POLICE BHAVAN KALABURAGI

POLICE BHAVAN KALABURAGI

30 August 2016

Kalaburagi District Reported Crimes

ಕೊಲೆ ಪ್ರಕರಣ :
ಆಳಂದ ಠಾಣೆ : ದಿನಾಂಕ 13/10/2014 ರಂದು ಬೆಳಿಗ್ಗೆ ನನ್ನ ಗಂಡ ಮಕ್ಕಳು ಬದನೆಕಾಯಿ ಕಡೆಯಲು ಹೊಲಕ್ಕೆ ಹೋದರು ನಾನು 11:00 ಗಂಟೆಯ ಸುಮಾರಿಗೆ ಹೊಲಕ್ಕೆ ಹೊದೇನು, ಎಲ್ಲರೂ ಕೂಡಿ ಬದನೆಕಾಯಿ ಕಡೆದು ನನ್ನ ಮಕ್ಕಳು ಮೊದಲು ಮನೆಗೆ ಹೋಗಿರುತ್ತಾರೆ, ನಾನು ಹೊಲದಿಂದ ಮನೆಗೆ ಬರುವಾಗ ಸಾಯಂಕಾಲ 06:00 ಗಂಟೆಯ ಸುಮಾರಿಗೆ ನನ್ನ ಗಂಡನ ಮೋಬಾಯಿಲಗೆ ಫೋನ್ ಬಂದಿದ್ದು ಯಾರದು ಎಂದು ಕೇಳಿದಾಗ ನಮ್ಮೂರ ಬಸವರಾಜ ಕುಪ್ಪಣ್ಣಾ ಹತ್ತೆ ಇತನ ಫೋನ್ ಇದೆ ಎಂದು ಹೇಳಿದಾಗ ಅವರೊಂದಿಗೆ ಹೋಗಬೇಡ ಎಂದು ಹೇಳಿ ಮನೆಗೆ ಬಂದೇನು, ರಾತ್ರಿ 7:00 ಗಂಟೆಯ ಸುಮಾರಿಗೆ ನನ್ನ ಗಂಡ ಶರೆ ಕುಡಿದು ಮನೆಗೆ ಬಂದರು ನಮ್ಮ ಮನೆಯ ಮುಂದೆ 1) ಬಸವರಾಜ ಕುಪ್ಪಣ್ಣ ಹತ್ತೆ 2) ಬಸವರಾಜ ಝಳಕೆ ಇವರಿಬ್ಬರು ನನ್ನ ಗಂಡನನ್ನು ಸರಾಯಿ ಕುಡಿಸಲು ಕರೆದುಕೊಂಡು ಹೋದರು ಇಡಿ ರಾತ್ರಿ ಮನೆಗೆ ಬರಲಿಲ್ಲ, ದಿನಾಂಕ 14/10/2014 ರಂದು ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ಊರಿನ ಜನರು ಅಂದಾಡುವುದರಿಂದ ಗೊತ್ತಾಗಿದ್ದೇನೆಂದರೆ ಡಾ|| ವಿಜಯಕುಮಾರ ಭಗತ ಇವರ ಮನೆಯ ಮುಂದಿನ ಕಟ್ಟೆಯ ಮೇಲೆ ಸರಾಯಿ ಪಾಕೀಟ್ ಓರಿಜಿನಲ್ ಚ್ವಾಯಿಸ್ ಇದ್ದು ಅದು ವಿಷದ ಪುಡಿಯಿಂದ ಮಿಶ್ರಣವಾದ ವಾಸನೆ ಬರುತ್ತಿತ್ತು, ನನ್ನ ಗಂಡನು ಹೊರಳಾಡಿಸಲು ಅವನು ಮರಣ ಹೊಂದಿದ್ದು ಗೊತ್ತಾಯಿತು, ಅವನು ಅಲ್ಲಿ ಮಲಗಿದ್ದ ಸ್ಥಳದಲ್ಲಿ ಸರಾಯಿ ಹೊಂದಿದ ಹಸಿರು ಮಿಶ್ರಿತವಾದ ದ್ರವ ಚಲ್ಲಿದ್ದು ಕಂಡು ಬಂದಿರುತ್ತದೆ, ನನ್ನ ಗಂಡ ಸಾಯಂಕಾಲ 7:00 ಗಂಟೆಯಿಂದ ಇಂದು ಬೆಳಿಗ್ಗೆ 6:00 ಗಂಟೆಯ ಮಧ್ಯದಲ್ಲಿ ಮರಣ ಹೊಂದಿರುತ್ತಾನೆ, ನನ್ನ ಗಂಡ ಸತ್ತ ಬಗ್ಗೆ ಅವನ ಮರಣದಲ್ಲಿ ಸಂಶಯ ಇರುತ್ತದೆ, ಇದರ ಬಗ್ಗೆ ನನ್ನ ಗಂಡನ ಸಾವಿನ ಬಗ್ಗೆ ಪ್ರಾಣ ಭಯ ಇರುತ್ತದೆ ಎಂದು 2014 ನೇಯ ಸಾಲಿನ ಶಿವರಾತ್ರಿಯ ಮುಂದೆ ಆಳಂದ ಠಾಣೆಯಲ್ಲಿ ಧರ್ಮಣ್ಣಾ ಶಿವಶರಣಪ್ಪಾ ಪಾಟೀಲ್ ಇವರಿಂದ ನನ್ನ ಮಗನ ಪ್ರಾಣ ಭಯ ಇರುತ್ತದೆ ಎಂದು ನನ್ನ ಮಾವನಾದ ಖಂಡೋಬಾ ದವಲತ ಬಂಡಗರ ಇವರು ದೂರು ಸಲ್ಲಿಸಿರುತ್ತಾರೆ, ನನ್ನ ಗಂಡನು ಸತ್ತ ಬಗ್ಗೆ ಸಾವಿಗೆ ಸಂಶಯ ಇರುತ್ತದೆ, ಕಾರಣ ದಯಾಳುಗಳಾದ ತಾವು ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಶ್ರೀಮತಿ ಇಂದುಬಾಯಿ ಗಂಡ ಹಣಮಂತರಾಯ ಬಂಡಗರ ಮು|| ಕಿಣ್ಣಿ ಸುಲ್ತಾನ ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ತೊಡಗಿದವರ ಬಂಧನ :
ಜೇವರಗಿ ಠಾಣೆ : ದಿನಾಂಕ 29.08.2016 ರಂದು ಮದ್ಯಾಹ್ನ ಚಿಗರಳ್ಳಿ ಕ್ರಾಸ್ ಹತ್ತಿರ ಹಣಮಂತ ಇಜೇರಿ ಇವರ ಹೊಟೇಲ ಹತ್ತಿರ  ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಇಟ್ಟು ಅಂದರ ಬಾಹರ ಏಂಬ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮೀ ಇದ್ದ ಸ್ಥಳದ ಕಡೆಗೆ ಎಲ್ಲರೂ ನಡೆದುಕೊಂಡು ಹೋಗಿ ಒಂದು ಹೊಟೇಲ ಗೋಡೆಯ ಮರೆಯಲ್ಲಿ ನಿಂತು ನೋಡಲು ಹೊಟೇಲ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಅಂದಾರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಮದ್ಯಾಹ್ನ 2.00 ಗಂಟೆಗೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿ ಜನರ ಸಹಾಯದಿಂದ ಏಕ ಕಾಲಕ್ಕೆ ದಾಳಿ ಮಾಡಿ ಅವರಿಗೆ ಹಿಡಿದು ಅವರಲ್ಲಿ ಒಬ್ಬನು ಓಡಿ ಹೋಗಿದ್ದು  ಸಿಕ್ಕವರಿಗೆ  ಹೆಸರು ವಿಳಾಸ ವಿಚಾರಿಸಲು ಅಂಗದ ಶೋದನೆ ಮಾಡಲು 1) ಪ್ರಕಾಶ ತಂದೆ ಶರಣಪ್ಪಗೌಡ ಪೊಲೀಸ್ @ ಚನ್ನಶೆಟ್ಟಿ ಸಾ: ಅಣಬಿ  ತಾಃ ಶಹಾಪೂರ 2) ಭಾಷಾಸಾಬ ತಂದೆ ಅಬ್ಬಾಸ ಅಲಿ  ಚೌದರಿ  ಸಾಃ ಚಿಗರಳ್ಳಿ  ಒಟ್ಟು ನಗದು ಹಣ 4650/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಔಶಕ್ಕೆ ತೆಗೆದುಕೊಂಡು  ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು 3. ಶರಣಪ್ಪ ತಂದೆ ಬೀರಪ್ಪ ಪೂಜಾರಿ  ಸಾಃ ಚಿಗರಳ್ಳಿ, ಅಂತಾ ತಿಳಿಸಿದ್ದು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ ನಿಂಗನಗೌಡ ತಂದೆ ಶರಣಗೌಡ ಪಾಟೀಲ ಸಾ: ಮೌನೇಶ್ವರ ನಗರ ಜೇವರಗಿ ರವರು ತಮ್ಮ ಓಣಿಯಲ್ಲಿ ಕಿರಾಣಿ ಅಂಗಡಿ ಇದ್ದು, ನಾನು ಮತ್ತು ನನ್ನ ಹೆಂಡತಿ ಇಬ್ಬರು ಕಿರಾಣಿ ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತೇವೆ. ದಿನಾಂಕ: 28.08.2016 ರಂದು ಎಂದಿನಂತೆ ಮುಂಜಾನೆ 06.00 ಗಂಟೆಗೆ ನಮ್ಮ ಕಿರಾಣಿ ಅಂಗಡಿ ತೆರೆದು ರಾತ್ರಿ 9.00 ಗಂಟೆ ವರೆಗೆ ವ್ಯಾಪಾರ ಮಾಡಿಕೊಂಡು ಕಿರಾಣಿ ಅಂಗಡಿ ಬಾಗಿಲು ಕೀಲಿ ಹಾಕಿ ಮನೆಗೆ ಹೋಗಿದ್ದೇವು. ಇಂದು ದಿನಾಂಕ: 29.08.2016 ರಂದು ಮುಂಜಾನೆ 05.30 ಗಂಟೆ ಸುಮಾರಿಗೆ ನಾನು ಹಾಲು ತರಲು ನನ್ನ ಮೊಟಾರ ಸೈಕಲದ ಮೇಲೆ ನನ್ನ ಅಂಗಡಿ ಹತ್ತಿರದಿಂದ ಹೋಗುತ್ತಿದ್ದಾಗ ನಮ್ಮ ಅಂಗಡಿ ಬಾಗಿಲು ಕೀಲಿ ಮುರಿದು ಬಾಗಿಲು ತೆರೆದಿತ್ತು. ನಾನು ಗಾಬರಿಯಾಗಿ ನೋಡಲು ಅಂಗಡಿಯಲ್ಲಿ ಕಿರಾಣಿ ಸಾಮಾನುಗಳು ಚಲ್ಲಾಪಿಲಿಯಾಗಿ ಬಿದ್ದಿದ್ದವು. ನೋಡಲು 1) 10 ಕೆಜಿ ಕೊಬ್ಬರಿ ಅ.ಕಿ 700/-ರೂ 2) 25 ಕೆಜಿ ಸಕ್ಕರಿ ಅ.ಕಿ 1000/-ರೂ 3) 10 ಕೆಜಿ ರವಾ 320/-ರೂ 4) ಆರ್,ಎಮ್,ಡಿ ಬಾಕ್ಟ 700/-ರೂ 5) 12 ಕಿನ್ಲೇ ನೀರಿನ ಬಾಟಲಿ ಅ.ಕಿ 240/-ರೂ 6) 10 ಸ್ಪ್ರೈಟ್ ಕೋಲ್ಡ ಡ್ರಿಂಕ್ಸ  ಬಾಟಲಿ 180/-ರೂ 7) ಆರ್.ಆರ್, ಬಾಬಾ, ವಿಮಲ್ ಗುಟಕಾ ಅ.ಕಿ 600/-ರೂ 8) 200 ಗ್ರಾಂ 6 ಪ್ಯಾರಾಶ್ಯೂಟ್ ಕೊಬ್ಬರಿ ಎಣ್ಣೆ ಅ.ಕಿ 600/-ರೂ 9) 10 ನೀರ್ಮಾ ಸಾಬೂನ ಪುಡಿ ಪಾಕೇಟ ಅ.ಕಿ 230/-ರೂ 10) ಸ್ಯಾಂಪೋ ಅ,ಕಿ 200/-ರೂ 11) ನಗದು ಹಣ 1500/-ರೂ 12) 24 ರೀನ್ ಅಡ್ವಾನ್ಸ್ ಅ.ಕಿ 240/-ರೂ 13) 24 ಫೇವಿಕಾಲ್ ಡಬ್ಬಿ ಅ.ಕಿ 240/-ರೂ 14) 4 ಡೆಬ್ಬಿ ಕಿಂಗಸೈಜ ಸಿಗರೇಟ ಅ.ಕಿ 400/-ರೂ 15) 3 ಡೆಬ್ಬಿ ಸ್ಮಾಲ್ ಸೈಜ್ ಸಿಗರೇಟ ಅ.ಕಿ 400/-ರೂ 16) ಒಂದು ಬಾಕ್ಸ್ ಗಣೇಶ ಬೀಡಿ ಅ.ಕಿ 320/-ರೂ ಇರಲಿಲ್ಲಾ. ಅಷ್ಟರಲ್ಲಿ ನಮ್ಮ ಓಣಿ ಮೌನೇಶ ತಂ ಶಿವಾನಂದ ವಿಶ್ವಕರ್ಮ ಇತನು ಬಂದನು ಕಳ್ಳತನವಾದ ಮಾಹಿತಿ ತಿಳಿಸಿ ನಂತರ ನಾನು ನನ್ನ ಹೆಂಡತಿಗೆ ವಿಷಯ ತಿಳಿಸಿದಾಗ ನನ್ನ ಹೆಂಡತಿ ಸಾವಿತ್ರಿ ಇವಳು ಕೂಡಾ ಬಂದರು. ಅವರು ಕೂಡಾ ಅಂಗಡಿಯಲ್ಲಿ ಹೋಗಿ ಹಕ್ಕಿಕತ ನೋಡಿರುತ್ತಾರೆ. ನಂತರ ನಾವು ನಮ್ಮ ಓಣಿಯಲ್ಲಿ ಹುಡುಕಾಡಿದೆವು. ಆದರು ಕೂಡಾ ಕಳುವಾದ ಸಾಮಾನುಗಳು ಸಿಕ್ಕಿರುವದಿಲ್ಲಾ. ಯಾರೋ ಕಳ್ಳರು ದಿ: 28,29/08.2016 ರಂದು ರಾತ್ರಿ 11.30 ಗಂಟೆಯಿಂದ ಬೆಳಗಿನ ಜಾವ 05.30 ಗಂಟೆ ಅವಧಿಯಲ್ಲಿ ನಮ್ಮ ಕಿರಾಣಿ ಅಂಗಡಿ ಬಾಗಿಲು ಕೀಲಿ ಮುರಿದು ಒಳಗೆ ಹೋಗಿ ಅಂಗಡಿಯಲ್ಲಿದ್ದ ಕಿರಾಣಾ ಸಾಮಾನುಗಳು ಮತ್ತು ನಗದು ಹಣ ಹೀಗೆ ಒಟ್ಟು ಅ.ಕಿ 7.870/-ರೂ ಕಿಮ್ಮತಿವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಅಂಜನಾ ತಂದೆ ನೀಲಕಂಟ ರಾಠೋಡ ಸಾ ಮಲಸಾಪೂರ ತಾಂಡಾ ರವರ  ಮಗನಾದ ಅಭೀಶೇಖ ವಯ: 6 ವರ್ಷ ಇತನು ನಮ್ಮ ಮನೆಯ ಮುಂದೆ ಆಟ ಆಡುತ್ತಿದ್ದು ಅದೆ ವೇಳೆಗೆ ತುಕಾರಾಮ ತಂದೆ ದೇವಲಾ ಚೌವ್ಹಾಣ ಇತನು ನಮ್ಮ ಮನೆಯ ಹತ್ತಿರ ಬಂದು ನನ್ನ ಮಗ ಅಭೀಶೇಖ ಇತನಿಗೆ ಏ ರಂಡಿ ಮಗನೆ ನಿಮ್ಮ ಅವ್ವ ಎಲ್ಲಿ ಇದ್ದಾಳೆ ಅಂತ ಬೈಯುತ್ತಿದ್ದು ಆಗ ನಾನು ಮನೆಯಿಂದ ಹೊರಗೆ ಬಂದು ಸದರಿ ತುಕಾರಾಮ ಇತನಿಗೆ ನನ್ನ ಮಗನಿಗೆ ಯಾಕೆ ಬೈಯುತ್ತಿ ಅವನು ಏನು ಮಾಡಿದ್ದಾನೆ ಅಂತ ಕೇಳಿದ್ದು ಆಗ ಸದರಿಯವನು ರಂಡಿ ನಾನು ನಿನ್ನ ಸಂಗಡ ಮಲಗಲು ಬಂದಿದ್ದೆನೆ ಸೂಳಿ ಅಂತ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ನೀನು ನನ್ನ ಸಂಗಡ ಏನು ಮಲಗುತ್ತಿ ನಿನ್ನ ಹೆಂಡತಿ ಸಂಗಡ ಮಲಗು ಅಂತ ಹೇಳಿದ್ದು ಆಗ ಸದರಿಯವನು ರಂಡಿ ನೀನು ನನಗೆ ಎದರು ಮಾತನಾಡುತ್ತಿ ಸುಳಿ ಅಂತ ಬೈಯುತ್ತಾ ನನಗೆ ಹಿಡಿದುಕೊಂಡು ನೇಲಕ್ಕೆ ಹಾಕಿ ಅಲ್ಲೆ ಬಿದ್ದ ಕಲ್ಲು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಅದೆ ವೇಳೆಗೆ ತುಕಾರಾಮನ ತಮ್ಮನಾದ ಮಾಣಿಕ ಮತ್ತು ತಂದೆ ಯಾದ ದೇವಲಾ ಇಬ್ಬರು ಕೂಡಿಕೊಂಡು ಬಂದು ಈ ರಂಡಿ ಸೊಕ್ಕು ಬಹಳ ಆಗಿದೆ ಇವಳ ಗಂಡ ಜೇಲಿಗೆ ಹೋದರು ಇವಳ ಸೊಕ್ಕು ಕಮ್ಮಿಯಾಗಿಲ್ಲ ಇವಳ ಸೊಕ್ಕು ಇಳಿಸಬೇಕು ಅಂತ ಬೈಯುತ್ತಿದ್ದು, ದೇವಲಾ ಇತನು ಈ ರಂಡಿಗೆ ಬಿಡಬೇಡಿರಿ ಇವಳಿ ಹೊಡೆಯಿರಿ ಅಂತ ಹೇಳಿದ್ದು ಆಗ ಮಾಣಿಕ ಇತನು ಅಲ್ಲೆ ಬಿದ್ದ ಬಡಿಗೆ ತೆಗೆದುಕೊಂಡು ನನ್ನ ಬಲಗೈ ಹಸ್ತದ ಹತ್ತಿರ ಹೊಡೆದು ತೆರಚಿದ ರಕ್ತಗಾಯ ಪಡಿಸಿದ್ದು ಸದರಿ ಮೂರು ಜನರು ಕೂಡಿಕೊಂಡು ನನಗೆ ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಹಾಕಿ ನನಗೆ ಹೊಡೆಬಡೆ ಮಾಡುತ್ತಿದ್ದು ಸದರಿಯವರು ನನಗೆ ಹೊಡೆಯುವದನ್ನು ನೋಡಿ ಮನೆಯಲ್ಲಿದ್ದು ನಮ್ಮ ಮಾವ ಮಾನಸಿಂಗ್ ನಮ್ಮ ಗ್ರಾಮದ ಶರಣಪ್ಪ ಉಪ್ಪಾರ ಇವರು ಬಂದು ನನಗೆ ಹೊಡೆಯುವವರಿಗೆ ಬೈದು ನನಗೆ ಹೊಡೆಯುವದನ್ನು ಬಿಡಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

28 August 2016

Kalaburagi District Reported Crimes

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶ್ರೀಕಾಂತ ತಂದೆ ಶಂಕರ ಕಟ್ಟಿಮನಿ ಸಾ:ದೇವಿನಗರ ಕಲಬುರಗಿ ಇವರು ದಿನಾಂಕ: 23-08-2016  ರಂದು ರಾತ್ರಿ 9 ಗಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿಕೊಂಡು ಮಲಗಿಕೊಂಡಿದ್ದು ಇಂದು ದಿನಾಂಕ: 27-06-2016 ರಂದು ಬೆಳಗ್ಗೆ 6 ಗಂಟೆಗೆ ಎದ್ದು ನಮ್ಮ ಮನೆಯ ಮೊದಲನೆ ಮಹಡಿ ಮೇಲೆ ಹೋಗಿ ನೋಡಲು ನನ್ನ ಬೇಡರೂಮೀನ ಬೀಗ ಮುರಿದು ಬಾಗಿಲು ತೆರೆದಿದ್ದು ಇದ್ದು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲು ಅಲಮಾರ ತೆಗೆದಿದ್ದು ನಾನು ನೋಡಲು ಅಲಮಾರದಲ್ಲಿ ಇದ್ದ ತಲಾ ಒಂದು ತೊಲಿಯ ಎರಡು ಲಾಕೇಟಗಳು ಮತ್ತು ನಗದು ಹಣ 1.50,000/-ರೂ ಇರಲಿಲ್ಲ ಯಾರೋ ಕಳ್ಳರು ನಮ್ಮ ಮನೆಯ ಬೇಡ ರೂಮೀನ ಒಳಗೆ ಪ್ರವೇಶ ಮಾಡಿ 10 ಗ್ರಾಂ ಬಂಗಾರದ 2 ಲಾಕೇಟಗಳು ಅಂದಾಜು 60000/-ರೂ ನಗದು ಹಣ ಒಟ್ಟು ಸೇರಿ 2,10,000/-ರೂ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವೆಂಕಟೇಶ ತಂದೆ ಬಾಲಾಜಿ ಠಾಕೂರ ಸಾ: ಅಶೋಕ  ನಗರ ಕಾಲೋನಿ ಶಾಹಾಬಾದ ತಾ: ಚಿತ್ತಾಪುರ ಜಿ: ಕಲಬುರಗಿ ಇವರು ದಿನಾಂಕ: 14/02/2014 ರಂದು ಸಾಯಾಂಕಾಲ 4-00 ಗಂಟೆ ಸೂಮಾರಿಗೆ ಸೇವು ತಂದೆ ಶಂಕರು ಪವಾರ ಮತ್ತು ರಾಜು ತಂದೆ ಮಾರುತಿ ಪೊಲೀಸ್ ಇವರು ನನಗೆ ತಿಳಿಸಿದ್ದೆನೆಂದರೆ, ನಿನಗೆ ಕೆಂದ್ರ ಸಕಾರದ ರೈಲ್ವೆ ಇಲಾಖೆಯಲ್ಲಿ ಖಾಯಂ ನೌಕರಿ ಹಚ್ಚಿ ಕೋಡುತ್ತೆವೆ ನೀನು ಕಲಬುರಗಿ ನಗರದ  ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬರಬೇಕು ಅಂತ ಹೇಳಿದಾಗ  ನಾನು ಮತ್ತು ನನ್ನ ಗೇಳೆಯರಾದ ಸಂತೋಷ PÀÄ®PÀtÂÃð, ಜೆತೇಂದ್ರ ರಾಠೋಡ, ಎಲ್ಲರು ಅಲ್ಲಿಗೆ ಹೊಗಿದೇವು ಅಲ್ಲಿ ಅವರು ಹಾಜರಿದ್ದು  ನಮಗೆ ಹೇಳಿದನೆಂದರೆ. ನಿಮಗೆ ಕೆಂದ್ರ ಸಕಾರದ ರೈಲ್ವೆ ಇಲಾಖೆಯಲ್ಲಿ ಖಾಯಂ ನೌಕರಿ ಹಚ್ಚಿ ಕೋಡುತ್ತೆವೆ ನೀವು ನಮಗೆ ಹಣ ಕೊಡಬೆಕು ಅಂತಾ ಹೇಳಿದಾಗ ನಾನು  1 ಲಕ್ಷ 10 ಸಾವಿರ ರೂ ಮತ್ತು 2) ಸಂತೋಷ ಬಿ ಹೂಗಹಾರ ಯಡ್ರಾಮಿ ಇವರು 90 ಸಾವಿರ ರೂ. 3) ಜಿತೆಂದ್ರ ತಂದೆ ನೂರಸಿಂಗ ರಾಠೋಡ ಸಾ.ಕಾಳಗಿ ಕಿಂಡಿ ತಾಂಡಾ ಇವರು  80 ಸಾವಿರ ರೂಪಾಯಿಗಳು ಹೀಗೆ ಒಟ್ಟು 2 ಲಕ್ಷ 80 ಸಾವಿರ ರೂಪಾಯಿ ಕೊಟ್ಟಿರುತ್ತವೆ. ಮತ್ತೆ 12-13 ತಿಂಗಳ ನಂತರ ಅಂದರೆ 2015 ಸಾಲಿನಲ್ಲಿ ನಮಗೆ ದಿನಾಂಕ ಮತ್ತು ತಿಂಗಳು ನೆನೆಪು ಇರುವದಿಲ್ಲಾ  ಆಗ ಇವರಿಬ್ಬರೂ ನೀವು ಇನ್ನೂ ಹಣ ತೆಗೆದುಕೊಂಡು ನಮ್ಮ ಜೊತೆಯಲ್ಲಿ ಬೆಂಗಳೂರಿಗೆ ಬರಬೇಕು ಅಲ್ಲಿ ನಮ್ಮ ಗೆಳೆಯ ಅಮುಲ ಮದನಕರ ಇವರು ಇರುತ್ತಾರೆ ಅವರಿಗೆ ಕೂಡಾ ಹಣ ಕೊಡಬೇಕು ಆಗ ನಿಮಗೆ ನೌಕರಿ ಆಗುತ್ತದೆ ಅಂತಾ ಹೇಳಿದಾಗ ನಾವು 3 ಜನರು ಅವರ ಜೊತೆಯಲ್ಲಿ ಬೆಂಗಳೂರಿಗೆ ಹೋಗಿದ್ದು ಅಲ್ಲಿ ಒಬ್ಬ ವ್ಯಕ್ತಿ ಇದ್ದು ಇವರೆ ಅಮುಲ ಮದನಕರ ಇರುತ್ತಾನೆ ಅಂತಾ ನಮಗೆ ಹೇಳಿ ಆತನ ಪರಿಚಯ ಮಾಡಿಸಿದರು ಆಗ ನಾವು ಅಲ್ಲಿ ಎಲ್ಲರೂ ಕೂಡಿ ನಾನು 1 ಲಕ್ಷ 20 ಸಾವಿರ ರೂಪಾಯಿ ಸಂತೋಷ ಕುಲಕರ್ಣಿೇ ಇವರು 1 ಲಕ್ಷ 15 ಸಾವರಿ ರೂಪಾಯಿ ಮತ್ತು ಜಿತೇಂದ್ರ ರಾಠೋಡ 1 ಲಕ್ಷ 20 ಸಾವಿರ ರೂಪಾಯಿ ಅಂತಾ ಅಲ್ಲಿ ಒಟ್ಟು 3 ಲಕ್ಷ 55 ಸಾವಿರ ರೂಪಾಯಿ ಕೊಟ್ಟಿರುತ್ತೇವೆ. ಅವರು ನಮಗೆ ನೌಕರಿ ಕೊಡಿಸುತ್ತೆವೆ ಅಂತ ಅಂದಿನಿಂದ ಇಲ್ಲಿಯವರಗೆ ಕಲ್ಕತ್ತಾ ದೇಹಲಿ  ಮತ್ತು ಇನ್ನಿತರ ಕಡೆಗಳಲ್ಲಿ ತಿರುಗಾಡಿಸಿ  ನೌಕರಿ ಕೊಡಿಸದೆ  ನಮಗೆ ಮೊಸ ಮಾಡಿರುತ್ತಾರೆ ಅಲ್ಲದೆ ನಮ್ಮಂತೆ 1 ) ಭೀಮಣ್ಣ ಜಿಗರಿ ಸಾ. ಯಡ್ರಾಮಿ 2) ಸೇವು ರಾಠೋಡ ಸಾ. ಯಡ್ರಾಮಿ 3) ಪರಶುರಾಮ ಖಾಚಾಪುರ 4) ದೆವಿದ್ರಪ್ಪ ಸೂರಪುರ 5) ಮಾಂತೇಶ ರಾಠೋಡ ಸಾ.ಅಲ್ಲಾಪೂರ ತಾಂಡಾ 6) ಗೋವಿಂದ ಚೌಹಾಣ ಅಲ್ಲಾಪೂರ ತಾಂಡಾ 7) ಪಿಂಟು ರಾಠೋಡ ಸಾ. ಅಲ್ಲಾಪೂರ ತಾಂಡಾ 8) ಭೀಮು ತಂದೆ ನಾಗಪ್ಪ ಚೌದರಿ 9) ಆನಂದ ತಂದೆ ಮಲ್ಲಿಕಾಜರ್ಿನ ಸಾ.ಶಾಹಾಬಾದ 10)   ಮಲ್ಲಿನಾಥ ತಂದೆ ಗುಂಡೆರಾವ ಬೀರಾದರ ಸಾ.ಬನ್ನುರ ತಾ.ಜಿ. ಕಲಬುರಗಿ 11) ನಿಂಗಣ್ಣ ತಂದೆ ಶರಣ ಬಸ್ಸಪ್ಪ ಶಂಕರವಾಡಿ ಸಾ. ಕಡಣಿ 12) ಅರುಣ ಕೊಗಟನೂರ ತಾ: ಸಿಂದಗಿ ಜಿಲ್ಲಾ ವಿಜಯಪೂರ 13) ವಿಲಾಶ ವಚ್ಹಾಣ ಮಹಾರಾಷ್ಟ್ರ 14) ಬಸವರಾಜ ಜೇವಗಿ 15) ಗುರುನಾಥ ಯಡ್ರಾಮಿ ಇವರೆಲ್ಲರ  ಹತ್ತಿರ ಕೂಡ ನಿಮಗೆ ನೌಕರಿ ಕೊಡಿಸುತ್ತೆವೆ ಅಂತ ಸುಳ್ಳು ಹೇಳಿ ಹಣ ಪಡೆದು ಮೊಸ ಮಾಡಿದ ಬಗ್ಗೆ ತಿಳಿದು ಬಂದಿರುತ್ತದೆ. ಅಲ್ಲದೆ ಅವರ ಹತ್ತಿರ ಕೂಡಾ  ಹಂತ ಹಂತವಾಗಿ ಹಣ ಪಡೆದುಕೊಂಡು ನಿಮಗೆ ನೌಕರಿ ಕೊಡಿಸುತ್ತೆವೆ ಅಂತಾ ಅವರಿಗೆ ಮತ್ತು ನಮಗೆ ಕಲ್ಕತ್ತಾ. ಮತ್ತು  ದೇಹಲಿಯ ವರೆಗೆ ಕರೆದುಕೊಂಡು ಹೋಗಿ ತಿರುಗಾಡಿಸಿ ನಮಗೆ ನೌಕರಿ ಕೊಡಿಸದೆ ಮೋಸ ಮಾಡಿದಾಗ ನಾವು ನೌಕರಿ ಸಲುವಾಗಿ ನಿಮಗೆ ಕೊಟ್ಟಿರುವ ಹಣವನ್ನು ಮರಳಿ ನಮಗೆ ಕೊಡಿರಿ ಅಂತಾ ಕೇಳಿದಾಗ ಅವರು ಇಂದು ಕೊಡುತ್ತೇವೆ. ನಾಳೆ ಕೊಡುತ್ತೇವೆ ಅಂತಾ ಸತಾಯಿಸುತ್ತಾ ಇಲ್ಲಿಯವರೆಗೆ  ಹಣ ಕೊಡದೆ ಸುಳ್ಳು ಹೇಳುತ್ತಾ ದಿನ ದೂಡುತ್ತಿದ್ದಾರೆ. ಅವರು ನನಗೆ ಮೋಸ ಮಾಡಿದ್ದರಿಂದ ಇಂದು ದಿನಾಂಕ:25/08/2016 ರಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದೇವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :  ದಿನಾಂಕ 26.08.2016 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ನನ್ನ ಗ್ಯಾರೆಜಕ್ಕೆ ಬಂದಿದ್ದು ತಮ್ಮ ಖಾಸಗಿ ಕೇಲಸ ಸಂಬಂದ ಕಾರ ತೆಗೆದುಕೊಂಡು ಹೈದ್ರಾಬಾದಕ್ಕೆ ಹೊಗಬೇಕಾಗಿದೆ ಕಾರಿನ ಆಯಿಲ್ ಚೆಕ್ಕ ಮಾಡಲು ಹೇಳಿದ್ದು ಅದರಂತೆ ನಾನು ಅವರ ಕಾರನ್ನು ಆಯಿಲ್ ಚೆಕ್ಕ ಮಾಡಿ ಸರಿ ಮಾಡಿದ್ದು ನಂತರ ಸದರಿಯವರು ನನಗೆ ತಿಳಿಸಿದ್ದೆನೆಂದರೆ ಹೈದ್ರಾಬಾದಕ್ಕೆ ನಾನು ಒಬ್ಬನೆ ಹೊಗುತ್ತಿದ್ದೆನೆ ಗ್ಯಾರೇಜ ಸಾಮಾನು ಖರಿದಿ ಮಾಡುವದಿದ್ದರೆ ತನ್ನ ಸಂಗಡ ಬರಲು ನನಗೆ ಹೇಳಿದ್ದು. ನನಗು ಗ್ಯಾರೆಜ ಸಮಾನುಗಳು ತರುವದು ಇದ್ದು ಅವರ ಸಂಗಡ ಹೈದ್ರಾಬಾದಕ್ಕೆ ಹೋಗಲು ನಾನು ಒಪ್ಪಿಕೊಂಡಿದ್ದು ಅದರಂತೆ ನಿನ್ನೆ ದಿನಾಂಕ 26.08.2016 ರಂದು ರಾತ್ರಿ 11 ಗಂಟೆಗೆ ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ಅವರ ಟಾಟಾ ಇಂಡಿಕಾ ಕಾರ ನಂ ಕೆಎ 48 ಎಮ್ 0518 ನೇದ್ದು ತೆಗೆದುಕೊಂಡು ನನ್ನಲ್ಲಿಗೆ ಬಂದಿದ್ದು ನಾನು ಸದರಿಯವರ ಸಂಗಡ ಕಾರಿನಲ್ಲಿ ಕುಳಿತು ಕಲಬುರಗಿ ಹುಮನಾಬಾದ ರಿಂಗ್ ರೋಡಿಗೆ ಬಂದು ನಂತರ ಹೈದ್ರಾಬಾದಕ್ಕೆ ಹೋಗುವ ಕುರಿತು ಕಲಬುರಗಿ- ಹುಮನಾಬಾದ ರಾಷ್ಟ್ರಿಯ ಹೆದ್ದಾರಿ ನಂ 218 ನೇದ್ದರ ಮುಲಕ ಕಲಬುರಗಿಯಿಂದ ಹೈದ್ರಾಬಾದಕ್ಕೆ ಹೊಗುತ್ತಿದ್ದು. ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಹೋಗುತ್ತಿದ್ದು ಆಗ ನಾನು ಸದರಿಯವರಿಗೆ ಕಾರನ್ನು ನಿಧಾನವಾಗಿ ನಡೆಯಿಸಲು ಹೇಳಿದರು ಕೂಡಾ ಸದರಿಯವರು ನನ್ನ ಮಾತನ್ನು ಕೇಳದೆ ಅದೆ ವೇಗದಲ್ಲಿ ಕಾರನ್ನು ನಡೆಯಿಸಿಕೊಂಡು ಹೋಗುತ್ತಿದ್ದು. ಕಮಲಾಪೂರ ದಾಟಿದ ನಂತರ ಕುದುರೆ ಮುಖ ಏರಿನಲ್ಲಿ ಕಾರನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸುತ್ತಾ ಒಮ್ಮಲೆ ರಸ್ತೆಯ ಎಡಬಾಗಕ್ಕೆ ಕಾರ ತೆಗೆದುಕೊಂಡಿದ್ದು ಆಗ ಕಾರ ರಸ್ತೆಯಿಂದ ಕೇಳಗೆ ಇಳಿದು ಸ್ವಲ್ಪ ಮುಂದೆ ಹೊಗಿ ತೆಗ್ಗಿನಲ್ಲಿ ಬಿದ್ದಿದ್ದು ಕಾರಿನಲ್ಲಿ ಕುಳಿತ ನನಗೆ ಮತ್ತು ಕಾರ ಚಾಲಕ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರಿಗೆ ಯಾವುದೆ ಗಾಯಗಳು ಆಗಿರುವದಿಲ್ಲ. ಕಾರ ಸಂಪೂರ್ಣ ಡ್ಯಾಮೇಜ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ
ಫರತಾಬಾದ ಠಾಣೆ : ಶ್ರೀ ದತ್ತಪ್ಪ ತಂದೆ ಪದಮಣ್ಣ  ಇವರು ದಿನಾಂಕ 26-08-2016 ರಂದು 7 ಪಿಎಮ್  ಸುಮಾರಿಗೆ ನಾನು ನಮ್ಮೂರ ಸಿದ್ದು ತಳವಾರ ಇವರ ಹೋಟೆಲದಲ್ಲಿ ಚಹಾ ಕುಡಿದು ಹೊರಗೆ ಬಂದು ನಿಂತಾಗ ಈ ಮೊದಲೆ ನಮ್ಮ ಮೇಲೆ ವೈಮನಸ್ಸು ಹೊಂದಿದ 1) ವಿದ್ಯಾಸಾಗ ತಂದೆ ಈರಣ್ಣ ಕಲಬುರಗಿ 2) ನಾಗಣ್ಣ ತಂದೆ ಸಿನಗಪ್ಪ ಮಳ್ಳಿ 3) ಶಿವಾ ತಂದೆ ಬಸಣ್ನ ಮಡ್ಡಿ 4) ಮಂಜು ತಂದೆ ಬಸಣ್ಣ ಕೊಳ್ಳೂರ 5) ಸಂಗು ತಂದೆ ಬಸಣ್ಣ ಮಡ್ಡಿ  ಸಾ: ಎಲ್ಲರೂ ಮೇಳಕುಂದಾ (ಬಿ) ರವರು ಅಕ್ರಮ ಕೂಟ ಮಾಡಿಕೊಂಡು ಬಂದು ನಮಗೆ ನೋಡಿ ಟಾವಲ ಹಾರಿಸುತ್ತಿ ರಂಡಿ ಮಗನೆ  ಅಂತಾ ಅವಾಚ್ಯವಾಗಿ ಬೈಯುವಾಗ ನನಗೆ ಯಾಕೆ ಬೈಯುತ್ತಿರಿ  ಅಂತಾ ಕೇಳಿದಕ್ಕೆ ಬೋಸಡಿ ಮಗನೆ ನಿನ್ನದು ಬಹಳ ಆಗಿದೆ ಎಂದು ನಾಗಣ್ಣ ಮಳ್ಳಿ, ಶಿವಾ ಮಡ್ಡಿ ನನಗೆ ಒತ್ತಿ ಹಿಡಿದಾಗ ವಿದ್ಯಾಸಾಗರ ಕಲಬುರಗಿ ಈತನು ಒಂದು ಚಾಕುವಿನಿಂದ ಬಲಗೈ , ಎಡಗೈಗೆ ಹೊಡೆದು ತರಚಿದಗಾಯಗೊಳಿಸಿದ್ದು  ಅಲ್ಲದೆ ಮಂಜು ಕೊಳ್ಳೂರ, ಸಂಗು ಮಡ್ಡಿ ಕೂಡಿ ನನಗೆ ಮುಷ್ಥಿ ಮಾಡಿ ಮುಖಕ್ಕೆ, ಹೊಟ್ಟೆಗೆ ಹೊಡೆದು ಗುಪ್ತಗಾಯ ಗೊಳಿಸಿರುತ್ತಾರೆ. ಅವರು ನನಗೆ ಹೊಡೆಯುದನ್ನು ನೋಡಿ ಬಸಣ್ಣ ತಂದೆ ಶರಣಪ್ಪ ಪೂಜಾರಿ, ಮಲ್ಲು ಕೋಟೆನವರ, ಮೈನು ನದಾಫ ಕೂಡಿ ಬಿಡಿಸುವಾಗ ಇನ್ನು ಮುಂದೆ ನಮಗೆ ನೋಡಿ ಅಂಕಡೊಂಕ ಮಾತಾಡಿ ಟಾವೆಲ್ ಹಾರಿಸುವದು ಮಾಡಿದರೆ ನಿನ್ನ ಜೀವ ಸಹೀತ ಇಡುವದಿಲ್ಲ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 August 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಸುನಿತಾ ಗಂಡ ಸಂಜುಕುಮಾರ ಹೊಸಮನಿ ಇವಳಿಗೆ ಮದುವೆಯಾಗಿ 09-10 ವರ್ಷ ಗತಿಸಿದ್ದು, ಅವಳ ಗಂಡ ಸಂಜುಕುಮಾರ ಇತನು ಕುಡಿಯಲಿಕ್ಕೆ ಹಣ ಕೊಡದೇ ಇದುದ್ದರಿಂದ ಅವಳಿಗೆ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಹೊಡೆ ಬಡಿ ಮಾಡುತ್ತಾ ಹೊರಟಿದ್ದು, ಅಲ್ಲದೇ ದಿನಾಂಕ 22/08/16 ರಂದು ರಾತ್ರಿ 09-00 ಗಂಟೆ ಸುಮರಿಗೆ ಕುಡಿಯಲಿಕ್ಕೆ ಹಣ ಕೊಡದೇ ಇರುವುದರಿಂದ ಅವಳ  ಮೈಮೇಲೆ ಸೀಮೆಎಣ್ಣೆ ಹಾಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಗ್ರಾಶಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಶ್ರೀಮತಿ ಸುನಿತಾ ಇವಳು ದಿನಾಂಕ 22/08/16 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಸುಟ್ಟಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ಇಂದು ದಿನಾಂಕ 26/08/16 ರಂದು ಬೆಳಿಗ್ಗೆ 6-00 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಶ್ರೀ ಸಿದ್ಧಪ್ಪ ತಂದೆ ಮಸ್ತಾನಪ್ಪ ವಾಗದಳ್ಳಿ ಸಾ: ಮಾಹಾಗಾಂವ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ವಿಠೋಬ ತಂದೆ ಲಕ್ಷ್ಮಣ ಜಮಾದಾರ ಅಂಕಲಗಾ ಶಾಖೆಯ ಪ್ರಭಾರಿ ಶಾಖಾಧಿಕಾರಿ ಆಗಿದ್ದು, ನಮ್ಮ ಶಾಖೆಯಲ್ಲಿ ಬರುವ ಅಂಕಲಗಾ ಗ್ರಾಮದಿಂದ ಬೋಸಗಾ[ಕೆ] ಹಾದು ಹೋಗಿರುವ 11 ಕೆ ವಿ ಎ ಲೈನ್ ವಾಯರ್ ಸುಮಾರು 5 ಕಂಬಗಳ ವಾಯರ್ ಮತ್ತು ಎರಡು ಕಂಬಗಳು ಮುರಿದು ನೆಲಕ್ಕೆ ಉರಳಿಸಿ ವಾಯರ್ ಕಟ್ಟು ಮಾಡಿಕೊಂಡು ಹೋಗಿದ್ದು, ನಾನು ದಿನಾಂಕ: 10/08/2016 ರಂದು ನಾನು ಕೆಲಸದ ನಿಮಿತ್ಯವಾಗಿ ಇಟಗಾ ಗ್ರಾಮಕ್ಕೆ ಹೋಗುವ ನಾನು ಖುದ್ದಾಗಿ ನೋಡಿದಾಗ ನನಗೆ ಸಂಶಯ ಬಂದು ನೋಡಿದಾಗ ಅಲ್ಲಿ 5[ಕಂಬಗಳ] ವಾಯರ ಮತ್ತು 2 ಕಲಂಬಗಳು ಮುರಿದಿರುವದು ಕಂಡು ಬಂದು ನಾನು ನಮ್ಮ ಸಿಬ್ಬಂದಿಗಳಿಗೆ ಹೇಳಿದಾಗ ಅವರು ನಾವು ಕೂಡಿಕೊಂಡು ನೋಡಿದಾಗ ಅಲ್ಲಿ ನಮ್ಮ ಕಂಪನಿಯ ವಾಯರ್ ಕಂಬಗಳು ವಾಯರ್ ಮುರಿದು ತೆಗೆದುಕೊಂಡು ಹೋಗಿದ್ದು ಅದರ ಅಂದಾಜು ಮೊತ್ತ 35000/- ರೂಪಾಯಿ ಆಗಿರುತ್ತದೆ. ದಿನಾಂಕ: 10/08/2016 ರ ಹಿಂದಿನ ಎರಡು ದಿನಗಳಲ್ಲಿ ಕಳ್ಳತನ ಆಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.