POLICE BHAVAN KALABURAGI

POLICE BHAVAN KALABURAGI

21 March 2017

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಮಹಾನಂದಾ ಗಂಡ ರಾಜಶೇಖರ  ಮರಡಿ ಸಾ: ಹೆಚ್.ಐ.ಜಿ 41 ಕೆ.ಹೆಚ್.ಬಿ ಕಾಲನಿ ಕಲಬುರಗಿ ಇವರ ವಿವಾಹವು ರಾಜಶೇಖರ ತಂದೆ ಬೀಮರಾವ ಮರಡಿ ಸಾ: ದೇವಿ ನಗರ ಕಲಬುರಗಿ ಇತನೊಂದಿಗೆ ದಿನಾಂಕ 22.06.2012 ರಂದು ಇಂಡಿಯಾ ಫಂಕ್ಷನ್ ಹಾಲ ಶಹಾಬಾದದಲ್ಲಿ ಜರುಗಿರುತ್ತದೆ. ಇದೇ ಸಂದರ್ಭದಲ್ಲಿ ನನ್ನ ಅಣ್ಣನಾದ ಮಂಜುನಾಥನ ವಿವಾಹವು ಕೂಡ ನನ್ನ ಗಂಡ ರಾಜಶೇಖರ ಸಹೋದರಿ ವಿಜಯಲಕ್ಷ್ಮೀ ಜೊತೆಗೆ ವಿವಾಹ ಜರುಗಿರುತ್ತದೆ. ನನ್ನ ವಿವಾಹದ ನಂತರ ನನು ನನ್ನ ಗಂಡನ ಮನೆಯಲ್ಲಿ ಕೇವಲ ಕೆಲವೇ ತಿಂಗಳಲ್ಲಿ ನನ್ನ ಗಂಡ ರಾಜಶೇಖರ ಮರಡಿ ನನಗೆ ನನ್ನ ತವರು ಮನೆಯಿಂದ 5 ಲಕ್ಷ ವರದಕ್ಷಿಣೆ ಹಣ ತರಲು ಪಿಡಿಸತೊಡಗಿದರು. ನನ್ನ ತಂದೆ ತಾಯಿ ಬಡವರಾಗಿದ್ದರಿಂದ ನನಗೆ ಹಣ ತರಲು ಸಾದ್ಯವಿಲ್ಲವೆಂದು ಹೇಳಿದಾಗ ನನಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಜನೇವರಿ 2013 ರಲ್ಲಿ ಹೊರಗೆ ಹಾಕಿರುತ್ತಾನೆ. ಆ ಸಂದರ್ಬದಲ್ಲಿ ನಾನು ಗರ್ಬಿಣಿಯಾಗಿದ್ದೆ. ನಂತರ ನನ್ನ ಹೆರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಆಗಿದ್ದು. ಆದರೆ ದುರ್ದೈವದಿಂದ ಜನಸಿದ ಗಂಡು ಮಗು ಸ್ವಲ್ಪ ಸಮಯದಲ್ಲಿ ಸತ್ತಿರುತ್ತದೆ ನನ್ನ ಗಂಡ ಆ ಸಮಯದಲ್ಲಿ ನನ್ನ ಸಹಾಯಕ್ಕೆ ಬಂದಿರುವದಿಲ್ಲ ನನ್ನ ಹೆರಿಗೆಯ ಅವಧಿ ಮುಗಿದ ನಂತರ ನಾನು ಕುಟುಂಬ ನ್ಯಾಯಾಲಯ ಕಲಬುಗರಿಯಲ್ಲಿ ನನ್ನ ಜೀವನಕ್ಕಗಿ ಅರ್ಜಿ ಸಲ್ಲಿಸಿದೆ ಆದರೆ ಹಿರಿಯರ ಮದ್ಯಸ್ಥಿಕೆಯಿಂದ ಕೇಸ ವಾಪಾಸ್ಸು ಪಡೆದು ನನ್ನ ಗಂಡನೊಂದಿಗೆ ಸಂಸಾರ ಪ್ರಾರಂಬಿಸಿದೆನು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನನ್ನ ಗಂಡ ನನಗೆ ಪುನ; ಹೊಡೆಯಲು ಹಾಗೂ ತವರು ಮನೆಯಿಂದ ಹಣ ತರಲು ಒತ್ತಾಯಿಸಿ ಜೀವ ಬೆದರಿಕೆ ಹಾಕಲು ಪ್ರಾರಂಬಿಸಿದನು. ನನ್ನ ಗಂಡ  ದಿನಾಂಕ 18.11.2015 ರಂದು ನನ್ನನ್ನು ಮನೆಯಿಂದ ಹೊರಗೆ ಹಾಕಿರುತ್ತಾನೆ ನಾನು ಈಗ ನನ್ನ ತಂದೆ ತಾಯಿಯ ಆಶ್ರಯದಲ್ಲಿ ಜೀವನ ಸಾಗಿಸುತ್ತಿದ್ದೆನೆ. ನನ್ನ ಗಂಡ ಮನೆ ಖರೀದಿಸಲು ನನ್ನ ಡಿಗ್ರಿ ಸರ್ಟಿಪಿಕೆಟ ಹಚ್ಚಿ 20 ಲಕ್ಷ ಸಾಲ ತೆಗೆದುಕೊಂಡಿರುತ್ತಾರೆ. ದಿನಾಂಕ 19.03.2017 ರಂದು ರಾತ್ರಿ 11 ಗಂಟೆಗೆ ನನ್ನ ಗಂಡ ರಾಜಶೇಖರ ಕೆಲವು ಗುಂಡಾ ಜನರನ್ನು ಕರೆದುಕೊಂಡು ನಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನನಗೆ ಬೈದು ನಾನು ಮನೆಯ ಹೊರಗೆ ನಿಂತಿರುವಾಗ ನನಗೆ ಹೊಡೆದು ಗುಪ್ತಗಾಯಪಡಿಸಿರುತ್ತಾನೆ. ಆಗ ನನ್ನ ಅಣ್ಣ ಮತ್ತು ನೆರೆಹೊರೆಯವರು ಬಂದು ಜಳ ಬಿಡಿಸಿದಾಗ ನನ್ನ ಗಂಡ ಹಾಗೂ ಆತನ ಸ್ನೇಹಿತರು ಓಡಿ ಹೋಗಿರುತ್ತಾರೆ. ಓಡಿ ಹೋಗುವಾಗ ನನಗೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಆದದ್ದರಿಂದ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ನನ್ನ ಗಂಡ ಹಾಗೂ ಆತನ ಸಂಗಡಿಗರಾದ ಶ್ರೀಕಾಂತ ಮರಡಿ,ಸುಭಾಷ ಮರಡಿ,ಬಶೆಟ್ಟಿ,ತುಕಾರಾಮ, ಚಂದ್ರಕಾಂತ ಬಂಗರಗಿ ಮತ್ತು ಮಲಕಯ್ಯ ಸ್ವಾಮಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 10.03.2017 ರಂದು ಬೆಳ್ಳಿಗ್ಗೆ ನಾನು ನಮ್ಮ ತಾಯಿ ಜೈಶ್ರೀ ಕೂಡಿಕೊಂಡು ನಮ್ಮ ಮೋಟಾರ ಸೈಕಲ ತೆಗೆದುಕೊಂಡು ಹುಮನಾಬಾದ ಹತ್ತಿರ ಇರುವದ ಕಪಲಾಪೂರ ಅಂಬಾ ಭವಾನಿ ದೇವರಿಗೆ ಹೊರಟಿದೇವು ಬೆಳ್ಳಿಗ್ಗೆ 10:30 ಗಂಟೆಯ ಸುಮಾರಿಗೆ ನಾವು ಹುಮನಾಬಾದ ರಿಂಗ್ ರೋಡ ಹತ್ತಿರ ಬಂದಿದ್ದು ಅಲ್ಲಿ ನನಗೆ ಪರಿಚಯದವರಾದ ವೀರಣ್ಣ ತಂದೆ ದೇವಿಂದ್ರಪ್ಪ ವಿಶ್ವಕರ್ಮ ಮತ್ತು ಹೊನ್ನಮ್ಮ ಗಂಡ ಜಗನ್ನಾಥ ಅಜಾದಪೂರ ಇವರು ಮೋಟಾರ ಸೈಕಲ ತೆಗೆದುಕೊಂಡು ನಿಂತ್ತಿದ್ದು ಅವರನ್ನು ನೋಡಿ ನಾವು ನಿಂತು ಅವರ ಸಂಗಡ ಮಾತನಾಡಿದ್ದು ಅವರು ಕೂಡಾ ಕಪಲಾಪೂರ ಅಂಬಾ ಭವಾನಿ ಗುಡಿಗೆ ಹೊಗುತ್ತಿರುವದಾಗಿ ತಿಳಿಸಿದ್ದು ನಂತರ ನಾವು ಮೊಟಾರ ಸೈಕಲ ತೆಗೆದುಕೊಂಡು ಹುಮನಾಬಾದ ಕಡೆಗೆ ಎನ್.ಎಚ್.218ರ ಮೇಲೆ ಹೊಗುತ್ತಿದ್ದು ವೀರಣ್ಣ ಇವರು ತಮ್ಮ ಮೋಟಾರ ಸೈಕಲ ನಂ ಕೆಎ 32 ಇಕೆ 4510 ನೇದ್ದು ತೆಗೆದುಕೊಂಡು ಹೊನ್ನಮ್ಮ ಇವಳನ್ನು ಮೋಟಾರ ಸೈಕಲ ಹಿಂದೆ ಕೂಡಿಸಿಕೊಂಡು ನಮ್ಮ ಮುಂದೆ ಹೋಗುತ್ತಿದ್ದು ನಾನು ನಮ್ಮ ತಾಯಿ ನಮ್ಮ ಮೋಟಾರ ಸೈಕಲ ಮೇಲೆ ಅವರ ಹಿಂದೆ ಹೊಗುತ್ತಿದ್ದು ಮಧ್ಯಾನ 12:30 ಗಂಟೆಯ ಸುಮಾರಿಗೆ ನಾವು ಭಿಮನಾಳ ಸಿಮಾಂತರದ ಕುದುರೆ ಮುಖ ಏರಿನಲ್ಲಿ ಹೊಗುತ್ತಿದ್ದು ಕುದುರೆ ಮುಖ ರಸ್ತೆ ತಿರುವಿನಲ್ಲಿ ನಮ್ಮ ಎದರುಗಡೆಯಿಂದ ಅಂದರೆ ಹುಮನಾಬಾದ ಕಡೆಗೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಬರುತ್ತಿದ್ದು ನಮ್ಮ ಮುಂದೆ ಮೋಟಾರ ಸೈಕಲ ನಡೆಯಿಸಿಕೊಂಡು ಹೊಗುತ್ತಿದ್ದ ವಿರಣ್ಣ ಇವರು ತಮ್ಮ ಮೋಟಾರ ಸೈಕಲನ್ನು ರಸ್ತೆಯ ಎಡಭಾಗದಿಂದ ನಡೆಯಿಸಿಕೊಂಡು ಹೊಗುತ್ತಿದ್ದು ಆಗ ಎದರುಗೆಯಿಂದ ಬರುತ್ತಿದ್ದ ಕಾರ ಚಾಲಕನು ವೇಗದಿಂದ ಬಂದು ವೀರಣ್ಣ ಇವರ ಮೋಟಾರ ಸೈಕಲಕ್ಕೆ ಜೋರಾಗಿ ಗುದ್ದಿ ಅಪಘಾತ ಪಡಿಸಿದ್ದು ಆಗ ವೀರಣ್ಣ ಮತ್ತು ಹೊನ್ನಮ್ಮ ಇವರು ಮೋಟಾರ ಸೈಕಲ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಸದರಿ ಘಟನೆಯನ್ನು ನೋಡಿ ನಾನು ಮತ್ತು ನಮ್ಮ ತಾಯಿ ಕೂಡಿಕೊಂಡು ಸದರಿಯವರ ಹತ್ತಿರ ಹೋಗಿ ನೋಡಲು ವಿರಣ್ಣ ಇವರ ಎಡಭಾಗದ ತೆಲೆಗೆ ಎಡಗಣ್ಣಿನ ಕೆಳಗೆ, ಹಣೆಗೆ ರಕ್ತಗಾಯವಾಗಿದ್ದು ಎಡಭುಜಕ್ಕೆ, ಎರಡು ಕಾಲುಗಳ ಮೊಳಕಾಲ ಮೇಲೆ, ಮತ್ತು ದೇಹದ ಇತರೆ ಭಾಗದಲ್ಲಿ ರಕ್ತಗಾಯ, ಗುಪ್ತಗಾಯವಾಗಿದ್ದು ಇರುತ್ತದೆ ನಂತರ ಹೊನ್ನಮ್ಮಳಿಗೆ ನೋಡಲು ಅವಳ ಹಣೆಯ ಮೇಲೆ ಎಡಗಣ್ಣಿನ ಹತ್ತಿರ ಗದ್ದಕ್ಕೆ ರಕ್ತಗಾಯವಾಗಿದ್ದು ದೇಹದ ಇತರೆ ಭಾಗದಲ್ಲಿ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿಯವರಿಗೆ ಅಪಘಾತ ಪಡಿಸಿದ ಕಾರ ಅಲ್ಲೆ ಇದ್ದು ನಂಬರ ನೋಡಲು ಕೆಎ 32 ಎನ್ 5321 ಅಂತ ಇದ್ದು ಅಪಘಾತವಾದ ನಂತರ ಜನರು ಬರುವದನ್ನು ನೋಡಿ ಸದರಿ ಕಾರಿನ ಚಾಲಕ ತನ್ನ ಕಾರನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ. ಸದರಿ ಕಾರ ಚಾಲಕನನ್ನು ನೋಡಿದರೆ ಗುರುತಿಸುತ್ತೆನೆ, ನಂತರ ನಾನು 108 ಅಂಬುಲೇನ್ಸಕ್ಕೆ ಕರೆ ಮಾಡಿದ್ದು ಸ್ವಲ್ಪ ಸಮಯದಲ್ಲಿ ಅಂಬುಲೇನ್ಸ ಸ್ಥಳಕ್ಕೆ ಬಂದಿದ್ದು ನಾನು ಮತ್ತು ನಮ್ಮ ತಾಯಿ ಕೂಡಿಕೊಂಡು ವೀರಣ್ಣ ಮತ್ತು ಹೊನ್ನಮ್ಮ ಇವರಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಬಂದು ಯುನೈಟೆಡ್ ಆಸ್ಪತ್ರೇಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಸಧ್ಯ ಸದರಿ ಇಬ್ಬರು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲ  ದಿನಾಂಕ 20.03.2017 ರಂದು ಮಧ್ಯಾನ 12:30 ಗಂಟೆಗೆ ಸುಮಾರಿಗೆ ಉಪಚಾರ ಹೊಂದುತ್ತಿದ್ದ  ವೀರಣ್ಣ ತಂದೆ ದೇವಿಂದ್ರ ವಿಶ್ವಕರ್ಮ ಸಾ: ರಾಜಾಪೂರ ಇವರು ಮೃತಪಟ್ಟಿರುತ್ತಾರೆ ಅಂತ ಸಲ್ಲಿಸಿದ ಶ್ರೀ ಕೀರಣಕುಮಾರ ತಂದೆ ಜಗನ್ನಾಥ ಗುತ್ತೆದಾರ ಸಾ: ಮನೆ ನಂ 2-907/1813 ಗುಬ್ಬಿ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು  ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

20 March 2017

Kalaburagi District Reported Crimes

ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ದಿನಾಂಕ 19-03-2017 ರಂದು ಬೆಳಿಗ್ಗೆ ನನ್ನ ಗಂಡ ಕೆಲಸಕ್ಕೆಂದು ಯಡ್ರಾಮಿಗೆ ಹೋಗಿರುತ್ತಾರೆ, ನಂತರ 6;15 ಪಿ.ಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ದೇವಿಂದ್ರಪ್ಪ ನ್ಯಾವನೂರ ರವರು ನಮ್ಮ ಮನೆಗೆ ಬಂದು ಹೇಳಿದ್ದೇನೆಂದರೆ, ನಮ್ಮೂರ ಟಂಟಂ ನಂ ಕೆ.32-ಸಿ-1484 ನೇದ್ದರಲ್ಲಿ ನಾನು ಮತ್ತು ನಿಮ್ಮ ಗಂಡ ಸಿದ್ದಪ್ಪ ಮಾದರ ಹಾಗು ಪಾರ್ವತಿ ಗಂಡ ಭೀಮಶಾ ಕಟಬರ ಹಿಗೆಲ್ಲರು ಕುಳಿತು ಯಡ್ರಾಮಿಯಿಂದ ಸುಂಬಡ ಗ್ರಾಮಕ್ಕೆ ಬರುತ್ತಿದ್ದಾಗ ಸುಂಬಡ ಸಮೀಪ ಅಖಂಡಳ್ಳಿ ಕ್ರಾಸ ಹತ್ತಿರ ಟಂಟಂ ಚಾಲಕ ಸುಬಾಸ ತಂದೆ ಮಲ್ಲಪ್ಪ ಮಾದರ ಸಾ|| ಸುಂಬಡ ಈತನು ತನ್ನ ಟಂಟಂ ನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮೇಲೆ ಕಟ್ಟ ಮಾಡಿದ್ದರಿಂದ ಟಂಟಂ ರೋಡಿನ ಬಲಗಡೆ ಪಲ್ಟಿಯಾಯಿತು. ಅಪಘಾತದಲ್ಲಿ ನಮಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಆದರೆ ನಿಮ್ಮ ಗಂಡ ಸಿದ್ದಪ್ಪ ಮಾದರ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿದೆ ಅಂತಾ ಹೇಳಿದ ಕೂಡಲೆ ನಾನು ಮತ್ತು ನನ್ನ ಅಳೀಯ ಮುತ್ತು ತಂದೆ ಮಹಾದೇವಪ್ಪ ಮಾದರ ಹಾಗು ನಮ್ಮ ಅಣ್ಣ ಹಳ್ಳೆಪ್ಪ ಮಾದರ ಹಿಗೆಲ್ಲರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ಟಂಟಂ ನಂ ಕೆ.32-ಸಿ-1484 ನೇದ್ದು ರಸ್ತೆಯ ಬಲಗಡೆ ಪಲ್ಡಿಯಾಗಿ ಬಿದ್ದಿದ್ದು, ಅದರ ಹತ್ತಿರ ಬಿದ್ದ ನನ್ನ ಗಂಡನನ್ನು ನೋಡಲಾಗಿ ಅವರ ತಲೆಗೆ ಭಾರಿ ರಕ್ತಗಾಯವಾಗಿದ್ದು, ರಕ್ತ ಸೋರುತ್ತಿತ್ತು, ನಂತರ ಅದೇ ಟಂಟಂ ನಲ್ಲಿ ನನ್ನ ಗಂಡನನ್ನು ಹಾಕಿಕೊಂಡು ಉಪಚಾರ ಕುರಿತು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆಸ್ಪತ್ರೆ ಆವರಣದಲ್ಲಿ ನನ್ನ ಗಂಡ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ನೆಲೋಗಿ ಠಾಣೆ : ಶ್ರೀ ಅಣ್ಣಪ್ಪ ತಂದೆ ಶಿವಲಿಂಗಪ್ಪ ಗಂದೆನವರ ಉ|| ಪೊಲೀಸ್ ಮುಖ್ಯ ಪೇದೆ  ಸಾ|| ವೀರೆಂದ್ರ ಪಾಟೀಲ ಬಡಾವಣೆ ಕಲಬುರಗಿ  ರವರು ದಿನಾಂಕ: 17/03/2017 ರಂದು ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ತೇರ ಬಂದೋಬಸ್ತ ಕುರಿತು ನಾನು ಮತ್ತು ನಮ್ಮ ಠಾಣೆಯ ಅಣ್ಣಪ್ಪ ಜಿಂಗ್ಗೆ ಎ.ಎಸ್.ಐ ಹಾಗೂ ಮಹಾದೇವ ಸಿ.ಹೆಚ್.ಸಿ 429 ಎಲ್ಲರೂ ಕೂಡಿ ಬಂದೋಬಸ್ತ ಕರ್ತವ್ಯಕ್ಕೆ ನಾನು ಹಾಗೂ ಅಣ್ಣಪ್ಪ ಎ.ಎಸ್.ಐ ನನ್ನ ಮೋಟರ ಸೈಕಲ ಮೇಲೆ ಹಾಗೂ ಮಹಾದೇವ ಇವರು ತನ್ನ ಮೋಟರ ಸೈಕಲ ಮೇಲೆ ತಿರುಗಾಡಲು ತನ್ನ ಮಗನೊಂದಿಗೆ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ:17/03/2017 ರಂದು ಸಾಯಂಕಾಲ 7:00 ಪಿ.ಎಂ ಸುಮಾರಿಗೆ ತೇರ ಎಳೆದಾದನಂತರ ನಮಗೆ ಕಲಬುರಗಿಯಲ್ಲಿ ಸಿಎಂ ಬಂದೋಬಸ್ತ ಇರುವ ಪ್ರಯುಕ್ತ ನಾವು ತಮ್ಮ ತಮ್ಮ ಮೋಟರ ಸೈಕಲ ಮೇಲೆ ಅರಳಗುಂಡಗಿ ಗ್ರಾಮದಿಂದ ಮರಳಿ ಬರುವಾಗ ನನ್ನ ಮೋಟರ ಸೈಕಲ ನಾನು ಚಲಾಯಿಸುತ್ತಿದ್ದೆ ನನ್ನ ಹಿಂದೆ ಅಣ್ಣಪ್ಪ ಎ.ಎಸ್.ಐ ಕುಳಿತರು ಮಹಾದೇವ ಮೋಟರ ಸೈಕಲ ನಂ: ಕೆ.ಎ 32-ಇಎ-8264 ನೇದ್ದರ ರಾತ್ರಿ ಆಗಿರುವ ಕಾರಣ ಅವರ ಮಗನಾದ ಪ್ರಸನ್ನ ಕುಮಾರ ತಂದೆ ಮಹಾದೇವ ಅಣವಾರ ಈತನು ಮೋಟರ ಸೈಕಲ ಚಲಾಯಿಸಿಕೊಂಡು ಜೇವರ್ಗಿ ರಸ್ತೆಯಲ್ಲಿ ಬರುವ ಸೋನ್ನ ಕ್ರಾಸ ಇನ್ನೂ 100 ಅಡಿ ಅಂತರ ಇರುವಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದ ರಸ್ತೆಯಲ್ಲಿ ಅಂದಾಜು 8:00 ಪಿ.ಎಂಕ್ಕೆ ಪ್ರಸನ್ನಕುಮಾರ ನಮ್ಮ ಮುಂದೆ ಮುಂದೆ ಮೋಟರ ಸೈಕಲ ಚಲಾಯಿಸುತ್ತಿದ್ದ ಅದೇ ಕತ್ತಲ್ಲಲ್ಲಿ ರಸ್ತೆಯ ಪಕ್ಕ ತೆಗ್ಗಿನಲ್ಲಿ ಒಮ್ಮಲೆ ಹಾಕಿದ್ದರಿಂದ ಅವರೂ ಮೋಟರ ಸೈಕಲದಿಂದ ಕೇಳಗೆ ಬಿದ್ದಾಗ ನಾವು ನೋಡಿ ನನ್ನ ಗಾಡಿ ಸೈಡಿಗೆ ನಿಲ್ಲಿಸಿ ಅವರಿಬ್ಬರಿಗೆ ಎಬ್ಬಿಸಿ ನೋಡಲು ಮಹಾದೇವನಿಗೆ ಬಲ ತಲೆಗೆ ರಕ್ತಗಾಯ ಬಲ ಮೈಗೆ ತರಚಿದ ಗಾಯ ಬಲ ಮತ್ತು ಎಡ ಕೈ ಮುಂಡಿಗೆ ತರಚಿದ ಗಾಯ ಬಲ ಪಕ್ಕಗೆ ಗುಪ್ತಗಾಯ ಎಡ ಸೊಂಟಕ್ಕೆ ತರಚಿದ ಗಾಯ ಆಗಿದ್ದು ಪ್ರಸನ್ನಕುಮಾರನಿಗೆ ಅಷ್ಟೇನು ಗಾಯ ಆಗಿಲ್ಲ ಆಗ ನಾವು 108 ಅಂಬುಲೇನ್ಸಗೆ ಫೊನ ಮಾಡಿ ಕರೆಯಿಸಿ ಅದರ ಮಹಾದೇವನಿಗೆ ಹಾಕಿ ದವಾಖೆಗೆ ಕಳುಹಿಸಿಕೊಟ್ಟು ನಾವು ಇಂದು ಸಿಎಂ ಬಂದೋಬಸ್ತ ಕರ್ತವ್ಯಕ್ಕೆ ಹೋಗಿ ಬಂದೋಬಸ್ತ ಕರ್ತವ್ಯ ಮುಗಿಸಿ ಮಹಾದೇವ ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ನಾನು ನೆಲೋಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಿರುತ್ತೆನೆ.  
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:19/03/2017 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ವಿವೇಕಾನಂದ ನಗರದಲ್ಲಿರುವ ಓಂಕಾರೇಶ್ವರ ಮಂದೀರದ ಹಿಂದುಗಡೆ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ್ಜೂಜಾಟ ಆಡುತ್ತಿದ್ದಾರೆ ಅಂತಾ ಬಂದ ಮಾಹಿತಿ ಮೇರೆಗೆ ಶ್ರೀ ಸಂಜೀವಕುಮಾರ ಪಿ.ಎಸ್.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ವಿವೇಕಾನಂದ ನಗರದ ಮಿಲಿನಿಯಮ ಶಾಲೆಯ  ಹತ್ತಿರ ಹೋಗಿ ಶಾಲೆಯ ಪಕ್ಕದಲ್ಲಿ ಇರುವ ಸಾರ್ವಜನಿಕ ಗಾರ್ಡನ ಹತ್ತಿರ ನಿಂತು  ನೋಡಲು 8 ಜನರು ದುಂಡಾಗಿ ಕುಳಿತು ಇಸ್ಪೇಟ್ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಂಆಡಿ  ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ಬಸವರಾಜ ತಂದೆ ಈರಣ್ಣ ಅಲೂರ ಸಾ|| ದೇವಿ ನಗರ ಕಲಬುರಗಿ 2)  ದತ್ತು ತಂದೆ ಮಹೇಶ ಪಾಟೀಲ ಸಾ|| ಸಂತೋಷ ಕಾಲೋನಿ ಕಲಬುರಗಿ 3) ರಾಜು ತಂದೆ ಬಸವರಾಜ ಪಾಟೀಲ ಸಾ|| ಸಂತೋಷ ಕಾಲೋನಿ ಕಲಬುರಗಿ  4) ಪ್ರಶಾಂತ ತಂದೆ ಬಸವಂತರಾಯ ಬೀರಾದಾರ ಸಾ|| ಕರುಣೇಶ್ವರ  ಕಾಲೋನಿ ಕಲಬುರಗಿ 5)  ಕಲ್ಯಾಣಪ್ಪ ತಂದೆ ಶರಣಬಸಪ್ಪ ನಾಗೂರೆ ಸಾ|| ಸಂತೋಷ ಕಾಲೋನಿ ಕಲಬುರಗಿ 6)  ಸಿದ್ದು ತಂದೆ ಚಂದ್ರಶ್ಯಾ ಕೊರಳ್ಳಿ ಸಾ|| ಸಂತೋಷ ಕಾಲೋನಿ ಕಲಬುರಗಿ 7)  ಶಿವಕುಮಾರ ತಂದೆ ಶರಣಯ್ಯಾ ಸ್ವಾಮಿ ಸಾ|| ದೇವಿ ನಗರ ಕಲಬುರಗಿ 8) ಜಗನಾಥ ತಂದೆ ಭೀಮರಾವ ಮಾಲಿ ಸಾ|| ಶಹಬಜಾರ ಕಲಬುರಗಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಒಟ್ಟು 16300/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.                                                      

19 March 2017

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಮಾಲಾಶ್ರೀ ಗಂಡ ತಾನಾಜಿ ಜಮಾದಾರ ಸಾಃ ಹೊನ್ನಾಳ ತಾಃ ಜೇವರಗಿ ಹಾಃವಃ ಕೌಲಗಾ (ಬಿ) ಇವರ ತಾಯಿಯವರು ಜೇವರಗಿ ತಾಲೂಕಿನ ಹೊನ್ನಾಳ ಗ್ರಾಮದ ತಾನಾಜಿ  ಇವರೊಂದಿಗೆ ದಿ. 01.05.2016 ರಂದು ಬಳುಂಡಗಿ ರೇವಣಸಿದ್ದೇಶ್ವರ ದೇಸವಸ್ಥಾನದಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆ ಕಾಲಕ್ಕೆ ವರದಕ್ಷಣಿಯಾಗಿ 5 ತೊಲಿ ಬಂಗಾರ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಹುಂಡಾ ಕೊಡುವ ಮಾತಾಗಿತ್ತು ಮದುವೆ ಕಾಲಕ್ಕೆ ನಮ್ಮ ತಂದೆಯವರು ನನ್ನ ಗಂಡನಿಗೆ ವರದಕ್ಷಿಣೆಯಾಗಿ ಎರಡು ತೊಲೆ ಬಂಗಾರ, ಒಂದು ಲಕ್ಷ ರೂಪಾಯಿ ಹುಂಡಾ, & ಮಂಚ ಗಾದಿ ಟೀಜೋರಿ ಹಾಗು ಬೆಲೆ ಬಾಳುವ ಹಾಂಡೆ ಬಾಂಡೆಗಳು ಕೊಟ್ಟಿರುತ್ತಾರೆ. ಮದುವೆ ಕಾಲಕ್ಕೆ ಮಾತಿನಂತೆ ಇನ್ನೂ ಮೂರು ತೊಲೆ ಬಂಗಾರ, ಐವತ್ತು ಸಾವಿರ ರೂಪಾಯಿ ಹುಂಡಾ ಕೊಟ್ಟಿರುವುದಿಲ್ಲಾ. ಮದುವೆಯಾದ ನಂತರ ನಾನು ನನ್ನ ಗಂಡನ ಸಂಗಡ ಹೊನ್ನಾಳದಲ್ಲಿಯೇ ವಾಸವಾಗಿದ್ದೆನು. 2 ತಿಂಗಳ ನಂತರ ನಾನು ಮತ್ತು ನನ್ನ ಗಂಡ ಇಬ್ಬರೂ ಪುನಾ ಕ್ಕೆ ಹೋಗಿ ಪುನಾದಲ್ಲಿ ಜಾದವ ನಗರದಲ್ಲಿ ವಾಸವಾಗಿದ್ದೆವು. ಅಲ್ಲಿ ನನ್ನ ಗಂಡನು ಸಂಸಾರದ ವಿಷಯದಲ್ಲಿ ನನ್ನ ಸಂಗಡ ಜಗಳ ಮಾಡಹತ್ತಿದನು. ಅದಕ್ಕೆ ಒಂದು ತಿಂಗಳ ನಂತರ ನಾನು ನನ್ನ ಗಂಡ ಇಬ್ಬರೂ ಪುನಾದಿಂದ ಹೊನ್ನಾಳಕ್ಕೆ ಬಂದು ಹೊನ್ನಳಾದಲ್ಲಿಯೇ ಇದ್ದೇವು. ನನ್ನ ಗಂಡನು ನನಗೆ ನಿಮ್ಮ ತಂದೆ ತಾಯಿಯವರು ಮದುವೆಯಲ್ಲಿ ನನಗೆ ಇನ್ನೂ ಮೂರು ತೊಲಿ ಬಂಗಾರ ಐವತ್ತು ಸಾವಿರ ರೂಪಾಯಿ ಕಡಿಮೆ ಕೊಟ್ಟಿರುತ್ತಾರೆ ಇನ್ನೂ ನಿಮ್ಮ ತಂದೆಯವರಿಂದ ಮೂರು ತೊಲಿ ಬಂಗಾರ ಮತ್ತು ಐವತ್ತು ಸಾವಿರ ರೂಪಾಯಿ ತೆಗೆದುಕೊಂಡು ಬಾ ಎಂದು ನನ್ನ ಸಂಗಡ ತಕರಾರು ಮಾಡಿ ಕೈಯಿಂದ ಹೊಡೆದು ಕಾಲಿನಿಂದ ಒದೆಯುತ್ತಿದ್ದನು. ಅದಕ್ಕೆ ನಾನು ನಮ್ಮ ತಂದೆಯವರು ಬಡವರು ಇರುತ್ತಾರೆ ಅವರು ಎಲ್ಲಿಂದ ತಂದು ಕೊಡುತ್ತಾರೆ. ನನ್ನ ಮದುವೆ ಮಾಡಿ ಖರ್ಚು ಮಾಡಿರುತ್ತಾರೆ ಅವರ ಹತ್ತಿರ ಹಣ ಬಂಗಾರ ಇರುವುದಿಲ್ಲಾ ಅಂದಾಗ ನನ್ನ ಗಂಡ ಎ ರಂಡೀ ನನಗೇನು ಹೇಳುತಿ ಮದುವೆ ಮಾತಿನಂತೆ ನಿನು ನಿನ್ನ ತವರು ಮನೆಯಿಂದ ಬಂಗಾರ ಹಣ ತೆಗೆದುಕೊಂಡು ಬಂದರೆ ಸರಿ ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೆನೆಂದು ಬೆದರಿಕೆ ಹಾಕುತ್ತಿದ್ದನು. ಮತ್ತು ನನ್ನ ಅತ್ತೆ ಮಾವ ಮೈದುನರು ಹಾಗೂ ಅವರ ಸಂಭಂದಿಕರು ಸಹ ನನಗೆ ನೀನ್ನ ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ನನಗೆ ಹೊಡೆಯುವುದು ಮಾಡಿ ನನಗೆ ಮಾನಸೀಕ ದೈಹಿಕ ಕಿರುಕುಳ ಕೋಡುತ್ತಾ ಬಂದಿರುತ್ತಾರೆ. ನಾನು ಮನೆ ಮರ್ಯಾದಿಗೆ ಅಂಜಿ ಮತ್ತು ನನ್ನ ಮುಂದಿನ ಭವಿಷ್ಯದ ಬಗ್ಗೆ ಯೊಚನೆ ಮಾಡಿ ಸುಮ್ಮನಿದ್ದೆನು. ದಿ. 16.08.2016 ರಂದು ಮುಂಜಾನೆ 9.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಗಂಡ 1) ತಾನಾಜಿ ತಂದೆ ಶಂಕರ ಜಮಾದಾರ, ಮೈದುನರಾದ 2) ಶಿವಾಜಿ  ತಂದೆ ಶಂಕರ ಜಮಾದಾರ, 3) ಸಂಬಾಜಿ ತಂದೆ ಶಂಕರ ಜಮಾದಾರ, ಮಾವ 4) ಶಂಕರ ತಂದೆ ಮಲ್ಲಪ್ಪ ಜಮಾದಾರ, 5) ಲಕ್ಮೀ ಗಂಡ ಶಂಕರ ಜಮಾದಾರ, ನೇಗೆಣಿಯವರಾದ 6)ಜ್ಯೋತಿ ಗಂಡ ಸಂಬಾಜಿ ಜಮಾದಾರ, 7) ಸಂಗೀತಾ ಗಂಡ ಶಿವಾಜಿ ಜಮಾದಾರ, ನನ್ನ ಗಂಡನ ಸಂಭಂದಿಕರಾದ 8) ಸಾಹೇಬಗೌಡ ತಂದೆ ಹಣಮಂತ ಶಹಾಪೂರ, 9) ಗಂಗಮ್ಮ ಗಂಡ ಸಾಹೇಬಗೌಡ ಶಹಾಪೂರ ಸಾಃ ಬಳುಂಡಗಿ 10) ಶ್ಯಾಮಬಾಯಿ ಗಂಡ ಚನ್ನಮಲ್ಲಪ್ಪ ಬಡದಾಳ ಇವರೆಲ್ಲರೂ ಕೂಡಿಕೊಂಡು ನನ್ನ ಸಂಗಡ ಜಗಳ ಮಾಡಹತ್ತಿದ್ದರು. ಅವರಿಗೆ ಯಾಕೆ? ಜಗಳ ಮಾಡುತ್ತಿದ್ದಿರಿ ಅಂತಾ ಕೇಳಿದಾಗ ನನ್ನ ಗಂಡನು ಏ ರಂಡಿ ಮಾತಿನಂತೆ ಮದುವೆಯಲ್ಲಿ ಕೊಡಬೇಕಾದ ಇನ್ನೂ ಮೂರು ತೊಲಿ ಬಂಗಾರ ಐವತ್ತು ಸಾವಿರ ರೂಪಾಯಿ ನೀನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಇಲ್ಲವಾದರೆ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ಬೈದಿರುತ್ತಾನೆ. ಅಲ್ಲದೆ ನನ್ನ ಅತ್ತೆ ಮತ್ತು ಮಾವ ಹಾಗೂ ಮೈದುನರು ನೀನು ನಮ್ಮ ಮನೆಗೆ ತಕ್ಕ ಹೆಣ್ಣು ಅಲ್ಲಾ ನಿನಗೆ ಸರಿಯಾಗಿ ಅಡುಗೆ ಕೆಲಸ ಮಾಡಲು ಬರುವುದಿಲ್ಲಾ  ಮಾತಿನಂತೆ ಮದುವೆಯಲ್ಲಿ ನಿನ್ನ ತವರು ಮನೆಯವರು ಬಂಗಾರ, & ಹುಂಡಾ ಹಣ ಕಡಿಮೆ ಕೊಟ್ಟಿರುತ್ತಾರೆ ಇನ್ನೂ ಕೊಡಬೇಕಾದ ಬಂಗಾರ & ಹಣ ನೀನ್ನ ತವರು ಮನೆಯಿಂದ  ತೆಗೆದುಕೊಂಡು ಬಾ ಇಲ್ಲವಾದರೆ ನೀನು ನೀನ್ನ ತವರು ಮನೆಗೆ ಹೋಗು ಅಂತಾ ಕಿರುಕುಳ ಕೊಟ್ಟಿರುತ್ತಾರೆ. ಅಲ್ಲದೆ ಅವರ ಸಂಭಂಧಿಕರು ನನಗೆ ನೀನ್ನ ಗಂಡ ಮತ್ತು ಅತ್ತೆ, ಮಾವ, ಹಾಗೂ ಮೈದುನರು ಹೇಳಿದಂತೆ ಮಾಡಿದರೆ ನೀನ್ನ ಜೀವನ ಚನ್ನಾಗಿರುತ್ತದೆ ಇಲ್ಲವಾದರೆ ನೀನ್ನ ಹಣೆಬರಹ ನೇಟ್ಟಗಿರಲ್ಲಾ. ಎಂದು ಅವರ ಪರವಾಗಿ ಮಾತನಾಡಿ ಕಿರುಕುಳ ಕೊಟ್ಟಿರುತ್ತಾರೆ. ಅವರು ಹೀಗೆ ತೊಂದರೆ ಕೊಡುತ್ತಿದ್ದ ತ್ರಾಸ್ ತಾಳಲಾರದೆ ನಾನು ನಮ್ಮ ತಂದೆ ತಾಯಿಯವರಿಗೆ ಹೇಳಿದಾಗ ನಮ್ಮ ತಂದೆ ತಾಯಿಯವರು ಮತ್ತು ನನ್ನ ಮದುವೆ ಕಾಲಕ್ಕೆ ಹಾಜರಿದ್ದವರಾದ ಮುತ್ತಣ್ಣ ತಂದೆ ಶಿವಲಿಂಗಪ್ಪ ಸಂಗೊಂಡ, ಸಿದ್ದಣ್ಣ ತಂದೆ ಚನ್ನಬಸ್ಸಪ್ಪ ಭೂದಿಹಾಳ, ಇವರು ಬಂದು ನನ್ನ ಗಂಡನಿಗೆ ಮತ್ತು ನನ್ನ ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿರುತ್ತಾರೆ. ಆದರೂ ಸಹ ಅವರು ಮಾತಿನಂತೆ ಇನ್ನೂ ಕೊಡಬೇಕಾದ ಮೂರು ತೊಲೆ ಬಂಗಾರ, ಐವತ್ತು ಸಾವಿರ ರೂಪಾಯಿ ಹುಂಡಾ ತೆಗೆದುಕೊಂಡು ಬಾ ಎಂದು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದಾಗ ಅವರ ತ್ರಾಸ್ ತಾಳಲಾರದೆ ನಾನು ಹೊನ್ನಾಳದಿಂದ ಕೌಲಗಾ (ಬಿ) ಗ್ರಾಮಕ್ಕೆ ಬಂದು ನಮ್ಮ ತಂದೆ ತಾಯಿಯವರ ಹತ್ತಿರ ವಾಸವಾಗಿರುತ್ತೆನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.