POLICE BHAVAN KALABURAGI

POLICE BHAVAN KALABURAGI

13 September 2012

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ: ಶ್ರೀ, ರಾಜಶೇಖರ ತಂದೆ ಛತ್ರಪ್ಪ ಪವಾಡಶೆಟ್ಟಿ ಉ|| ಲಾರಿ ಮಾಲಿಕ ಸಾ|| ಕಲ್ಯಾಣ ಗಡ್ಡಿ ಚಿಂಚೋಳಿ ರವರು ನಾನು ಬೀದರ ಜಿಲ್ಲೆಯ ಖಟಕ ಚಿಂಚೋಳಿಗೆ ದಿನಾಂಕ: 06-09-2012 ರಂದು ಹೋಗಿ ಪರ್ಸಿ ಕಲ್ಲುಗಳನ್ನು ಖಾಲಿ ಮಾಡಿಕೊಂಡು ಮಧ್ಯರಾತ್ರಿ 01-30 ಗಂಟೆಗೆ ಮರಳಿ ಚಿಂಚೋಳಿ ಪಟ್ಟಣಕ್ಕೆ ಬಂದು ಎಂದಿನಂತೆ ನನ್ನ ಅಶೋಕ ಲೇಲ್ಯಾಂಡ ಲಾರಿ ನಂ. ಕೆಎ.-32 ಬಿ.-2618 ನೇದ್ದನ್ನೂ ಚಿಂಚೋಳಿ ಪಟ್ಟಣದಲ್ಲಿರುವ (ಹಳೆಐ.ಬಿ.ಹತ್ತಿರವಿರುವ) ಭೋಗಾವತಿ ಪೆಟ್ರೋಲ್ ಬಂಕ ಎದುರುಗಡೆಯ ಚಿಂಚೋಳಿ ಚಂದಾಪೂರ ರಸ್ತೆಯ ಬದಿಯಲ್ಲಿ ನಿಲ್ಲಿಸಿ ನಾನು ಮತ್ತು ಲಾರಿ ಚಾಲಕ  ನಾಗಮೂರ್ತಿ ಮನೆಗೆ ಹೋಗಿ ಮಲಗಿಕೊಂಡಿದ್ದು, ಅಂದೆ ದಿನಾಂಕ 06-09-2012 ರಂದು ಬೆಳಗ್ಗೆ 4-00 ಗಂಟೆ ಸುಮಾರಿಗೆ ನೋಡಲು ನಾವು ನಿಲ್ಲಿಸಿದ ಲಾರಿಯು ಆ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಲಾರಿಯ ಇಂಜಿನ ನಂ. ಸಿ.ಝೆಡ್.ಈ. 276350,ಮತ್ತು  ಚೆಸ್ಸಿಸ್ ನಂ. ಸಿ.ಜೆಡ್.ಈ. 387683 ಇರುತ್ತವೆ  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.82/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

ಸರ್ಕಾರಿ ಬಸ್ಸಿನ ಗಾಜು ಓಡೆದ ಬಗ್ಗೆ:
ಕಾಳಗಿ ಪೊಲೀಸ್ ಠಾಣೆ: ಶ್ರೀ ಗುರುನಾಥ ತಂದೆ ಶಿವಣ್ಣ ಹಡಪದ ಎನ್.ಈ.ಕೆ.ಎಸ.ಆರ್.ಟಿ.ಸಿ ಬಸ್ಸ ಚಾಲಕ ಕಾಳಗಿ ಬಸ ಡಿಪೋ ರವರು ದಿನಾಂಕ: 13-09-2012 ರಂದು  1-00 ಪಿ.ಎಂ ಸುಮಾರಿಗೆ ಕೆಎ 32 ಎಫ್.1533 ನೇದ್ದನ್ನು  ಮಂಗಲಗಿಯಿಂದ ಸುಪರ ಮಾರ್ಕೆಟ ಗುಲಬರ್ಗಾಕ್ಕೆ ಚಲಾಯಿಸಿಕೊಂಡು ಬರುತ್ತಿರುವಾಗ ಮಾರ್ಗ ಮದ್ಯದ ಭರತನೂರ ಗ್ರಾಮದ ಹತ್ತಿರ ಅನೀಲ ಕುಮಾರ ತಂದೆ ನಾಗಿಂದ್ರಪ್ಪ ಬೆರ್ಜಿ ಸಾ: ಶ್ರೀನಿವಾಸ ಸರಡಗಿ ಬಸ್ಸ ಚಾಲಕ ಕಾಳಗಿ ಘಟಕ ಇತನು ಬಸ್ಸನ್ನು ತಡೆದು ನಿಲ್ಲಿಸಿ, ಇವತ್ತು ಯಾಕೇ ಬಸ್ಸು ಓಡುಸುತ್ತಿರಿ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ ಬಸ್ಸಿನ ಮುಂದಿನ ದೊಡ್ಡ ಗ್ಲಾಸಿಗೆ ಹೊಡೆದು ಅಂದಾಜು 10-12 ಸಾವಿರದಷ್ಟು ರೂಪಾಯಿಗಳಷ್ಟು ಹಾನಿ ಮಾಡಿದ್ದು, ಮತ್ತು ಚಿತ್ತಾಪೂರದಿಂದ ಕಾಳಗಿಗೆ ಬರುವ  ಬಸ್ಸ ನಂ ಕೆಎ 28 ಎಫ್-1613 ನೇದ್ದನ್ನು ಕೂಡ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಲ್ಲಿನಿಂದ ಬಸ್ಸಿನ ಮುಂದಿನ ಗ್ಲಾಸಿಗೆ ಹೊಡೆದು ಅದಕ್ಕೂ ಸಹ ಅಂದಾಜು 10-12 ಸಾವಿರದಷ್ಟು ಹಾನಿ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:71/2012 ಕಲಂ 341, 504, 283, 427 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. ಮತ್ತು  ಆರೋಪಿತ ಅನೀಲಕುಮಾರ ಇತನಿಗೆ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತಿದೆ.

No comments: