POLICE BHAVAN KALABURAGI

POLICE BHAVAN KALABURAGI

13 May 2012

GULBARGA DIST REPORTED CRIMES


ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ : ದಿನಾಂಕ:12/05/2012 ರಂದು 11.00 ಎಎಂ ಶಹಾಬಾದ ಪಟ್ಟಣದ ಲಕ್ಮೀ ಗಂಜ ಏರಿಯಾದ ನಾಗಯ್ಯ ಸ್ವಾಮಿ ರವರ ಅಡತಿಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕುಳಿತು ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ  ಶರಣಪ್ಪಾ ಹಿಪ್ಪರಗಿ  ಪಿ.  ಶಹಾಬಾದ ನಗರ ಠಾಣೆ, ರವರು ತಮ್ಮ ಸಿಬ್ಬಂದಿಯವರೊಂದಿಗೆ  ಹೋಗಿ ದಾಳಿ ಜೂಜಾಟ ನಿರತರಾದ ಅಪ್ಪಾಸಾಬ ತಂದೆ ಶಿವಲಿಂಗಪ್ಪಾ ಅಚ್ಚೆಟ್ಟಿ ಸಾ:ಬಸವೇಶ್ವರ ನಗರ ಶಹಾಬಾದ, ]ಭೀಮರಾಯ ತಂದೆ ಮಹಾದೇವಪ್ಪಾ ನಾಗೂರೆ ಸಾ:ಲಕ್ಷ್ಮೀಗಂಜ ಶಹಾಬಾದ,ಭೀಮರಾಯ ತಂದೆ ಹಣಮಂತ ಪೂಜಾರಿ ಸಾ:ಬಸವೇಶ್ವರ ನಗರ ಶಹಾಬಾದ,ಶರಣಪ್ಪಾ ತಮದೆ ಸಿದ್ದಪ್ಪ ಕೆಲ್ಲೂರ ಸಾ:ಶರಣ ನಗರ ಶಹಾಬಾದ, ಬಸವರಾಜ ತಂದೆ ನಾಗಪ್ಪಾ ಭಜಂತ್ರಿ ಸಾ:ಬಸವೇಶ್ವರ ನಗರ ಶಹಾಬಾದ, ಹುಣಚಪ್ಪಾ ತಂದೆ ಬಸಣ್ಣಾ ಕಾಮಾ ಸಾ:ಬಸವೇಶ್ವರ ನಗರ ಶಹಾಬಾದ ಇವರಿಂದ ನಗದು ಹಣ 5575/-ರೂ ನಗದು ಹಣ  ಮತ್ತು  ಇಸ್ಪೀಟ ಎಲೆಗಳು   ಪಂಚರ ಸಮಕ್ಷಮ ಪಂಚನಾಮೆ ಮಾಡಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 60/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ :ಶ್ರೀ ಜಿಲಾನಿ ತಂದೆ ಫತ್ರುಪಟೇಲ್  ಸಾ|| ನ್ಯೂ ರಾಘವೇಂದ್ರ ಕಾಲೋನಿ  ಗುಲಬರ್ಗಾವರು ನ್ನ ಉಪಜೀವನಕ್ಕೋಸ್ಕರ 2 ವರ್ಷಗಳ ಹಿಂದೆ ಮಹೇಂದ್ರ ಕಂಪನಿಯ ಫಿಕ್ಆಫ್  ವಾಹನ ನಂ. ಎ.ಪಿ. 29 ಟಿ-8156 ಖರೀದಿ ಮಾಡಿ ತನ್ನ ಹೆಸರಿಗೆ ನೋಂದಣಿ ಮಾಡಿಕೊಂಡು, ದಿನಾಲು ಬಾಡಿಗೆ ರೂಪದಿಂದ ನಡೆಸಿಕೊಂಡು ಬರುತ್ತಿದ್ದು ದಿನಾಂಕ 05-05-2012 ರಂದು ಬೆಳಿಗ್ಗೆ ವಾಹನವನ್ನು ತೆಗೆದುಕೊಂಡು ಕೆಲಸ ಮುಗಿಸಿಕೊಂಡು ರಾತ್ರಿ 10-00 ಗಂಟೆಗೆ ಬಂದು ನಮ್ಮ ಬಡಾವಣೆಯ ರಿಲಾಯನ್ಸ್ ಪಂಕ್ಷನ್ ಹಾಲ್ ಪಕ್ಕದಲ್ಲಿ ವಾಹನ ಹಚ್ಚಿ ನಾನು ಮನೆಗೆ ಹೋಗಿ ಊಟ ಮಾಡಿ ಮನೆಯಲ್ಲಿ ಮಲಗಿದ್ದು, ದಿನಾಂಕ 06-05-2012 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಮನೆಯಿಂದ ಎಂದಿನಂತೆ ತನ್ನ ಕೆಲಸಕ್ಕೆಂದು ಹೋಗುವ ಕುರಿತು ಮಹೆಂದ್ರ ಜೀಪಿನ ಹತ್ತಿರ ಬರಲು ನಾನು ನಿಲ್ಲಿಸಿದ ವಾಹನ ಅಲ್ಲಿ ಇರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 33/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಶಾಲೆ ಕಟ್ಟಡ ಅತೀಕ್ರಮಣ ಮಾಡಿಕೊಂಡ ಬಗ್ಗೆ;
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಶರಣಪ್ಪ ಕೋಬಾಳಕರ ಕ್ಷೇತ್ರ ಶಿಕ್ಷಣಾಧಿಕಾರಿಗಳು ದಕ್ಷಿಣ ವಲಯ ಗುಲ್ಬರ್ಗಾರವರು 2012 ನೇ ಸಾಲಿನ ಜನೇವರಿ ತಿಂಗಳಿಂದ ಇಂದಿನವರೆಗೆ ಅಣ್ಣಾರಾಯ ಸಾ: ಸಾವಳಗಿ (ಬಿ) ಇತನು ಸರಕಾರಿ ಶಾಲೆಯಲ್ಲಿ ಅಕ್ರಮವಾಗಿ ಪಡಿತರ ಧಾನ್ಯ ಹಾಗೂ ಇತರೆ ಧಾನ್ಯವನ್ನು ಸಂಗ್ರಹಿಸಿಟ್ಟು ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿದ್ದು ಅದನ್ನು ತೆರವು ಗೊಳಿಸುವಂತೆ ಹಲವಾರು ಬಾರಿ ತಿಳಿಸಿದರು ತೆರವು ಗೊಳಿಸಿರುವುದಿಲ್ಲ, ಅಕ್ರಮವಾಗಿ ಶಾಲಾ ಕಟ್ಟಡವನ್ನು ಅತಿಕ್ರಮಿಸಿಕೊಂಡು ಪಡಿತರ ಧಾನ್ಯ ವಿತರಣೆ ಮಾಡುತ್ತಿದ್ದಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 149/2012 ಕಲಂ 447, 448 ಐಪಿಸಿ & 94 ಕೆಪಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: