POLICE BHAVAN KALABURAGI

POLICE BHAVAN KALABURAGI

25 February 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ ದೊಂಡಬಾಯಿ ಗಂಡ ಅಶೋಕ ಹೌಶೆಟ್ಟಿ ಸಾ:ದುದ್ದನಿ ತಾ:ಅಕ್ಕಲಕೋಟ ಜಿಲ್ಲಾ:ಸೋಲಾಪೂರ ರವರು ನನ್ನ ಗಂಡ ಅಶೋಕ ತಂದೆ ಸಾದಾಶಿವ ಹೌಶೆಟ್ಟಿ ಇವರು ತನ್ನ ಮೋಟರ್ ಸೈಕಲ್ ನಂ:ಎಮ್.ಹೆಚ್.15 ಎಟಿ-9700 ನೇದ್ದರ ಮೇಲೆ ತನ್ನ ಅಣ್ಣನ ಮಗನಾದ ಸೂರ್ಯಕಾಂತ ಇತನಿಗೆ ಕಾಮಣಿ ಔಷಧ ಹಾಕಿಕೊಂಡು ಬರಲು ದಿನಾಂಕ:24/02/2013 ರಂದು ಬೆಳಿಗ್ಗೆ ಹೋಗುತ್ತಿರುವಾಗ ಚಲಗೇರಾ ರಸ್ತೆಯಲ್ಲಿ ಅತೀವೇಗದಿಂದ ನಡೆಯಿಸಿ ನಿಂಬಾಳ ಕೆರೆಯ ಹತ್ತಿರ ತೆಗ್ಗಿನಲ್ಲಿ ಮೋಟರ್ ಸೈಕಲ್ ಸಮೇತ ಬಿದ್ದು ಅಫಘಾತವಾಗಿ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಜೋತೆಗಿದ್ದ ಸೂರ್ಯಕಾಂತನಿಗೆ ಎಡಗೈಗೆ ಭಾರಿ ಪೆಟ್ಟಾಗಿರುತ್ತದೆ. ರಸ್ತೆಯಲ್ಲಿ ಬ್ರಿಡ್ಜ್ ಕೆಲಸ ಮಾಡಿಸುತ್ತಿದ್ದ ಗುತ್ತಿಗೆದಾರ ಮತ್ತು ಇಂಜಿನಿಯರ ರವರು ಯಾವದೇ ಮುನ್ನೆಚ್ಛರಿಕೆಯ ಸೂಚನೆಯ ಫಲಕಗಳು ಹಾಕದೆ ಇರುವುದರಿಂದ ಅಫಘಾತ ಸಂಭವಿಸಿರುತ್ತದೆ ಅಂತಾ ಶ್ರೀಮತಿ ದೊಂಡಭಾಯಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:22/2013 ಕಲಂ: 279, 338, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:24-02-2013 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬೀಮ್ಮಳ್ಳಿ ಗ್ರಾಮದ ಸೀಮಾಂತರದಲ್ಲಿ ಬರುವ ವಿಠಲ ಜಮಾದಾರ ಇವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಮಾಹಿತಿ ಬಂದ ಮೇರೆಗೆ  ಡಿಎಸ್‌ಪಿ ಗ್ರಾಮೀಣ ಉಪ-ವಿಭಾಗ ಮತ್ತು ಸಿಪಿಐ ಗ್ರಾಮೀಣ  ವೃತ್ತ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಪಿ.ಎಸ.ಐ ಶ್ರೀ ಆನಂದರಾವ ರವರು ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಮಹ್ಮದ ಶಫೀ ತಂದೆ ಚಾಂದಸಾಬ ಮಡಕಿ ಸಾ||ಭೀಮಳ್ಳಿ, ಸಂತೋಷ ತಂದೆ ಕಾಶಿನಾಥ ಪಾಟೀಲ ಸಾ: ಭೀಮಳ್ಳಿ, ಬಸವರಾಜ ತಂದೆ ರಾಜೇಂದ್ರ ಗುತ್ತೆದಾರ ಸಾ: ಭೀಮಳ್ಳಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 6150/- ರೂಪಾಯಿಗಳು ಮತ್ತು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 109/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. 

No comments: