ಕೆ ಡಿಕ್ಕಿ ಹೊಡೆದು ರೋಡಿನ ಪಕ್ಕದ ತಗ್ಗಿನಲ್ಲಿ ಬಿದ್ದು ಮುಖಕ್ಕೆ ತಲೆಗೆ ಭಾರಿ ರಕ್ತಗಾಯವಾಗಿ  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಂತ ತಿಳಿಸಿದ ಬಳಿಕ ಕೂಡಲೆ ನಾನು ನಮ್ಮ ಗ್ರಾಮದ ಪರಮೇಶ್ವರ ಖಂಡೇಕರ, ರುಕ್ಮಿಣಿ ಮಾನೆ, ವಿಠ್ಠಲ ಮದರಿ, ಸಿದ್ದಾರಾಮ ಮಾಶಾಳ, ಚಂದ್ರಕಾಂತ ಕವಲಗಿ ಹಾಗು ಗೌಡಪ್ಪಗೌಡ ಪೋಲೀಸ್ ಪಾಟೀಲ ಎಲ್ಲರು ಒಂದು ಖಾಸಗಿ ವಾಹನದಲ್ಲಿ ಸ್ಥಳಕ್ಕೆ ಬಂದು ನೋಡಲಾಗಿ  ನನ್ನ ಮಗನ ತಲೆಗೆ ಹಾಗು ಮುಖಕ್ಕೆ ಭಾರಿ ರಕ್ತಗಾಯವಾಗಿದ್ದು, ಗುಂಡಪ್ಪ ಈತನಿಗೆ ತಲೆಗೆ, ಮುಖಕ್ಕೆ ಹಾಗು ರಾಜಕುಮಾರ ಇತನಿಗೆ ಮುಖಕ್ಕೆ ತಲೆಗೆ ಭಾರಿ ರಕ್ತಗಾಯವಾಗಿ ಮೂರು ಜನರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ನಾವು ಬಂದಿದ್ದ ಖಾಸಗಿವಾಹನದಲ್ಲಿ ಮೃತ ದೇಹಗಳನ್ನು ಹಾಕಿಕೊಂಡು ಅಫಜಲಪೂರದ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ  ಸೇರಿಕೆ ಮಾಡಿ ಈಗ ಠಾಣೆಗೆ ಬಂದಿರುತ್ತೇವೆ.  ಸದರಿ ಘಟನೆಯು ದಿನಾಂಕ 29/01/2020 ರಂದು ರಾತ್ರಿ 11 ಪಿಎಮ್ ದಿಂದ ದಿನಾಂಕ 30/01/2020 ರಂದು ಬೆಳಿಗ್ಗೆ 5.00 ಗಂಟೆಯ ಮದ್ಯದ ಅವದಿಯಲ್ಲಿ  ಸಂಬವಿಸಿರುತ್ತದೆ  ಮೋಟಾರ್ ಸೈಕಲ್ ಸವಾರನಾದ ರಾಜಕುಮಾರ ತಂದೆ ಪರಮೇಶ್ವರ ಖಂಡೇಕರ  ಈತನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿ ರೋಡಿನ ಪಕ್ಕದಲ್ಲಿರುವ ಒಂದು ಗಿಡಕ್ಕೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿ ತಾನು ಮೃತಪಟ್ಟು  ನನ್ನ ಮಗ ಮಹಾದೇವಪ್ಪ ಮತ್ತು ಗುಂಡಪ್ಪನ ಸಾವಿಗೆ ಕಾರಣನಾದ ರಾಜಕುಮಾರ ಖಂಡೇಕರ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು  ಅಂತ ಶ್ರೀಮತಿ ಚಂದಮ್ಮ ಗಂಡ ಮಾರುತಿ ಖರಾತ ಸಾ||ಮಾಡ್ಯಾಳ ತಾ||ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕಲರಣ ದಾಖಲಾಗಿದೆ.

29 January 2020

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ : ದಿನಾಂಕ: 27/01/2020 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ ಕಮಲಾನಗರ ಗ್ರಾಮದಲ್ಲಿರುವ  ಮಲ್ಲಿಕಾರ್ಜುನ ದೇವಸ್ಥಾನದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ,  ಪಿ.ಎಸ್.ಐ. ನರೋನಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟು ಕಮಲಾನಗರ ಗ್ರಾಮದಲ್ಲಿರುವ  ಮಲ್ಲಿಕಾರ್ಜುನ ದೆವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಮಲ್ಲಿಕಾರ್ಜುನ ದೇವಸ್ಥಾನದ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಬಸರಾಜ ತಂದೆ ಶಿವಪುತ್ರಪ್ಪಾ ಪೊಲೀಸ್ ಬಿರಾದಾರ, ಸಾ:ಕಮಲಾನಗರ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 2140/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬಸವರಾಜ ತಂದೆ ಸಿದ್ದಪ್ಪ ಬಾಗೇವಾಡಿ ಸಾ|| ಯೋಗಾಪೂರ ಕಾಲೋನಿ ವಿಜಯಪೂರ, ರವರ ತಂದೆಯವರು ಸುಮಾರು ವರ್ಷಗಳಿಂದ ನಮ್ಮೊಣಿಯ ಕಿಶೋರ ತಂದೆ ರಾಮರಾವ ಪಾಟೀಲ ರವರ ಲಾರಿ ಟ್ಯಾಂಕರ ನಂ ಕೆ.-28/ಡಿ-4555 ನೇದ್ದರ ಮೇಲೆ ಕಿನ್ನರಾಗಿ ಕೆಲಸ ಮಾಡಿಕೊಂಡಿರುತ್ತಾರೆ, ಟ್ಯಾಂಕರನಲ್ಲಿ ಡಾಂಬರ ಸರಬರಾಜು ಮಾಡುತ್ತಿದ್ದರು, ಯಡ್ರಾಮಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ರೋಡಿನ ಕಾಂಟ್ರ್ಯಾಕ್ಟಗಳು ನಮ್ಮ ಮಾಲಿಕರಿಗೆ ಒಂದು ಟ್ಯಾಂಕ ಡಾಂಬರ ಕಳುಹಿಸಿಕೊಡಲು ಕೇಳಿಕೋಂಡು ಮೇರೆಗೆ ನಮ್ಮ ಟ್ಯಾಂಕರ ಮಾಲಿಕರು ಒಂದು ಟ್ಯಾಂಕ ಡಾಂಬರನ್ನು ಬಳಬಟ್ಟಿ ಗ್ರಾಮಕ್ಕೆ ಕಳುಹಿಸಿಕೊಟ್ಟಿರುತ್ತಾರೆ, ಟ್ಯಾಂಕರ ಮೇಲೆ ನಮ್ಮ ತಂದೆಯವರು ಕಿನ್ನರಾಗಿ ಹೋಗಿರುತ್ತಾರೆ, ದಿನಾಂಕ 26-01-2020 ರಂದು ಬೆಳಿಗ್ಗೆ 10;30 ಗಂಟೆ ಸುಮಾರಿಗೆ ಬಳಬಟ್ಟಿ ಗ್ರಾಮದ ರಾಜಕುಮಾರ ಮುಕ್ಕಾಣಿ ಎಂಬುವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ಇದೀಗ 10;00 ಗಂಟೆ ಸುಮಾರಿಗೆ ನಿಮ್ಮ ತಂದೆಯವರು ನಮ್ಮೂರಲ್ಲಿದ್ದ ನಮ್ಮ ಪ್ಲಾಂಟನಲ್ಲಿ ನಿಲ್ಲಿಸಿದ ಟ್ಯಾಂಕನಿಂದ ಡಾಂಬರ ಖಾಲೆ ಮಾಡುತ್ತಿದ್ದಾಗ ನಿಮ್ಮ ತಂದೆಯವರು ಕೊರಳಲ್ಲಿ ಟಾವೆಲನ್ನು ಹಾಕಿಕೊಂಡು ಟ್ಯಾಂಕರ ಕೆಳಗೆ ವಾಲ ಗರಮ ಮಾಡುತಿದ್ದಾಗ ಟ್ಯಾಂಕರ ಚಾಲಕನು ಅಲಕ್ಷತನದಿಂದ ಟ್ಯಾಂಕರನ್ನು ಒಮ್ಮೇಲೆ ಚಾಲು ಮಾಡಿದಾಗ ವಾಹನದ ಕೆಳಗೆ ಇದ್ದ ನಿಮ್ಮ ತಂದೆಯ ಕೊರಳಲ್ಲಿನ ಟಾವೇಲನ್ನು ಎಕ್ಸಲ್ ಜೇಂಟಿಗ ತಾಕಿದ್ದರಿಂದ ಟಾವೆಲ ಎಕ್ಸಲಿಗೆ ಸುತ್ತಿಕಿಕೊಂಡಾಗ ನಿಮ್ಮ ತಂದೆಯ ತಲೆಯು ಎಕ್ಸಲಗೆ ಬಡಿದು ತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಕೊರಳಲ್ಲಿನ ಟಾವೇಲು ಕುತ್ತಿಗೆಗೆ ಸುತ್ತಿಕೊಂಡಿತ್ತು, ನಂತರ ನಾನು ಮತ್ತು ಅಲ್ಲೆ ಕೆಲಸ ಮಾಡುತ್ತಿದ್ದ ಬಸವರಾಜ ಉಕ್ಕಿನಾಳ, ಗೊಲ್ಲಾಳಪ್ಪ ಮುಕ್ಕಾಣಿ ರವರು ಕೂಡಿ ಟಾವೇಲನ್ನು ಕಟ್ಟ ಮಾಡಿ ನಿಮ್ಮ ತಂದೆಯವರಿಗೆ ಹೊರಗೆ ತೆಗೆದು ಅವರನ್ನು ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೋಂಡು ಶಹಾಪೂರಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ, ಟ್ಯಾಂಕರ ಚಾಲಕ ಓಡಿ ಹೋಗಿರುತ್ತಾನೆ ನೀವು ಬನ್ನಿ ಅಂತಾ ಹೇಳಿದರು, ನಂತರ ನಾನು ಮತ್ತು ನಮ್ಮ ಮಾವ ಮಲ್ಲಿಕಾರ್ಜುನ ಕಾಖಂಡಕಿ ರವರು ಕೂಡಿ ಶಹಾಪುರಕ್ಕೆ ಹೋಗುತ್ತಿದ್ದಾಗ ರಾಜಕುಮಾರ ಇವರು ಪುನಹ ಫೋನ ಮಾಡಿ ಹೇಳಿದ್ದೇನೆಂದರೆ, ನಿಮ್ಮ ತಂದೆಯವರಿಗೆ ನಾವು ಶಹಾಪೂರದಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗುವಾಗ ಮಾರ್ಗಮದ್ಯ 11-30 .ಎಂ ಕ್ಕೆ ನಿಮ್ಮ ತಂದೆಯವರು ಮೃತ ಪಟ್ಟಿರುತ್ತಾರೆ, ಅವರ ಶವವನ್ನು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ತರುತ್ತಿದ್ದೇವೇ ನೀವು ಅಲ್ಲಿಗೆ ಬನ್ನಿ ಅಂತಾ ಹೇಳಿದ್ದರಿಂದ ನಾವು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ನಮ್ಮ ತಂದೆಯ ತಲೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಕೊರಳಲ್ಲಿ ಕಂದು ಗಟ್ಟಿದ ಗಾಯವಾಗಿದ್ದು ನಮ್ಮ ತಂದೆಯವರು ಟ್ಯಾಂಕರ ಕೆಳಗೆ ಕೆಲಸ ಮಾಡುತ್ತಿದ್ದಾಗ ಟ್ಯಾಂಕರ ಚಾಲಕನು ದುಡುಕಿನಿಂದ ಮತ್ತು ಅಲಕ್ಷತನದಿಂದ ಟ್ಯಾಂಕರ ಚಾಲು ಮಾಡಿದ್ದರಿಂದ ಈ ಅಪಘಾತವಾಗಿ ನಮ್ಮ ತಂದೆಯವರು ಮೃತ ಪಟ್ಟಿರುತ್ತಾರೆ,  ಕಾರಣ ಮೇಲ್ಕಂಡ ಟ್ಯಾಕರ್ ನಂ ಕೆ.-28/ಡಿ-4555  ನೇದ್ದರ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಕಳವು ಪ್ರಕರಣ :
ಆಳಂದ ಠಾಣೆ :    ಶ್ರೀ ಗುರುನಾಥ ತಂದೆ ಹಣಮಂತರಾಯ ಹೀರಾ  ಸಾ: ರುದ್ರವಾಡಿ ತಾ: ಆಳಂದ ರವರು ದಿನಾಂಕ:12/01/2020 ರಂದು ಲಾತೂರಕ್ಕೆ ಹೋಗುವ ಸಂಬಂಧ ನನ್ನ ಮೋಟರ್ ಸೈಕಲವನ್ನು ಹಳೇಯ ಆರ್.ಟಿ.ಓ.ಚೆಕ್ಕಪೊಸ್ಟ್ ಹತ್ತಿರ ಇರುವ ನಮ್ಮ ಸಂಬಂಧಿಕರಾದ ಶ್ರೀ.ಸಾತಣ್ಣಾ ತಂದೆ ಶಿವಣ್ಣಾ ಶೆಟ್ಟಿ ಸಾಃಆಳಂದ ಇವರ ಮನೆಯ ಕಂಪೌಂಡದಲ್ಲಿ ಸಾಯಂಕಾಲ 05:00 ಗಂಟೆಯ ಸುಮಾರಿಗೆ ನನ್ನ ಮೋಟರ್ ಸೈಕಲ ನಂಬರ  ಕೆಎ-32 ಇ.ಡಿ-8378 ನೇದ್ದನ್ನು ನಿಲ್ಲಿಸಿ ಲಾತೂರಕ್ಕೆ ಹೋಗಿ ದಿನಾಂಕ:15/01/2020 ರಂದು ಬೇಳಗ್ಗೆ 11:00 ಗಂಟೆಯ ಸುಮಾರಿಗೆ ಮರಳಿ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ ನಿಲ್ಲಿಸಿದ ಸ್ಥಳದಲ್ಲಿ ಕಾಣಲಿಲ್ಲಾ. ಆಗ ನಾನು ನಮ್ಮ ಸಂಬಂಧಿಕರಾದ ಸಾತಣ್ಣಾ ಶೆಟ್ಟಿಇವರಿಗೆ ವಿಚಾರಿಸಲಾಗಿ ನಾನು ಸಹ ಕಲಬುರಗಿಯಲ್ಲಿರುವ ಮನೆಗೆ ಹೋಗಿದ್ದು ಇಂದು ಬೆಳಗ್ಗೆ ಬಂದಿರುತ್ತೇನೆ ನನಗೂ ಸಹ ಮೋಟರ್ ಸೈಕಲ ಬಗ್ಗೆ ಗೊತ್ತಿರುವುದಿಲ್ಲಾ  ಅಂತಾ ತಿಳಿಸಿದಾಗ ಈ ವಿಷಯವನ್ನು ನನ್ನ ಮಕ್ಕಳಾದ ಓಂಪ್ರಕಾಶ & ಶಿವಪ್ರಕಾಶ ರವರಿಗೆ ತಿಳಿಸಿ ಎಲ್ಲರೂ ಕೂಡಿ ಇಷ್ಟು ದಿವಸ ಆಳಂದ ಪಟ್ಟಣ ಹಾಗೂ ಅಲ್ಲಲ್ಲಿ ಹುಡುಕಾಡಿ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ನನ್ನ ಮೋಟಾರ್ ಸೈಕಲ ನಂ.ಕೆಎ-32 ಇ.ಡಿ-8378 ಅದರ ಚೆಸ್ಸಿ ನಂಬರ.MBLHA10ASDHF70331.ಇಂಜಿನ್ ನಂ.HA10ELDHF26185 ಅಂತಾ ಇದ್ದು  ಅದರ ಅಂದಾಜು ಕಿಮ್ಮತ್ತು 35,000/- ರೂಪಾಯಿ ಇದ್ದು ನನ್ನ ಮೋಟರ್ ಸೈಕಲವನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ 12/01/2020 ರ ಸಾಯಂಕಾಲ 06:00 ಗಂಟೆಯಿಂದ ದಿನಾಂಕ:15/01/2020 ರ ಬೆಳಗಿನ 11-00 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೆಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 January 2020

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಕ್ರೀಷ್ಟಿನಾ ತಂದೆ ರಮೇಶ ಹಿಪ್ಪಳಗಾಂವ ಸಾ: ಹಿಪ್ಪಳಗಾಂವ ತಾ: ಬೀದರ ಹಾ:ವ:ಅಫಜಲಪೂರ ತಮ್ಮ ಗೆಳತಿಯರಾದ  ರೂತ ಮತ್ತು ರೈಚಲ್ ಇವರೊಂದಿಗೆ ಅಫಜಲಪೂರದಲ್ಲಿ ಬಾಡಿಗೆ ಮನೆ ಹಿಡೆದು ಶ್ರೀ ಗುರು ಮಳೇಂದ್ರ ಶೀಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿ ಅಂತಾ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಾವು ದಿನಾಲು ಮುಂಜಾನೆ ನನ್ನ ಗೆಳತಿಯರೊಂದಿಗೆ ವ್ಯಾಯಾಮಕ್ಕೆ ಹೋಗುವುದು ಅಬ್ಯಾಸ ಇರುತ್ತದೆ. ದಿ: 13-01-2020 ರಂದು 6:00 ಎ.ಎಮ್ ರಂದು ನಾನು ಎಂದಿನಂತೆ ನನ್ನ ಗೆಳತಿಯರೊಂದಿಗೆ ಅಫಜಲಪೂರ/ವಿಜಯಪೂರ ರೋಡ ಮೇಲೆ ವಾಕಿಂಗಕ್ಕೆ ಹೋಗುತ್ತಿದ್ದಾಗ ಅಫಜಲಪೂರ ಹಳೆ ಕೋರ್ಟ ಹತ್ತಿರ ರೋಡಿನ ಮೇಲೆ ಕರಜಗಿ ಕ್ರಾಸ್ ದಿಂದ ಮರಳಿ ಅಫಜಲಪೂರಕ್ಕೆ ಬರುವಾಗ ಅಫಜಲಪೂರ ಕಡೆಯಿಂದ ಒಂದು ಮೋಟಾರ ಸೈಕಲ್ ಅತೀವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಗುದ್ದಿದ್ದರಿಂದ ನಾನು ಒಮ್ಮೆಲೆ ನೆಲಕ್ಕೆ ಬಿದ್ದಾಗ ಮೋಟಾರ ಸೈಕಲ್ ಚಾಲಕನು ಮೋಟಾರನ್ನು ನನ್ನ ಎಡಗಾಲಿನ ಮೇಲೆ ಹಾಯಿಸಿಕೊಂಡು ಹೋಗಿದ್ದು ನನ್ನ ಎಡಗಾಲಿಗೆ ಭಾರಿ ರಕ್ತಗಾಯ ಮತ್ತು ತಲೆಗೆ ರಕ್ತಗಾಯವಾಗಿರುತ್ತದೆ. ಎಡಗೈ ಮುಂಗೈಗೆ ತರಚಿದ ರಕ್ತಗಾಯವಾಗಿರುತ್ತದೆ. ನಾನು ಕೆಳಗಡೆ ಬಿದ್ದಾಗ ನನ್ನ ಗೆಳತಿಯಾದ ರೂತ ತಂದೆ ರಮೇಶ ನನಗೆ ಡಿಕ್ಕಿ ಪಡೆಸಿದ ಮೋಟಾರ ಸೈಕಲ್ ನಂಬರ ನೋಡಲಾಗಿ ಎಮ್.ಹೆಚ್-13-ಸಿ-ಹೆಚ್-1639 ಅಂತಾ ಇದ್ದುದ್ದು ಸದರಿಯವರ ಹೆಸರು ಗೊತ್ತಿರುವುದಿಲ್ಲಾ ನೋಡಿದರೆ ಗುರುತಿಸುತ್ತೇನೆ. ನಾನು ಬಿದ್ದು ಒದ್ದಾಡುವುದನ್ನು ನೋಡಿದ ನನ್ನ ಗೆಳತಿ ಬೇರೆಯವರ ಸಹಾಯದಿಂದ ಖಾಸಗಿ ಆಸ್ಪತ್ರೆ ಅಫಜಲಪೂರದಲ್ಲಿ ಸೇರಿದ್ದು ಹೆಚ್ಚಿನ ಉಪಚಾರಕ್ಕೆ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ಸೇರಿಕೆಯಾಗಿ ಇನ್ನು ಹೆಚ್ಚಿನ ಉಪಚಾರಕ್ಕೆ 108 ವಾಹನದಲ್ಲಿ ಹಾಕಿಕೊಂಡು ಚಿರಾಯು ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ  ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಹಾದೇವಪ್ಪ ತಂದೆ ಭೀಮಶಾ ತೆಲ್ಕರ ಸಾ: ಗುಡ್ಡೇವಾಡಿ ರವರು ದಿನಾಂಕ 16-01-2020 ರಂದು ದೇಸಾಯಿ ಕಲ್ಲೂರ ಗ್ರಾಮದಲ್ಲಿ ಮೇಲಿನ ಮಠದ ಜಾತ್ರೆ ಇದ್ದ ಪ್ರಯುಕ್ತ ನಾನು ಗುಡ್ಡೇವಾಡಿ ಗ್ರಾಮದಿಂದ ದೇಸಾಯಿ ಕಲ್ಲೂರಿಗೆ ನಡೆದುಕೊಂಡು ಹೊಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ರಾಯಪ್ಪ ಪೂಜಾರಿ ಇವರ ಹೊಲದ ಹತ್ತಿರ 4:00 ಎ.ಎಮ್ ಸುಮಾರಿಗೆ ದೇಸಾಯಿ ಕಲ್ಲೂರ ಕಡೆಯಿಂದ ಒಂದು ಮೋಟಾರ ಸೈಕಲ್ ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ್ದು ಆಗ ನಾನು ಕೆಳಗೆ ಬಿದ್ದಾಗ ಸದರಿ ಮೋಟಾರ ಸೈಕಲ್  ನನ್ನ ಎಡಕಾಲಿನ ತೊಡೆಯ ಮೇಲೆ ಹಾಯಿದಿರುತ್ತದೆ ಅದೆ ಸಮಯಕ್ಕೆ ಕಾರ್ಖಾನೆಗೆ ಹೋಗುತ್ತಿದ್ದ ಮಡಿವಾಳ ವರಗಿ ರವರು ನನಗೆ ನೋಡಿ ಎಬ್ಬಿಸಿದ್ದು ನನಗೆ ಅಪಘಾತ ಪಡೆಸಿದ ಮೋಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲ್ ನನಗೆ ಹಾಯಿಸಿದಾಗ ಮೋಟಾರ ಸೈಕಲ್ ಬಂದು ಬಿದ್ದಿದ್ದು ಆಗ ನಾನು ಮತ್ತು ಮಡಿವಾಳ ಅದರ ನಂಬರ ನೋಡಲಾಗಿ ಹಿರೋ ಹೊಂಡಾ ಸಿ.ಡಿ 100  ಕೆಎ-32-ಕೆ-8533 ಅಂತಾ ಇರುತ್ತದೆ ನಂತರ ನನಗೆ ಅಪಘಾತವಾದ ವಿಷಯವನ್ನು ಮಡಿವಾಳ ರವರು ನನ್ನ ತಮ್ಮ ಶಿವಲಿಂಗಪ್ಪ ರವರಿಗೆ ತಿಳಿಸಿದ್ದರಿಂದ ನನ್ನ ತಮ್ಮ ಮತ್ತು ಅಳಿಯ ರಾಜು ರವರು ಬಂದು ನನಗೆ ಕಲಬುರಗಿಗೆ ತಂದು ಪಿ.ಜಿ ಶಾಹಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 January 2020

KALABURAGI DISTRICT REPORTED CRIMES


ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ:14-01-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಣ್ಣೂರ ಗ್ರಾಮದ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ.ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು ಸುಭಾಷ ತಂದೆ ಶರಣಪ್ಪ ಲಾತೂರ ಸಾ||ಮಣ್ಣೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1430/-  ರೂಪಾಯಿ ನಗದು ಹಣ ಹಾಗೂ 2)ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3)ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ:14-01-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಣ್ಣೂರ ಗ್ರಾಮದ ಯಲ್ಲಮ್ಮ ದೇವಸ್ಥಾನದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ ಇದು ಮುಂಬೈ ಮಟಕಾ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ.ಅಂತಾ ಮಾಹಿತಿ ಬಂದ  ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಯಲ್ಲಮ್ಮನ ದೇವಸ್ಥಾನದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು  ಸಾಯಬಗೌಡ ತಂದೆ ಭೀಮಾಶಂಕರ ಹಳಿಮನಿ ಸಾ||ಮಣ್ಣೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1160/-  ರೂಪಾಯಿ ನಗದು ಹಣ ಹಾಗೂ 2)ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3)ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ಪಡೆದು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೆರಾ ಈ ವ್ಯಕ್ತಿಯು ದಿನಾಂಕ:14-01-2020 ರಂದು ಸಮಯ 05:00 ಗಂಟೆಗೆ ಈ ವ್ಯಕ್ತಿಯು ಬಂದು ತಹಸೀಲ್ದಾರ ಸಾಹೇಬರಿಗೆ ನನಗೆ ಬೇಡ ಜಂಗಮ್ಮ ಪ್ರಮಾಣ ಪತ್ರ ನಿಡಬೇಕೆಂದು ವಾದ ಮಾಡುವಾಗ ಶ್ರೀ ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ  ರವರಿಗೆ ಹೋರಗಡೆ ಹಾಕಲು ಯತ್ನಿಸಿದಾಗ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ನನ್ನ ಮೇಲೆ ಕೈ ಮಾಡಲು ಯತ್ನಿಸಿದ್ದು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾನೆ ಕಾರಣ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶಿವರಾಜ ತಂದೆ ಬನಗೌಡ ಬಿರಾದಾರ :ಸೀಪಾಯಿ ತಹಸೀಲ್ದಾರ ಕಾರ್ಯಾಲಯ ಯಡ್ರಾಮಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೇರಾ ಈ ವ್ಯಕ್ತಿ ಇಂದು ದಿನಾಂಕ:14-01-2020 ರಂದು ಸಮಯ 05:00 ಘಂಟೆಗೆ ಮಾನ್ಯ ದಂಡಾಧಿಕಾರಿಗಳ ಹತ್ತಿರ ಬೇಡ ಜಂಗಮ್ಮ SC ಜಾತಿ ಪ್ರಮಾಣ ಪತ್ರ ನೀಡಬೆಕೆಂದು  ಬಲವಂತ ಮಾಡುತ್ತಿರುವಾಗ ನಾನು ನನ್ನ ಕೆಲಸದ ಪ್ರಯುಕ್ತ ಹೋಗಿದ್ದೆ ನಾನು ನೀವು ಗುರುಗಳು ನೀವು ದೋಡ್ಡ ಕುಲದವರು ನೀವು ಈ ರೀತಿ ಸುಳ್ಳು ದಾಖಲೆ ನೀಡಿ SC ಪ್ರಮಾಣ ಪತ್ರ ತೆಗೆದುಕೊಂಡರು ನಾವು ಮೂಲ SC ಜಾತಿ ಅವನು ಏನು ಮಾಡಬೇಕೆಂದು ಕೇಳಿದರೆ ನೀ ಏನು ಕೇಳತಿ ವಡ್ಡರ ಸೂಳಿ ಮಗನ್ಯಾ ನಿನ್ನಗೆ ಸಾಹೀಸುತ್ತೆನೆ ಎಂದು ನನಗೆ ಒಂದು ಏಟು ಹೊಡೇದು ತಳ್ಳಿ ನುಕಿದನು ಅಲ್ಲಿ ಇದ್ದ ಪೀವುನ ಮತ್ತು ಜನರು ಬಂದು ನನಗೆ ರಕ್ಷಣೆ ಮಾಡಿದ್ದರು. ಆದ ಕಾರಣ ತಾವು ದಯಾಳುಗಳಾದ ತಾವು ನಾಗಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ:ವಡಗೇರ ಈ ವ್ಯಕ್ತಿಗೆ ಬಂದಿಸಿ ನನಗೆ ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಆನಂದಕುಮಾರ ತಂದೆ ಬಸಣ್ಣ ಕುಸ್ತಿ ಸಾ:ಯಡ್ರಾಮಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ  ಸುನಂದಾ ಗಂಡ ಚನ್ನಬಸಪ್ಪ ಕರೂಟಿ ಸಾ||ಶಿವಬಾಳ ನಗರ ಮಣ್ಣೂರ ಗ್ರಾಮ ರವರದು ಅಕ್ಕಲಕೋಟ ತಾಲೂಕಿನ ಹಿಳ್ಳಿ ಗ್ರಾಮದ ಸಿಮಾಂತರದಲ್ಲಿ ಬರುವ ಹೊಲ ಸರ್ವೆ ನಂ:170 ನೇದ್ದು ನನ್ನ ಅಣ್ಣನಾದ ಶಾಂತಪ್ಪ ತಂದೆ ಚಂದ್ರಾಮಪ್ಪ ಹೆಗ್ಗೊಂಡೆ ಸಾ||ಹಿಳ್ಳಿ ರವರ ಹೆಸರಿನಲ್ಲಿದ್ದು ಸದರಿ ಹೊಲ ನನ್ನ ಗಂಡನು ಪಾಲಕ್ಕೆ ಮಾಡಿದ್ದು ಇರುತ್ತದೆ ಹಿಗಿದ್ದು ಇಂದು ನಾನು ಮತ್ತು ನನ್ನ ಗಂಡನು ಕೂಡಿಕೊಂಡು ಹೊಲದಲ್ಲಿ ಕೇಲಸ ಮುಗಿಸಿಕೊಂಡು ಮರಳಿ ನಮ್ಮ ಗ್ರಾಮಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ 5-30 ಪಿ,ಎಮ್.ಕ್ಕೆ ಹೀಳ್ಳಿ ಗ್ರಾಮದ 1)ಬಸಣ್ಣ ತಂದೆ ಮಲಕಣ್ಣ ಶಟಗಾರ 2)ಸಾಗರ ತಂದೆ ಬಸಣ್ಣಮ ಶಟಗಾರ 3)ಶಿವಲಿಂಗವ್ವ ಗಂಡ ಬಸಣ್ಣ ಶಟಗಾರ ಮತ್ತು  ಲಚ್ಯಾಣ ಗ್ರಾಮದ 4) ಗುರು ಮುಜಗೊಂಡ ರವರು ಕೂಡಿ ಕೊಂಡು ಬಂದು ನಮಗೆ ಅಡ್ಡಗಟ್ಟಿ ಮುಂದೆ ಹೋಗದಂತೆ ತಡೆದು ಅದರಲ್ಲಿ ಸಾಗರ ಈತನು ನನ್ನ ಗಂಡನಿಗೆ ಏ ಬೋಸಡಿ ಮಗನೆ ಆ ಹೊಲ ನಾವು ಖರಿದಿ ಮಾಡಿದ್ದಿವಿ ನಿ ಯಾಕೆ ಬಟಾಯಿ ಪಾಲ ಮಾಡಿದಿ ಅಂತ ಅವಾಚ್ಯವಾಗಿ ಬೈದನು ಮತ್ತು ಬಸಣ್ಣ ಈತನು ಈ ಸುಳಿ ಮಗನಿಗೆ ಈ ಮೋದಲು ನಾ ಹೇಳಿದರು ಕಿಮ್ಮತ್ತೆ ಮಾಡಲಾಗ್ಯಾನ ಅಂತ ಅಂದನು ಶಿವಲಿಂಗವ್ವ ಇವಳು ನನಗೆ ಕಪಾಳ ಮೇಲೆ ಹೊಡೆದು ಎಲ್ಲಾ ಈ ರಂಡಿನೆ ಮಾಡುಕತ್ತಾಳ ಅಂತ ಬೈದಳು ಆಗ ಅಲ್ಲೆ ರೋಡಿನ ಮೇಲೆ ಮೋಟಾರ ಸೈಕಲ ಮೇಲೆ ಹೋಗುತ್ತಿದ್ದ ನಮ್ಮ ಗ್ರಾಮದ 1)ಭೀಮಶ್ಯಾ ತಂದೆ ಸಾಯಬಣ್ಣ ನಾಯಕೋಡಿ 2)ಶಿವರಾಜ ತಂದೆ ಪರಮೇಶ್ವ್ರ ಪೂಜಾರಿ ರವರು ಜಗಳ ನೋಡಿ ಜಗಳ ಬಿಡಿಸಿದರು ಆಗ  ಗುರು ಮುಜಗೊಂಡ ಈತನು ನಮಗೆ ಇವತ್ತು ನೀವು ಉಳಿದುಕೊಂಡಿರಿ ಇನ್ನೋಮ್ಮೆ ಸಿಕ್ಕರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ ಕಾರಣ ನಮಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಪಾಳಕ್ಕೆ ಹೊಡೆದು ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 January 2020

KALABURAGI DISTRICT REPORTED CRIMES


 £ÀgÉÆÃuÁ oÁuÉ : ¢£ÁAPÀ:12/01/2020 gÀAzÀÄ 12-00 ¦.JAPÉÌ ¦üAiÀiÁð¢ Cfð ¸ÁgÁA±ÀªÉãÀAzÀgÉ, £À£Àß UÀAqÀ£ÁzÀ ªÀÄ®èuÁÚ @ ªÀÄ®è¥Áà FvÀ£ÀÄ ¸ÀĪÀiÁgÀÄ 10 ªÀµÀðUÀ¼À »AzÉ ªÀÄÈvÀ¥ÀnÖzÁÝ£É, £Á£ÀÄ ºÁUÀÆ £À£Àß ªÀÄPÀ̼ÁzÀ ±À²PÀĪÀiÁgÀ, ±ÀgÀtPÀĪÀiÁgÀ ºÁUÀÆ «dAiÀÄ®Qëöäà J®ègÀÆ PÀ®§ÄgÀVAiÀÄ°è ªÁ¸À«gÀÄvÉÛêÉ. £Á£ÀÄ PÀÆ°PÉ®¸À ªÀiÁqÀÄvÉÛãÉ. £À£Àß »jAiÀÄ ªÀÄUÀ£ÁzÀ ±À²PÀĪÀiÁgÀ£ÀÄ ¹«¯ï EAd¤AiÀÄjAUï ªÀÄÄV¹ ¸ÀzÀå ©ÃzÀj£À SÁ¸ÀV PÀA¥À¤AiÀÄ°è PÉ®¸À ªÀiÁqÀÄwÛzÁÝ£É. ªÀÄzÀÄªÉ DVgÀĪÀÅ¢®è, ±ÀgÀtPÀĪÀiÁgÀ ºÁUÀÆ «dAiÀÄ®Qëöäà EªÀjUÀÆ PÀÆqÀ E£ÀÆß ªÀÄzÀÄªÉ DVgÀĪÀÅ¢®è EªÀgÀÄ PÁ¯ÉÃdÄ NzÀÄwÛzÁÝgÉ. £À£Àß ªÀÄUÀ£ÁzÀ ±À²PÀĪÀiÁgÀ FvÀ£ÀÄ ¢£ÁAPÀ:11/01/2020 gÀAzÀÄ ©ÃzÀgÀ¤AzÀ PÉ®¸À ªÀÄÄV¹PÉÆAqÀÄ gÁwæ 10-00 UÀAmÉUÉ PÀ®§ÄgÀVUÉ §AzÀÄ vÁ£ÀÄ gÁwæ ªÀÄ£ÉUÉ §gÀĪÀÅ¢®è vÀ£Àß UɼÉAiÀÄ gÀƪÀiï£À°è ªÀÄÄRªÀiï ªÀiÁr ¨É½UÉÎ ªÀÄ£ÉUÉ §gÀĪÀÅzÁV £À£Àß E£ÉÆߧ⠪ÀÄUÀ£ÁzÀ ±ÀgÀtPÀĪÀiÁgÀ FvÀ£À ªÉƨÉÊ®UÉ ¥sÉÆãÀªÀiÁr w½¹zÀÝjAzÀ £Á£ÀÄ gÁwæ HlªÀiÁrPÉÆAqÀÄ ªÀÄ£ÉAiÀÄ°è ªÀÄ®V PÉÆArgÀÄvÉÛêÉ. »ÃUÀzÀÄÝ ¢£ÁAPÀ:12/01/2020 gÀAzÀÄ gÁwæ 01-30 J.JAPÉÌ £À£Àß ªÀÄUÀ£À UɼÉAiÀÄ£ÁzÀ ²ªÀPÀĪÀiÁgÀ vÀAzÉ UÀÄgÀÄ°AUÀAiÀÄå EAr FvÀ£ÀÄ £À£Àß ªÀÄUÀ£ÁzÀ ±ÀgÀtPÀĪÀiÁgÀ FvÀ£À ªÉƨÉÊ®UÉ ¥sÉÆãÀªÀiÁr ±À²PÀĪÀiÁgÀ£ÀÄ ¢£ÁAPÀ:11/01/2020 gÀAzÀÄ gÁwæ 11-00 UÀAmɬÄAzÀ 11-50 ¦.JA ¸ÀĪÀiÁjUÉ UÉÆüÁ(©) PÁæ¸ï ºÀwÛgÀ ªÉÆmÁgï ¸ÉÊPÀ¯ï ¥À°ÖAiÀiÁV ©zÀÄÝ C¥ÀWÁvÀPÉƼÀUÁV vÀ¯ÉUÉ gÀPÀÛUÁAiÀĪÁVzÀÄÝ, G¥ÀZÁgÀPÁÌV PÀ®§ÄgÀV AiÀÄÄ£ÉÊmÉÃqï D¸ÀàvÉæUÉ ¸ÉÃjPÉ ªÀiÁrgÀÄvÉÛêÉ. CAvÁ w½¹zÀÝjAzÀ £Á£ÀÄ ºÁUÀÆ £À£Àß ªÀÄUÀ£ÁzÀ ±ÀgÀtPÀĪÀiÁgÀ J®ègÀÆ D¸ÀàvÉæUÉ §A¢gÀÄvÉÛêÉ. D¸ÀàvÉæAiÀÄ°è £À£Àß ªÀÄUÀ ±À²PÀĪÀiÁj£ÀUÉ G¥ÀZÁgÀ £ÀqÉzÁUÀ £Á£ÀÄ DvÀ¤UÉ £ÉÆÃrzÀÄÝ, DvÀ£À vÀ¯ÉAiÀÄ »A¨sÁUÀUÀPÉÌ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ ºÁUÀÆ ¨sÀÄdPÉÌ JgÉqÀÄ PÉÊPÁ®ÄUÀ½UÉ ºÁUÀÆ JgÀqÀÄ PÀ¥Á¼ÀPÉÌ C®è°è vÀgÀazÀ gÀPÀÛUÁAiÀÄUÀ¼ÁVzÀÄÝ, £À£Àß ªÀÄUÀ£ÀÄ ¨ÉɺÀĵÀ ¹ÜwAiÀÄ°èzÀÝ£ÀÄ EzÀgÀ §UÉÎ £Á£ÀÄ £À£Àß ªÀÄUÀ£À ¸ÀAUÀqÀ EzÀÝ DvÀ£À UɼÉAiÀÄgÁzÀ gÁ§lð vÀAzÉ AiÀıÀéAvï ±ÀªÀiÁð, ±ÀgÀtÄ vÀAzÉ ²ªÀ¥Áà PÀnÖªÀĤ, w¥ÀàuÁÚ vÀAzÉ ±ÀR¥Áà eÉÆÃUÀÄgÀ, ¤¯ÉñÀ vÀAzÉ ²ªÀ±ÀAPÉæ¥Áà WÀAmÉ, ²ªÀPÀĪÀiÁgÀ vÀAzÉ UÀÄgÀÄ°AUÀ¥Áà EAr EªÀjUÉ WÀl£ÉAiÀÄ §UÉÎ PÀÄ®APÀıÀªÁV «ZÁj¹zÁUÀ CªÀgÀÄ w½¹zÀÄÝ K£ÀAzÀgÉ, ¢£ÁAPÀ:11/01/2020 gÀAzÀÄ gÁwæ 10-00 UÀAmÉUÉ £À£Àß ªÀÄUÀ ±À²PÀĪÀiÁgÀ£ÀÄ PÀ®§ÄgÀV ¬ÄAzÀ vÀ£Àß ªÉƨÉÊ°AzÀ ±À²PÀĪÀiÁgÀ EAr FvÀ£À ªÉƨÉÊ®UÉ ¥sÉÆãÀ ªÀiÁrzÁUÀ ²ªÀPÀĪÀiÁgÀ£ÀÄ vÁ£ÀÄ ºÁUÀÆ gÁ§mïð, ±ÀgÀt¥Áà, Vjñï, w¥ÀàuÁÚ, EªÀgÉ®ègÀÆ £ÀgÉÆÃuÁ UÁæªÀÄPÉÌ HlPÉÌ §A¢gÀĪÀÅzÁV w½¹zÀÝjAzÀ ±À²PÀĪÀiÁgÀ£ÀÄ vÁ£ÀÄ PÀÆqÀ §ÄgÀĪÀÅzÁV ºÉýzÀÝjAzÀ J®ègÀÆ ±À²PÀĪÀiÁgÀ §gÀĪÀgÉUÉ HlªÀiÁqÀÄvÁÛ PÁAiÀÄÄvÁÛ PÀĽvÉêÀÅ gÁwæ 11-00 UÀAmÉ DzÀgÀÄ ±À²PÀĪÀiÁgÀ£ÀÄ £ÀgÉÆÃuÁ UÁæªÀÄPÉÌ §gÀ¯ÁgÀzÀ PÁgÀt gÁ§mïð, ±ÀgÀt¥Áà, ¤¯Éñï EªÀgÀÄ ±À²PÀĪÀiÁgÀ¤UÉ PÀgÉAiÀÄ®Ä ¥ÀlÖt PÀqɬÄAzÀ §gÀÄwÛgÀ§ºÀÄzÀÄ CAvÁ PÀqÀUÀAa PÁæ¸ï ºÀwÛgÀ ¤AvÀÄ ¸ÀĪÀiÁgÀÄ 45 ¤«ÄµÀ ±À²PÀĪÀiÁgÀ£À ªÉƨÉʯïUÉ PÀgɪÀiÁrzÀÄÝ ±À²PÀĪÀiÁgÀ£ÀÄ vÀ£Àß ªÉƨÉʯï JvÀÛ¯ÁgÀzÀ PÁgÀt ªÀÄgÀ½ MAzÀÄ ªÉÆmÁgï ¸ÉÊPÀ¯ï ªÉÄÃ¯É PÀqÀUÀAa ¬ÄAzÀ ªÀÄgÀ½ £ÀgÉÆÃuÁ UÁæªÀÄPÉÌ §gÀĪÁUÀ ªÀiÁUÀð ªÀÄzÀå 11-50 ¦.JA ¸ÀĪÀiÁjUÉ vÀ£Àß ªÀÄUÀ ±À²PÀĪÀiÁgÀ£ÀÄ ªÉÆmÁgï ¸ÉÊPÀ®¤AzÀ ©zÀÄÝ, vÀ¯ÉUÉ UÀA©üÃgÀ gÀPÀÛUÁAiÀÄ ºÉÆA¢zÀÝ£ÀÄß £ÉÆÃr EªÀgÉ®ègÀÆ £ÀgÉÆÃuÁ UÁæªÀÄzÀ°è PÀĽwÛzÀÝ ²ªÀPÀĪÀiÁgÀ£ÀÄ w¥ÀàtÚ EªÀjUÉ w½¹zÀÄÝ, CªÀj§âgÀÄ ¸ÀܼÀPÉÌ §AzÀÄ J®ègÀÆ ¸ÉÃj CA§Æå¯É£ïì ªÁºÀ£ÀPÉÌ PÀgɪÀiÁr CzÀgÀ°è ºÁQPÉÆAqÀÄ G¥ÀZÁgÀPÁÌV £À£Àß ªÀÄUÀ¤UÉ AiÀÄÄ£ÉÊmÉÃqï D¸ÀàvÉæUÉ ¸ÉÃjPÉ ªÀiÁrgÀĪÀÅzÁV ºÁUÀÆ ±À²PÀĪÀiÁgÀ£ÀÄ PÀ®§ÄgÀV¬ÄAzÀ ªÉÆmÁgï ¸ÉÊPÀ¯ï £ÀA§gï PÉJ32-EJ¸ï0036 £ÉÃzÀÝgÀ ªÉÄÃ¯É C¥ÀWÁvÀªÁV ©zÀÝ §UÉÎ w½¹zÀÝjAzÀ £À£Àß ªÀÄUÀ ±À²PÀĪÀiÁgÀ£ÀÄ ¢£ÁAPÀ:11/01/2020 gÀAzÀÄ gÁwæ 10-00 UÀAmÉUÉ PÀ®§gÀÄV ¬ÄAzÀ £ÀgÉÆÃuÁ UÁæªÀÄPÉÌ vÀ£Àß UɼÉAiÀÄgÀ ºÀwÛgÀ HlªÀiÁqÀ®Ä ºÉÆÃVgÀÄvÁÛ£É. PÀ®§ÄgÀVUÉ ºÉÆÃUÀĪÁUÀ ¸ÉÊAiÀÄzï aAZÉÆý ªÀiÁUÀðªÁV zÁjvÀ¦à UÉÆüÁ(©) UÁæªÀÄPÉÌ ºÉÆÃV C°èAzÀ £ÀgÉÆÃuÁPÉÌ ºÉÆÃUÀĪÁUÀ UÉÆüÁ(©) PÁæ¸ï ºÀwÛgÀ gÁwæ 11-00 ¦.JA ¤AzÀ 11-50 ¦.JA ªÀÄzsÀåzÀ CªÀ¢üAiÀÄ°è vÁ£ÀÄ ZÀ¯Á¬Ä¸ÀÄwÛzÀÝ ªÉÆmÁgï ¸ÉÊPÀ¯ï £ÀA§gï PÉJ32-E¸ï0036 £ÉÃzÀÝ£ÀÄß CwêÉÃUÀ ªÀÄvÀÄÛ ¤µÁ̼ÀfvÀ¤AzÀ ZÀ¯Á¬Ä¹zÀÝjAzÀ C¥ÀWÁvÀªÁV ©¢ÝzÀÝjAzÀ C¥ÀWÁvÀzÀ°è vÀ¯ÉUÉ UÀA©gÀUÁAiÀĪÁV G¥ÀZÁPÁÌV AiÀÄÄ£ÉÊmÉÃqï D¸ÀàvÉæ PÀ®§ÄgÀVAiÀÄ°è G¥ÀZÁgÀ ºÉÆAzÀÄvÁÛ ¢£ÁAPÀ:12/01/2020 gÀAzÀÄ 09-42 J.JAPÉÌ ªÀÄÈvÀ¥ÀnÖgÀÄvÁÛ£É CAvÁ ºÉý §gɹzÀÄÝ ¤d«gÀÄvÀÛzÉ CAvÁ EgÀĪÀ ¦üAiÀiÁð¢ Cfð ¸ÁgÁA±ÀzÀ ªÉÄðAzÁ À ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÀ §UÉÎ ªÀgÀ¢.

12 January 2020

KALABURAGI DISTRICT REPORTED CRIMES

ಇಸ್ಪೀಟ ಜೂಜಾಟಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ 08/01/2020 ರಂದು ನರೋನಾ ಠಾಣಾ ವ್ಯಾಪ್ತಿಯ  ಕಡಗಂಚಿ ಗ್ರಾಮದ ಚಂದ್ರತಾಯಿ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಬಾತ್ಮಿ ಬಂದ ಸ್ಥಳವಾದ ಕಡಗಂಚಿ ಗ್ರಾಮದ ಚಂದ್ರತಾಯಿ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 4 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಮೂರು ಜನರನ್ನು ಹಿಡಿದಿದ್ದು, ಒಬ್ಬ ವ್ಯಕ್ತಿ ಓಡಿ ಹೋಗಿರುತ್ತಾನೆ.  ವಶಕ್ಕೆ ಸಿಕ್ಕವರ ಹೆಸರು ವಿಳಾಸ ವಿಚಾರಿಸಲಾಗಿ 1) ಭೀಮರಾವ ತಂದೆ ಮಾಳಪ್ಪಾ ಮರ್ತೂರ, ವಯಾ: ಸಾ:ಕಡಗಂಚಿ ಗ್ರಾಮ, 2) ಶರಣಪ್ಪಾ ತಂದೆ ಬಸವಣ್ಣಪ್ಪಾ ಫೂಲಾರೆ, ಸಾ:ಗಂಗಾ ಅಪಾರ್ಟ್‌‌‌ ಮೆಂಟ್‌‌ ಖಾದರಿ ಚೌಕ್‌, ಸಾ:ಕಲಬುರಗಿ, 3) ಈರಣ್ಣಾ ತಂದೆ ಚಂದಪ್ಪಾ ಮಾದಗೊಂಡ, ಸಾ:ಕಡಗಂಚಿ, ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  26620/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡು, ಓಡಿ ಹೋದವನ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಈ ಮೇಲಿನವರ ಆತನ ಹೆಸರು ನಾಗಪ್ಪಾ ತಂದೆ ಶರಣಪ್ಪಾ ಬಟಗೇರಿ, ಸಾ:ಕಡಗಂಚಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ; 08.12.2019 ರಂದು ಮದ್ಯಾಹ್ನ  ಜೇವರಗಿ ಠಾಣಾ ವ್ಯಾಪ್ತಿಯ  ತಾಲೂಕಿನ ಮಾರಡಗಿ (ಎಸ್.) ಗ್ರಾಮ ಸೀಮಾಂತರ ಪಡದಳ್ಳಿ ರೋಡಿನ ಪಕ್ಕದಲ್ಲಿ ರೋಡಿನ ಹತ್ತಿರ ಸಾರ್ವಜನಿಕ ಪ್ರದೇಶದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ. ಸಾಹೇಬ ಗ್ರಾಮಿಣ ಉಪ ವಿಬಾಗ ಕಲಬುರಗಿ, ಮಾನ್ಯ ಸಿಪಿಐ ಸಾಹೇಬ ಜೇವರಗಿ ರವರ ಮಾರ್ಗದರ್ಶನದಲ್ಲಿ ಬಾತ್ಮೀ ಬಂದ ಸ್ಥಳಕ್ಕೆ ಹೊರಟು ಮಾರಡಗಿ (ಎಸ್.) ಸೀಮಾಂತರ ಪಡದಳ್ಳಿ ಕಡೆಗೆ ಹೋಗುವ ರೊಡಿನ ಪಕ್ಕದಲ್ಲಿ ಹೋಗಿ ಗಿಡ ಕಂಠಿಗಳ ಮರೆಯಲ್ಲಿ ನಿಂತು ನೋಡಲಾಗಿ ಕೇನಾಲ್ ಹತ್ತಿರ ನಿಂತು ನೋಡಲಾಗಿ ಕೇನಾಲ್ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ಇಸ್ಪೀಟ ಜೂಜಾಟ ಆಡುತ್ತಿರುವದು ಖಚಿತ ಪಡಿಸಿಕೊಂಡು ದಾಳಿ ಮಾಡಿ  12 ಜನರನ್ನು ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ 1). ಸಾಹೇಬಗೌಡ ತಂದೆ ಜೊತೇಪ್ಪಗೌಡ ಮಾಲಿ ಬಿರಾದಾರ ಸಾಃ ಹುಲಕಲ್ ತಾಃ ಶಹಾಪೂರ 02). ರಾಜ ತಂದೆ ಅಂಭಣ್ಣ ದೇವಾಪೂರ  ಸಾಃ ಬಾಪುಗೌಡ ನಗರ ಶಹಾಪೂರ 3) ತಿಪ್ಪಣ್ಣ ತಂದೆ ಪೋಮುನಾಯಕ ರಾಠೋಡ  ಸಾಃ ಡಿಗ್ಗಿತಾಂಡಾ ತಾಃ ಶಹಾಪೂರ 4) ಶಿವಣ್ಣ ತಂದೆ ಹಣಮಂತ ಕೊಲಿ ಸಾಃ  ಹತ್ತಿಗೂಡೂರ ತಾಃ ಶಹಾಪೂರ 5) ನಿಂಗಪ್ಪ ತಂದೆ ಸಂಗಣ್ಣಾ ಪೂಜಾರಿ ಸಾಃ  ಹೊತಪೇಟ್ ತಾಃ ಶಹಾಪೂರ 6) ತಾಯಣ್ಣ ತಂದೆ ಹಣಮಂತ್ರಾಯ ಕವಾಲ್ದಾರ ಸಾಃ ಚಂದಾಪೂರ ತಾಃ ಶಹಾಪೂರ 7) ಗುಂಟೇಪ್ಪ ತಂದೆ ಬಾಲಪ್ಪ ಜಟ್ಟೂರ ಸಾಃ  ಮೂಡಬೂಳ ತಾಃ ಶಹಾಪೂರ, 8) ಸಕ್ಕಪ್ಪ ತಂದೆ ಸಿದ್ದಪ್ಪ ಬ್ಕಾರಿ ಸಾಃ ಮಾರಡಗಿ (ಎಸ್.) 9) ಶಿವಪ್ಪ ತಂದೆ ಭೀಮರಾಯ ಬಿರಾಳ ಸಾಃ  ಮಾರಡಗಿ (ಎಸ್.) ತಾಃ ಜೇವರಗಿ 10) ಮಲ್ಲಪ್ಪ ತಂದೆ ತಮ್ಮಣ್ಣ ಗೋಗಿ ಸಾಃ ಖಾದ್ಯಾಪೂರ ತಾಃ ಜೇವರಗಿ 11) ಚಂದ್ರು ತಂದೆ ದೀಪಲೂ ಜಾದವ ಸಾಃ ಖಾದ್ಯಾಪೂರ ತಾಃ ಜೇವರಗಿ 12) ಚಂದ್ರಾಮ ತಂದೆ ಮಲ್ಲಪ್ಪ ಬೇಲೂರ ಸಾಃ  ಖಾದ್ಯಾಪೂರ ತಾಃ ಜೇವರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ಒಟ್ಟು 7100/- ರೂ, ಮತ್ತು 52 ಇಸ್ಪೀಟ್ಎಲೆಗಳನ್ನು ವಶಕ್ಕೆ ಪಡೆದುಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಜೇವರಗಿ ಠಾಣೆ : ದಿನಾಂಕ10/01/2020 ರಂದು ಮುಂಜಾನೆ ಜೇವರಗಿ ಠಾಣಾ ವ್ಯಾಪ್ತಿಯ ಗಂವ್ಹಾರ ಗ್ರಾಮದಲ್ಲಿ ಅಖೈನಿಸಾಬ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳದದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿರುತ್ತಾನೆಂದು ಖಚಿತ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿ.ಐ ಸಾಹೇಬ ಜೇವರಗಿ ಮತ್ತು ಮಾನ್ಯ ಡಿ.ಎಸ್.ಪಿ ಸಾಹೇಬರು ಗ್ರಾಮೀಣ ಉಪ ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಗಂವ್ಹಾರ ಗ್ರಾಮ ತಲುಪಿ ಬಾತ್ಮೀ ಬಂದ ಸ್ಥಳ ತಲುಪಿದ ನಂತರ ಸ್ವಲ್ಪ ದೂರದಲ್ಲಿ ಹೊಟೇಲ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಅಖೈನಿಸಾಬ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು 1/- ರುಪಾಯಿಗೆ 80/- ರೂಪಾಯಿ ಗೆಲ್ಲಿರಿ ಭಾಗ್ಯ ಲಕ್ಷ್ಮೀ ನಿಮ್ಮ ಮನೆಗೆ ಬರುತ್ತಾಳೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಅಂಕಿ ಸಂಖ್ಯೆಯುಳ್ಳ ಮಟಕಾ ಚೀಟಿ ಬರೆದುಕೊಡುತ್ತಿದ್ದನು. ನಾವು ಸದರಿ ವ್ಯೆಕ್ತಿ ಮಟಕಾ ಜೂಜಾಟದಲ್ಲಿ ತೊಡಗಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಮಟಕಾ ಬರೆಯಿಸಲು ಬಂದ ಸಾರ್ವಜನಿಕರು ಅಲ್ಲಿಂದ ಓಡಿ ಹೋದರು.  ಸದರ ಸ್ಥಳದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ಒಬ್ಬನಿಗೆ ನಾವು ಬೆನ್ನು ಹತ್ತಿ ಹಿಡಿದು ಅವನ ಹೆಸರು ವಿಳಾಸ ಕೇಳಲಾಗಿ ಅವನು ತನ್ನ ಹೆಸರು ಅಬ್ದುಲ್ ಬಾಷಾ ತಂದೆ ಖಾಜಾ ಹುಸೇನಿ ಅಕ್ಕಲಕೊಟ ಸಾ// ಸಾ: ಗಂವ್ಹಾರ, ತಾ// ಜೇವರಗಿ ಅಂತಾ ಹೇಳಿದನು ಅವನಿಗೆ ಅಂಗಶೋದನೆ ಮಾಡಲಾಗಿದೆ ಅವನ ಹತ್ತಿರ ನಗದು ಹಣ 450-/-ರೂ, ಒಂದು ಮಟಕಾ ಚೀಟಿ ಅ.ಕಿ=00 ಒಂದು, ಬಾಲ್ ಪೆನ್ ಸಿಕ್ಕಿದ್ದು ಅ.ಕಿ=00 ಸಿಕ್ಕಿದ್ದು ಸದರಿಯವುಗಳನ್ನು ವಶಕ್ಕೆ ಪಡೆದು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿದವರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ಶ್ರೀ ಮೋದಿನ ತಂದೆ ಮಹೇಬೂಬಸಾಬ ಭಾಗವಾನ ಆರ್.ಐ ಕರಜಗಿ ರವರು ದಿನಾಂಕ 10-01-2020 ರಂದು ಬೆಳಿಗ್ಗೆ 11:00 ಗಂಟೆಗೆ ಮಾನ್ಯ ಯಲ್ಲಪ್ಪ ಸುಬೇದಾರ ತಹಸಿಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಅಫಜಲಪೂರ ರವರೊಂದಿಗೆ ನಾನು ಮತ್ತು ಮಣೂರ ಗ್ರಾಮ ಸಹಾಯಕರಾದ ನಂದೇಶ ತಂದೆ ನಾಗಪ್ಪ ಪ್ಯಾಟಿ ಹಾಗೂ ಮಲ್ಲಿಕಾರ್ಜುನ ತಂದೆ ಗುರಣ್ಣ ಜಮಾದಾರ ಎಲ್ಲರೂ ಕೂಡಿ ಮಣೂರ ಗ್ರಾಮಕ್ಕೆ ಬೇಟ್ಟಿ ನೀಡಿದಾಗ ಶ್ರೀ ಚನ್ನಗೊಂಡ ತಂದೆ ದ್ಯಾವಪ್ಪ ಬಗಲಿ ಸಾ|| ಮಣೂರ ಇವರು ತಮ್ಮ ಹೊಲ ಸರ್ವೆ ನಂ 837/3 ನೇದ್ದರಲ್ಲಿ ಅಂದಾಜು 200 ಮೆಟ್ರಿಕ್ ಟನ್ ಮರಳನ್ನು (ಅಕಿ- 2 ಲಕ್ಷ ರೂಪಾಯಿ) ಅಕ್ರಮವಾಗಿ ಸಂಗ್ರಹಿಸಿದ್ದು, ಸದರಿ ಮರಳನ್ನು ಮಾನ್ಯ ತಹಸಿಲ್ದಾರ ಸಾಹೇಬರ ಸಮ್ಮುಖದಲ್ಲಿ ಪಂಚರಾದ ನಂದೇಶ ತಂದೆ ನಾಗಪ್ಪ ಪ್ಯಾಟಿ ಗ್ರಾಮ ಸಹಾಯಕ ಮಣೂರ ಹಾಗೂ ಮಲ್ಲಿಕಾರ್ಜುನ ತಂದೆ ಗುರಣ್ಣ ಜಮಾದಾರ ಗ್ರಾಮ ಸಹಾಯಕ ಮಣೂರ ರವರ ಸಮಕ್ಷಮ 11:15 ಎ ಎಮ್ ದಿಂದ 12:15 ಪಿ ಎಮ್ ವರೆಗೆ ಜಪ್ತ ಮಾಡಿಕೊಂಡು, ಸದರಿ ಜಪ್ತ ಮಾಡಿಕೊಂಡ ಮರಳನ್ನು ಪಿ.ಡಬ್ಲ್ಯೂ.ಡಿ ಇಲಾಖೆ ಅಫಜಲಪೂರ ರವರ ಹಸ್ತಾಂತರಕ್ಕೆ ಒಪ್ಪಿಸಲಾಗಿದೆ. ನಂತರ ಮಾನ್ಯ ತಹಸಿಲ್ದಾರ ಸಾಹೇಬರ ಮೌಖಿಕ ಆದೇಶದ ಮೇರೆಗೆ ಸದರಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಹೊಲ ಸರ್ವೆ ನಂ 837/3 ನೇದ್ದರ ಮಾಲಿಕನಾದ ಶ್ರೀ ಚನ್ನಗೊಂಡ ತಂದೆ ದ್ಯಾವಪ್ಪ ಬಗಲಿ ಸಾ|| ಮಣೂರ ರವರ ಮೇಲೆ ಕಾನೂನು ಕ್ರಮ ಜರೂಗಿಸಲು ದೂರು ಸಲ್ಲಿಸಲಾಗಿದೆ. ಕಾರಣ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಈ ಮೇಲೆ ತಿಳಿಸಿದ ಹೊಲ ಸರ್ವೆ ನಂ 837/3   ನೇದ್ದರ ಪಟ್ಟೆದಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಧಾನಮ್ಮ @ ಆರಾಧ್ಯಣ ಗಂಡ ಭಿಮಾಶಂಕರ ಸಾಬನಿ ಸಾ||ಉಮದಿ ತಾ||ಜತ್ತ ಜಿ||ಸಾಂಗ್ಲಿ ರವರ ತಂದೆಯಾದ ಶರಣಬಸಪ್ಪ ತಂದೆ ಶಿವಣ್ಣ ಮಲಘಾಣ ಇವರು ದಿನಾಂಕ:27-01- 2019 ರಂದು ಉಮದಿ ಗ್ರಾಮದ ಭಿಮಾಶಂಕರ ತಂದೆ ಮಲ್ಲಿಕಾರ್ಜುನ ಸಾಬನಿ ಇವರೊಂದಿಗೆ ಮಾಶಾಳ ಗ್ರಾಮದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿರುತ್ತಾರೆ.   ಮದುವೆ ಕಾಲಕ್ಕೆ ನಮ್ಮ ತಂದೆವರು ನನ್ನ ಗಂಡನ ಮನೆಯವರಿಗೆ 02 ತೋಲಿ ಬಂಗಾರ ವರದಕ್ಷಿಣೆ ಅಂತ ಕೊಟ್ಟು 15 ಲಕ್ಷ ರೂಪಾಯಿವರೆಗೆ ಹಣ ಖರ್ಚುಮಾಡಿ ಮಾಡಿಕೊಟ್ಟಿರುತ್ತಾರೆ ನನ್ನ ಗಂಡ ಪೂಣಾ ಜಿಲ್ಲೆಯಲ್ಲಿ ವೇಂದಕೀನ್ ಎಂಬ ಕಂಪನಿಯಲ್ಲಿ ಸಾಫ್ಟವೇರ ಇಂಜೀನಿಯರ  ಅಂತಾ ಕೆಲಸ ಮಾಡಿಕೊಂಡಿದ್ದು ಅಲ್ಲೆ ಒಂದು ಬಾಡಿಗೆ ಮನೆ ಮಾಡಿರುತ್ತಾನೆ. ಮದುವೆಯಾದ 1 ವಾರದವರೆಗೆ  ನನ್ನ ಗಂಡ ಮತ್ತು ಅತ್ತೆಮಾವರವರು ಉಮದಿ ಗ್ರಾಮದಲ್ಲಿ ನನ್ನನ್ನು ಚನ್ನಾಗಿ ನೊಡಿಕೊಂಡಿರುತ್ತಾರೆ ನಂತರ ಸ್ವಲ್ಪ ದಿನಗಳಾದ ನಂತರ ನಾನು ಮತ್ತು ಅತ್ತೆಯವರು ಪೂಣಾಕ್ಕೆ ಹೋಗಿರುತ್ತೇವೆ ಪೂಣಾಕ್ಕೆ ಹೋದ 2-3 ದಿನಗಳ ಕಾಲ ನನ್ನನ್ನು ಚೆನ್ನಾಗಿ ನೋಡಿಕೊಂಡಿರುತ್ತಾರೆ ನಂತರ ಅವರು ಮತ್ತು ನನ್ನ ಗಂಡ ಕೂಡಿ ನೀನು ನೋಡಲು ಚೆನ್ನಾಗಿಲ್ಲ ನಿನಗೆ ಅಡುಗೆ ಮಾಡಲು ಬರುವದಿಲ್ಲ ನಿನ್ನ ಅಪ್ಪ ಮದುವೆ ಸಮಯದಲ್ಲಿ ನಮ್ಮ ಮನೆತನಕ್ಕೆ ತಕ್ಕಂತೆ ವರದಕ್ಷಣೆ ಕೋಟ್ಟಿಲ್ಲವೆಂದು ನನ್ನ ಗಂಡನ ಮನೆಗೆ ಬಂದ ನನ್ನ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು ಅವಮಾನ ಮಾಡಿ ನನಗೆ ಮತ್ತು ನನ್ನ ತಂದೆಗೆ ಮನೆಯಿಂದ ಆಚೆ ಹಾಕಿರುತ್ತಾರೆ  2 ಲಕ್ಷ ರೂಪಾಯಿ ತಗೆದುಕೊಂಡು ಬಂದರೆ ನಮ್ಮ ಮನೆಗೆ ಬಾ ಇಲ್ಲಂದರೆ ಬರಬೇಡ ಎಂದು ಹೇಳಿದರು ನಂತರ ನಾವು ನಮ್ಮ ಗ್ರಾಮಕ್ಕೆ ಬಂದೆವು ನಾನು ನಡೆದ ಘಟೆನೆ ಬಗ್ಗೆ ನಮ್ಮ ತಂದೆ ತಾಯಿಯ ಮುಂದೆ ಹೇಳಿದಾಗ ನನ್ನ ತಂದೆಯವರು ನಮ್ಮ ಗ್ರಾಮದ ಶಿವಪುತ್ರಪ್ಪ ಜಿಡ್ಡಗಿ,ತುಕಾರಾಮ ಹೂಗಾರರವರಿಗೆ ಮತ್ತು ಪಂಡಿತ ತಂದೆ ಮಲ್ಲಪ್ಪ ನಾವಿ ಕೀರು ಪೂಜಾರಿ ಇವರೆಲ್ಲರಿಗೂ ಕರೆದು ಅವರಿಗೆ ವಿಷಯ ತಿಳಿಸಿ ನನ್ನ ಗಂಡನ ಮತ್ತು ಮನೆಯವರಿಗೆ ಉಮದಿ ಗ್ರಾಮಕ್ಕೆ ಕರೆಯಿಸಿ ಅಲ್ಲಿ ನ್ಯಾಯ ಪಂಚಾಯತಿ ಮಾಡಿದರು ನಂತರ ಸ್ವಲ್ಪ ದಿನಗಳ ನಂತರ ನಾನು ಮತ್ತೆ ಗಂಡನ ಮನೆಗೆ ಹೋದೆನು. ನನ್ನ ಗಂಡನ ಮನೆಯವರು ಮತ್ತೆ ಮೊದಲಿನಿಗಿಂತ ಹೆಚ್ಚಾಗಿ ನನ್ನ ಅತ್ತೆಯಾದ ವಿಜಯ ಮತ್ತು ಮಾವ ಮಲ್ಲಿಕಾರ್ಜುನ ಹಾಗೂ ಗಂಡ ದಿನಾಲು ನೀನು 2 ಲಕ್ಷ ರೂಪಾಯಿ ತರದೆ ನಮ್ಮ ಮನೆಗೆ ಯಾಕೆ ಬಂದೆ ಎಂದು ದಿನಾಲು ಬೈಯುತ್ತ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು ಗಂಡನು ದೈಹಿಕವಾಗಿ ನೀಣು ನೋಡಲು ಚೆನ್ನಾಗಿಲ್ಲವೆಂದು ಹಣ ತಂದಿಲ್ಲವೆಂದು ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದನು ಇದನ್ನು ತಾಳಲಾರದೆ ನಾನು ಮತ್ತೆ ನಮ್ಮ ಗ್ರಾಮಕ್ಕೆ ಬಂದೆನು.ದಿನಾಂಕ 11-08-2019 ರಂದು ನಮ್ಮ ಗ್ರಾಮವಾದ ಮಾಶಾಳ ಗ್ರಾಮಕ್ಕೆ ನಮ್ಮ ಅತ್ತೆ ಮಾವ ಗಂಡ ಮತ್ತು ಭಾವ ಎಲ್ಲರು ಬಂದು ನೀನು 2 ಲಕ್ಷ ತಗೆದುಕೊಂಡು ನಮ್ಮ ಮನೆಗೆ ಬಾ ಇಲ್ಲಂದರೆ ಇಲ್ಲೆ ಇರು ಎಂದು ಬೈದು ಹೋಗಿರುತ್ತಾರೆ   ಕಾರಣ ನನಗೆ ಸರಿಯಾಗಿ ನೋಡಿಕೊಳ್ಳದೆ ದೈಹಿಕ ಮತ್ತು ಮಾನಸಿಕ ಹಿಂಸೆಕೊಟ್ಟು ವರದಕ್ಷೀನೆ ಕಿರುಕುಳ ಕೊಟ್ಟ ನನ್ನ ಗಂಡನಾದ ಭೀಮಾಶಂಖರ ಮತ್ತು ಅತ್ತೆಯಾದ ವಿಜಯಾ ಹಾಗೂ ಭಾವನಾದ ವಿಶ್ವನಾಥ ತಂದೆ ಮಲ್ಲಿಕಾರ್ಜುನ ಸಾಬನಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಬಸಮ್ಮ ಗಂಡ ಅರ್ಜುನ ಕಾಮಶೇಟ್ಟಿ ಸಾ||ನಂದರ್ಗಿ ಗ್ರಾಮ ತಾ||ಅಫಜಲಪೂರ ರವರ ಗಂಡ ಅರ್ಜುನ ತಂದೆ ಭೀಮಶ್ಯಾರ ಕಾಮಶೇಟ್ಟಿ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು ಇರುತ್ತದೆ ನಂದರ್ಗಿ ಸಿಮಾಂತರದಲ್ಲಿ ನನ್ನ ಗಂಡ ಹಾಗೂ ನನ್ನ ಹಿರಿಯ ಮಗನಾದ ಚಂದ್ರಶ್ಯಾ ಇವರ ಹೆಸರಿನಲ್ಲಿ 5 ಎಕರೆ ಜಮೀನು ಇರುತ್ತದೆ ಸದರಿ ಜಮೀನಿನ ಒಕ್ಕಲುತನ ಕೆಲಸ ನನ್ನ ಗಂಡನೆ ನಿರ್ವಹಣೆ ಮಾಡಿಕೊಂಡಿರುತ್ತಾನೆ  ನಾವು ಆರ್ಥಿಕವಾಗಿ ಹಿಂದುವುಳಿದಿದ್ದು ನನ್ನ ಗಂಡನು ಒಕ್ಕಲುತನದ ಸಲುವಾಗಿ ಅಫಜಲಪೂರದ ಕೆ,ಜಿ,ಬಿ.ಬ್ಯಾಂಕಿನಲ್ಲಿ 2009 ನೇ ಸಾಲಿನಲ್ಲಿ 90 ಸಾವೀರ ರೂಪಾಯಿ ಸಾಲ ಮಾಡಿರುತ್ತಾನೆ ನಮ್ಮ ಹೊಲದಲ್ಲಿ ಬೇಳೆಯ ಉತ್ಪಾದನೆ ಸರಿಯಾಗಿ ಬರದ ಕಾರಣ ನನ್ನ ಗಂಡನಿಗೆ ಸದರಿ ಸಾಲ ಮರುಪಾವತಿಸಲು ಆಗಿರುವದಿಲ್ಲ ಮತ್ತು ಅಲ್ಲದೆ ನನ್ನ ಗಂಡನು ಖಾಸಗಿಯಾಗಿ ಕೂಡ ನಮ್ಮ ಗ್ರಾಮದಲ್ಲಿ ಮತ್ತು ನಮ್ಮ ಸಂಬಂಧಿಕರಲ್ಲಿ ಸಾಲ ಮಾಡಿರುತ್ತಾನೆ.ಇತ್ತಿಚಿನ ದಿನಗಳಲ್ಲಿ ನನ್ನ ಗಂಡನು ತಾನು ಮಾಡಿದ ಸಾಲ ಮರುಪಾವತಿಸುವದು ಹೇಗೆ ಎಂದು ಚಿಂತೆಗಿಡಾಗಿದ್ದನು ಹಲವಾರು ಬಾರಿ ನಾನು ಮತ್ತು ನನ್ನ ಮಕ್ಕಳು ಮತ್ತು ನಮ್ಮ ಮನೆಯ ಅಕ್ಕಪಕ್ಕದವರು ಕೂಡಿಕೊಂಡು ನನ್ನ ಗಂಡನಿಗೆ ಈ ವರ್ಷ ಆಗದಿದ್ದರು ಮುಂದಿನ ವರ್ಷದಲ್ಲಿ ಬೇಳೆಯ ಮೇಲೆ ಸಾಲ ತಿರಿಸಿದರಾಯಿತು ಚಿಂತೆ ಮಾಡಬೇಡ ಅಂತ ಬುದ್ದಿವಾದ ಹೇಳಿರುತ್ತೇವೆ.       ಹೀಗಿದ್ದು ನಿನ್ನೆ ರಾತ್ರಿ 9-00 ಪಿ,ಎಮ್,ಸುಮಾರಿಗೆ ನಾನು ನನ್ನ ಗಂಡ ಮತ್ತು ನನ್ನ ಎರಡು ಮಕ್ಕಳೂ ಮತ್ತು ನಮ್ಮ ಸೊಸೆಯಂದಿರರು ಕೂಡಿ ಉಟ ಮಾಡುತ್ತಿರುವಾಗ ನನ್ನ ಗಂಡನು ಇವತ್ತಿಗೆ ನಂದು ಮುಗಿತು ಇನ್ನು ಮುಂದೆ ಎಲ್ಲಾ ಭಾರ ಹಿರಿಯ ಮಗನ ಮೇಲೆ ಬಿಳುತ್ತಾದ ಅಂತ ಅನ್ನಲು ಸುರುಮಾಡಿದನು ಆಗ ನಾವೆಲ್ಲರು ಬೈದು ಸುಮ್ಮನಿರು ಅಂತ ಹೇಳಿರುತ್ತವೆ ನಿನ್ನೆ ರಾತ್ರಿ 9-30 ಗಂಟೆಗೆ ಊಟ ಮಾಡಿ ನಾವೆಲ್ಲರು ಮಲಗಿಕೊಂಡಿರುತ್ತೆವೆ ನಂತರ ರಾತ್ರಿ ನಾನು 11-30 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಎದ್ದಾಗ  ನನ್ನ ಗಂಡನು ನನ್ನ ಹತ್ತಿರ ಮಲಗಿದ ಜಾಗದಿಂದ ಎದ್ದು ಪಕ್ಕದ ಕೊಣೆಯಲ್ಲಿ ಹೋಗಿ ಅಂಗಾತವಾಗಿ ಬಿದ್ದಿದ್ದನು ನಾನು ಹತ್ತೀರ ಹೋಗಿ ನೋಡಿದಾಗ ಕ್ರೀಮಿನಾಶಕ ಔಷಧಿ ವಾಸನೆ ಬರುತ್ತಿತ್ತು ಪಕ್ಕದಲ್ಲಿ ತೋಗರಿಗೆ ಹೋಡೆಯುವ ಔಷದಿ ಡಬ್ಬಿ ಬಿದ್ದಿತ್ತು ನಂತರ ನಾನು ನನ್ನ ಮಕ್ಕಳಿಗೆ ಮತ್ತು ಬಾಜು ಮನೆಯವರಾದ 1)ಚನ್ನಬಸಯ್ಯ ತಂದೆ ಸಿದ್ಯಯ್ಯ ಹೀರೆಮಠ 2)ಸಿದ್ರಾಮಪ್ಪ ತಂದೆ ಚಂದ್ರಶ್ಯಾ ರೇವೂರ ಕರೆಯಿಸಿ ನೋಡಲಾಗಿ ನನ್ನ ಗಂಡನು ಮೃತಪಟ್ಟಿದ್ದನು ನನ್ನ ಗಂಡನು ಒಕ್ಕಲುತನದ ಸಲುವಾಗಿ ಮಾಡಿದ ಸಾಲ ಮರುಪಾವತಿಸುವದು ತನ್ನಿಂದಾಗುವದಿಲ್ಲ ಅಂತ ಚಿಂತೆಗಿಡಾಗಿ ಮನನೊಂದು ನಮ್ಮ ಮನೆಯವರೆಲ್ಲ ಮಲಗಿದ್ದಾಗ ಸಮಯ ನೋಡಿ ದಿನಾಂಕ:08/01/2020 ರಂದು 9-30 ಪಿ,ಎಮ್,ದಿಂದ 11-30 ಪಿ,ಎಮ್. ಮದ್ಯದ ಅವದಿಯಲ್ಲಿ ತೊಗರಿಗೆ ಹೊಡೆಯುವ ಎಣ್ಣಿ ಕುಡಿದು ಆತ್ಮ ಹತ್ಯೆ  ಮಾಡಿಕೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.