POLICE BHAVAN KALABURAGI

POLICE BHAVAN KALABURAGI

27 April 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ನೆಲೋಗಿ ಪೊಲೀಸ ಠಾಣೆ:ದಿನಾಂಕ:26/04/2013 ರಂದು ಮಂದೇವಾಲ ಗ್ರಾಮದ ಹತ್ತಿರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಚುನಾವಣಾ ಪ್ರಚಾರ ಕಾರ್ಯಕ್ರಮಪ್ರಯುಕ್ತ ಶ್ರೀ ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗ್ ಹಾಗೂ ಕೇಂದ್ರ ಮಂತ್ರಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ವರು ಚುನಾವಣಾ ಪ್ರಚಾರದ ನಿಮಿತ್ಯ ಅಭ್ಯರ್ಥಿಯಾದ ಡಾ:ಅಜೆಯಸಿಂಗ್ ವರಪರವಾಗಿ ಚುನಾವಣೆ ಪ್ರಚಾರ ಕೈಕೊಂಡಿದ್ದರಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಡಾ||| ಅಜಯಸಿಂಗ್ ಹಾಗೂ ದಾಬಾದ ಮಾಲಿಕ ಮಹಿಬೂಬಸಾಬ ರವರು ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಿರುವದರಿಂದ ಚುನಾವಣೆ ನೀತಿ ನೀತಿ ಸಂಹಿತೆ ಉಲ್ಲಂನೆಯಾಗಿರುತ್ತದೆ ಅಂತಾ ಶ್ರೀ,ಕೆ ಎಸ್ ಬೀದರಕರ್ ಅಭಿವೃದ್ದಿ ಅಧಿಕಾರಿಗಳು ಕೆ..ಡಿ.ಬಿಮತ್ತು ಜೇರ್ಗಿ ನೇಲೋಗಿ ಹೊಬಳಿಯ ಫ್ಲೈಯಿಂಗ್ ಸ್ಕ್ವಾಡ್ ಚುನಾವಣೆ ಅಧಿಕಾರಿ ಗುಲಬರ್ಗಾರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:63/2013 ಕಲಂ 171 (ಇ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:26/04/2013 ರಂದು  ರಾಯಚೂರ ದಿಂದ  ರೈಲ್ವೆ ಮೂಲಕ ಗುಲಬರ್ಗಾ ರೈಲ್ವೆ ನಿಲ್ದಾಣಕ್ಕೆ ಬಂದು, ನನ್ನ ತಮ್ಮನಾದ  ಮಹ್ಮದ ಸುಲ್ತಾನ ಮೊಹಿಯೊದ್ದಿನ ರವರ “DELL LAPTOP”ನ್ನು ನನ್ನ ಕೆಲಸದಸಲುವಾಗಿತೆಗೆದುಕೊಂಡಿದ್ದುಖಾಸಗಿ ಕೆಲಸ ಮುಗಿಸಿಕೊಂಡು  ಬೀದರಕ್ಕೆ ಹೊಗುವ ಸಂಬಂಧ  ಗುಲಬರ್ಗಾ ಕೇಂದ್ರ ಬಸ ನಿಲ್ದಾಣಕ್ಕೆ ಬಂದು ರಾತ್ರಿ 8-25 ಗಂಟೆ ಸುಮಾರಿಗೆ  ಪ್ಲಾಟ ಫಾರಂ ದಲ್ಲಿ ನಿಂತಿರುವ ರಾಜಹಂಸ ಬಸ್ ನಂ.ಕೆಎ 38-ಎಫ್‌-587 ರಲ್ಲಿ ಸೀಟಿನ ಮೇಲೆ ನನ್ನ ಲಗೇಜ ಬ್ಯಾಗ ಮತ್ತು ಡೇಲ ಲ್ಯಾಪಟಾಪ  ಬ್ಯಾಗ ಇಟ್ಟು  ಮೂತ್ರ ವಿಸರ್ಜನೆ ಮಗುಗಿಕೊಂಡು ಮರಳಿ ಬಂದು ನೊಡಲು ನನ್ನ ಲ್ಯಾಪಟಾಪ ಬ್ಯಾಗ ಇರಲಿಲ್ಲ. ಯಾರೋ ಕಳ್ಳರು DELL LAPTOP   ಅ||ಕಿ|| 35,000/-ರೂಪಾಯಿಗಳ ಮೌಲ್ಯದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಮಹ್ಮದ ಹಸನ್ ಮುಲ್ಲಾ ತಂದೆ ಡಿ.ಹೆಚ್.ಮುಲ್ಲಾ ಸಾ: ಅಜಾದ ನಗರ ರಾಯಚೂರ  ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ; 73/2013 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ದಿನಾಂಕ:26-04-13 ರಂದು ಮಧ್ಯಾಹ್ನ 12-15 ಗಂಟೆ ಸುಮಾರಿಗೆ ಶ್ರೀ ಡಾ: ಡಿ.ಎಂ. ಮಣ್ಣೂರು ಮ್ಯಾಜಿಸ್ಟ್ರೇರ ಸ್ಕಾಡ ಎಂ.ಸಿ.ಸಿ. ಮಾದರಿ ಚುನಾವಣೆ ನೀತಿ ಸಂಹಿತೆ ಅಧಿಕಾರಿ ಗುಲಬರ್ಗಾ ರವರು ಮತ್ತು ಎಂ.ಸಿ.ಸಿ. ತಂಡದ ಸಿಬ್ಬಂದಿಯವರು ಚುನಾವಣೆ ವಿಕ್ಷಣೆ ಮಾಡುತ್ತ ಹುಸೇನ ಗಾರ್ಡ ಹತ್ತಿರ ಹೋದಾಗ ನಂಬರ ಇಲ್ಲದಿರುವ ಇನೋವಾ ಕಾರ ಅದರ ಗ್ಲಾಸ್ ಮೇಲೆ ಹಸ್ತದ ಚೆನ್ಹೆವಿರುವ ಸ್ಟೀಕರ ಅಂಟಿಸಲಾಯಿತು. ಕಾರಿನ ಚಾಲಕನಾದ ಸಂಜೆಯ ಇತನಿಗೆ ವಿಚಾರಿಸಲು ಆತನು ನಮ್ಮ ಮಾಲಿಕನಾದ ಇರ್ಶಾದ ಜಾಹಾಗೀರದಾರ ರವರಿಗೆ ವಿಚಾರಿಸಲು ಹೇಳಿದನು. ನಾನು ಮಾಲಿಕನಾದ ಜಾಹಾಗಿರದಾರ ಸಾ|| ಪೂಣೆ ಇವನಿಗೆ ವಿಚಾರಿಸಲು ಅವನು ನಮ್ಮ ಹತ್ತಿರ ಯಾವದೇ ಪರವಾನಿಗೆ ಇಲ್ಲಾ ನೀವು ಯಾರೂ ಕೇಳುವದಕ್ಕೆ ಅಂತಾ ಮಾತನಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:61/2013 ಕಲಂ, 188 ಐಪಿಸಿ ಮತ್ತು 127 (ಎ) 133 ಆರ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜಬರಿ ಸಂಭೋಗ ಮತ್ತು ಜಾತಿ ನಿಂದನೆ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ನಾನು ಈ ಹಿಂದೆ ಹೀರಾಪೂರ ಕ್ರಾಸ್ ಹತ್ತಿರವಿರುವ ಶಾಲೆಯಲ್ಲಿ 8 ನೇ ತರಗತಿಯಿಂದ 10 ನೇ ತರಗತಿಯವರಿಗೆ ವ್ಯಾಸಾಂಗ ವಿದ್ಯಾಭ್ಯಾಸ ಮಾಡುತ್ತಿರುವ ಸಮಯದಲ್ಲಿ ಅದೇ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದ ಅನಂತರಾಜ ತಂದೆ ಗುರಣ್ಣಾ ಸಾ:ಶಹಾಬಜಾರ ಅಕ್ಕಮಹಾದೇವಿ ಗುಡಿ ಹತ್ತಿರ ಗುಲಬರ್ಗಾ ರವರು ನನಗೆ ಪ್ರೀತಿಸುತ್ತೆನೆ ಅಂತಾ ಹೇಳಿ ಬೀದರಗೆ ಹಾಗೂ ಬಿಜಾಪೂರಕ್ಕೆ ಕರೆದುಕೊಂಡು ಹೋಗಿ ಲಾಡ್ಜದಲ್ಲಿ ಜಬರಿ ಸಂಭೋಗ ಮಾಡಿರುತ್ತಾನೆ. ಮತ್ತು ನಿನಗೆ ಮದುವೆಯಾಗುತ್ತೆನೆ ಅಂತಾ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿ ಸಂಭೋಗ ಮಾಡಿರುತ್ತಾನೆ. ಗರ್ಭಿವತಿಯಾದಾಗ ಮಾತ್ರಗಳನ್ನು ಕೊಟ್ಟು ಗರ್ಭಪಾತ ಮಾಡಿಸಿರುತ್ತಾನೆ. 2 ನೇ ಸಲ  ಗರ್ಭವತಿಯಾದ ಸಿದ್ದಿ ಭಾಷಾ ದರ್ಗಾ ಹತ್ತಿರ ಬಂದು ಗರ್ಭಪಾತ ಮಾಡಿಕೋ ಅಂತಾ ಜಗಳ ತೆಗೆದು ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ. ದಿನಾಂಕ:30.03.2013 ರಂದು ಬೆಳಿಗ್ಗೆ 7-00 ಗಂಟೆ ನಾನು ಆತನ ಮನೆಗೆ ಹೋಗಿ ನನ್ನನ್ನು ಮದುವೆ ಮಾಡಿಕೋ ಅಂತಾ ಕೇಳಿದಾಗ ಜಾತಿ ನಿಂದೆನೆ ಮಾಡಿರುತ್ತಾನೆ. ಹಾಗೂ ಆತನ ಹೆಂಡತಿಯಾದ ಭಾಗೀರತಿ ರವರು ಸಹ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಗುಲಬರ್ಗಾ ವಿರೇಶ ನಗರದ 35 ವರ್ಷದ ಯುವತಿ ಖಾಸಗಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 376, 420 ಐಪಿಸಿ ಮತ್ತು 3 (1) (10)  (12) (2) (7) ಎಸಸಿ/ಎಸಟಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

26 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಅಪ್ಸನಾ ಬೇಗಂ ಗಂಡ ಶೇಖ ಮಹಿಬೂಬ ಸಾ: ಶಹಾಜಿಲಾನಿ ದರ್ಗಾ ಹತ್ತಿರ ಮದಿನಾ ಕಾಲೋನಿ ಎಮ್.ಎಸ್.ಕೆ.ಮಿಲ್ ಗುಲಬರ್ಗಾರವರು ದಿನಾಂಕ:25-04-2013 ರಂದು   ಮಧ್ಯಾಹ್ನ  3=00 ಗಂಟೆ ಸುಮಾರು ನನ್ನ ಮಗಳಾದ ಆಫ್ರೀನಾ ಇವಳು ಓಣಿಯ ಮಕ್ಕಳ ಜೊತೆಗೆ ಹಸನ ಸಾಬ ಕಲೆಗಾರ ಇವರ ಮನೆಯ ಮುಂದೆ ಆಟವಾಡುತ್ತಿದ್ದಾಗ ಶಾಹಾಜಿಲಾನಿ ರೋಡ ಕಡೆಯಿಂದ ಮೋಟಾರ ಸೈಕಲ್ ನಂ:ಕೆಎ-32 ಯು 5177 ನೇದ್ದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆಟ ಆಡುತ್ತಿದ್ದ ನನ್ನ ಮಗಳು ಆಫ್ರೀನಾ ಇವಳಿಗೆ ಡಿಕ್ಕಿ ಪಡಿಸಿ ಮೋಟರ ಸೈಕಲ್ ಸಮೇತ   ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:29/2013 ಕಲಂ: 279, 338  ಐ.ಪಿ.ಸಿ. ಸಂ 187 ಐ.ಎಮ್.ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಹಾಗಾಂವ  ಪೊಲೀಸ ಠಾಣೆ:ದಿನಾಂಕ:25/04/13 ರಂದು  ಸಾಯಂಕಾಲ 5.30 ಗಂಟೆ ಸುಮಾರಿಗೆ ನಾನು ತಡಕಲ ಕ್ರಾಸದಲ್ಲಿ ನಿಂತಿರುವಾಗ ಸಾಯಂಕಾಲ 6-00 ಗಂಟೆಗೆ ರಟಕಲ ಕಡೆಯಿಂದ ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ ಕೆಎ,-32 ಇಸಿ-2622 ನೇದ್ದರ ಚಾಲಕ ಅಪರಿಚಿತ ಗಂಡು ಮನುಷ್ಯ ಅಂದಾಜು 23 ವಯಸ್ಸಿನವನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಮೋಟಾರ ಸೈಕಲದೊಂದಿಗೆ ರೋಡಿನ ತೆಗ್ಗಿನಲ್ಲಿ ಕಲ್ಲುಗಳಲ್ಲಿ ಬಿದ್ದಿದ್ದು ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ. ಸದರಿ ವ್ಯಕ್ತಿಯ ಮೃತನ ಸಂಬಂಧಿಕರ ಬಗ್ಗೆ ಪತ್ತೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ವೀರಣ್ಣ ತಂ ಶಿವಶರಣಪ್ಪ ಏರಿ ಸಾ|| ತಡಕಲ ಕ್ರಾಸ ತಾ|| ಜಿ||ಗುಲಬರ್ಗಾರವರು ದೂರು ಸಲ್ಲಿಸಿದ  ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 53/2013 ಕಲಂ, 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ಪೊಲೀಸ್ ಠಾಣೆ:ಶ್ರೀ ಸಂಬಾಜಿ ತಂದೆ ರಾಣಪ್ಪಾ ಸೂಲದವರ ಸಾ:ಐತವಾರ ಫೈಲ ಶಹಾಬಾದರವರು ನನ್ನ ತಮ್ಮನಾದ ರಾಜ ಕಮಲ @ ಗುಂಡು ತಂದೆ ರಾಣಪ್ಪಾ ಇತನು ಮನೆಗೆ ದಿನಾಂಕ:24/04/2013 ರಂದು ರಾತ್ರಿ 9.30 ಪಿಎಂಕ್ಕೆ ಮನೆಯಲ್ಲಿದ್ದ ನನ್ನ ತಾಯಿ ಸೀತಾಬಾಯಿ ಇವಳಿಗೆ ಅವಾಚ್ಯವಾಗಿ ಬೈದು  ಕಪಾಳ ಮೇಲೆ ಕೈಯಿಂದ ಹೊಡೆದನು. ಜಗಳ ಬಿಡಿಸಲು ಹೋದಾಗ ನನಗೂ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಎತ್ತಿ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಯ ಮೇಲೆ ಹಾಕಲು ಬಂದಾಗ ನಾನು ತಪ್ಪಿಸಿಕೊಂಡಿರುತ್ತೆನೆ.ಹಾಗೂ ನನ್ನ ಹೆಂಡತಿ ಸಂಗಡ ಸಹ ಅಸಸ್ಯವಾಗಿ ನಡೆದುಕೊಂಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:90/2013  ಕಲಂ:341,323,504,354.506,307 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಿದ್ಯುತ್ ತಂತಿ ತಗಲಿ ಕಾರ್ಮಿಕ ಸಾವು:
ಶಹಾಬಾದ ಪೊಲೀಸ್ ಠಾಣೆ:ದಿನಾಂಕ: 25/04/2013 ರಂದು ನಸುಕಿನ ಜಾವ 5-00 ಗಂಟೆ ಸುಮಾರಿಗೆ ಲಾರಿ ನಂ; ಸಿಎನಕ್ಯೂ ನಂ:6038 ನೇದ್ದರ ಚಾಲಕನಾದ ಖಾದರಸಾಬ ಮುಲ್ಲಾ ತಂದೆ ಮೊಹ್ಮದ ಗೌಸ ಮುಲ್ಲಾ ಹಾಗೂ ಲಾರಿಯ ಮಾಲಿಕನಾದ ಗೊಖುಲ ಕನಸೆ ಹಾಗೂ ನನ್ನ ಕಾಕನಾದ ಯಲ್ಲಪ್ಪಾ ತಂದೆ ಚನ್ನಬಸಪ್ಪಾ ನಿಂಬಾಳ ವಯಾ|| 50 ಸಾ:ಗ್ಯಾಂಗಬೌಡಿ ರವರು ಲಾರಿಯಲ್ಲಿ ಕಿರಾಣಿ ಸಾಮಾನುಗಳು ತುಂಬಿಕೊಂಡು ಶಹಾಬಾದದ ಪೇಮಸ್ ಕಿರಾಣಿ ಅಂಗಡಿಗೆ ತಂದು ಸಾಮಾನುಗಳನ್ನು ಇಳಿಸಬೇಕಾಗಿರುವದರಿಂದ ಕಿರಾಣ ಅಂಗಡಿಯ ಎದುರುಗಡೆ ರೋಡಿನ ಬಲಗಡೆ ಕೆ.ಇ.ಬಿ.ಯ ಹೈ ಪವರ್‌ ತಂತಿ ಇರುವ ಜಾಗದಲ್ಲಿ ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿದನು. ಲಾರಿಯಲ್ಲಿದ್ದ ಲಾರಿ ಮಾಲಿಕ ಗೊಖುಲ ಇತನು ನನ್ನ ಕಾಕ ಯಲ್ಲಪ್ಪಾ ಇತನಿಗೆ ಲಾರಿಯ ಕ್ಯಾಬಿನ ಮೇಲಿದ್ದ ಕಿರಾಣಿ ಸಾಮಾನುಗಳು ಇಳಿಸು ಅಂತಾ ಹೇಳಿದ್ದರಿಂದ ಕ್ಯಾಬಿನ ಮೇಲೆ ಇದ್ದ ಕಿರಾಣಿ ಸಾಮಾನುಗಳನ್ನು ಬಗ್ಗಿ ತೆಗೆದುಕೊಂಡು ಮೇಲೆ ಏಳುವಷ್ಟರಲ್ಲಿ ಲಾರಿಯ ಮೇಲೆ ಇದ್ದ ಕೆ.ಇ.ಬಿ. ಹೈ ಪವರ್‌‌ ತಂತಿ ನನ್ನ ಕಾಕನ ತಲೆಗೆ ಹತ್ತಿರುವದರಿಂದ ನನ್ನ ಕಾಕನು ಕೆಳಗಡೆ ಬಿದ್ದನು, ನನ್ನ ಕಾಕನ ತಲೆಗೆ ಬಾರಿ ಪೆಟ್ಟಾಗಿ ತಲೆಯಿಂದ ರಕ್ತ ಬರುತ್ತಿದ್ದು, ಮೂಗಿನಿಂದ ರಕ್ತ ಬರುತ್ತಿತ್ತು. ನಾನು ಮತ್ತು ಲಾರಿ ಚಾಲಕ ಹಾಗೂ ಲಾರಿ ಮಾಲಿಕ ಕೂಡಿಕೊಮಡು ಉಪಚಾರ ಕುರಿತು ಆಸ್ಪತ್ರೆಗೆ ತರುವಷ್ಟರಲ್ಲಿ ದಾರಿ ಮಧ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ,ಅಂಬೋಜಿ ತಂದೆ ತುಳಜಾರಾಮ ನಿಂಬಾಳ ಸಾ:ಮೊರಟಗಿ ತಾ:ಸಿಂದಗಿ ಜಿ:ಬಿಜಾಪುರರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 94/2013 ಕಲಂ, 304 (ಎ) ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

25 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ,ಸಿದ್ದು ತಂದೆ ರಾಜಶೇಖರ ಪಾಟೀಲ್ ಸಾ:ಹೋಳಿ ಮೈದಾನ ತಾ:ಸೇಡಂ ರವರು ನಾನು ಮನೆಯಲ್ಲಿದ್ದಾಗ ದಿ:24-04-2013 ರಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ನಮ್ಮ ತಾತನಾದ ನಾಗಣ್ಣ ತಂದೆ ಸಂಗಪ್ಪ ಪರಗಿ ಇವರು ಲೈಟಿನ ಬಿಲ್ ಕಟ್ಟಲು ಕೆ.ಇ.ಬಿ ಆಫೀಸಗೆ ಹೋದರು ನಾನು ನಮ್ಮ ಕಿರಾಣ ಅಂಗಡಿಗೆ ಹೋಗಿ ಅಂಗಡಿ ತೆರೆಯುತ್ತಿದ್ದಾಗ, ರೇವಣಸಿದ್ದಪ್ಪ ಅನ್ನವವರು ಫೋನ ಮುಖಾಂತರ ನಿಮ್ಮ ತಾತಾ ನಾಗಣ್ಣ ಇವರಿಗೆ ಕೆ.ಇ.ಬಿ ಆಫೀಸ್ ಎದುರುಗಡೆ ಮಹೀಂದ್ರ ಕಂಪನಿಯ ಹೊಸ ಟಂ-ಟಂ ನೇದ್ದರ ಚಾಲಕನು ಡಿಕ್ಕಿ ಪಡಿಸಿದ್ದರಿಂದ ಅವರ ತಲೆಯ ಹಿಂಬಾಗಕ್ಕೆ, ಎಡಗಣ್ಣಿನ ಹುಬ್ಬಿಗೆ ಹಾಗೂ ಮೂಗಿಗೆ ರಕ್ತಗಾಯವಾಗಿದ್ದಲ್ಲದೇ, ಬಲಕಿವಿಯಿಂದ ರಕ್ತ ಬರುತ್ತಿದೆ ಅಂತ ತಿಳಿಸಿದನು. ನಾನು ಹೋಗಿ ನೋಡಲು ನನ್ನ ತಾತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ವಾಹನದ ಚಾಲಕನಾದ ಶ್ರೀನಿವಾಸರೆಡ್ಡಿ ತಂದೆ ವೆಂಕಟರೆಡ್ಡಿ ತುಳೇರ ಸಾ|| ಸಣ್ಣಅಗಸಿ ಸೇಡಂ ಇತನು ಉಪಚಾರ ಕುರಿತು ಅದೇ ವಾಹನದಲ್ಲಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾನೆ. ಸಾಯಂಕಾಂಲ 4-00 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:99/2013 ಕಲಂ-279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು, ನಂತರ ಕಲಂ, 304 (ಎ) ಅಳವಡಿಸಿಕೊಂಡಿರುತ್ತಾರೆ.
ದರೋಡೆ ಮಾಡಲು ಪ್ರಯತ್ನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:24-04-2013 ರಂದು ನಸುಕಿನ ಜಾವ 4-30 ಗಂಟೆ ಸುಮಾರಿಗೆ ನಮ್ಮ ಠಾಣಾ ಸರಹದ್ದಿನ ಕೆರೆ ಭೋಸಗಾ ಬಸ್ಸ ಸ್ಟಾಂಡ ಹಿಂದುಗಡೆ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು  ಮಾರಕ ಅಸ್ತ್ರಗಳು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ಜನರಿಗೆ ಮತ್ತು ವಾಹನಗಳಿಗೆ ನಿಲ್ಲಿಸಿ ದರೋಡೆ ಮಾಡಲು ನಿಂತಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಯವರ ಮಾರ್ಗದರ್ಶನದ ಮೇರೆಗೆ ಪಿ.ಎಸ.ಐ ಆನಂದರಾವ ರವರು  ಮತ್ತು ಸಿಬ್ಬಂದಿಯವರು ಹೋಗಿ ದರೋಡೆ ಮಾಡಲು  ಯತ್ನಿಸುತ್ತಿರುವ ಆರೋಪಿಗಳಾದ  1) ಶೇಖ್ಯಾ ತಂದೆ ಹಣಮಂತ ಖೇರತಿ ವಯಾ|| 24 ಸಾ|| ರಾಮತಿರ್ಥ  ಹತ್ತಿರ ಗುಲಬರ್ಗಾ, ಸಂಗಡ 4 ಜನರು  ವಶಕ್ಕೆ ತೆಗೆದುಕೊಂಡು ಠಾಣೆ ಗುನ್ನೆ ನಂ:213/2013 ಕಲಂ,399,402 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ,
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:24-04-2013 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಹೀರಾಪೂರ ಸೀಮೆಯಲ್ಲಿ  ಬರುವ ಬಾಬುಮಿಯ್ಯಾ ತೋಟದ ಹೊಲದಲ್ಲಿ ಸಮೀಪ ಕೆಲವು ಜನರು ಇಸ್ಪೀಟ ಜೂಜಾಟ  ಆಡುತ್ತಿದ್ದಾರೆ  ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ರವರಾದ ಆನಂದರಾವ ರವರು ಮತ್ತು ಅವರು ಸಿಬ್ಬಂದಿಯವರು ದಾಳಿ ಮಾಡಿ ನವಾಬ ಅಲಿ ತಂದೆ ಅಮೀರ ಅಲಿ ವ:38 ವರ್ಷ ಉ: ಚಹಾ ಪತ್ತಿ ವ್ಯಾಪರ ಸಾ: ಎಂ.ಎಸ್.ಕೆ.ಮಿಲ್ಲ ಜಿಲಾನಾಬಾದ ಗುಲಬರ್ಗಾ  2) ಕಲ್ಯಾಣರಾವ ತಂದೆ ದೇವಿಂದ್ರಪ್ಪ ಹೀರಾಪೂರ ವ:53 ವರ್ಷ ಉ: ವಾಚಮ್ಯಾನ ಕೆಲಸ  ಸಾ: ಹೀರಾಪೂರ ಗ್ರಾಮ   3) ಸಾಬೀರ ಹುಸೇನ ತಂದೆ ಮಹೆಬೂಬಸಾಬ ವ:35 ವರ್ಷ ಉ: ಸೆಂಟ್ರಿಂಗ ಕೆಲಸ  ಸಾ: ಎಂ.ಎಸ್.ಕೆ.ಮಿಲ್ಲ ಗುಲಬರ್ಗಾ  4) ನಿಜಾಮೋದ್ದಿನ ತಂದೆ ನಸಿರೋದ್ದಿನ ವ:45 ವರ್ಷ ಉ:ಲಾರಿ ಮೆಕ್ಯಾನಿಕ ಸಾ:ಬಿಲಾಲಬಾದ ಗುಲಬರ್ಗಾ  5) ಮಹ್ಮದ ಖಾಜಾ ತಂದೆ ಇಸ್ಮಾಯಿಲ್  ಮೈದರಗಿ ವ:23 ವರ್ಷ ಉ: ಆಟೋ ಚಾಲಕ ಸಾ: ಹೀರಾಪೂರ ಗುಲಬರ್ಗಾ ರವರನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 4,580/- ರೂಪಾಯಿಗಳು ಹಾಗೂ ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡ ಮೇರೆಗೆ ಠಾಣೆ ಗುನ್ನೆ ನಂ:214/2013 ಕಲಂ, 87 ಕ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ,