POLICE BHAVAN KALABURAGI

POLICE BHAVAN KALABURAGI

19 June 2012

GULBARGA DIST REPORTED CRIMES


ಕೊಲೆಗೆ ಪ್ರಯತ್ನ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ :ಶ್ರೀ.ಶರಣಬಸಪ್ಪ ತಂದೆ ಶಾಮರಾವ ಹೊಸಮನಿ, ಸಾ||ನಂದಿಕೂರ ಗುಲಬರ್ಗಾ ರವರು ನನ್ನ ತಂದೆಯವರಾದ ಶಾಮರಾವ ಮತ್ತು ನನ್ನ ಚಿಕ್ಕಪ್ಪ ಶ್ರೀಮಂತ ಇಬ್ಬರು ಅಣ್ಣತಮ್ಮಂದಿರಿದ್ದು, ನಾವು ನಂ¢ಕೂರದಲ್ಲಿ ವಾಸವಾಗಿದ್ದು, ನನ್ನ ಕಾಕಾ ಗುಲಬರ್ಗಾದ ಸುಂದರ ನಗರದಲ್ಲಿ ವಾಸವಾಗಿರುತ್ತಾನೆ. ದಿನಾಂಕ: 18/06/2012 ರಂದು ನಮ್ಮ ಕಾಕಾನಾದ ಶ್ರೀಮಂತ ಇತನಿಗೆ ಅವನ ಮಗನಾದ ಭವಾನಿ ಇವನು ಜಗಳ ಮಾಡಿ ಹೊಡೆ ಬಡೆ ಮಾಡಿರುತ್ತಾನೆ ಅಂತಾ  ನಮಗೆ ತಿಳಿಸಿದ್ದರಿಂದ ನಾನು ಮತ್ತು ನನ್ನ ತಮ್ಮ ಅನೀಲ ಇಬ್ಬರೂ ನಂದಿಕೂರದಿಂದ ಸುಂದರ ನಗರಕ್ಕೆ ಬಂದಿರುತ್ತೆವೆ. ಮನೆಯಲ್ಲು ನನ್ನ ಚಿಕ್ಕಪ್ಪ ಮಾತ್ರ ಇದ್ದು, ಅವನ ಮಗ ಭವಾನಿ ಮನೆಯಲ್ಲಿ ಇರಲಿಲ್ಲ. ನನ್ನ ಚಿಕ್ಕಪ್ಪನನ್ನು ನಾನು ಮತ್ತು ನನ್ನ ತಮ್ಮ ಅನಿಲ ಇಬ್ಬರೂ ಕೂಡಿ ಉಪಚಾರಕ್ಕಾಗಿ ಕುಳಗೇರಿ ಕ್ರಾಸ ಮುಖಾಂತರ ಕೆ.ಬಿ.ಎನ್ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಕುಳಗೇರಿ ಕ್ರಾಸ ಹತ್ತಿರ ಸಾಯಂಕಾಲ 6:30 ರಿಂದ 7:00 ಗಂಟೆಯ ಸಮಯಕ್ಕೆ  ಭವಾನಿ ನಿಂತಿದ್ದನು, ಅವನಿಗೆ ನಾವು ತಂದೆಯ ಜೊತೆ ಜಗಳ ಮಾಡುವದು ಸರಿಯಲ್ಲ ಅಂತಾ ಬುದ್ದಿವಾದ ಹೇಳಿತಿದ್ದರಿಂದ, ನೀವು ನಮ್ಮ ಕುಟುಂಬದ ವಿಷಯದಲ್ಲಿ ಏಕೆ ಬರುತ್ತಿರಿ ಬೋಸಡಿ ಮಗನಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ತನ್ನ ಹತ್ತಿರ ಇದ್ದ ಚಾಕುವನ್ನು ತೆಗೆದುಕೊಂಡು ನನ್ನ ಮೈಮೇಲೆ ಚುಚ್ಚಿ ರಕ್ತಗಾಯ ಪಡಿಸಿರುತ್ತಾನೆ ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 81/2012 ಕಲಂ: 307, 504 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ಅಕ್ಕಮಹಾದೇವಿ ಗಂಡ ವಿಶ್ವನಾಥ ಸ್ವಾಮಿ ವಿಶಾಲ ವಿಶ್ವ ಕನ್ನಡ ದಿನಪತ್ರಿಕೆಯ ಉಪ-ಸಂಪಾದಕಿ ಶ್ರದ್ಧಾ ರೆಸಿಡೇನ್ಸಿ ವಿಶ್ವಸೇವಾ ಮಿಶನ್ ಕೊರ್ಟ ರೋಡ ಗುಲಬರ್ಗಾ ಇವರು  ನಾನು ಮತ್ತು ನನ್ನತಮ್ಮ ಕೊಟ್ರೇಶ್  ಇಬ್ಬರೂ ಕೂಡಿಕೊಂಡು ದಾವಣಗೇರಿ ಬಸ್ಸ ನಿಲ್ದಾಣದಿಂದ ಗುಲಬರ್ಗಾಕ್ಕೆ ಬರುವ ಕುರಿತು ದಿನಾಂಕ:13/06/2012 ರಂದು ಬಸ್ಸಿನಲ್ಲಿ ಬರುತ್ತಿರುವಾಗ ನಮ್ಮ ಲಗೇಜ ಇರುವ ಪೊಲೊ ಪ್ಯಾಶನ್ ವ್ಹಿಲ್ ಬ್ಯಾಗನಲ್ಲಿ ನನ್ನ ಬಂಗಾರದ ಆಭರಣಗಳು ಬ್ಯಾಗಿನಲ್ಲಿ ಇಟ್ಟು, ಬ್ಯಾಗ್ ಸಿಟಿನ ಮೇಲ್ಬಾಗದಲ್ಲಿಟ್ಟ್ಟು ಪ್ರಯಾಣ ಮಾಡುತ್ತಿದ್ದೆವು, ದಿನಾಂಕ:14/06/2012 ರಂದು ಗುಲಬರ್ಗಾದ ಬಸ್ ನಿಲ್ದಾಣಕ್ಕೆ ಬಂದು ಇಳಿದು ಬ್ಯಾಗ ನೋಡಿದಾಗ ಒಳಗಡೆಯ ಬಟ್ಟೆ ಕವರ ಹರಿದಿದ್ದು ಯಾರೋ ಕಳ್ಳರು ಪ್ರಯಾಣ ಮಾಡುತ್ತಿರುವಾಗ ಬ್ಯಾಗಿನ ಕವರ ಹರಿದು ಒಳಗಡೆ ಇಟ್ಟಿದ್ದ ಒಂದು ಬಂಗಾರದ ಉದ್ದ ಚೈನು 35 ಗ್ರಾಂ.ಎರಡು ಬಂಗಾರದ ಹವಳವುಳ್ಳ ಬಳೆಗಳು 28 ಗ್ರಾಂ.ಮೂರು ಜೊತೆ ಬಂಗಾರದ ಕಿವಿಯ ಹುವುಗಳು 10 ಗ್ರಾಂ.ಒಂದು ಹವಳದ ಆರ್ಟಿಫೀಶಿಯಲ್ ಸರ,ಒಂದು ನೊಕಿಯಾ 5233 ಮೊಬೈಲ ಐ.ಎಂ.ಇ.ಐ ನಂ. 3562644047440369 ಅದರಲ್ಲಿ ಏರಟೇಲ ಸಿಮ್  ಹೀಗೆ ಒಟ್ಟು 2,15,000/- ರೂ. ಬೆಲೆಬಾಳುವ ಬಂಗಾರದ ಆಭರಣಗಳು ಮತ್ತು ಮೊಬೈಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:52/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

GULBARGA DIST REPORTED CRIMES


ಕೊಲೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಶ್ರೀ ಹೀರು ತಂದೆ ಭಾವಸಿಂಗ ಚವ್ಹಾಣ ಸಾ: ಮದಿಹಾಳ ತಾಂಡಾ ಶ್ರೀನಿವಾಸ ಸರಡಗಿ ತಾ:ಜಿ:ಗುಲಬರ್ಗಾರವರು ನಮ್ಮ ಹೋಲ  6 ವರ್ಷಗಳಿಂದ ಹಿಂದೆ ನಮ್ಮ  ತಾಂಡಾದ ವಾಲು ತಂದೆ ಮೇಘು ಇವರ 1 ಏಕರೆ ಹೋಲ 4 ಲಕ್ಷ ರೂಪಾಯಿಗೆ ಖರಿದಿಸಿ ಪೂರ್ತಿ  ಹಣ ಕೊಟ್ಟಿದ್ದು, ಸದರಿ ಹೊಲದ ಫೋಡಿ ಆಗದಿದ್ದಕ್ಕೆ ರಿಜಿಸ್ಟರ ಮಾಡಿಕೊಳ್ಳಲು ತಡವಾಗಿದ್ದು ನಂತರ ವಾಲುನ ಮಗನಾದ ವಿನೋದ ಇತನು ಇನ್ನೂ ಹಣ ಕೋಡಿರಿ ಅಂತ ಜಗಳ ಮಾಡಿ 2 ವರ್ಷಗಳ ಹಿಂದೆ ನನ್ನ ಮಗನಾದ ವಸಂತ ಇತನಿಗೆ ಹೊಡೆದು ರಕ್ತಗಾಯ ಗೊಳಿಸಿದ್ದರಿಂದ ಈ ಬಗ್ಗೆ ವಿಶ್ವ ವಿಧ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ ದಾಖಲಿಸಲಾಗಿತ್ತು, ನಂತರ ತಾಂಡಾದ ಹಿರಿಯರ ಸಮಕ್ಷಮ ಪಂಚಾಯತ ಮಾಡಿಕೊಂಡು ಪಂಚರು ಹೇಳಿದಂತೆ ಮತ್ತೆ 2 ಲಕ್ಷ ರೂಪಾಯಿ ಕೊಟ್ಟು 2 ತಿಂಗಳ ಹಿಂದೆ ರಿಜಿಸ್ಟರ ಮಾಡಿಕೊಂಡಿದ್ದೆವು, ಪಾಣಿಯಲ್ಲಿ 50 ಸಾವಿರ ಬ್ಯಾಂಕ ಲೋನ ನಮೂದಿಸಿದ್ದು ಈ ಹಣ ನೀವೆ ಕಟ್ಟಿರಿ ಅಂತ ನನ್ನ ಮಗ ವಸಂತ ಇತನು ವಾಲುನ ಮಗ ವಿನೋದ ಇತನಿಗೆ ಹೇಳಿದ್ದರಿಂದ ಅವರ ನಮ್ಮ ಮಧ್ಯೆ ತಕರಾರು ಆಗಿತ್ತು, ದಿನಾಂಕ 17-06-2012 ರಂದು ನನ್ನ ಮಗ ವಸಂತ ಇತನನೊಂದಿಗೆ ವಿನೋದ ಮತ್ತು ರವಿ ಇವರು ಸರಾಯಿ ಕುಡಿದು  ಸಣ್ಣೂರ ಕ್ರಾ ಹತ್ತಿರದ ಬ್ರಿಡ್ಜ (ಸೇಡಂ ರೋಡ) ಮೇಲೆ ನನ್ನ ಮಗನನ್ನು ಹರಿತವಾದ ಆಯುಧಗಳಿಂದ ತೆಲೆಗೆ ಹಣಗೆ ಹೋಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 144/2012 ಕಲಂ 302 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಸುರೇಶ ತಂದೆ ಶಿವಯೋಗಪ್ಪ ಆಂದಾನಿ (ಹೊನ್ನಕಿರಣಗಿ) ಸಾ|| ಮನೆ ನಂ 1-6/4 1/ಎ ತಂಗಾ ಆಸ್ಪತ್ರೆಯ ಹತ್ತಿರ, ಪಬ್ಲಿಕ ಗಾರ್ಡನ ರೋಡ ಜಾಜಿ ಲೇ ಔಟ ಗುಲಬರ್ಗಾರವರು ನಾವು ದಿನಾಂಕ; 17/06/2012 ರಂದು ಮದ್ಯಾನ್ಹ 3-00 ಗಂಟೆಯ ಸುಮಾರಿಗೆ ನಮ್ಮ ವೈಯಕ್ತಿಕ ಕೆಲಸದ ನಿಮಿತ್ಯ ಮನೆಗೆ ಬೀಗ ಹಾಕಿ ಮನೆಯ ಕೆಲಸದವಳಿಗೆ ನಿಗಾ ಇಡುವಂತೆ ಮತ್ತು ರಾತ್ರಿ ಪಕ್ಕದ ಮನೆಯಲ್ಲಿ ಮಲಗುವಂತೆ ಹೇಳಿ ಮನೆಗೆ ಕೀಲಿಹಾಕಿಕೊಂಡು ಹೋಗಿದ್ದೇನು. ದಿನಾಂಕ; 18/06/2012 ರಂದು ಬೆಳಗ್ಗೆ 6-00 ಗಂಟೆಯ ಸುಮಾರಿಗೆ ಮನೆಕೆಲಸದ ಶೈಲಾ ಇವಳು ಮೊಬೈಲ್ ಪೊನ್ ಮುಖಾಂತರ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲ ಕೀಲಿ ಮುರಿದ್ದಿದ್ದಾರೆ ಕೂಡಲೇ ಬರಬೇಕು ಅಂತಾ ತಿಳಿಸಿದ ಪ್ರಕಾರ ನಾನು ಮರಳಿ ಧಾರವಾಡದಿಂದ ಬಂದು ನೋಡಲು ನನ್ನ ಹೆಂಡಿತಿಯವರು ಅಲಮಾರಿಯಟ್ಟಿದ್ದ ಮೂರು ಜೋತೆ ಕಿಯೋಲೆ ಜುಮಕಿ ಸಮೇತ 10 ಗ್ರಾಂ, ನಾಲ್ಕು ಬಳೆಗಳು 50 ಗ್ರಾಂ, ಎರಡು ಮುತ್ತಿನ ಬಳೆಗಳು 25 ಗ್ರಾಂ, ಒಂದು ಚೈನ 5 ಗ್ರಾಂ, ಮೂರು ಸಣ್ಣ ಉಂಗರಳಗಳು 10 ಗ್ರಾಂ, ಹೀಗೆ ಒಟ್ಟು 10 ತೋಲೆ ಬಂಗಾರದ ಆಭರಣಗಳು ಅಂದಾಜ 2,50,000=00 ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 86/2012 ಕಲಂ 457,380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.