POLICE BHAVAN KALABURAGI

POLICE BHAVAN KALABURAGI

19 August 2012

GULBARGA DISTRICT REPORTED CRIME

ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ: ಶ್ರೀ. ಗುರುಸ್ವಾಮಿ ತಂದೆ ಲಕ್ಷ್ಮಯ್ಯ  ತಳ್ಳೋಳಿ ಸಾ: ಬಟಗೇರಾ(ಕೆ) ಗೇಟ್ ತಾ:ಸೇಡಂರವರು ನನ್ನ ಹೆಂಡತಿ ತಾಯಿಯಾದ  (ಅತ್ತೆಯಾದ) ಚಂದ್ರಾಮ್ಮಾ ಇವಳು ನಮ್ಮ ಮನೆಯ ಬಾಜು ತನ್ನ ಮನೆಯಲ್ಲಿಯೆ ಇರುತ್ತಾಳೆ. ನನ್ನ ಅತ್ತೆ ಚಂದ್ರಾಮ್ಮಾ ಇವಳು ನಸುಕಿನ ವೇಳೆ ಎದ್ದು ಕಸಗೂಡಿಸುವುದು ಬಗೈರೆ ಮಾಡುವುದು ಇರುತ್ತಿದ್ದಳು.ದಿನಾಂಕ: 19-08-2012 ರಂದು ಸಹ ನಸುಕಿನ ವೇಳೆ 04-30 ಗಂಟೆಗೆ ಸುಮಾರಿಗೆ ಕಸಗೂಡಿಸುವುದು ವಗೈರೆ ಮಾಡಿ ನೀರು ತುಂಬಿ ನಮ್ಮ ಮನೆಯ ಮುಂದೆ ಇರುವ ಗುಲಬರ್ಗಾ ಕೊಡಂಗಲ್ ಮುಖ್ಯ ರೋಡಿನ ಆಚೆಗೆ ಹೋಗಿ ಮಲಮೂತ್ರ ವಿಸರ್ಜನೆ ಕುರಿತು ಹೋಗುತ್ತಿರುವಾಗ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಕೊಡಂಗಲ್ ರಸ್ತೆ ಕಡೆಯಿಂದ ಅತೀವೇಗ ಹಾಗೂ ನಿಸ್ಕಾಳಜೀತನದಿಂದ ನಡೆಸಿಕೊಂಡು ಬಂದವನೆ ಚಂದ್ರಮ್ಮ ಇವಳಿಗೆ ಡಿಕ್ಕಿ ಹೊಡೆದು ಕಾಲುಗಳಿಗೆ ಭಾರಿ ರಕ್ತ ಗಾಯ ಪಡಿಸಿ ಸ್ಥಳದಲ್ಲಿ ಮೃತಪಡಿಸಿ ತನ್ನ ವಾಹನ ನಿಲ್ಲಿಸದೆ ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 178/2012 ಕಲಂ 279,304 (ಎ) ಐಪಿಸಿ ಸಂಗಡ 187 ಐಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: