POLICE BHAVAN KALABURAGI

POLICE BHAVAN KALABURAGI

02 September 2014

Gulbarga District Reported Crimes

ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮರಣ ಹೊಂದಿದ ಪ್ರಕರಣ :
ಕುರಕುಂಟಾ ಠಾಣೆ : ದಿನಾಂಕ 31-08-2014 ರಂದು ಬೆಳಿಗ್ಗೆ 9-30 ಎ ಎಂ ಕ್ಕೆ ನಿಂಗಪ್ಪಾ ರವರು ತನ್ನ ಎತ್ತುಗಳು ಮತ್ತು ನರಸಿಂಹಲೂ ರವರ ಎತ್ತುಗಳು ಮೇಯಿಸಲಿಕ್ಕೆ ತೆಗೆದುಕೊಂಡು ಹೋಗಿದ್ದು ಇಲ್ಲಿಯವರೆಗೆ ಮರಳಿ ಬರದೆ ಎತ್ತುಗಳು ಮಾತ್ರ ಬಂದಿದ್ದು ಸೌಂಶಯ ಬಂದು ಸೋಗಿಲ ಹಳ್ಳದಲ್ಲಿ ಹುಡುಕುತ್ತಿರುವಾಗ  ಎಡಳ್ಳಿ ಗ್ರಾಮದ ಮಹಾದೇವಪ್ಪಾ ಪೂಜಾರಿ ರವರ ಹೋಲದ ಪಕ್ಕದಲ್ಲಿ ಇಂದು ದಿನಾಂಕ 02-09-2014 ರಂದು 10-30 ಎ ಎಂ ಕ್ಕೆ ಮೃತ ನಿಂಗಪ್ಪಾನ ಶವ ಸಿಕ್ಕಿರುತ್ತದೆ ಸದರಿಯವನು ಸೋಗಿಲು ಹಳ್ಳವನ್ನು ದಾಟಿ ಎತ್ತುಗಳನ್ನು ಮೇಯಿಸಿಕೊಂಡು ಮರಳಿ ಅದೇ ಧಾರಿಯಿಂದ ಬರುವಾಗ ಸೋಗಿಲ ಹಳ್ಳದಲ್ಲಿ ನೀರಿನ ಪ್ರಮಾಣ ಹಚ್ಚಾಗಿದ್ದರಿಂದ  ಸದರಿ ನಿಂಗಪ್ಪಾನು ಪ್ರಕೃತಿಕವಾಗಿ ನೀರಿನಲ್ಲಿ ಕೋಚ್ಚಿಕೊಂಡು ಹೋಗಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಬೀರಪ್ಪಾ ತಂದೆ ಅಮಣ್ಣಾ ಅಮಣೋರ ಸಾ:ಕುರಕುಂಟಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರೇವಣಸಿದ್ದಪ ತಂದೆ ಮಲ್ಲೇಶಪ್ಪಾ ಅಗಸ್ತಿಧಗ  ಸಾ: ನಂದಿಕೂರ ಹಾ:ವ: ಬಸವಣ್ಣ ದೇವರಗುಡಿ ಹತ್ತಿರ ಜಗತ ಗುಲಬರ್ಗಾ ರವರು ದಿನಾಂಕ 01-09-2014 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿಯು ಮೋ/ಸೈಕಲ ನಂಬರ ಕೆಎ-32 ಇಬಿ-4422 ನೇದ್ದರ ಮೇಲೆ ಹಿಂದುಗಡೆ ಅವರ ಹೆಂಡತಿಯಾದ ಸುಮೇದಾ ಇವಳನ್ನು ಕೂಡಿಸಿಕೊಂಡು ಹಳೇ ಜೆವರ್ಗಿ ರೋಡ ರೇಲ್ವೆ ಅಂಡರ ಬ್ರೀಡ್ಜ ಮೂಲಕ ನಂದಕೂರ ಗ್ರಾಮಕ್ಕೆ ಹೋಗುವಾಗ ದಾರಿ ಮದ್ಯ ದೇವಾ ನಗರ ಕ್ರಾಸ್ ಸಮೀಪ ಇರುವ ಕ್ರೌನ ಆಕ್ರೀಡ ಕಾಂಪ್ಲೇಕ್ಸ ರೋಡಿನ ಮೇಲೆ ಎದುರುಗಡೆಯಿಂದ ಗೂಡ್ಸ ಟಂಟಂ ನಂಬರ ಕೆಎ-32 ಎ-8857 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಬಲಗೈ ಮುಂಗೈ ಹತ್ತಿರ ರಕ್ತಗಾಯವಾಗಿತ್ತು. ಸುಮೇದಾ ಇವಳಗಿ ಬಲಗೈ ಮುಂಗೈ ಹತ್ತಿರ ಭಾರಿರಕ್ತಗಾಯ, ಬಲ ಹಣೆಯ ಮೇಲೆ ತರಚಿದಗಾಯ, ಹಾಗು ಬಲ ಸೊಂಟಕ್ಕೆ ಒಳಪೆಟ್ಟು ಮಾಡಿ ಟಂಟಂ ಚಾಲಕ ಟಂಟಂ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 01-09-2014 ರಂದು 05-30 ಪಿ.ಎಮ್ ಕ್ಕೆ ಕೆ.ಸಿ.ಟಿ ಕಾಲೇಜ ಎದರುಗಡೆ ಇರುವ ಶ್ರೀಮತಿ ನಾಹಿದ ಅಪ್ರೋಜ ಗಂಡ ಸೈಯದ ಮತ್ತಿನ ಅಹ್ಮದ ಸಾ|| ಇಸ್ಲಾಂಬಾದ ಕಾಲೋನಿ ಗುಲಬರ್ಗಾ, ಮನೆಯ ಎದರುಗಡೆ ರೋಡಿನ ಮೇಲೆ ಮಗಳಾದ ಜೈನಾಬ ಫಾತಿಮಾ ವಃ 4 ವರ್ಷ ಇವಳು ಸ್ಕೂಲ ವ್ಯಾನ ದಿಂದ ಇಳಿದು ನಡೆದುಕೊಂಡು ರೋಡ ದಾಟುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 32 ಇ.ಬಿ 3783 ನೇದ್ದರ ಚಾಲಕ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಹೋಗಿ ಮಗಳಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಮೋಟಾರ ಸೈಕಲ್ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ಜೈನಾ ಫಾತಿಮಾ ಇವಳಿಗೆ ಎಡಗೈ ರಿಸ್ಟ ಹತ್ತಿರ ಮತ್ತು ಬಲಗಾಲು ಮೊಳಕಾಲು ಹತ್ತಿರ ರಕ್ತಗಾಯಗಳಾಗಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅನೀಲ ತಂದೆ ಮಹಾರುದ್ರಪ್ಪಾ ಸಿಂದಗಿ ಸಾ:ತೊಟಪ್ಪಾಚಾಳ ಪಿ.ಜಿ. ಷಹಾ ಆಸ್ಪತ್ರೆ ಹತ್ತಿರ ಐ.ಓನ.ಶಾಹಿ ರೋಡ ಗುಲಬರ್ಗಾ ಇವರು ದಿನಾಂಕ:14/08/2014 ರಂದು ಬೆಳಗ್ಗೆ 8.00 ಗಂಟೆಗೆ ನಾನು ಗುಲಬರ್ಗಾ ನಗರದ ಶ್ರೀ ಶರಣಬಸವೇಶ್ವರ ಗುಡಿಯ ಆವರಣದಲ್ಲಿ ತನ್ನ ಹೊಂಡಾ ಆಕ್ಟೀವ ಮೋಟಾರ ಸೈಕಲ ನಂ.ಕೆಎ-36 ಯು-8866 ನೇದ್ದನ್ನು ನಿಲ್ಲಿಸಿ ನಾನು ದೇವರ ದರ್ಶನ ಮಾಡಿಕೊಂಡು ಮರಳಿ 11.00 ಗಂಟೆಗೆ ನನ್ನ ಮೋಟಾರ ಸೈಕಲ ಹತ್ತಿರ ಬಂದು ನೋಡಲು ಅಲ್ಲಿ ನನ್ನ ಮೋಟಾರ ಸೈಕಲ ಇರಲಿಲ್ಲ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟಾರ ಸೈಕಲ ಪತ್ತೆಯಾಗಿರುವುದಿಲ್ಲಾ ನನ್ನ ಹೊಂಡಾ ಎಕ್ಟೀವ ನಂ.ಕೆಎ-36 ಯು-8866 ಅ.ಕಿ.40000/-ರೂ ಬೆಲೆಬಾಳುವದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ:- 31/08/2014 ರಂದು ರಾತ್ರಿ ಸುಮಾರು 9 ಗಂಟೆಗೆ ಶ್ರೀಮತಿ ಸಿದ್ದಮ್ಮ ಗಂಡ ಮಾಳಪ್ಪ ಯಲ್ಲಗೋಳ ಸಾ ಬಳುರ್ಗಿ ಇವರ  ಮಗ ಪುತ್ರಪ್ಪ ಇತನು ಸರಾಯಿ ಕುಡಿದ ಅಮಲಿನಲ್ಲಿ ಉಟಮಾಡದೆ ನನಗೆ ತುಂಬಾ ತ್ರಾಸ ಆಗುತ್ತಿದೆ ಅಂತ ಹೇಳಿ ಹೊರಗಡೆ ತಿರುಗಾಡಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋದ ನಂತರ ನಾವು ಸ್ವಲ್ಪ ಹೊತ್ತು ಕಾಯ್ದು ನಾವು ಮಲಗಿಕೊಂಡೆವು ಬೆಳಿಗ್ಗೆ 6 ಗಂಟೆಗೆ ನಮ್ಮೂರ ಶಿವಣ್ಣ ಬಿಝಗೇರಿಯವರು ನಮ್ಮ ಮನೆಯಗೆ ಬಂದು ನಿಮ್ಮ ಮಗ ಪುತ್ರಪ್ಪ ಇವನು ರಾತ್ರಿ ವೇಳೆಯಲ್ಲಿ ನಮ್ಮ ಮನೆ ಹತ್ತಿರ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತ ಹೇಳಿದ್ದರು ನಾನು ಮತ್ತು ನನ್ನ ಎರಡು ಮಕ್ಕಳು ಹಾಗೂ ಸೋಸೆ ಶಾಂತಾಬಾಯಿ ಎಲ್ಲರು ಕುಡಿಕೊಂಡು ಮಾಳಿಂಗರಾಯ ಗುಡಿ ಹತ್ತಿರ ಬಂದು ನೋಡಲಾಗಿ ನನ್ನ ಮಗ ಪುತ್ರಪ್ಪ ಇವನು ತನ್ನ ಪ್ಯಾಂಟ್ ಮತ್ತು ಶರ್ಟ್ ನಿಂದ ಕುತ್ತಿಗೆಗೆ ಕಟ್ಟಿಕೊಂಡು ಬೇವಿನ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅತ್ಯಾಚಾರ ಮಾಡಿ ಕಿರುಕಳ ನೀಡಿದ ಪ್ರಕರಣ :

ನಿಂಬರ್ಗಾ ಠಾಣೆ : ಶ್ರೀಮತಿ ಇವರು 07 ವರ್ಷಗಳ ಹಿಂದೆ ಜಿಲಾನಿ ತಂದೆ ಬಾಬು ಆಳಂದ ಸಾ|| ಸುಂಟನೂರ ಎಂಬುವವನೊಂದಿಗೆ ವಿವಾಹವಾಗಿದ್ದು ಮಕ್ಕಳಾಗಿರುವದಿಲ್ಲ, ನನ್ನ ಗಂಡನಾದ ಜಿಲಾನಿ ಇತನು ಸುಮಾರು 2 ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಕೂಲಿ ಕೆಲಸಕ್ಕೆ ಅಂತ ಹೋಗಿದ್ದು ನಾನು ಗ್ರಾಮದಲ್ಲಿ ವಾಸಿಸುತ್ತಿದ್ದೆನು. 2013 ನೇ ಸಾಲಿನ ರಂಜಾನ ಹಬ್ಬಕ್ಕಿಂತ 1 ತಿಂಗಳ ಮುಂಚೆ ಒಂದು ದಿನ ದಿನಾಂಕ 08/07/2013 ರಂದು ಫಕ್ರೂದ್ದೀನ ಇತನು ಮನೆಯಲ್ಲಿಯೆ ಇದ್ದು ರಾತ್ರಿ 1100 ಗಂಟೆ ವೇಳೆಗೆ ನಾನು ನಮ್ಮ ಮನೆಯ ಅಡುಗೆ ಕೊಣೆಯಲ್ಲಿ ಮಲಗಿಕೊಂಡಿದ್ದು ಅಡುಗೆ ಮನೆಯ ಕೊಣೆಯ ಬಾಗಿಲು ಮುಂದಕ್ಕೆ ಮಾಡಿದ್ದೆನು. ಅಂದಾಜ ರಾತ್ರಿ 1130 ಗಂಟೆಗೆ ಫಕ್ರೂದ್ದೀನ ಇತನು ಅಡುಗೆ ಮನೆಯ ಬಾಗಿಲು ತೆಗೆದು ಒಳಗೆ ಬಂದವನೆ ಒಮ್ಮಿಂದೊಮ್ಮೆಲೆ ನನ್ನ ಮೈಮೇಲೆ ಬಿದ್ದು ಬಾಯಿ ಒತ್ತಿ ಹಿಡಿದು ನಾನು ನಿನ್ನ ಜೊತೆ ಮಲಗಿಕೊಳ್ಳುತ್ತೇನೆ ನೀನು ಚೀರಾಡಿದ್ದೆ ಆದಲ್ಲಿ ಅಲ್ಲದೆ ಈ ವಿಷಯ ಯಾರಿಗಾದರೂ ಹೇಳಿದ್ದೆ ಆದಲ್ಲಿ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಹೆದರಿಕೆ ಹಾಕಿ ನನಗೆ ಬಲವಂತದಿಂದ ಸಂಭೋಗ ಮಾಡಿರುತ್ತಾನೆ. ನಾನು ಇದರಿಂದ ಭಯಗೊಂಡು ಯಾರಿಗೂ ಹೇಳದೆ ಇದ್ದು ಫಕ್ರೂದ್ದೀನನು ಇದೇ ರೀತಿ ದಿನಾಂಕ 08/07/2013 ರಿಂದ 11/07/2013 ರವರೆಗೆ ಅಂದರೆ ಸೋಮವಾರದಿಂದ ಗುರುವಾರದವರೆಗೆ 04 ದಿನಗಳವರೆಗೆ ನನಗೆ ಭಯ ಪಡಿಸಿ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ. ಇದಾದ ಸ್ವಲ್ಪ ದಿನಗಳಲ್ಲಿ ನನ್ನ ತಂಗಿಯಾದ ಕೌಸರ ಇವಳ ಲಗ್ನದ ನಿಮಿತ್ಯ ನನ್ನ ತವರು ಮನೆಗೆ ಹೋಗಿ ಮದುವೆ ಕಾರ್ಯಕ್ರಮ ಮುಗಿಸಿ 08 ದಿವಸಗಳ ನಂತರ ನನ್ನ ಗಂಡನಾದ ಜಿಲಾನಿ ಇತನು ನನ್ನ ಅಣ್ಣನಾದ ಫಕೀರಸಾಬ ತಂದೆ ಇಮಾಮಸಾಬ ಇನಾಮದಾರ ಇತನ ಮೊಬೈಲಗೆ ಫೋನ ಹಚ್ಚಿದ್ದು ನನ್ನೊಂದಿಗೆ ಮಾತನಾಡುವಾಗ ಸದರಿ ವಿಷಯವನ್ನು ನನ್ನ ಗಂಡನಿಗೆ ತಿಳಿಸಿದೆನು. ಇದಕ್ಕೆ ನನ್ನ ಗಂಡನು ನಾನು ಬರುವ ವರೆಗೆ ನೀನು  ಈ ವಿಷಯವನ್ನು ಯಾರ ಮುಂದೆಯು ಹೇಳಬೇಡ ನಾನು ಬಂದು ಬಗೆ ಹರಿಸಿ ನನ್ನ ಹತ್ತಿರ ಇಟ್ಟುಕೊಳ್ಳುತ್ತೇನೆ. ನೀನು ಊರಿಗೆ ಹೋಗು ಅಂತ ತಿಳಿಸಿದ್ದು, ನಾನು ಫಕ್ರೂದ್ದೀನನಿಂದ ನನ್ನ ಮೇಲಾದ ದೌರ್ಜನ್ಯದಿಂದಾಗಿ ಭಯ ಪಟ್ಟು ನಾನು ಗ್ರಾಮಕ್ಕೆ ಹೋಗಿರುವದಿಲ್ಲ. ಈಗ ಅಂದರೆ 03 ತಿಂಗಳ ಹಿಂದೆ ನನ್ನ ಗಂಡನಾದ ಜಿಲಾನಿ ಇತನು ಸೌದಿ ಅರೇಬಿಯಾದಿಂದ ಗ್ರಾಮಕ್ಕೆ ಬಂದಿದ್ದು, ದಿನಾಂಕ 15/06/2014 ರಂದು ಮಧ್ಯಾಹ್ನ 02-00 ಗಂಟೆಗೆ ನಾನು, ನನ್ನ ಅಣ್ಣನಾದ ಫಕೀರಸಾಬ, ನನ್ನ ಅಕ್ಕಳಾದ ಶಹೀನಾಬೇಗಂ, ನನ್ನ ಮಾವನಾದ ನಬಿ ಎಲ್ಲರೂ ಸೇರಿ ಸುಂಟನುರ ಗ್ರಾಮಕ್ಕೆ ಹೋದಾಗ ನನ್ನ ಗಂಡನಾದ ಜೀಲಾನಿ ಇತನು ನೀನು ನನ್ನ ತಮ್ಮನಿಂದ ಕೆಟ್ಟ ಹೆಣ್ಣು ನಿನಗೆ ಮನೆಯಲ್ಲಿ ಸೇರಲು ಬಿಡುವದಿಲ್ಲ ನೀನು ನಿನ್ನ ತವರು ಮನೆಗೆ ಹೋಗು ಅಂತ ನನಗೆ ಅಂಗಳದಲ್ಲಿ ದರದರನೆ ಎಳೆದು ಕಪಾಳಕ್ಕೆ ಕೈಯಿಂದ ಹೊಡೆದು ಮನೆಯಿಂದ ಹೊರಗೆ ಹಾಕಿರುತ್ತಾನೆ. ಅದೇ ವೇಳೆಯಲ್ಲಿ ನನ್ನ ಅತ್ತೆಯಾದ ಅಮೀನಾ. ನಾದಿನಿಯಾದ ಗುಲಶನಬಿ ಗಂಡ ಇಬ್ರಾಹಿಂ ಸಾ|| ನಿರಗುಡಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ತಮ್ಮುಗ ಬೇರೆ ಮದುವೆ ಮಾಡುತ್ತೇವೆ ಅಂತ ನಿಂದಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.