POLICE BHAVAN KALABURAGI

POLICE BHAVAN KALABURAGI

27 August 2015

Kalaburagi District Reported Crimes.

ಗ್ರಾಮೀಣ  ಠಾಣೆ : ದಿನಾಂಕ: 27/08/2015 ರಂದು 11-00 ಎಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಶಂಕರ ತಂದೆ ಶರಣಪ್ಪ ಹಡಪದ ವಯ: 31 ವರ್ಷ ಜಾತಿ: ಹಡಪದ ಉ: ಕ್ಷೌರಿಕ ಕೆಲಸ ಸಾ: ಹಸರಗುಂಡಗಿ ತಾ: ಅಫಜಲಪೂರ ಹಾ:ವ: ಕಮಲನಗರ ಸುಲ್ತಾನಪೂರ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ಅರ್ಜಿ ಏನೆಂದರೆ, ನಾನು ಈಗ್ಗೆ 15 ವರ್ಷಗಳಿಂದ ಕಮಲನಗರದಲ್ಲಿ ಹೆಂಡತಿ ಮಗನೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ಈಗ್ಗೆ 6 ತಿಂಗಳಿಂದ ಕಮಲನಗರದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು  ದಿನಾಂಕ: 26/08/2015 ರಂದು ನಾನು ಎಂದಿನಂತೆ ಕೆಲಸ ಮುಗಿಸಿಕೊಂಡು ನಮ್ಮ ಅಣ್ಣನ ಮಗ ಅಂಬ್ರೇಶನೊಂದಿಗೆ ರಾತ್ರಿ 10-00 ಗಂಟೆಗೆ ಕಮಲನಗರದಲ್ಲಿರುವ ನಮ್ಮ ಮನೆಗೆ ಬಂದು ನನ್ನ ಹೆಂಡತಿಯೊಂದಿಗೆ ಊಟ ಮುಗಿಸಿಕೊಂಡು ನಾವೆಲ್ಲರೂ ನಮ್ಮ ಮನೆಯ ಎರಡೂ  ಬಾಗಿಲ ಕೀಲಿ ಹಾಕಿಕೊಂಡು ಮಾಳಿಗೆ ಮೇಲೆ ಹೋಗಿ ಮಲಗಿಕೊಂಡೆವು. ನಂತರ ದಿನಾಂಕ: 27/08/2015 ರಂದು ರಾತ್ರಿ 1-00 ಎಎಮ್ ಸುಮಾರಿಗೆ ಮಾಳಿಗೆ ಮೇಲಿಂದ ಎದ್ದು ನಾನು ನನ್ನ ಹೆಂಡತಿ ಕೆಳಗೆ ಬಂದು ಒಂದು ಕೋಣೆಯಲ್ಲಿ ಮಲಗಿಕೊಂಡೆವು. ನಂತರ ಎಂದಿನಂತೆ ಬೆಳಿಗ್ಗೆ 6-00 ಗಂಟೆ   ಸುಮಾರಿಗೆ ಎದ್ದು ಬಾಗಿಲು ತೆರೆಯಲು ಬಾಗಿಲು ತೆರೆಯಲಿಲ್ಲ. ಯಾರೋ ಹೊರಗಡೆಯಿಂದ ಬಾಗಿಲ ಕೊಂಡಿ ಹಾಕಿದ್ದು ನಾನು ಅಂಬ್ರೇಶನಿಗೆ ಫೋನ ಮಾಡಿ ಬಾಗಿಲು ತೆಗೆಯಲು ಹೇಳಿದಾಗ ಅಂಬ್ರೇಶನು ಮಾಳಿಗೆ ಮೇಲಿಂದ ಕೆಳಗೆ ಇಳಿದು ಬಂದು ನಾವಿದ್ದ ರೂಮನ ಬಾಗಿಲು ತೆರೆದನು. ನಾನು ಹೊರಗೆ ಬಂದು ನೋಡಲು  ನಮ್ಮ ಮನೆಯ ಇನ್ನೊಂದು  ಕೋಣೆಯ ಬಾಗಿಲ ಕೀಲಿ ಕೊಂಡಿ ಮುರಿದಿದ್ದು ಬಾಗಿಲು ಅರ್ಧ ತೆರೆದಿರುವುದನ್ನು ನೋಡಿ ನಾನು ನನ್ನ ಹೆಂಡತಿ ಮತ್ತು ಅಂಬ್ರೇಶ ಗಾಬರಿಯಿಂದ ಒಳಗೆ ಹೋಗಿ ನೋಡಲು ಅಲಮಾರಾದ ಬಾಗಿಲು ತೆರೆದಿದ್ದು ಅಲಮಾರಾದ ಒಳಗಡೆ ಲಾಕರ್ ಮುರಿದಿದ್ದು ಅಲಮಾರಾದಲ್ಲಿಟ್ಟ ಸಾಮಾನುಗಳೆಲ್ಲ ಹೊರಗಡೆ ಬಿದ್ದಿದ್ದು ಕಂಡು ನಾವು ಗಾಬರಿಯಿಂದ ಅಲಮಾರಾದಲ್ಲಿಟ್ಟಿದ್ದ ನಮ್ಮ ಮದುವೆ ಸಮಯದಲ್ಲಿ 2005ರಲ್ಲಿ ಖರೀದಿಸಿದ್ದ ಹಳೆಯ 1) 10 ಗ್ರಾಂ ಬಂಗಾರದ ಲಾಕೇಟ ಅ.ಕಿ= 10000/-ರೂ 2) 10 ಗ್ರಾಂ ಬಂಗಾರದ 2ತಾಳಿ ಮತ್ತು ಅಷ್ಟಪುಲಿ ಗುಂಡುಗಳು ಅ.ಕಿ= 10000/-ರೂ ಹಾಗೂ 3) 5 ಗ್ರಾಂ ಬಂಗಾರದ ಕಿವಿಯ ಜುಮಕಿ ಬೆಂಡೋಲೆ ಅ.ಕಿ= 4500/- ರೂ ಹೀಗೆ ಒಟ್ಟು 24500/-ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 27/08/2015 ರಂದು ರಾತ್ರಿ 1-00 ಎಎಮ್ ದಿಂದ ಬೆಳಿಗ್ಗೆ 6-00 ಗಂಟೆ ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಬಾಗಿಲ ಕೊಂಡಿ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನವಾದ ನಮ್ಮ ಬಂಗಾರದ ಆಭರಣಗಳನ್ನು ಪತ್ತೆ ಹಚ್ಚಿ ನಮಗೆ ವಾಪಸ್ಸು ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಫಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಗೈರೆ ಅರ್ಜಿ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ಧಾಖಲಾಗಿರುತ್ದೆ.
ಹೆಚ್ಚುವರಿ ಸಂಚಾರಿ ಠಾಣೆ: ದಿನಾಂಕ 27-08-2015 ರಂದು ಮದ್ಯಾಹ್ನ 12-00 ಗಂಟೆಗೆ ಗುರುರಾಜ ತಂದೆ ಶರಣಬಸಪ್ಪಾ ಬಿರಾದಾರ ಇತನು  ಮೋಟಾರ ಸೈಕಲ ನಂ ಕೆಎ32/ಇಬಿ-1761 ನೇದ್ದನ್ನು ಮುಕ್ತಾಂಬಿಕ ಕಾಲೇಜ ಕಡೆಯಿಂದ ಗೋವಾ ಹೋಟೆಲ ಕ್ರಾಸ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ ಲಾಲಗೇರಿ ಕ್ರಾಸ ಮತ್ತು ಗೋವಾ  ಹೋಟೆಲ ಕ್ರಾಸ  ಮುಖ್ಯ ರಸ್ತೆ ಮೇಲೆ ಬರುವ  ಅರಬ ಮಜೀದ್ ಸಮೀಪ್ ಬರುವ ಪ್ರತಿಭಾ  ಡಿಜಿಟಲ್ ಸ್ಟೂಡಿಯೋ ಎದುರು ರೋಡ ಮೇಲೆ ಒಮ್ಮೇಲೆ ಬ್ರೇಕ್ ಹಾಕಿ ಮೋಟಾರ ಸೈಕಲ ಸ್ಕೀಡ ಮಾಡಿ ತನ್ನಿಂದತಾನೆ ಬಿದ್ದು ತೆಲೆಗೆ ಭಾರಿ ಗುಪ್ತ ಪೆಟ್ಟು ಮತ್ತು ಮೈಯಲ್ಲ ಒಳಪೆಟ್ಟು ಹೊಂದಿ  108 ಅಂಬುಲೇನ್ಸ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಧಾರಿ ಮದ್ಯ ಮದ್ಯಹ್ನ 12-00 ಗಂಟೆಯಿಂದ 12-35 ಗಂಟೆಯ ಅವದಿಯ ಮದ್ಯದಲ್ಲಿ ಮೃತ ಪಟ್ಟಿದ್ದು ಇರುತ್ತದೆ  ಅಂತಾ ಪ್ರಕಾರ ಪ್ರಕರಣ ಧಾಖಲಾಗಿರುತ್ದೆ.

ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 27.08.2015 ರಂದು 08:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 26.08.2015 ಸಾಯಂಕಾಲ 07:45 ಗಂಟೆಯ ಸುಮಾರಿಗೆ ಬೂತಪುರ ಕಲ್ಯಾಣ ಮಂಟಪದ ಹತ್ತಿರ ಜೇವರಗಿ ಶಹಾಪುರ ರಸ್ತೆಯ ಮೇಲೆ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು 45 ರಿಂದ 50 ವಯಸ್ಸಿನ ಅಪರಿಚತ ಮಹಿಳೆಗೆ ಡಿಕ್ಕಿ ಪಡಿಸಿ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಸದರಿ ಅಪಘಾತದಿಂದ ಅಪರಿಚಿತ ಮಹಿಳೆಯ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರಗಿಯಲ್ಲಿ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೆ ಸದರಿ ಅಪರಿಚಿತ ಮಹಿಳೆಯು ದಿನಾಂಕ 26.08.15 ರಂದು ರಾತ್ರಿ 09:20 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಕಾರಣ ಸದರಿ ವಾಹನ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ಧಾಖಲಾಗಿರುತ್ದೆ. 

Kalaburagi District Reported Crimes

ಅಫಜಲಪೂರ ಠಾಣೆ : ಫಿರ್ಯಾದುದಾರರು ಶ್ರೀ ವಿವೇಕಾನಂದ ಪ್ರಾಥಮಿಕ ಶಾಲೆ ಕರಜಗಿ ನೇದ್ದರ ಉಪಾಧ್ಯಕ್ಷರಾಗಿದ್ದು ಇರುತ್ತದೆ. ದಿನಾಂಕ:- 26/08/2015 ರಂದು ಮದ್ಯಾಹ್ನ 3:35 ಗಂಟೆಗೆ ಆರೋಪಿತರು ಫಿರ್ಯಾದುದಾರರ ಶಾಲೆಗೆ ಬಂದು ಶಾಲೆಯ ಕಾರ್ಯಾಲಯದಲ್ಲಿ ಕುಳಿತಿರುವ ಫಿರ್ಯಾದುದಾರರನ್ನು ಹಾಗೂ ಸದರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಭಗವಂತರಾಯ ಬಾಬುರಾವ ಅಳ್ಳಗಿ ಇಬ್ಬರ ಮೇಲು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಶಾಲೆ ನಡೆಸದಂತೆ ಫಿರ್ಯಾದುದಾರರಿಗೆ ಧಮಕಿ ಹಾಗೂ ಜೀವ ಬೆದರಿಕೆ ಹಾಕಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಬೇಕೆಂದು ಕೊಟ್ಟ ಫಿರ್ಯಾದಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಚೌಕ  ಠಾಣೆ : ದಿನಾಂಕ 26.08.2015 ರಂದು ಸಾಯಂಕಾಲ 06-30 ಪಿ.ಎಂ.ಕ್ಕೆ ನಾನು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಠಾಣಾ ವ್ಯಾಪ್ತಿಯ ನೆಹರು ಗಂಜಿನ ಎಂ.ಎಸ್.ಪಾಟೀಲ್ ಅಡತಿಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದು, ಸಿಬ್ಬಂದಿ ಜನರಾದ ಮೋಸಿನ್ ಪಿಸಿ 811, ಮಹಾಂತೇಶ ಪಿಸಿ 716, ವಿನೋದ ಪಿಸಿ 444 ಮತ್ತು ಜೀಪ್ ಚಾಲಕ ಪಿಸಿ 158 ಶರೀಫ ರವರು ಮತ್ತು ಇಬ್ಬರು ಪಂಚ ಜನರಾದ   1) ಸಂತೋಷ ತಂದೆ ಮಲಕಣ್ಣ ಬಾಳಿ ವಯ: 26 ವರ್ಷ ಉ: ಅಡತ ವ್ಯಾಪಾರ ಜಾ: ಲಿಂಗಾಯತ ಉ: ಮನೆ ನಂ: 8-1535, ನಂದಿ ಕಾಲೂನಿ ಕಲಬುರಗಿ  2) ವಿರೇಶ ತಂದೆ ಶಿವಯ್ಯ ಹಿರೇಮಠ ವ: 25 ಉ: ಅಟೋರಿಕ್ಷಾ ಚಾಲಕ ಜಾತಿ: ಜಂಗಮ  ಸಾ: ಮನೆ ನಂ: 8-1545/4ಬಿ ನಂದಿ ಕಾಲೂನಿ ಕಲಬುರಗಿ ರವರನ್ನು ಠಾಣೆಗೆ ಬರಮಾಡಿಕೊಂಡು ಅವರು ಬಂದ ನಂತರ ಠಾಣೆಯ  ಸಿಬ್ಬಂದಿಯವರಿಗೆ ಮತ್ತು ಪಂಚರಿಗೆ ವಿಷಯ ತಿಳಿಯ ಹೇಳಿ ನಾವು ಮಾಡುವ ದಾಳಿಯ ಕಾಲಕ್ಕೆ ಹಾಜರ ಇದ್ದು ಪಂಚನಾಮೆ ಬರೆಸಿಕೊಡಲು ಒಪ್ಪಿಕೊಂಡಿದ್ದು ನಂತರ ಪಂಚರ ನಾನು ಮತ್ತು ಸಿಬ್ಬಂದಿ  ಕೂಡಿಕೊಂಡು ಠಾಣೆಗೆ ಒದಗಿಸಿ ಜೀಪ ನಂ ಕೆಎ-32-ಜಿ-639 ನೇದ್ದರಲ್ಲಿ ಕುಳಿತು ಬಾತ್ಮಿಯಂತೆ ನೆಹರು ಗಂಜ ಹನುಮಾನ ದೇವಸ್ಥಾನದ ಹತ್ತಿರ ಅಡತದ ಮರೆಯಲ್ಲಿ ಸಾಯಂಕಾಲ 06-45 ಪಿಎಂಕ್ಕೆ ಠಾಣೆಯಿಂದ ಹೊರಟು 07-00 ಪಿ.ಎಂ.ಕ್ಕೆ ಬಾತ್ಮೀ ಬಂದ ಸ್ಥಳಕೆಕ ಹೋಗಿ ಅಡತ ಮರೆಯಲ್ಲಿ ನಿಂತು ನೋಡಲು ಎಂ.ಎಸ್. ಪಾಟೀಲ್ ಇವರ ಅಡತಿಯ ಪಕ್ಕದ ಸಾರ್ವಜನಿಕ   ಖುಲ್ಲಾ ಬಯಲು ಜಾಗೆಯ 6 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ಅಜರ್ುನ ತಂದೆ ಶರಣಪ್ಪ ಪೂಜಾರಿ ವಯ: 55 ವರ್ಷ ಜಾ: ಕುರುಬರ ಉ: ಅಡತದಲ್ಲಿ ಮುನೀಮ ಕೆಲಸ ಸಾ:ಮಲ್ಲಿಕಾಜರ್ುನ ದೇವಸ್ಥಾನದ ಹತ್ತಿರ, ತಾಜ ಸುಲ್ತಾನಪೂರ ತಾ:ಜಿ:ಕಲಬುರಗಿ  ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 570 ರೂ. ನಗದು ಹಣ, 20 ಇಸ್ಪೇಟ ಎಲೆಗಳು ದೊರೆತಿದ್ದು 2) ಶರಣಬಸಪ್ಪ ತಂದೆ ಚಂದ್ರಶ್ಯಾ ಚಿಂಚೋಳಿ  ವಯ: 37 ವರ್ಷ ಜಾ:ಲಿಂಗಾಯತ ಉ: ಅಡತದಲ್ಲಿ ಗುಮಾಸ್ತ ಕೆಲಸ ಸಾ:ಮನೆ ನಂ: 9-586/3, ಶೆಟ್ಟಿ ಟಾಕೀಜ್ ಹತ್ತಿರ, ವಿಶ್ವರಾಧ್ಯ ಕಾಲೂನಿ, ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 400 ರೂ. ನಗದು ಹಣ, 25 ಇಸ್ಪೇಟ ಎಲೆಗಳು ದೊರೆತಿದ್ದು 3) ಶರಣಬಸಪ್ಪ ತಂದೆ ಗಂಗಾಧರ ಡಿಗ್ಗಿ ವಯ: 35 ವರ್ಷ ಜಾ: ಲಿಂಗಾಯತ ಉ: ಅಡತದಲ್ಲಿ ಗುಮಾಸ್ತ ಸಾ: ರುದ್ರಪ್ಪ ಪಾಟೀಲರ ಮನೆಯಲ್ಲಿ ಬಾಡಿಗೆ, ಭವಾನಿ ನಗರ, ತಾಜಬಾಬಾ ದಗರ್ಾ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 350 ರೂ. ನಗದು ಹಣ ದೊರೆತಿದ್ದು 4) ಮಾಣಿಕಪ್ಪ ತಂದೆ ಮಡೆಪ್ಪ ಕೊಡ್ಲಿ ವಯ: 53 ವರ್ಷ ಜಾ:ಲಿಂಗಾಯತ ಉ: ಅಡತದಲ್ಲಿ ಮುನೀಮ ಸಾ: ಬಸವರಾಜ ಬಾಳಿ ರವರ ಮನೆಯಲ್ಲಿ ಬಾಡಿಗೆ, ಮುನೀಮ ಸಂಘ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 450 ರೂ. ನಗದು ಹಣ ದೊರೆತಿದ್ದು 5) ಮಹಾಂತೇಶ ತಂದೆ ಚಂದ್ರಶೇಖರ ತರನಳ್ಳಿ ವಯ: 43ವರ್ಷ ಜಾ: ಲಿಂಗಾಯತ ಉ: ಅಡತದಲ್ಲಿ ಮುನೀಮ ಕೆಲಸ ಸಾ: ಮನೆ ನಂ: 8-849, ಲೋಹಾರ ಗಲ್ಲಿ, ಮಹಾದೇವ ನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 250 ರೂ. ನಗದು ಹಣ ದೊರೆತಿದ್ದು 6. ಸಿದ್ದಣ್ಣ ತಂದೆ ವಿಠಪ್ಪ  ವಯ:  63 ವರ್ಷ ಜಾ: ಪ.ಜಾತಿ ಉ: ಒಕ್ಕಲುತನ ಸಾ: ಶಹಾ ಬಜಾರ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನ ಅಂಗ ಶೋಧನೆ ಮಾಡಲಾಗಿ ಸದರಿಯವನ ಹತ್ತಿರ ರೂ. 500 ದೊರೆತಿದ್ದು ಮತ್ತು ಸ್ಥಳದಲ್ಲಿ ನಗದು ಹಣ 260 ರೂಪಾಯಿ, 7 ಎಲೆಗಳು ಹೀಗೆ ಒಟ್ಟು ಹಣ 2780 ರೂ. ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ 07-15 ಪಿ.ಎಂ.ದಿಂದ 08-15 ಪಿ.ಎಂ.ದ ವರೆಗೆ ಸ್ಥಳದಲ್ಲಿದ್ದ ಪ್ರಖರವಾದ ಬೀದಿ ಮರ್ಕ್ಯೂರಿ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿ ಮಾಡಿದ ಮುದ್ದೇಮಾಲಿಗೆ ಪಂಚರು ಸಹಿಮಾಡಿದ ಚೀಟಿ ಅಂಟಿಸಿ ಕೇಸಿನ ಸಾಕ್ಷಿ ಪುರಾವೆಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡೆನು. ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತರನ್ನು ಠಾಣೆಗೆ 09-00 ಪಿ.ಎಂ.ಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸುತ್ತಿದ್ದು ಸದರಿಯವರ ವಿರುಧ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಆದೇಶದಂತೆ ಠಾಣೆ ಗುನ್ನೆ ನಂ. 136/2015 ಕಲಂ. 87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಿಂಬರ್ಗಾ  ಠಾಣೆ : ದಿನಾಂಕ 26/08/2015 ರಂದು 2030 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ  ಕಸ್ತೂರಿಬಾಯಿ ಗಂಡ ಪ್ರಭು ಬೆನಕನ ವ|| 60 ವರ್ಷ, ಜಾ|| ಹೊಲೆಯ,|| ಮನೆಕೆಲಸ, ಸಾ|| ಯಳಸಂಗಿ ಇವರು ಠಾಣೆಗೆ ಬಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ನನಗೂ ಮತ್ತು ನಮ್ಮ ಬಾಜು ಮನೆಯವರಾದ ಬಸವರಾಜ ತಂದೆ ಭೂತಾಳಿ ಮದಗುಣಕಿ ಇವರಿಗೂ ಸರ್ಕಾರಿ ಮನೆಯ ಜಾಗೆಯ ಸಂಭಂಧ 4-5 ದಿವಸಗಳಿಂದ ತಕರಾರು ನಡೆಯುತ್ತಿದ್ದು ದಿನಾಂಕ 26/08/2015 ರಂದು ಮಧ್ಯಾಹ್ನ 0300 ಗಂಟೆಗೆ ನಾನು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನಿಂತಾಗ ಬಸವರಾಜ ಇತನು ಏ ರಂಡಿ ನಮ್ಮ ಮನೆಯ ಜಾಗಾ ಇನ್ನು ನಿಮ್ಮ ಮನೆಯ ಹದ್ದಿಯೊಳಗೆ ಬರತಾದ ಸುಮ್ಮನೆ ಬಿಟ್ಟುಕೊಟ್ಟರೆ ನಿನಗೆ ಜೀವಂತ ಇಡತೀನಿ ಇಲ್ಲಂದರ ಕೊಡಲಿಯಿಂದ ಹೊಡೆದು ಖಲಾಸ ಮಾಡುತ್ತೀನಿ ರಂಡಿ ಅಂತಾ ಚೀರಾಡುತ್ತಿದ್ದಾಗ ಆತನ ಹೆಂಡತಿಯಾದ ನಾಗಮ್ಮಾ ಗಂಡ ಬಸವರಾಜ ಇವಳು ಬಂದು ಏ ರಂಡಿ ನಿನಗೆ ಬಹಳ ಸೊಕ್ಕು ಬಂದಾಗ ಅಂತ ಬೈದು ಕೈಯಿಂದ ಮುಂದೆ ಹೋಗದಂತೆ ತಡೆದು ಕೈಯಿಂದ ಬೆನ್ನ ಮೇಲೆ ಹೊಡೆದಳು ಬಸವರಾಜ ತಾಯಿಯಾದ ಸುಭದ್ರವ್ವ ಗಂಡ ಭೂತಾಳಿ ಮತ್ತು ಜಗಮ್ಮ ಗಂಡ ದತ್ತಪ್ಪ ಈಶ್ವರನ ಇವರು ಬಂದವರೆ ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿರುತ್ತಾರೆ, ಪ್ರಭು ತಂದೆ ದತ್ತಪ್ಪ ಈಶ್ವರನ ಇವನು ಈ ರಂಡಿಗೆ ಬಿಡಬೇಡರಿ ಅಂತ ಬೆಯ್ಯುತ್ತಿದ್ದಾಗ ಅಮೋಘಸಿದ್ದ ತಂದೆ ಧರ್ಮಣ್ಣ ಮಾಂಗ ಮತ್ತು ಶರಣಬಸಪ್ಪ ತಂದೆ ಬಾಬು ಚಂಡಕೆ ಇವರು ನೋಡಿ ಬಿಡಿಸಿರುತ್ತಾರೆ. ನನಗೆ ಜಗಳದಲ್ಲಿ ಹೇಳಿಕೊಳ್ಳುವಂತಹ ಗಾಯಗಳಾಗಿರುವದಿಲ್ಲ ಮತ್ತು ಯಾವುದೆ ದವಾಖಾನೆ ಉಪಚಾರ ಅಗತ್ಯವಿರುವದಿಲ್ಲ, ಕಾರಣ ಆಪಾದಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಿನಂತಿ ಅಂತ ಕೊಟ್ಟ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.
«±Àé«zÁå®AiÀÄ oÁuÉAiÀÄ :  «±Àé«zÁå®AiÀÄ ¥ÉưøÀ oÁuÉAiÀÄ ªÁå¦ÛAiÀÄ°è ¢£ÁAPÀ: 20/01/2015 gÀAzÀÄ ¨É¼ÀV£À 0900 UÀAmÉUÉ ¸ÀĪÀiÁjUÉ w®PÀ£ÀUÀgÀ PÁæ¸ï ºÀwÛgÀ ¤AvÀ M§â ºÉtÄÚ ªÀÄUÀ¼À PÉÆgÀ½AzÀ 30 UÁæA §AUÁgÀ ªÀÄAUÀ¼À ¸ÀÆvÀæ M§â ¨ÉÊPÀ ¸ÀªÁgÀ PÀ¹zÀÄPÉÆAqÀÄ Nr ºÉÆÃVzÀÄÝ EgÀÄvÀÛzÉ. ¢£ÁAPÀ: 02/05/2015 gÀAzÀÄ gÁwæ 8:30 UÀAmÉAiÀÄ ¸ÀĪÀiÁjUÉ «.n.AiÀÄÄ PÁ¯ÉÃd »AzÀÄUÀqÉ EgÀĪÀ lªÀgÀ ºÀwÛgÀ gÉÆÃr£À ªÉÄÃ¯É ¥Àæ±ÁAvÀ £ÀUÀgÀ(©) PÀ®§ÄgÀV ºÀwÛgÀ M§â ºÉtÄÚ ªÀÄUÀ¼ÀÄ ªÁQAUÀ ªÀiÁqÀĪÁUÀ M§â ¨ÉÊPÀ ¸ÀªÁgÀ ºÉtÄÚ ªÀÄUÀ¼À PÉÆgÀ½AzÀ 45 UÁæA §AUÁgÀ ªÀÄAUÀ¼À ¸ÀÆvÀæ PÀ¹zÀÄPÉÆAqÀÄ Nr ºÉÆVzÀÄÝ EgÀÄvÀÛzÉ. ºÁUÀÆ EzÉ wAUÀ¼À°è NA £ÀUÀgÀ §qÁªÀuÉAiÀÄ CgÀ«AzÀ D±ÀæªÀÄzÀ ºÀwÛgÀ CAzÁdÄ 8:00 ¦.JªÀÄ ¸ÀĪÀiÁjUÉ ºÉtÄÚªÀÄUÀ¼ÀÄ £ÀqÉzÀÄPÉÆAqÀÄ §gÀĪÁUÀ ¸ÀzÀj ºÉtÄÚ ªÀÄUÀ¼À PÉÆgÀ¼À°èAiÀÄ ªÀÄAUÀ¼À ¸ÀÆvÀæ zÉÆÃZÀ®Ä ºÉÆÃzÁUÀ CªÀ¼ÀÄ vÀ£Àß JgÀqÀÄ PÉÊUÀ¼ÀÄ PÉÆgÀ½UÉ »rzÀÄPÉÆArzÀÄÝ ªÀÄAUÀ¼À ¸ÀÆvÀæ PÀ¹AiÀÄ®Ä DVgÀĪÀ¢®è F PÀÄjvÀÄ «±Àé«zÁå®AiÀÄ ¥ÉưøÀ oÁuÉ ºÁUÀÆ JªÀiï.© £ÀUÀgÀ ¥ÉưøÀ oÁuÉAiÀÄ°è ¥ÀæPÀgÀtUÀ¼ÀÄ zÁR¯ÁVzÀÄÝ EgÀÄvÀÛªÉ. ¸ÀzÀj ¥ÀæPÀgÀtUÀ½UÉ ¸ÀA§A¢ü¹zÀAvÉ ªÀiÁ£Àå ²æÃ.C«ÄvÀ ¹AUï J¸ï.¦ ¸ÁºÉç PÀ®§gÀÄV, ªÀiÁ£Àå ²æÃ.dAiÀÄ¥ÀæPÁ±À ºÉZÀÄѪÀj J¸ï.¦ ¸ÁºÉç PÀ®§ÄgÀV, ªÀiÁ£Àå «dAiÀÄ CAa rªÉÊJ¸ï.¦ ¸ÁºÉç UÁæªÀiÁAvÀgÀ G¥À-«¨sÁUÀ, ªÀiÁ£Àå eÉ.ºÉZï E£ÁªÀÄzÁgÀ ¹.¦.L JªÀÄ.© £ÀUÀgÀ ªÀÈvÀÛ PÀ®§ÄgÀV gÀªÀgÀ ªÀiÁUÀðzÀ±Àð£ÀzÀ ªÉÄÃgÉUÉ «±Àé«zÁå®AiÀÄ ¥ÉưøÀ oÁuÉAiÀÄ ²æÃ.f.J¸ï gÁWÀªÉÃAzÀæ ¦.J¸ï.L (PÁ.¸ÀÄ), ºÁUÀÆ C¥ÀgÁzsÀ «¨sÁUÀ ¹§âA¢AiÀĪÀgÁzÀ ¸ÀAvÉƵÀ ¹.¦.¹ 935, zÁåªÀ¥Àà ¹.¦.¹ 942, ¸ÀįÁÛ£À ¹.¦.¹ 958, ªÀÄ°èPÁdÄð£À ¹.¦.¹ 825 gÀªÀgÀÄ DgÉÆæüvÀ£ÁzÀ ¸Á©ÃgÀ@SÁeÁ¥Á±Á vÀAzÉ WÀ¤«ÄAiÀiÁ ªÀAiÀÄ: 20, eÁw: ªÀÄĹèA, G: UÉÆAr PÉ®¸À, ¸Á: UÀr vÁAqÀÆgÀ ¸ÉÖõÀ£À gÉÆÃqÀ vÁAqÀÆgÀ vÁ:f: vÁAqÀÆgÀ DAzÀæ¥ÀæzÉñÀ FvÀ£À£ÀÄß ªÀ±ÀPÉÌ vÉUÉzÀÄPÉÆAqÀÄ DgÉÆævÀ¤AzÀ 30 UÁæA ºÁUÀÆ 45 UÁæA £À MlÄÖ 75 UÁæA §AUÁgÀzÀ ªÀÄAUÀ¼À ¸ÀÆvÀæ C:Q: 1,87,500/- ¨É¯É¨Á¼ÀĪÀ ªÀÄAUÀ¼À ¸ÀÆvÀæ, ºÁUÀÆ C¥ÀgÁzsÀ ªÀiÁqÀ®Ä G¥ÀAiÉÆÃV¹zÀ ªÉÆÃlgÀ ¸ÉÊPÀ® C:Q: 30,000/- »ÃUÉ MlÄÖ 2,17,500 ¨É¯É¨Á¼ÀĪÀ ªÀiÁ®£ÀÄß d¥ÀÛ ¥Àr¹PÉÆArzÀÄÝ EgÀÄvÀÛzÉ.

ಜೇವರ್ಗಿ ಠಾಣೆ : ದಿನಾಂಕ 26.08.2015 ರಂದು 15:00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ 26.08.2015 ರಂದು ಮುಂಜಾನೆ 10:45 ಗಂಟೆಗೆ ಅಲ್ಲಿಗೆನ ಹೋಲದ ಹತ್ತಿರ ಆಂದೋಳ ಬಿರಾಳ ರಸ್ತೆಯ ಸಮೀಪ ಶಿವಲಿಂಗಪ್ಪ ತಂದೆ ಕಲ್ಯಾಣಪ್ಪ ಜಳಂದರ ವಯಾ|| 32 ವರ್ಷ ಸಾ|| ಆಂದೋಲಾ ಈತನು ತನ್ನ ಮೋಟಾರು ಸೈಕಲ್ ನಂ ಕೆ.ಎ32ಇಹೆಚ್‌‌7729 ನೇದ್ದನ್ನು ಚಲಾಯಿಸಿಕೊಂಡು ಆಂದೋಲದಿಂದ ತನ್ನ ಹೋಲದ ಕಡೆಗೆ ರೋಡಿನ ಸೈಡಿನಿಂದ ಹೋಗುತ್ತಿದ್ದಾಗ ಅದೆ ಸಮಯಕ್ಕೆ ಬಿರಾಳ ಕಡೆಯಿಂದ ಕ್ರೂಜರ್ ಜೀಪ್ ನಂ ಎಪಿ27ಎಕ್ಸ್‌8880 ನೇದ್ದರ ಚಾಲಕನು ತನ್ನ ಜೀಪ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಶಿವಲಿಂಗಪ್ಪನ ಮೋಟಾರು ಸೈಕಲ್‌ಗೆ ಎದುರಾಗಿ ಡಿಕ್ಕಿ ಪಡಿಸಿ ಶಿವಲಿಂಗಪ್ಪನಿಗೆ ಭಾರಿ ಗಾಯಪಡಿಸಿ ತನ್ನ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ. ನಂತರ ಶಿವಲಿಂಗಪ್ಪನಿಗೆ ಉಪಚಾರ ಕುರಿತು ಕಲಬುರಗಿಗೆ ಅಂಬ್ಯೂಲೇನ್ಸ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ರಸ್ತೆಯ ಮಧ್ಯದಲ್ಲಿಯೆ ಮಧ್ಯಾಹ್ನ 12:15 ಗಂಟೆಗೆ ಮೃತಪಟ್ಟಿದ್ದು ಕಾರಣ ಸದರಿ ಜೀಪ್ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 231/15 ಕಲಂ 279. 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.