POLICE BHAVAN KALABURAGI

POLICE BHAVAN KALABURAGI

07 October 2011

Gulbarga District Reported Crimes

ರೈತ ಆತ್ಮಹತ್ಯೆ ಪ್ರಕರಣ :
ಕುಂಚಾವರಂ ಠಾಣೆ :
ಶ್ರೀಮತಿ ರುಕ್ಮಿಣಿ ಗಂಡ ರಾಮಲು ಸಾಃ ಪೋಚಾವರಂ ರವರು ನಮಗೆ 6 ಎಕರೆ ಜಮೀನು ಇದ್ದು ನನ್ನ ಗಂಡ ರಾಮಲು ಕುಂಚಾವರಂ ಕೆ.ಜಿ.ಬಿ ಬ್ಯಾಂಕನಲ್ಲಿ 2 ವರ್ಷಗಳಹಿಂದೆ 82,000/- ರೂಪಾಯಿ ಲೋನ ಪಡೆದುಕೊಂಡಿದ್ದು 2 ವರ್ಷಗಳಿಂದ ನಮ್ಮ ಹೊಲದಲ್ಲಿ ಬೆಳೆ ಸರಿಯಾಗಿ ಬೇಳೆದಿರುವದಿಲ್ಲಾ. ಹಾಗು ನಮ್ಮ ಹೊಲದಲ್ಲಿ 06 ತಿಂಗಳಹಿಂದೆ ಬೋರ ಹಾಕಿಸಿದ್ದು ಬೋರನಲ್ಲಿ ನೀರು ಬೀಳದ ಕಾರಣ ಚಿಂತೆ ಮಾಡಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಗೊಂಡು ಮನೆಯಲ್ಲಿ ಯಾರು ಇಲ್ಲದಾಗ ಕ್ರಿಮಿನಾಷಕ ಎಣ್ಣೆ ಸೆವನೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಸ ವಂಚನೆ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ :ತಹಸೀಲ್ದಾರ ಜೇವರ್ಗಿ ರವರ ಎಸ್.ಬಿ. ಖಾತೆ ಸಂ 52184385197 ನೇದ್ದಕ್ಕೆ ಸರಕಾರದಿಂದ ತಸ್ಥಿಕ ಮತ್ತು ವರ್ಷಾಶನ ಭತ್ಯೆ ಫಲಾನುಭವಿಗಳಿಗೆ ವಿತರಿಸುವಂತೆ ಬಿಡುಗಡೆಯಾದ ಹಣವನ್ನು ನಮ್ಮ ಕಛೇರಿ ಪ್ರಥಮ ದರ್ಜೇಯ ಸಹಾಯಕರಾದ ಮಾರುತಿ ಪವಾರ ಪ್ರಥಮ ದರ್ಜೇ ಸಹಾಯಕರು ತಹಸೀಲ ಅಪೀಸ ಜೇವರ್ಗಿ ಇವರು ದಿನಾಂಕ: 20-09-2010 ರಿಂದ 29-09-2011 ರವರಿಗೆ ಒಟ್ಟು 19 ಚಕ್ಕಗಳಿಗೆ ತಹಸೀಲ್ದಾರರ ಸುಳ್ಳು ರುಜು ಮಾಡಿ ಅವುಗಳನ್ನು ನೈಜವೆಂದು ಸೃಷ್ಟಿ ಮಾಡಿ ಎಸ್.ಬಿ.ಹೆಚ್. ಬ್ಯಾಂಕ ಖಾತೆ ಸಂ 52184385197 ನೇದ್ದರಲ್ಲಿನ ಒಟ್ಟು ನಗದು ಹಣ 11,00,000-00 ರೂಪಾಯಿಗಳು ಡ್ರಾ ಮಾಡಿಕೊಂಡು ತನ್ನ ಸ್ವತ್ತಕ್ಕೆ ಉಪಯೋಗಿಸಿ ಸರಕಾರಕ್ಕೆ ಮೋಸ ವಂಚನೆ ಮಾಡಿರುತ್ತಾನೆ. ಅಂತಾ ಶ್ರೀ ಡಿ.ವ್ಹಾಯಿ.ಪಾಟೀಲ ತಹಸೀಲ್ದಾರರು ಜೇವರ್ಗಿ ರವರು ಸಲ್ಲಿಸಿದ ದೂರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀ ಸ್ವಾಮಿ ತಂದೆ ಗೊವಿಂದಪ್ಪ @ ಚಿನ್ನಪ್ಪ ಕರಂಟಿ ಸಾ: ಗೊಲ್ಲರ ಗಲ್ಲಿ ಗುಲಬರ್ಗಾ ರವರು ದಿನಾಂಕ 06-10-2011 ರಂದು ಸಾಯಂಕಾಲ ನಗರದ ತಿರಂದಾಜ ಟಾಕೀಜ್ ಹತ್ತಿರ ರೋಡಿನ ಮೇಲೆ ಹೋಗುತ್ತಿದ್ದ ತಾಯವ್ವ ಗಂಡ ಗೊವಿಂದಪ್ಪ @ ಚಿನ್ನಪ್ಪ್ ಇವಳಿಗೆ ಹೊಂಡಾ ಎಕ್ಟಿವಾ ಮೊ/ಸೈಕಲ್ ನಂ;ಕೆಎ 32 ವಿ 9036 ಚಾಲಕಿ ಗಾಯತ್ರಿ ಇವಳು ಎಸ್.ಟಿ.ಬಿ.ಟಿ.ಕ್ರಾಸ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗಾಯಗೊಳಿಸಿ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಹೊರಟು ಹೋಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವೆಇ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ :ಶ್ರೀಮತಿ ನಾಜಿಯಾ ಗಂಡ ಖುರ್ಷಿದ ಪಟೇಲ ಸಾ: ಯಳವಂತಗಿ ಇವರ ಗಂಡ ಅತ್ತೆ ಮಾವ ನಾದನಿ ಲಗ್ನವಾದ ಆರು ತಿಂಗಳ ನಂತರ ಒಂದಲ್ಲ ಒಂದು ಕಾರಣದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದಲ್ಲದೇ ತನಗೆ ಲಾರಿ ವ್ಯಾಪಾರದಲ್ಲಿ ಒಂದು ಲಕ್ಷ ರೂ ಲಾಸ್ ಆಗಿದೆ ತವರು ಮನೆಯಿಂದ ಹಣ ತೆಗೆದುಕೊಮಡು ಬಾ ಅಂತಾ ಹೊಡೆಬಡೆ ಮಾಡಿದ್ದು ಈ ಬಗ್ಗೆ ಊರಿನಲ್ಲಿ ಪಂಚಾಯಿತಿ ಮಾಡಿದ್ದು ಫಿರ್ಯಾದಿಯ ತಾಯಿ ರಂಜಾನಕ್ಕೆಂದು ತವರು ಮನೆಗೆ ಕರೆದುಕೊಂಡು ಹೋಗಿದ್ದು ಇಲ್ಲಿಯವರೆಗೆ ಗಂಡನ ಮನೆಯವರು ಫಿರ್ಯಾದಿಗೆ ಗಂಡನ ಮನೆಗೆ ಕರೆಯಲು ಬರದ ಕಾರಣ ಇಂದು ದಿನಾಂಕ: 06-10-2011ಬೆಳಿಗ್ಗೆ ಆಕೆಯ ತಾಯಿ ಚಿಕ್ಕಪ್ಪ ಗುಲಬರ್ಗಾದಿಂದ ಗಂಡನ ಮನೆಯಾದ ಯಳವಂತಗಿ ಗ್ರಾಮಕ್ಕೆ ಕರೆದುಕೊಂಡು ಹೋದಾಗ1.ಖುರ್ಷಿದ ಪಟೇಲ 2.ರಾಜಾಪಟೇಲ 3.ಜೈಬೂನ ಬೀ 4.ರಜೀಯಾ ಬೇಗಂ ಸಾ: ಎಲ್ಲರೂ ಯಳವಂತಗಿ (ಬಿ) ಎಲ್ಲರು ತವರು ಮನೆಯಿಂದ ಹಣ ತೆಗೆದುಕೊಂಡು ಮನೆಗೆ ಬಾ ಅಂತಾ ಬೈದು ಕೈಯಿಂದ ಮತ್ತು ಕಾಲಿಂದ ಹೊಡೆಬಡೆ ಮಾಡಿ ಜೀವ ಭಯ ಹಾಕಿ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :ಶ್ರೀ ರಮೇಶ ತಂದೆ ಮೋತಿರಾಮ ಜಾಧವ ಸಾ|| ಸಣ್ಣೂರು ತಾಂಡಾ ತಾ|| ಜಿ|| ಗುಲಬರ್ಗಾ ದಿನಾಂಕ05-10-2011 ರಂದು ಸಾಯಂಕಾಲ ತನ್ನ ಹೆಂಡತಿ ಅನುಸುಬಾಯಿ ಇಬ್ಬರೂ ಮನೆಯ ಹತ್ತಿರ ಇದ್ದಾಗ ನನ್ನ ಅಣ್ಣನಾದ ಬಾಭು ತಂದೆ ಮೋತಿರಾಮ ಜಾದವ ಮತ್ತು ಆತನ ಹೆಂಡತಿ ರುಕ್ಮಿನಿಬಾಯಿ ಇಬ್ಬರು ನನ್ನ ಹತ್ತಿರ ಬಂದವನೇ ನನಗೆ ಅವಚ್ಯ ಶಬ್ದಗಳಿಂದ ಬೈದು ಮನೆ ಕಟ್ಟಲು ಮೂರು ಪೀಟ್ ಜಾಗಾ ಬೀಡು ಅಂದರೆ ಬಿಡುವುದಿಲ್ಲಾ ಅಂತಾ ಅಂದವನೇ ವಿ:ನಾಕಾರಣ ಜಗಳ ತೆಗೆದು ಬಡಿಗೆಯಿಂದ ಹೊಡೆ ಬಡೆ ಮಾಡಿ ಗಾಆಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :ದಿನಾಂಕ 06-10-11 ರಂದು ಮುಂಜಾನೆ ಶ್ರೀ ಈಶ್ವರ ತಂದೆ ಸಿದ್ದಪ್ಪ ಕೇಶ್ವಾರ ಸಾ:ಹಡಗಿಲ ಹಾರುತಿ ಮತ್ತು ಗಾಯಾಳುಗಳು ತಮ್ಮ ಊರಿನ ಟಂ ಟಂ ನಂ ಕೆಎ 32 ಬಿ 3821 ನೇದ್ದು ಗೂಡ್ಸ್‌ ವಾಹನದಲ್ಲಿ ಕಾಯಿಪಲ್ಲೆ ಮಾರಲು ಗುಲಬರ್ಗಾಕ್ಕೆ ಬಂದು ವ್ಯಾಪಾರ ಮಾಡಿಕೊಂಡು ಮರಳಿ ತಮ್ಮ ಊರಿಗೆ ಹೊರಟಾಗ ಶರಣಸಿರಸಗಿ ಮಡ್ಡಿ ಹತ್ತಿರ ಬಂದಾಗ ಎದುರಿನಿಂದ ಬಂದ ಬಸ್ಸ ಚಾಲಕ ನಿಂಗಪ್ಪ ಗುನ್ನಾಪೂರ ಇತನು ತನ್ನ ಬಸ್ಸ ನಂ ಕೆಎ 32 ಎಪ್‌ 1276 ನೇದ್ದನ್ನು ಅತೀವೇಗದಿಂದ ನಡೆಯಿಸಿಕೊಂಡು ಬಂದು ಟಕ್ಕರ ಕೊಟ್ಟಿದರಿಂದ ಟಂ ಟಂದಲ್ಲಿದ್ದವರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಂಈಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 October 2011

Gulbarga District Reported Crimes

ಕಳವು ಪ್ರಕರಣ :
ಬ್ರಹ್ಮ ಪೂರ ಠಾಣೆ :ದಿನಾಂಕ: 06-10-2011 ರಂದು ಶ್ರೀ.ಸೋಮಶೇಖರ ತಂದೆ ಗುಂಡಪ್ಪ ಟೆಂಗಳಿ, ಸಾ|| ಟೆಂಗಳಿ ಜುವಲರಸ, ಸುಪರ ಮಾರ್ಕೆಟ ಗುಲಬರ್ಗಾರವರು ತಮ್ಮ ಅಂಗಡಿ ಅಂದಾಜು 1100 ಗಂಟೆಯ ಸುಮಾರಿಗೆ ಒಬ್ಬ ಹುಡುಗಿ ಕಿವಿಓಲೆ ಖರೀಸುವದು ಇದ್ದು, ತೋರಿಸಿ ಅಂತಾ ಹೇಳಿದಾಗ ನಾನು ಅವಳಿಗೆ ಒಂದು ಟ್ರೇಯಲ್ಲಿ ಅಂದಾಜು 12 ಜೊಡಿ ತರಹದ ಕಿವಿಓಲೆ ತೋರಿಸಿದ್ದು ಆಗ ನನಗೆ ಅವಳ ಮೇಲೆ ಅನುಮಾನ ಬಂದು ಅವಳ ಬ್ಯಾಗ ಚೆಕ ಮಾಡಿದಾಗ 1.4 ಗ್ರಾಂ ಬಂಗಾರದ ಉಂಗುರ ಅ||ಕಿ|| 3000/- ಇದ್ದು ಅದರ ಬಗ್ಗೆ ಅವಳಿಗೆ ಕೇಳಿದಾಗ ಸರಿಯಾದ ಉತ್ತರ ಕೊಡದೆ ಇದ್ದಾಗ ಕೋಠಾರಿ ಅಂಗಡಿಯ ಮಾಲಿಕನಾದ ದಾವಲ ತಂದೆ ಸತ್ಯಶೀಲ ಕೋಠಾರಿ ರವರಿಗೆ ಫೋನ ಮಾಡಿ ನನ್ನ ಅಂಗಡಿಗೆ ಕರೆಯಿಸಿಕೊಂಡು ವಿಚಾರಿಸಲಾಗಿ ಈ ಹುಡುಗಿ ಬೆಳಿಗ್ಗೆ 1025 ಗಂಟೆಯ ಸುಮಾರಿಗೆ ನಮ್ಮ ಅಂಗಡಿಗೆ ಬಂದು ರಿಂಗ ನೋಡಿ ಹೋಗಿದ್ದು, ಅಂತಾ ಹೇಳಿದಾಗ ಅವರಿಗೆ ಆ ರಿಂಗ ತೋರಿಸಲಾಗಿ ಇದು ನಮ್ಮ ಅಂಗಡಿಯಿಂದ ಕಳ್ಳತನ ಮಾಡಿಕೊಂಡು ಬಂದಿರುತ್ತಾಳೆ ಅಂತಾ ಹೇಳಿದರು ಆಗ ಅವಳ ಹೆಸರು ವಿಚಾರಿಸಲಾಗಿ ಸುಜಾತಾ ತಂದೆ ಬಾಬುರಾವ ಕರ್ಕರೆ ಸಾ|| ಮೇಥಿ ಮೇಳಕುಂದಾ ತಾ|| ಬಾಲ್ಕಿ, ಜಿ|| ಬೀದರ ಅಂತಾ ಹೇಳಿದ್ದು ಅವಳನ್ನು ಇಬ್ಬರು ಕೂಡಿಕೊಂಡು ಠಾಣೆಗೆ ತಂದು ಹಾಜರ ಪಡಿಸಿದ್ದು ಅವಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೃ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಬ್ರಹ್ಮಪೂರ ಠಾಣೆ :ಕುಮಾರಿ.ವಿಜಯಲಕ್ಷ್ಮಿ ತಂದೆ ಮಲ್ಕಪ್ಪ ಕೌಲಗಿ, ಸಾ|| ಮಿಲನ ಚೌಕ ಗಾಜೀಪೂರ ಗುಲಬರ್ಗಾ ರವರು ದಿನಾಂಕ 06-10-11 ರಂದು ಬೆಳಿಗ್ಗೆ ಮಿಲನ ಚೌಕ ಗಾಜೀಪೂರದಲ್ಲಿರುವ ನಮ್ಮ ಮನೆಯ ಮುಂದೆ ನಾನು ಹಾಗೂ ನನ್ನ ತಾಯಿಯಾದ ಅಂಬುಜಾ ಅಣ್ಣನಾದ ಭೋಗೇಶ ಎಲ್ಲರೂ ಕೂಡಿ ಮಾತಾಡುತ್ತಾ ಕುಳಿತ್ತಿರುವಾಗ ಮೋಮಿನಪೂರದಲ್ಲಿರುವ ನಮಗೆ ಪರಿಚಯದವರೆ ಆದ 1.ಶೈನಾಜ ಗಂಡ ಫಲಾವುದ್ದಿನ, 2.ಫೀರದೋಸಬೇಗಂ ಗಂಡ ಖಮರ, 3.ಮಹ್ಮದ ಗೌಸ ತಂದೆ ಫಲಾವುದ್ದಿನ, 4.ಸಿರಾಜ@ಅಪ್ಪು ತಂದೆ ಫಲಾವುದ್ದಿನ ರವರು ಕೂಡಿಕೊಂಡು ಬಂದು ಫಿರ್ಯಾದಿಯೊಂದಿಗೆ ಜಗಳಕ್ಕೆ ಬಿದ್ದು, ಅವಾಚ್ಯ ಶಬ್ದಗಳಿಂದ ಬೈದು ನಮ್ಮ ವಿರುದ್ದ ನ್ಯಾಯಾಲಯದಲ್ಲಿ ಕೇಸು ಹಾಕಿ ನಮಗೆ ನೋಟಿಸ ಬರುವಂತೆ ಮಾಡಿದಿ ಅಂತಾ ಅನ್ನುತ್ತಾ ಶೈನಾಜ ಇವಳು ಕೈಯಿಂದ ಮುಖದ ಮೇಲೆ ಹೊಡೆದಿದ್ದು ಅಲ್ಲದೆ, ಮಹ್ಮದ ಗೌಸ ಈತನು ಸಹ ನನಗೆ ಕೈಯಿಂದ ಮುಖದ ಮೇಲೆ ಹೊಡೆದಿದ್ದು ಆಗ ಜಗಳ ಬಿಡಿಸಲು ಬಂದ ಭೋಗೇಶ ಈತನಿಗೆ ಸಿರಾಜ ಈತನು ತನ್ನ ಕೈಯಲ್ಲಿ ಇದ್ದ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೆ, ನನ್ನ ತಾಯಿ ಅಂಬುಜಾ ಇವಳೀಗು ಸಹ ಫೀರದೋಸಬೇಗಂ ಇವಳು ಕೈಯಿಂದ ಮುಖದ ಮೇಲೆ ಹೊಡೆದಿದ್ದು, ಅಲ್ಲದೆ ಎಲ್ಲರೂ ಕೂಡಿ ಹೋಗುವಾಗ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.