POLICE BHAVAN KALABURAGI

POLICE BHAVAN KALABURAGI

19 October 2011

GULBARGA DIST REPORTED CRIMES

ಶಹಾಬಾದ ನಗರ ಠಾಣೆ : ಶ್ರೀಮತಿ ಪಾರ್ವತಿ ಗಂಡ ಸಿದ್ದಯ್ಯಾ ಮಠಪತಿ ಸಾ: ಭಂಕೂರ ರವರು, ನಾನು ಗ್ರಾಮ ಪಂಚಾಯತದಲ್ಲಿ ಗ್ರಂಥಾಲಯದ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದು ಲಕ್ಷ್ಮಿಕಾಂತ ತಂದೆ ಮಲ್ಕಪ್ಪಾ ಕಂದಕೊಳ ಸಾ: ಭಂಕೂರ ಈತನು ಅವ್ಯಾಚವಾಗಿ ಬೈಯುವದು ಹಾಗೂ ಜೀವದ ಬೇದರಿಕೆ ಹಾಕುವದು ಮಾಡುತ್ತಿದ್ದಾನೆ ಮತ್ತು ನನಗೆ ಅಶ್ಲೀಲ ಪುಸ್ತಕಗಳನ್ನು ಓದಲಿಕ್ಕೆ ಕೊಡು ಅಂತಾ ಕೇಳುತ್ತಿದ್ದು ನನಗೆ ಅಶ್ಲೀಲವಾಗಿ ಬೈಯುವದು ಮಾಡುತ್ತಿದ್ದಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಗುನ್ನೆ ಸಂಖ್ಯೆ 158/2011 ಕಲಂ:    504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಗರ ಠಾಣೆ : ಶ್ರೀ ಗೌರಿಶಂಕರ ತಂದೆ ದತ್ತಾತ್ರೇಯ ಮೈಲಾಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕೈಯಿಂದ ಬರೆದ ದೂರು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 17-10-2011 ರಂದು ಬೆಳೀಗ್ಗೆ 7-15 ಗಂಟೆಗೆ ಅವರ ಹೆಂಡತಿ ಚಿತ್ರಲೇಖಾ ಮೈಲಾಪುರ ಇವರು ಹಾಲು ತರಲು ಶೆಟ್ಟಿ ಕಾಂಪ್ಲೇಕ್ಸಗೆ ಬಂದು ಮರಳಿ ಹೋಗುವಾಗ ಯಾರೋ ಇಬ್ಬರು ಅಪರಿಚಿತ ಮೋಟಾರ ಸೈಕಲ ಸವಾರರು ಅದರಲ್ಲಿ ಒಬ್ಬ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು ಅವರು ನನ್ನ ಹೆಂಡತಿ ಕೊರಳಲ್ಲಿದ್ದ 35 ಗ್ರಾಂ ಬಂಗಾರದ ಮಂಗಳ ಸೂತ್ರ ಕಿತ್ತಿಕೊಂಡು ಹೋಗಿರುತ್ತಾರೆ. ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಗುನ್ನೆ ನಂ 81/11 ಕಲಂ 392 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಕಮಲಾಪೂರ ಠಾಣೆ : ಶ್ರೀಮತಿ ತೆಂಗೆಮ್ಮಾ ಗಂಡ ಮಲ್ಲಿನಾಥ ಗುತ್ತಿ ಸಾಃಗೋಗಿ(ಕೆ) ತಾಃಜಿಃ ಗುಲಬರ್ಗಾ ರವರು ದಿನಾಂಕ: 17/10/2011 ರಂದು ಬೆಳಿಗ್ಗೆ ನನ್ನ ಗಂಡ ಮಲ್ಲಿನಾಥ ಇವರು ಹೊಲದಲ್ಲಿ ಹಾಕಿರುವ ತೊಗರಿ ಬೆಳೆಗೆಳಿಗೆ ಕ್ರೀಮಿನಾಶಕ ಔಷಧವನ್ನು ಹೊಡೆಯುತ್ತಿದ್ದಾಗ ಔಷಧವು ಗಾಳಿಯ ಮೂಲಕ ಉಸಿರಾಟದೊಂದಿಗೆ ದೇಹದೊಳಗೆ ಹೋಗಿದ್ದು. ನಂತರ ಬೆಳಿಗ್ಗೆ 9-00 ಗಂಟೆ ಸುಮಾರಿಗೆ ನನ್ನ ಗಂಡನು ಕೈ ತೊಳೆಯದೇ ಊಟ ಮಾಡಿದ್ದರಿಂದ ಕ್ರೀಮಿನಾಶಕ ಔಷಧ ದೇಹದೊಳಗೆ ಹೋಗಿ ತಲೆ ಸುತ್ತುತ್ತಿದೆ ವಾಂತಿ ಮಾಡುತ್ತಿದ್ದರಿಂದ ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ 12-30 ಗಂಟೆಗೆ ತಂದು ಸೇರಿಕೆ ಮಾಡಿರುತ್ತೇವೆ. ಉಪಚಾರದಲ್ಲಿದ್ದ ಮಲ್ಲಿನಾಥ ಈತನು ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:18/10/2011 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಾರಣ ಮಾನ್ಯರವರು ಮುಂದಿನ ಕಾನೂನು ಕ್ರಮ ಜರುಗಿಸಬೇಕು. ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಯುಡಿಆರ್ ನಂ. 10/2011 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಅಂಬಿಕಾ ತಂದೆ ಶಾಮರಾಯ ಹಲಗೆ ಸಾ: ಸುಂದರ ನಗರ ಗುಲಬರ್ಗಾ ರವರು, ನನ್ನ ಗಂಡ ಶಾಮರಾಯ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರು ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಮೋ/ಸೈಕಲ್ ನಂಬರ ಕೆಎ 32 ಕ್ಯೂ 3490 ರ ಚಾಲಕ ಪ್ರವೀಣ ತಂದೆ ಅಬ್ರಾಹಮ್ ಈತನು ಜಿ.ಜಿ.,ಹೆಚ್.ಸರ್ಕಲ್ ಕಡೆಯಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡ ದಾಟಿ ಹೋಗುತ್ತಿದ್ದ ನನ್ನ ಗಂಡ ಶಾಮರಾಯ ಈತನಿಗೆ ಅಪಘಾತಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ 132/11 ಕಲಂ: 279 .338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ : ಶ್ರೀ ಶಿವರಾಜ ತಂದೆ ಶರಣಪ್ಪ ಬಿರದಾರ ಸಾ: ಮಟಕಿ ರವರು, ದಿನಾಂಕ:17-10-2011 ಅವಧಿ 8.00 ಪಿಎಂದಿಂದ 18/10/2011 8.00ರವರಿಗೆ ಮದ್ಯದ ರಾತ್ರಿ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಶ್ರೀ ಶರಣಬಸೇಶ್ವರ ಕೃಷಿ ಕೇಂದ್ರದ ತೊಗರಿ ಔಷದ ಅಂಗಡಿಯ ಹಿಂದಿನ ಪತ್ರೆಯನ್ನು ಕೊಯ್ದು ಒಳಗೆ ನುಗ್ಗಿ ಟೇಬಲ್ ಡ್ರಾ ಕೀಲಿ ಮುರಿದು ನಗದು ಹಣ 1000=00 ರೂ ಹಾಗೂ ಇಂಪ್ಯಾಕ್ಟ ತೊಗರಿ ಎಣ್ಣೆ ಹಾಗೂ ಪ್ರೋಕ್ಲೆನ್ ತೊಗರಿ ಎಣ್ಣೆ ಅ.ಕಿ 40800=00 ರೂ ಹೀಗೆ ಒಟ್ಟು 41800=00 ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಗುನ್ನೆ ನಂ. 243/2011 ಕಲಂ 457.380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

18 October 2011

GULBARGA DIST REPORTED CRIMES

ಸ್ಟೇಷನ ಬಜಾರ ಠಾಣೆ :ಶ್ರೀ ರಾಜ ತಂದೆ ಲಾಲಚಂದ ಧಾರುಂಗ ಸಾ: ಸಿಕಾತೊಡೆ ಪೋಸ್ಟ : ಪಸ್ಟ ಸಿಲೆ ಜಿ : ಈಸ್ಟಸಿಯಾಂಗ ಅರುಣಾಚಲ ಪ್ರದೇಶ ಹಾ.ವ : ಎಮ್.ಎ.ಎಮ್. ಹಾಸ್ಟೇಲ ಗುಲಬರ್ಗಾ ರವರು, ನನ್ನ ಗೆಳೆಯರಾದ, ಬಾಸಕ್ ಕೋಯ್ಯೋ, ದೋರ್ಜಿ ಸೇರಿಂಗ್, ಲಿಂಗ ಬಿತ್ತಿನ್, ಆನಂದ ಪೈಥ ಧರ್ಮೇಶ, ವಿಚಿಕತಾ, ಮತ್ತು ರಫಿಯಾ ಥಾಯಾಂಗ, ಎಲ್ಲರೂ ಕೂಡಿಕೊಂಡು ಎಮ್.ಎ.ಎಮ್. ಹಾಸ್ಟೇಲ ದಿಂದ ಪಿ.ಡಿ.ಎ. ಕಾಲೇಜಿಗೆ ಬರುವಾಗ ಕೋರಂಟಿ ಹನುಮಾನ ದೇವಾಲಯದ ಹತ್ತಿರ ಇರುವ ನೀರಿನ ಟ್ಯಾಂಕ ಹತ್ತಿರ ಸಂದೀಪ, ಶ್ರೀನಿವಾಸ, ಆಕಾಶ, ಸಂಗಡ ಸುಮಾರು 15 ಜನರು ಕೂಡಿ ಬಂದು ನಮಗೆ ನಿಲ್ಲಿಸಿ ನಮಗೆ ಹೊಡೆಬಡೆ ಮಾಡಿ ಗುಪ್ತಗಾಯ ಮತ್ತು ರಕ್ತಗಾಯ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಗುನ್ನೆ ಸಂಖ್ಯೆ 186/11 ಕಲಂ 147, 148, 341, 323, 324,325, 506, ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಸ್ಟೇಷನ ಬಜಾರ ಠಾಣೆ :ಶ್ರೀ ಸಂದೀಪ ತಂದೆ ಕೃಷ್ಣಾ ಸಿಂದೆ. ಸಾ: ಸಂತೋಷ ಕಾಲೋನಿ ಗುಲಬರ್ಗಾ ರವರು ದಿನಾಂಕ : 17-10-2011 ರಂದು 12:30 ರ ಸುಮಾರಿಗೆ ಫಿರ್ಯಾದಿದಾರರು ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜ ಕ್ಯಾಂಪಸ್ ನ ಆಟೋಮೊಬೈಲ್ ಡಿಪಾರ್ಟಮೆಂಟ ಎದುರಿಗೆ ಸ್ನೇಹಿತರಾದ ಶ್ರೀನಿವಾಸ ಚಿದರೆ, ಆಕಾಶ ಒಂಟಿ, ಎಲ್ಲರೂ ಮಾತನಾಡುತ್ತಾ ನಿಂತಾಗ ಪಿ.ಡಿ.ಎ. ಕಾಲೇಜಿನ ಕೆಲ ವಿದ್ಯಾರ್ಥಿಗಳು ಬಾಯಿ ಮಾತಿನ ತಕರಾರು ಮಾಡುತ್ತಿದ್ದುದನ್ನು ನಾನು ಮತ್ತು ನನ್ನ ಸ್ನೇಹಿತರು ನೋಡಿ ಅವರಿಗೆ ಬುದ್ದಿವಾದ ಹೇಳುವಾಗ ಅವರಲ್ಲಿದ್ದ ರಫಿಯಾ ಎಂಬುವವನು ನನಗೆ ನೀವೇನು ಹೇಳುತ್ತಿ ಎಂದು ಕೇಳಿ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಆನಂದ ಉತ್ತಮ ರಕ್ತಗಾಯಪಡಿಸಿದ್ದು ಆಗ ಬಿಡಿಸಲು ಬಂದ ಶ್ರೀನಿವಾಸನಿಗೆ ಕೂಡಾ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿದ್ದು ಮತ್ತು ಜೀವ ಬೆದರಿಕೆ ಹಾಕಿರುತ್ತಾರೆ. ಕಾರಣ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಗುನ್ನೆ ನಂ 185/2011 ಕಲಂ 147, 148, 323, 324, 504, 506, ಸಂ 149 ಐಪಿಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ :-
ಮಳಖೇಡ ಠಾಣೆ :
ಶ್ರೀಮತಿ ಮೆಹಬೂಬಿ ಗಂಡ ಮೆಹಬುಬ ಶಾಹಾ ಧರವೇರ ಸಾ|| ಹುಡಾ ಬಿ ರವರು, ನಾನು ಮತ್ತು ನನ್ನ ಗಂಡ ಸೇಡಂ ಗುಲಬರ್ಗಾ ರೋಡಿ ನ ಮೇಲೆ ನಡೆದುಕೊಂಡು ಸರ್ಕಾರಿ ಆಸ್ಪತ್ರೆ ಮಳಖೇಡಕ್ಕೆ ಬರುತ್ತಿರುವಾಗ ಮೋಟಾರು ಸೈಕಲ್ ನಂ ಎಪಿ 28 ಎ.ಎಸ್ 6226 ನೇದ್ದರ ಸವಾರ ಶೇಖ ಹಬೀಬ ಸಾ|| ತಾಂಡೂರ ಇವನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಬಂದು ನನಗೆ ಅಪಘಾತ ಪಡಿಸಿ ಭಾರಿ ಗಾಯಗೊಳಿಸಿದ್ದು ಕಾರಣ ಶೇಖ ಹಬೀಬ ಇವನ ವಿರುಧ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಗುನ್ನೆ ನಂ 95/2011 ಕಲಂ 279. 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :-
ವಿಶ್ವವಿದ್ಯಾಲಯ ಠಾಣೆ :
ಶ್ರೀ ರಾಚಣ್ಣ ತಂದೆ ರಾಮಚಂದ್ರಪ್ಪಾ ಮಾಲಿ ಪಾಟೀಲ ಸಾ|| ಸಣ್ಣೂರು ಗ್ರಾಮ ತಾ:ಜಿ: ಗುಲಬರ್ಗಾ ರವರು, ದಿನಾಂಕ 16-10-2011 ರಂದು ಸಾಯಂಕಾಲ ನಮ್ಮೂರ ಅಂದರೆ ಸಣ್ಣೂರು ಗ್ರಾಮ ಪಂಚಾಯತ ಪಿ.ಡಿ.ಓ ಅಧಿಕಾರಿಗಳಾದ ಮಂದಾಕಿನಿ ಇವರು ಗುಲಬರ್ಗಾದ ಬಿ.ಶ್ಯಾಮಸುಂದರ ಬಡಾವಣೆಯ ತಮ್ಮ ಮನೆಯಲ್ಲಿ ನೆಣು ಹಾಕಿಕೊಂಡು ಮೃತಪಟ್ಟ ಹಿನ್ನಲೆಯಲ್ಲಿ ಗುಲಬರ್ಗಾದ ರಾಘವೇಂದ್ರ ನಗರ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ರಾತ್ರಿ 11-30 ಪಿಎಮ ಕ್ಕೆ ನಮ್ಮ ಗ್ರಾಮಕ್ಕೆ ಬಂದು ನಮ್ಮ ಗ್ರಾಮದ ಜಗದೀಶ ತಂಧೆ ಶರಣಪ್ಪಾ ನಂದೂರ ಇವರಿಗೆ ಹಿಡಿದುಕೊಂಡು ಹೋದ ಮೇಲೆ ಅವರ ಮನೆಗೆ ಬಂದಾಗ ಅವನಿಗೆ ಹಿಡಿದುಕೊಂಡು ಹೋಗುವ ಕಾಲಕ್ಕೆ ನಾನು ಮತ್ತು ನಮ್ಮೂರ ಇತರೆ ಜನರು ನೋಡುತ್ತಾ ನಿಂತಾಗ ಜಗದೀಶ ನಂದೂರ ಇತನ ಅಣ್ಣ ಶಿವಪುತ್ರಪ್ಪಾ ತಂದೆ ಶರಣಪ್ಪಾ ನಂದೂರ ಮತ್ತು ತಮ್ಮ ಮಲ್ಲಿಕಾರ್ಜುನ ತಂದೆ ಶರಣಪ್ಪಾ ನಂದೂರ ಇವರು ನನ್ನ ಹತ್ತಿರ ಬಂದವರೆ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ನಮ್ಮ ಮನೆ ಪೊಲೀಸರಿಗೆ ನೀನೆ ತೋರಿಸಿ ನನ್ನ ತಮ್ಮ ಜಗದೀಶ ನಿಗೆ ಹಿಡಿದುಕೊಟ್ಟಿರುವಿ ಶಿವಪುತ್ರಪ್ಪಾ ಮತ್ತು ಮಲ್ಲಿಕಾರ್ಜುನ ಇಬ್ಬರೂ ಹೊಡೆಬಡೆ ಮಾಡಿರುತ್ತಾರೆ.ಮತ್ತು ನನ್ನ ತಮ್ಮ ಜಗದೀಶನಿಗೆ ಏನಾದರೂ ಶಿಕ್ಷೆ ಆದರೆ ನಿನಗೆ ಖಲಾಸ ಮಾಡುತ್ತೇವೆ. ಅಂತಾ ಜೀವದ ಭಯ ಹಾಕಿರುತ್ತಾರೆ. ಕಾರಣ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಗುನ್ನೆ ನಂ. 235/11 ಕಲಂ 341.323.504.506 ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಜೇವರ್ಗಿ ಠಾಣೆ :
ಶ್ರೀ ಸುಲ್ತಾನ ತಂದೆ ಜಾಫರ ಸಾ|| ಹೀರೆಬೂದುರ ರವರು ದಿನಾಂಕ 16-10-2011 ರಂದು ನಾನು ಮತ್ತು ನಮ್ಮ ಮನೆಯವರೆಲ್ಲರೂ ಗುಲಬರ್ಗಾದ ಬಂದೆ ನವಾಜ ದರ್ಗಾ ಜಾತ್ರೆ ಮುಗಿಸಿಕೊಂಡು ನಮ್ಮೂರಿಗೆ ಹೋಗುವಾಗ ಕೆಲ್ಲೂರ ಗ್ರಾಮದ ಹತ್ತಿರ ನಾವೆಲ್ಲೂರ ಮೂತ್ರ ವಿಸರ್ಜನೆಗೆ ಇಳಿದಿದ್ದೆವು ಹಾಗೂ ನನ್ನ ಮಗ ಬಾಬು ಮೂತ್ರ ವಿಸರ್ಜನೆ ಮಾಡಲು ರೋಡ ಕ್ರಾಸ ಮಾಡುತ್ತಿದ್ದಾಗ ಜೇವರ್ಗಿ ಕಡೆಯಿಂದ ಯಾರೋ ಕಾರ್ ಚಾಲಕ ನನ್ನ ಮಗನಾದ ಬಾಬುಗೆ ಅಪಘಾತ ಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ. ಅವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಗುನ್ನೆ ನಂ 183/11 ಕಲಂ 279.337..ಐ.ಪಿ.ಸಿ. 187 ಐ.ಎಮ್.ವ್ಹಿ ಆಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.