POLICE BHAVAN KALABURAGI

POLICE BHAVAN KALABURAGI

16 July 2011

GULBARGA DISTRICT REPORTED CRIMES

ನಕಲಿ ಗೊಬ್ಬರ ಮಾರಾಟ ಇಬ್ಬರ ಬಂದನ : .
ಫರಹತಾಬಾದ ಠಾಣೆ :
ಶ್ರೀ ಸಮದ ಪಟೇಲ ಸಹಾಯಕ ನಿದೇರ್ಶಕರು ಕೃಷಿ ಇಲಾಖೆ ಗುಲಬರ್ಗಾ ರವರು ಫರತಬಾದದಲ್ಲಿ ದಿನಾಂಕ: 16-7-2011 ರಂದು ಮುಂಜಾನೆ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೆ "ವಿಜನ್ ನಂ:01" ಎಂಬ ಹೆಸರಿನ ಸಾಯುವವ ಗೊಬ್ಬರವನ್ನು ಸುನೀಲ ಭಾಗಶೇಟ್ಟಿ ತಂದೆ ಮಲ್ಲಿಕಾರ್ಜುನ ಭಾಗಶೇಟ್ಟಿ ಸಾ: ಹೊನ್ನಕಿರಣಗಿ, ಸಂಗಡ ಒಬ್ಬ ರವರು ಮಾರಾಟ ಮಾಡುತ್ತಿದ್ದಾಗ ನಾನು ನನ್ನ ತಂಡದೊಂದಿಗೆ ದಾಳಿ ಮಾಡಿ ಅವರ ತಾಬೆಯಿಂದ 40 ಕೆ. ಜಿ ತೂಕದ 46 ಚೀಲಗಳನ್ನು ಅಂದಾಜ ಕಿಮ್ಮತ್ತು 28750=00 ರೂ. ( 625 X 46 = 28750 ) ಮತ್ತು ಒಂದು ಡಿಲೇವರಿ ಚಾಲನ್ ನಂ: 034 ಮತ್ಗು 035 ಮತ್ತು ಒಂದು ಬಿಲ್ಲ ಬುಕ್ ನಂ: 3411 ರಿಂದ 3420 ನೇದ್ದನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಸದರಿ ಗೊಬ್ಬರವನ್ನು ಮಂಜುನಾಥ ತಂದೆ ರುದ್ರಪ್ಪಾ ಮ್ಯಾನೇಜಿಂಗ್ ಡ್ಯಾರೇಕ್ಟರ್ ವಿದ್ಯಾ ನಗರ ದಾವಣಗೇರಾ ಇವರಿಂದ ತಂದು ನಕಲಿ ಗೊಬ್ಬರವನ್ನು ಯಾವುದೇ ಲೈಸನ್ಸ್ ಇಲ್ಲದೆ ರೈತರಿಗೆ ಮಾರಾಟ ಮಾಡಿ ಮೊಸ ಮಾಡಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ರೋಜಾ ಠಾಣೆ :
ಶ್ರೀ ಶೇಖಬುರಾನುದ್ದಿನ ತಂದೆ ಶೇಖ ಅಹ್ಮದ ಕೊಹಿರಿ ಸಾ:ಅಮೀನಾ ಆಸ್ಪತ್ರೆಯ ಹತ್ತಿರ ಖಾಜಾ ಕಾಲೋನಿ ಗುಲಬರ್ಗಾ ರವರು ನಾವು ದಿನಾಂಕ;15,16/07/2011 ರ ಮಧ್ಯರಾತ್ರಿ ವೇಳೇಯಲ್ಲಿ ಮನೆಯ ಬಾಗಿಲ ಕೀಲಿಯನ್ನು ಮುರಿದು ಲಾಕರದಲ್ಲಿ ಇಟ್ಟ 2 ಗ್ರಾಮದ ಇಯರ ರಿಂಗ ಅ.ಕಿ 4000/- ರೂ. , ನಗದು ಹಣ 3000/-ರೂ. ಒಂದು ಲೇಡೀಜ ಕೈಗಡಿಯಾರ ಟೈಟಾನ್ ಕಂಪನಿಯದ್ದು ಅ.ಕಿ.3000/-ರೂಪಾಯಿ ಹೀಗೆ ಒಟ್ಟು 10,000/-ರೂಪಾಯಿ ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಶ್ವನಾಥ ತಂದೆ ಅಣವೀರಪ್ಪ ಟೆಂಗಳಿ ಸಾ; ಖಾದ್ರಿ ಚೌಕ ಗುಲಬರ್ಗಾ ರವರು ದಿನಾಂಕ: 15-07-2011 ರಂದು 6=45 ಪಿ.ಎಮ್.ಕ್ಕೆ ಖಾದ್ರಿ ಚೌಕ ಕಡೆಯಿಂದ ಆಳಂದ ಚೆಕ್ಕ ಪೊಸ್ಟ ಕಡೆ ರೋಡಿನ ಬಾಂಬೆ ಗ್ಯಾರೇಜ ಎದುರುಗಡೆ ರೋಡಿನ ಮೇಲೆ ಟ್ಯಾಕ್ಟರ ನಂ:ಕೆಎ 32-8339 ನೆದ್ದರ ಚಾಲಕ ಶಾಹಾಬಜಾರ ನಾಕಾ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ನಂ:ಕೆಎ 32 ಡಬ್ಲೂ 5795 ನೆದ್ದಕ್ಕೆ ಓವರ ಟೆಕ ಮಾಡಿ ಒಮ್ಮಲೆ ಎಡಕ್ಕೆ ಕಟ್ಟ ಹೊಡೆದು ಡಿಕ್ಕಿ ಪಡಿಸಿ ಹಿಂದೆ ಕುಳಿತ ನಾಗೇಶ ಇಬ್ಬರಿಗು ತನ್ನ ಟ್ಯಾಕ್ಟರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIME

ಮುಂಜಾಗ್ರತೆ ಕ್ರಮ :

ಚಿತ್ತಾಪುರ ಪೊಲೀಸ್ ಠಾಣೆ :
ದಿನಾಂಕ 15/07/11 ರಂದು ರಾತ್ರಿ ಶ್ರೀ ಚಾಂದಪಾಶಾ ಎ.ಎಸ್.ಐ ಚಿತ್ತಾಫುರ ಪೊಲಿಸ್ ಠಾಣೆ ರವರು ವರದಿ ಸಲ್ಲಿಸಿದ್ದರ ಮೇರೆಗೆ 1 ನೇ ಪಾರ್ಟಿ ಜನರಾದ ಬುಡ್ಡ ಬಸಪ್ಪ ತಂದೆ ಮಾರ್ತಾಂಡಪ್ಪ ಬೂತಪುರ ಮಹಾದೇವ ತಂದೆ ಬುಡ್ಡ ಬಸಪ್ಪ ಬೂತಪುರ, ನಾಗಮ್ಮ ಗಂಡ ಹಣಮಂತ ಹಿರಿನಿಂಗಣ್ಣನವರ, ರಾಜಶೇಖರ ತಂದೆ ಬುಡ್ಡ ಬಸಪ್ಪಪ ಬೂತಪೂರ, ಶರಣಪ್ಪ ತಂದೆ ಬುಡ್ಡ ಬಸಪ್ಪ ಬೂತಪೂರ, ಈಶಪ್ಪ ತಂದೆ ಬುಡ್ಡ ಬಸಪ್ಪ ಬೂತಪುರ, ಸಿದ್ರಾಮಪ್ಪ ತಂದೆ ಬುಡ್ಡಬಸಪ್ಪ ಬೂತಪೂರ, ಭಾಗಮ್ಮ ಗಂಢ ರಾಜಶೇಖರ ಬೂತಪುರ ಮಹೇಶಮ್ಮ ಗಂಡ ಶರಣಪ್ಪ ಬೂತಪೂರ ದೇವಿಂದ್ರಮ್ಮ ಗಂಡ ಈಶಪ್ಪ ಬೂತಪೂರ ಹಾಗು 2ನೇ ಪಾರ್ಟಿ ಜನರಾದ ದೇವಿಂದ್ರಪ್ಪ ತಂದೆ ಮಾರ್ತಾಂಡಪ್ಪ ಬೂತಪುರ, ಬಸಪ್ಪ ತಂದೆ ಮಾರ್ತಾಂಡಪ್ಪ ಬೂತಪುರ ಸಾ|| ಎಲ್ಲರೂ ದಂಡಗುಂಡ ಗ್ರಾಮ ತಾ|| ಚಿತ್ತಾಪುರ ರವರ ಮುಂಜಾಗ್ರತೆ ಕ್ರಮ ಕುರಿತು ಸಿ.ಅರ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಾ ಮಾಡಿಕೊಳ್ಳಲಾಗಿದೆ .

ಖೋಟಾ ನೋಟು ಪ್ರಕರಣ :
ಸ್ಟೇಷನ ಬಜಾರ ಠಾಣೆ
; ಶ್ರೀ ಕೆ.ವೇಣುಗೋಪಾಲ ತಂದೆ ಪಾಂಡುರಂಗ ಶೆಣೈ ಸಿನಿಯರ್ ಮ್ಯಾನೇಜರ ಸಿಂಡಿಕೇಟ್ ಬ್ಯಾಂಕ ಕರೆನ್ಸಿ ಚೆಕ್ಕ ಎಸ್.ವಿ.ಪಿ. ಚೌಕ್. ಗುಲಬರ್ಗಾ ರವರು ನಮ್ಮ ಸಿಂಡಿಕೇಟ ಬ್ಯಾಂಕ ಕರೆನ್ಸಿ ಚೆಸ್ಟ ಎಸ್.ವಿ.ಪಿ. ಚೌಕ ಗುಲಬರ್ಗಾ ಪರಿವೀಕ್ಷಣೆಯನ್ನು ದಿನಾಂಕ 24-12-2010 ರಂದು ಆರ್.ಬಿ.ಐ ಬೆಂಗಳೂರಿನ ಪರಿವಿಕ್ಷಕರು ಕೈಕೊಂಡಿದದು, ಪರೀವಿಕ್ಷಣೆ ಕೈಕೊಂಡ ಕಾಲಕ್ಕೆ ಐದನೂರು ರುಪಾಯಿ ಮುಖಬೆಲೆಯುಳ್ಳ ಮೂರು ಖೋಟಾ ನೋಟುಗಳು ಸಿಕ್ಕಿದ್ದು ಈ ಬಗ್ಗೆ ನಮ್ಮೆ ಮೇಲಾಧಿಕಾರಿಗಳಲ್ಲಿ ಚರ್ಚಿಸುವ ಸುಲವಾಗಿ ಅರ್ಜಿ ಕೊಡಲು ವಿಳಂಬವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಪ್ರಕರಣ :

ಶಹಾಬಾದ ನಗರ ಠಾಣೆ : ಶ್ರೀಮತಿ ನೀಲಮ್ಮಾ ಗಂಡ ಅಯ್ಯಪ್ಪಾ ಹಂದರಕಿ ಸಾ:ಭಂಕೂರ ರವರು ದಿ:10/01/1999 ರಿಂದ 05/09/2007 ರವರೆಗೆ ನನ್ನ ಹೊಲ ಸರ್ವೆ ನಂ.133/1, 2 ಎಕರೆ 18 ಗುಂಟೆ ನನ್ನ ಗಂಡನಿಗೆ 85,000/- ರೂ ಗೆ ಮಾರಾಟ ಮಾಡಿ ಸ್ಟಾಂಪಗಳು ಬರೆದು ಕೊಟ್ಟು ಮತ್ತು ಬಿಳಿ ಪೇಪರನಲ್ಲಿ ಮಾರಾಟ ಪತ್ರ ಅಂತಾ ಬರೆದುಕೊಟ್ಟು ನೊಂದಣೆ ಮಾಡದೆ ಮೋಸ ಮಾಡಿರುತ್ತಾನೆ. ನಾವು ಕೇಳಲಿಕ್ಕೆ ಹೋದರೆ ಬೆದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.