POLICE BHAVAN KALABURAGI

POLICE BHAVAN KALABURAGI

07 October 2011

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ :ಶ್ರೀಮತಿ ನಾಜಿಯಾ ಗಂಡ ಖುರ್ಷಿದ ಪಟೇಲ ಸಾ: ಯಳವಂತಗಿ ಇವರ ಗಂಡ ಅತ್ತೆ ಮಾವ ನಾದನಿ ಲಗ್ನವಾದ ಆರು ತಿಂಗಳ ನಂತರ ಒಂದಲ್ಲ ಒಂದು ಕಾರಣದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದಲ್ಲದೇ ತನಗೆ ಲಾರಿ ವ್ಯಾಪಾರದಲ್ಲಿ ಒಂದು ಲಕ್ಷ ರೂ ಲಾಸ್ ಆಗಿದೆ ತವರು ಮನೆಯಿಂದ ಹಣ ತೆಗೆದುಕೊಮಡು ಬಾ ಅಂತಾ ಹೊಡೆಬಡೆ ಮಾಡಿದ್ದು ಈ ಬಗ್ಗೆ ಊರಿನಲ್ಲಿ ಪಂಚಾಯಿತಿ ಮಾಡಿದ್ದು ಫಿರ್ಯಾದಿಯ ತಾಯಿ ರಂಜಾನಕ್ಕೆಂದು ತವರು ಮನೆಗೆ ಕರೆದುಕೊಂಡು ಹೋಗಿದ್ದು ಇಲ್ಲಿಯವರೆಗೆ ಗಂಡನ ಮನೆಯವರು ಫಿರ್ಯಾದಿಗೆ ಗಂಡನ ಮನೆಗೆ ಕರೆಯಲು ಬರದ ಕಾರಣ ಇಂದು ದಿನಾಂಕ: 06-10-2011ಬೆಳಿಗ್ಗೆ ಆಕೆಯ ತಾಯಿ ಚಿಕ್ಕಪ್ಪ ಗುಲಬರ್ಗಾದಿಂದ ಗಂಡನ ಮನೆಯಾದ ಯಳವಂತಗಿ ಗ್ರಾಮಕ್ಕೆ ಕರೆದುಕೊಂಡು ಹೋದಾಗ1.ಖುರ್ಷಿದ ಪಟೇಲ 2.ರಾಜಾಪಟೇಲ 3.ಜೈಬೂನ ಬೀ 4.ರಜೀಯಾ ಬೇಗಂ ಸಾ: ಎಲ್ಲರೂ ಯಳವಂತಗಿ (ಬಿ) ಎಲ್ಲರು ತವರು ಮನೆಯಿಂದ ಹಣ ತೆಗೆದುಕೊಂಡು ಮನೆಗೆ ಬಾ ಅಂತಾ ಬೈದು ಕೈಯಿಂದ ಮತ್ತು ಕಾಲಿಂದ ಹೊಡೆಬಡೆ ಮಾಡಿ ಜೀವ ಭಯ ಹಾಕಿ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :ಶ್ರೀ ರಮೇಶ ತಂದೆ ಮೋತಿರಾಮ ಜಾಧವ ಸಾ|| ಸಣ್ಣೂರು ತಾಂಡಾ ತಾ|| ಜಿ|| ಗುಲಬರ್ಗಾ ದಿನಾಂಕ05-10-2011 ರಂದು ಸಾಯಂಕಾಲ ತನ್ನ ಹೆಂಡತಿ ಅನುಸುಬಾಯಿ ಇಬ್ಬರೂ ಮನೆಯ ಹತ್ತಿರ ಇದ್ದಾಗ ನನ್ನ ಅಣ್ಣನಾದ ಬಾಭು ತಂದೆ ಮೋತಿರಾಮ ಜಾದವ ಮತ್ತು ಆತನ ಹೆಂಡತಿ ರುಕ್ಮಿನಿಬಾಯಿ ಇಬ್ಬರು ನನ್ನ ಹತ್ತಿರ ಬಂದವನೇ ನನಗೆ ಅವಚ್ಯ ಶಬ್ದಗಳಿಂದ ಬೈದು ಮನೆ ಕಟ್ಟಲು ಮೂರು ಪೀಟ್ ಜಾಗಾ ಬೀಡು ಅಂದರೆ ಬಿಡುವುದಿಲ್ಲಾ ಅಂತಾ ಅಂದವನೇ ವಿ:ನಾಕಾರಣ ಜಗಳ ತೆಗೆದು ಬಡಿಗೆಯಿಂದ ಹೊಡೆ ಬಡೆ ಮಾಡಿ ಗಾಆಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :ದಿನಾಂಕ 06-10-11 ರಂದು ಮುಂಜಾನೆ ಶ್ರೀ ಈಶ್ವರ ತಂದೆ ಸಿದ್ದಪ್ಪ ಕೇಶ್ವಾರ ಸಾ:ಹಡಗಿಲ ಹಾರುತಿ ಮತ್ತು ಗಾಯಾಳುಗಳು ತಮ್ಮ ಊರಿನ ಟಂ ಟಂ ನಂ ಕೆಎ 32 ಬಿ 3821 ನೇದ್ದು ಗೂಡ್ಸ್‌ ವಾಹನದಲ್ಲಿ ಕಾಯಿಪಲ್ಲೆ ಮಾರಲು ಗುಲಬರ್ಗಾಕ್ಕೆ ಬಂದು ವ್ಯಾಪಾರ ಮಾಡಿಕೊಂಡು ಮರಳಿ ತಮ್ಮ ಊರಿಗೆ ಹೊರಟಾಗ ಶರಣಸಿರಸಗಿ ಮಡ್ಡಿ ಹತ್ತಿರ ಬಂದಾಗ ಎದುರಿನಿಂದ ಬಂದ ಬಸ್ಸ ಚಾಲಕ ನಿಂಗಪ್ಪ ಗುನ್ನಾಪೂರ ಇತನು ತನ್ನ ಬಸ್ಸ ನಂ ಕೆಎ 32 ಎಪ್‌ 1276 ನೇದ್ದನ್ನು ಅತೀವೇಗದಿಂದ ನಡೆಯಿಸಿಕೊಂಡು ಬಂದು ಟಕ್ಕರ ಕೊಟ್ಟಿದರಿಂದ ಟಂ ಟಂದಲ್ಲಿದ್ದವರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಂಈಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 October 2011

Gulbarga District Reported Crimes

ಕಳವು ಪ್ರಕರಣ :
ಬ್ರಹ್ಮ ಪೂರ ಠಾಣೆ :ದಿನಾಂಕ: 06-10-2011 ರಂದು ಶ್ರೀ.ಸೋಮಶೇಖರ ತಂದೆ ಗುಂಡಪ್ಪ ಟೆಂಗಳಿ, ಸಾ|| ಟೆಂಗಳಿ ಜುವಲರಸ, ಸುಪರ ಮಾರ್ಕೆಟ ಗುಲಬರ್ಗಾರವರು ತಮ್ಮ ಅಂಗಡಿ ಅಂದಾಜು 1100 ಗಂಟೆಯ ಸುಮಾರಿಗೆ ಒಬ್ಬ ಹುಡುಗಿ ಕಿವಿಓಲೆ ಖರೀಸುವದು ಇದ್ದು, ತೋರಿಸಿ ಅಂತಾ ಹೇಳಿದಾಗ ನಾನು ಅವಳಿಗೆ ಒಂದು ಟ್ರೇಯಲ್ಲಿ ಅಂದಾಜು 12 ಜೊಡಿ ತರಹದ ಕಿವಿಓಲೆ ತೋರಿಸಿದ್ದು ಆಗ ನನಗೆ ಅವಳ ಮೇಲೆ ಅನುಮಾನ ಬಂದು ಅವಳ ಬ್ಯಾಗ ಚೆಕ ಮಾಡಿದಾಗ 1.4 ಗ್ರಾಂ ಬಂಗಾರದ ಉಂಗುರ ಅ||ಕಿ|| 3000/- ಇದ್ದು ಅದರ ಬಗ್ಗೆ ಅವಳಿಗೆ ಕೇಳಿದಾಗ ಸರಿಯಾದ ಉತ್ತರ ಕೊಡದೆ ಇದ್ದಾಗ ಕೋಠಾರಿ ಅಂಗಡಿಯ ಮಾಲಿಕನಾದ ದಾವಲ ತಂದೆ ಸತ್ಯಶೀಲ ಕೋಠಾರಿ ರವರಿಗೆ ಫೋನ ಮಾಡಿ ನನ್ನ ಅಂಗಡಿಗೆ ಕರೆಯಿಸಿಕೊಂಡು ವಿಚಾರಿಸಲಾಗಿ ಈ ಹುಡುಗಿ ಬೆಳಿಗ್ಗೆ 1025 ಗಂಟೆಯ ಸುಮಾರಿಗೆ ನಮ್ಮ ಅಂಗಡಿಗೆ ಬಂದು ರಿಂಗ ನೋಡಿ ಹೋಗಿದ್ದು, ಅಂತಾ ಹೇಳಿದಾಗ ಅವರಿಗೆ ಆ ರಿಂಗ ತೋರಿಸಲಾಗಿ ಇದು ನಮ್ಮ ಅಂಗಡಿಯಿಂದ ಕಳ್ಳತನ ಮಾಡಿಕೊಂಡು ಬಂದಿರುತ್ತಾಳೆ ಅಂತಾ ಹೇಳಿದರು ಆಗ ಅವಳ ಹೆಸರು ವಿಚಾರಿಸಲಾಗಿ ಸುಜಾತಾ ತಂದೆ ಬಾಬುರಾವ ಕರ್ಕರೆ ಸಾ|| ಮೇಥಿ ಮೇಳಕುಂದಾ ತಾ|| ಬಾಲ್ಕಿ, ಜಿ|| ಬೀದರ ಅಂತಾ ಹೇಳಿದ್ದು ಅವಳನ್ನು ಇಬ್ಬರು ಕೂಡಿಕೊಂಡು ಠಾಣೆಗೆ ತಂದು ಹಾಜರ ಪಡಿಸಿದ್ದು ಅವಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೃ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಬ್ರಹ್ಮಪೂರ ಠಾಣೆ :ಕುಮಾರಿ.ವಿಜಯಲಕ್ಷ್ಮಿ ತಂದೆ ಮಲ್ಕಪ್ಪ ಕೌಲಗಿ, ಸಾ|| ಮಿಲನ ಚೌಕ ಗಾಜೀಪೂರ ಗುಲಬರ್ಗಾ ರವರು ದಿನಾಂಕ 06-10-11 ರಂದು ಬೆಳಿಗ್ಗೆ ಮಿಲನ ಚೌಕ ಗಾಜೀಪೂರದಲ್ಲಿರುವ ನಮ್ಮ ಮನೆಯ ಮುಂದೆ ನಾನು ಹಾಗೂ ನನ್ನ ತಾಯಿಯಾದ ಅಂಬುಜಾ ಅಣ್ಣನಾದ ಭೋಗೇಶ ಎಲ್ಲರೂ ಕೂಡಿ ಮಾತಾಡುತ್ತಾ ಕುಳಿತ್ತಿರುವಾಗ ಮೋಮಿನಪೂರದಲ್ಲಿರುವ ನಮಗೆ ಪರಿಚಯದವರೆ ಆದ 1.ಶೈನಾಜ ಗಂಡ ಫಲಾವುದ್ದಿನ, 2.ಫೀರದೋಸಬೇಗಂ ಗಂಡ ಖಮರ, 3.ಮಹ್ಮದ ಗೌಸ ತಂದೆ ಫಲಾವುದ್ದಿನ, 4.ಸಿರಾಜ@ಅಪ್ಪು ತಂದೆ ಫಲಾವುದ್ದಿನ ರವರು ಕೂಡಿಕೊಂಡು ಬಂದು ಫಿರ್ಯಾದಿಯೊಂದಿಗೆ ಜಗಳಕ್ಕೆ ಬಿದ್ದು, ಅವಾಚ್ಯ ಶಬ್ದಗಳಿಂದ ಬೈದು ನಮ್ಮ ವಿರುದ್ದ ನ್ಯಾಯಾಲಯದಲ್ಲಿ ಕೇಸು ಹಾಕಿ ನಮಗೆ ನೋಟಿಸ ಬರುವಂತೆ ಮಾಡಿದಿ ಅಂತಾ ಅನ್ನುತ್ತಾ ಶೈನಾಜ ಇವಳು ಕೈಯಿಂದ ಮುಖದ ಮೇಲೆ ಹೊಡೆದಿದ್ದು ಅಲ್ಲದೆ, ಮಹ್ಮದ ಗೌಸ ಈತನು ಸಹ ನನಗೆ ಕೈಯಿಂದ ಮುಖದ ಮೇಲೆ ಹೊಡೆದಿದ್ದು ಆಗ ಜಗಳ ಬಿಡಿಸಲು ಬಂದ ಭೋಗೇಶ ಈತನಿಗೆ ಸಿರಾಜ ಈತನು ತನ್ನ ಕೈಯಲ್ಲಿ ಇದ್ದ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೆ, ನನ್ನ ತಾಯಿ ಅಂಬುಜಾ ಇವಳೀಗು ಸಹ ಫೀರದೋಸಬೇಗಂ ಇವಳು ಕೈಯಿಂದ ಮುಖದ ಮೇಲೆ ಹೊಡೆದಿದ್ದು, ಅಲ್ಲದೆ ಎಲ್ಲರೂ ಕೂಡಿ ಹೋಗುವಾಗ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ವರದಕ್ಷಣಿ ಕಿರುಕಳ ನೀಡಿ ಪತ್ನಿಗೆ ಬೆಂಕಿ ಹಚ್ಚಿದ ಪತಿ :
ಮಹಿಳಾ ಠಾಣೆ :ಶ್ರೀಮತಿ ಶಶಿಕಲಾ ಗಂಡ ಅಂಬಾರಾಯ ಬಿರಾದಾರ ಸಾ
;ರಾಜೀವ ಗಾಂಧಿ ನಗರ ಗುಲಬರ್ಗಾ ರವರ ಮದುವೆಯು ಈಗ 5 ವರ್ಷಗಳ ಹಿಂದೆ ರಾಜು ಗಾಂಧಿ ನಗರ ಫೀಲ್ಟರ್ ಬೆಡ್ ಗುಲಬರ್ಗಾದವನಾದ ಅಂಬಾರಾಯ ತಂದೆ ದೇವಿಂದ್ರಪ್ಪ ಬಿರಾದಾರ ಇತನೊಂದಿಗೆ ಮದುವೆಯಾಗಿದ್ದು, ಮದುವೆಯ ಕಾಲಕ್ಕೆ 5 ತೋಲೆ ಬಂಗಾರ ,ಮತ್ತು 1,00,000-00 ರೂ. ಮದುವೆ ಖರ್ಚಗೆಂದು ಕೊಟ್ಟಿದ್ದು, ಮದುವೆಯಾದ ಸ್ವಪ್ಪ ದಿನ ಚನ್ನಾಗಿ ನೋಡಿಕೊಂಡು ನಂತರ 1)ಅಂಬಾರಾಯ ತಂದೆ ದೇವಿಂದ್ರಪ್ಪ ಬಿರಾದಾರ ಸಾ:ರಾಜುಗಾಂಧಿ ನಗರ ಗುಲಬರ್ಗಾ. 2.ಪುತಳಾಬಾಯಿ ಗಂಡ ದೇವಿಂದ್ರಪ್ಪ ಬಿರಾದಾರ ಸಾ:ಆಲೂರ ತಾ;ಆಳಂದ 3.ದೇವಿಂದ್ರಪ್ಪ ತಂದೆ ಗುರುಲಿಂಗಪ್ಪಾ 4.ರಾಜಕುಮಾರ ತಂದೆ ದೇವಿಂದ್ರಪ್ಪ 5.ವಿಜಮ್ಮ ಗಂಡ ರಾಜಕುಮಾರ 6.ಸವಿತಾ ಗಂಡ ಶಿವಪುತ್ರ 7)ಚಂದ್ರಕಾಂತ ತಂದೆ ದೇವಿಂದ್ರಪ್ಪ ಬಿರಾದಾರ ಸಾ:ಎಲ್ಲರೂ ಫೀಲ್ಟರ್ ಬೆಡ್ ರಾಜು ಗಾಂಧಿ ನಗರ ಗುಲಬರ್ಗಾ. ಎಲ್ಲರು ಕೋಡಿಕೊಂಡು ತವರುಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಪಿಡಿಸಿ ಹೊಡೆ ಬಡೆ ಮಾಡಿ ಮಾನಸಿಕ ದೈಹಿಕ ಕಿರುಕಳ ಕೊಡುತ್ತಾ ಬಂದು ದಿನಾಂಕ 29-09-20111 ರಂದು ಮಧ್ಯಾಹ್ನ ವಿಜಮ್ಮ ಹೋಳಿಗೆ ಹಿಟ್ಟು ಕೇಳಿದ್ದು, ನಾನು ಇಲ್ಲ ಅಂತಾ ಹೇಳಿದಾಗ ಎಲ್ಲರು ಸೇರಿ ಜಗಳ ತೆಗೆದು ಹೊಡೆಬಡೆ ಮಾಡಿದ್ದು ಸಂಜೆ 5-00 ಗಂಟೆಗೆ ನನ್ನ ಗಂಡ ಮನೆಗೆ ಬಂದ ಮೇಲೆ ಇಲ್ಲ ಸಲ್ಲದ ಮಾತು ಹೇಳಿದ್ದರಿಂದ ನನ್ನ ಗಂಡ ನನಗೆ ಜಗಳ ತೆಗೆದು ಈಕೆಗೆ ಸುಟ್ಟು ಹಾಕು ಅಂದಾಗ ನನ್ನ ಗಂಡ ನನ್ನ ಮೇಮೇಲೆ ಸೀಮೆಎಣ್ಣೆ ಸುರುವಿದ ಆಗ ವಿಜಮ್ಮ ಬೆಂಕಿ ಹಚ್ಚಿದಳು ನಾನು ಗಾಬರಿಗೊಂಡು ಗಾದಿ ತೆಗೆದುಕೊಂಡು ಸುರಳಿ ಹೊಡೆದುಕೊಂಡೆನು. ಅಷ್ಟರಲ್ಲಿ ನನ್ನ ಗಂಡ ಬಂದು ಪೂರ್ತಿ ಆರಿಸಿದನು. ನನಗೆ ಸಾಯಿಸಬೇಕು ಅಂತಾ ಆಲೂರಕ್ಕೆ ತೆಗೆದುಕೊಂಡು ಹೋದರು. ನನ್ನ ಅತ್ತೆ, ಮಾವ ಈ ರಂಡಿಯನ್ನು ಇಲ್ಲಿಗೇಕೆ ತಂದೀರಿ ಅಲ್ಲೇ ಸಾಯಿಸಬೇಕಿತ್ತು ಅಂತಾ ಒಂದು ರೂಮಿನಲ್ಲಿ ಹಾಕಿದರು. ಮರುದಿನ ನಮ್ಮ ಕಾಕ ಶಂಕರ ಇವರು ಊರಿಗೆ ಬಂದು ನನಗೆ ಗುಲಬರ್ಗಾಕ್ಕೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದರು. ನನಗೆ ನನ್ನ ಗಂಡನ ಮನೆಯವರು ಅಂಜಿಸಿದ್ದಕ್ಕೆ ನಾನು ಸ್ಟೋ ಬ್ಲಾಸ್ಟ್ ಆಗಿದೆ ಅಂತಾ ಸುಳ್ಳು ಹೇಳಿದ್ದೆನೆ. ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :ದಿನಾಂಕ 05-10-2011 ರಂದು ಶ್ರೀ ನವೀನಕುಮಾರ ತಂದೆ. ಶಿವಶರಣಪ್ಪ ರಾಜೆ ಸಾ:-ಎಲ್ ಐ.ಜಿ 3 ಮನೆ ನಂ 04 ಆದರ್ಶನಗರ ಗುಲಬರ್ಗಾ ಮತ್ತು ತನ್ನ ಗೆಳೆಯ ಮಜಿರೋದಿನ್‌ ಪಟೇಲ ಇವರ ಸಂಬಂಧಿಕರ ಮನೆಯಲ್ಲಿ ಕಾರ್ಯಾಕ್ರಮಕ್ಕೆ ಹೋಗಿ ಕಾರ್ಯ ಕ್ರಮ ಮುಗಿಸಿಕೊಂಡು ಮರಳಿ ಮನೆಗೆ ಗೆಳೆಯರೊಂದಿಗೆ ಕಾರ ನಂ ಕೆಎ -05 ಎಮ್‌ಜಿ 171 ನೇದ್ದರಲ್ಲಿ ಕುಳಿತು ಹೊರಟಿದ್ದು ರಿಂಗ ರೋಡ ಜಲಶುದ್ದೀಕರಣ ಘಟಕ ಹತ್ತಿರ ಕಾರ ಚಲಾಯಿಸುತ್ತಿದ್ದ ಮಜೀರೊ ದ್ದೀನ ಪಟೇಲ ಇತನು ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಯಿಸಿಕೊಂಡು ಹೋಗುತ್ತಿದ್ದಾಗ ಜಲಶುದ್ದೀಕರಣ ಘಟಕದ ಹತ್ತಿರ ಹೋಗುತ್ತಿದ್ದಾಗ ಎದುರಿಗೆ ಎಮ್ಮೆ ಬಂದಾಗ ಒಮ್ಮೇಲೆ ಕಟ್‌ ಮಾಡಿದ್ದ ರಿಂದ ನಾವು ಕುಳಿತು ಹೊರಟ ಕಾರ ಪಲ್ಟಿಯಾಗಿ ಅದರಲ್ಲಿ ನನಗೆ ಹಾಗೂ ಅತನ ಗೆಳೆಯರಿಗೆ ಬಾರಿಗಾಯ ಹಾಗೂ ಸಾದಾಗಾಯ ವಾಗಿರುತ್ವೆ ಅಂತಾ ಸಲ್ಲಿಸಿದ ದೂರು ಸಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.