POLICE BHAVAN KALABURAGI

POLICE BHAVAN KALABURAGI

20 December 2011

GULBARGA DIST REPORTED CRIMES

ದರೋಡೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಪ್ರಶಾಂತ ತಂದೆ ಖಂಡಪ್ಪಾ ಬಂಡಿಗೇರ ವ;22 ವರ್ಷ ಉ: ವ್ಯಾಪಾರ ಜಾ: ಮರಾಠಾ ಸಾ: ಮಾಹಾಂತೇಶ್ವರ ಕಾಲೂನಿ ಅಫಜಲಪೂರರವರು ನಾನು ಮತ್ತು ನನ್ನ ಗೇಳೆಯನಾದ ಮಳೆಂದ್ರೆ ಬಿರಾದಾರ ಇಬ್ಬರು ಕೂಡಿಕೊಂಡು ಹಿರೋ ಹೊಂಡಾ ಮೋಟಾರ ಸೈಕಲ್ ನಂ ಕೆಎ-32 ಆರ್-4560 ನೇದ್ದರ ಮೇಲೆ ಗುಲಬರ್ಗಾದಿಂದ ಅಫಜಲಪೂರಕ್ಕೆ ಹೊರಟಿದ್ದು ದಾರಿ ಮಧ್ಯದಲ್ಲಿ ನಾಗದೇವತೆ ಯಲ್ಲಮ್ಮ ದೇವಸ್ಥಾನ ಗೂಡಿ ದಾಟಿ ಕೊಳಿ ಫಾರಂ ಹತ್ತಿರ ಬರುತ್ತಿದ್ದಾಗ ಎದುರಗಡೆಯಿಂದ ಇಂಡಿಕಾ ಮಾರುತಿ ಕಾರ ನಂ ಕೆಎ-25 ಎಮ್.ಬಿ-117 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಚಲಾಯಿಸಿಕೊಂಡು ನಮ್ಮ ಮೇಲೆ ಬರುತ್ತಿದ್ದಾಗ ನಾನು ಅವನಿಗೆ ಎ ಡ್ರೈವರ ನೋಡಿ ನಡೆಸು ಅಂತಾ ಅಂದಾಗ ಕಾರ ಚಾಲಕನು ತನ್ನ ಕಾರನ್ನು ತಿರುಗಿಸಿ ನಮ್ಮ ಮೊಟಾರ ಸೈಕಲಕ್ಕೆ ಬೇನ್ನು ಹತ್ತಿ ನಮ್ಮ ಮೋಟಾರ ಸೈಕಲವನ್ನು ಕೊಳಿ ಫಾರಂ ಹತ್ತಿರ ನಿಲ್ಲಿಸಿ ಕಾರಿನಿಂದ 4 ಜನರು ಇಳಿದು ನನಗೆ ತೆಕ್ಕೆಯಲ್ಲಿ ಹಿಡಿದು ಅವರಲ್ಲಿ ಒಬ್ಬನು ನನಗೆ ಕೈಯಿಂದ ಕಪಾಳ ಮೇಲೆ ಬೆನ್ನ ಮೇಲೆ ಹೊಡೆದಿರುತ್ತಾನೆ. ಮತ್ತು ನನ್ನ ಜೇಬಿನಲ್ಲಿದ 100=00 ರೂಪಾಯಿಯ 10.000=00 ಸಾವಿರ ಬಂಡಲ ಮತ್ತು 500=00 ನೂರು ರೂಪಾಯಿಯ 10.000=00 ಸಾವೀರ ಬಂಡಲ ಹೀಗೆ ಒಟ್ಟು 20.000=00 ಸಾವಿರ ರೂಪಾಯಿ ನಗದು ಹಣ ಮತ್ತು 2 ತೋಲಿ ಬಂಗಾರದ ಲಾಕೇಟ ಅ.ಕಿ.50.000=00 ಸಾವಿರ ರೊಪಾಯಿ ಹಿಗೆ ಒಟ್ಟು 70.000=00 ಸಾವಿರ ರೂಪಾಯಿಯನ್ನು ಜಬರ ದಸ್ತಿಯಿಂದ ಕಸಿದುಕೊಂಡಿರುತ್ತಾರೆ. ಮಳೆಂದ್ರ ಬಿರಾದಾರ ಇತನು ಜಗಳ ಬಿಡಿಸಲು ಬಂದಾಗ ಅವನಿಗು ಸಹಾ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಹಣ ಕಸಿದುಕೊಂಡ ಅಪರಿಚಿತರ ವ್ಯಕ್ತಿಗಳ ಅಂದಾಜು ವ:25 ರಿಂದ 30 ವರ್ಷ ವಯಸ್ಸಿನವರು ಇರುತ್ತಾರೆ. ಅವರಲ್ಲಿ ಒಬ್ಬನು ಟಿ ಶರ್ಟ. ಜಿನ್ಸ ಪ್ಯಾಂಟ ಧರಿಸಿರುತ್ತಾನೆ ಮತ್ತು ಉಳಿದ 3 ಜನರು ಸಾದಾ ಪ್ಯಾಂಟ ಶರ್ಟ ಧರಿಸಿರುತ್ತಾರೆ. ಮತ್ತು ಅವರ ಹೆಸರು ವಿಳಾಗ ನನಗೆ ಗೊತ್ತಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 220/2011 ಕಲಂ 394 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ :
ಶ್ರೀ ವಿಜಯಕುಮಾರ ತಂದೆ ಮಾರುತಿ ಯಲಾಲಕರ್ ಸಾ: ಪಟಪಳ್ಳಿ ರವರು ನಾನು ಮತ್ತು ನನ್ನ ತಾಯಿಯಾದ ಚಂದ್ರಮ್ಮಾ , ಅಕ್ಕನ ಮಗಳಾದ ಮಮೀತಾ, ಹಾಗು ಕಾಕನ ಮಗಳಾದ ರುಕ್ಕಮಿಣಿ 4 ಜನರು ಕೂಡಿಕೊಂಡು ತೋಟ್ಟಿಲು ಕಾರ್ಯಕ್ರಮದ ಸಲುವಾಗಿ ದಿನಾಂಕ: 19-12-2011 ರಂದು ಮಧ್ಯಾಹ್ನ 1430 ಗಂಟೆಯ ಸುಮಾರಿಗೆ ಹಸರಗುಂಡಗಿ ಗ್ರಾಮಕ್ಕೆ ನಮ್ಮೂರಿಂದ ಹೊರಟಿದ್ದೇವು ನಮ್ಮೂರ ಕ್ರಾಸ ಹತ್ತಿರ ನಿಂತಾಗ ಚಿಂಚೋಳಿ ಕಡೆಯಿಂದ ಸರಕಾರಿ ಬಸ್ಸ ನಂಬರ ಕೆಎ/38-ಎಫ.-367 ನೇದ್ದು ಬಂದಾಗ ನಾವು ತುಮಕುಂಟಾ ಗ್ರಾಮದವರೆಗೆ ಹೊಗಬೇಕೆಂದು ಆ ಬಸ್ಸಿನಲ್ಲಿ ಹತ್ತಿದೇವು ಪ್ರಯಾಣಿಕರು ಬಹಳಷ್ಟು ಜನರು ಇರುವದರಿಂದ ನಾವುಗಳೂ ಬಾಗಿಲಿನಲ್ಲಿಯೇ ನಿಂತಿದ್ದೇವು ಬಸ್ಸ ಚಾಲಕನು ಬಸ್ಸನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಕಟ್ಟ ಮಾಡಿದ್ದರಿಂದ (ತಿರುಗಿಸಿದ್ದರಿಂದ) ಬಾಗಿಲಿನಲ್ಲಿ ನಿಂತಿದ್ದ ನನ್ನ ತಾಯಿ ಚಂದ್ರಮ್ಮಾ ಹಾಗು ಅಕ್ಕನ ಮಗಳಾದ ಮಮಿತಾ ಮತ್ತು ಕಾಕನ ಮಗಳಾದ ರುಕ್ಕಮಣಿ 3 ಜನರು ಕೆಳಗಡೆ ಬಿದ್ದರು ನನ್ನ ತಾಯಿ ಚಂದ್ರಮ್ಮಾ ಇವರಿಗೆ ತಲೆಗೆ ಹಾಗು ಮೇಲಕಿಗೆ ಭಾರಿ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಉಳಿದ ಮಮೀತಾ ಹಾಗು ರುಕ್ಕಮಿಣಿ ಇವರಿಗೆ ಸಾದಾ ಹಾಗು ಭಾರಿ ಗಾಯಾಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 151/2011 ಕಲಂ 279, 337, 338 304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಶಹಾಬೋದ್ದಿನ ತಂ/ ಮಹಿಬೂಬಸಾಬ ಯಲಗಾರ ಸಾ: ಸೋನಿಯಾ ಗಾಂಧಿ ಆಶ್ರಯ ಕಾಲನಿ ಗುಲಬರ್ಗಾರವರು ನಾನು ದಿನಾಂಕ 19/12/2011 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ 32 ಡಬ್ಲು-7874 ನೇದ್ದರ ಮೇಲೆ ನನ್ನ ಸ್ನೇಹಿತನಾದ ಮಹ್ಮದ ನಹೀಮ ಇತನಿಗೆ ಬೇಟಿ ಯಾಗುವ ಕುರಿತು ಹೋಗುವ ಕಾಲಕ್ಕೆ ಕೆಸಿಟಿ ಕಾಲೇಜ ಎದುರಿಗಡೆ ಹೋಗುತ್ತಿರುವಾಗ ಬಂದೂಕ ವಾಲಾ ಕಾಟದ ಕಡೆಯಿಂದ ರಸ್ತೆ ಕ್ರಾಸ ಮಾಡಿಕೊಂಡು ಅತೀವೇಗದಿಂದ ಮೋಟಾರ ಸೈಕಲ್ ನಂ ಕೆಎ 32 ಎಕ್ಸ್‌ 692 ನೇದ್ದನ್ನು ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಓಡಿ ಹಫಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 373/11 ಕಲಂ 279 337 ಐಪಿಸಿ ಸಂ/ 187 ಐಎಂವಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: