POLICE BHAVAN KALABURAGI

POLICE BHAVAN KALABURAGI

08 May 2017

Kalaburagi District Reported Crimes

ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ನನ್ನ ತಾಯಿಯಾದ ಪ್ರೇಮಿಳಾ ಮಾನಸಗಲ್ ಇವರ ಆರೋಗ್ಯ ಸರಿ ಇಲ್ಲದ್ದರಿಂದ ಲಾತೂರ ಆಸ್ಪತ್ರೆಗೆ ತೋರಿಸಿಕೊಂಡು ಬರಲು ನನ್ನ ತಮ್ಮನಾದ 1) ವೆಂಕಣಗೌಡ , ಆತನ ಹೆಂಡತಿ 2)ವಂದನಾ , ಆತನ  ಮಗಳಾದ 3)ಕು,ಸಾಯಿಸೌಮ್ಯ, ನಮ್ಮ ಅಣ್ಣತಮ್ಮಕ್ಕೀಯ 4) ಸುಜಾತಾ ಗಂಡ ರಂಗನಾಥ ಎಲ್ಲರು ಇಂದು ಬೆಳಿಗ್ಗೆ 7 ಎ.ಎಮ್.ಕ್ಕೆ  ಯಾದಗೀರಿಯಿಂದ  ಲಾತೂರಕ್ಕೆ  ಹೋಗಿಬರುತ್ತೇವೆ ಅಂತಾ ಹೇಳಿ ಕಾರ ನಂ ಕೆಎ-33 ಎಮ್-4533 ನೇದ್ದರಲ್ಲಿ ಚಾಲಕ ರಿಜಾಯ ನೊಂದಿಗೆ ಹೋಗಿದ್ದರು. ನಾನು ಮತ್ತು  ನಮ್ಮ ಅಣ್ಣತಮ್ಮಕ್ಕೀಯ ರಂಗನಾಥ ಮನೆಯಲ್ಲಿದ್ದಾಗ ಗೊತ್ತಾಗಿದ್ದೇನೆಂದರೆ ನಮ್ಮ ಮನೆಯವರೆಲ್ಲರು ಲಾತೂರ ಆಸ್ಪತ್ರೆಗೆ ಹೋಗಲುಕುಳಿತು ಹೊರಟಿದ್ದು  ಕಾರ ಮರತೂರ ಕ್ರಾಸ ಹತ್ತಿರ  ರಸ್ತೆಗೆ ಅಪಘಾತ ವಾಗಿ 108 ಅಂಬುಲೆನ್ಸದಲ್ಲಿ  ಉಪಚಾರಕ್ಕಾಗಿ ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಮಾಡಿರುತ್ತಾರೆ ಅಂತಾ  ಸುದ್ದಿ ತಿಳಿದು ನಾನು  ಮತ್ತು  ರಂಗನಾಥ ಮಾನಸಗಲ್  ಹಾಗೂ ನಾಗರಾಜ ಹೂವಿಲಗೋಲ್ ಕೂಡಿ  ಬಸವೇಶ್ವರ ಆಸ್ಪತ್ರೆ ಕಲಬುಗಿಗೆ ಹೋಗಿ  ನೋಡಲಾಗಿ ನನ್ನ ತಾಯಿ 1)ಪ್ರಮಿಳಾ ಇವರು ಬೇಹೋಷ ಇದ್ದು ತಲೆಯ ಹಿಂದೆ ರಕ್ತಗಾಯವಾಗಿ ಎಡಕೈ ಮುಂಗೈ & ಎಡ ಕಣ್ಣಿಗೆ ಗುಪ್ತಪೆಟ್ಟಾಗಿದ್ದು ಬಾಯಿಂದ  ರಕ್ತ ಬಂದಿರುತ್ತದೆ.  2)ಸುಜಾತಾ ಇಳಿಗೆ ನೋಡಲಾಗಿ ತಲೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿ ಎರಡೂ ಮೊಳಕಾಲಿಗೆ  ತರಚಿದ ಗಾಯವಾಗಿ ಬೇಹೋಷ ಇದ್ದಳು,  3)ವಂದನಾ ಇವಳಿಗೆ ತಲೆಗೆ ಮತ್ತು ಮೂಗಿಗೆ ಒಳಪೆಟ್ಟಾಗಿರುತ್ತದೆ. 4)ಮಗಳು ಸಾಯಿ ಸೌಮ್ಯ  ಇವಳಿಗೆ  ಎಡಕೈ ಹಸ್ತದ ಮೇಲ್ಭಾಗ ಹರಿದಂತಾಗಿ  ಭಾರಿ ರಕ್ತಗಾಯವಾಗಿ ಬಾಯಿಂದ  & ಕಿವಿಯಿಂದ  ರಕ್ತ ಬಂದಿರುತ್ತದೆ. ಚಾಲಕ 5) ರಿಯಾಜನಿಗೆ ನೋಡಲಾಗಿ ಮುಖದ ಮೇಲೆ ತರಚಿದಂತಾಗಿ ತಲೆಯ ಹಿಂಭಾಗಕ್ಕೆ & ಎಡಕೈ ಉಂಗುರು  ಬೆರಳಿಗೆ  ರಕ್ತಗಾಯ ವಾಗಿರುತ್ತದೆ ಅವನೂ ಸಹ ಬೇಹೋಷ ಇದ್ದರು. ವಂದನಾ ಇವರಿಂದ ತಿಳಿದುಬಂದಿದ್ದೇನೆಂದರೆ, ನಾವೆಲ್ಲರು ಕುಳಿತುಕೊಂಡು  ಲಾತೂರಕ್ಕೆ ಹೊರಟಿದ್ದ ಕಾರ ಚಾಲಕ ರಿಯಾಜ ಇತನು ಚಲಾಯಿಸುವ ಕಾರ ಅತಿವೇಗ ಮತ್ತು  ನಿಷ್ಕಾಳಜಿತನದಿಂದ  ನಡೆಸಿಕೊಂಡು  ಹೋಗಿ  ಒಮ್ಮಲೆ ಕಟ್ ಹೊಡೆದಿದ್ದರಿಂದ  ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬಲ ಬದಿಗೆ ಹೋಗಿ ಪಲ್ಟಿ ಹೊಡೆದು  ರಸ್ತೆಯ  ಮೇಲೆ ಬಿದ್ದಾಗ ಒಳಗಡೆ ಇದ್ದ  ನಮಗೆಲ್ಲರಿಗೂ ಭಾರಿ ಮತ್ತು ಸಾದಾ ಗಾಯ ಪೆಟ್ಟುಳಾಗಿದ್ದು. ನಿಮ್ಮ ತಮ್ಮ ವೆಂಕಣಗೌಡರಿಗೆ ಭಾರಿ ಗಾಯ ಪೆಟ್ಟು ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ ಕೂಡಲೆ ನಾವು ಶಹಾಬಾದ ಸರಕರಿ ಆಸ್ಪತ್ರೆಗೆ  ಬಂದು  ನೋಡಲಾಗಿ ನನ್ನ ತಮ್ಮ ರಸ್ತೆ ಅಪಘಾತದಲ್ಲಿ ಬೆನ್ನಿಗೆ ತಲೆಗೆ  ಮೈ ಕೈಗೆ  ಭಾರಿ ಒಳಪೆಟ್ಟಾಗಿ ಮೂಗಿನಂದ ರಕ್ತಬಂದು ಮೃಪಟ್ಟಿದ್ದನು. ರಿಯಾಜ ಇತನು ಚಲಾಯಿಸಿಕೊಂಡು  ಹೋಗುತ್ತಿದ್ದ ಕಾರ ನಂ ಕೆಎ-33 ಎಮ್-4533 ನೇದ್ದು ಅತಿ ವೇಗ ಮತ್ತು  ಅಲಕ್ಷತನದಿಂದ ನಡೆಸುತ್ತಾ ಬಂದು ರಸ್ತೆಯಲ್ಲಿ ಅಪಘಾತ ಮಾಡಿದ್ದರಿಂದ  ಘಟನೆಜರುಗಿದ್ದು ಆತನ ಮೇಲೆ  ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಬಸಂತಗೌಡ ತಂದೆ ನರಸಣ್ಣಗೌಡ ಮಾನಸಗಲ್ ಸಾಃಮೈಲಾಪೂರ ಬೇಸ್ ಯಾದಗೀರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಸುಗೂಸನ್ನು ಬಿಸಾಕಿ ಹೋದ ಪ್ರಕರಣ  :
ಜೇವರಗಿ ಠಾಣೆ : ಶ್ರೀ ಗೊಪಾಲ ತಂದೆ ರಾಮಚಂದ್ರ ಮೂಡಬೂಳ ಸಾಃ ಇಜೇರಿ ತಾಃ ಜೇವರಗಿ ರವರು ದಿನಾಂಕ 06.05.2017 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ದಾವೂಲ್ ಸಾಬ ಮಕ್ಕಾಂದಾರ ಇಬ್ಬರು ಕೂಡಿಕೊಂಡು ಇಜೇರಿ-ಚಿಗರಳ್ಳಿ ರೋಡ ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೊಗುತ್ತಿದ್ದೆವು. ಅಲ್ಲಿಯೇ ರಸ್ತೆಯ ಪಕ್ಕದಲ್ಲಿರುವ ಮಶಾಖ ಪಟೇಲ @ ಬಾಷಾ ಪೊಲೀಸ್ ಪಾಟೀಲ ಇವರ ಖುಲ್ಲಾ ಪ್ಲಾಟಿನ ಹತ್ತಿರ ಹೋಗುತ್ತಿದ್ದಾಗ ಒಂದು ಮಗು ಅಳುವ ಶಬ್ದ  ಕೇಳಿ ಸಮೀಪ ಹೋಗಿ ನೋಡಲಾಗಿ ಅದು ಗಂಡು ಮಗುವಾಗಿತ್ತು, ಅಂದಾಜು ಒಂದು ದಿವಸದ ಹಸುಗೂಸು ಇದ್ದಂತೆ ಕಂಡು ಬಂದಿರುತ್ತದೆ. ಅಂದಾಜು 1-2 ದಿವಸಗಳ ಹಿಂದೆ ಯಾರೋ ಒಬ್ಬ ಹೆಣ್ಣು ಮಗಳು ಒಂದು ಗಂಡು ಮಗುವಿಗೆ ಜನ್ಮ ನೀಡಿ  ನಂತರ ತನ್ನ ಮಗುವಿನ ಜನನವನ್ನು ಬಚ್ಚಿಡುವ ಮತ್ತು ಬೇರೆ ರೀತಿಯಲ್ಲಿ ವಿಲೇವಾರಿ ಮಾಡುವ ಅಥವಾ ಅದಕ್ಕೆ ಅಪಾಯಕ್ಕೆ ಒಡ್ಡುವ ಅಥವಾ ಸಂಪೂರ್ಣವಾಗಿ ಮಗುವಿಗೆ ತೊರೆಯುವ ಉದ್ದೇಶದಿಂದ ಸದರಿ ಹಸುಗೂಸನ್ನು ಇಜೇರಿ-ಚಿಗರಳ್ಳಿ ರೋಡ ಪಕ್ಕದ ಇಜೇರಿ ಮಸಾಖ ಪಟೇಲ @ ಬಾಷಾ ಇವರ ಖುಲ್ಲಾ ಪ್ಲಾಟನಲ್ಲಿ ಬಿಸಾಕಿ ಹೋಗಿರುತ್ತಾಳೆ. ಅಲ್ಲಿ ನೇರೆದ ಜನರು ಸಹ ಹಾಗೇ ಅನ್ನುತ್ತಿದ್ದರು. ಆ ಮಗು ಅಳುತ್ತಿದ್ದರಿಂದ ಆ ಮಗುವನ್ನು ಸಾರ್ವಜನಿಕರು ನಮ್ಮೂರ ಲಾಲಬೀ ಗಂಡ ಹುಸೇನಿ ಹಳಿಮನಿ ಇವಳ ಸಹಾಯದಿಂದ ಇಜೇರಿ ಸರಕಾರಿ ಆಸ್ಪತ್ರೆ ತೆಗೆದುಕೊಂಡು ಹೋಗಿ ಉಪಚಾರ ಕೊಡಿಸಿದ್ದು, ನಂತರ ಅಲ್ಲಿಂದ ಆ ಮಗುವನ್ನು ನಮ್ಮೂರ ಮರೆಮ್ಮ ಮತ್ತು ಆಶಾ ಕಾರ್ಯಕರ್ತ ದೇವಮ್ಮ ಗಂಡ ಬಸವರಾಜ ಗುತ್ತೆದಾರ ಇವಳ ಸಂಗಡ ಕಲಬುರಗಿ ಸರಕಾರಿ ಆಸ್ಪತ್ರೆಗೆ ತೆಗದುಕೊಂಡು ಹೋಗಿದ್ದು ಆ ಗಂಡು ನವಜಾತ ಶಿಶು ಸದ್ಯೆ ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

07 May 2017

Kalaburagi District Reported Crimes

ನೇಣುಹಾಕಿಕೊಂಡು ಮೃತಪಟ್ಟ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಶರಣಮ್ಮ ಗಂಡ ನಾಗಣ್ಣಾ ಕಲಶೆಟ್ಟಿ, ಸಾ||ಲೇಂಗಟಿ ಹಾ:ಆದರ್ಶ ಕಾಲೋನಿ ಕಲಬುರಗಿ ಈಗ ಸುಮಾರು 9 ವರ್ಷಗಳ ಹಿಂದೆ ನನ್ನ ಗಂಡ ನಾಗಣ್ಣ ಇವರು ಮೃತಪಟ್ಟಿರುತ್ತಾರೆ. ಪಿತ್ರಾರ್ಜಿತವಾಗಿ ನನ್ನ ಗಂಡನ ಪಾಲಿಗೆ 2 ಎಕರೆ 20 ಗುಂಟೆ ಜಮೀನಿದ್ದು ಸರ್ವೇ ನಂ-83 ರಲ್ಲಿ ಇರುತ್ತದೆ. ಈ ಜಮೀನಿನ ಸಾಗುವಳಿಯನ್ನು ನನ್ನ ಗಂಡನೆ ಮಾಡಿಕೊಂಡು ಹೋಗುತ್ತಿದ್ದನು ನಾನು ನನ್ನ ಗಂಡನ ಮರಣದ ನಂತರ ನನ್ನ ಮಕ್ಕಳೊಂದಿಗೆ ಕಲಬುರಗಿಯಲ್ಲಿ ಮನೆಮಾಡಿಕೊಂಡು ವಾಸವಾಗಿರುತ್ತೇನೆ. ನನ್ನ ಗಂಡನ ಮರಣದ ನಂತರ ನಾನು ಹೊಲದ ಎಲ್ಲಾ ಒಕ್ಕಲುತನದ ಮೇಲೆ ವಿಚಾರಣೆಯನ್ನು ನನ್ನ ಎರಡನೆಯ ಮಗನಾದ ಆಕಾಶ ಇವರು ನೋಡಿಕೊಂಡು ಬರುತ್ತಿದ್ದರು. ನನ್ನ ಗಂಡನು ಜೀವಂತವಿದ್ದಾಗ ಪ್ರಗತಿ ಕೃಷ್ಣ ಗ್ರಾಮೀಣ್ ಬ್ಯಾಂಕಿನಲ್ಲಿ 20000/- ರೂಪಾಯಿಗಳನ್ನು ಬೆಳೆಸಾಲ ತೆಗೆದಿರುವ ಬಗ್ಗೆ ಗೊತ್ತಿರುತ್ತದೆ. ನನ್ನ ಗಂಡನು ತೀರಿಕೊಂಡ ನಂತರ ಹೊಲದ ಸಾಗವಳಿ ಖರ್ಚಿಗಾಗಿ ನಾನು ಹಾಗೂ ನನ್ನ ಚಿಕ್ಕಮ್ಮರಾದ ನಾಗಮ್ಮ ಗಂಡ ರೇವಣಸಿದ್ದ ಕಲಶೆಟ್ಟಿ ಸಾ||ಮುದ್ದಡಗಾ ಇವರು ಹತ್ತಿರ 2,50,000/- ಮತ್ತು ಸರಸ್ವತಿ ಇವರ ಹತ್ತಿರ  1,50,000 ಸಾವಿರ ರೂಪಾಯಿಗಳು ಕೈಗಡವಾಗಿ ಸಾಲ ತಗೆದು ಬೀಜಗೊಬ್ಬರ ಹಾಗೂ ಸಾಗುವಳಿಗಾಗಿ ಖರ್ಚು ಮಾಡಿರುತ್ತೇವೆ. 2015, 2016 ಸಾಲಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಬಾರದೆ ಇರುವುದರಿಂದ ಎರಡು ಬೆಳೆಗಳು ವಿಫಲವಾಗಿದ್ದು ಅಲ್ಲದೇ ಕಳೆದ ವರ್ಷ ಹೆಚ್ಚಿಗೆ ಮಳೆ ಬಿದ್ದಿದ್ದರಿಂದ ಹೊಲದಲ್ಲಿ ನೀರು ನಿಂತು ಬೆಳೆ ಪೂರ್ತಿ ಬೆಳೆನಾಶವಾಗಿರುತ್ತದೆ. ಹೀಗೆ ಸತತವಾಗಿ 2 ವರ್ಷ ಬೆಳೆ ಬೆಳೆಯದೇ ಇರುವುದರಿಂದ ಎಲ್ಲಾ ಸಾಲವನ್ನು ಹೇಗೆ ತೀರಸಬೇಕೆಂದು ನನ್ನ ಮಗ ಆಕಾಶ ಇತ್ತತಲಾಗಿ ಬಹಳಷ್ಟು ಚಿಂತೆಮಾಡುತ್ತಾ ದುಃಖ ಪಡುತ್ತಿದ್ದನು ನಾನು ನನ್ನ ಹಿರಿಯ ಮಗನಾದ ಬಸವರಾಜ ಕೂಡಿ ಧೈರ್ಯತುಂಬಿ ಸಮದಾನ ಮಾಡಿರುತ್ತೇವೆ.ದಿನಾಂಕ: 04/05/2017 ರಂದು ಗುರುವಾರ ದಿವಸ ಮುಂಜಾನೆ 09-00 ಗಂಟೆಯ ಸುಮಾರಿಗೆ ನನ್ನ ಹಿರಿಯಮಗ ಬಸವರಾಜ ಮತ್ತು ಆಕಾಶ ರವರುಗಳು ಕಲಬುರಗಿ ಮನೆಯಲ್ಲಿದ್ದಾಗ ನನ್ನ ಮಗ ಆಕಾಶನು ಊರಿಗೆ ಹೋಗಿ ಹೊಲಗಳ ನೇಗಿಲು ಹೊಡೆದು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿರುತ್ತಾನೆ ಆ ದಿವಸ ಸಂಜೆ ಆದರು ಸಹ ನನ್ನ ಮಗನು ವಾಪಸ್ಸ ಮನೆಗೆ ಬರದಿದ್ದರಿಂದ ನನ್ನ ಭಾವನ ಮಗನಾದ ಹಣಮಂತನಿಗೆ ಫೋನಮಾಡಿ ವಿಚಾರಿಸಲಾಗಿ ಊರಿಗೆ ಬಂದಿರುವುದಿಲ್ಲವೆಂದು ತಿಳಿಸಿದನು. ಅಲ್ಲದೇ ನಾನು ನನ್ನ ಮಗನ ಮೊಬೈಲಗೆ ಫೋನಮಾಡಿದಾಗ ಬಂದ ಇರುತ್ತದೆ. ನಂತರ ನಾನು ನನ್ನ ಸಂಬಂಧಿಕರಿಗೆ ಫೋನಮಾಡಿ ವಿಚಾರಿಸಲು ನನ್ನ ಮಗ ಎಲ್ಲಿಗೆ ಹೋಗಿದ್ದಾನೆ ಗುರುತಾಗಲಿಲ್ಲ. ನಿನ್ನೆ ದಿನಾಂಕ:05/05/2017 ರಂದು ಸಂಜೆ 7-00 ಗಂಟೆ ಸುಮಾರಿಗೆ ನಾನು ಕಲಬುರಗಿಯಲ್ಲಿದ್ದಾಗ ಮನೆಗೆ ನನ್ನ ಭಾವನ ಮಗನಾದ ಹಣಮಂತ ಈತನು ಫೋನಮಾಡಿ ನಿಮ್ಮ ಮಗನಾದ ಆಕಾಶನು ಚಿಕ್ಕಪ್ಪನಾದ ಪಂಡಿತರಾವ ಇವರಹೊಲದ ಬಂದರಿಯಲ್ಲಿರುವ ಬೇವಿನಗಿಡದ ಕೊಂಬಿಗೆ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಮೃತಪಟ್ಟಿದ್ದು ಅವನ ಶವ ಜೋತಾಡುತ್ತಿದೆ ಎಂದು ತಿಳಿಸಿದ್ದು ನಾನು ಈ ವಿಷಯವನ್ನು ನಮ್ಮ ತವರೂರಿಗೆ ಫೋನಮಾಡಿ ತಿಳಿಸಿದ್ದು ಅವರು ರಾತ್ರಿ ಕಲಬುರಗಿಗೆ ಬಂದಿದ್ದು ಕಲಬುರಗಿಯಿಂದ ನಾನು ನನ್ನ ತಾಯಿ ದೇವಕಿ ಇಬ್ಬರು ಕೂಡಿ ಇಂದು ಮುಂಜಾನೆ 06-00 ಗಂಟೆ ಸುಮಾರಿಗೆ ನಮ್ಮೂರಾದ ಲೇಂಗಟಿ ಗ್ರಾಮದ ಸೀಮಾಂತರದಲ್ಲಿರುವ ನಮ್ಮ ಹೊಲ ಸರ್ವೇ ನಂ-83ರ ಬಂದಿರಿಗೆ ಹೊಂದಿರುವ ನಮ್ಮ ಭಾವ ಪಂಡಿತರಾವ ಇವರ ಹೊಲದ ಬಂದಾರಿಯಲ್ಲಿರುವ ಬೇವಿನ ಮರದ ಟೊಂಗಿಗೆ ನನ್ನ ಮಗ  ಆಕಾಶ ವಯಸ್ಸು:22 ವರ್ಷಈತನು ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅರ್ಜುನ ತಂದೆ ವಾಲು ರಾಠೋಡ ಸಾ|| ಮಾಶಾಳ ಅಳ್ಳಗಿ ತಾಂಡಾ ತಾ||ಅಫಜಲಪೂರ ರವರ ತಾಂಡಾದ ಸೇವಾಲಾಲ ಗುಡಿ ಹತ್ತಿರ ಜನರು ಬಾಯಿ ಮಾಡಿ ಜಗಳ ಮಾಡುತಿದ್ದದನ್ನು ಕೇಳಿ ನಾನು ನನ್ನ ಹೆಂಡತಿ ನನ್ನ ಮಗ ಮೂರು ಜನರು ಕೂಡಿ ಅಲ್ಲಿ ಹೋಗಿ ನೋಡಲಾಗಿ ನಮ್ಮ ತಾಂಡಾದ ಸೇವಾಲಾಲ ಗುಡಿಯ ಹತ್ತಿರ 1) ಮೋಹನ ತಂದೆ ಬಾಬು ಚವ್ಹಾಣ 2) ರಾಜು ತಂದೆ ಬಾಬು ಚವ್ಹಾಣ 3) ತಾನಾಜಿ ತಂದೆ ಬಾಬು ಚವ್ಹಾಣ 4) ರುಕಿಬಾಯಿ ಗಂಡ ಬಾಬು ಚವ್ಹಾಣ 5)ಭೀಮ ತಂದೆ ನರಸು ಚವ್ಹಾಣ 6)ತಾರಾಬಾಯಿ ಗಂಡ ರಾಜು ಚವ್ಹಾಣ 7) ಸೀಲಾಬಾಯಿ ಗಂಡ ಭೀಮ ಚವ್ಹಾಣ ಇವರೇಲ್ಲರೂ  ನಮ್ಮ ತಾಂಡಾದ ರಾಣಾಬಾಯಿ ಗಂಡ ನಾಮದೇವ ಚವ್ಹಾಣ ಇವರೊಂದಿಗೆ ರಾಣಾಬಾಯಿ ಮಗ ಮಿಥುನ್ ಇತನ ಮದುವೆ ಸಂಭಂದ ಜಗಳ ಮಾಡುತ್ತಿದ್ದರು ಆಗ ನಾನು ನನ್ನ ಹೆಂಡತಿ ನನ್ನ ಮಗ ಮತ್ತು ನಮ್ಮಂತೆ ಜಗಳದ ಶಬ್ದ ಕೇಳಿ ನಮ್ಮ ತಾಂಡಾದ ಮೇಘು ತಂದೆ ದೇಸು ಚವ್ಹಾಣ, ಲಕ್ಷ್ಮಣ ತಂದೆ ವಾಲು ರಾಠೋಡ, ದಾಸು ತಂದೆ ರಾಮು ಚವ್ಹಾಣ ಎಲ್ಲರು ಕೂಡಿ ಜಗಳ ಬಿಡುಸುತಿದ್ದಾಗ ತಾನಾಜಿ ಇತನು ನನಗೆ ಏ ರಂಡಿಮಗನಾ ಅರ್ಜುನ್ಯ ನೀ ಯಾಕ ಇಲ್ಲಿ ಬಂದಿದ್ದಿ ಬೋಸಡಿ ಮಗನಾ ಅಂತ ಅಂದಾಗ ನಾನು ಸದರಿಯವರಿಗೆ ಯಾಕೇ ಸುಮ್ಮನೆ ಜಗಳ ಮಾಡ್ತಿರಿ ಇದು ಸರಿ ಅಲ್ಲಾ ಅಂತ ಅಂದಾಗ ಮೋಹನ ಇತನು ಭೋಸಡಿ ಮಗನಾ ನಿಂದೆ ತಿಂಡಿ ಬಾಳ ಅದಾ ಅಂತ ಅಂದು ತನ್ನ ಕೈಯಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಪಡಿಸಿದ ಆಗ ನಾನು ಕೇಳಗೆ ಬಿದ್ದಾಗ ರಾಜು, ರುಕಿಬಾಯಿ, ಭೀಮ, ತಾರಾಬಾಯಿ, ಸೀಲಾಬಾಯಿ ಇವರೇಲ್ಲರು ಅವಾಚ್ಯವಾಗಿ ಬೈಯುತ್ತಾ ತಮ್ಮ ಕೈಯಿಂದ ಹೊಡೆದು ಕಾಲಿನಿಂದ ಒದೆಯುತಿದ್ದಾಗ ಅಲ್ಲೆ ಇದ್ದ ನನ್ನ ಹೆಂಡತಿ, ನನ್ನ ಮಗ ಹಾಗು ಮೇಘು ಚವ್ಹಾಣ, ಲಕ್ಷ್ಮಣ ರಾಠೋಡ, ದಾಸು ಚವ್ಹಾಣ ಇವರೇಲ್ಲರು ಕೂಡಿ ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

04 May 2017

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ಗಿರಿಮಲ್ಲ ಡೊಣಗಾಂವ ಸಾ: ಗಡಂಚಿಯವರ ಮನೆಯಲ್ಲಿ ಬಾಡಿಗೆ ಮಕ್ತಂಪೂರ ಬಸವಣ್ಣ ಗುಡಿ ಹತ್ತಿರ ಕಲಬುರಗಿ ಇವರು ಮಗಳಾದ ಗಾಯಿತ್ರಿ 3 ವರ್ಷ ಇವಳು ದಿನಾಂಕ 02.05.2017 ರಂದು ನಾನು ಕೆಲಸಕ್ಕೆ ಹೋದಾಗ ಸುಮಾರು 4 ಗಂಟೆಯ ಸುಮಾರಿಗೆ ನನ್ನ ಹೆಂಡತಿಯಾದ ಗೀತಾ ಇವಳು ನಾನು ಕೆಲಸ ಮಾಡುವ ಟೇಲರ ಅಂಗಡಿಗೆ ಬಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ಮನೆಯ ಮುಂದೆ ಆಟವಾಡುತ್ತಿದ್ದ ಗಾಯಿತ್ರಿ ಕಾಣಿಸುತ್ತಿಲ್ಲ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ ಅಂತಾ ತಿಳಿಸಿದಳು. ನಾನು ಕೂಡ ಅಲ್ಲಿಂದ ಇಲ್ಲಿಯವರೆಗೆ ನನ್ನ ಮಗಳು ಗಾಯಿತ್ರಿ ಇವಳಿಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ ಕಾರಣ ಕಾಣೆಯಾದ ನನ್ನ ಮಗಳು ಗಾಯಿತ್ರಿ ಇವಳಿಗೆ ಪತ್ತೆ ಮಾಡಿಕೋಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ದಿನಾಂಕ 02-05-2017 ರಂದು ಮುಂಜಾನೆ ನನ್ನ ಹೆಂಡತಿ ಸುನೀತಾ ಇವಳು ಮದಿಕಂಟಿ ಗ್ರಾಮದಲ್ಲಿ ನಮ್ಮ ಸಂಬಂಧಿಕರು ದೇವರಿಗೆ ಮಾಡಿದ್ದರಿಂದ ಅಲ್ಲಿಗೆ ಹೋಗಿದ್ದಳು ನಾನು ಇಂದು ಸಾಯಕಾಂಲ 4-15 ಗಂಟೆ ಸುಮಾರಿಗೆ ಸೇಡಂದಲ್ಲಿ ಇದ್ದಾಗ ನನಗೆ ಪರಿಚಯವಿರುವ ಅನಂತಯ್ಯ ಕಲಾಲ ಸಾ|| ಆಡಕಿ ಇವರು ನನಗೆ ಪೋನ ಮಾಡಿ ಕೊಂತನಪಲ್ಲಿ ಗೇಟ್ ಹತ್ತಿರ ನಿನ್ನ ಹೆಂಡತಿ ಸುನೀತ ಇವಳಿಗೆ ಅಪಘಾತವಾಗಿದ್ದು ಇವಳು ಸತ್ತಿದ್ದಾಳೆ ಅಲ್ಲದೆ ನಿಮ್ಮ ತಂಗಿ ರಾಧಮ್ಮ ಹಾಗೂ ಮೊಟಾರ ಸೈಕಿಲ ಚಾಲಕ ಅಂಜಲಯ್ಯ ಇತನ ತಲೆಗೆ ಮುಖಕ್ಕೆ ಕೈಕಾಲುಗಳಿಗೆ ಗಾಯಗಳಗಿರುತ್ತವೆ ಅಂತಾ ತಿಳಿಸಿದ್ದು ತಕ್ಷಣ ನಾನು ಕೊಂತನಪಲ್ಲಿ ಗೇಟ್ ಹತ್ತಿರ ಹೋಗಿ ನೋಡಲಾಗಿ ನನ್ನ ಹೆಂಡತಿ ಸುನೀತ ಇವಳ ತಲೆಗೆ ಭಾರಿ ರಕ್ತ ಗಾಯವಾಗಿ ರಸ್ತೆಯಲ್ಲಿ ಸತ್ತು ಬಿದ್ದದ್ದು ಅಲ್ಲೆ ಹೆಂಡತಿ ಮೃತ ದೇಹದ ಹತ್ತಿರ ಒಂದು ಮೊಟರ ಸೈಕಲ ನಂ ಎಮ್ ಹೆಚ್ 05-ಎಎನ್-5187 ನೆದ್ದು ರಸ್ತೆಯಲ್ಲಿ ಬಿದ್ದಿದ್ದು ಈ ಬಗ್ಗೆ ಅಲ್ಲಿದ್ದ ನಮಗೆ ಪರಿಚಯವಿರುವ ಅನಂತಯ್ಯ ಹಾಗೂ ಇತರರಿಗೆ ವಿಚಾರಿಸಲು ಮುತ್ತೆಪ್ಪ ತಂದೆ ಸಾಯಪ್ಪ ಮಾಲಾ ಸಾ|| ಕೊಂತನಪಲ್ಲಿ ಗ್ರಾಮ ಇವರು ತಿಳಿಸಿದ್ದೆನೆಂದರೆ ನಾನು ಹಾಗೂ ನಮ್ಮೂರ ಲಾಲಅಹ್ಮದ ತಂದೆ ಯಾಕುಬಸಾಬ ಇಬ್ಬರೂ ಇಲ್ಲೆ ಕೋಂತನಪಲ್ಲಿ ಗೇಟ ಹತ್ತಿರ ಇದ್ದಾಗ ಈಗ ಸಾಯಕಾಂಲ 4-00 ಗಂಟೆ ಸುಮಾರಿಗೆ ಕೊಂತನಪಲ್ಲಿ ಕಡೆಯಿಂದ ಮೊಟರ ಸೈಕಲ ನಂ ಎಮ್ ಹೆಚ್ 05-ಎಎನ್-5187 ನೆದ್ದರ ಮೇಲೆ ಮೊಟರ ಸೈಕಲ ಚಾಲಕ ಹಾಗೂ ಹಿಂದುಗಡೆ ಇಬ್ಬರು ಹೆಣ್ಣು ಮಕ್ಕಳು ಕುಳಿತು ಸೇಡಂ ಕಡೆ ರಸ್ತೆ ಕ್ರಾಸ್ ದಾಟುತ್ತಿದ್ದಾಗ ಸೇಡಂ ಕಡೆಯಿಂದ ಒಂದು ಮೊಟರ ಸೈಕಲ ನಂ ಕೆ ಎ32-ಈಜಿ-4954 ನೆದ್ದರ ಚಾಲಕನು ತನ್ನ ಮೊಟರ ಸೈಕಲನ್ನು ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸೇಡಂ ಕಡೆಗೆ ಹೋಗುತ್ತಿದ್ದ ಮೊಟರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತಮಾಡಿದ್ದು ಇದರಿಂದ ಕೊಂತನಪಲ್ಲಿ ಕಡೆಯಿಂದ ಬರುತ್ತಿದ್ದ ಮೊಟರ ಸೈಕಲ ಹಾಗೂ ಹಿಂದುಗಡೆ ಇಬ್ಬರು ಹೆಣ್ನು ಮಕ್ಕಳು ಕೆಳಗೆ ರಸ್ತೆಯಲ್ಲಿ ಬಿದ್ದಿದ್ದು ಆಗ ಕೊಡಂಗಲ ಕಡೆಯಿಂದ ಸೇಡಂ ಕಡೆಗೆ ಬರುತ್ತಿದ್ದ ಒಂದು ಕಾರಿನ ಚಾಲಕನು ತನ್ನ ಕಾರನ್ನು ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಹೆಣ್ಣು ಮಗಳಾದ ಸುನೀತಾ ಇವಳ ತಲೆ ಮೇಲಿಂದ ಕಾರನ್ನು ನಡೆಸಿಕೊಂಡು ಹೋಗಿದ್ದರಿಂದ ಸದರಿ ಸುನೀತಾ ಇವಳ ತಲೆಗೆ ಭಾರಿ ಗಾಯ ಹೋಂದಿ  ಅಲ್ಲೆ ಸ್ಥಳದಲ್ಲಿ ಮೃತ ಪಟ್ಟಿದ್ದು ಸದರಿ ಕಾರು ಚಾಲಕ ಸ್ವಲ್ಪ ಮುಂದೆ ಹೋಗಿ ತನ್ನ ಕಾರನ್ನು ನಿಲ್ಲಿಸಿದ್ದು ಅದರ ನಂ ನೋಡಲಗಿ ಎಮ್ ಹೆಚ್ 12-ಎಪ್,ಝಡ್-9993  ಅಂತಾ ಇದ್ದು ಸದರಿ ಕಾರ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ರವಿ ತಂದೆ ವೆಂಕಟ ಜಾಧವ ಅಂತಾ ತಿಳಿಸಿದ್ದು ಇರುತ್ತದೆ ಸದರಿ ಅಫಘಾತ ಪಡಿಸಿದ ಮೊಟರ ಸೈಕಲ್ ನಂ ಕೆ ಎ32-ಈಜಿ-4954 ನೇದ್ದರ ಚಾಲಕನ ಹೆಸರು ಗಣೇಶ ತಂದೆ ಪಕೀರಯ್ಯ ಸಾ|| ಮದರನಾಸನಪಲ್ಲಿ ಅಂತಾ ತಿಳಿಸಿದ್ದು ಸದರಿಯವನಿಗೆ ಕೈಕಾಲುಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಇತನು ತನ್ನ ಮೊಟರ  ಸೈಕಲ್ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ನಂತರ ಮೊಟರ ಸೈಕಲ ನಂ ಎಮ್ ಹೆಚ್ 05-ಎಎನ್-5187 ನೆದ್ದರ ಚಾಲಕನಾದ ಅಂಜಯ್ಯ ತಂದೆ ವೆಂಕಟಯ್ಯ ಹಾಗೂ  ಮೊಟರ ಸೈಕಲ ಮೇಲೆ ಹಿಂದುಗಡೆ ಕುಳಿತಿದ್ದ ಹೆಣ್ಣು ಮಗಳಾದ  ರಾಧಮ್ಮ ಗಂಡ ರಮೇಶ ಸಾ|| ಮದರನಾಸನಪಲ್ಲಿ ಇವರಿಗೆ ತಲೆಗೆ ಹಾಗೂ ಮುಖಕ್ಕೆ ಹಾಗೂ ಕೈಕಾಲುಗಳಿಗೆ ಇತರ ಕಡೆಗೆ ರಕ್ತ ಗಾಯ ಗುಪ್ತ ಗಾಯಗಳಾಗಿದ್ದು ಇವರಿಗೆ ಇಬ್ಬರಿಗೆ ಜಿವಿಆರ್ ಅಂಬ್ಯುಲನ್ಸದಲ್ಲಿ ಹಾಕಿ ಉಪಚಾರ ಕುರಿತು ಸೇಡಂ ಸರ್ಕಾರಿ ದವಾಖಾನೆಗೆ ಕಳಿಸಿದ್ದು ಇರುತ್ತದೆ ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ಮಹೀಪಾಲ ತಂದೆ ದೇವಪ್ಪ ಕಮರೆಡ್ಡಿ ಸಾ: ಮದರಾನಾಗಸನಪಲ್ಲಿ ತಾ: ಸೇಡಂ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 23/04/2017 ರಂದು ಬೆಳ್ಳಿಗೆ 10-15  ಗಂಟೆ ಸುಮಾರಿಗೆ ಕೆಬಿಎನ್ ದರ್ಗಾ ಹಿಂದುಗಡೆ ಇರುವ ಪಾಯನ್ ಗಲ್ಲಿ ಏರಿಯಾ ಮನೋಹರ ಬಾಯ್ ಕಿರಾಣಾ ಅಂಗಡಿ ಪಕ್ಕದ ರಸ್ತೆಯಿಂದ ಸ್ಮಶಾನ ಭೂಮಿ ಕಡೆಗೆ ಕಾಶಿಬಾಯಿ ಇವರು ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಯಾವುದೋ ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾಶಿಬಾಯಿ ಇವಳಿಗೆ ಡಿಕ್ಕಿ ಪಡಿಸಿ ಭಾರಿ ರಕ್ತ ಗಾಯಗೊಳಿಸಿದ್ದರಿಂದ ಕಾಶಿಬಾಯಿ ಇವಳು ದಿನಾಂಕ-23/04/2017 ರಂದು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿ ದಿನಾಂಕ - 23/04/2017 ರಿಂದ ಇಲ್ಲಿಯವರೆಗೆ ಉಪಚಾರ ಪಡೆದುಕೊಂಡು ರಸ್ತೆ ಅಪಘಾತದಲ್ಲಿ ಆದ ಗಾಯ ವಾಸಿಯಾಗದೆ ಇಂದು ದಿನಾಂಕ-02/05/2017 ರಂದು ಬೆಳಿಗ್ಗೆ  ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಶಿವರಾಯ ತಂದೆ ರಾಮಚಂದ್ರ ಟಕ್ಕಳಕಿ  ಸಾ: ಶಹಾಬಾಜರ ನಾಕಾ ಹತ್ತಿರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ದರೋಡೆಗೆ ಹೊಂಚು ಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ :   ದಿನಾಂಕ: 02/05/2017 ರಂದು ಬೆಳಗಿನ ಜಾವ  ಗ್ರಾಮಿಣ ಪೊಲೀಸ  ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿಯಿಂದ-ಆಳಂದ ಮೇನ ರೋಡಿಗೆ ಇರುವ ಕೇರಿ ಭೋಸಗಾ ಕ್ರಾಸ ಹತ್ತಿರ ಬಸಸ್ಟಾಂಡ ಮರೆಯಲ್ಲಿ ಕೆಲವು ಜನರು ತಮ್ಮ ಮುಖಕ್ಕೆ  ಬಟ್ಟೆ ಕಟ್ಟಿಕೊಂಡು ನಿಂತುಕೊಂಡು ಸದರ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ  ಹಾಗೂ ಸಾರ್ವಜನಿಕರಿಗೆ ತಡೆದು ನಿಲ್ಲಿಸಿ ಅವರಿಗೆ ಮಾರಕಾಸ್ರ್ತಗಳನ್ನು ತೋರಿಸಿ ಬೆದರಿಕೆ ಹಾಕಿ  ದರೋಡೆ ಮಾಡಲು  ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿ. ಪಿ..ಐ. ಗ್ರಾಮೀಣ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮತರಯಲ್ಲಿ ನಿಂತು ನೋಡಲಾಗಿ  08 ಜನರು ಮುಖಕ್ಕೆ ಬಟ್ಟೆಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗ್ಗ್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಲು 1) ಈಶ್ವರ ತಂದೆ ಮಲಕಪ್ಪ ಕಾಳನೂರ ಸಾ:ಉಪಳಾಂವ ತಾ:ಜಿ:ಕಲಬುರಗಿ  2) ಶ್ರೀಕಾಂತ ತಂದೆ ಬಸವರಾಜ ತಿಳಗೋಳ ಸಾ:ಮಾಡ್ಯಾಳ ತಾ:ಆಳಂದ   3) ಹಣಮಂತ @ ಬಜರಂಗಿ ತಂದೆ ಅರ್ಜುನ ವಗ್ಗೆ ಸಾ:ಪಟ್ಟಣ ತಾ:ಜಿ:ಕಲಬುರಗಿ 4) ಖಲೀಲ ತಂದೆ ಖಾಜಾ ಪಟೇಲ್ ಸಾ: ಕಪನೂರ ರವರನ್ನು ಹಿಡಿದುಕೊಂಡಿದ್ದು ಇನ್ನು ನಾಲ್ಕು ಜನ ಓಡಿ ಹೋಗಿದ್ದು ಅವರ ಹೆಸರು ವಿಳಾಸ 5) ಹಣಮಂತ ತಂದೆ ಮಲಕಪ್ಪ ಕಾಳನೂರ ಸಾ:ಉಪಳಾಂವ  6) ಶಿವಪ್ಪ ತಂದೆ ಈರಣ್ಣಾ ಸಾ:ಮಾಡ್ಯಾಳ  7) ಗುಂಡಪ್ಪ ತಂದೆ ಮಲ್ಲಿಕಾಜರ್ುನ ಹಡಪಾದ ಸಾ:ಮಾಡ್ಯಾಳ  8) ಶಿವಲಿಂಗ ತಂದೆ ಶರಣಪ್ಪ ಪೂಜಾರಿ ಸಾ:ಮಾಡ್ಯಾಳ ತಾ:ಆಳಂದ  ಈ ರೀತಿ ಇದ್ದು, ಸಿಕ್ಕಿ ಬಿದ್ದ ಆರೋಪಿತರಿಂದ 1) 02 ಚಾಕು ಅ;ಕಿ:00 ರೂ. 2) 03 ಬಡಿಗೆ ಅ:ಕಿ:00 ರೂ. 3) 03 ಖಾರದ ಪುಡಿ 4) 20 ಫೀಟ ನೂಲಿನ ಹಗ್ಗ 5) 08 ಕಪ್ಪು ಬಣ್ಣದ ಬಟ್ಟೆಗಳು ಅ:ಕಿ:00 ರೂ. 6) ಒಂದು ಕಬ್ಬಿಣದ ರಾಡ ಅಕಿ-00=00 7) ಒಂದು ಕ್ರೋಜರ್ ಜೀಪ ನಂ ಕಎ-14 ಎ-7524 ಅಕಿ-4,00000/-ರೂ 8) ಒಂದು ಹೊಂಡಾ ಆಕ್ಟೀವ ಮೋಟಾರ ಸೈಕಲ್ ನಂ ಕೆಎ-32 ಇಜೆ-6139 ನೇದ್ದು ಅಕಿ 25000/-ರೂ  ಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :                  
ನರೋಣಾ ಠಾಣೆ : ಶ್ರೀ ನಾಗಣ್ಣಾ ತಂದೆ ಗುರುಲಿಂಗಪ್ಪ ಗೋಗಶೆಟ್ಟಿ, , ಸಾ||ಚಿಂಚನಸೂರ ಗ್ರಾಮ, ತಾ||ಆಳಂದ ಇವರ ಮಗನಾದ ರುದ್ರಶೆಟ್ಟಿ ವಯಾ: 19ವರ್ಷ 8ತಿಂಗಳು ಇತನು ದಿನಾಂಕ:28/04/2017 ರಂದು ಬೆಳಿಗ್ಗೆ 10-00 ಕುರಿಮೇಯಿಸಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು ವಾಪಸ್ಸು ಮನೆಗೆ ಬರದೆ ಕಾಣೆಯಾಗಿದ್ದು ಅವನನ್ನು ಪತ್ತೆ ಮಾಡಿಕೊಡಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.