POLICE BHAVAN KALABURAGI

POLICE BHAVAN KALABURAGI

12 June 2014

Gulbarga District Reported Crimes

ಹಲ್ಲೆ ಪ್ರಕರಣ :
ಮಳಖೇಡ ಠಾಣೆ : ಶ್ರೀ ನರಸಯ್ಯ ತಂದೆ ಮುದ್ದಯ್ಯ ಈಳಿಗೇರ  ಸಾ : ಹುಡಾ ಬಿ ತಾ : ಸೇಡಂ ರವರು ದಿನಾಂಕ 10.06.14 ರಂದು ರಾತ್ರಿ 11:೦೦ ಗಂಟೆಯ ಸುಮಾರಿಗೆ ನಾನು ಆರ್.ಸಿ.ಎಫ್ ನ ಲಾರಿ ಯಾರ್ಡನಲ್ಲಿ ಹೋಗುತ್ತಿದ್ದಾಗ 1. ಮುಜಮ್ಮಿಲ್  ತಂದೆ ಮೌಲಾನ 2. ಸಮೀರ 3. ಸದ್ದಾಮ್ ತಂದೆ ಇಬ್ರಾಹಿಂ 4. ಅಫ್ರೋಜ್ ಲೋಕಂಡೆ ಸಾ : ಎಲ್ಲರು  ಳಖೇಡ ಸಂಗಡ 5, 6, ಜನರು ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈದು ಕೈ ಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ: 05-06-2014 ರಂದು ಸುಪರ ಮಾರ್ಕೆಟದ ಹನುಮಾನ ಗುಡಿಯ ಹತ್ತಿರ ಅಂದಾಜು 40 ವರ್ಷದ ಒಬ್ಬ ಅಪರಿಚಿತ ಗಂಡು ವ್ಯಕ್ತಿ ತನಗಿದ್ದ ಯಾವುದೋ ಕಾಯಿಲೆಯಿಂದ ಮದ್ಯಾಹ್ನ 12:00 ಗಂಟೆಗೆ ಸುಮಾರಿಗೆ ಮೃತ್ತ ಪಟ್ಟಿದ್ದು ಸದರಿ ಮೃತ ವ್ಯಕ್ತಿಯ ಬಗ್ಗೆ ಯಾರಾದರೂ ವಾರಸುದಾರರು ಬರಬಹುದು ಅಂತಾ ತಿಳಿದು ಶವವನ್ನು ಬ್ರಹ್ಮಪೂರ ಠಾಣೆಯ ಸಿಬ್ಬಂದಿಯವರು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೊಣೆಯಲ್ಲಿ ತಂದು ಇಟ್ಟಿದ್ದು ಇರುತ್ತದೆ. ಆದರೆ ಇಲ್ಲಿಯವರೆಗೆ ಸದರಿ ಅಪರಿಚಿತ ಗಂಡು ವ್ಯಕ್ತಿಯ  ವಾರಸುದಾರರು ಬರದೆ ಇರುವದರಿಂದ, ದಿನಾಂಕ 11-06-2014 ರಂದು ಬ್ರಹ್ಮಪೂರ ಠಾಣೆಯಲ್ಲಿ ಸ ಸ್ವಾಭಾವಿಕ ಸಾವು ಅಂತಾ ಪ್ರಕರಣ ದಾಖಲಿಸಲಾಗಿದೆ. 

Gulbarga District Reported Crimes

ಅ ಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ. ಜಯಶ್ರೀ ಗಂಡ ಸುನೀಲ ಹೊಸಮನಿ, ಸಾ : ಮಾಲಗತ್ತಿ, ತಾ:ಜಿ: ಗುಲಬರ್ಗಾ ರವರು ದಿನಂಪ್ರತಿ ಬೆಳಿಗ್ಗೆ ನಮ್ಮೂರಿನ ಶಾಲೆಗೆ ಹೋಗಿ ಶಾಲೆಯ ಆಗು ಹೋಗುಗಳಿಗೆ ವಿಚಾರ ವಿನಿಮಯ ಮಾಡುತ್ತಾ ಇರುತ್ತೇನೆ. ದಿನಾಂಕ: 11-06-2014 ರಂದು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ನಮ್ಮೂರ ಅಂಗನವಾಡಿ ಕಾರ್ಯಕರ್ತೆಯಾದ ಕುಮಾರಿ.ಲಕ್ಷ್ಮಿ ತಂದೆ ದೇವಿಂದ್ರಪ್ಪ ಕೊಡದೂರ ಇವರು ನನಗೆ ಫೋನ್ ಮಾಡಿ ವಿಷಯ ತಿಳಿಸಿದ್ದು ಏನೆಂದರೆ ನಮ್ಮೂರಿನ ದತ್ತಾತ್ತೇಯ ತಂದೆ ಶರಣಪ್ಪ ಕಾಂಬಳೆ ಇವರ ಮಗಳು ಸೌಮ್ಯ, ಇವಳು ಶಾಲೆಯ ವಿರಾಮ ಬಿಟ್ಟಾಗ ಮನೆಗೆ ಹೋಗಿ ಊಟ ಮಾಡಿಕೊಂಡು ಮರಳಿ ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನಮ್ಮ ಶಾಲೆಯ ಆವರಣದಲ್ಲಿ ಬರುತ್ತಿರುವಾಗ ಆಗ ನಮ್ಮೂರಿನ ರಾಣೋಜಿ ತಂದೆ ಮಲ್ಲಿಕಾರ್ಜುನ ಕೊಡದೂರ ಈತನು ಮೋಟರ ಸೈಕಲ್ ಮೇಲೆ ಬಂದು ಶಾಲೆಯ ಆವರಣದಲ್ಲಿ ಬಂದು ನಿಂತು ಅಂಜಲಿಗೆ ಕರೆದುಕೊಂಡು ಹೋಗುತ್ತಿದ್ದಾಗ ನಾನು ರಾಣೋಜಿಗೆ ವಿಚಾರಿಸಲಾಗಿ ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವಿ ಅಂತಾ ಕೇಳಿದಾಗ ಅವಳ ಫೋಟೋ ತೆಗೆಯಿಸಿಕೊಂಡು ಬರಲು ಕರೆದುಕೊಂಡು ಹೋಗುತ್ತಿದ್ದೇನೆ ಅಂತಾ ಹೇಳಿ ಹೋಗಿರುತ್ತಾನೆ. ತದ ನಂತರ ನಾನು ಅವನ ಮೇಲೆ ಸಂಶಯ ಬಂದಿದ್ದರಿಂದ ಅಂಜಲಿ ಮನೆಗೆ ಹೋಗಿ ಅವಳ ತಂದೆ-ತಾಯಿಯವರಿಗೆ ವಿಚಾರಿಸಲು ಮಗಳು ಊಟ ಮಾಡಿ ಶಾಲೆಗೆ ಹೋಗಿರುತ್ತಾಳೆ ಅಂತಾ ಅಷ್ಟೆ ಹೇಳೀದರು. ಆಗ ನಾನು ಪುನಃ ಶಾಲೆಗೆ ಬಂದು ಶಾಲೆಯ ಮುಖ್ಯಗುರುಗಳಾದ ಜಯಶ್ರೀ, ಹಾಗೂ ಸಹ ಶಿಕ್ಷಕಿಯರಾದ ಕಾಶಿಬಾಯಿ, ಸುಶಿಲಾಬಾಯಿ, ಶಕುಂತಲಾ, ಶಿಲ್ಪಾ, ಇಂದುಮತಿ ಇವರಿಗೆ ವಿಷಯ ತಿಳಿಸಿದ್ದು ಅಂತಾ ನನಗೆ ಹೇಳಿದಾಗ ನಾನು ಕೂಡಲೆ ನಮ್ಮೂರಿನ ಶಾಲೆಗೆ ಬಂದು ನಾನು ಮತ್ತು ಮೇಲೆ ನಮೂದಿಸಿದ ಶಿಕ್ಷಕರೊಂದಿಗೆ ಅಂಜಲಿಯ ತಂದೆ-ತಾಯಿಯ ಮನೆಗೆ ಹೋಗಿ ವಿಷಯ ತಿಳಿಸಿ ನಾವು ಮತ್ತು ಅವರ ತಂದೆ-ತಾಯಿಯವರು ಎಲ್ಲಾ ಕಡೆ ಹುಡುಕಾಡುತ್ತಿದ್ದಾಗ ಅಂಜಲಿ ಇವಳು ತಮ್ಮ ಮನೆಯ ಹತ್ತಿರ ಬಂದ ಬಗ್ಗೆ ವಿಷಯ ಗೊತ್ತಾಗಿ ನಾವೆಲ್ಲರೂ ಅಲ್ಲಿಗೆ ಹೋಗಿ ಅಂಜಲಿಗೆ ವಿಚಾರಿಸಲು ನನ್ನ ಮಾವನಾದ ರಾಣೋಜಿ ಈತನು ಶಾಲೆಯಿಂದ ತನ್ನ ಮೋಟರ ಸೈಕಲ್ ಮೇಲೆ ನನಗೆ ಭೂಪಾಲ ತೆಗನೂರ ಕಡೆ ಕರೆದುಕೊಂಡು ರಸ್ತೆಯ ಫೂಲ್ ಹತ್ತಿರ ನಿಲ್ಲಿಸಿ ನನಗೆ ಪೂಲ್ ಕೆಳಗೆ ಕರೆದುಕೊಂಡು ಹೋಗಿ ನನ್ನ ಮೈಮೇಲೆ ಇರುವ ಬಟ್ಟೆಗಳನ್ನು ಬಿಚ್ಚಿ ನನ್ನ ಮೈಮೇಲೆ ಬಿದ್ದು, ನಾನು ಏಕಿ ಹೊಯ್ಯುವ ಜಾಗದಲ್ಲಿ ಸಂಭೋಗ ಮಾಡಿದನು. ನಂತರ ನನಗೆ ಬಟ್ಟೆ ತೊಡಿಸಿ, ಅವನ ಮೋಟರ ಸೈಕಲ್ ಮೇಲೆ ಕೂಡಿಸಿಕೊಂಡು ನಮ್ಮ ಮನೆಯ ಹತ್ತಿರ ಬಿಟ್ಟು ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

10 June 2014

Gulbarga District Reported Crimes

ಗೃಹಣಿಗೆ ಕಿರುಕಳ ಪ್ರಕರಣ :
ಮಳಖೇಡ ಠಾಣೆ : ಶ್ರೀಮತಿ ಹುಸನಾಬಾನು ಗಂಡ ಇಫ್ತೆಕಾರ್ಅಲಿ ಸಾ: ದರ್ಗಾ ಕಾಲೋನಿ ಮಳಖೇಡ ತಾ : ಸೇಡಂ ರವರಿಗೆ  1.  ಇಫ್ತೆಕಾರ್ ಅಲಿ ತಂದೆ ಮಹ್ಮದ್ ಅಲಿ 2. ವಹೀದ ಉನ್ನಿಸಾ ಗಂಡ ಮಹ್ಮದ್ ಅಲಿ 3. ಇಜಾಜ್ ಅಲಿ ತಂದೆ ಮಹ್ಮದ್ ಅಲಿ 4.  ಇಮ್ತಿಯಾಜ್ ಅಲಿ ತಂದೆ ಮಹ್ಮದ್ ಅಲಿ  ಸಾ :  ಎಲ್ಲರು ಭಿಲಾಯಿ ನಗರ ಜಿ: ದುರ್ಗ ರಾಜ್ಯ : ಛತ್ತಿಸ್‌ಘಡ್  ಇರೆಲ್ಲರು ಕೂಡಿಕೊಂಡು ಮಾನಸೀಕ ಹಿಂಸೆ ನಿಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                                     
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಚಿಂಚೋಳಿ ಠಾಣೆ : ದಿನಾಂಕ 09/06/2014 ರಂದು ರಾತ್ರಿ 07:20 ಗಂಟೆ ಸುಮಾರಿಗೆ ಗುಲಬರ್ಗಾ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗಾರಂಪಳ್ಳಿ ಗ್ರಾಮದಲ್ಲಿ ಹನುಮಾನ ದೇವಾಲಯದ ಕಟ್ಟೆಯ ಮೇಲೆ ಬಕ್ಕಪ್ಪ ತಂದೆ ಮರೇಪ್ಪ ಮರಪಳ್ಳಿ ವಯ-50ವರ್ಷ, ಸಾ-ಗಾರಂಪಳ್ಳಿ,ತಾ- ಚಿಂಚೋಳಿ, ಇತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಗುಲಬರ್ಗಾ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ ಈ ಘಟಕದ ಫ್ರಭಾರದಲ್ಲಿರುವ ಶ್ರೀ. ಯು.ಶರಣಪ್ಪ. ಪೊಲೀಸ್ ಇನ್ಸಪೆಕ್ಟರ ರವರ ಮಾರ್ಗದರ್ಶನದಲ್ಲಿ ಶ್ರೀ.ದತ್ತಾತ್ರೇಯ ಎ.ಎಸ್.ಐ ಹಾಗೂ ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಸದರಿಯವನಿಗೆ ಹಿಡಿದುಕೊಂಡು ಅವನ ಕಡೆಯಿಂದ ಮಟಕಾ ನಂಬರ ಚೀಟಿ, ಒಂದು ಬಾಲ್ ಪೆನ್ನು, ಹಾಗೂ ನಗದು ಹಣ 7050/- ರೂಪಾಯಿ, ಜಪ್ತು ಮಾಡಿಕೊಂಡು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ದರೋಡೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮಹ್ಮದ ಅಬ್ದುಲ ರುಮಾನ ತಂದೆ ಮಹ್ಮದ ಅಬ್ದಲ್ ರಜಾಕ್ ಸಾ||  ಅಪಾರ್ಟಮೆಂಟ ಜಿ-1 ಕೊಮಪಲ್ಲಿ ಪಿಸ್ತಾ  ಹೈದ್ರಾಬಾದ ಇವರು ಐವಾನ ಶಾಹಿ ರೋಡಿನಲ್ಲಿರು ಇನಾಮದಾರ ಕಾಂಪ್ಲೆಕ್ಸದಲ್ಲಿ ವಾಸವಾಗಿದ್ದು ಎಮ್‌ಬಿಬಿಎಸ್‌ ಓದುತಿದ್ದೇನೆ ನನ್ನ ಜೋತೆಗೆ ಮಹ್ಮದ ಮೋಸಿನ ಅಲಿ, ಸೈಯದ ಹಖಿಮೊದ್ದಿನ, ಅಬ್ದುಲ್ ವದ್ದುದ ಪೈಜಾಮ, ಶೇಖ ಹಾರುನ ರಶೀದ ಹೀಗೆ ಆರು ಜನರು ಕೋಡಿಕೊಂಡು ಇರುತ್ತೇವೆ ನಾನು ಕೆಬಿಎನ್‌ ಮೇಡಿಕಲ್ ಕಾಲೇಜಿನಲ್ಲಿ ಓದುತ್ತೇನೆ ದಿನಾಂಕ; 08/06/2014 ರಂದು 00;30 ಗಂಟೆ ಸುಮಾರಿಗೆ ನಾವಿದ್ದ ರೂಮಿಗೆ 5 ಜನರು ಬಂದು ನಮ್ಮ ಸ್ನೆಹಿತನಿಗೆ ಯಾಕೆ ಹೊಡೆದಿದ್ದಿರಿ ಅಂತಾ ನನಗೂ ಮತ್ತು ನನ್ನ ಜೋತೆಗಿದ್ದವರಿಗೆ ಕೇಳಿದರು ಅದಕ್ಕೆ ನಾವು ಯಾರೂ ನಿಮ್ಮ ಗೆಳೆಯನಿಗೆ ಹೊಡೆದಿರುವದಿಲ್ಲ ಅವರು ಯಾರು ಯಾರು ಎನ್ನುವದ ಗೋತ್ತಿಲ್ಲ ಎಂದು ಹೇಳಿದಾಗ ಸದರಿಯವರು ರೂಮ್‌ನಲ್ಲಿ ಸಿಗರೇಟ ಸೇದಿ ಕೈಕೈ ಮಿಲಾಯಿಸಿ ಹೊದರು ಇಂದು ದಿನಾಂಕ; 10/06/2014 ರಂದು 00;20 ಗಂಟೆಗೆ ನಾನು ಹಾಗು ಮೇಲೆ ನಮೂದು ಮಾಡಿದ 5 ಜನರು ಓದುತ್ತಾ ಕುಳಿತಾಗ ಒಮ್ಮಲೆ 10 ರಿಂದ 12 ಜನರ ಗುಂಪು ಬಂದವರೆ ಕೈಲ್ಲಿ ಜಂಬೆ ಹಾಗು ರಾಡ ಹಿಡಿದುಕೊಂಡು ಬಂದು ನನಗೆ ಹೊಡೆಯುತ್ತಿರಾ ಮಕ್ಕಳೆ ಅಂತಾ ಚಾಕು ಮತ್ತು ರಾಡ ತೋರಿಸಿ ನಿಮಗೆ ಹೊಡೆಯುತ್ತೇವೆ ಅಂತಾ ನನಗೆ ಹಿಡಿದುಕೊಂಡು ನನ್ನ ಹತ್ತಿರ ಇದ್ದ ಹೆಚ್‌ಟಿಸಿ ಮೋಬೈಲ್ ನಂ; 85006786 ಹಾಗು 10000/- ರೂ ಕಸಿದುಕೊಮಡು ಚಾಕುವಿನ ಹಿಡಿಕೆಯಿಂದ ಎಡಗಡೆ ಮೆಲಕಿನ ಹತ್ತಿರ ತಿವಿದಿದ್ದು ಪಟ್ಟಾಗಿರುತ್ತದೆ. ನನ್ನಮತೆ ಅಬ್ದುಲ್ ವದ್ದುದ ಪೈಜಾನನ ಹತ್ತಿರ ಇದ್ದ 12000/- ರೂ ಹಾಗು ಸಿ-2 ನೂಕಿಯಾ ಮೋಬೈಲ್ ನಂ; 8019317342 ಹಾಗು 3 ಎಟಿಎಮ್‌ ಕಾರ್ಡ, ಐಡಿ ಕಾರ್ಡ. ಸೈಯದ ಮುಖಿಮುದ್ದಿನನ ಗ್ಯಾಲಾಕ್ಸಿ ನೆಕ್ಸಸ್ಸ್ ಮೋಬೈಲ್ ನಂ; 9880575901. ಶೇಖ ಹಾರುನ ರಸಿದನ ಗ್ಯಾಲಾಕ್ಸಿ ಎಸ್‌-3 ಮೋಬೈಲ್ ನಂ; 9886446960 ಕಸಿದುಕೊಂಡರು ನನಗೆ ಹೆಚ್ಚಿಗೆ ಪಟ್ಟಾಗಿರುವದಿಲ್ಲ ಆಸ್ಪಾತ್ರೆಗೆ ಹೊಗುವದಿಲ್ಲ ಹೀಗೆ ಒಟ್ಟು 10 ರಿಂದ 12 ಜನರ ಗುಂಪು ಕಟ್ಟಿಕೊಂಡು ನಾವು ವಾಸಿಸುತ್ತಿದ್ದ ಇನಾಮದಾರ ಕಾಂಪ್ಲೆಕ್ಸದ ಎರಡನೇ ಮಹಡಿಯ ಕೊಟಡಿಯಲ್ಲಿ ನುಗ್ಗಿ ನಮಗೆ ಹೆದರಿಸಿ ಹಣ ಮೋಬೈಲ್ ಕಸಿದುಕೊಂಡು   ರೂಮನಲ್ಲಿಕೂಡಿಹಾಕಿ ಹೊರಗಿನಿಂದ ಕೊಂಡಿ ಹಾಕಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಶಿವಲಿಂಗಪ್ಪ ತಂ ಬೀಮಶ್ಯಾ ನಾಟೀಕಾರ  ಮತ್ತುಶ್ರೀ   ಧೂಳಪ್ಪ ತಂದೆ ಶಿವಶರಣಪ್ಪ ಡೆಂಗಿ  ಇಬ್ಬರು ತಮ್ಮ ಖಾಸಗಿ ಕೆಲಸದ ನಿಮಿತ್ಯ ಧೂಳಪ್ಪನ ಟಿ.ವಿ.ಎಸ್. ಎಕ್ಸಎಲ್ ಹೇವಿಡ್ಯೂಟಿ  ಕೆಎ 32 ಇಇ 8125 ಮೇಲೆ ಕುಳಿತುಕೊಂಡು  ನಮ್ಮೂರಿನಿಂದ ಮಧ್ಯಾಹ್ನ 01-00 ಗಂಟೆಗೆ ಹೊರಟು ಮಾಹಾಗಾಂವ ಕ್ರಾಸಿಗೆ ಬಂದು  ಕೆಲಸ ಮುಗಿಸಿಕೊಂಡು ವಾಪಸ್ಸು ಅದೇ ಮೋಟಾರ ಸೈಕಲ ಕುಳಿತು ನಮ್ಮೂರಿಗೆ ಹೊರಟಿದ್ದು, ಸದರ ಮೋಟಾರ ಸೈಕಲ ಧೂಳಪ್ಪ ಡೆಂಗಿ ಇತನು ನಡೆಸುತ್ತಿದ್ದು, ಹಿಂದೆ ನಾನು ಕುಳಿತುಕೊಂಡಿದ್ದೆ. ಮಾಹಾಗಾಂವ ಕ್ರಾಸದಿಂದ  ಕುರಿಕೋಟಾ ಗ್ರಾಮದ ಕಡೆಗೆ ಹೋಗುತ್ತಿದ್ದಾಗ, ದಾರಿಯ ಮಧ್ಯದಲ್ಲಿ  ಗಂಡೋರಿ ನಾಲಾ ಕಾಲುವೆ ಬ್ರೀಡ್ಜ  ದಾಟಿ  ಸ್ವಲ್ಪ ಮುಂದೆ ರೋಡಿನ ಎಡಗಡೆಯಿಂದ ಧೂಳಪ್ಪ ಮೋಟಾರ ಸೈಕಲ ಸಾವಕಾಶವಾಗಿ ನಡೆಸುತ್ತಾ ಹೊರಟಾಗ,ಆಗ  ಅದೇ ವೇಳೆಗೆ ಎದುರುಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಬ್ಬ ಕ್ರೋಜರ ಜೀಪ ಚಾಲಕನು ತನ್ನ ವಶದಲ್ಲಿದ್ದ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ನಾವು ಕುಳಿತ ಟಿವಿಎಸ್ ಎಕ್ಸ ಎಲ್ ಗಾಡಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಈ ಅಪಘಾತದಲ್ಲಿ ನನಗೆ  ಬಲಗಾಲ ಮೊಣಕಾಲ  ಮೇಲೆ ಮತ್ತು ಕೆಳೆಗೆ ಬಲಗಾಲ  ತೊಡೆಗೆ ಮತ್ತು ಹೆಬ್ಬರಳಿಗೆ ಭಾರಿ ರಕ್ತಗಾಯವಾಗಿರುತ್ತದೆ.  ಹಣೆಯ ಬಲಗಡೆ ಮತ್ತು ಬಲಗಣ್ಣಿನ ಪಕ್ಕದಲ್ಲಿ ಮೂಗಿಗೆ ತರಚಿದ ರಕ್ತಗಾಯಗಳಾಗಿರುತ್ತೇವೆ. ಧೂಳಪ್ಪ ಇತನಿಗೆ ನೋಡಲಾಗಿ ಬಲಗಾಲ ಮೊಳಕಾಲಿಗೆ  ತರಚಿದ ಭಾರಿ ರಕ್ತಗಾಯವಾಗಿದ್ದುಬಲಗಲ್ಲಕ್ಕೆ ತರಚಿದ ರಕ್ತಗಾಯವಾಗಿದ್ದು, ಬಲಗಾಲಿನ ಬೆರಳುಗಳಿಗೆ ಭಾರಿರಕ್ತಗಾಯವಾಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.