POLICE BHAVAN KALABURAGI

POLICE BHAVAN KALABURAGI

18 July 2015

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಸುಮಂಗಲಾ ಗಂಡ ಶರಣಯ್ಯಾ ಹಿರೇಮಠ ಸಾ: ಬನಶಂಕರಿ ನಗರ ಡಾ:ಗಚ್ಚಿನ ಮನೆ ಆಸ್ಪತ್ರೆ ಹಿಂದುಗಡೆ  ಬ್ರಹ್ಮಪೂರ ಕಲಬುರಗಿ ಇವರ ಮಗಳಾದ ಕುಮಾರಿ ಸೌಮ್ಯ ಇವಳು ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಸತ್ಯಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನನ್ನ ಮಗಳು ಎಂದಿನಂತೆ ದಿನಾಲೂ ಕಾಲೇಜಿಗೆ ಹೋಗುತ್ತೆನೆಂದು ಹೇಳಿ ಹೋದವಳು ಸಂಜೆಯವರೆಗೆ ಮನೆಗೆ ಬಂದಿರುವುದಿಲ್ಲ ನಾವು ನಮ್ಮ ಬೀಗರು, ನೆಂಟರ ಹತ್ತಿರ  ಹೋಗಿ ವಿಚಾರಿಸಿದರೂ ಸಹೀತ ನನ್ನ ಮಗಳ ಸುಳಿವು ಸಿಗಲಿಲ್ಲ. ಮತ್ತು ನನ್ನ ಮಗಳನ್ನು ಅಪಹರಿಸಿದವರಾದ 1) ರಾಚಯ್ಯಾ ಸ್ವಾಮಿ 2) ಜಗದೇವಿ 3)ಸುಜಾತಾ 4) ಬಸ್ಸಯ್ಯಾ ಇವರುಗಳು ಅಪಹರಣ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 16-072015 ರಂದು ಗುಡ್‌ಲಕ್ ಹೋಟೆಲ್ ಹತ್ತಿರ ದಾನಮ್ಮ ಕಾಲೇಜು ಎದುರು ಜೇವರಗಿ ಸಿಂದಗಿ ರೋಡಿನಲ್ಲಿ  ಮೋಟಾರು ಸೈಕಲ್ ನಂ ಕೆ.ಎ32ಈಡಿ6641 ನೇದ್ದರ ಸವಾರ ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆಯ ಸೈಡಿನಲ್ಲಿ ನಿಂತಿದ್ದ ನನ್ನ ಮಗ ಶಿವಕುಮಾರ ತಂದೆ ರಾಮಸ್ವಾಮಿ ಬಂಡಿವಡ್ಡರ ಇವನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಪಡಿಸಿ ತನ್ನ ಮೋಟಾರು ಸೈಕಲ್‌ನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ  ಶ್ರೀಮತಿ ಹಣಮವ್ವ ತಂದೆ ರಾಮಸ್ವಾಮಿ ಬಂಡಿವಡ್ಡರ್ ಸಾ|| ಜನತಾ ಕಾಲೋನಿ ಜೇವರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧೀಕೃತವಾಗಿ ಲೇವಾ ದೇವಿ ವ್ಯವಹಾರ ಮಾಡುತ್ತಿದ್ದ ಅಂಗಡಿಯ ಮೇಲೆ ದಾಳಿ ಮಾಡಿದ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ. ಯಲ್ಲಪ್ಪ ಸುಬೇದಾರ್ ತಹಸೀಲದಾರರು ಜೇವರಗಿ. ಇವರು ದಿನಾಂಕ 17.07.2015 ರಂದು ಮಧ್ಯಾಹ್ನ 03 ಗಂಟೆಗೆ ಜೇವರಗಿ ಪಟ್ಟಣದಲ್ಲಿರುವ ವಿಧ್ಯಾನಗರದ ಶಣ್ಮೂಖ ತಂದೆ ಚಂದ್ರಶೇಖರ ಹಳಿಮನಿ ಸಾ|| ವಿಧ್ಯಾನಗರ ಜೇವರಗಿ ಈತನ ಕೀರಾಣ ಅಂಗಡಿಯಲ್ಲಿ ಸಂಭಂದ ಪಟ್ಟ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಅನಧೀಕೃತವಾಗಿ ಲೇವಾದೇವಿ ವ್ಯವಹಾರ ಮಾಡುತ್ತಿರುವದು ಕಂಡು ಬಂದಿರುವದರಿಂದ ಅವನ ಅಂಗಡಿಯ ಮೇಲೆ ದಾಳಿ ಮಾಡಿ ಲೇವಾದೇವಿ ಪಾಸ್‌ಬುಕ್‌ಗಳನ್ನು ಜಪ್ತಿ ಮಾಡಿದ್ದು ಸದರಿ ಯವನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಜೇವರ್ಗಿ ಠಾಣೆ : ಶ್ರೀ. ಯಲ್ಲಪ್ಪ ಸುಬೇದಾರ್ ತಹಸೀಲದಾರರು ಜೇವರಗಿ. ಇವರು ದಿನಾಂಕ 17.07.2015 ರಂದು ಮಧ್ಯಾಹ್ನ ಜೇವರಗಿ ಪಟ್ಟಣದಲ್ಲಿರುವ ಸಂಗಣ್ಣ ತಂದೆ ಗುರಣ್ಣ ಹೂಗಾರ್ ಸಾ|| ವಿಧ್ಯಾನಗರ ಜೇವರಗಿ ಇವರ  ಮನೆಗೆ ಭೇಟಿ ನಿಡಿದಾಗ ಸದರಿ ಸಂಗಣ್ಣ ಇವರು ತಮ್ಮ ಮನೆಯಲ್ಲಿ ಸಂಭಂದ ಪಟ್ಟ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಅನಧೀಕೃತವಾಗಿ ಲೇವಾದೇವಿ ವ್ಯವಹಾರ ಮಾಡುತ್ತಿರುವದು ಕಂಡು ಬಂದಿರುವದರಿಂದ ಅವನ ಮನೆಯಲ್ಲಿನ ರುಜು ಪಡೆದುಕೊಂಡಿರುವ 2 ಖಾಲಿ ಇ-ಸ್ಟ್ಯಾಂಪ್ ಮತ್ತು ಲೇವಾದೇವಿಗೆ ಸಂಭಂದಿಸಿದ 5 ಮೀಟರ್ ಬಡ್ಡಿ ಪಾಸ್‌ಬುಕ್‌ಗಳನ್ನು ಜಪ್ತಿ ಮಾಡಿದ್ದು ಸದರಿ ಯವನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಪರಶುರಾಮ ತಂದೆ ಗುರಣ್ಣ ಗೋಲ್ಲರ ಸಹಕಾರ ಸಂಘಗಳ ಸಹಾಯಕ ನಿಬಂದಕರು ಕಲಬುರಗಿ ಉಪ ವಿಭಾಗ ಕಲಬುರಗಿಯಲ್ಲಿ ದ್ವೀತಿಯ ದರ್ಜೆ ಸಹಾಯಕ  ಅಂತಾ ಇದ್ದು. ಮಾನ್ಯ ಜಿಲ್ಲಾದಿಕಾರಿಗಳು ಕಲಬುರಗಿ ರವರು ನೊಂದಾಯಿತರಲ್ಲದ ಲೇವಾದೇವಿದಾರರು ಹಣದ ಅವಯವಹಾರ ನಡೆಸದಂತೆ ಹಾಗೂ ಅನದಿಕೃತ ಚಟುವಟಿಕೆಗಳು ನಡೆಯದಂತೆ ತಾಲುಕಾವಾರು ತಂಡ ರಚನೆ ಮಾಡಿ, ಅನದಿಕೃತವಾಗಿ ಹಣದ  ಅವ್ಯವಹಾರ ನಡೆಸುತ್ತಿರುವ ಲೇವಾದೇವಿದಾರರ ಅಂಗಡಿಗಳಿಗೆ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲು ಆದೇಶಿಸಿದ್ದು ಮಾನ್ಯ ಜಿಲ್ಲಾದಿಕಾರಿಗಳ ಆದೇಶದ ಮೇರೆಗೆ ಹಾಗೂ ಸಹಕಾರ ಸಂಘಗಳ ಸಹಾಯಕ ನಿಭಂದಕರು ಕಲಬುರಗಿ ರವರ ಆದೇಶದ ಮೇರೆಗೆ ಇಂದು ದಿನಾಂಕ  17-07-2015 ರಂದು ಬೆಳಿಗ್ಗೆ 10:00 ಎ ಎಮ್ ಕ್ಕೆ ಅಫಜಲಪೂರ ಪಟ್ಟಣಕ್ಕೆ ಬಂದು ಅಫಜಲಪೂರದ ಮಾನ್ಯ ಗೌಸುದ್ದಿನ ತಹಸಿಲ್ದಾರ ಸಾಹೇಬರು ಮತ್ತು ಮಾನ್ಯ ಸಂಗಮೇಶ ಪಾಟೀಲ ಸಿ.ಪಿ.ಐ ಸಾಹೇಬರು ಹಾಗೂ ಅಫಜಲಪೂರ ಹಾಗು ಸಿಬ್ಬಂದಿ ಕುಡಿಕೊಂಡು ಅಫಜಲಪೂರ ಪಟ್ಟಣದ ಮಾಹಾಂತೇಶ್ವರ ಅಟೋ ಪೈನಾನ್ಸ ಕ್ಕೆ 12:15 ಪಿ ಎಮ್ ಕ್ಕೆ ಬೇಟ್ಟಿ ನೀಡಿ ಪೈನಾನ್ಸದಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿ, ಸದರಿ ಮಾಹಾಂತೇಶ್ವರ ಪೈನಾನ್ಸ ಲೇವಾದೇವಿ ಪರವಾನೆಯನ್ನು ಪರಿಶೀಲಿಸಿ ನೋಡಲಾಗಿ ಸದರಿ  ಪರವಾನಿಗೆ  ದಿನಾಂಕ 09-02-2011 ರಿಂದ ದಿನಾಂಕ 31-03-2015 ರವರೆಗೆ ಇರುತ್ತದೆ. ಸದರಿ ಮಾಹಾಂತೇಶ್ವರ ಪೈನಾನ್ಸನ ಆಡಳಿತ ಮಂಡಳಿಯವರು ಪರವಾನಿಗೆಯನ್ನು ನವಿಕರಣ ಮಾಡಿಸದೆ ಅನದಿಕೃತವಾಗಿ ಪೈನಾನ್ಸ ನಡೆಸಿ ಲೇವಾದೇವಿ ಮಾಡುತ್ತಿದ್ದರಿಂದ, ಪೈನಾನ್ಸಿಗೆ ಸಂಬಂದಪಟ್ಟ ದಾಖಲಾತಿಗಳನ್ನು ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರಿ ಪರಶುರಾಮ ತಂದೆ ಗುರಣ್ಣ ಗೊಲ್ಲರ (SDA) ARCS office Kalaburagi ರವರು ಮಾನ್ಯ ಜಿಲ್ಲಾದಿಕಾರಿಗಳು ಕಲಬುರಗಿ ರವರು ನೊಂದಾಯಿತರಲ್ಲದ ಲೇವಾದೇವಿದಾರರು ಹಣದ ಅವಯವಹಾರ ನಡೆಸದಂತೆ ಹಾಗೂ ಅನದಿಕೃತ ಚಟುವಟಿಕೆಗಳು ನಡೆಯದಂತೆ ತಾಲುಕಾವಾರು ತಂಡ ರಚನೆ ಮಾಡಿ, ಅನದಿಕೃತವಾಗಿ ಹಣದ  ಅವ್ಯವಹಾರ ನಡೆಸುತ್ತಿರುವ ಲೇವಾದೇವಿದಾರರ ಅಂಗಡಿಗಳಿಗೆ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲು ಆದೇಶಿಸಿದ್ದು ಮಾನ್ಯ ಜಿಲ್ಲಾದಿಕಾರಿಗಳ ಆದೇಶದ ಮೇರೆಗೆ ಹಾಗೂ ಸಹಕಾರ ಸಂಘಗಳ ಸಹಾಯಕ ನಿಭಂದಕರು ಕಲಬುರಗಿ ರವರ ಆದೇಶದ ಮೇರೆಗೆ ಇಂದು ದಿನಾಂಕ 17-07-2015 ರಂದು ಬೆಳಿಗ್ಗೆ ಅಫಜಲಪೂರ ಪಟ್ಟಣಕ್ಕೆ ಬಂದು ಅಫಜಲಪೂರದ ಮಾನ್ಯ ಗೌಸುದ್ದಿನ ತಹಸಿಲ್ದಾರ ಸಾಹೇಬರು ಮತ್ತು ಮಾನ್ಯ ಸಂಗಮೇಶ ಪಾಟೀಲ ಸಿ.ಪಿ.ಐ ಸಾಹೇಬರು ಹಾಗೂ ಅಫಜಲಪೂರ ಠಾಣೆಯ ಸಿಬ್ಬಂದಿ  ಕೂಡಿ ತಹಸಿಲ ಕಾರ್ಯಾಲಯದಿಂದ ಹೊರಟು, ಅಫಜಲಪೂರ ಪಟ್ಟಣದ ವೈಭವ ಲಿಜೀಂಗ (ರಿ) ಪೈನಾನ್ಸ ಕ್ಕೆ 3:30 ಪಿ ಎಮ್ ಕ್ಕೆ ಬೇಟ್ಟಿ ನೀಡಿ ಪೈನಾನ್ಸದಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿ, ಸದರಿ ವೈಭವ ಲೀಜಿಂಗ (ರಿ) ಲೇವಾದೇವಿ ಪರವಾನೆಯನ್ನು ಪರಿಶೀಲಿಸಿ ನೋಡಲಾಗಿ ಸದರಿ  ಪರವಾನೆ ದಿನಾಂಕ 09-02-2011 ರಿಂದ ದಿನಾಂಕ 31-03-2015 ರವರೆಗೆ ಇರುತ್ತದೆ. ಸದರಿ ವೈಭವ ಲಿಜೀಂಗ (ರಿ) ಪೈನಾನ್ಸನ ಆಡಳೀತ ಮಂಡಳಿಯವರು ಪರವಾನಿಗೆಯನ್ನು ನವಿಕರಣ ಮಾಡಿಸದೆ ಅನದಿಕೃತವಾಗಿ ಪೈನಾನ್ಸ ನಡೆಸಿ ಲೇವಾದೇವಿ ಮಾಡುತ್ತಿದ್ದರಿಂದ, ಪೈನಾನ್ಸಿಗೆ ಸಂಬಂದಪಟ್ಟ ದಾಖಲಾತಿಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.