POLICE BHAVAN KALABURAGI

POLICE BHAVAN KALABURAGI

13 October 2014

Gulbarga District Reported Crimes

ಅಪಘಾತ ಪ್ರಕರಣ :
ಕಾಳಗಿ ಠಾಣೆ : ದಿನಾಂಕ 13/10/2014 ರಂದು ಬೆಳಗ್ಗೆ 9-50 ಗಂಟೆ ಸುಮಾರಿಗೆ ಶ್ರೀ ಮೌಲಾಲಿ ತಂದೆ ಹನೀಫಸಾಬ ಮಂಗಲಗಿ ಸಾ:ನಾವದಗಿ ತಾ:ಚಿಂಚೋಳಿ  ರವರು ಮನೆಯಲ್ಲಿರುವಾಗ ನಮ್ಮ ಗ್ರಾಮದ ಅಲ್ಲಾವೋದ್ದಿನ ಇತನಿಗೆ ಪರಿಚಯಸ್ಥರು ಫೋನ ಮಾಡಿ ಮೋಟರ ಸೈಕಲ ನಂ ಕೆಎ-32 ಎಲ್-0600 ನೇದ್ದರ ಮೇಲೆ ಹೋರಟಿದ್ದ ಇಬ್ಬರಿಗೆ ಕೆ.ಇಬಿ ಕ್ರಾಸ ಹತ್ತಿರ ಅಪಘಾತವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದು ಮೋಟರ ಸೈಕಲ ಫಿರ್ಯಾದಿ ಮಗ ನಜೀರ ಇತನದಿದ್ದು ಪಿರ್ಯಾದಿ  ಗಾಬರಿಗೋಂಡು ಸ್ಥಳಕ್ಕೆ ಬಂದು  ಹಾಜರಿದ್ದ ಜನರನ್ನು ವಿಚಾರಿಸಲಾಗಿ ಮೋಟರ ಸೈಕಲ ನಂ ಕೆಎ-32 ಎಲ್, 0600 ನೇದ್ದವರ ಮೇಲೆ ನಿಮ್ಮ ಮಗ ಹಾಗೂ ಆತನ ಹಿಂದೆ ಖಾಜಾ ಇತನನು ಕೂಡಿಸಿಕೊಂಡು ಗೊಟೋರ ಕಡೆಯಿಂದ ಕಾಳಗಿ ಕಡೆಗೆ ಬರುತ್ತಿರುವಾಗ ಎದುರಿನಿಂದ ಟಂಟಂ ನಂ ಕೆಎ-32, ಬಿ-6447 ನೇದ್ದರ ಚಾಲಕ ತನ್ನ ಟಂಟಂ ವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮೋಟರ ಸೈಕಲನಿಗೆ ಜೋರಾಗಿ ಡಿಕ್ಕಿ ಪಡಿಸಿದ ಪರಿಣಾಮ ನಜೀರ ಹಾಗೂ ಖಾಜಾ ಇಬ್ಬರಿಗು ತಲೆ, ಹಣೆ, ಬಲಗೈ, ಕಾಲುಗಳಿಗೆ  ಭಾರಿ ರಕ್ತಗಾಯಗಳಾಗಿ ಇಬ್ಬರು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾರೆ ಟಂಟಂ ಚಾಲಕ ತನ್ನ ಟಂಟಂವನ್ನು ಅಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮೊಸ ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ:07/10/2014ನೇದ್ದನ್ನು ತಂದು ಹಾಜರು ಪಡಿಸಿದ್ದು. ಮಾನ್ಯ ಎಎಸ್.ಪಿ (ಗ್ರಾ) ಉಪ-ವಿಭಾಗ ಗುಲಬರ್ಗಾ ರವರ ಜ್ಞಾಪನಾ ಪತ್ರ ಮಾನ್ಯ ನ್ಯಾಯಾಲಯದ ಆದೇಶ ಹಾಗು ಫಿರ್ಯಾದಿದಾರಳಾದ ಅನೀತಾ ತಂದೆ ಗುಂಡಪ್ಪಾ ಉ:ವಿದ್ಯಾರ್ಥಿನಿ ಸಾ:ಕಟ್ಟೋಳಿ ತಾ:ಜಿ:ಗುಲಬರ್ಗಾ ರವರು ಸಲ್ಲಿಸಿದ ಖಾಸಗಿ ದಾವೆಯ ಸಾರಾಂಶವೆನೇಂದರೆ, ಫಿರ್ಯಾದಿದಾರಳ ಮತ್ತು ಅವಳ ತಂದೆ ಗುಂಡಪ್ಪಾ ಹೆಸರಿನಲ್ಲಿ ಕಟ್ಟೋಳಿ ಮಹಾಗಾಂವ ಗ್ರಾಮ ಜಮೀನು ಸರ್ವೇ ನಂ. 94/1 ರಲ್ಲಿ 15 ಎಕರೆ 01 ಗುಂಟೆ ಜಮೀನು ಇರುತ್ತದೆ. ಇದೇ ಸರ್ವೇ ನಂಬರದಲ್ಲಿ ಆರೋಪಿತರಾದ 1) ಗುರುಪಾದಪ್ಪಾ ತಂದೆ ರೇವಣಸಿದ್ದಪ್ಪಾ ಸಂಗಡ 3 ಜನರು ಸಾ: ಎಲ್ಲರೂ ಕಟ್ಟೋಳಿ ಗ್ರಾಮ ಇವರ ಹೊಲ ಸರ್ವೇ ನಂ.94/2 ಅ ನೇದ್ದರಲ್ಲಿ 4 ಎಕರೆ 17 ಗುಂಟೆ ಜಮೀನು ಕೂಡಾ ಫಿರ್ಯಾದಿದಾರಳ ಹೊಲದ ಪಕ್ಕದಲ್ಲಿ ಇರುತ್ತದೆ. ಆದ್ದರಿಂದ ಫಿರ್ಯಾದಿದಾರಳು ಮತ್ತು ಅವಳ ತಂದೆ ತಮ್ಮ ಹೆಸರಿನಲ್ಲಿದ್ದ ಹೊಲವನ್ನು ಆರೋಪಿತರಿಗೆ ಸಹಪಾಲಿಗೆ ಹಚ್ಚಿರುತ್ತಾರೆ. ಆರೋಪಿತರು ತಮ್ಮ ಹೆಸರಿಗೆ ಇದ್ದ 04 ಎಕರೆ 17 ಗುಂಟೆ ಜಮೀನನ್ನು 1983-84 ನೇ ಸಾಲಿನಲ್ಲಿ 04 ಎಕರೆ 17 ಗುಂಟೆ ಜಮೀನಿನ ಬದಲಾಗಿ ಆರ್.ಓ.ಆರ್ ದಲ್ಲಿ 14 ಎಕರೆ 17 ಗುಂಟೆ ಜಮೀನು ಬರೆದುಕೊಂಡಿರುತ್ತಾರೆ ಈ ಬಗ್ಗೆ ಯಾವುದೇ ದಾಖಲಾತಿಗಳು ಇರದೇ ಇದ್ದರು ಕೂಡಾ ತಮ್ಮ ರಾಜಕೀಯ ಹಣದ, ಜಾತೀಯ ಬದಲಾವಣೆ ಮಾಡಿಕೊಂಡಿರುತ್ತಾರೆ. ಮತ್ತು ಪುನಃ ಆರೋಪಿತರು ಪಹಣಿ ತಿದ್ದುಪಡಿ ಮಾಡಲು ಚರ್ಚೆ ಮಾಡಿ, ದಿನಾಂಕ:12-09-2006 ರಂದು ತಹಸೀಲ್ದಾರರಾದ ಸುಲ್ತಾನ ಮಹಿಮೂದ ಇವರಿಗೆ ಅರ್ಜಿ ಸಲ್ಲಿಸಿ ತನ್ನ ಹೆಸರಿನಲ್ಲಿ ಸರ್ವೇ ನಂ. 94/2ಅ ವಿಸ್ತೀರ್ಣ 14 ಎಕರೆ 17 ಗುಂಟೆ ಜಮೀನು ಇರುತ್ತದೆ ಅಂತಾ ಫಾರಂ. 10 ಪ್ರಕಾರ ಸರ್ವೇ ನಂ.94/1 ರಲ್ಲಿ 14 ಎ. 17 ಗು. ತನ್ನ ಕಬ್ಜೆಯಲ್ಲಿದೆ ಅಂತಾ ಹೇಳಿ ಅದರಂತೆ ಪಹಣಿ ಸರಿಪಡಿಸಿ, ಹಿಸ್ಸಾ ನಂ. ತಿದ್ದುಪಡಿ ಮಾಡಲು ಕೋರಿರುತ್ತಾನೆ. ನಂತರ ಇದರ ಬಗ್ಗೆ ಆರೋಪಿ ನಂ. 5.ಸುಲ್ತಾನ ಮಹೆಮೂದ ತಹಸೀಲ್ದಾರರು ಗುಲಬರ್ಗಾ(2006) 6. ಗುರುಶಾಂತಪ್ಪಾಕಂದಾಯ ನೀರಿಕ್ಷಕರು ಮಹಾಗಾಂವ (2006) ಮತ್ತು 7. ಶಾಂತಪ್ಪಾ ಗ್ರಾಮಲೇಖ ಪಾಲಕರು ಮಹಾಗಾಂವ (2006) ಇವರು ತಮ್ಮ ಅಧೀಕಾರ ದುರುಪಯೋಗ ಪಡಿಸಿಕೊಂಡು ಬದಲಾವಣೆ ಮಾಡಿ,ಆರೋಪಿತರಿಗೆ ಸಹರಿಸಿದ್ದರಿಂದ, ನಂತರ ಆರೋಪಿತರು ಸದರ ಜಮೀನಿನ ಮೇಲೆ ಬ್ಯಾಂಕಿನಿಂದ ಸಾಲ ಪಡೆದು. ಸಮ ಪಾಲಕ್ಕೆ ಹಚ್ಚಿದ ಜಮೀನಿನಲ್ಲಿ ಪಾಲು ಕೊಡದೇ ತಮ್ಮ ಪ್ರಭಾವದಿಂದ ಆಕ್ರಮವಾಗಿ, ಫಿರ್ಯಾದಾರರ ಜಮೀನು ಕಬ್ಜೆ ಮಾಡಿ, ತುಂಬಲಾರದ ನಷ್ಟವನ್ನುಂಟು ಮಾಡಿರುತ್ತಾರೆ. ಮೇಲೆ ವಿವರಿಸಿದ ಸಂಗತಿಗಳಿಂದ ಆರೋಪಿಗಳು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ಪ್ರತಿಬಂಧ ನಿಯಮದಂತೆ ಅಪರಾಧ ಎಸಗಿದ್ದು. ತಿಳಿದುಬಂದಿರುತ್ತದೆ. ಕಾರಣ ಸದರ ಮೇಲ್ಕಂಡ 7 ಆರೋಪಿತರ ವಿರುದ್ದ ಮಾನ್ಯ ಘನ ನ್ಯಾಯಾಲಯದ ನಿರ್ದೇಶನದಂತೆ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

No comments: