POLICE BHAVAN KALABURAGI

POLICE BHAVAN KALABURAGI

25 May 2012

GULBARGA DIST REPORTED CRIMES


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ನರೋಣಾ ಪೊಲೀಸ್ ಠಾಣೆ: ಶ್ರೀಮತಿ  ಗಂಗಾಬಾಯಿ ಗಂಡ  ಪಾಂಡುರಂಗ ವಾಲಿಕಾರ, ಸಾ: ತೆಲ್ಲೂರ, ತಾ: ಆಳಂದ ರವರು ನಾನು ದಿನಾಂಕ 24/05/2012 ರಂದು ಸಾಯಂಕಾಲ 6:10 ಗಂಟೆ ಸುಮಾರಿಗೆ ನೀರಿನ ಕೊಡ ತುಂಬುತ್ತಿರುವಾಗ ನಮ್ಮೂರಿನವರೆಯಾದ ವಿಶ್ವನಾಥ ತಂದೆ ಶ್ರೀಕಾಂತ ಜೇವರ್ಗಿ, ಇತನು ಬಂದು  ನನಗೆ ಅವಾಚ್ಯ ಶಬ್ದಗಳಿಂದ ಬೈದು ಇಲ್ಲಿಂದ ನೀರು ತೆಗೆದುಕೊಂಡು ಹೋಗಬೇಡವೆಂದು ನನ್ನ ಕೊಡ ಕಸಿದುಕೊಂಡು, ನನಗೆ ಕೈ ಹಿಡಿದು ಕೈಯಿಂದ ನನಗೆ ನನ್ನ ಕಪಾಳ ಮೇಲೆ ಹೊಡೆದನು. ಮತ್ತು ನಾನು ನನಗೆ ಏಕೆ ಹೊಡೆಯುತ್ತಿದ್ದಿರಿ ಅಂತ ಕೇಳಿದಾಗ ಮತ್ತೆ ಕೈಯಿಂದ ನನ್ನ ಕಣ್ಣು ಹುಬ್ಬಿನ ಮೇಲೆ ಒಡೆದು ರಕ್ತ ಗಾಯ ಮಾಡಿದನು, ನನ್ನ ಮಗನಾದ ಶಾಂತಪ್ಪ ಬಂದು ಯ್ಯಾಕೆ ಬೈಯುತ್ತಿ ಅಂತ ಕೇಳುತ್ತಿರುವಾಗ ನನ್ನ ಮಗನಿಗೆ ವಿಶ್ವನಾಥ ಮತ್ತು ಅವನ ಸಂಗಡ ಇದ್ದ ಬಸವರಾಜ ತಂದೆ ಪಂಡೀತ ಚೌಲ ಇವರಿಬ್ಬರು ಕೂಡಿ ಹೊಡೆದಿರುತ್ತಾರೆ. ಗುಂಡಪ್ಪ ತಂದೆ ಸಿದ್ದಣ್ಣ ಚೌಲ್ ಮತ್ತು ನೀಲಕಂಠ ತಂದೆ ಬಸಣ್ಣ ಡೋಳ ಇವರು ಸಹ ಬೈದು ಅವಮಾನ ಮಾಡಿ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 53/2012 ಕಲಂ 323 324 354 504 506 ಐಪಿಸಿ ಮತ್ತು 3[1] [10] ಎಸ್.ಸಿ/ಎಸ್.ಟಿ ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ಸಿದ್ದು ತಂದೆ ರಾಮಚಂದ್ರ ಯಾರಾ ನನ್ನ ಜೋತೆಗೆ ಸುಮಾರು 4-5 ತಿಂಗಳ ಹಿಂದೆ ಗುಲಬರ್ಗಾ ನಗರದ ಗಂಗಾ ನಗರ ಬಡಾವಣೆಯ ಸೀನು ಹಾಗು ನನ್ನ ನಡುವೆ ವಿನಾಃಕಾರಣ ಬಾಯಿ ತಕರಾರು ಆಗಿದ್ದು, ಅಂದಿನಿಂದ  ಸೀನು ಈತನು ನನಗೆ ರಸ್ತೆಯಲ್ಲಿ ಸಿಕ್ಕಾಗ ದಿಟ್ಟಿಸಿ ನೋಡುತ್ತಿದನು. ದಿನಾಂಕ 24-05-2012 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ನನ್ನ ಅಟೋರಿಕ್ಷಾ ಬ್ರಹ್ಮಪೂರ ಬಡಾವಣೆಯ ಲಾಲಗೇರಿಯ ಜಂಗೇ ಬ್ರದರ್ಸ ಕ್ರಾಸ್ ಹತ್ತಿರ ನ್ನ ಅಟೋ ಪಕ್ಕದಲ್ಲಿ ನಿಂತಾಗ ಸೀನು ಈತನು ಹಳೆ ವೈಮನಸ್ಸಿನಿಂದ ಅವನ ಜೊತೆಯಲ್ಲಿ ಇನ್ನಿಬ್ಬರು ಹುಡುಗರನ್ನು ಕರೆದುಕೊಂಡು ಬಂದವರೇ ನನ್ನ ಜೊತೆಯಲ್ಲಿ ಜಗಳ ಮಾಡಿ ಕೈಯಿಂದ  ಬಡಿಗೆಯಿಂದ ಹೊಡೆ ಬಡೆ ಮಾಡಿ ಗುಪ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 37/12 ಕಲಂ 341, 323, 324, 504 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: