POLICE BHAVAN KALABURAGI

POLICE BHAVAN KALABURAGI

22 October 2011

GULBARGA DIST REPORTED CRIMES

ಅಶೋಕ ನಗರ ಠಾಣೆ : ಶ್ರೀ ಶಂಕರ ತಂದೆ ವೀರಣ್ಣಾ ಪೂಜಾರಿ ಉ: ಬಸ ಕಂಡಕ್ಟರ ಡಿ.ಸಿ ನಂ. 164 ಬಸ ಘಟಕ ನಂ.3 ಗುಲಬರ್ಗಾ ಸಾ: ಬೊರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು, ದಿನಾಂಕ 21-10/2011 ರಂದು ಮದ್ಯಾಹ್ನ 1:30 ಗಂಟೆಗೆ ಸುಪರ ಮಾರ್ಕೆಟ ಬಸ ಸ್ಟ್ಯಾಂಡದಲ್ಲಿ ಸಿತನೂರಕ್ಕೆ ಹೊಗಲು ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಂ. ಕೆಎ 32-ಎಫ್‌-1319 ನೇದ್ದನ್ನು ನಿಲ್ಲಿಸಿದಾಗ ಒಬ್ಬ ಪ್ರಯಾಣಿಕ ಮಹಿಳೆಯರ ಸೀಟ ಮೇಲೆ ಕುಳಿತಿರುವಾಗ ಬೇರೆ ಸೀಟಿನ ಮೇಲೆ ಹೊಗುವಂತೆ ಹೇಳಿದಾಗ ಆ ವ್ಯಕ್ತಿ ನನ್ನೊಂದಿಗೆ ತಕರಾರು ಮಾಡಿದನು. ಆಗ ಅಲ್ಲಿ ಪೊಲೀಸರು ಇದ್ದುದ್ದರಿಂದ ಕೆಳಗಡೆ ಇಳಿದನು. ಬಸ್ಸಿನಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಿತನೂರಕ್ಕೆ ಹೊಗಿ, ಮರಳಿ ಸುಪರ ಮಾರ್ಕೆಟಕ್ಕೆ ಬರುತ್ತಿರುವಾಗ ಮದ್ಯಾಹ್ನ 2:45 ಗಂಟೆ ಸುಮಾರಿಗೆ ಕರುಣೇಶ್ವರ ನಗರ ಬಸ ಸ್ಟಾಪ್‌ ಹತ್ತಿರ 5 ಜನ ಪ್ರಯಾಣಿಕರು ಕೈ ಮಾಡಿದ್ದರಿಂದ ಬಸ ಡ್ರೈವರ ರವಿ ರವರು ಬಸ ನಿಲ್ಲಿಸಿದ್ದು ಆಗ ಆ 5 ಜನ ಪ್ರಯಾಣಿಕರು ಒಮ್ಮೇಲೆ ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಈ ಕಂಡಕ್ಟರ ನನಗೆ ಮಾರ್ಕೆಟದಲ್ಲಿ ಬಸ್ಸಿನಿಂದ ಇಳಿಸಿದಾನೆ ಅಂತಾ ಹೇಳಿ ಮಾರ್ಕೆಟ ಬಸಸ್ಟ್ಯಾಂಡದಲ್ಲಿ ತಕರಾರು ಮಾಡಿದ ವ್ಯಕ್ತಿ ನನ್ನ ಎದೆಯ ಮೇಲಿನ ಸಮವಸ್ತ್ರ ಹಿಡಿದು ಮತ್ತು ಜೊತೆಗಿದ್ದ 4 ಜನ ಹೊಡೆಬಡೆ ಮಾಡಿರುತ್ತಾರೆ. ಆಗ ನಮ್ಮ ಬಸ ಚಾಲಕ ರವಿ ಹಾಗು ಕೆಲವು ಪ್ರಯಾಣಿಕರು ಜಗಳ ಬಿಡಿಸಿರುತ್ತಾರೆ. ಪಾಣೆಗಾಂವದವರು ಎಂದು ತಿಳಿದು ಬಂದಿದ್ದು ಓಡಿ ಹೊಗಿರುತ್ತಾರೆ. ನನಗೆ ಗಾಯಗಳಾಗಿರುತ್ತವೆ. ಸದರಿ ಜಗಳದಲ್ಲಿ ನನ್ನ ಹತ್ತಿರ ಇದ್ದ ಬಸ ಟಿಕೇಟ ಹಣ 535/- ರೂಪಾಯಿ ಎಲ್ಲೊ ಬಿದ್ದು ಕಳೆದಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಗುನ್ನೆ ನಂ:ನ 113/2011 ಕಲಂ:323, 353, 504 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಶಂಕರ ಕಾಂಬಳೆ ಸಾತಿಲಕ ನಗರ ಜಿಡಿಎ ಕಾಲನಿ ಗುಲಬರ್ಗಾ ರವರು,ನನ್ನ ಮಗನಾದ ಜಗನ್ನಾಥ ತಂದೆ ಶಂಕರ ಕಾಂಬಳೆ ವಯ ಇತನು ಇನಾಮದಾರ ಪ್ರೀ.ಯುನಿವರ್ಸಿಟಿ ಕಾಲೇಜನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಸೈನ್ಸ ಓದುತ್ತಿದ್ದು. ದಿನಾಂಕ 15-10-2011 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಮನೆಯಿಂದ ಕೈಯಲ್ಲಿ ಒಂದು ಕಾಪಿ ಹಿಡಿದುಕೊಂಡು ಹೋದವನು ಸಾಯಂಕಾಲವಾದರೂ ಮನಗೆ ಬರದೆ ಇದ್ದುದರಿಂದ ಇಲ್ಲಿಯವರೆಗೆ ನಮ್ಮ ಸಂಭಂದಿಕರಿಗೆ ಮತ್ತು ಆತನ ಮಿತ್ರರಿಗೆ ವಿಚಾರಿಸಿದರು ಮತ್ತು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ. ಕಾರಣ ಕಾಣೆಯಾದ ನನ್ನ ಮಗ ಜಗನ್ನಾಥನನ್ನು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆ ಗುನ್ನೆ ನಂ. 240/2011 ಕಲಂ. ಹುಡುಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.    

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪುಟ್ಟ ಸ್ವಾಮಿ ತಂದೆ ರಂಗ ಸ್ವಾಮಿ ಸಾ: ಹೌಸಿಂಗ ಬೋರ್ಡ ಕಾಲೋನಿ ಹಳೆ ಜೇವರ್ಗಿ ಕಾಲೋನಿ ಗುಲಬರ್ಗಾ ರವರು, ದಿನಾಂಕ 21.10.11 ರಂದು ನಾನುಬ ನಂ ಕೆ.ಎ 34 ಹೆಚ 2549 ನೇದ್ದರ ಮೇಲೆ ಹಳೇ ಜೇವರ್ಗಿ ರೋಡಿನಲ್ಲಿ ಬರುವ ಮೇಡಿಪ್ಲಸ್ ಅಂಗಡಿ ಎದುರುಗಡೆ ರೋಡಿನ ಮೇಲೆ ಜೇವರ್ಗಿ ರಿಂಗ ರೋಡ ಕಡೆ ಹೋಗುತ್ತಿದಾಗ ಮೋಟರ್ ಸೈಕಲ್ ನಂ ಕೆ.ಎ 32 ಎಸ 1812 ನೇದ್ದರ ಚಾಲಕ ಅಕ್ಬರ ಇತನು ರೇಲ್ವೆ ಅಂಡರ ಬ್ರೀಜ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನ್ನ ವಾಹನಕ್ಕೆ ಅಪಘಾತ ಪಡಿಸಿ ಗಾಯಗೂಳಿಸಿ ತನ್ನ ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ. 134/11 ಕಲಂ: 279, 337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ನಿಂಬರ್ಗಾ ಠಾಣೆ :ಶ್ರೀ ರಾಜಕುಮಾರ ತಂದೆ ಗುಂಡಪ್ಪ ಆಳಂದ ಸಾ|| ದುತ್ತರಗಾಂವ ರವರು, ದಿನಾಂಕ 20/10/11 ರಂದು ನಾನು ಮತ್ತು ನಮ್ಮ ಗ್ರಾಮದ ಸಿದ್ದಾರಾಮ ಹತ್ತರಕಿ ಮತ್ತು ವೀರಣ್ಣಾ ಶಿರೂರ ಇವರು ಮಂಗಾಣೆಯವರ ಹೊಲ ಸರ್ವೆ ನಂ. 59/03 ನೇದ್ದರಲ್ಲಿ ಜೋಳ ಬಿತ್ತಣೆ ಮಾಡಿ ಅದೆ ಹೊಲದಲ್ಲಿ ಇನ್ನು ಬಿತ್ತನೆ ಮಾಡಬೇಕಾಗಿದ್ದರಿಂದ ರಾತ್ರಿ ಅದೆ ಹೊಲದಲ್ಲಿ ಎಲ್ಲರೂ ಮಲಗಿಕೊಂಡಾಗ ಮಧ್ಯ ರಾತ್ರಿ 01.00 ಗಂಟೆ ಸುಮಾರಿಗೆ ಎಲ್ಲರೂ ನಿದ್ರೆಯಲ್ಲಿದ್ದಾಗ ನನಗೆ ಯಾರೋ ಬಡಿಗೆಯಿಂದ ಹೊಡೆದಿದ್ದರಿಂದ ಚೀರಾಡುವಷ್ಟರಲ್ಲಿ ಪಕ್ಕದಲ್ಲಿ ಮಲಗಿದ್ದ ಎರಡು ಜನರು ಎದ್ದು ನೋಡಲು ಯಾರೋ 3 ಜನರಿದ್ದು ಅವರು ಬಡಿಗೆಯಿಂದ, ಸಿದ್ದಾರಾಮ ಹತ್ತರಕಿ ಮತ್ತು ಬೀರಣ್ಣಾ ಇವರಿಗೂ ಹೊಡೆದು ಒಳಪೆಟ್ಟು ಮಾಡಿದ್ದು, ಅವರಿಗೆ ನೀವು ಯಾರು ಇದ್ದೀರಿ ಅಂತ ಮಾಡನಾಡಿಸಿದರೂ ಸಹ ಅವರು ಮಾತನಾಡಿರುವದಿಲ್ಲಾ, ಅವರ ಹೊಡೆತಕ್ಕೆ ತಾಳದೆ ಒಂದೆ ಸವನೆ ಚೀರಾಡುತ್ತಿರುವಾಗ ಅಲ್ಲಿಂದ ಅವರು ಓಡಿಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಗುನ್ನೆ ನಂ. 116/2011 ಕಲಂ 324, 34 ಐಪಿಸಿ. ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

21 October 2011

GULBARGA DIST REPORTED CRIMES

ರಾಘವೇಂದ್ರ ನಗರ ಠಾಣೆ : ಶ್ರೀ ಅಶೋಕ ತಂದೆ ಕಮಲಾಕರರಾವ ಕುಲಕರ್ಣಿ ಉ|| ಎಸ್.ಬಿ.ಹೆಚ್ ಸಂಗಮೇಶ್ವರ ಕಾಲೋನಿ ಬ್ರಾಂಚ ಮ್ಯಾನೇಜರ ಸಾ|| ಬ್ರಹ್ಮಪೂರ ಗುಲಬರ್ಗಾ ರವರು, ನಾನು ಸಂಗಮೇಶ್ವರ ಕಾಲೋನಿಯ ಎಸ್.ಬಿ.ಹೆಚ್ ಬ್ಯಾಂಕ್ನ ದಿನಾಂಕ 21-10-2011 ರಂದು ಸಾಯಂಕಾಲ 6-30 ಗಂಟೆಯವರೆಗೆ ಕೆಲಸ ಮುಗಿಸಿ ಬ್ಯಾಂಕ ಬೀಗ ಹಾಕಿಕೊಂಡು ಹೋಗಿದ್ದು ಇಂದು ಬೆಳಗಿನ ಜಾವ 8 ಗಂಟೆಗೆ ಬ್ಯಾಂಕಿಗೆ ಬಂದು ಬೀಗ ತೆರೆದು ಒಳಗೆ ಹೋಗಿ ನೋಡಲು ಬ್ಯಾಂಕಿನ ಗೋಡೆ ಒಡೆದು ಯಾರೋ ಅಪರಿಚಿತ ಕಳ್ಳರು ಒಳಗೆ ಪ್ರವೇಶ ಮಾಡಿ ಕಳುವು ಮಾಡಲು ಪ್ರಯತ್ನ ಮಾಡಿದ್ದು ಬ್ಯಾಂಕಿನಲ್ಲಿದ್ದ ಯಾವುದೇ ವಸ್ತುಗಳು ಕಳುವು ಆಗಿರುವುದಿಲ್ಲಾ, ಕಳುವು ಮಾಡಲು ಪ್ರಯತ್ನಸಿದ ಕಳ್ಳರ ಬಗ್ಗೆ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆ ಗುನ್ನೆ ನಂ 82/11 ಕಲಂ 457, 380, 511 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಕು|| ಡಾ|| ಲಲೀತಾ ತಂದೆ ಎಮ್.ಡಿ.ನಾಯ್ಡು ಉ: ವೈದ್ಯಕೀಯ ವಿದ್ಯಾರ್ಥಿನಿ ಸಾ: ಲಕ್ಷ್ಮಿ ಕ್ಲಿನಿಕ ವಿಶಾಖ ಪಟ್ಟಣ [ಎ.ಪಿ.] ರವರು, ನಾನು ದಿ: 19-10-11 ರಂದು 12=30 ಪಿ.ಎಮ್.ಕ್ಕೆ ನಗರದ ಆರ್.ಪಿ. ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ರೋಡಿನಲ್ಲಿ ಬರುವ ಕೋರ್ಟ ಕ್ರಾಸ್ ಹತ್ತಿರ ಡಾ|| ಜಿ.ವಿ ಹರೀಶ ತಂದೆ ವೆಂಕಟರತ್ನಂ ಈತನ ಮೋಟಾರ ಸೈಕಲ್ ನಂಬರ ಕೆಎ 01 ವಾಯಿ 6633 ನೇದ್ದರ ಮೇಲೆ ಕುಳಿತುಕೊಂಡು ಬರುತ್ತಿರುವಾಗ ಡಾ|| ಜಿ.ವಿ ಹರೀಶ ತಂದೆ ವೆಂಕಟರತ್ನಂ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಬ್ರೇಕ್ ಹಾಕಿ ತನ್ನಿಂದ ತಾನೆ ಮೋಟಾರ್ ಸೈಕಲ್ ಮೇಲಿಂದ ಕೆಳಗೆ ಬಿದ್ದು ಭಾರಿ ಗಾಯಹೊಂದಿರುತ್ತಾನೆ. ನನಗೂ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆ ಗುನ್ನೆ ನಂ. 133/11 ಕಲಂ: 279 .338 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಸ್ಟೇಷನ ಬಜಾರ ಠಾಣೆ : ಶ್ರೀ ಲಕ್ಷ್ಮಣ ತಂದೆ ಸಂಗಪ್ಪ ಕೊಡಲಗಹಂಗರಗಾ ಸಾ: ಜಮಗಾ (ಆರ್) ತಾ: ಆಳಂದ ಜಿ : ಗುಲಬರ್ಗಾ ರವರು, ನನ್ನ ಮಗಳಾದ ಅಂಬಿಕಾ ಇವಳು ಡಿಪ್ಲೋಮಾ ಕಂಪ್ಯೂಟರ್ ಸೈನ್ಸ 5 ನೇ ಸೆಮಿಸ್ಟರದಲ್ಲಿ ಫೇಲಾಗಿದ್ದು ಮಾನಸಿಕ ಮಾಡಿಕೊಂಡು ಜಿಗುಪ್ಸೆಗೊಂಡು ದಿ:19-10-11 ರಂದು ವಿಷ ಸೇವನೆ ಮಾಡಿ ಉಪಚಾರ ಹೊಂದುತ್ತಾ ದಿ:20-10-11 ರಂದು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆ ಯು.ಡಿ.ಆರ್. ನಂ.14/2011 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸೇಡಂ ಠಾಣೆ : ಶ್ರೀ ಮುನಿರಪಾಶಾ ತಂದೆ ಬಾಬಾಸಾಬ ಕಣ್ಣಿ ಸಾ|| ಸಟಪಟನಹಳ್ಳಿ ರವರು, ಹೊಸ ನೀರು ಶುದ್ದಿಕರಣ ಘಟಕ ಪ್ರಾರಂಭಗೊಂಡ ಪ್ರಯುಕ್ತ ನಾನು ಹಾಗೂ ಶಿವಯ್ಯ ಪಠಪತಿ ಇಬ್ಬರೂಕೂಡಿ ಮೋಟಾರ ಸೈಕಲ್ ನಂ. ಎಂ,ಹೆಚ್, 13/ಎ,ಸಿ 3279 ನೇದ್ದರ ಮೇಲೆ ಸೇಡಂದಿಂದ ಸಟಪಟನಹಳ್ಳಿಗೆ ಹೋಗಿ ಪಂಪ್ ಚಾಲು ಮಾಡಿ ಪೈಪಲೆನ ಲೀಕೆಜ ಚೆಕ್ ಮಾಡುತ್ತಾ ಮೋಟಾರ್ ಸೈಕಲ ಮೇಲೆ ಬರುತ್ತಿರುವಾಗ ಮುರೆಗೇಂದ್ರಪ್ಪ ಕೋಳಕುರ್ ಇವರ ಹೊಲದ ಹತ್ತಿರ ಸೇಡಂ ಕಡೆಯಿಂದ ಬರುತ್ತಿದ್ದ ಮುನವರ್ ರೋಡ ಲೈನ್ಸ್ ಟಿಪ್ಪರ ಲಾರಿ ನಂ ಕೆಎ 32 -4565 ನೇದ್ದರ ಚಾಲಕ ನರಸಾಪ್ಪ ತಂದೆ ಹಣಮಂತ ಸಾ|| ಮಳಖೇಡ ನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಗೆಅಪಘಾತ ಪಡಿಸಿದ್ದು ನನಗೆ ಮತ್ತು ಶಿವಯ್ಯ ನಿಗೆ ಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ 181/2011 ಕಲಂ 279,337,338, ಐಪಿಸಿ ಸಂಗಡ 187 ಐಎಂವಿ ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಸೇಡಂ ಠಾಣೆ : ಶ್ರೀಮತಿ ದೇವಕಿ ಗಂಡ ಶರಣಾಪ್ಪ ಇಂಗಳಗಿ ಸಾ|| ಸಾಯಿಬಾಬಾ ಕಾಲೋನಿ ಸೇಡಂ ರವರು, ಜೆ.ಕೆ ರೋಡ ಸಾಯಿಬಾಬಾ ಕಾಲೋನಿಯಲ್ಲಿ ಇರುವ ಅಂಗಡಿಯನ್ನು ರಾಮಲು ಮೇಕ್ಯಾನೀಕ ಇವರ ಮಕ್ಕಳಿಗೆ ಕೋಟ್ಟಿದ್ದು ಅವರು ಗ್ಯಾರೆಜ ಹಚ್ಚಿದ್ದು ಇತ್ತು, ಅವರಿಗೆ ನಮಗೆ ಅಗದೆ ಇದ್ದರಿಂದ ಸದರಿ ಗ್ಯಾರೆಜ ಖಾಲಿ ಮಾಡಲು ಹೇಳಿದ್ದು ಇತ್ತು. ನನ್ನ ಗಂಡ ತಾಂಡೂರಕ್ಕೆ ಹೋಗಿದ್ದು ನೋಡಿ ಅಂಗಡಿಯಲ್ಲಿ ಇವರು ಲೇಥ ಮಶಿನ ವಗೆರೆ ಕಿತ್ತುವಾಗ ಸಪ್ಪಳ ಕೇಳಿ ಬಂದು ನೋಡಲು ಲೇಥ ಮಶೀನ ಯಾಕೆ? ಕಿತ್ತುತ್ತಿರಿ ಅದು ನಮ್ಮದು ಇದೆ ಅಂತಾ ಹೇಳಿದಾಗ ಅವರಲ್ಲಿ ಮಲ್ಲು ಪೆಂಚಂಪಳ್ಳಿ ಮತ್ತು ಹಣಮಂತ ಮಕ್ಯಾನೀಕ ಇವರು ನೀನು ನಮಗೆ ಏನು ಕೇಳುತ್ತಿ ? ಇದು ನಮ್ಮ ಲೇಥ ಮಶೀನ ಇದೆ ಅಂದು ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆಬಡೆ ಮಾಡಿರುತ್ತಾರೆ. ಆಗ ರಘೂ ಮೇಕ್ಯಾನಿಕ್ ಮತ್ತು ರಾಮು ಮೇಕ್ಯಾನಿಕ್ ಇವರು ತಮ್ಮ ವೆಲ್ಡಿಂಗ ಮಶೀನ ಒಡೆದುಹಾಕಿ ಹಾನಿ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ 182/2011 ಕಲಂ 341,323,354,504,427, ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಮಳಖೇಡ ಠಾಣೆ : ಶ್ರೀ ರವಿಚಂದ್ರ ತಂದೆ ತಿಮ್ಮಯ್ಯ ಜೇಟಿ ಉ:ವಾಸವದತ್ತಾ ಸಿಮೆಂಟ ಕಂಪನಿ ಸೇಡಂದಲ್ಲಿ ಟರಬೈನ್ಆಪರೇಟರ ಕೆಲಸ ಸಾ|| ಭದ್ರಾವತಿ ಜಿ: ಶಿವಮೋಗ್ಗ ಹಾ,ವ: ವಾಸವದತ್ತಾ ಕಾಲೋನಿ ಸೇಡಂ ರವರು, ದಿ:18-10-11 ರಂದು ಗುಲಬರ್ಗಾದಿಂದ ಸೇಡಂಕ್ಕೆ ಬರುವ ಬಸ್ಸ ನಂಬರ ಕೆಎ-32 ಎಫ್-39 ನೇದ್ದರಲ್ಲಿ ಬೆಳಿಗ್ಗೆ 7-15 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಹಾಗು ನನ್ನ ಮಾವ ಮತ್ತು ನನ್ನ ಎರಡು ಮಕ್ಕಳು ಸೂಟಕೇಸ್ ಸಮೇತ ಬಸ್ಸನಲ್ಲಿ ಕುಳಿತು ಬರುವಾಗ ಮಳಖೇಡಕ್ಕೆ ಬಂದು ನನ್ನ ಸೂಟಕೇಸ್ ನೋಡಲಾಗಿ ಇರಲಿಲ್ಲಾ ಕಾರಣ ನನ್ನ ಸೂಟಕೇಸ್ದಲ್ಲಿದ್ದ ಎಟಿಎಮ್ ಕಾರ್ಡ, ಪ್ಯಾನ್ ಕಾರ್ಡ, 2 ಬಂಗಾರದ ಉಂಗುರ ನಗದು ಹಣ ಒಟ್ಟು 5.000/- ಹೀಗೆ ಹಾಗು ದಾಖಲಾತಿಗಳು ಸೇರಿದಂತೆ ಬೆಳ್ಳಿಮತ್ತು ಬಂಗಾರದ ಒಡವೆಗಳಿದ್ದ ಸೂಟಕೇಸ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಪತ್ತೆ ಹಚ್ಚಿ ಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆ ಗುನ್ನೆ ನಂ. 96/2011 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.