POLICE BHAVAN KALABURAGI

POLICE BHAVAN KALABURAGI

08 December 2015

Kalaburagi District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಿವಕುಮಾರ ತಂಧೆ ದೇವಪ್ಪ ಕುರಬಾಳ ಸಾ : ಹೆರೂರ ಬಿ ರವರ ತಂದೆ ದೇವಪ್ಪ ಇವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಖಾಸಗಿ ಚಿಕಿತ್ಸೆಗಾಗಿ ದಿನಾಂಕ 6/12/2015 ರಂಧು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತಮ್ಮೂರಿನಿಂಧ ಸರಡಗಿ ಗ್ರಾಮಕ್ಕೆ ಹೋಗಿ ಅಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಢು ಮರಳಿ ಹೆರೂರ ಬಿ ಗ್ರಾಮಕ್ಕೆ ಹೋಗುವ ಕುರಿತು ಅದೇ ದಿನ ಸಾಯಂಕಾ ಸರಡಗಿ ಗ್ರಾಮದ ಕ್ರಾಸದಲ್ಲಿರುವ ಬಸ್ಸ ನಿಲ್ದಾಣದ ಎನ್.ಹೆಚ್ 218 ಹೆದ್ದಾರಿಯಲ್ಲಿ ಬಂಧು ನಿಂತಿದ್ದು ತನ್ನ ತಂದೆ ಕಾಲಮಡಿ (ಏಕಿ) ಮಾಡಿ ಬರುತ್ತೇನೆ ಅಂತಾ ಸ್ವಲ್ಪ ಮುಂದೆ ಏಕಿ ಮಾಡಿ ಅಲ್ಲಿಯ ರೋಢಿನ ಪಕ್ಕದಲ್ಲಿ ನಿಂತಾಗ ಇದೇ ವೇಳೆಗೆ ಫರಹತಾಭಾದ ಕಡೆಯಿಂದ ಒಬ್ಬ ಮೊಟಾರ ಸೈಕಲ ನಂ ಕೆ.ಎ 32 ಎಸ್ 8133 ನೇದ್ದರ ಸವಾರನು ತನ್ನ  ಮೊಟಾರ ಸೈಕಲ ಅತೀ ವೇಗ ಮತ್ತು ಅಲಕ್ಷತನದಿಂಧ ಚಲಾಯಿಸಿಕೊಂಢು ಬಂಧು ತನ್ನ ತಂದೆಗೆ ಡಿಕ್ಕಿ ಪಡೆಯಿಸಿ ಮೊಟಾರ ಸೈಕಲ ನಿಲ್ಲಿಸದೇ ಓಢಿ ಹೋಗಿರುತ್ತಾನೆ. ನಂತರ ತಾನು ತನ್ನ ತಂದೆಗೆ ಚಿಕಿತ್ಸೆಗಾಗಿ 108 ಅಂಬುಲೇನ್ಸದಲ್ಲಿ ಹಾಕಿಕೊಂಢು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂಧು ಸೇರಿಕೆ ಮಾಡಿದ್ದು  ಅಪಘಾತದಲ್ಲಿ ಗಾಯಹೊಂದಿ ಚಿಕಿತ್ಸೆ ಪಡೆಯತ್ತಿದ್ದ ನನ್ನ ತಂದೆ ದೇವಪ್ಪ ತಂದೆ ಮುತ್ತಪ್ಪ ಕುರಬಾಳ ಇವರಿಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 08-12-2015 ರಂದು ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣಗಳು :
ಮಹಿಳಾ ಠಾಣೆ : ದಿನಾಂಕ 07-12-2015 ರಂದು 6-30 ಪಿ.ಎಮ್ ಕ್ಕೆ ಕುಮಾರಿ ಸಾ: ಕಲ್ಲೂರ ತಾಂಡಾ ತಾ: ಅಫಜಲಪೂರ  ಹಾ:ವ ಭರತನಗರ ತಾಂಡಾ ಕಲಬುರಗಿ ಇವರು ಇನಾಮದಾರ ಕಾಲೇಜಿನಲ್ಲಿ ರಾಷ್ಟ್ರಿಯ ಗ್ರಾಮೀಣ ಅಭಿವೃದಿ ಯೋಜನೆ ಅಡಿಯಲ್ಲಿ ಕಂಪ್ಯೂಟರ ತರಬೇತಿ ಪಡೆಯುತ್ತಿದ್ದು ಹಾಗೂ ನನಗೆ ಕೆಲವು ತಿಂಗಳ ಹಿಂದೆ ಕೈಗೆ ಪಟ್ಟಾಗಿದ್ದರಿಂದ ಡಾಕ್ಟರ ಸಲಹೆ ಮೇರೆಗೆ ಸರಕಾರಿ ಮುದ್ರಣಾಲಯ ಎದುರುಗಡೆ ಇರುವ ಡಾ:ಅಬ್ದುಲ ಹಕೀಮ ಇವರ ಆಸ್ಪತ್ರೆಯಲ್ಲಿ ಪೀಜಿಯೋ ತೆರಪಿ ಮಾಡುತ್ತಿರುವುದ್ದರಿಂದ ಸುಮಾರು ಒಂದುವರೆ ತಿಂಗಳಿಂದ  ಬೆಳಗ್ಗೆ 9 ಗಂಟೆಯಿಂದ ಸಾಯಾಂಕಾಲ 5 ಗಂಟೆಯವರೆಗೆ ಇನಾಮದಾರ ಕಾಲೇಜಿನಲ್ಲಿ ತರಬೇತಿ ಪಡೆದು ನಂತರ ಸಾಯಾಂಕಾಲ 6 ಗಂಟೆಯಿಂದ 8 ಗಂಟೆಯವರೆಗೆ ಪೀಜಿಯೋ ತೆರಪಿ ಮಾಡಿಸಿಕೊಳ್ಳಲು ಹೋಗುತ್ತಿದ್ದೆ  ದಿನಾಂಕ 4-12-2015 ರಂದು ಸಾಯಾಂಕಾಲ ಯಥಾಪ್ರಕಾರ  ಪೀಜಿಯೋ ತೆರಪಿ ಮಾಡಿಸಿಕೊಳ್ಳಲು  ಮನೆಯಿಂದ ಸುಮಾರು 5-30 ಗಂಟೆಗೆ  ಮನೆಯಿಂದ ಹೋಗುತ್ತಿರುವಾಗ  ಮಹಾದೇವಪ್ಪಾ ರಾಂಪೂರೆ ಮೆಡಿಕಲ ಕಾಲೇಜ ಹತ್ತಿರ ಆಟೋಕ್ಕಾಗಿ  ಕಾಯುತ್ತಿರುವಾಗ  3 ಜನರಾದ  1)ವಿಕಾಸ @ವಿಕ್ಕಿರಾಜ ತಂದೆ ಲಿಂಬುಲಾಲ 2) ಸಂತೋಷ ತಂದೆ ರಾಮು ರಾಠೋಡ  3)ಸಿಂಧೂರ ತಂದೆ ಕುಶಪ್ಪಾ  3 ಜನ ನನ್ನನ್ನು ಬಲವಂತವಾಗಿ ಒಯ್ದು ನನ್ನನ್ನು ವಿಕಾಸ@ವಿಕ್ಕಿರಾಜ ಇತನು  ಸ್ವಿಪ್ಟ ಗಾಡಿಯಲ್ಲಿ ಅತ್ಯಾಚಾರ ಮಾಡಿರುತ್ತಾನೆ.  ಹಾಗೂ ಮಧ್ಯರಾತ್ರಿ 2-30 ಗಂಟೆಗೆ ವಿಕಾಸ ಇತನ ಅಣ್ಣನಾದ ನಾಗೇಶ ಇತನು ಈ ವಿಷಯ ಯಾರಿಗೂ ಹೇಳಬೇಡ ನಿನ್ನ ತಾಯಿ ನಮ್ಮ ಮೇಲೆ ಪೋಲಿಸ ಠಾಣೆಯಲ್ಲಿ ಕೇಸು ಮಾಡಿದ್ದಾಳೆ  ನೀನು ಪೋಲಿಸ ಠಾಣೆಗೆ ಹೋಗಿ ನಮ್ಮ ಪರವಾಗಿ ಮಾತನಾಡು ಇಲ್ಲವಾದರೆ ನಿನ್ನನು  ಹಾಗೂ ನಿಮ್ಮ ತಂದೆ ತಾಯಿಗೆ ಜೀವಂತ ಇಡುವುದಿಲ್ಲವೆಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಹೆದರಿಸಿ ನನ್ನನ್ನು ಬಿಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,  ಕಾರಣ 4 ಜನರ  ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಲಿಖಿತ ಫಿರ್ಯಾದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:92/2015 ಕಲಂ 366,376,506 ಸಂಗಡ 34  ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು ಸದರಿ ಪ್ರಕಣವು ಘೋರ ಪ್ರಕರಣವಾಗಿದ್ದರಿಂದ ಘಟನಾ ಸ್ಥಳದ ಆಧಾರದ ಮೇಲಿಂದ ಮುಂದಿನ ತನಿಖೆ ಕುರಿತು ಕತವನ್ನು ಪಿ.ಐ ಬ್ರಹ್ಮಪೂರ ಪೊಲೀಸ ಠಾಣೆ ರವರಿಗೆ ವಹಿಸಲಾಗಿದೆ.
ಮಾಹಾಗಾಂವ ಠಾಣೆ : ಕುಮಾರಿ 17 ವರ್ಷ ಇವಳು ಕಮಲಾಪೂರ ಸರ್ಕಾರಿ  ಪದವಿ ಪೂರ್ವ ಕಾಲೇಜಿನಲ್ಲಿ ಮೊದಲನೆ ವರ್ಷದಲ್ಲಿ ಓದುತ್ತಿದ್ದು. ಇವಳು ದಿನಾಲು ಊರಿನಿಂದ ಹೋಗಿ ಬರುತ್ತಿದ್ದು, ಗ್ರಾಮದ ಬಸವರಾಜ ತಂದೆ ದೇವಿಂದ್ರಪ್ಪ ನಾಟಿಕಾರ್ ಈತನು ಹೋಗಿ ಬರುವ ಕಾಲಕ್ಕೆ ಸತಾಯಿಸುವುದು, ಹಿಂದೆ, ಮುಂದೆ ಓಡಾಡುವುದು ಮಾಡುತ್ತಿರುವಾಗ, ಈ ವಿಷಯ ಮಗಳು ತಿಳಿಸಿದಾಗ, ಅವರ ಮನೆಗೆ ತಾನು ಮತ್ತು ತನ್ನ ಸಂಭಂದಿಕರು ಹೋಗಿ ಬುದ್ದಿವಾದ ಹೇಳಿ ಬಂದಿದ್ದು, ದಿನಾಂಕ 28/11/2015 ರಂದು ಬೆಳಿಗ್ಗೆ 7:00 ಗಂಟೆ ಸುಮಾರಿಗೆ ಮನೆಯಿಂದ ಕಾಲೇಜಿಗೆ ಹೋಗುವಾಗ, ಬೆಳಿಗ್ಗೆ 7:15 ಗಂಟೆ ಸುಮಾರಿಗೆ ಹೇರೂರ ಕ್ರಾಸಿನ ಬಸ್ ಸ್ಟಾಂಡಿನ ಹತ್ತಿರ ನನ್ನ ಮಗಳಿಗೆ ಗ್ರಾಮದ ಬಸವರಾಜ ನಾಟಿಕಾರ್ ಮತ್ತು ಚಂದ್ರಕಾಂತ ತಂದೆ ಶ್ರೀಮಂತ ಸಾ: ಕಂದಗೋಳ್ ಇವರಿಬ್ಬರು ಅಪಹರಿಸಿಕೊಂಡು ಹೋಗಿದ್ದು ಇತರರು ಅದಕ್ಕೆ ಪ್ರಚೋದನೆ ಮತ್ತು ಸಹಾಯ ಮಾಡಿರುತ್ತಾರೆ. ದಿನಾಂಕ 08/12/2015 ರಂದು ದುಃಖಾಪತಳಾದ ಕುಮಾರಿ ಇವಳನ್ನು  ಮಹಾಗಾಂವ ಪೊಲೀಸ್ ಠಾಣೆಗೆ ಹಾಜರಾಗಿ ಶ್ರೀಮತಿ ಭಾರತಿಬಾಯಿ ಮ.ಎ.ಎಸ್.ಐ ಇವರ ಸಮಕ್ಷಮದಲ್ಲಿ ಹೇಳಿಕೆ ಕೊಟ್ಟಿದ್ದೆನೆಂದರೆ, ದಿನಾಂಕ 28/11/2015 ರಂದು ಬೆಳಿಗ್ಗೆ 7:15 ಗಂಟೆ ಸುಮಾರಿಗೆ ಗ್ರಾಮದ ಬಸವರಾಜ ಮತ್ತು ಆತನ ಸಂಭಂದಿ ಚಂದ್ರಕಾಂತ ಇವರು ತನಗೆ ಭಯ ಹಾಕಿ ಜಬರದಸ್ತಿಯಿಂದ ಅಪಹರಿಸಿಕೊಂಡು ಹೋಗಿ ಕಲಬುರಗಿಯಿಂದ ಪೂನಾಕ್ಕೆ ಜಬರದಸ್ತಿಯಿಂದ ವೈದು, ಅಲ್ಲಿ ಶೇಷಪ್ಪಾ ಈತನ ಸಹಾಯದಿಂದ ಅಕ್ರಮವಾಗಿ ಒಂದು ರೂಮಿನಲ್ಲಿ ಕೂಡಿಟ್ಟು ದಿನಾಲು ಹಗಲು ಮತ್ತು ರಾತ್ರಿಯನ್ನದೆ ಜಬರದಸ್ತಿಯಿಂದ ಹಟ ಸಂಭೋಗ ಮಾಡುತ್ತಾ ಬಂದಿದ್ದು, ಅಲ್ಲದೆ ಆತನ ಸಂಭಂದಿಕರು ಕೂಡಾ ಪೂನಾಕ್ಕೆ ಬಂದು ಸಹಾಯ ಮತ್ತು ಪ್ರಚೋದನೆ ಮಾಡಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅಣ್ಯಾಪ್ಪಾ ತಂದೆ ಮಲ್ಲಿಕಾರ್ಜುನಪ್ಪಾ  ಇಂಗಿನಶೇಟ್ಟಿ ಸಾ: ದೇಶಮುಖ ಲೇ ಔಟ್ ಸುಭಾ ಅಪಾರ್ಟಮೆಂಟ ಲಾಲಗೇರಿ ಬ್ರಹ್ಮಪೂರ ಕಲಬುರಗಿ ಇವರು ತನ್ನ ಹಿರೊ ಹೊಂಡಾ ಸ್ಪೇಂಡರ್‌‌ ಮೊಟಾರ ಮೊಟಾರ ಸೈಕಲ ನಂ KA32X 3550 ನೆದ್ದನ್ನು ದಿನಾಂಕ 24-11-2015 ರಂದು ಬೆಳಿಗ್ಗೆ ನಮ್ಮ ಸುಭಾ ಅಪಾರಟಮೆಂಟ ಕೆಳಗಡೆ ವಾಹನ ಪಾರ್ಕಿಂಗನಲ್ಲಿ ನಾನು ನನ್ನ ಮೊಟಾರ ಸೈಕಲ ನಿಲ್ಲಿಸಿ ಹುಮನಾಬಾದಕ್ಕೆ ಹೊಗಿರುತ್ತೇನೆ. ದಿನಾಂಕ 25-11-2015 ರಂದು ಬೆಳಿಗ್ಗೆ 10 ಗಂಟೆಗೆ ನಾನು ಮರಳಿ ಮನೆಗೆ ಬಂದಿದ್ದು ನನ್ನ ಮೊಟಾರ ಸೈಕಲ ಇರಲಿಲ್ಲಾ ನಾನು ಅಂದಿನಿಂದ ಎಲ್ಲಾಕಡೆ ಹುಡುಕಾಡಿದರು ನನ್ನ ಮೊಟಾರ ಸೈಕಲ ಸಿಕ್ಕಿರುವದಿಲ್ಲಾ ನನ್ನ ಮೊಟಾರ ಸೈಕಲ ಕಪ್ಪು ಬಣ್ಣವುಳ್ಳದ್ದು ಇದ್ದು ಅದರ ನಂ KA32X 3550 CHASSIS.NO-MBLHA10EYAHH13848, ENGINE.NO.HA10EFAHH44895 ಅ:ಕಿ: 30000/-ರೂಪಾಯಿ ಬೆಲೆ ಬಾಳುವದು ಯಾರೊ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: