POLICE BHAVAN KALABURAGI

POLICE BHAVAN KALABURAGI

15 October 2012

GULBARGA DISTRICT REPORTED CRIMES


7 ವರ್ಷದ ಅನಾಥ ಹುಡಗಿ ಸಾವು:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ಸುವರ್ಣಲತಾ ತಂದೆ ಯಲ್ಲಪ್ಪಾ ಚಂದ್ರಗಿರಿ ಅಧೀಕ್ಷಕರು ಸರಕಾರಿ ಬುದ್ದಿ ಮಾಧ್ಯ ಬಾಲಕಿಯರ ಬಾಲ ಮಂದಿರ ಗುಲಬರ್ಗಾರವರು ತಮ್ಮ ಬಾಲ ಮಂದಿರದಲ್ಲಿ ಲಕ್ಷ್ಮಿ ಎಂಬ 7 ವರ್ಷದ ಅನಾಥ ಹುಡುಗಿ ಇವಳು ವಾಸಿಸುತ್ತಿದ್ದು ಇವಳಿಗೆ  ದಿನಾಂಕ 13-10-2012  ರಂದು ಮುಂಜಾನೆ 8 ಗಂಟೆ ಸುಮಾರಿಗೆ ಆರಾಮ ಇಲ್ಲದ ಕಾರಣ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಸದರಿಯವಳು ಗುಣ ಮುಖವಾಗದೆ ಮೃತಪಟ್ಟಿದ್ದು, ಸದರಿ ಮೃತಳ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 16/2012 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ: ಶ್ರೀ ಮಹ್ಮದ ಇಸೂಫ ತಂದೆ ಗುಡುಬಾಯಿ ಖುರೇಷಿ ಸಾ|| ಚೆಡಿ ಹೋಟೆಲ್ ಗೋದರಶಾ ಮಜೀದ ಹತ್ತಿರ ಅಮಲಿ ಮೊಹಲ್ಲಾ ಗುಲಬರ್ಗಾವರು ದಿನಾಂಕ: 13/10/2012 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಮಗನಾದ ಅನ್ವರನ ಗೆಳೆಯರಾದ  ಮುಬಿನ್ ತಂದೆ ಅಬ್ದುಲ್ ಹಮೀದ, ವಾಸಿಂ ತಂದೆ ಆದಮ್ ಬಂದು ನಾವು ಮತ್ತು ಅನ್ವರ ಕೂಡಿ ಮೋಟಾರ ಸೈಕಲ್ ಮೇಲೆ ಬಸ್ಸ ಸ್ಟ್ಯಾಂಡ್ ಕಡೆಯಿಂದ ಮನೆಗೆ ಬರುತ್ತಿರುವಾಗ ದಿನಾಂಕ:13/10/2012 ರಂದು ಮಧ್ಯಾಹ್ನ 3.00 ಗಂಟೆ ಸುಮಾರಿಗೆ ಕೋರ್ಟ ಹತ್ತಿರ ಕಲೀಲ್ @ ಕಲ್ಯಾ ಹಾಗೂ ಇನ್ನೊಬ್ಬ  ಬಂದು ನಮಗೆ ಬೇದರಿಕೆ ಹಾಕಿ ನಿಲ್ಲಿಸಿ ಅನ್ವರನಿಗೆ ಯಾವುದೋ ಅಟೋದಲ್ಲಿ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿರುತ್ತಾರೆ ನಾವು ಅನ್ವರನಿಗೆ ಅಲ್ಲಲ್ಲಿ ಹುಡುಕಾಡಿದರೂ ಸಿಗಲಿಲ್ಲಾ ಅಂತಾ ಬಂದು ಹೇಳಿದ್ದರಿಂದ ನಾನು ಮತ್ತು ನನ್ನ  ಹಿರಿ ಮಗ ಅಮಜದ ಕೂಡಿ ಅನ್ವರನಿಗೆ ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೆ  ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ. ಕಲೀಲ್ @ ಕಲ್ಯಾ ಮತ್ತು ಇನ್ನೊಬ್ಬನು  ಕೂಡಿಕೊಂಡು   ಅನ್ವರನಿಗೆ ಯಾವುದೋ ಕಾರಣದಿಂದ ಅಂಜಿಸಿ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ, 341, 363,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ನಶರತ ಕೌಸರ ತಂದೆ ಇಸ್ಮಾಯಿಲಸಾಬ ಅತ್ತಾರ ಸಾ:ಕೊಂಡಗೂಳಿ ತಾ: ಜೇವರ್ಗಿ ಮುಖ್ಯ  ಗುರುಗಳು ಸರಕಾರಿ ಪ್ರೌಡ ಶಾಲೆ ಕೊಂಡಗೂಳಿ ವರು ನಮ್ಮ ಶಾಲೆಯಲ್ಲಿ ದಿನಾಂಕ 13-10-2012 ರ ರಾತ್ರಿ 8 ಗಂಟೆಯಿಂದ ದಿ:14-10-2012 ರ ಬೆಳಿಗ್ಗೆ 5-10 ಗಂಟೆಯ ಮಧ್ಯದ ಅವಧಿಯಲ್ಲಿ  ಯಾರೋ ಕಳ್ಳರು ಶಾಲೆಯ ಕೋಣೆಯಲ್ಲಿಟ್ಟಿದ್ದ ನಾಲ್ಕು ಎಸ್.ಎಮ್.ಎಫ್ ಬ್ಯಾಟರಿಗಳು ಹಾಗೂ ಎರಟು ಪೆಟ್ರೋಮ್ಯಾಕ್ಸಗಳು ಶಾಲೆಯ ಕೋಣೆಯ ಬಾಗಿಲ ಕೊಂಡಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿದ ಠಾಣೆ ಗುನ್ನೆ ನಂ 110/2012 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ ಮೈಬೂಬ ತಂದೆ ಅಬ್ದುಲ್ ಗಪೂರ ಮುಜಾವರ 28 ವರ್ಷ, ಸಾ: ಮುಜಾವರಗಲ್ಲಿ ಅಕ್ಕಲಕೊಟ ರವರು ನಾನು ಮತ್ತು ಅಹಮದ ಮುಜಾವರ ಕೂಡಿಕೊಂಡು  ದಿನಾಂಕ: 14/10/2012 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮೋಟಾರ ಸೈಕಲ್ ನಂ ಎಮ್ ಹೆಚ್-13 ಬಿಡಿ-8070 ನೇದ್ದರ ಮೇಲೆ ಅಕ್ಕಲಕೋಟದಿಂದ ಗುಲಬರ್ಗಾಕ್ಕೆ ಸಂಭಂದಿಕರ ಮದುವೆಗೆ ಬಂದಿದ್ದು, ಮದುವೆ ಮುಗಿಸಿಕೊಂಡು ಮಧ್ಯಾಹ್ನ 3-00  ಗಂಟೆ ಸುಮಾರಿಗೆ  ನಾನು, ಅಹ್ಮದ, ಮತ್ತು ವಸೀಮ ತಂದೆ ಭುರಾಕ್ ಮುಜಾವರ ಸಾ: ಅಕ್ಕಲಕೋಟರವರು ಕೂಡಿಕೊಂಡು  ಅಕ್ಕಲಕೋಟಕ್ಕೆ ಹೋಗುವಾಗ ಅಹ್ಮದ ಮುಜಾವರ ಇತನು ಮೋಟಾರ ಸೈಕಲ್ ನಡೆಸುತ್ತಿದ್ದ ನಾನು ಮತ್ತು ವಸೀಮ ಮುಜಾವರ ಇಬ್ಬರೂ ಹಿಂದೆ ಕುಳಿತ್ತಿದ್ದೆವು. ಸರಸಂಬಾ ಹೀರೊಳ್ಳಿ ಮೇನ್ ರೊಡ್ ಕ್ರಾಸ್ ಸಮೀಪದ  ರಸ್ತೆಯಲ್ಲಿ ಅಹ್ಮದ್ ಇತನು ಮೊಟಾರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಮೋಟಾರ ಸೈಕಲ್  ಸ್ಕೀಡ್  ಮಾಡಿದನು. ಇದರಿಂದ ನಾವು ಮೂರು ಜನರು ಕೇಳಗೆ ಬಿದ್ದಿರುತ್ತವೆ ಅಹ್ಮದ ತಂದೆ ಲಿಯಾಖತ ಮುಜಾವರ ಇತನಿಗೆ ತಲೆಗೆ ಬೆನ್ನಿಗೆ,  ಕಾಲಿಗೆ ಕೈಗೆ ಬಾರಿ ಪೇಟ್ಟಾಗಿ ಕಿವಿಯಿಂದ ಮತ್ತು ಬಾಯಿಯಿಂದ ಭಾರಿ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ನನಗೆ ಮತ್ತು ವಸೀಮ ಮುಜಾವರ ಇವನಿಗೆ ಸಾದಾ ಮತ್ತು ಭಾರಿ ಗುಪ್ತಗಾಯ ಮತ್ತು ರಕ್ತ ಗಾಯವಾಗಿರುತ್ತವೆ. ಅಪಘಾತವಾದಾಗ ಯಾರೋ ಒಬ್ಬರೂ ಬಂದು ನಮಗೆ ನೀರು ಹಾಕಿರುತ್ತಾರೆ ಮತ್ತು ಜನರೆ ಸೇರಿಕೊಂಡು  ಅಂಬುಲೇನ್ಸದಲ್ಲಿ ಹಾಕಿ ಉಪಚಾರಕ್ಕೆ ಆಸ್ಪತ್ರೆಗೆ ಕಳಿಸಿರುತ್ತಾರೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 52/2012  ಕಲಂ 279, 337, 338 304 [ಎ]  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಸಿಮೇ ಎಣ್ಣೆ ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದ ಆರೋಪಿ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:14-10-2012 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಗೋಗಿ{ಕೆ} ಗ್ರಾಮದಲ್ಲಿ  ಟಂ.ಟಂ.ವಾಹನ ಸಂಖ್ಯೆ:ಕೆಎ-32 ಎ-3057 ನೇದ್ದರ ಚಾಲಕ ರಾಜಶೇಖರ ಗೋಣಗಿ ಮು:ಬೆಡಸೂರ ತಾ:ಚಿತ್ತಾಪೂರ ಇತನು ತನ್ನ ಟಂ.ಟಂ ದಲ್ಲಿ ಅಂದಾಜು 50 ಕಿಲೋ ತೂಕದ ಎರಡು ಸಕ್ಕರೆ ಚೀಲಗಳು ಅಃಕಿಃ 4000/- ರೂ. ಮತ್ತು ಸುಮಾರು 50 ಲೀಟರದ ಒಂದು ಪ್ಲಾಸ್ಟೀಕ್ ಕ್ಯಾನ, ಮತ್ತು 30 ಲೀಟರದ ಒಂದು ಪ್ಲಾಸ್ಟಿಕ್ ಕ್ಯಾನ್ ಮತ್ತು 20 ಲೀಟರ್ ದ ಮೂರು ಟಿನ್ ಡಬ್ಬಿಗಳು ಹೀಗೆ ಒಟ್ಟು 140 ಲೀಟರ್ ಅಃಕಿಃ 2660/- ರೂ ಮೌಲ್ಯದ ಸಿಮೇ ಎಣ್ಣೆಯನ್ನು ಕಳ್ಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ  ಶ್ರೀ ಶರಣಬಸಪ್ಪ ತಂದೆ ರಾಮಚಂದ್ರಪ್ಪ ನಾಮದಿ ಸಾ||ಗೋಗಿ {ಕೆ} ತಾಜಿ:ಗುಲಬರ್ಗಾರವರು ಮತ್ತು ಇತರರು ಕೂಡಿಕೊಂಡು ಹಿಡಿದು ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಠಾಣೆ ಗುನ್ನೆ  ನಂ: 108/2012 ಕಲಂ 3 &4 ಇ.ಸಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ನೀಲಕಂಠಪ್ಪಾ ತಂದೆ ಮುರಗೆಪ್ಪಾ ಬೆಡಸೂರ ಸಾಃ ಗೋಗಿ {ಕೆ} ತಾ;ಜಿ:ಗುಲಬರ್ಗಾರವರು ದಿನಾಂಕ:14-10-2012 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಗೋಗಿ{ಕೆ} ಗ್ರಾಮದಲ್ಲಿ ಬಸವರಾಜ ತಂದೆ ಸಿದ್ದಣ್ಣಾ ರಾಣಾಪೂರ ಇತನು ವಿನಾಃಕಾರಣ ಜಗಳ ತೆಗೆದು ಹೊಡೆಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 109/12 ಕಲಂ. 323, 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: