POLICE BHAVAN KALABURAGI

POLICE BHAVAN KALABURAGI

12 June 2014

Gulbarga District Reported Crimes

ಹಲ್ಲೆ ಪ್ರಕರಣ :
ಮಳಖೇಡ ಠಾಣೆ : ಶ್ರೀ ನರಸಯ್ಯ ತಂದೆ ಮುದ್ದಯ್ಯ ಈಳಿಗೇರ  ಸಾ : ಹುಡಾ ಬಿ ತಾ : ಸೇಡಂ ರವರು ದಿನಾಂಕ 10.06.14 ರಂದು ರಾತ್ರಿ 11:೦೦ ಗಂಟೆಯ ಸುಮಾರಿಗೆ ನಾನು ಆರ್.ಸಿ.ಎಫ್ ನ ಲಾರಿ ಯಾರ್ಡನಲ್ಲಿ ಹೋಗುತ್ತಿದ್ದಾಗ 1. ಮುಜಮ್ಮಿಲ್  ತಂದೆ ಮೌಲಾನ 2. ಸಮೀರ 3. ಸದ್ದಾಮ್ ತಂದೆ ಇಬ್ರಾಹಿಂ 4. ಅಫ್ರೋಜ್ ಲೋಕಂಡೆ ಸಾ : ಎಲ್ಲರು  ಳಖೇಡ ಸಂಗಡ 5, 6, ಜನರು ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈದು ಕೈ ಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ: 05-06-2014 ರಂದು ಸುಪರ ಮಾರ್ಕೆಟದ ಹನುಮಾನ ಗುಡಿಯ ಹತ್ತಿರ ಅಂದಾಜು 40 ವರ್ಷದ ಒಬ್ಬ ಅಪರಿಚಿತ ಗಂಡು ವ್ಯಕ್ತಿ ತನಗಿದ್ದ ಯಾವುದೋ ಕಾಯಿಲೆಯಿಂದ ಮದ್ಯಾಹ್ನ 12:00 ಗಂಟೆಗೆ ಸುಮಾರಿಗೆ ಮೃತ್ತ ಪಟ್ಟಿದ್ದು ಸದರಿ ಮೃತ ವ್ಯಕ್ತಿಯ ಬಗ್ಗೆ ಯಾರಾದರೂ ವಾರಸುದಾರರು ಬರಬಹುದು ಅಂತಾ ತಿಳಿದು ಶವವನ್ನು ಬ್ರಹ್ಮಪೂರ ಠಾಣೆಯ ಸಿಬ್ಬಂದಿಯವರು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೊಣೆಯಲ್ಲಿ ತಂದು ಇಟ್ಟಿದ್ದು ಇರುತ್ತದೆ. ಆದರೆ ಇಲ್ಲಿಯವರೆಗೆ ಸದರಿ ಅಪರಿಚಿತ ಗಂಡು ವ್ಯಕ್ತಿಯ  ವಾರಸುದಾರರು ಬರದೆ ಇರುವದರಿಂದ, ದಿನಾಂಕ 11-06-2014 ರಂದು ಬ್ರಹ್ಮಪೂರ ಠಾಣೆಯಲ್ಲಿ ಸ ಸ್ವಾಭಾವಿಕ ಸಾವು ಅಂತಾ ಪ್ರಕರಣ ದಾಖಲಿಸಲಾಗಿದೆ. 

No comments: