POLICE BHAVAN KALABURAGI

POLICE BHAVAN KALABURAGI

07 March 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 07-03-2015 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಸ್ವಲ್ಪ ದೂರು  ಮರೆಯಾಗಿ ನಿಂತು ನೋಡಲು ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಬಸವರಾಜ ತಂದೆ ಚನ್ನವೀರಪ್ಪಾ ಮಲಗಾಣ ಸಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 315/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಜಶ್ರೀ ಗಂಡ ಶೀಶೈಲ ಇಬೂತಿ ಇವರ ಗಂಡ ಶ್ರೀಶೈಲ ಇವರು ಸುಮಾರು 2 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ನನ್ನ ಗಂಡನಿಗೆ ಶರಣಪ್ಪಾ ಮತ್ತು ದೇವಾ ಅಂತಾ 2 ಜನ ತಮ್ಮಂದಿರರು ಇರುತ್ತಾರೆ. ನಾವೆಲ್ಲರು ಬೇರೆ ಬೇರೆಯಾಗಿ ಸಂಸಾರ ಮಾಡುತ್ತಿರುತ್ತೇವೆ. ನನ್ನ ಮೈದುನ ದೇವಾ ಮತ್ತು ಅವನ ಹೆಂಡತಿ ಜೋತಿ ರವರು ಮನೆ ಕೆಲಸದ ವಿಷಯಕ್ಕೆ ಸುಮಾರು ಸಲ ನನ್ನೊಂದಿಗೆ ತಕರಾರು ಮಾಡಿಕೊಳ್ಳುತ್ತಾ ಬಂದಿರುತ್ತಾರೆ.   ದಿನಾಂಕ 04-03-2015 ರಂದು ಜೋತಿ ಇವಳು 1;00 ಪಿ.ಎಂ ಸುಮಾರಿಗೆ ತಮ್ಮ ಮನೆ ಸ್ವಚ್ಚ ಮಾಡಿ ಮನೆಯಲ್ಲಿದ್ದ ಹಳೆ ಸಾಮಾನುಗಳನ್ನು ನಮ್ಮ ಮನೆಯಲ್ಲಿ ತಂದು ಇಡುತ್ತಿದ್ದಾಗ ನಾನು ಜೋತಿ ಇವಳಿಗೆ ಈ ಸಾಮಾನುಗಳನ್ನು ನಮ್ಮ ಮನೆಯಲ್ಲಿ ಯಾಕ ತಂದು ಇಟ್ಟಿದಿ ಅಂತಾ ಕೇಳಿದ್ದಕ್ಕೆ ನಾನು ತಂದು ಇಡಕ್ಕಿನೆ ನೀ ಏನ ಮಾಡಕೋತಿ ಮಾಡಕು ಅಂತಾ ಅಂದಳು ಆಗ ನಾನು ನಿಮ್ಮ ಮನೆ ಸ್ವಚ್ಚ ಇಟ್ಟುಕೊಂಡು ನಮ್ಮ ಮನೆ ಯಾಕ ಹೊಲಸ ಮಾಡತಿರಿ ನಿಮಗ ನಾಚೀಕೆ ಬರಲ್ಲಾ ಅಂತಾ ಅಂದಿದ್ದಕ್ಕೆ ಜೋತಿ ಇವಳು ಏನೆ ರಂಡಿ ನನಗೆ ಎದುರು ಮಾತಾಡತಿಯಾ ಅಂತಾ ಅಂದು ನನಗೆ ಕೈಯಿಂದ ಕಪಾಳ ಮೇಲೆ ಹೊಡೆದಳು, ನಂತರ ಅಲ್ಲೆ ಇದ್ದ ಅವಳ ಗಂಡ ದೇವಾ ಇವನು ನನ್ನ ಹತ್ತಿರ ಬಂದು ನನಗೆ ಕೈ ಹಿಡಿದು ಎಳೆದು ಏನೇ ರಂಡಿ ನನ್ನ ಹೆಂಡತಿಗೆ ಬೈತಿಯಾ ಅಂತಾ ಅಂದು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ನನ್ನ ಎಡಗಡೆ ತೊಡೆಯ ಮೇಲೆ ಜೋರಾಗಿ ಹೊಡೆದು ಭಾರಿ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಂಬಾಜಿ ಇವರಿಗೆ ನೋಡಲು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಅವರ ಜೊತೆಯಲ್ಲಿದ್ದ ಲೋಕಪ್ಪ ತಂದೆ ರಾವತಪ್ಪ ಇವರನ್ನು ವಿಚಾರಿಸಲು ದಿನಾಂಕ:28/02/2015 ರಂದು ಸಾಯಂಕಾಲ ಫಿರ್ಯಾದಿಯ ಮತ್ತು ಸೋಮಲಿಂಗ ತಂದೆ ವಿಠಲ ಬುರಾವ ಬಸ್ ನಿಲ್ದಾಣದ ಒಳಗಡೆ ನಿಂತಿರುವಾಗ  ಶಂಬಾಜಿ ಇವರು  ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಒಳಗೆ ಇರುವ ಶೌಚಾಲಯಕ್ಕೆ ಏಕಿ (ಒಂದಕ್ಕೆ) ಮಾಡುವ ಸಲುವಾಗಿ ನಡೆದುಕೊಂಡು ಹೋಗುತ್ತಿದ್ದಾಗ ನೃಪ ತುಂಗಾ ಬಸ್ ನಿಲ್ಲುವ ಸ್ಥಳದ ಕಡೆಯಿಂದ ಎನ್.ಇ. ಕೆ.ಆರ್.ಟಿ.ಸಿ. ಬಸ್ ನಂ:  ಕೆಎ 32 ಎಫ್ 1910 ರ ಚಾಲಕನು ತನ್ನ ಬಸ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶಂಬಾಜಿಗೆ  ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ರಕ್ತ ಗಾಯಗೊಳಿಸಿ ಬಸ್ ಸಮೇತ ಹೊರಟು ಹೋಗಿದ್ದು  ಈ ಬಗ್ಗೆ ಪ್ರಕರಣ ದಾಖಲಾಗಿದ್ದು  ಶ್ರೀ ಸುರೇಶ ತಂದೆ ಸಂಬಾಜಿ ಮಾನೆ ರವರು ಇಂದು ದಿನಾಂಕ: 04/03/2015 ರಂದು ಠಾಣೆಗೆ ಬಂದು ಹೇಳಿಕೆ ನೀಡ್ಡಿದ್ದೆನೆಂದರೆ ದಿನಾಂಕ:28/02/2015 ರಂದು ಎನ್.ಈ.ಕೆ.ಆರ್.ಟಿ.ಸಿ ಬಸ ನಂಬರ ಕೆಎ-32 ಎಫ-1910 ರ ಚಾಲಕನಾದ ಜಹಾಂಗೀರಮಿಯಾ ಇತನು  ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿರುವ ನನ್ನ ತಂದೆಯಾದ ಸಂಬಾಜಿ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿದರಿಂದ ದಿನಾಂಕ 28.02.2015 ರಂದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಸೊಲಾಪೂರ ಯಶೋದರಾ ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯ ಅಂಬುಲೇನ್ಸ ವಾಹನದಲ್ಲಿ ರಾತ್ರಿ ನನ್ನ ತಂದೆಯಾದ ಸಂಬಾಜಿ ಇತನು ಮೃತಪಟ್ಟಿದ್ದು ಮೃತ ಪಟ್ಟ ದು:ಖದಲ್ಲಿ ನಮಗೆ ಯಾವುದು ಗೊತ್ತಾಗದೆ ಆತನ ಮೃತ ದೇಹವನ್ನು ನಮ್ಮೂರಿಗೆ ತೆಗೆದುಕೊಂಡು ಹೋಗಿ ನನ್ನ ತಂದೆಯ  ಮೃತ ದೇಹವನ್ನು ನಮ್ಮ ಧಾರ್ಮಿಕ ವಿಧಿ ವಿಧಾನದ ಪ್ರಕಾರ ದಹನ ಮಾಡಿದ್ದು ನಮ್ಮ ತಂದೆ ಸತ್ತ ದು:ಖದಲ್ಲಿ ಪೊಲೀಸ್ ನವರಿಗೆ ಮಾಹಿತಿ ನೀಡಲು ಆಗಿರುವದಿಲ್ಲಾ. ಇಂದು ತಡವಾಗಿ ಠಾಣೆಗೆ ಬಂದಿದ್ದು ತಾವು ಮುಂದಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: