POLICE BHAVAN KALABURAGI

POLICE BHAVAN KALABURAGI

30 November 2015

Kalaburagi District Reported Crimes

ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ. ಬಾಗಮ್ಮ ಗಂಡ ಬಾಗಪ್ಪ ನಾಯ್ಕಡಿ ಸಾ : ಹಂಚನಾಳ ರವರಿಗೆಇಬ್ಬರೂ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇರುತ್ತಾರೆ. ಹಿರಿಯ ಮಗ ಪ್ರಕಾಶ ಎರಡನೆಯ ಮಗ ಸೋಮಶೇಖರ ಮಗಳು ಮಾಣಿಕಮ್ಮ ಅಂತ ಇರುತ್ತಾಳೆ ಮುಂಜಾನೆ 10 ಗಂಟೆಗೆ ನಾನು ಸೋಮಶೇಖರ ನಮ್ಮ ಹೊಲಕ್ಕೆ ಹೊಗಿದೆವು ಮದ್ಯಾಹ್ನ 1:00 ಗಂಟೆಗೆ ನನ್ನ ಮಗ ಪ್ರಕಾಶ ಈತನು ತನ್ನ ಸೈಕಲ ಮೋಟರ ನಂ: KA32-EG-6212 ನೇದ್ದರ ಮೇಲೆ ನಮ್ಮ ಹತ್ತಿರ ಹೊಲಕ್ಕೆ ಬಂದು KEBಯಲ್ಲಿ ಆದ ನೌಕರಿ ಬಗ್ಗೆ ಇಂಟರನೇಟದಲ್ಲಿ ಜೇರಟಗಿಗೆ ಹೋಗಿ ನೋಡಿ ಬರುತ್ತೇನೆ ಅಂತ ಹೇಳಿ ಹೋದನು ನಾನು ಸೋಮಶೇಖರ ಹೊಲದಲ್ಲಿ ನೀರು ಬಿಡುತ್ತಿದ್ದೇವು ಸಾಯಂಕಾಲ 6;00 ಪಿ.ಎಂ ಸುಮಾರಿಗೆ ನಾವು ಮನೆಗೆ ಬಂದೇವು ಆ ನಂತರ 7:00 ಪಿ.ಎಂ ಸುಮಾರಿಗೆ ಯಾರೋ ಫೊನ ಮಾಡಿ ಹೇಳಿದರು ನಿನ್ನ ಮಗ ಪ್ರಕಾಶನು ಬಳ್ಳೊಂಡಗಿ ದಾಟಿ ಬಾಸಂಗಿ ಸಾಹುಕಾರ ಹೊಲದ ಹತ್ತಿರ ರೋಡಿನ ಮೇಲೆ ಸತ್ತು ಬಿದ್ದಿದ್ದಾನೆ ಎಕ್ಸಿಡೆಂಟ ಆಗಿದೆ ಅಥವಾ ಯಾರೋ ಕೊಲೆ ಮಾಡಿರುತ್ತಾರೆ ಗೋತ್ತಿಲ್ಲಾ ಅಂತ ಹೇಳಿದಾಗ ನಾನು ನನ್ನ ಮಗ ಸೋಮಶೇಖರ ಮಗಳು ಮಾಣಿಕಮ್ಮ ಹಾಗೂ ಊರಿನ ಜನರು ಕೂಡಿ ಅಲ್ಲಿಗೆ ಬಂದು ನೋಡಲಾಗಿ ಬಾಂಸಗಿ ಸಾಹುಕಾರ ಹೋಲದ ಹತ್ತಿರ ರೋಡಿನ ಮೇಲೆ ನನ್ನ ಮಗ ಸತ್ತು ಬಿದ್ದಿದ್ದ. ಅವನ ಎಡಗಡೆ ಎದಿಯ ಮೇಲೆ ಚಾಕುವಿನಿಂದ ಚುಚ್ಚಿದಂತೆ ಬಾರಿಗಾಯ ವಾಗಿದ್ದು ಸೈಕಲ ಮೋಟಾರ ಸ್ವಲ್ಪು ದೂರದಲ್ಲಿ ಬಿದ್ದಿದ್ದು ಸೈಕಲ ಮೋಟರ ಎಕ್ಸಿಡೆಂಟ ಆದಂತೆ ಸಾಕ್ಷಿ ನಾಷ ಮಾಡಲು ಯಾರೋ ನನ್ನ ಮಗನನ್ನು 6-30 ಪಿ.ಎಂ ದಿಂದ 6-45 ಪಿ.ಎಂದ ಅವಧಿಯಲ್ಲಿ ನನ್ನ ಮಗನನ್ನು ಕೊಲೆ ಮಾಡಿ ರೋಡಿನ ಮೇಲೆ ಹೆಣವನ್ನು ಹಾಕಿ ಸೈಕಲ ಮೋಟಾರ ಸ್ವಲ್ಪ ದೂರದಲ್ಲಿ ಕೆಡವಿ ಹೋಗಿದ್ದು ನನ್ನ ಮಗನನ್ನು ಯಾರೋ ದುಸ್ಕರ್ಮಿಗಳು ಕೊಲೆ ಮಾಡಿ ಹಾದಿಯಲ್ಲಿ ಹೆಣವನ್ನು ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಜರೀನಾ ಗಂಡ   ಸ್ಮಾಯಿಲ್ ಸಾಬ ಖಾದ್ರಿ  ಸಾ: ಹರನೂರ ತಾ:ಜೆವರ್ಗಿ ಜಿ: ಕಲಬುರಗಿ ಹಾ:ವ: ಖಾಜಾ ಕಾಲೋನಿ ಜೇವರ್ಗಿ  ಇವರನ್ನು 6 ವರ್ಷಗಳ ಹಿಂದೆ ಹರನೂರ ಗ್ರಾಮದ ಇಸ್ಮಾಯಿಲ್ ಸಾಬ ತಂದೆ ಅಲ್ಲಾವುದ್ದಿನ್ ಸಾಬ ಖಾದ್ರಿ ಇವರ ಜೊತೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ಕಾಲಕ್ಕೆ ನನ್ನ ಗಂಡನಿಗೆ ವರದಕ್ಷಿಣೆ ರೂಪದಲ್ಲಿ 25 ಸಾವಿರ ರೂಪಾಯಿ ನಗದು ಹಣ 3 ತೊಲೆ ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ನನಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳು ಇರುತ್ತಾರೆ. ಮದುವೆ ಆದಾಗಿನಿಂದ ನನ್ನ ಗಂಡ ಇಸ್ಮಾಯಿಲ್ ಸಾಬ ಇತನು ನನಗೆ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ಮತ್ತು 2 ತೊಲೆ ಬಂಗಾರ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿರುತ್ತಾನೆ. ಮತ್ತು ನನ್ನ ನಾದಿನಿ ಫರೀದಾಬೇಗಂ ಗಂಡ ಖಾಜಾ ಹುಸೇನ ಅತ್ತೆಯಾದ ಸೋಫನಬಿ ಗಂಡ ಅಲ್ಲಾವುದ್ದೀನ ಮಾವ ಅಲ್ಲಾವುದ್ದೀನ ನೆಗೆಣಿ ನಸೀಮಾ ಇವರು ಕೂಡ ಇಸ್ಮಾಯಿಲ್ ಹೇಳಿದ ಹಾಗೆ 2 ಲಕ್ಷ ರೂಪಾಯಿ  2 ತೊಲೆ ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಮ್ಮ ಮನೆಯಲ್ಲಿ ನಿಗೆ ಜಾಗವಿದೆ ಇಲ್ಲವಾದರೆ ನಿನಗೆ ರಂಡಿ ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನನ್ನ ಗಂಡ ನನಗೆ ಗೊತ್ತಿಲ್ಲದ ಹಾಗೆ ಮತ್ತೊಂದು ಮದುವೆ ಕೂಡ ಮಾಡಿಕೊಂಡಿರುತ್ತಾನೆ.  ದಿನಾಂಕ 26-07-2015 ರಂದು 11 ಗಂಟೆಯ ಸುಮಾರಿಗೆ ನಾನು ನನ್ನ ಎರಡು ಮಕ್ಕಳು ಹಾಗೂ ನನ್ನ ತಂದೆಯಾದ ಸಿಕಂದರ ಕೂಡಿ ನನ್ನ ಗಂಡನ ಮನೆಯಾದ ಹರನೂರ ಗ್ರಾಮಕ್ಕೆ ಹೋದಾಗ ಆಗ ಮೇಲೆ ನಮೂದಿಸಿದವರರೆಲ್ಲರೂ ಕೂಡಿ ರಂಡಿ ನೀನು ನಮ್ಮ ಮನೆಗೆ ಏಕೆ ಬಂದಿದ್ದಿ ನಮ್ಮ ವಿರುದ್ದ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಿ ಒಂದು ವೇಳೆ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ 2 ಲಕ್ಷ ರೂಪಾಯಿ 2 ತೊಲೆ ಬಂಗಾರ ತಂದರೆ ನಿನಗೆ ನಮ್ಮ ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಬೈದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಾನು ಗಂಡನ ಜೊತೆಗೆ ಜೀವನ ಮಾಡಬೇಕು ಅಂತಾ ಅವರು ಕೊಟ್ಟ ಹಿಂಸೆಯನ್ನು ಸಹಿಸಿಕೊಂಡು ಬಂದಿರುತ್ತೇನೆ ಇಷ್ಟು ದಿವಸ ಕಳೆದರು ಕೂಡ ಅವರು ನನ್ನೊಂದಿಗೆ ಜೀವನ ಮಾಡಲು ಸಿದ್ದವಿಲ್ಲ ಆದ್ದರಿಂದ ನನಗೆ ಮದುವೆ ಆದಾಗಿನಿಂದ ತವರು ಮನೆಯಿಂದ  ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ  ಟಿಪ್ಪರ ವಶ :
ಅಫಜಲಪೂರ ಠಾಣೆ : ದಿನಾಂಕ 29-11-2015 ರಂದು ಗುಡ್ಡೆವಾಡಿ ಗ್ರಾಮದ ಭೀಮಾನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆಗೆ ಬರುತಿದ್ದಾನೆ. ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೋಳ್ಳೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟಿಪ್ಪರ ಬರುತ್ತಿದ್ದು ನೋಡಿ ಸದರಿ ಟಿಪ್ಪರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಸದರಿ ಟಿಪ್ಪರ ಚಾಲಕ ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿ ಕತ್ತಲಲ್ಲಿ ಓಡಿ ಹೊದನು. ನಂತರ ಸದರಿ ಟಿಪ್ಪರನ್ನು  ಪಂಚರ ಸಮಕ್ಷಮ ಚಕ್ಕ ಮಾಡಲು, ಟಾಟಾ ಕಂಪನಿಯ  ಟಿಪ್ಪರ ಇದ್ದು ಅದರ ನಂ ಕೆಎ-32 ಸಿ-2770 ಅಂತ ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಮರಳಿನ ಅಂದಾಜು ಕಿಮ್ಮತ್ತು 5,000/- ರೂ ಆಗಬಹುದು. ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

27 November 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಕವೀತಾ ಗಂಡ ತುಳಜ್ಯಾ ನಾಯಕ ಸಾ: ಬೊಂದೆಂಪಲ್ಲಿ ಇಂದಿರಾನಗರ ಕಾರಬಾರಿ ರವರನ್ನು  ಈಗ ಸುಮಾರು 5 ವರ್ಷಗಳ ಹಿಂದೆ ತುಳಚಿರಾಮ ಎಂಬುವವನೊಂದಿಗೆ ವಿವಹಾವಾಗಿದೆ ಮದುವೆಯ ಸಮಯದಲ್ಲಿ ನಮ್ಮ ತಂದೆತಾಯಿಯವರು 1 ಲಕ್ಷ ರೂಪಾಯಿ ಮತ್ತು 5 ತೊಲೆ ಬಂಗಾರ ವರದಕ್ಷಣೆಯಾಗಿ ಕೊಟ್ಟಿದ್ದಾರೆ. ನನಗೆ ಒಬ್ಬಳು ಹೆಣ್ಣುಮಗಳು ಜನಿಸಿರುತ್ತಾಳೆ. ಮದುವೆಯ ನಂತರ 4 ವರ್ಷಗಳ ಕಾಲ ಚನ್ನಾಗಿ ಜೀವನ ನಡೆಯಿಸಿದೇವೆ. ಈಗ ಒಂದು ವರ್ಷದ ನಂತರ ನನಗೆ ನಿಮ್ಮ ತಂದೆ ತಾಯಿಯವರ ಕಡೆಯಿಂದ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದಾನೆ. ಇದಕ್ಕಿಂತ ಮುಂಚೆ 4 ತಿಂಗಳ ಹಿಂದೆ 40 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಈಗ ಮತ್ತೆ ಇನ್ನು 60 ಸಾವಿರ ರೂಪಾಯಿ ತೆಗೆದುಕೊಂಡು ಬಾ ಅಂತಾ ಕಿರುಕುಳ ನೀಡುತ್ತಿದ್ದಾನ, ಇದನ್ನು ನಮ್ಮ ನೆರೆಯ ಮನೆಯವರಾದ ದಾಸ್ಯಾ ನಾಯಕ ತಂದೆ ದೇವಜ್ಯಾ ನಾಯಕ, ಕಮ್ಮ್ಯಾ ನಾಯಕ ತಂದೆ ಸುಬ್ಯಾ ನಾಯಕ ಹಾಗು ಬಾಲ್ಯಾ ನಾಯಕ ತಂದೆ ಮೇಗ್ಯಾ ನಾಯಕ ಇವರು ನೋಡಿ ನನ್ನ ಗಂಡನಿಗೆ ಬುದ್ದಿವಾದ ಹೇಳಿರುತ್ತಾರೆ. 4 ವರ್ಷಗಳ ನಂತರ ನನಗೆ ಅನಾವಶ್ಯಕವಾಗಿ ಹೊಡೆ ಬಡೆ ಮಾಡುತ್ತಿದ್ದು ಅವಾಚ್ಚ ಶಬ್ದಗಳಿಂದ ಬೈಯುತ್ತಿದ್ದಾನೆ. ನಾನು 2 ನೇ ಮದುವೆ ಮಾಡಿಕೊಳ್ಳುತ್ತೇನೆ ಅದಕ್ಕೆ ನೀನು ಒಪ್ಪಿಕೊಳ್ಳಬೇಕು ಅಂತಾ ಜೀವದ ಭಯ ಹಾಕುತ್ತಿದ್ದಾನೆ. ಹೀಗಾಗಿ 2 ತಿಂಗಳಹಿಂದೆ ಪಾರ್ವತಿ ಎಂಬಾಕೆಯೊಂದಿಗೆ 2ನೇ ಮದುವೆ ಮಾಡಿಕೊಂಡಿರುತ್ತಾನೆ ಅಂತಾ ತಿಳಿದು ಬಂದಿರುತ್ತದೆ. ಮತ್ತೆ ನನ್ನ ಗಂಡ ದಿನಾಂಕ: 05.11.2011 ರಂದು ಸಾಯಂಕಾಲ 06:45 ಗಂಟೆ ವೇಳೆಗೆ ತವರು ಮನೆಯಿಂದ 60 ಸಾವಿರ ರೂಪಾಯಿ ತರದೆ ಇದ್ದರೆ, ಕೊಲೆ ಮಾಡುತ್ತೇನೆ ಅಂತ ಆಜೀವದ ಬೇದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಇಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ  :
ಗ್ರಾಮೀಣ ಠಾಣೆ : ಶ್ರೀ ಶಶಿಕಾಂತ ತಂದೆ ಶಿವಶರಣಪ್ಪಾ ಸೋರಡೆ ಸಾ;ಕಿರಾಣಾ ಬಜಾರ ಕಲಬುರಗಿ ಬೇಲೂರ (ಜೆ) ಕ್ರಾಸ ಹತ್ತಿರ ಸುಮೀತ ಇಂಡಸ್ಟ್ರೀಜ ಅಂತಾ  ದಾಲಮಿಲ್ ಇಟ್ಟು ಉಪಜೀವನ ಸಾಗಿಸುತ್ತಿದ್ದು ದಿನಾಂಕ. 18-10-2015 ರಂದು ಶ್ರೀ ಗುರುದೇವ ದತ್ತ ಇಂಡಸ್ಟ್ರೀಜ ಬೇಲೂರ ಕ್ರಾಸ ರವರ ಕಡೆಯಿಂದ 30 ಕೆ.ಜಿ.ವುಳ್ಳ ಹೆಸರು ಬೆಳೆಯನ್ನು 333 ಬ್ಯಾಗಗಳನ್ನು ಖರೀದಿಸಿ ನಮ್ಮ ಮಿಲ್ಲದಲ್ಲಿ ಇಟ್ಟುಕೊಂಡಿರುತ್ತೇನೆ ಮರುದಿವಸ ಅಂದರೆ ದಿನಾಂಕ. 20-10-2015 ರಂದು ಚಿತ್ರದುರ್ಗ ಒಬ್ಬ ಗಿರಾಕಿಗೆ 50 ಬ್ಯಾಗಗಳನ್ನು ಮಾರಾಟ ಮಾಡಿದ್ದು ಉಳಿದ 283 ಬ್ಯಾಗಗಳು ದಾಲಮಿಲ್ ದಲ್ಲಿದ್ದವು. ದೀಪಾವಳಿ ಹಬ್ಬಕ್ಕೆ ನಮ್ಮ ದಾಲಮಿಲ ಬಿಲ್ಡಿಂಗ ಲೀಜ ಮುಕ್ತಾಯವಾಗಿದ್ದರಿಂದ  ದಿನಾಂಕ 18-11-2015 ರಂದು ಸ್ವಂತ ಬಿಲ್ಡಿಂಗ ಇಂಡಸ್ಟ್ರೀಯಲ್ ಏರಿಯಾದ 1 ನೆ ಹಂತ ಪ್ಲಾಟ ನಂ. 71 ನೆದ್ದರಲ್ಲಿ ಸ್ಥಳಾಂತಿಸುವಾಗ  ಮಿಲ್ಲದ್ದಲಿಟ್ಟಿದ್ದು ಒಟ್ಟು 283 ಹೆಸರ ಬೆಳೆ ಬ್ಯಾಗಗಳಲ್ಲಿ ಕೇವಲ 233 ಬ್ಯಾಗಗಳು ಮಾತ್ರ ಇದ್ದವು ಉಳಿದ 50 ಬ್ಯಾಗಗಳು ಕೊರತೆ ಕಂಡು ಬಂದಿದ್ದು ಆಗ ಮಿಲ್ಲದಲ್ಲಿ ಕೆಲಸ ಮಾಡುವ ವರೆಲ್ಲರೂ ವಿಚಾರ ಮಾಡಿದರೂ ಗೊತ್ತಿರುವದಿಲ್ಲಾ ಅಂತಾ ತಿಳಿಸಿದ್ದರು ಪ್ರತಿಒಂದು ಬ್ಯಾಗ 30 ಕೆ.ಜಿ ವುಳ್ಳದಾಗಿದ್ದು ಪ್ರತಿಯೊಂದು ಬ್ಯಾಗಿಗೆ 3480/- ರೂ ಇದ್ದು  50 ಬ್ಯಾಗಿಗೆ ಒಟ್ಟು ಅಕಿ. 1,74,000/- ರೂ ಬೆಲೆಬಾಳುವದು   ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ದಿನಾಂಕ.20-10-2015 ರಿಂದ ದಿನಾಂಕ 18-11-2015 ರ ಮದ್ಯದ ಅವಧಿಯಲ್ಲಿ ನಮ್ಮ ಸಮೀತ ದಾಲಮಿಲ್ಲದಲ್ಲಿಟ್ಟ  ಒಟ್ಟು 50 ಬ್ಯಾಗ  ಒಟ್ಟು ಅಕಿ. 1,74,000/- ರೂ ಬೆಲೆಬಾಳುವದು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 November 2015

Kalaburagi District Press Note

:: ಪತ್ರಿಕಾ ಪ್ರಕಟಣೆ ::
ಎ.ಪಿ.ಸಿ ಹುದ್ದೆಗಳ ನೇಮಕಾತಿ ಕುರಿತು ಸಿಇಟಿ ಪರೀಕ್ಷೆಯನ್ನು ದಿನಾಂಕ: 29-11-2015 ರಂದು ಬೆಳಿಗ್ಗೆ 11-00 ಗಂಟೆಯಿಂದ 12-30 ಗಂಟೆಯವರೆಗೆ ಕಲಬುರಗಿ ನಗರದ ಈ ಕೆಳಗಿನ (05) ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿರುತ್ತದೆ.

1.  ವಿಜಯ ವಿದ್ಯಾಲಯ ಸಂಯುಕ್ತ ಪಿ.ಯು. ಕಾಲೇಜ, ಐ-ವಾನ್-ಶಾಹಿ ರಸ್ತೆ, ಕಲಬುರಗಿ.
2. ಪ್ರಜ್ಞಾ ಇಂಗ್ಲೀಷ ಮೀಡಿಯಮ್ ಹೈಯರ ಪ್ರೈಮರಿ ಸ್ಕೂಲ್,ಎಸ್.ಟಿ.ಬಿ.ಟಿ. ದರ್ಗಾ ರಸ್ತೆ, ಕಲಬುರಗಿ.
3. ಮಿಲಿಂದ ಪಿ.ಯು. ಕಾಲೇಜ, ಎಸ್.ಟಿ.ಬಿ.ಟಿ. ಹತ್ತಿರ, ದರ್ಗಾ ರಸ್ತೆ, ಕಲಬುರಗಿ.
4. ಸರಕಾರಿ ಮಹಿಳಾ ಪಿ.ಯು. ಕಾಲೇಜ, ಹಳೆ ಎಸ್.ಪಿ ಆಫಿಸ್ ಹತ್ತಿರ, ಕಲಬುರಗಿ.
5. ಪೊಲೀಸ್ ತರಬೇತಿ ಕಾಲೇಜು, ನಾಗನಹಳ್ಳಿ, ಕಲಬುರಗಿ.

      ಎಪಿಸಿ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ, ಇಟಿ/ಪಿಎಸ್ಟಿ ಪರೀಕ್ಷೆಯಲ್ಲಿ ಅರ್ಹ ಹೊಂದಿದ ಕಲಬುರಗಿ ಜಿಲ್ಲೆಯಲ್ಲಿ 2200 ಅರ್ಹ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯನ್ನು ಮೇಲಿನ ಪರೀಕ್ಷಾ ಕೇಂದ್ರಗಳಲ್ಲಿ ಕೈಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಪರೀಕ್ಷೆಯ ಮುನ್ನ ಗುರುತಿನ ಚೀಟಿ, ಹಾಗೂ ಇಂಟರನೆಟ್ ಸೆಂಟರ್ಗಳಿಂದ ಕರೆ ಪತ್ರವನ್ನು ತೆಗೆದುಕೊಂಡು ಪರೀಕ್ಷೆಗೆ ಹಾಜರಾಗುವುದು.  ಪರೀಕ್ಷೆಗೆ ಕರೆ ಪತ್ರ, ಗುರುತಿನ ಚೀಟಿ, ಮತ್ತು ಪೆನ್ ಇವುಗಳನ್ನು ಹೊರತುಪಡಿಸಿ ಇನ್ನಾವುದೇ ಪೇಪರ್, ಮೊಬೈಲ್, ಲ್ಯಾಪಟಾಪ್, ಕ್ಯಾಲಕುಲೇಟರ್ ಇವುಗಳನ್ನು ಪರೀಕ್ಷಾ ಕೇಂದ್ರದಲ್ಲಿ ನಿರ್ಬಂಧಿಸಲಾಗಿದೆ.
                                                                                               ಪೊಲೀಸ್ ಅಧೀಕ್ಷಕರು,
                                 ಕಲಬುರಗಿ.