POLICE BHAVAN KALABURAGI

POLICE BHAVAN KALABURAGI

27 February 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹ್ಮದ ಅಮೇರ್ ಸೊಹೆಲ್ ತಂದೆ ಅನ್ವರ್ ಶರೀಫ್ ಸಾಃ ಮನೆ ನಂ. 121, ಗಂಜ್ ಕಾಲೋನಿ ಕಲಬುರಗಿ ರವರು ದಿನಾಂಕಃ 23/02/2015 ರಂದು ಕೆ.ಎನ್.ಝೆಡ್ ಫಂಕ್ಷನ್ ಹಾಲ್ ಹತ್ತಿರ ಇರುವ ರಿಂಗ್ ರೋಡದ ಮೇಲೆ ಇಂಡಿಕಾ ಕಾರ ನಂ. ಕೆ.ಎ 36 ಎಂ. 5816 ನೇದ್ದರ ಚಾಲಕನು ತನ್ನ ಕಾರನ್ನು ಹುಮನಾಬಾದ ರಿಂಗ್ ರೋಡ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ. ಕೆ.ಎ 37 ಎಲ್ 4086 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನನಗೆ ತಲೆಗೆ ರಕ್ತಗಾಯ, ಎಡಗಡೆ ಮಗ್ಗಲಿಗೆ ಮತ್ತು ಹೊಟ್ಟೆಯ ಕೆಳಗೆ ಗುಪ್ತಗಾಯಗಳಾಗಿದ್ದು ನನ್ನ ತಂದೆಯಾದ ಅನ್ವರ ಶರೀಫ್ ಇವರಿಗೆ ತಲೆಗೆ ಭಾರಿ ರಕ್ತಗಾಯ, ಎರಡು ಮುಂಗೈಗೆ, ಎರಡು ಕಾಲುಗಳ ಮೊಳಕಾಲಿಗೆ ಹಾಗು ಪಾದಗಳಿಗೆ ತರಚಿದ ರಕ್ತಗಾಯಗಳಾಗಿದ್ದು ನನ್ನ ತಂದೆಯವರು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದರು. ನಮಗೆ ಅಪಘಾತ ಪಡಿಸಿದ ಕಾರ ಚಾಲಕನು ಅಪಘಾತ ಪಡಿಸಿದ ನಂತರ ಕಾರನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾರೆ. ದಿನಾಂಕಃ 26/02/2015 ರಂದು ಮದ್ಯಾಹ್ನ 12:30 ಪಿ.ಎಂ. ಕ್ಕೆ ವಾತ್ಸಲ್ಯ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಹೊಂದುತ್ತಾ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸೇಡಂ ಠಾಣೆ : ದಿನಾಂಕ 25-02-2015 ರಂದು ನನ್ನ ಅಣ್ಣನ ಮಗನಾದ ಮಹಾನಂದ ಇತನು ತನ್ನ ಗೆಳೆಯನಾದ ಭೀಮಾಶಂಕರ ವಡ್ಡರ ಇತನೊಂದಿಗೆ ಸೇಡಂಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯ ಮುಂದೆ ಇದ್ದ ತನ್ನ ಮೊ.ಸೈ ನಂ-KA32-ED0712 ನೇದ್ದನ್ನು ತೆಗೆದುಕೊಂಡು ಹೋಗಿದ್ದು ನಂತರ ನನಗೆ ನಮ್ಮೂರ ಮಶಾಕಸಾಬ ಫೋನ ಮಾಡಿ ತಿಳಿಸಿದ್ದೇನೆಂದರೆ, ಮಹಾನಂದ ತನ್ನ ಮೋಟಾರು ಸೈಕಲ್ ಮೇಲೆ ಭೀಮಾಶಂಕರ ವಡ್ಡರ ಇತನನ್ನು ಕೂಡಿಕೊಂಡು ಸೇಡಂದಿಂದ ಬಟಗೆರಾಗೆ ಬರುತ್ತಿರುವಾಗ ವಿ.ಸಿ.ಎಫ್. ಕಂಪನಿಯ ಕಡೆಯಿಂದ ಲಾರಿ ನಂ-MH12HD4724 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಾಲಾಯಿಸಿಕೊಂಡು ಬಂದು ಮಹಾನಂದ ಇತನ ಮೊಟಾರು ಸೈಕಲ ನಂ- KA32-ED0712 ನೇದ್ದಕ್ಕೆ ಡಿಕ್ಕಿ ಪಡೆಯಿಸಿದ್ದರಿಂದ ಮಹಾನಂದನ ತಲೆ ಭಾರಿ ರಕ್ತಗಾಯವಾಗಿ ಮೆದಳು ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಜೊತೆಯಲ್ಲಿದ್ದ ಭೀಮಾಶಂಕರ ಇತನಿಗೆ ತಲೆಗೆ ಭಾರಿ ರಕ್ತಗಾಯ, ಹಣೆಗೆ ರಕ್ತಗಾಯ ಮತ್ತು ಬಲಭುಜಕ್ಕೆ ರಕ್ತಗಾಯವಾಗಿರುತ್ತದೆ. ಅಪಘಾತಪಡಿಸಿದ ಲಾರಿ ಚಾಲಕ ಓಡಿ ಹೋಗಿರುತ್ತಾನೆ, ಅಂತಾ ತಿಸಿರುತ್ತಾರೆ ಅಂತಾ  ಬಸ್ಸಯ್ಯಸ್ವಾಮಿ ತಂದೆ ಅನ್ನದಾನಯ್ಯಸ್ವಾಮಿ ಹಿರೆಮಠ, ಸಾ:ಬಟಗೆರಾ( (ಕೆ) ಗೇಟ್, ತಾ:ಸೇಡಂ. ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :

ಜೇವರ್ಗಿ ಠಾಣೆ : ಶ್ರೀ ಸೊಮಲಿಂಗಪ್ಪ ಬಿರಾದಾರ ಪಿ.ಡಿ.ಓ ಹರವಾಳ ಇವರು ಹರವಾಳ ಗ್ರಾಮದ ನಿವಾಸಿಯಾದ ಮಲ್ಲಿಕಾರ್ಜುನ ಅಂದಾ ಇವರಿಗೆ 13 ನೇ ಹಣಕಾಸಿನ ಯೋಜನೇಯ ಅಡಿಯಲ್ಲಿ ನಿರ್ವಹಣೆ ಮತ್ತು ನೈರ್ಮಲ್ಯ ಕಾಮಗಾರಿ ಅಡಿಯಲ್ಲಿ ಜೇವರ್ಗಿ ಪಟ್ಟಣದ ಪ್ರಗತಿ ಕ್ರಿಷ್ಣಾ ಗ್ರಾಮೀಣ ಬ್ಯಾಂಕ್ ಖಾತೆ ಸಂಖ್ಯೆ 74001969745 ನೇದ್ದರ ಚೆಕ್‌ ಸಂಖ್ಯೆ 775892 ನೇದ್ದರಲ್ಲಿ ಒಟ್ಟು 14.800/- ರೂ ಗಳ ಚೆಕ್‌ನ್ನು ನೀಡಿದ್ದು ಸದರಿ ಮಲ್ಲಿಕಾರ್ಜುನ ಅಂದಾ ಈತನು ಪ್ರಗತಿ ಕ್ರಿಷ್ಣಾ ಗ್ರಾಮೀಣ ಬ್ಯಾಂಕ್ ಸಿಬ್ಬಂದಿರವರೊಂದಿಗೆ ಸೇರಿಕೊಂಡು ಚೆಕ್‌ ಸಂಖ್ಯೆ 775892 ನೇದ್ದರಲ್ಲಿ ಮೊತ್ತ ಮತ್ತು ದಿನಾಂಕವನ್ನು ತಿದ್ದುಪಡಿ ಮಾಡಿ ಒಟ್ಟು 1.14.800/- ರೂಪಾಯಿಯನ್ನು ದಿನಾಂಕ 27.05.2014 ರಂದು ಸದರಿ ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಹರವಾಳ ಗ್ರಾಮ ಪಂಚಾಯತಿಗೆ ಮತ್ತು ಸರ್ಕಾರಕ್ಕೆ ಮೋಸ, ವಂಚನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 February 2015

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಭಾಗಮ್ಮ ಗಂಡ ಬಂಢೆರಾವ ಭೀಮಜಿ ಸಾ: ಬಿದ್ದಾಪೂರ ಕಾಲೊನಿ ಕಲಬುರಗಿ ಇವರ ಮಗನಾದ ಬಸವರಾಜ ಇತನು ಕಾಣೆಯಾದ ಬಗ್ಗೆ ದೂರು ನೀಡಿದ್ದು ಅಲ್ಲದೇ ನನ್ನ ಮಗನಾದ ಬಸವರಾಜ ಇತನು ಪ್ರೀತಿಸಿ ಕವಿತಾ ಗಂಡ. ದಿ:ಗೋಪಾಲರಾವ ಫಾಲ್ಕೆ ಇವಳೊಂದಿಗೆ ದಿನಾಂಕ 15/10/05 ರಂದು ಮದುವೆಯಾಗಿದ್ದು, ನಂತರ ಅವಳ ಗಂಡ ಅಪಘಾತದ ಕೇಸಿನ ಸಂಬಂಧ ಮಾಹಾಂತೇಶ ದೇಸಾಯಿ ವಕೀಲರಿಗೆ ಕೇಸು ಕೊಟ್ಟಿದ್ದು, ಹಾಗೂ ಇತರರು ಕವಿತಾಳೊಂದಿಗೆ ಅನೈತಿಕ ಸಂಬಂಧ ಹೊಂದಿರುವೀ ಅಂತಾ ಅವಳೊಂದಿಗೆ ಜಗಳಾ ಮಾಡುತ್ತಿರುವುದರಿಂದ ಅದೇ ವೈಷಮ್ಯ ಹೊಂದಿ, ದಿನಾಂಕ  23/02/15 ರಂದು  ಅನಿತಾ ಭಂಡಾರಿ ಇವಳಿಂದ  ತಿಳಿದು ಬಂದಿದ್ದೆನೆಂದೆರೆ, ಫಿರ್ಯಾದಿದಾರಳ ಮಗ ಬಸವರಾಜನಿಗೆ ದಿನಾಂಕ 27/05/2010 ರಂದು 43 ದಿವಸಗಳವರೆಗೆ ವೃತ ಮಾಡಿ ಮನೆಯಿಂದ ಉಪಳಾಂವ ಗುಡ್ಡದ ಅಮ್ಮನಾದ ಸರಸ್ವತಿ ಇವರ ಮಠಕ್ಕೆ ಹೋಗುವಾಗ ಬಸವರಾಜ ಮತ್ತು ಈರಣ್ಣಾ ಮಾಲಿಪಾಟೀಲ್ ಇಬ್ಬರೂ ಕೂಡಿಕೊಂಡು ಒಂದು ಅಟೋ ರಿಕ್ಷಾದಲ್ಲಿ ಹೋಗಿದ್ದು, ಕವಿತಾ ಇವಳು ಮಹಾಂತೆಶ ದೇಸಾಯಿ ಹಾಗೂ ಇತರರೊಂದಿಗೆ ಅನೈತಿಕ ಸಂಬಂದ ಹೊಂದಿರುವದರಿಂದ ಅದನ್ನು ಬಸವರಾಜನು ವಿರೋಧಿಸಿದ್ದಕ್ಕೆ, ಕವಿತಾ ಇವಳು ಉಪಳಾಂವ ಗುಡ್ಡದ ಅಮ್ಮ ಸರಸ್ವತಿ ಮತ್ತು ಗೊಪಾಲ ಹಾಗೂ ಲಕ್ಷ್ಮಣ ಇವರುಗಳಿಗೆ 1,50,000/-ರೂ ಹಣ ಕೊಟ್ಟು ಕೊಲೆ ಮಾಡುವಂತೆ ಹೇಳಿದ್ದರಿಂದ ದಿನಾಂಕ:27/05/2010 ರಂದು ಉಪಳಾಂವ ಗುಡ್ಡದ ಮಠದಲ್ಲಿ ಸರಸ್ವತಿ ಅಮ್ಮ ಮತ್ತು ಅವಳ ತಮ್ಮನಾದ ಗೊಪಾಲ ಹಾಗೂ ಅವಳ ತಂದೆಯಾದ ಲಕ್ಷ್ಮಣ ಚಿಂಚೊಳಿ ಇವರುಗಳು ಕೂಡಿಕೊಂಡು ಕವಿತಾಳಿಂದ ಹಣ ಪಡೆದುಕೊಂಡು ಉಪಳಾಂವ ಗುಡ್ಡದ ಮಠದಲ್ಲಿ ಕೊಲೆ ಮಾಡಿ ಸ್ಯಾಂಟ್ರೊ ಕಾರ ನಂ ಕೆಎ 285001 ನೆದ್ದರಲ್ಲಿ ಚಿಂಚೊಳಿ ಹತ್ತಿರ ಇರುವ ಶುಗರ ಫ್ಯಾಕ್ಟರಿ ಪಕ್ಕದಲ್ಲಿರುವ ಒಂದು ಹಳ್ಳದಲ್ಲಿ ತಗೆದುಕೊಂಡು ಹೋಗಿ ಹೂತು ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 28-01-2015ರಂದು ತಾನು ಕೆಲಸ ನಿಮಿತ್ಯ ಬೇರೆ ಊರಿಗೆ ಹೋಗಿದ್ದು ಅಂದು ಸಾಯಂಕಾಲ 5-30 ಪಿಎಮ್ ಗಂಟೆಗೆ ತನ್ನ ಡ್ರೈವರ್ ಕಾರ ರಾತ್ರಿ ನಿಲ್ಲಿಸಬೇಕು ಅಂತಾ  ಕೇಳಲು ತಾನು ಸುಲ್ತಾನಪೂರ ಕ್ರಾಸ್ ಹತ್ತಿರ ಇರುವ ಬಸವೇಶ್ವರ ಗ್ಯಾರೇಜ ಹತ್ತಿರ ನಿಲ್ಲಿಸು ಅಂತಾ ಹೇಳಲು ಡ್ರೈವರ್ ಬಸವೇಶ್ವರ ಗ್ಯಾರೇಜ ಹತ್ತಿರ ಲಾಕ್ ಮಾಡಿ ನಿಲ್ಲಿಸಿ ಕುಮಸಿ ಊರಿಗೆ ಹೋಗಿದ್ದು ಅಂದು ತಾನು ತಡರಾತ್ರಿಯಾಗಿ ಮನೆಗೆ ಬಂದಿದ್ದು ದಿನಾಂk 29-01-2015  ರಂದು  ರಾತ್ರಿ  ಗ್ಯಾರೇಜನಲ್ಲಿ ಮಲಗಿದ್ದ ಸಂದೀಪ ಫೋನ ಮಾಡಿ ನಿಮ್ಮ ಟವೇರಾ ಕಾಣಿಸುತ್ತಿಲ್ಲ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ತಕ್ಷಣ  ಬನ್ನಿ ಅಂತಾ ಹೇಳಲು ನಾನು ಗ್ಯಾರೇಜಗೆ ಹೋಗಿ ನೋಡಲು ನನ್ನ ಟವೇರಾ ವಾಹನ ಕಾಣಿಸಲಿಲ್ಲ ಕಲಬುರಗಿಯ ಸುತ್ತಮುತ್ತ ಜಹೀರಾಬಾದ ಎಲ್ಲ ಕಡೆ ಹುಡುಕಾಡಿದರು  ಪತ್ತೆಯಾಗಿರುವುದಿಲ್ಲಾ ನನ್ನ ಟವೇರಾ ವಾಹನ ನಂ ಕೆಎ. – 32 ಎಮ್-5741 ಬಿಳಿ ಬಣ್ಣದ ಚೆಸ್ಸಿ ನಂ MA64B6G767HD56337 ಇಂಜಿನ ನಂ MA64B6G767HD56337 ಇದ್ದು ಅ.ಕಿ. 2,00,000/- ರೂ ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಶಿವಶಂಕರ್ ತಂದೆ ನೀಲಕಂಠರಾವ್ ಪಾಟೀಲ್  ಸಾ: ಎಂಪಳ್ಳಿ ಗ್ರಾಮ ತಾ: ಚಿಂಚೋಳಿ ಜಿ:ಕಲಬುರಗಿ ಹಾ:: ದೇವಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀ ಶರಣಬಸಪ್ಪ ತಂದೆ ರೇವಣಸಿದ್ದಪ್ಪ ಶೇಳಗಿ ಸಾ: ಹನುಮಾನ ಗುಡಿ ಹತ್ತಿರ ಚೆನ್ನವೀರ ನಗರ  ಕಲಬುರಗಿ ರವರು  ದಿನಾಂಕ 05-02-2015 ರಂದು ರೇವಣಸಿದ್ದೇಶ್ವರ ಕಾಲೋನಿಯಲ್ಲಿರುವ ರೇವಣಸಿದ್ದೇಶ್ವರ ಗುಡಿಯ ಹಿಂಬಾಗದ ಮಹದೇವ ನಿಲಯದಲ್ಲಿರುವ ತನ್ನ ತಂಗಿಯ ಮನೆಗೆ ಬಂದಿದ್ದು ಮರಳಿ ಮನೆಗೆ ಹೋಗಲು ತಡರಾತ್ರಿಯಾಗಿದ್ದರಿಂದ ತನ್ನ ಕೆಎ-32 ಎನ್ 0430 ನಂಬರಿನ ಬುಲೇರೋ ವಾಹನವನ್ನು ಲಾಕ ಮಾಡಿಕೊಂಡು ಹೋಗಿ ಮಲಗಿಕೊಂಡಿದ್ದು ದಿನಾಂಕ: 06/02/2015ರಂದು ಬೆಳಿಗ್ಗೆ 6-30 ಗಂಟೆಗೆ ಎದ್ದು ಮನೆಯ ಹೊರಗಡೆ ಬಂದು ನೋಡಲು ತಾನು ನಿಲ್ಲಿಸಿದ  ಬುಲ್ಯೇರೋ ವಾಹನ ಕಾಣಿಸಲಿಲ್ಲ. ತಕ್ಷಣ ಗಾಬರಿಯಿಂದ ನನ್ನ ಮಾವ ವಿಜಯಕುಮಾರ ಮತ್ತು ಮಲ್ಲಿಕಾರ್ಜುನ ಇವರನ್ನು ಕರೆದುಕೊಂಡು ಆರ.ಎಸ್.ಕಾಲೋನಿ, ಮಹಾಗಾಂವ, ಹಾಗರಗಾ ಕ್ರಾಸ್, ಜೇವರ್ಗಿ, ಸೇಡಂ, ಆಳಂದ ಮುಂತಾದ ಕಡೆ ತಿರುಗಾಡಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ನ್ನ ಬುಲೇರೋ ಜೀಪ ನಂ ಕೆಎ-32 ಎನ್-0430 ನಂಬರಿನ ಬಿಳಿ ಬಣ್ನದ ಚೆಸ್ಸಿ ನಂ MA1P52GHKB5E77254 ಮತ್ತು ಇಂಜಿನ ನಂ GHB4E54831 ಇರುವ ಅ.ಕಿ= 300000/- ರೂ. ಬೆಲೆ ಬಾಳುವ ಬುಲ್ಯೇರೋ ವಾಹನವನ್ನು ಮತ್ತು ಅದರಲ್ಲಿದ್ದ ಪಂಚಾಯತ ರಾಜ ಇಂಜಿನಿಯರಿಂಗ ಉಪವಿಭಾಗ ಕಲುಬುರಗಿಯವರಿಗೆ ಸಂಬಂಧಪಟ್ಟ 8350 ನಂಬರಿನ ಅಳತೆ ಪುಸ್ತಕವನ್ನು ಸಹ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ  24.02.2015 ರಂದು ಮುಂಜಾನೆ 05:00 ಗಂಟೆಗೆ ನನ್ನ ಮಗನಾದ ಮಲ್ಲಪ್ಪ ತಂದೆ ಬಸಣ್ಣ ಕೀರಣಗಿ ಈತನು ಜೇವರ್ಗಿ ಸಿಮಾಂತರದಲ್ಲಿ ಇರುವ ನಮ್ಮ ಹೋಲದಲ್ಲಿ ಹತ್ತಿ ಬೇಳೆಗೆ ನೀರು ಬಿಡುತ್ತಿರುವಾಗ ಕಸದಲ್ಲಿದ್ದ ಹಾವು ಆಕಸ್ಮಿಕವಾಗಿ ಮಲ್ಲಪ್ಪನ ಬಲಗಾಲಿನ ಹಿಮ್ಮಡಿಯ ಹತ್ತಿರ ಕಚ್ಚಿದ್ದು ಉಪಚಾರ ಕುರಿತು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 24.02.2015 ರಂದು 06:30 ಗಂಟೆಗೆ ಹಾವು ಕಚ್ಚಿದ ವಿಷದ ಬಾಧೇಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ. ಬಸಣ್ಣ ತಂದೆ ಮಲ್ಲಪ್ಪ ಕೀರಣಗಿ ಸಾ|| ಜೋಪಡ ಪಟ್ಟಿ ಏರಿಯಾ ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 February 2015

Kalaburagi District Reported Crimes

ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 24/02/2015 ರಂದು ಶ್ರೀ ದಿಲೀಪ ತಂದೆ ಶಂಕರ ಪವಾರ  ಸಾ|| ಪ್ರತಾಪ ನಗರ ತಾ|| ಉತ್ತರ ಸೋಲ್ಲಾಪೂರ ಜಿ|| ಸೋಲ್ಲಾಪೂರ (ಎಮ್.ಹೆಚ್) ರವರ ಮತ್ತು ನಮ್ಮ ಪಕ್ಕದ ತೀರೆ ತಾಂಡಾದವನಾದ ದತ್ತಾತ್ರೇಯ ತಂದೆ ಸುಭಾಷ ರಾಠೋಡ ಇಬ್ಬರು ಕೂಡಿ ಮನೆಗಳ ಲೈಟ ಪೀಟಿಂಗ ಮಾಡುವ ಕೆಲಸ ಮಾಡುತ್ತಿದ್ದು  ಈಗ 4 ದಿನಗಳ ಹಿಂದೆ ನನ್ನ ಜೊತೆಗೆ ಕೆಲಸ ಮಾಡುವ ದತ್ತು ರಾಠೋಡ ಈತನ ಮಾವ ನಾಗೇಶ ಇವನು ನಮ್ಮ ಹತ್ತಿರ ಬಂದು ನಾನು ಹೊಸ ಮನೆ ಕಟ್ಟುತ್ತಿದ್ದೆನೆ, ಆ ಮನೆಗೆ ನೀವುಗಳು ಲೈಟ ಪೀಟಿಂಗ ಮಾಡಲು ಬರಬೇಕು ಎಂದು ವ್ಯವಹಾರ ಮಾತಾಡಿದ್ದರಿಂದ ನಾವಿಬ್ಬರು ಒಪ್ಪಿ ಲೈಟ ಪೀಟಿಂಗ ಮಾಡಲು ಅಫಜಲಪೂರ ತಾಲೂಕಿನ ಬಳೂರ್ಗಿ ತಾಂಡಾಕ್ಕೆ ಈಗ 4 ದಿನಗಳ ಹಿಂದೆ ಬಂದು ನಾಗೇಶ ಚವ್ಹಾಣ  ಈತನ ಮನೆಯಲ್ಲಿ ಲೈಟ ಪೀಟಿಂಗ ಮಾಡುತ್ತಾ ಇದ್ದಿರುತ್ತೆವೆ.ಹೀಗಿದ್ದು ನಿನ್ನೆ ದಿನಾಂಕ 23-02-2015 ರಂದು ಸಂಜೆ 9:30 ಗಂಟೆ ಸುಮಾರಿಗೆ ನಾಗೇಶ ಚವ್ಹಾಣ ಇವರ ಹಳೆ ಮನೆಯಲ್ಲಿ ಊಟ ಮಾಡಿಕೊಂಡು ನಾನು ಮತ್ತು ದತ್ತಾತ್ರೇಯ ತಂದೆ ಸುಬಾಷ  ರಾಠೋಡ, ದತ್ತು ತಂದೆ ಹರಿಶ್ಚಂದ್ರ ರಾಠೊಡ ಹಾಗೂ ಮನೆಯ ಮಾಲಿಕನಾದ ನಾಗೇಶ ತಂದೆ ನಾಮದೇವ ಚವ್ಹಾಣ ನಾಲ್ಕು ಜನರು ನಾವು ಲೈಟ ಪೀಟಿಂಗ ಮಾಡುತ್ತಿದ್ದ ಹೊಸಮನೆಯಲ್ಲಿ ಬಂದು ಮಲಗಿಕೊಂಡಿರುತ್ತೆವೆ. ಅಂದಾಜು  ಇಂದು ದಿನಾಂಕ 24-02-2015 ರಂದು ಮದ್ಯ ರಾತ್ರಿ 01:00 ಗಂಟೆ ಸುಮಾರಿಗೆ ನಾವು ಮಲಗಿಕೊಂಡಿದ್ದ ರೂಮಿನ ಬಾಗಿಲನ್ನು ಯಾರೊ ಬಡೆಯುತ್ತಿದ್ದ ಸಪ್ಪಳ ಕೇಳಿ ನಮ್ಮ ಜೋತೆಗೆ ಮಲಗಿದ್ದ ನಾಗೇಶ ಚವ್ಹಾಣ ಇವನು ಎದ್ದು ಕಿಡಕಿಯಲ್ಲಿ ಯಾರು ಎಂದು ಕೇಳಿದನು. ಹೊರಗಡೆ ಇದ್ದವರು ನೀರು ಕೊಡಿ ಎಂದು ಕೇಳಿದರು, ಆಗ ನಾಗೇಶನು ನೀರು ಇಲ್ಲ ಅಂತಾ ಹೇಳಿದನು, ಆಗ ಹೊರಗೆ ಇದ್ದವರು ಏರು ದ್ವನಿಯಲ್ಲಿ ಬೈಯುತ್ತಿದ್ದರು ಆಗ ನಾಗೇಶನು ಬಾಗಿಲು ತಗೆದು ಹೊರಗೆ ಹೋದನು. ನಾವು ಉಳಿದ ಮೂರು ಜನರು ಅಲ್ಲೆ ಮಲಗಿಕೊಂಡಿದ್ದೆವು. ನಾಗೇಶ ಚವ್ಹಾಣ ಈತನು ಹೊರಗೆ ಹೋದ ನಂತರ ಯಾರೊ ಅವನ ಜೋತೆಗೆ ಕನ್ನಡದಲ್ಲಿ ಏರು ದ್ವನಿಯಲ್ಲಿತಾಡುತ್ತಾ ಮಾತಾಡುತ್ತಾ ಒಮ್ಮೆಲೆ ಗುಂಡು ಹಾರಿಸಿದಂತೆ ಡಮ್ಮ ಡಮ್ಮ ಎನ್ನುವ ಬಾರಿ ಶಬ್ದ ಕೆಳಿಸಿತು ಆಗ ನಾವುಗಳು ಎದ್ದು ಹೊರಗೆ ಬಂದು ನೊಡಲಾಗಿ ಯಾರೊ ಎರಡು ಜನ ವ್ಯಕ್ತಿಗಳು ಕತ್ತಲಲ್ಲಿ ಓಡಿ ಹೊದರು, ಹಾಗೂ ಅಲ್ಲೆ ಸದರಿ ಮನೆಯ ಬಾಗಿಲದ ಮುಂದೆ ನಾಗೇಶನು ಬಿದ್ದು ಒದ್ದಾಡುತ್ತಿದ್ದನು, ಅವನನ್ನು ನಾವು ನೋಡಲಾಗಿ ಅವನ ಬಲಗಣ್ಣಿನ ಕೇಳಗೆ ಬಾರಿ ಗಾಯವಾಗಿ ರಕ್ತ ಸೊರುತ್ತಿತ್ತು, ಸದರಿ ಸಮಯದಲ್ಲಾದ ಗುಂಡಿನ ಶಬ್ದಕ್ಕೆ ಸುತ್ತ ಮುತ್ತಲಿನ ಜನರು ಹಾಗೂ ಅವನ ತಂದೆ ನಾಮದೇವ ತಾಯಿ ಗೋದಾವರಿ ಹಾಗೂ ಲಕ್ಷ್ಮಣ ಚವ್ಹಾಣ ಹಾಗೂ ಇತರರು ಅಲ್ಲಿಗೆ ಬಂದರು. ನಂತರ ಸದರಿಯವರು ಮತ್ತು ನಾವು ಎಲ್ಲರೂ ಕೂಡಿ ನಾಗೇಶನನ್ನು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಅಫಜಲಪೂರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ವೈದ್ಯಾದಿಕಾರಿಗಳ ಸಲಹೆ ಮೇರೆಗೆ ನಾಗೇಶನನ್ನು ಹೆಚ್ಚಿನ ಉಪಚಾರಕ್ಕಾಗಿ ಸೊಲ್ಲಾಪೂರದ ಅಶ್ವೀನಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆವೆ.ಸದರಿ ನಾಗೇಶ ತಂದೆ ನಾಮದೇವ ಚವ್ಹಾಣ ವ|| 25 ವರ್ಷ ಈತನನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಯಾರೊ ಇಬ್ಬರು ದುಸ್ಕರ್ಮಿಗಳು ಯಾವುದೊ ದ್ವೇಷದಿಂದ ಯಾವುದೊ ಒಂದು ಆಯುದದಿಂದ ನಾಗೇಶನ ಮೇಲೆ ಗುಂಡು ಹಾರಿಸಿ ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಹೊನ್ನೇಶ ಅಳ್ಳಗಿ ಸಹಾಯಕ ಇಂಜಿನಿಯರ್ ಪಂಚಾಯತ ರಾಜ ಇಂಜನಿಯರ್ ಉಪ ವಿಭಾಗ ಅಫಜಲಪೂರ ಇವರು ದಿನಾಂಕ 30-01-2015 ರಂದು 12:15 ಪಿ ಎಮ್ ಕ್ಕೆ ಅಫಜಲಪೂರದ ತಮ್ಮ ಕಾರ್ಯಾಲಯದಲ್ಲಿದ್ದಾಗ ಗೌರ (ಬಿ) ಗ್ರಾಮ ಪಂಚಯಾತಿಯ ಮಾಜಿ ಅದ್ಯಕ್ಷರಾದ ರುದ್ರಗೌಡ ಪಾಟಿಲ ರವರು ಕಾರ್ಯಾಲಯಕ್ಕೆ ಬಂದು ಪಿರ್ಯಾದಿದಾರರಿಗೆ ಗೌರ (ಬಿ) ಗ್ರಾಮ ಪಂಚಯಾತಿಯ ವ್ಯಾಪ್ತಿಯಲ್ಲಿ ಮಾಡಿದ ನರೇಗಾ ಯೋಜನೆಯ ಕಾಮಾಗಾರಿಗಳ ಎಸ್.ಕ್ಯೂ ಎಮ್ / ಡಿ.ಕ್ಯೂ.ಎಮ್ ಖಾಲಿ ನಮೂನೆಗಳ ಮೇಲೆ ಸಹಿ ಮಾಡಿಕೊಡುವಂತೆ ಹೇಳಿದ್ದು, ಅದಕ್ಕೆ ಪಿರ್ಯಾದಿದಾರರು ಗೌರ (ಬಿ) ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೆ ಸರಿಯಾದ ಕಾಮಗಾರಿಗಳು ಆಗಿಲ್ಲ ಆದ್ದರಿಂದ ನಾನು ನಿಲ್ ರಿಪೊರ್ಟ ಕೊಡುತ್ತೆನೆ ಅಂತಾ ಹೇಳಿದಕ್ಕೆ ಸದರಿ ರುದ್ರಗೌಡ ಪಾಟಿಲ ಈತನು ಪಿರ್ಯಾದಿದಾರರಿಗೆ ಜೀವ ಬೇದರಿಕೆ ಹಾಕಿ ಖಾಲಿ ಎಸ್.ಕ್ಯೂ ಎಮ್ / ಡಿ.ಕ್ಯೂ.ಎಮ್  ನಮೂನೆಗಳ ಮೇಲೆ ಸಹಿ ಪಡೆದುಕೊಂಡು ಸರ್ಕಾರಿ ಕೆಲಸದಲ್ಲಿ ಅಡೆ ತಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ  23-02-2015 ರಂದು ಶ್ರೀ ಸಿದ್ದರಾಮ ತಂದೆ ಪಂಡಿತರಾಯ ಕಲಶೆಟ್ಟಿ, ಸಾಃ ಕಾವೇರಿ ನಗರ ರವರು ಮತ್ತು ತನ್ನ ಮಗನಾದ ಗುರುಬಸವ ವಃ 09 ವರ್ಷ ಇಬ್ಬರು ಕೂಡಿ ಶಹಾಬಜಾರ ಮರಗಮ್ಮಾ ಗುಡಿಯ ಹತ್ತಿರ ಪಾನಿಪುರಿ ತಿನ್ನಲು ಹೋಗುತ್ತಿದ್ದಾಗ ಶಹಾಬಜಾರ ನಾಕಾ ಕಡೆಯಿಂದ ಮೋಟಾರ ಸೈಕಲ ನಂ  ಕೆ.ಎ 36 ಆರ್ 3388 ನೇದ್ದನ್ನು ಶಹಾಬಜಾರ ನಾಕಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗನಾದ ಗುರುಬಸವ ಈತನಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದೆ ಹೋಗಿ ನಿಂತಂತೆ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ಗುರುಬಸವ ಈತನಿಗೆ ಬಲಗಾಲು ಮೊಳಕಾಲಿಗೆ ತರಚಿದ ಮತ್ತು ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಜಗದೇವಿ ಗಂಡ ಅಶೋಕ ಅಜಾತಪೂರ  ಸಾ: ಮನೆ ನಂ 129 ಅಂಬೇಡ್ಕರ್ ಆಶ್ರಯ ಯೋಜನೆ ಕಾಲೋನಿ ರಾಣೆಸ ಫೀರ ದರ್ಗಾ ಎದುರುಗಡೆ   ಕಲಬುರಗಿ  ರವರು  ದಿನಾಂಕ 23-02-2015 ರಂದು ಮದ್ಯಾಹ್ನ ನ್ಯೂ ವಾದಿರಾಜ ಲಾಡ್ಜ್ ಎದುರಿಗೆ ಇರುವ ಹೋಟೇಲನಲ್ಲಿ ಊಟ ಮಾಡಿ ವಾಪಸ್ಸ ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಹೋಗಬೆಕೆಂದು  ರೋಡಿನ ಎಡಬದಿಯಿಂದ ನಡೆದುಕೊಂಡು ಹೋಗುವಾಗ  ಜಿಲ್ಲಾ ಪಂಚಾಯತ ಕಾರ್ಯಾಲಯ ಎದುರಿನ ರೋಡ ಮೇಲೆ ಕಾರ ನಂ ಕೆಎ-32-ಎಮ್-7283 ನೇದರ ಚಾಲಕನು ಸುಪರ ಮಾರ್ಕೇಟ  ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾದಿಯ  ಟೋಂಕಕ್ಕೆ ಗುಪ್ತ ಪೆಟ್ಟು ಏಡಗೈ ಮುಂಗೈಗೆ ತರಚಿದ ಗಾಯಗೊಳಿಸಿ ಕಾರ ಚಾಲಕ ಕಾರ ಸಮೇತ ಓಡಿ ಹೊಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಈರಣ್ಣ ತಂದೆ ಬಸಣ್ಣಾ ಉಕ್ಕನಾಳ ಸಾ|| ಮುದಬಾಳ (ಬಿ) ತಾ|| ಜೇವರ್ಗಿ ರವರು ದಿನಾಂಕ  23.02.2015 ರಂದು ಮಧ್ಯಾಹ್ನ 12:30 ಗಂಟೆಗೆ ಮೃತ ಭೀಮಣ್ಣ ತಂದೆ ಬಸಣ್ಣ ಉಕನಾಳ ಸಾ|| ಮುದಬಾಳ ಬಿ ಈತನು ಮುದಬಾಳ ಬಿ ಸಿಮಾಂತರದ ಮಾನು ರಾಠೋಡ ಈತನ ಹೊಲದ ಪಕ್ಕದ ಮುಖ್ಯ ಕೇನಾಲ್‌ ನಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೇನಾಲ್ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು ಸದರಿಯವನ ಮೃತ ದೇಹವು ಇಂದು ಸಾಯಂಕಾಲ 16:30 ಗಂಟೆಗೆ ನೀರಿನಿಂದ ಹೋರಗೆ ತೆಗೆದಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.