POLICE BHAVAN KALABURAGI

POLICE BHAVAN KALABURAGI

11 February 2016

Kalaburagi District Reported Crimes

ಗೃಹಣಿಗೆ ಕಿರುಕಳ ನೇಡಿದ ಪ್ರಕರಣ :
ಸೇಡಂ ಠಾಣೆ : ಗಾಯಾಳು ಶ್ರೀಮತಿ ಜಯಶ್ರೀ ಇವಳಿಗೆ ವಿಚಾರಣೆ ಮಾಡಿದ್ದು ಸದರಿಯವಳು ಹೇಳಿಕೆ ಕೊಡಲು ಅರ್ಹಳಿರುವದಿಲ್ಲ ಅಂತಾ ವೈದ್ಯಾಧಿಕಾರಿಗಳಿಂದ ಧೃಡೀಕರಣ ಪಡೆದುಕೊಂಡು ನಂತರ ಅಲ್ಲಿ ಹಾಜರಿದ್ದ ಗಾಯಾಳುವಿನ ತಂದೆಯಾದ ಶ್ರೀ ನಾಗಣ್ಣ ತಂದೆ ವೀರಸಂಗಪ್ಪ ಬೇಲಕಟ್ಟಿ ಸಾ:ಸೇಡಂ ಈತನ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ತನ್ನ ಮಗಳಾದ ಜಯಶ್ರೀ ಇವಳ ಮದುವೆಯು 8-9 ವರ್ಷಗಳ ಹಿಂದೆ ತೇಲಕೂರ ಗ್ರಾಮದ ನಾಗೇಂದ್ರಪ್ಪ ಪೋಚಟ್ಟಿ ಇವನೊಂದಿಗೆ ಮಾಡಿಕೊಟ್ಟಿದ್ದು, ಅವರು ಹೊಟ್ಟೆಪಾಡಿಗಾಗಿ ಅಗ್ಗಿ ಬಸವೇಶ್ವರ ಕಾಲೊನಿಯಲ್ಲಿ ಬಂದು ವಾಸವಾಗಿದ್ದು , ನಂತರ ಸದರಿ ನಾಗೇಂದ್ರಪ್ಪನು ನನ್ನ ಮಗಳಿಗೆ ದಿನಾಲು ವಿನಾಕಾರಣ ಅವಾಚ್ಯವಾಗಿ ಬೈಯುವದು ಹೊಡೆಬಡೆ ಮಾಡುವದು, ನೀನು ಸರಿಯಾಗಿ ಅಡುಗೆ ಮಾಡಿಕೊಡುವದಿಲ್ಲ, ನೀನು ಇದ್ದು ಏನು ಮಾಡುತ್ತಿ ಸತ್ತು ಹೋಗು ಅಂತಾ ಹೇಳಿ ಮಾನಸಿಕ ಹಾಗು ದೈಹಿಕ ಹಿಂಸೆ ಕೊಡುತ್ತಿದ್ದನು. ನಾವು ಅವಳಿಗೆ ಮತ್ತು ಅವಳ ಗಂಡನಿಗೆ ಸರಿಯಾಗಿ ಇರುವ ಕುರಿತು ಬುದ್ದಿ ಹೇಳಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 06/02/2016 ರಂದು ಮುಂಜಾನೆ 10-30 ಗಂಟೆಗೆ ನನ್ನ ಮಗಳಾದ ಜಯಶ್ರೀ ಇವಳು ನಮ್ಮ ಮನೆಗೆ ಬಂದು ತನಗೆ ತನ್ನ ಗಂಡನು ಹೊಡೆ ಮಾಡುತ್ತಿದ್ದು ನನಗೆ ಗಂಡನಿಂದ ಸಾಕಾಗಿದೆ ಅಂತಾ ನಮ್ಮ ಮನೆಯ ಒಳಗೆ ಹೋಗಿ ಮನೆಯಲ್ಲಿದ್ದ ಸೀಮೆ ಎಣ್ಣೆ ಮೈಮೇಲೆ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಚೀರಾಡಹತ್ತಿದಳು. ಆಗ ನಾನು ಮತ್ತು ನನ್ನ ಹೆಂಡತಿ ಮೈಮೇಲೆ ನೀರು ಹಾಕಿ ಬೆಂಕಿ ಆರಿಸಿದ್ದೇವೆ. ನಂತರ ಅವಳಿಗೆ ನಾವು ಸೇಡಂ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಮಗಳು ಉಪಚಾರ ಪಡೆಯುತ್ತಿದ್ದಾಳೆ. ನಾಗೇಂದ್ರಪ್ಪ ತಂದೆ ದೇವೆಂದ್ರಪ್ಪ ಪೋಚಟ್ಟಿ ಸಾ:ತೇಲಕೂರ ಹಾ:ವ: ಅಗ್ಗಿ ಬಸವೇಶ್ವರ ಕಾಲೊನಿ ಸೇಡಂ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ನೀಡಿದ್ದು ಆ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದಲ್ಲಿಯ ಗಾಯಾಳು ಮೈಸುಟ್ಟುಕೊಂಡಿದ್ದ ಜಯಶ್ರೀ ಗಂಡ ನಾಗೇಂದ್ರಪ್ಪ ಪೊಚಟ್ಟಿ, ಇವಳು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಉಪಚಾರ ಫಲಕಾರಿಯಾಗದೇ ದಿನಾಂಕ 11-02-2016 ರಂದು ಮೃತಪಟ್ಟಿರುತಯ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಸಂತರಾವ ತಂದೆ ಶ್ರೀನಿವಾಸರಾವ ಕುಲಕರ್ಣಿ ಸಾ|| ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಇವರು ದಿನಾಂಕ 07-02-2016 ರಂದು ಮುಂಜಾನೆ 6.30 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿ ನಾನು ಮತ್ತು ನನ್ನ ಹೆಂಡತಿ ಶೀಲಾ ಕುಲಕರ್ಣಿ ಇಬ್ಬರೂ ಪಂಡರಾಪೂರ ದರ್ಶನ ಕುರಿತು ಹೋಗಿ ದರ್ಶನ ಮಾಡಿಕೊಂಡು ಮರಳಿ ದಿನಾಂಕ 08-02-2016 ರಂದು ರಾತ್ರಿ 9.15 ಗಂಟೆಗೆ ಬಂದಿರುತ್ತೇವೆ ಮನೆಗೆ ಬಂದು ಬಾಗೀಲ ಕೀಲಿ ತೆರೆದು ಬಾಗೀಲು ತೆರೆಯಲು ಹೋದಾಗ ಬಾಗೀಲು ತೆರೆಯಲಿಲ್ಲಾ ಹಿಂದಿನ ಬಾಗೀಲು ತೆರೆಯಬೇಕು ಅಂತಾ ಹೋದಾಗ ಹಿಂದಿನ ಬಾಗೀಲು ತೆರೆದಿದ್ದು ಇದ್ದು ನಾವು ಒಳಗೆ ಹೋಗಿ ನೋಡಲು ಮನೆಯಲ್ಲಿದ್ದ  ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿ ಆಗಿ ಬಿದ್ದಿದವು ನಾನು ನಮ್ಮ ಅಲಮಾರದಲ್ಲಿದ್ದ ಸಾಮಾನುಗಳು ನೋಡಲು 40 ಗ್ರಾಂ ಬಂಗಾರದ 2 ಪಾಟಲಿಗಳು, 50 ಗ್ರಾಂ ಬಂಗಾರದ ಬಿಲವಾರ, 35 ಗ್ರಾಂ 3 ಎಳೆಯ ಸರ 35 ಗ್ರಾಂ ಮಂಗಳಸೂತ್ರ, 05 ಗ್ರಾಂ ಮುತ್ತಿನ ಸರ 03 ಗ್ರಾಂ ಗಟ್ಟಿ ಬಂಗಾರ ಹೀಗೆ ಒಟ್ಟು 168 ಗ್ರಾಂ ಬಂಗಾರದ ಆಭರಣಗಳು ಅವುಗಳ ಅ.ಕಿ.456000/-ರೂ & ನಗದು ಹಣ 38000/-ರೂ ಇರಲಿಲ್ಲ ಇನ್ನೊಂದು ರೂಮೀನಲ್ಲಿ ಇಟ್ಟಿದ್ದ ಅಂದಾಜು 15 ತೊಲೆಯ ಬಂಗಾರದ ಆಭರಣಗಳು & 1.1/2 (ಒಂದುವರೆ ಕೆ.ಜಿ) ಬೆಳ್ಳಿಯ ಸಾಮಾಗ್ರಿಗಳು ಇರುತ್ತವೆ. ಕಾರಣ ಅಲಮಾರದಲ್ಲಿದ್ದ 168 ಗ್ರಾಂ ಬಂಗಾರದ ಆಭರಣಗಳು ಅವುಗಳ ಅ.ಕಿ.456000/-ರೂ ಹಾಗೂ ನಗದು ಹಣ 38000/-ರೂ ಯಾರೋ ಕಳ್ಳರು ನಮ್ಮ ಮನೆಯ ವೆಂಟಿಲಿಟರ ಮುರಿದು ಒಳಗೆ ಪ್ರವೇಶಮಾಡಿ ಕಳುವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 February 2016

Kalaburagi District Reported Crimes

ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಸುಮಾರು 5-6 ವರ್ಷಗಳ ಹಿಂದೆ ಮಾಲಗತ್ತಿ ಗ್ರಾಮದ  ಬಾಗಪ್ಪಾ ಇವರ ಮಗನಾದ ಮಲ್ಲಿಕಾರ್ಜುನ ಇವನೊಂದಿಗೆ  ಮದುವೆ ಮಾಡಿಕೊಟ್ಟಿದ್ದು ಸದ್ಯ ನನ್ನ ಮಗಳಿಗೆ ಮೂರು ವರ್ಷದ ಹೆಣ್ಣು ಮಗಳು ಇರುತ್ತಾಳೆ.  ಹೀಗಿದ್ದು  ಮಾಲಗತ್ತಿಯಲ್ಲಿನ  ಶರಣಪ್ಪಾ  ಕೋನಳ್ಳಿ  ಇತನು  ನನ್ನ  ಮಗಳೊಂದಿಗೆ  ಮೈ  ಕೈ ಮುಟ್ಟಿ  ಮಾತನಾಡುವದು,  ಚುಡಾಯಿಸುವದು  ಮಾಡುತ್ತಿದ್ದನು  ಈ ಬಗ್ಗೆ  ನನ್ನ  ಅಳಿಯ  ಮತ್ತು  ಅವರ  ಮನೆಯವರು  ಹಾಗೂ  ನಾನು ಶರಣಪ್ಪನಿಗೆ  ನನ್ನ ಮಗಳಿಗೆ  ಮದುವೆ ಆಗಿ ಒಂದು  ಮಗು  ಇದೆ ಈ ರೀತಿ  ಮಾಡಿದರೆ ಅವಳ ಸಂಸಾರ  ಹಾಳಾಗುತ್ತದೆ ಅಂತಾ  ಹೇಳಿದರೂ  ಕೂಡ  ಆತನು  ಕೇಳುತ್ತಿರಲಿಲ್ಲಾ ತನ್ನ ಚಾಳಿ ಬಿಟ್ಟಿರಲಿಲ್ಲಾ. ಹೀಗಿದ್ದು   ದಿನಾಂಕ 06/02/2016 ರಂದು ಸಾಯಂಕಾಲ ನನ್ನ ಅಳಿಯನಾದ ಮಲ್ಲಿಕಾರ್ಜುನ ಮಾಲಗತ್ತಿ ಇತನು ಪೋನ ಮಾಡಿ ತಿಳಿಸಿದ್ದೆನೆಂದರೆ, ನಿನ್ನ ಮಗನ್ನು ನಮ್ಮೂರ ಶರಣಪ್ಪಾ ತಂದೆ ಸಾಬಣ್ಣಾ ಕೊನಳ್ಳಿ ಇತನು ಮದ್ಯಾನ್ನ ವೇಳೆ ಮನೆಯಲ್ಲಿ ಯಾರು ಇಲ್ಲದಾಗ ಇವಳಿಗೆ ಹೆದರಿಸಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ. ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಅಕ್ಕ ಸುಮಂಗಲಾ ನನ್ನ ಮಾವ ಬಸವರಾಜ ಎಲ್ಲರೂ ಕೂಡಿಕೊಂಡು ಮಾಲಗತ್ತಿಗೆ ಬಂದು ಊರಲ್ಲಿ ವಿಚಾರಿಸಲಾಗಿ ನನ್ನ ದೊಡ್ಡ ಅಳಿಯ ಸೂರ್ಯಕಾಂತ ಇತನು ತಿಳಿಸಿದ್ದೆನೆಂದರೆ, ನಮ್ಮೂರ ಶರಣಪ್ಪಾ ಇತನು ಪೂಜಾ ಇವಳಿಗೆ ಇಂದು ಮದ್ಯಾನ್ನ 02-00 ಗಂಟೆಯ ಸುಮಾರಿಗೆ ನಾನು ಹನುಮಾನ ದೇವರ ಗುಡಿಯ ಹತ್ತಿರ ಕುಳಿತಾಗ ಶರಣಪ್ಪಾ ಕೊನಳಿ ಇತನು ಕರೆದುಕೊಂಡು ಹೋಗುವುದು ನಾನು ನೋಡಿರುತ್ತೇನೆ ಅಂತಾ ತಿಳಿಸಿದಾಗ.  ನಾವೆಲ್ಲರು  ಕೂಡಿ ಅಂದಿನಿಂದ  ವಾಡಿ, ಚಿತ್ತಾಪೂರ,  ದಂಡೋತಿ,  ಟೆಂಗಳಿ,  ಮಾಡಬೂಳ,  ಮತ್ತು ಇತರೆ ಕಡೆ ಹುಡಿಕಾಡಿದರೂ  ಸಿಕ್ಕಿರುವದಿಲ್ಲಾ.   ನನ್ನ ಮಗಳಿಗೆ  ಶರಣಪ್ಪಾ  ಕೋನಳ್ಳಿ  ಇತನು ಹೆದರಿಸಿ  ಪುಸಲಾಯಿಸಿ  ಹಠಸಂಬೋಗ  ಮಾಡುವ  ಉದ್ದೇಶದಿಂದ ಅಪಹರಿಸಿಕೊಂಡು  ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ-09/02/2016 ರಂದು ರಾತ್ರಿ 7-30 ಪಿ.ಎಮ್ ದ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಮಹಮ್ಮದ ಇಸ್ಲಾಂ ಮುತ್ತಗಿ ಇತನ ಹತ್ತಿರ ವಿದ್ದ ಕೆಎ-32 ಇಇ-9607 ನೇದ್ದು ಮೋಟಾರ ಸೈಕಲ ತೆಗೆದುಕೊಂಡು ಖಾಸಗಿ ಕೆಲಸದ ನಿಮಿತ್ಯ ಕಲಬುರಗಿಗೆ ಹೋಗಿ ಬರೋಣ ಅಂತಾ ನಾವಿಬ್ಬರೂ ಕೊಡಿಕೊಂಡು ಸದರ ಮೋ.ಸೈಕಲ ಮೇಲೆ ಹೊರಟು ಸದರ ಮೋಟಾರ ಸೈಕಲ ನಾನು ಚಲಾಯಿಸುತ್ತಿದ್ದು ಮಹಮ್ಮದ ಇಸ್ಲಾಂ ಹಿಂದುಗಡೆ ಕುಳಿತುಕೊಂಡಿದ್ದು ನಮ್ಮಂತೆ  ನಮ್ಮ ಗ್ರಾಮದ ಮಹಮ್ಮದ ಇಸಾಕ ಹಾಗೂ ವಕಿಲ್ ತಂದೆ ರಸೂಲಸಾಬ ಇವರಿಬ್ಬರೂ ತಮ್ಮ ಮೋಟಾರ ಸೈಕಲ ಮೇಲೆ ನಮ್ಮ ಹಿಂದುಗಡೆ ಕಲಬುರಗಿಗೆ ಹೊರಟ್ಟಿದ್ದು. ನಾವುಗಳು ಮುಗುಟಾ ಕ್ರಾಸ್ ದಾಟಿ ವೇರ ಹೌಸ ಹತ್ತಿರ ರೊಡಿನ ಮೇಲೆ ಹೋಗುತ್ತಿರುವಾಗ ನನ್ನ ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಯಾವುದೋ ಒಂದು ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಕೊಂಡು ಬಂದವನೆ ನಮ್ಮ ಮೋಟಾರ ಸೈಕಲಗೆ ಸೈಡಿನಿಂದ ಡಿಕ್ಕಿ ಪಡಿಸಿದ ಪರಿಣಾಮ ನಾವಿಬ್ಬರೂ ಮೋ.ಸೈಕಲ ಸಮೇತ ರೊಡಿನ ಪಕ್ಕದಲ್ಲಿ ಬಿದ್ದೆವು ನಮ್ಮ ಹಿಂದುಗಡೆ ಬರುತ್ತಿದ್ದ ನಮ್ಮ ಗ್ರಾಮದ ಮಹಮ್ಮದ ಇಸಾಕ ಹಾಗೂ ವಕಿಲ್ ಇವರಿಬ್ಬರೂ ಬಂದು ನಮಗೆ ಎಬ್ಬಿಸಿದರು. ನನಗೆ ಬಲಗೈ ಹಾಗೂ ಬಲಗಾಲಿಗೆ ಭಾರಿ ರಕ್ತಗಾಯವಾಗಿ ಮುರಿದಂತಾಗಿರುತ್ತದೆ. ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು. ನಂತರ ಮಹಮ್ಮದ ಇಸ್ಲಾಂ ಇತನಿಗೆ ನೋಡಲಾಗಿ ಬಲಗಾಲು ಹಾಗೂ ಬೆರಳು ಹತ್ತಿರ ಭಾರಿ ರಕ್ತಗಾಯವಾಗಿ ಬಲಗಾಲು ಮುರಿದಂತಾಗಿರುತ್ತದೆ. ಹಾಗೂ ಗುಪ್ತಗಾಯ ಹಾಗೂ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲ್ಲಿಲ್ಲಾ ನಂತರ ನಮ್ಮ ಗ್ರಾಮದವರು ಜಿ.ವ್ಹಿ.ಆರ್. ಅಂಬಿಲೈನ್ಸಗೆ ಪೋನ್ ಮಾಡಿ ಕರೆಯಿಸಿ ನನಗೆ ಹಾಗೂ ಮಹಮ್ಮದ ಇಸ್ಲಾಂ ಇಬ್ಬರಿಗೆ ಹಾಕಿಕೊಂಡು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಸದರಿ ಮಹಮ್ಮದ ಇಸ್ಲಾಂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಉಮರ ತಂದೆ ಇಲಿಯಾಸ ನಾಲವಾರ ಸಾ : ದಂಡೋತಿ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲ;ಇಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 28/29/01/2016 ರಂದು ಯಾರೋ ಅಪರಿಚಿತ ಕಳ್ಳರು ಸೊಂತ ಗ್ರಾಮದ ಶ್ರೀ ಚಂದ್ರಶೇಖರ ಸ್ಮಾರಕ ಸರ್ಕಾರಿ ¥Ëæಢ ಶಾಲೆಯ ಕೊಣೆಯಲ್ಲಿ ಇಟ್ಟ 8 ಬ್ಯಾಟರಿಗಳು ಅ.ಕಿ. 8ರಿಂದ 10 ಸಾವಿರ ರೋಪಾಯಿ ಬೆಲೆಬಾಳುವ ಬ್ಯಾಟರಿಗಳನ್ನು ರಾತ್ರಿ ವೇಳೆಯಲ್ಲಿ ಶಾಲೆಯ ಕೊಣೆಯ ಬೀಗ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ದಿನಾಂಕ 09-02-2016 ರಂದು ಹಾವಳಗಾ ಗ್ರಾಮಕ್ಕೆ ಹೊಂದಿಕೊಂಡಿರುವ ಭಿಮಾನದಿಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿದರಾಯ ಭೋಸಗಿ  ಪಿ.ಎಸ್.ಐ  ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ರೇಣುಕಾ ಸಕ್ಕರೆ ಕಾರ್ಖಾನೆ ಹತ್ತಿರ ಹಾವಳಗಾ ರೋಡಿಗೆ ಹೋಗುತಿದ್ದಾಗ   ನಮ್ಮ ಎದುರಿನಿಂದ ಎರಡು ಟಿಪ್ಪರಗಳು ಬರುತಿದ್ದು, ಸದರಿ ಟಿಪ್ಪರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟಿಪ್ಪರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಎರಡು ಟಿಪ್ಪರಗಳಿದ್ದು   ಚೆಕ್ ಮಾಡಿ ನೋಡಲು ಸದರಿ ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1) ಟಾಟಾ ಕಂಪನಿಯ ಟಿಪ್ಪರ ನಂ ಕೆಎ-28 ಸಿ-1916 ಅ.ಕಿ 5,00,000/-ರೂ 2) ಟಾಟಾ ಕಂಪನಿಯ ಟಿಪ್ಪರ ನಂ ಕೆಎ-28 ಸಿ-1917 ಅ.ಕಿ 5,00,000/-ರೂ ಈ ರೀತಿ ಇರುತ್ತವೆ. ಸದರಿ ಟಿಪ್ಪರಗಳಲ್ಲಿನ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಎರಡು ಟಿಪ್ಪರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲ;ಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  

09 February 2016

Kalaburagi District Press Note

ಪತ್ರಿಕಾ ಪ್ರಕಟಣೆ
            ಕಲಬುರಗಿ ಮಕ್ಕಳ ವಿಶೇಷ  ಪೊಲೀಸ್ ಘಟಕದ ವತಿಯಿಂದ ಆಪರೇಷನ್ ಸ್ಮಾಯಿಲ್-2 ರ ಭಾಗವಾಗಿ ಕಾಣೆಯಾದ ಮಕ್ಕಳ, ಬಾಲಕಾರ್ಮಿಕ, ಭಿಕ್ಷಾಟಣೆ ಒಳಗಾದಂತಹ ಮಕ್ಕಳ ಪತ್ತೆಯ ಕಾರ್ಯಾಚರಣೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕಲಬುರಗಿ ಮತ್ತು ಅಪರ ಪೊಲೀಸ್ ಅಧೀಕ್ಷಕರು, ಕಲಬುರಗಿರವರ ನಿರ್ದೇಶನದ ಮೇರೆಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪೊಲೀಸ್ ಇನ್ಸಪೇಕ್ಟರ ರವರಾದ ಶ್ರೀ ಕೆ.ಎಮ್ ಸತೀಶ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ಶ್ರೀ ಭರತೇಶ ಶೀಲವಂತರ ಹಾಗೂ ಶ್ರೀ ಬಸವರಾಜ ಎ.ಎಸ್.ಐ  ರವರ ನೇತೃತ್ವದಲ್ಲಿ  ಮಕ್ಕಳ ಸಹಾಯವಾಣಿ, ಮತ್ತು ಡಾನ್ ಬಾಸ್ಕೋ ಸಂಸ್ಥೆ ಮತ್ತು ಇತರೆ ಸರ್ಕಾರೇತರ ಸ್ವಂಯ ಸಂಸ್ಥೆಗಳು ಮತ್ತು ಮಾರ್ಗದರ್ಶಿ ಸಂಸ್ಥೆ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಶ್ರೀ ವಿಠಲ್ ಚೀಕಣಿ ಹಾಗೂ ಶ್ರೀ ಆನಂದ ರಾಜ, ಸಹಾಯಕ ಶಿಶು ಅಭೀವೃದ್ದಿ ಯೋಜನಾ ಅಧಿಕಾರಿಯವರಾದ ಶ್ರೀಮತಿ. ಪಾಪಮ್ಮ ಹಾಬಳಕರ ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ಇಂದು ದಿನಾಂಕ: 09/02/2016 ರಂದು ಕಲಬುರಗಿ ನಗರದ ಹೊರ ವಲಯದ ಸುಲ್ತಾನಪುರ ರಸ್ತೆಯಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ, ಕಲಬುರಗಿ ನಗರದ ಹುಮನಾಬಾದ ರಿಂಗ್‌ ರೋಡ ಕ್ರಾಸ್‌ದ ಬಳಿ ಗ್ಯಾರೇಜ ಮತ್ತು ಅಂಗಡಿಯಲ್ಲಿ ಕೆಲಸ ಮಾಡುವಂತಹ ಒಟ್ಟು 15 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಸ್ವಾಧಿನಕ್ಕೆ ಪಡೆದುಕೊಂಡು ಬಾಲಕರ ಬಾಲ ಮಂದಿರ ಮತ್ತು ಬಾಲಕೀಯರ ಬಾಲ ಮಂದಿರ ಕಲಬುರಗಿರವರಲ್ಲಿ ಮುಂದಿನ ಪುರ್ನವಸತಿಗಾಗಿ ಒಪ್ಪಿಸಲಾಯಿತು. ಈ ಯೋಜನೆಯ ವಿವರವನ್ನು ಸಹ ಸಾರ್ವಜನಿಕರಿಗೆ ಮನವರಿಕೆ ಆಗುವಂತೆ ತಿಳುವಳಿಕೆ ನೀಡಲಾಯಿತು.
          ಕಾಣೆಯಾದ ಅನೇಕ ಮಕ್ಕಳು ಭಿಕ್ಷೆಯಾಟನೆಯಲ್ಲಿ ಹಾಗೂ ಬಾಲ ಕಾರ್ಮಿಕತೆಯಲ್ಲಿ ತೊಡಗಿದ್ದು, ಆ ಮಕ್ಕಳನ್ನು ಪತ್ತೆ ಹಚ್ಚಿ ಮತ್ತೆ ಮನೆಗೆ ತಲುಪಿಸಿ ಪಾಲಕರ ಮುಖದಲ್ಲಿ ನಗೇ ಮೂಡಿಸುವ ಹಾಗೂ ಮಕ್ಕಳ ರಕ್ಷಣೆಗಾಗಿ ಸದರಿ ಕಾರ್ಯಾಚಾರಣೆಯನ್ನು ಕೈಕೊಳ್ಳಲಾಗಿದೆ ಎಂದು ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪೊಲೀಸ್ ನಿರೀಕ್ಷಕರು ಶ್ರೀ ಸತೀಸ ಕೆ,ಎಮ್.  ರವರು ತಿಳಿಸಿದ್ದಾರೆ.
            ಯಾವುದೇ ಮಗು ಪತ್ತೆಯಾದಲ್ಲಿ ಅಥವಾ 18 ವರ್ಷದ ಒಳಗಿನ ಯಾವುದೇ ಮಗು ತೊಂದರೆಗೆ ಒಳಗಾದಲ್ಲಿ ಉಚಿತ ಮಕ್ಕಳ ಸಹಾಯವಾಣಿ 1098, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ತಿಳಿಸಲು ಕೋರಿರುತ್ತಾರೆ.
            ಈ ಕಾರ್ಯಚಾರಣೆಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಶ್ರೀ ಮಲ್ಲಪ್ಪ ರಾಚೂರು,  ಶ್ರೀ ಬಸವರಾಜು ಟೆಂಗಳಿ, ಕುಮಾರ ರಾಠೋಡ, ಕಾಣೆಯಾದ ಮಕ್ಕಳ ಬ್ಯೂರೋದ ಮಾಪಣ್ಣ, ಜ್ಯೋತಿ, ಡಾನ ಬಾಸ್ಕೋ ನಿರ್ದೇಶಕರಾದ ಫಾದರ ಪ್ರಸಾದ, ಹಾಗೂ ಸಂತೋಷ ಮತ್ತು ಕಾರ್ಮೀಕ ನಿರೀಕ್ಷಕರು ಹಾಜಾರಿದ್ದರು.