POLICE BHAVAN KALABURAGI

POLICE BHAVAN KALABURAGI

11 March 2016

Kalaburagi District Reported Crimes.

ಫರಹತಬಾದ ಠಾಣೆ : ದಿನಾಂಕ 10/3/2016 ರಂದು ಬೆಳಿಗ್ಗೆ 7-00 ಗಂಟೆಗೆ ಜೇವರಗಿ-ಕಲಬುರಗಿ ರಾಷ್ಟ್ರಿಯ ಹೆದ್ದಾರಿ 218 ರ ಫಿರೋಜಾಬಾದ ದರ್ಗಾ  ಹತ್ತಿರ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಚಾರಿ ಸುಗಮಗೊಳಿಸಿ ಅಪಘಾತದಲ್ಲಿ ಮೃತ ಪಟ್ಟ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದರ ಚಾಲಕನಾದ ನಾಗೇಂದ್ರ ತಂದೆ ರಾಮ ಅವಧ ಯಾದವ ಸಾ// ರಸೂಲಪುರ ಜಿಲ್ಲಾ// ಗಾಜಿಪುರ ಉತ್ತರ ಪ್ರದೇಶ ಇತನ ಮೃತ ದೇಹವನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ಶಗಾರಕ್ಕೆ ಸಾಗಿಸಿ ನಂತರ ಈ ಬಗ್ಗೆ ಮಾಹಿತಿಯನ್ನು ಮೃತನ ಸಂಬಂಧಿಕನಾದ ಸರ್ವೇಶ  ತಂದೆ ಪ್ರಭುನಾಥ ಇವರಿಗೆ ದೂರವಾಣಿ ಮೂಲಕ ತಿಳಿಸಿದ್ದು ಸಾಯಂಕಾಲ 4-00 ಗಂಟೆಗೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸದರಿ ಫಿರ್ಯಾದಿ ಸರ್ವೇಶ ತಂದೆ ಪ್ರಭುನಾಥ ಯಾದವ ಇತನಿಂದ ಫಿರ್ಯಾದಿ  ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು ಫಿರ್ಯಾದಿ ಹೇಳಿಕೆ ಸಂಕ್ಷಿಪ್ತ ಸಾರಾಂಶವೇನಂದರೆತಮ್ಮ ದೋಡ್ಡಪ್ಪ ರಾಮ ಅವದ ಯಾಧವ ಇವರ ಮಗನಾದ ನಾಗೇಂದ್ರ ಇತನು ಅವದೇಶ ಕುಮಾರ ಮೋರೆ ಸಾ// ಅಮಾವತಲಾ ಜಿಲ್ಲಾ// ಝೋನಪುರ ಇವರ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದರ ಮೇಲೆ ಚಾಲಕ ಅಂತಾ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ 9/3/2016 ರಂದು ಸದರಿ ಲಾರಿಯಲ್ಲಿ ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ತಂದೆ ರಾಮ ಅವದ ಯಾಧವ ಇತನು ಗೋವಾದಲ್ಲಿ ಐಸಕ್ರೀಮ್ ಲೋಡ ಮಾಡಿಕೊಂಡು ಹೈದ್ರಾಬಾದಕ್ಕೆ ಹೋಗುವ ಕುರಿತು ಹೊರಟಿದ್ದು, ಜೇವರಗಿ ದಾಟಿದ ನಂತರ ಎನ್.ಹೆಚ್ 218 ರ ಫಿರೋಜಾಬಾದ ದಗರ್ಾದ ಹತ್ತಿರ ತಾನು ಚಲಾಯಿಸುತ್ತಿರುವ ಲಾರಿ ನಂ ಎಂ.ಹೆಚ್ ವೈ 9070 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಬದಿಗೆ ನಿಂತಿದ ಲಾರಿ ನಂ ಎಂ.ಹೆಚ್ 25 ಬಿ 9227 ನೇದ್ದಕ್ಕೆ ಹಿಂದಿನಿಂದ ಇಂದು ದಿನಾಂಕ 10/3/2016 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಗೇಂದ್ರನಿಗೆ ಎದೆಗೆ ಭಾರಿ ಒಳಪೆಟ್ಟಾಗಿ, ಹಣೆಗೆ ರಕ್ತಗಾಯವಾಗಿ ಮೂಗಿನಿಂದ ಬಾಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುವ ವಿಷಯ ನನಗೆ ಫರಹತಾಬಾದ ಪೊಲೀಸ ಠಾಣೆಯ ಶ್ರೀ ಜಾಲಂದರ ಎ.ಎಸ್.ಐ ಇವರು ದೂರವಾಣಿ ಕರೆ ಮಾಡಿ ಇಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತಿಳಿಸಿದ್ದರಿಂದ ನಾನು ಕೂಡಲೇ ಗಾಬರಿಗೊಂಡು ಇನ್ನೋಬ್ಬ ನನ್ನ ಚಿಕ್ಕಪ್ಪನ ಮಗನಾದ ಅಂಗದ ಯಾದವ ಇತನೊಂದಿಗೆ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಬಂದು ನೊಡಲಾಗಿ ನಾಗೇಂದ್ರನು ಚಲಾಯಿಸುತ್ತಿರುವ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದು ರೋಡಿಗೆ ಪಂಚರ ಆಗಿ ನಿಂತಿರುವ ಲಾರಿ ನಂ ಎಂ.ಹೆಚ್ 25 ಬಿ 9227 ನೇದ್ದಕ್ಕೆ ಡಿಕ್ಕಿಯಾಗಿ ಮುಂದಿನ ಭಾಗ ಜಖಂಗೊಂಡಿದ್ದು ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ಯಾದವ ಇತನ ಶವದ ಬಗ್ಗೆ ವಿಚಾರಿಸಿಲು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಇರುವ ಬಗ್ಗೆ ತಿಳಿದು ಬಂದ ಮೇರೆಗೆ ನಾವು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ನೋಡಲಾಗಿ ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ಯಾಧವ ಇತನಿಗೆ ಎದೆಗೆ ಭಾರಿ ಒಳಪೆಟ್ಟು, ಹಣೆಗೆ ರಕ್ತಗಾಯಮ, ಮೂಗಿನಿಂದ, ಬಾಯಿಯಿಂದ ರಕ್ತ ಬಂದು ಕಾಲುಗಳಿಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ನಾನು ಶವವನ್ನು ನೋಡಿ ಗುರುತಿಸಿರುತ್ತೇನೆ. ಕಾರಣ ಮಾನ್ಯರು ಈ ಬಗ್ಗೆ ಮುಂದಿನ ಕಾನೂನು ರೀತಿಯ ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಸಾರಾಂಶದ ಮೇಲಿಂದೆ ಗುನ್ನೆ ದಾಖಲಾಗಿರುತ್ತದೆ.
ಮಾಡಬೂಳ ಠಾಣೆ : ದಿನಾಂಕ-10/03/2016 ರಂದು 8-30 ಪಿ.ಎಮ್ ಕ್ಕೆ ಶ್ರೀ ಶಿವಶರಣಪ್ಪಾ ಎ.ಎಸ್.ಐ ಮಾಡಬೂಳ ಠಾಣೆ ಕ್ಯಾಂಪ್ ಜಿಜಿಹೆಚ್ ಕಲಬುರಗಿ ರವರು ತಾವು ಪಡೆದ ಹೇಳಿಕೆ ಫಿರ್ಯಾಧಿಯನ್ನು ಮುಂದಿನ ಕ್ರಮಕ್ಕಾಗಿ ಮಪಿಸಿ-616 ರವರ ಮುಖಾಂತರ ಕೊಟ್ಟು ಕಳುಹಿಸಿದ್ದು ಸ್ವೀಕೃತ ಮಾಡಿಕೊಂಡ ಹೇಳಿಕೆ ಸಾರಾಂಶವೆನೆಂದರೆ, ಇಂದು ದಿನಾಂಕ-10/03/2016 ರಂದು ಬೆಳ್ಳಿಗೆ 9 ಗಂಟೆಯಿಂದ 12 ಗಂಟೆ ವರೆಗೆ ಸದರಿ ಲಾರಿ ನಂ ಕೆಎ-39 4328 ನೇದ್ದರಲ್ಲಿ ಫರ್ಸಿ ಕಲ್ಲುಗಳನ್ನು ತುಂಬಿಕೊಂಡು ಸದರಿ ಲಾರಿಯು ನಮ್ಮ ಗ್ರಾಮದ ಮಲ್ಲಪ್ಪ ತಂದೆ ಅಣ್ಣಪ್ಪ ಅಂದರಕಿ ಈತನು ಚಲಾಯಿಸುತ್ತಿದ್ದು ಸದರಿ ಮಲ್ಲಪ್ಪ ನಾವು ಮೂರು ಜನರಿಗೆ ತಿಳಿಸಿದೆನೆಂದರೆ ಸದರಿ ಫರ್ಸಿ ಕಲ್ಲುಗಳನ್ನು ಗುಂಡಗುರ್ತಿ ಗ್ರಾಮಕ್ಕೆ ಒಯ್ದು ಇಳಿಸಿ ಬರೋಣ ನಡೆಯಿರಿ ಅಂತಾ ತಿಳಿಸಿದಾಗ ನಾನು ಹಾಗೂ ರಾಯಪ್ಪ, ಭೀಮು ಮೂರು ಜನರು ಸದರಿ ಲಾರಿಯ ಕ್ಯಾಬಿನಿನಲ್ಲಿ ಕುಳಿತಾಗ ಸದರಿ ಲಾರಿ ಮಲ್ಲಪ್ಪನು ಚಲಾಯಿಸಿಕೊಂಡು ಚಿತ್ತಾಪೂರ, ಟೆಂಗಳಿ ಕ್ರಾಸ್, ಮೇಲಿಂದ ಹೊರಟು ಗುಂಡಗುರ್ತಿ ಗ್ರಾಮವು ಇನ್ನು ಸ್ವಲ್ಪ ದೂರವಿರುವಾಗ ಸದರಿ ಲಾರಿಯನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ನಡೆಸಿಕೊಂಡು ಬ್ರಿಡ್ಜನ ಮೇಲೆ ಗೋಗುತ್ತಿರುವಾಗ ಒಮ್ಮೆಲೆ ಬ್ರಿಡ್ಜನ ಬಲ ಮೇಲಿಂದ ಕೆಳಗೆ ಪಲ್ಟಿ ಮಾಡಿದಾಗ ಸದರಿ ಲಾರಿ ನಾಲ್ಕು ಗಾಲಿಗಳು ಮೇಲಾಗಿ ಬಿದಿದ್ದರಿಂದ ನನಗೆ ಬಲಗೈ ಮಣಕೈ ಕೆಳಗೆ ಭಾರಿ ರಕ್ತಗಾಯ ಬಲಗೈ ಹಸ್ತಕ್ಕೆ ತರಚಿದ ಗಾಯವಾಗಿ ನಾನು ಹಾಗೂ ರಾಯಪ್ಪ, ಭೀಮು, ಮಲ್ಲಪ್ಪ ನಾಲ್ಕು ಜನ ಒಳಗಡೆ ಸಿಕ್ಕಿ ಬಿದ್ದಾಗ ರಸ್ತೆಗೆ ಹೋಗಿ ಬರುವ ಜನರು ಹೊರಗಡೆ ತೆಗೆದರು ನಂತರ ನೋಡಲಾಗಿ ಭೀಮು ಈತನಿಗೆ ತೆಲೆಗೆ ಭಾರಿ ಒಳಪಟಟ್ಟಾಗಿದ್ದು, ಮಲ್ಲಪ್ಪ ಈತನಿಗೆ ಕಾಲಿಗೆ ಮತ್ತು ಇತರ ಕಡೆಗೆ ರಕ್ತಗಾಯಗಳಾಗಿದ್ದು. ರಾಯಪ್ಪ ಈತನಿಗೆ ಎದೆಗೆ ಭಾರಿ ಒಳಪೆಟ್ಟಾಗಿದ್ದು ಅಲ್ಲಿನ ಸಾರ್ವಜನಿಕರು ಜಿ.ವ್ಹಿ.ಆರ್ ಅಂಬುಲೈನ್ಸಗೆ ಪೋನ್ ಮಾಡಿ ಕರೆಯಿಸಿ ಅದರಲ್ಲಿ ನಮಗೆ ನಾಲ್ಕು ಜನರಿಗೆ ಹಾಕಿ ಇಲ್ಲಿಗೆ ಕಳುಹಿಸಿದ್ದು ಮಾರ್ಗ ಮಧ್ಯದಲ್ಲಿ ಭೀಮು ತಂದೆ ಶರಣಪ್ಪ ಹಾಗೂ ರಾಯಪ್ಪ ತಂದೆ ಮರಿಲಿಂಗಪ್ಪ ಇಬ್ಬರೂ ಮೃತ ಪಟ್ಟಿದ್ದು ಸದರಿ ಘಟನೆ ನಡೆದಾಗ ಅಂದಾಜು 2 ಪಿ.ಮ್ ಆಗಿರಬಹುದು. ಕಾರಣ ಲಾರಿ ನಂ ಕೆಎ-39-4328 ನೇದ್ದರ ಚಾಲಕ ಮಲ್ಲಪ್ಪ ತಂದೆ ಅಣ್ಣಪ್ಪ ಈತನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿನದಿಂದ ನಡೆಯಿಸಿ ಗುಂಡಗುರ್ತಿ ಬ್ರಿಡ್ಜನ ಬಲ ಮೇಲಿಂದ ಕೆಳಗೆ ಪಲ್ಟಿ ಮಾಡಿದ ಪರಿಣಾಮ ಭಾರಿ ರಕ್ತಗಾಯ ಹಾಗೂ ಗುಪ್ತಗಾಯ ಹೊಂದಿ ರಾಯಪ್ಪ ಹಾಗೂ ಭೀಮು ಸಾವಿಗೆ ಕಾರಣನಾದವನ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ಹೇಳಿಕೆ ಫಿರ್ಯಾದಿ  ಮೇಲಿಂದ  ಗುನ್ನೆ ದಾಖಲಾಗಿರುತ್ತದೆ. 

09 March 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಶರಣು ಗೌಡಗಾಂವ ಸಾ ಅವರಳ್ಳಿ ಹಾ.ವ. ಮಲ್ಲಾಬಾದ ರವರ ಗಂಡ ಮಲ್ಲಾಬಾದಕ್ಕೆ ಹೋಗಿ ಸಕ್ಕರೆ ತೆಗೆದುಕೊಂಡು ಬರುತ್ತೇನೆ ಅಂತ ಮಲ್ಲಾಬಾದ ಗ್ರಾಮದ ಮೈಹಿಬೂಬ ಲದಾಫ ಇವರ ಸೈಕಲ್ ಮೋಟಾರ ನಂ. ಕೆಎ-32 ಇಎಫ್-3411 ನೇದ್ದರ ಮೇಲೆ ಮಲ್ಲಾಬಾದಕ್ಕೆ ಹೋಗಿರುತ್ತಾನೆ ನಂತರ ಬೆಳಿಗ್ಗೆ 07:15 ಗಂಟೆ ಸುಮಾರಿಗೆ ಫಿರ್ಯಾದುದಾರರು ಕೆಲಸ ಮಾಡುವ ಹೊಲದ ಮಾಲೀಕರಾದ ತುಕಾರಾಮ ತಂದೆ ಯಲ್ಲಪ್ಪ ಬಾರೆಕರ ರವರು ಫೋನ್ ಮಾಡಿ ನಿನ್ನ ಗಂಡನಿಗೆ ಮಲ್ಲಾಬಾದ ಗ್ರಾಮದ ನೂತನ ಪ್ರೌಡ ಶಾಲೆಯ ಮುಂದೆ ಮಲ್ಲಾಬಾದ ರೇವೂರ ಮುಖ್ಯ ರಸ್ತೆಯ ಮೇಲೆ ಅಫಘಾತ ಆಗಿರುತ್ತದೆ ಅಂತ ತಿಳಿಸಿದ ಮೇಲೆ ಫಿರ್ಯಾದುದಾರರು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನಿಗೆ ಎಕ್ಸಿಡೆಂಟ್ ದಿಂದ ಮೃತ ಪಟ್ಟಿದ್ದು  ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ ಟಂ ಟಂ ಅಲ್ಲೆ ಇದ್ದು ಅದರ ನಂ. ಕೆಎ-32 ಎ-7768 ಅಂತ ಇರುತ್ತದೆ ಸದರಿ ಟಂ ಟಂ ಚಾಲಕ ತನ್ನ ವಶದಲ್ಲಿದ್ದ ಟಂ ಟಂ ನ್ನು ಅತೀ ವೇಗವಾಗಿ ಮತ್ತು ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ನನ್ನ ಗಂಡನಿಗೆ ಡಿಕ್ಕಿ ಪಡಿಸಿ ಸದರಿ ಟಂ ಟಂ  ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 08-03-2016ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಶ್ರೀ ಹಾಣಮಂತರಾಯ ತಂದೆ ಭೀಮರಾಯ ಬಿರಾದರ ಸಾ|| ವಡಗೇರಾ ತಾ|| ಜೇವರ್ಗಿ  ಇವರ ಮಗನಾದ ದೇವಿಂದ್ರಪ್ಪ ಇತನು ತನ್ನ ಮೋ.ಸೈ. ನಂ ಕೆ.ಎ 33 ಎಲ್ 9664 ನೇದ್ದರ ಮೇಲೆ ಅಫಜಲಪೂರ ತಾಲ್ಲೂಕಿನ ಕರಜಗಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಹೋಗಿ ತನ್ನ ಹಾಲ್ ಟಿಕೇಟ ತೆಗೆದುಕೊಂಡು ಬರುತ್ತನೆ ಅಂತ ಹೇಳಿ ನಮ್ಮ ಮನೆಯಿಂದ ಹೋಗಿರುತ್ತಾನೆ ಮಧ್ಯಾಹ್ನ ನಾನು ಮನೆಯಲ್ಲಿ ಇದ್ದಗ ನನ್ನ ಮಗನ ಮೋಬೈಲನಿಂದ ಯಾರೋ ಅಪರಿಚಿತ ವ್ಯಕ್ತಿ ಪೋನ ಮಾಡಿ ನಿಮ್ಮ ಮಗನಿಗೆ ಮತ್ತು ಅವನ ಹಿಂದೆ ಕುಳತಿದ್ದ ಭಾಗಣ್ಣ ತಂದೆ ಕೋಟೇಪ್ಪ ಚವರಗಸ್ತಿ ಸಾ|| ಸಿಂಧಗಿ ಇಬ್ಬರಿಗೂ ಅಫಜಲಪೂರ ತಾಲ್ಲೂಕಿನ ಕರಜಗಿ ಮಣ್ಣೂರ ರಸ್ತೆಗೆ ಇರುವ ಶಿವಬಾಳ ನಗರದ ಹತ್ತಿರ ರೋಡಿನಮೇಲೆ ಅಫಘಾತವಾಗಿರುತ್ತದೆ ನಿಮ್ಮ ಮಗ ನಡೆಸುತ್ತಿದ್ದ ಮೋಟಾರು ಸೈಕಲಗೆ ಕಮಾಂಡರ ಜೀಪ ನಂ. ಎಮ್.ಎಚ್ 13 ಎನ್ 650 ನೇದ್ದರ ಚಾಲಕ ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ ಈಗ ನಿಮ್ಮ ಮಗನನ್ನು ಮತ್ತು ಅವನ ಜೋತೆಗೆ ಇದ್ದ ಗಾಯಾಳು ಭಾಗಣ್ಣ ಇಬ್ಬರನ್ನು 108 ಅಂಬ್ಯುಲೇನ್ಸನಲ್ಲಿ ಇಂಡಿ ಕಡೆಗೆ ಕಳಿಸಿ ಕೊಡುತ್ತಿದ್ದೆವೆ ನೀವು ಇಂಡಿ ಪಟ್ಟಣಕ್ಕೆ ಹೋಗಿ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನಮ್ಮೂರಿನ ಶಂಕರ ಗೌಡ ಪೊಲೀಸ ಪಾಟೀಲ,ಅಣ್ಣಾರಾಯಗೌಡ ಸನ್ನತಿ,ಬಸವರಾಜ ಸಮಜೋಡಿ ಸಿದ್ರಾಮಪ್ಪ ಕಾಮಾ ಹಾಗೂ ಇನ್ನು ಇತರರು ಕೂಡಿಕೊಂಡು ಇಂಡಿ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗನಿಗೆ ನೋಡಲು ನನ್ನ ಮಗನು ಮೃತ ಪಟ್ಟದ್ದನು ನಂತರ ಅವನಿಗೆ ಆದ ಗಾಯಗಳನ್ನು ನೋಡಲು ಅವನ ಏದೆಯ ಬಲಭಾಗಕ್ಕೆ ಭಾರಿ ಓಳ ಪೆಟ್ಟು,ಬಲಭಾಗದ ಮೇಲಕಿಗೆ ಭಾರಿ ರಕ್ತಗಾಯ,ಎಡ ತಲೆಗೆ ರಕ್ತಗಾಯ ಹಾಗೂ ಬಲಗೈ ಮುಂಗೈ ಹತ್ತಿರ ,ಬಲ ಮೊಳಕಾಲು ಹತ್ತಿರ,ಏಡ ಮೊಳಕಾಲು ಹತ್ತಿರ ತರಚಿದ ರಕ್ತಗಾಯಗಳಾಗಿದ್ದವು ನಂತರ ನನ್ನ ಮಮಗನ ಜೋತೆಗೆ ಇದ್ದದ್ದ ಭಾಗಣ್ಣ ಚವರಗಸ್ತಿ ಇತನಿಗೆ ವಿಚಾರಿಸಲಾಗಿ ಅವನು ತಿಳಿಸಿದೆನೆಂದರೆ ನಾನೂ ಮತ್ತು ದೇವಿಂದ್ರಪ್ಪ ಇಬ್ಬರು ಕೋಡಿ ಮೋಟಾರು ಸೈಕಲ ಮೇಲೆ ಸಿಂಧಗಿ ಇಂದ ಇಂಡಿ ಮಣ್ಣೂರ ಮಾರ್ಗವಾಗಿ ಕರಜಗಿಗೆ ಬಂದು ಕಾಲೇಜಿನಲ್ಲಿ ಹಾಲಟಿಕೆಟ ಪಡೆದುಕೊಂಡು ಅದೇಮಾರ್ಗವಾಗಿ ಬರುತ್ತಿದ್ದಾಗ ಮಧ್ಯಾಹ್ನ 13:45ಗಂಟೆ ಸುಮಾರಿಗೆ ಶಿಬಾಳ ನಗರದ ಹತ್ತಿರ ಹೋಗುತ್ತಿದ್ದಗ ಎದುರು ಗಡೆಯಿಂದ ಕಮಾಂಡರ ಜೀಪ್ ನಂ. ಎಮ್.ಎಚ್ 13,ಎನ್ 650ನೇದ್ದರ ಚಾಲಕ ತನ್ನ ವಶದಲ್ಲಿದ್ದ ಜೀಪನ್ನು ಅತಿವೇಗವಾಗಿ ನೀಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಾವು ಬರುತ್ತಿದ್ದ ಮೋಟಾರು ಸೈಕಲಗೆ ಡಿಕ್ಕಿ ಪಡಿಸಿದನು ಡಿಕ್ಕಿ ಆದ ತಕ್ಷಣ ಅದರ ಚಾಲಕ ಸ್ಥಳದಲ್ಲೆ ಜೀಪನ್ನು ಬಿಟ್ಟು ಓಡಿ ಹೋದನು ನಂತರ ಅಲ್ಲಿ ನೇರೆದ ಜನರು ನಮ್ಮನ್ನು 108 ಅಂಬ್ಯುಲೇನ್ಸನಲ್ಲಿ ಹಾಕಿ ಕಳಿಸಿಕೊಟ್ಟರು ಮಾರ್ಗ ಮಧ್ಯ ಬರುತಿದ್ದಾಗ ದೇವಿಂದ್ರಪ್ಪನು ಮೃತ ಪಟ್ಟಿರುತ್ತಾನೆ ಅಂತ ತಿಳಿಸಿದನು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 March 2016

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸಂಜಯ  ತಂದೆ ಮಧುಕರ ದುಮಾಲೆ ಸಾ:ಚನ್ನವೀರ ನಗರ ಸುಲ್ತಾನಪೂರ ರೋಡ ಕಲಬುರಗಿ  ರವರು ದಿನಾಂಕ 06-03-16 ರಂದು ತಮ್ಮ  ತಾಯಿ ಕಮಲಾಬಾಯಿ ದುಮಾಲೆ ಇಬ್ಬರು ಕೂಡಿಕೊಂಡು ತನ್ನ ಬಜಾಜ ಡಿಸ್ಕವರಿ ಮೋಟಾರ ಸೈಕಲ ಕೆಎ 32 ಇಸಿ 2955 ನೇದ್ದರ ಮೇಲೆ ಅಂತಿಮ ಸಂಸ್ಕಾರ ಕುರಿತು ಬಬಲಾದ ಗ್ರಾಮಕ್ಕೆ ಹೋಗಿದ್ದು ಅಂತಿಮ ಸಂಸ್ಕಾರ ಮುಗಿಸಿಕೊಮಡು ಮರಳಿ ಕಲಬುರಗಿಗೆ ಮನೆಗೆ ಬರುತ್ತಿರುವಾಗ ಸದರ ನನ್ನ ಮೋಟಾರ ಸೈಕಲನ್ನು ನಾನು ನಡೆಯಿಸುತ್ತಿದ್ದು ನನ್ನ ತಾಯಿ ಕಮಲಾಬಾಯಿ ನನ್ನ ಹಿಂದುಗಡೆ ಕುಳಿತಿದ್ದಳು ಮಧ್ಯಾಹ್ನ ಹುಮನಾಬಾದ ರಿಂಗ ರೋಡ ಕಡೆಯಿಂದ ಸುಲ್ತಾನಪೂರ  ರಿಂಗ ರೋಡ ಕಡೆಗೆ ಬರುತ್ತಿರುವ ಲಂಗರ ಹನುಮನ ತಾಜ ನಗರ ಕ್ರಾಸ ಮುಂದೆ ಹೋಗುತ್ತಿರುವಾಗ ಅದೇ ವೇಳೆ ನಮ್ಮ ಎದುರುನಿಂದ ರಾಂಗ ಸೈಡದಿಂದ ಅಂದರೆ ಸುಲ್ತಾನಪೂರ ಕ್ರಾಸ ಕಡೆಯಿಂದ ಒಂದು ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು  ಬಹಳ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ನಮ್ಮ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದನು. ಇದರಿಂದ ನಾವು ಜೋರಾಗಿ ಕೆಳೆಗೆ ಬಿದ್ದೇವು. ಇದರಿಂದ ನನಗೆ ಎದೆಗೆ ಭುಜಕ್ಕೆ ಗುಪ್ತ ಪೆಟ್ಟ, ತರಚಿದ ಗಾಯ, ತಲೆಗೆ ಗುಪ್ತಪೆಟ್ಟು ಎಡಗಾಲು ಹಿಂಬಡಿಗೆ ರಕ್ತಗಾಯ, ಎಡಗೈಗೆ ತರಚಿದ ಬೆರಳುಗಳ ಮೇಲೆ ರಕ್ತಗಾಯ ಆಗಿದ್ದವು. ಮತ್ತು ನನ್ನ ತಾಯಿ ಕಮಲಾಬಾಯಿ ದುಮಾಲೆ ಇವಳಿಗೆ ತಲೆಯ  ಹಿಂದುಗಡೆ ಭಾರಿ ರಕ್ತಗಾಯವಾಗಿ ರಕ್ತ ಸ್ರಾವವಾಗಿರುತ್ತದೆ. ಮೂಗಿನಿಂದ ಬಾಯಿಂದ ರಕ್ತಸ್ರಾವಾಗಿರುತ್ತದೆ. ಎಡಗೈಗೆ ತರಚಿದ ಗಾಯವಾಗಿದ್ದು, ಆಗ  ಘಟನೆಯನ್ನು ನೋಡಿ ರೋಡಿಗೆ ಹೋಗುತ್ತಿದ್ದ ಹೆಸರು ಕೇಳಿ ಗೊತ್ತಾದ ಅರುಣಕುಮಾರ ತಲಾಟೆ ಮತ್ತು ರವಿ ಶಂಕರರಾವ ದುರವೆ ಇವರು ಬಂದು ನಮಗೆ ಸೈಡಿಗೆ ಕೂಡಿಸಿದರು. ನಮಗೆ ಡಿಕ್ಕಿ ಹೊಡೆದ ಮೋಟಾರ ಸೈಕಲ ನೋಡಲು  ಹಿರೋ ಸ್ಪೆಂಡರ ಪ್ಲಸ್ ಕೆಎ 32 ಇಕೆ 0987 ನೇದ್ದು ಇದ್ದು, ಅದರ ಚಾಲಕ ಮೋಟಾರ ಸೈಕಲನ್ನು ಅಲ್ಲೇ ಬಿಟ್ಟು ಓಡಿ ಹೋದನು. ಸದರ ಯುವಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ. ಅಷ್ಟರಲ್ಲಿ ಅಂಬುಲೈನ್ಸ ಬಂದಿದ್ದು ಆಗ ಅರುಣಕುಮಾರ ಮತ್ತು ರವಿ ದುರವೆ ನನಗೂ ಮತ್ತು ನನ್ನ ತಾಯಿಗೆ ಕೂಡಿಸಿಕೊಂಡು ಸರಕಾರಿ ಆಸ್ಪತ್ರೆಗೆ ತೋರಿಸಲು ವೈದ್ಯಾಧಿಕಾರಿಗಳು ನನ್ನ ತಾಯಿ ಕಮಲಾಬಾಯಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದ್ದರು ಅಂತಾ  ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.