POLICE BHAVAN KALABURAGI

POLICE BHAVAN KALABURAGI

02 January 2013

GULBARGA DISTRICT


:: ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ ::
ಅಂತರರಾಜ್ಯ ಟವೇರಾ ವಾಹನ ಕಳ್ಳರ ಬಂಧನ,  
ಬಂಧಿತರಿಂದ  20 ಲಕ್ಷ  ಬೆಲೆ ಬಾಳುವ ವಾಹನಗಳು ವಶ.

ಗುಲಬರ್ಗಾ ನಗರದ ಶಾಂತಿ ನಗರ ಬಡಾವಣೆಯಲ್ಲಿ ದಿನಾಂಕ:13/12/2012 ರಂದು  ಶ್ರೀ. ಬಸವರಾಜ ತಂದೆ ಚಂದ್ರಕಾಂತ ಪಾಟೀಲ ಮಾಹಾಲಕ್ಷ್ಮಿ ಲೇಔಟ ಗುಲಬರ್ಗಾ ರವರ ಟವೇರಾ ವಾಹನ ಸಂ. ಕೆ.ಎ-32 ಎ.ಎಂ.-4376 ವಾಹನ ಕಳ್ಳತನ ಆಗಿದ್ದು ಅಲ್ಲದೆ ದಿನಾಂಕ:20/12/2012 ರಂದು ಜೇವರ್ಗಿ ರೋಡ ಎನ್.ಜಿ.ಓ ಕಾಲೋನಿಯಲ್ಲಿ ಶ್ರೀ ಭದ್ರಿ ನಾರಾಯಣ ಮುಜದಾರ ರವರ ಮನೆಯ ಹತ್ತಿರ ಟವೇರಾ ವಾಹನ ನಂ. ಕೆ.ಎ-25 ಸಿ-7572  ಕಳ್ಳತನ ಆಗಿದ್ದು ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತವೆ. ಇದುಲ್ಲದೆ ಗುಲಬರ್ಗಾ ನಗರದ ಒಕ್ಕಲಗೇರಾ ಗಂಜ ಏರಿಯಾದಲ್ಲಿ ಶ್ರೀ ಸೈಯದ ಇಸ್ತಿಯಾರ ಅಹ್ಮದ ರವರ ಟವೇರಾ ವಾಹನ ನಂ. ಕೆ.ಎ-03 ಎಮ್.ಎಮ್ -6968 ಕಳ್ಳತನ ಆಗಿದ್ದು ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
         ಹೀಗೆ ಗುಲಬರ್ಗಾ ನಗರದಲ್ಲಿ ವಾಹನ ಕಳ್ಳತನ ಆಗುತ್ತಿದ್ದರಿಂದ ಶ್ರೀ ಎನ್.ಸತೀಶಕುಮಾರ ಐಪಿಎಸ್‌ ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮತ್ತು ಶ್ರೀ  ಭೂಷಣ ಬೊರಸೆ ಐಪಿಎಸ್‌  ಎ.ಎಸ್‌.ಪಿ (ಎ) ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಟಿ.ಹೆಚ್.ಕರೀಕಲ್ ಪಿ.ಐ, ಸುರೇಶಕುಮಾರ ಪಿ.ಸಿ. 534 (1150), ಉಮ್ಮಣ್ಣ ಪಿ.ಸಿ. 998 (118), ಯೊಗೇಂದ್ರ ಪಿ.ಸಿ. 606 (1258), ಉಮೇಶ ಪಿ.ಸಿ. 882(30), ಶ್ರೀನಿವಾಸ ಪಿ.ಸಿ. 638 (49),  ರವರನ್ನು ಒಳಗೊಂಡ ತಂಡವನ್ನು ರಚಿಸಿ ಹೈದ್ರಾಬಾದಕ್ಕೆ ಕಳುಹಿಸಲಾಗಿತ್ತು.
              ಈ ತಂಡವು ಆಂದ್ರ ಪ್ರದೇಶ ರಾಜ್ಯದ ಹೈದ್ರಾಬಾದ, ರಂಗಾರೆಡ್ಡಿ ಜಿಲ್ಲೆಯ ಹಯಾತ ನಗರ, ವನಸ್ತಲಿಪೂರಂ. ಹಾಗು ತಿರುಪತಿ ಹತ್ತಿರದ ಪಿಲೆಯರು, ಕಡಪಾ, ಕರ್ನೂಲ್ ವಿವಿಧ ಕಡೆಯಲ್ಲಿ ಟವೇರಾ ವಾಹನ ಕಳ್ಳತನ ಮಾಡುವ ಬಗ್ಗೆ ಮಾಹಿತಿ ಕಲೆ ಹಾಕಿ ಗುಲಬರ್ಗಾ ನಗರದಲ್ಲಿ ಟವೇರಾ ವಾಹನ ಕಳ್ಳತನ ಮಾಡಿದ ಅಂತರಾಜ್ಯ ಟವೇರಾ ಇನ್ನಿತರೆ ವಾಹನ ಕಳ್ಳತನ ಮಾಡುವ 1)  ಮುನಿಶೇಖರ ರೆಡ್ಡಿ ತಂದೆ ಮುನಿರೆಡ್ಡಿ ವ-25 ವರ್ಷ ಉ-ಡ್ರೈವರ ಕೆಲಸ ಸಾ: ಕುರಪರ್ತಿವಾರೆಪಲ್ಲಿ ಮಂಡಲ ರೂಂಪಿಚರ್ಲ ತಾ: ಪಿಲೆಯ ಜಿ:ಚಿತ್ತುರ ಹಾ:ವ: ಸೀತಾರಾಮಪೂರ ಪೇಸ ನಂ 2 ಕಾಲೋನಿ ಹಯಾತ ನಗರ ಹೈದ್ರಾಬಾದ  2) ಸಂದೀಪ ತಂದೆ ಗೋರೆಲಾಲ ಗುಪ್ತಾ ವ-24 ವರ್ಷಜಾ:ಗುಪ್ತಾ ಉ-ಸ್ಯಾಪ್ಪ ವ್ಯಾಪಾರ ಸಾ: ಲಾಲ ಬಜಾರ ಕಾನಪೂರ ಉತ್ತರ ಪ್ರದೇಶ ರಾಜ್ಯ ಹಾ;ವ: ಕಳನಗರ ಅಂಬರಪೇಠ ಸೈಬರಬಾದ ಜಿ: ರಂಗಾರೆಡ್ಡಿ 3) ಲಿಂಗಾ ಸ್ವಾಮಿ ತಂದೆ ಅಂಜಯ ರಾಮಲಂ ವ-23 ವರ್ಷ ಜಾ:ಪಿಚ್ಯಾಗುಟ್ಆ ಕೊಂಚಿಕೊರವೆರ ಉ=ಆಟೋ ಚಾಲಕ ಸಾ: ಜಾನಪಲ್ಲಿ ಮಂಡಲ ರಾಮಪೆಠ ಜಿ:ನೆಲಗೊಂಡ ಸದ್ಯ ಜಾಫರಗೂಡಾ ಮಂಡಲ ಹಯಾತ ನಗರ ಜಿ: ರಂಗಾ ರೆಡ್ಡಿ (ಎ.ಪಿ ) ರವರನ್ನು ದಸ್ತಗಿರಿ ಮಾಡಿ ಇವರಿಂದ ಗುಲಬರ್ಗಾ ನಗರದಲ್ಲಿ 3 ಕಡೆ ಟವೇರಾ ವಾಹನಗಳು ಮತ್ತು ಆಂದ್ರ ಪ್ರದೇಶದ ಜಡಚರಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ ಟಾಟಾ ಇಂಡಿಕಾ ವಾಹನವನ್ನು ಪತ್ತೆ ಮಾಡಿ ಒಟ್ಟು 20 ಲಕ್ಷ ರೂ ಬೇಲೆ ಬಾಳುವ ವಾಹನಗಳನ್ನು ವಶಪಡಿಸಿಕೊಂಡು ಗುಲಬರ್ಗಾಕ್ಕೆ ತಂದಿರುತ್ತಾರೆ.
          ಈ ಅಂತರಾಜ್ಯ ಕಳ್ಳರಾದ ಮುನಿಶೇಖರ ರೆಡ್ಡಿ ಇತನು ಹೈದ್ರಾಬಾದಲ್ಲಿ ಹಲುವಾರು ವಾಹನ ಕಳ್ಳತನ ಮಾಡಿದ ಹಳೆ ಗುನ್ನೆಗಾರನಿದ್ದು ಅಲ್ಲದೆ ಆಂದ್ರಪ್ರದೇಶ, ಕರ್ನಾಟಕ, ಇನ್ನಿತರೆ ರಾಜ್ಯಗಳಲ್ಲಿ ವಾಹನ ಕಳ್ಳತನ ಮಾಡುವ ಪ್ರವೃತ್ತಿ ಉಳ್ಳವನಿದ್ದು ಕುಖ್ಯಾತ ಟವೇರಾ ವಾಹನ ಕಳ್ಳನಿಗೆ ಸಿನಿಮಿಯ ರೀತಿಯಿಂದ ದಸ್ತಗಿರಿ ಮಾಡಿಕೊಂಡು ತರಲಾಗಿದೆ. ಈ ಕಾರ್ಯ ಮಾಡಿದ ತಂಡಕ್ಕೆ ಮಾನ್ಯ ಐಜಿಪಿ ಈಶಾನ್ಯ ವಲಯ ಗುಲಬರ್ಗಾ, ಎಸ್.ಪಿ ಗುಲಬರ್ಗಾ, ಎ.ಎಸ್.ಪಿ (ಎ) ಉಪ ವಿಭಾಗ ಗುಲಬರ್ಗಾ ರವರು ಶ್ಲಾಘಿಸಿರುತ್ತಾರೆ.

No comments: