POLICE BHAVAN KALABURAGI

POLICE BHAVAN KALABURAGI

21 August 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ದಿನಾಂಕ:20-08-=2012 ರಂದು ರಾತ್ರಿ ಸುಮಾರಿಗೆ ನಾನು ದೇವಪ್ಪಾ ಮತ್ತು ನಿಮ್ಮ ಮಗ ಶಿವಶರಣ್ಪಾ ಕೂಡಿ ಮದರಿ ಗ್ರಾಮಕ್ಕೆ ಹೋಗಿ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಟ್ರಾಕ್ಟರ ಖಣಕಿ ಲೋಡ ಇಳಿಸಿ ಬರುತ್ತಿರುವಾಗ ಸದರಿ ಟ್ರಾಕ್ಟರವನ್ನು ಶಿವಶರಣಪ್ಪನು ನಡೆಸುತ್ತಿದ್ದು, ನಾನು ಟ್ರಾಲಿಯಲ್ಲಿ ಕುಳಿತ್ತಿದ್ದೇನೆ. ಮುಂದೆ ನಾವು ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಹಸನಾಪೂರ ಕ್ರಾಸ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಾಗ ಎದುರುಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಬ್ಬ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನು ತನ್ನ ಬಸ್ಸನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಂದಾಜು 8-45 ಪಿ.ಎಮ್‌ ಸುಮಾರಿಗೆ ನಮ್ಮ ಟ್ರಾಕ್ಟರಕ್ಕೆ ಎದುರುಗಡೆಯಿಂದ ಡಿಕ್ಕಿ ಪಡಿಸಿದ್ದರಿಂದ ಶಿವಶರಣಪ್ಪಾ ಈತನು ಕೆಳಗೆ ಬಿದ್ದಾಗ ಟ್ರಾಕ್ಟರದ ಟ್ರಾಲಿಯ ಹಿಂದಿನ ಗಾಲಿ ಎದೆಯ ಹಾಗೂ ತಲೆಯ ಮೇಲೆ ಹಾದು ಹೋಗಿದ್ದರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾವು ಮನೆಯಲ್ಲರೇಲ್ಲರೂ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗನು ಅಪಘಾತದಿಂದ ಟ್ರಾಕ್ಟರನಿಂದ ಕೆಳಗೆ ಬಿದ್ದು ಟ್ರಾಕ್ಟರದ ಟ್ರಾಲಿಯ ಹಿಂದಿನ ಗಾಲಿ ಎದೆಯ ಹಾಗೂ ತಲೆಯ ಮೇಲೆ ಹಾದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನನ್ನ ಮಗನ ಸಂಗಡ ಇದ್ದ ದೇವಪ್ಪಾ ದಂಡೋತ್ತಿ ಈತನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಅಲ್ಲೇ ನಿಂತ್ತಿದ್ದ ಬಸ್ ನಂಬರ ನೋಡಲು ಕೆಎ-32 ಎಫ್.-1084 ಇದ್ದು ಸದರಿ ಬಸ್ಸಿನ ಚಾಲಕನ ಹೆಸರು ಅಶೋಕ ತಂದೆ ಸೈದಪ್ಪಾ ಗಜಕೋಶ ಅಂತಾ ಗೊತ್ತಾಯಿತು. ಕಾರಣ ಸದರಿ ಬಸ್ಸಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶಿವಯೋಗೆಪ್ಪಾ ತಂದೆ ಸಾಯಿಬಣ್ಣ ಸಾ|| ನದಿಸಿನ್ನೂರ ತಾ|| ಜಿ|| ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 109/2012 ಕಲಂ 279 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

20 August 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ ; ಶ್ರೀ ರಮೇಶ ತಂದೆ ಬಸವರಾಜ ಹುಗ್ಗಿ ಸಾ: ತೊನಸನಳ್ಳಿ ರವರು ನಾನು ತೊನಸಳ್ಳಿ ಗ್ರಾಮದ ವೀರಣ್ಣಾ ಪೂಜಾರಿ ಇವರ ಅಂಗಡಿಯಲ್ಲಿ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮನ ಕಡೆಗೆ ಬರುತ್ತಿರುವಾಗ ಪ್ರಕಾಶ ಹುಗ್ಗಿ ಇತನು ಕುಡಿದು ಬಂದು,ವಿನಾಕಾರಣ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈದು ಕೈಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:109/2012 ಕಲಂ 341, 323, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಎತ್ತುಗಳ ಕಳ್ಳತನ ಮಾಡಿಕೊಂಡ ಹೋದ ಬಗ್ಗೆ:
ಗುಲಬರ್ಗಾ ಗ್ರಾಮೀಣ ಠಾಣೆ:ಮಲ್ಲೇಶಪ್ಫಾ ತಂಧೆ ಮರೆಪ್ಪಾ ಜಾನೆ ಸಾ|| ಸಿಂದಗಿ ತಾ|| ಜಿ|| ಗುಲಬರ್ಗಾ ರವರು ನಾನು ದಿನಾಂಕ 18-08-2012 ರಂದು ಬೆಳಿಗ್ಗೆ ನನ್ನ  ಹೊಲದಲ್ಲಿ ಗಳ್ಯಾ ಹೊಡೆದು ನಮ್ಮ ಹೊಲದ ಪಕ್ಕದಲ್ಲಿರುವ ನಂದಿ ಗೋಶಾಲೆ ಎದುರುಗಡೆ ಇರುವ ದನಗಳಿಗೆ ಚಿಕಿತ್ಸೆ ಮಾಡಲು ನೆಟ್ಟಿದ್ದ  ಕಬ್ಬಿಣದ ಪೈಪಿಗೆ ನಮ್ಮ ದೇವಣಿ ಜೋಡಿ ಎತ್ತುಗಳು ಹಗ್ಗದೊಂದಿಗೆ ಕಟ್ಟಿ  ನಾನು ನಂದಿ ಗೋಶಾಲೆಯಲ್ಲಿ ಮಲಗಿದ್ದು, ದಿನಾಂಕ:19-08-2012 ರಂದು ಮಧ್ಯರಾತ್ರಿ 2-30 ಗಂಟೆ ಸುಮಾರಿಗೆ ಎದ್ದು ನೋಡಲಾಗಿ ಯಾರೋ ಕಳ್ಳರು ಕಬ್ಬಿಣದ ಪೈಪಿಗೆ ಕಟ್ಟಿದ್ದ ಒಂದು ದೇವಣಿ ಎತ್ತಿನ ಹಗ್ಗ ಹರಿದು ಎತ್ತು ಕಳ್ಳತನ ಮಾಡಿಕೊಂಡು ಹೋಗಿ ರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 270/2012 ಕಲಂ 379 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

19 August 2012

GULBARGA DISTRICT REPORTED CRIME

ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ: ಶ್ರೀ. ಗುರುಸ್ವಾಮಿ ತಂದೆ ಲಕ್ಷ್ಮಯ್ಯ  ತಳ್ಳೋಳಿ ಸಾ: ಬಟಗೇರಾ(ಕೆ) ಗೇಟ್ ತಾ:ಸೇಡಂರವರು ನನ್ನ ಹೆಂಡತಿ ತಾಯಿಯಾದ  (ಅತ್ತೆಯಾದ) ಚಂದ್ರಾಮ್ಮಾ ಇವಳು ನಮ್ಮ ಮನೆಯ ಬಾಜು ತನ್ನ ಮನೆಯಲ್ಲಿಯೆ ಇರುತ್ತಾಳೆ. ನನ್ನ ಅತ್ತೆ ಚಂದ್ರಾಮ್ಮಾ ಇವಳು ನಸುಕಿನ ವೇಳೆ ಎದ್ದು ಕಸಗೂಡಿಸುವುದು ಬಗೈರೆ ಮಾಡುವುದು ಇರುತ್ತಿದ್ದಳು.ದಿನಾಂಕ: 19-08-2012 ರಂದು ಸಹ ನಸುಕಿನ ವೇಳೆ 04-30 ಗಂಟೆಗೆ ಸುಮಾರಿಗೆ ಕಸಗೂಡಿಸುವುದು ವಗೈರೆ ಮಾಡಿ ನೀರು ತುಂಬಿ ನಮ್ಮ ಮನೆಯ ಮುಂದೆ ಇರುವ ಗುಲಬರ್ಗಾ ಕೊಡಂಗಲ್ ಮುಖ್ಯ ರೋಡಿನ ಆಚೆಗೆ ಹೋಗಿ ಮಲಮೂತ್ರ ವಿಸರ್ಜನೆ ಕುರಿತು ಹೋಗುತ್ತಿರುವಾಗ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಕೊಡಂಗಲ್ ರಸ್ತೆ ಕಡೆಯಿಂದ ಅತೀವೇಗ ಹಾಗೂ ನಿಸ್ಕಾಳಜೀತನದಿಂದ ನಡೆಸಿಕೊಂಡು ಬಂದವನೆ ಚಂದ್ರಮ್ಮ ಇವಳಿಗೆ ಡಿಕ್ಕಿ ಹೊಡೆದು ಕಾಲುಗಳಿಗೆ ಭಾರಿ ರಕ್ತ ಗಾಯ ಪಡಿಸಿ ಸ್ಥಳದಲ್ಲಿ ಮೃತಪಡಿಸಿ ತನ್ನ ವಾಹನ ನಿಲ್ಲಿಸದೆ ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 178/2012 ಕಲಂ 279,304 (ಎ) ಐಪಿಸಿ ಸಂಗಡ 187 ಐಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.