POLICE BHAVAN KALABURAGI

POLICE BHAVAN KALABURAGI

10 June 2014

Gulbarga District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ದಿನಾಂಕ 24-05-2014 ರಂದು 2-30 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ  ನನ್ನ ಮಗಳಾದ  ಕೋಮಲ ಇವಳಿಗೆ ಅಂಬರೀಷ ತಂದೆ ಬಾಬು ಚವ್ಹಾಣ ಇತನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಂಬರೀಷ ಮತ್ತು ಇವರ ಕುಟುಂಬದವರು ಈಗಾಗಲೇ ಸುಮಾರು ಮನೆಗಳನ್ನು ಮುರಿಯುವ ಕೆಲಸ ಮಾಡಿರುತ್ತಾರೆ. ಸದರಿ ಅಂಬರೀಷ ಇವರ ತಂದೆಯಾದ ಬಾಬು ಚವ್ಹಾಣ ನಿವೃತ್ತ ಪೊಲೀಸ ಅಧಿಕಾರಿಯಾಗಿದ್ದು, ಸದರಿಯವರು ಅಧಿಕಾರದಲ್ಲಿದ್ದಾಗ ಯಾರೋ ಬಡವನು ಬಂದು ತನ್ನ ಹೆಂಡತಿಗೆ ನೌಕರಿ ಹಚ್ಚಲು ಕೇಳಿಕೊಂಡಾಗ ಸದರಿಯವನು ಆತನಿಗೆ ಹೆದರಿಸಿ ಆತನ ಹೆಂಡತಿಯನ್ನೇ ಮದುವೆಯಾಗಿರುತ್ತಾನೆ. ಮತ್ತು ಇತನ ಇನ್ನೊಬ್ಬ ದೊಡ್ಡ ಮಗನಾದ ಶಿವ ಇತನು ದಬ್ಬಾಳಿಕೆಯಿಂದ ಬಡವರ ಮಗಳನ್ನು ಅಂಜಿಸಿ ಕಿಡ್ನಾಪ ಮಾಡಿಕೊಂಡು ಬಂದಿರುತ್ತಾನೆ. ಇನ್ನೊಬ್ಬ ಮಗ ಸತೀಶ ಕೇವಲ ಮೂರು ತಿಂಗಳ ಹಿಂದೆ ಇತನು ಕೂಡಾ ಕಿಡ್ನಾಪ ಮಾಡಿಕೊಂಡೇ ಮದುವೆಯಾಗಿರುತ್ತಾನೆ. ಇವರ ಕುಟುಂಬವೇ ದಬ್ಬಾಳಿಕೆ ಗುಂಡಾಗಿರಿ ಮಾಡಿ ಹೆಣ್ಣು ಮಕ್ಕಳನ್ನು ಹೆದರಿಸಿ ಯಾವುದೋ ಒಂದು ಆಸೆ ತೋರಿಸಿ ಬಲಿಯಲ್ಲಿ ಹಾಕಿಕೊಂಡು ಅತ್ಯಾಚಾರ ಮಾಡುವದು ಇವರ ಹುಟ್ಟು ಗುಣವಾಗಿರುತ್ತದೆ.  ನಾವು ಬಾಬು ಚವ್ಹಾಣ ಇವರನ್ನು ಈ ದಿನದವರೆಗೆ ನನ್ನ ಮಗಳಾದ ಕೋಮಲ ಇವಳನ್ನು ತಂದು ಕೊಡುವಂತೆ ಮನವಿ ಮಾಡಿಕೊಂಡರು ಕೂಡ ಸದರಿಯವರು ನಮಗೆ ಜೀವದ ಬೆದರಿಕೆ ಹಾಕುತ್ತಿದ್ದು, ಎಲೆ ಸುಳೇ ಮಗನೇ ಏನು ಮಾಡಿಕೊಳ್ಳುತ್ತೀ ಮಾಡಿಕೋ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುತ್ತಾನೆ. ಇಂತಹ ನೀಚರ ಕೈಯಲ್ಲಿ ನನ್ನ ಮಗಳು ಸಿಕ್ಕಿ ಬಿದ್ದಿರುತ್ತಾಳೆ. ಅವಳು ಈಗ ಅಳುತ್ತಾ ಅವರ ಮೇಲೆ ಕೇಸು ಮಾಡಬಾರದೆಂದು ಮೊಬಾಯಿಲನಲ್ಲಿ ಹೇಳುತ್ತಿರುತ್ತಾಳೆ. ನಿನ್ನೆ ಅವರ ಕಾಕಿ ಹತ್ತಿರ ಮೊಬಾಯಿಲನಲ್ಲಿ ಮಾತನ್ನಾಡಿದ್ದಾಳೆ ಹಾಗೂ ಇವತ್ತು ಅವರ ತಾಯಿ ಜೊತೆಗೆ ಮಾತನ್ನಾಡಿರುತ್ತಾಳೆ. ನನ್ನ ಮಗಳ ಮೇಲೆ ತುಂಬಾ ಒತ್ತಾಯಪೂರ್ವಕವಾಗಿ ಹೇಳಿಸುತ್ತಿದ್ದಾರೆ. ಕಾರಣ ನನ್ನ ಮಗಳ ಜೀವಕ್ಕೂ ಅಪಾಯವಿದೆ, ಕಾರಣ ದಯಾಳುಗಳಾದ ತಾವುಗಳು ನನ್ನ ಮಗಳನ್ನು ರಕ್ಷಿಸಿಕೊಡಬೇಕೆಂದು ಅಂತಾ ಶ್ರೀ ಪಾಂಡು ತಂದೆ ಬಾಬು ಪವಾರ ಸಾ:ವೆಂಕಟೇಶ ನಗರ ಗುಲಬರ್ಗಾ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ 09-06-2014 ರಂದು ಪಿ.ಟಿ.ಸಿ ನಾಗನಹಳ್ಳಿ ಕಂಪೌಂಡ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ ಎಲ್ಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ಧಾರೆ  ಎಂಬ ಖಚಿತ ಬಾತ್ಮಿ ಮೆರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಟಿ.ಸಿ ನಾಗನಹಳ್ಳಿ ಕಂಪೌಂಡ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ 8 ಜನರು ಕಂಪೌಂಡ ಗೋಡೆಯ ಪೂರ್ವ ಬದಿಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಆಡುತ್ತಿದ್ದಾರೆ ಅಂತಾ ಖಚಿತ ಪಡಿಸಿಕೊಂಡು  ದಾಳಿ ಮಾಡಿ ಹಿಡಿಯಲು ಇಸ್ಪೇಟ ಜೂಜಾಟದಲ್ಲಿ ತೊಡಗಿರುವ 8 ಜನರನು  ಹಿಡಿದು ಅವರ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು 1)ಮಲ್ಲು ತಂದೆ ಜಗನ್ನಾಥ ಸಂಗೋಳಿ, ಸಾ|| ಮಿಲನ ಚೌಕ ಗುಲಬರ್ಗಾ, 2) ರಮೇಶ ತಂದೆ ಸುರೇಶ ಬಾಸುದಕರ್, ಸಾ|| ಸಂತ್ರಾಸವಾಡಿ ಗುಲಬರ್ಗಾ,  3) ರಾಜು ತಂದೆ ಸೂರ್ಯಕಾಂತ ಬಿರಾದಾರ, ಸಾ|| ಲಕ್ಷ್ಮಿ ನಗರ ಸೇಡಂ ರೋಡ ಗುಲಬರ್ಗಾ, 4) ರವಿ ತಂದೆ ಶರಣಪ್ಪ ಹಾರಕೂಡ, ಸಾ; ಮಕ್ತಂಪೂರ ಗುಲಬರ್ಗಾ, 5) ಸಿದ್ದು ತಂದೆ ಘಾಳಪ್ಪ ನಿರಣಾ, ಸಾ|| ಮಕ್ತಂಪೂರ ಗುಲಬಗರ್ಾ, 6) ಪಂಡೀತ ತಂದೆ ದೇವಿಂದ್ರಪ್ಪ ಕಲಗುರ್ತಿ, ಸಾ|| ಕಲಗುರ್ತಿ ತಾ|| ಚಿತ್ತಾಪೂರ, 7) ಸಂದೀಪ ತಂದೆ ನೀಲಕಂಠ ಕಲಗುರ್ತಿ, ಸಾ|| ಕಲಗುರ್ತಿ, ತಾ|| ಚಿತ್ತಾಪೂರ, 8) ರಾಜು ತಂದೆ ರಾಚಣ್ಣ ಬಿರಾದಾರ, ಸಾ|| ಬಡೆಪುರ ಕಾಲೋನಿ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ನಗದು ಹಣ 8690/- ರೂಪಾಯಿ ಹಾಗೂ 52 ಇಸ್ಪೇಟ ಎಲ್ಲೆಗಳನ್ನು ಜಪ್ತ ಮಾಡಿಕೊಂಡು ಸದರಿಯವರೊಂದಿಗೆ ವಿಶ್ವವಿದ್ಯಾಲಯ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ದೇವಲ ಗಾಣಗಾಪೂರ ಠಾಣೆ : ದಿನಾಂಕ: 09-06-2014 ರಂದು ಮದ್ಯಾಹ್ನ 2-30 ಗಂಟೆಗೆ ದೇವಲಗಾಣಗಾಪುರದ ಸಂಗಮದಲ್ಲಿ ಔದಂಬರ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಜನರಿಗೆ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಜನರಿಗೆ ಕೂಗಿ ಹೇಳುತ್ತಾ ಜನರಿಂದ ಹಣ ಪಡೆದು ಅವರಿಗೆ ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿಗಳನ್ನು ಕೊಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸದರಿಯವನನ್ನು ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸುಭಾಷ ತಂದೆ ನಾಗನಾಥ ಕುಲಕರ್ಣಿ  ಸಾ|| ದೇವಲಗಾಣಗಾಪೂರ ತಾ|| ಅಫಜಲಪೂರ ಅಂತಾ ತಿಳಿಸಿದನು ಅವನ ವಶದಲ್ಲಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ ನಗದು ಹಣ 255=00 ರೂಪಾಯಿ, ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೆನ್ನ ದೊರೆತಿದ್ದು, ಅವುಗಳನ್ನು  ಜಪ್ತಿಮಾಡಿಕೊಂಡು ಸದರಿಯವನೊಂದಿಗೆ ದೇವಲ ಗಾಣಗಾಪೂರ ಠಾಣೆಗೆ ಬಂದು ಸದರಿಯವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ರಾಮಶೇಟ್ಟಿ ತಂದೆ ಭೀಮಲಾ ಚವ್ಹಾಣ ಸಾ:ಸರಫೋಶ್ ಕಿಣ್ಣಿ ಭವಾನಿ ನಗರ ತಾಂಢ  ತಾ:ಜಿ:ಗುಲಬರ್ಗಾ ಇವರು  ದಿನಾಂಕ 08-06-2014 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ನಾನು ನಮ್ಮ ಹೋಲಕ್ಕೆ ಗೊಬ್ಬರ ಮತ್ತು ಭೀಜಗಳನ್ನು ತೆಗೆದುಕೊಂಡು ಮದ್ಯಾಹ್ನ 03-00 ಗಂಟೆಯ ಸುಮಾರಿಗೆ ನಮ್ಮ ತಾಂಡಕ್ಕೆ ಹೋಗಿ ಮನೆಗೆ ಹೋದಾಗ ನನ್ನ ಮಗಳಾದ ಸಕ್ಕುಬಾಯಿ ಇವಳು ನನಗೆ ತಿಳಿಸಿದೆನೆಂದರೆ , ಇಂದು ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಬಟ್ಟೆ ಒಗೆಯುತ್ತಿದ್ದಾಗ ,ನಮ್ಮtತಾಂಡದ ಅಶೋಕ ತಂದೆ ಸೂರು ಚವ್ಹಾಣ ಈತನು ಮನೆಯ ಮುಂದಿನ ರಸ್ತೆಯಲ್ಲಿ ನಿಂತುಕೊಂಡು ಏ ರಂಡಿ ಸಕ್ಕಿ, ನಿಮ್ಮ ಅಪ್ಪನಿಗೆ ರೊಕ್ಕಾ ಕೊಡು ಅಂತ ಕೇಳಿದರೆ ಕೊಡುತ್ತಿಲ್ಲ, ಈಗ ನನಗೆ ಶೇರೆ ಕುಡಿಯಲು ಹಣ ಕೊಡು ಅಂತಾ ಅವಚ್ಯಾವಾಗಿ ಬೈಯುತ್ತಿದ್ದಾಗ ನಾನು ಆತನಿಗೆ ನಿನಗೆ ರೊಕ್ಕಾ ಬೇಕೆಂದರೆ ನಮ್ಮ ಅಪ್ಪ ಬಂದ  ನಂತರ ಬಾ ಅಂತ ಹೇಳಿ ನಮ್ಮ ಮನೆಯಲ್ಲಿ ಹೋಗಿ ಬಾಗಿಲು ಹಾಕಿಕೊಂಡಿರುತ್ತೇನೆ ಅಂತಾ ತಿಳಿಸಿದಳು, ನಂತರ ನಾನು ಮನೆಯಲ್ಲಿಯೇ ಉಳಿದುಕೊಂಡೆನು, ಸಾಯಾಂಕಾಲ 07-00 ಗಂಟೆಯ ಸುಮಾರಿಗೆ ನಾನು ನನ್ನ ಮನೆಯ ಮುಂದೆ ಕೂಳಿತು ಕೊಂಡಿದ್ದಾಗ ಅಶೋಕ ತಂದೆ ಸುರೂ ಚವ್ಹಾಣ ಈತನು ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಬಂದು ನಿಂತಕೊಂಡು ಏ ರಂಡಿ ಮಗನೆ ರಾಮ್ಯಾನಿನ್ನ ಮಗಳಿಗೆ ಶೇರೆ ಕುಡಿಯಲು ರೊಕ್ಕಾ ಕೊಡು ಅಂತ ಅವಚ್ಯಾವಾಗಿ ಬೈಯುತ್ತಿದ್ದಾಗ, ನಿನಗೆ ನಾನು ರೊಕ್ಕಾ ಕೊಡಲ್ಲಾ,ಈಗ ಇಲ್ಲಿಂದಹೋಗು ಅಂತಾ ಹೇಳುತ್ತಿದ್ದಾಗ ಈ ಬಾಯಿಯ ಸಪ್ಪಳ ಕೇಳಿಅಲ್ಲಿಗೆ ಬಂದ ಫುಲಾಬಾಯಿ ಗಂಡ ಅಶೋಕ ಚವ್ಹಾಣ ಮತ್ತು ರೂಪಬಾಯಿ ಗಂಡ ಸೂರು ಚವ್ಹಾಣ ಇವರುಗಳುಬಂದವರೆಈ ರಂಡಿ ಮಗನದು ಬಹಳ ಆಗಿದೆ ಅಂತಾ ಅವಾಚ್ಯಾವಾಗಿ ಬೈಉತ್ತಾ, ಅವರಲ್ಲಿ ಅಶೋಕನು ಅಲ್ಲಯೇ ಬಿದ್ದಿದ ಒಂದು ಕಲ್ಲಿನಿಂದ ತೆಲೆಗೆ ಹೋಡೆದು ರಕ್ತಗಾಯ ಪಡಿಸಿದನು, ಫೂಲಾಬಾಯಿ ಮತ್ತು ರೂಪಬಾಯಿ ಇವರು ನನಗೆ ತಮ್ಮ ಕೈಯಿಂದ ಹೋಡೆ ಬಡೆ ಮಾಡಿ ನನ್ನ ಸಂಭಂದಿಕರಿಗೆ ಮತ್ತು ನನಗೆ ಜೀವ ಸಹಿತ ತೆಗೆಯುತ್ತೆವೆ ಅಂತ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾಋಆಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಾರಿಗೆ ಕಲ್ಲು ಹೊಡೆದು ಗಾಜು ಒಡೆದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 07-06-2014 ರಂದು ಮದ್ಯ ರಾತ್ರಿ 00.00 ಗಂಟೆಯಿಂದ 08-06-2014 ಬೆಳಿಗ್ಗಿನ ಜಾವ 8.30 ರ ಅವದಿಯಲ್ಲಿ ಮಾನ್ಯ  ಶ್ರೀ ವಾಸುದೇವ ಆರ್ ಗುಡಿ ನ್ಯಾಯಾಧೀಶರು ಜೆಎಮ್ಎಫ್ಿ ಸಿ ಕೊರ್ಟ ಅಫಜಲಪೂರ ರವರ ಮನೆಯ ಮುಂದೆ ನಿಲ್ಲಿಸಿದ ಮಾರುತಿ ಸಿಪ್ಟ ಕಾರ ನಂ ಕೆಎ-32, ಎನ್ -4649 ನೇದ್ದರ ಹಿಂದಿನ ಗ್ಲಾಸ್ ಗಳನ್ನು ಯಾರೋ ಒಡೆದಿರುತ್ತಾರೆ ಅಂದಾಜ 5000/- ರೂ ರಷ್ಟು ಲುಕ್ಸಾನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: