POLICE BHAVAN KALABURAGI

POLICE BHAVAN KALABURAGI

01 December 2011

GULBARGA DIST REPORTED CRIMES

ಶಹಾಬಾದ ನಗರ ಠಾಣೆ : ಶ್ರೀ ದುರ್ಗಪ್ಪಾ ತಂದೆ ತಿಮ್ಮಣ್ಣಾ ದೇಸಾಯಿ ಸಾ: ವಿ.ಪಿ.ಚೌಕ ಶಹಾಬಾದ ರವರು, 1985 ನೇ ಇಸ್ವಿಯಲ್ಲಿ ಪಾಂಡುರಂಗ ತಂದೆ ಸಿದ್ದಪ್ಪಾ ಚೌದರಿ ಸಾ: ಶಹಾಬಾದ ಇವರ ನನ್ನ ಹತ್ತಿರ 10,000/- ರೂಪಾಯಿ ಕೈಗಡ ಅಂತಾ ತೆಗೆದುಕೊಂಡು ತನ್ನ ಹೊಲ ಸರ್ವೇ ನಂ:23/5 ಅಳತೆ 1 ಎಕರೆ 3 ಗುಂಟೆಗೆ ತರನಳ್ಳಿ ಗ್ರಾಮದ ಸಿಮೇಯಲ್ಲಿದ್ದದನ್ನು ಮಾರ್ಟಗೇಜ್ ಮಾಡಿ ನನ್ನ ಸ್ವಾಧಿನಕ್ಕೆ ಕೊಟ್ಟಿದ್ದು ಅಲ್ಲಿಂದ ಇಲ್ಲಿಯವರಗೆ ನನ್ನ ಸ್ವಾಧಿನದಲ್ಲಿರುತ್ತದೆ. 1996 ರಲ್ಲಿ ಸದರಿ ಹೊಲವನ್ನು ಪಾಂಡುರಂಗ ತಂದೆ ಸಿದ್ದಪ್ಪಾ ಚೌದರಿ ಇವರು ಕೈಗಡ ಹಣ ವಾಪಸ್ಸು ಕೊಡದೇ ಇರುವದಕ್ಕೆ ಅಪಡೇವಿಟ್ ಮಾಡಿಸಿ ನನ್ನ ಹೆಸರಿಗೆ ಮೊಟೇಶನ್ ಮಾಡಿಸಿರುತ್ಥಾನೆ. ಪಾಂಡುರಂಗ ತಂದೆ ಸಿದ್ದಪ್ಪಾ ಚೌದರಿ ಇವರು ಪುನಂ ಸದರಿ ಹೊಲವನ್ನು ಜೆ.ಪಿ.ಕಂಪನಿಗೆ ಮಾರುವ ಸಲುವಾಗಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಎಕರೆ ಒಂದಕ್ಕೆ 9 ಲಕ್ಷ ದಂತೆ ಮಾರಾಟ ಮಾಡಿ ಅದರಲ್ಲಿ 3 ಲಕ್ಷ್ ರೂಪಾಯಿ ಪಡೆದುಕೊಂಡು ನನಗೆ ಮೋಸ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆ ಗುನ್ನೆ ಸಂಖ್ಯೆ 183/2011 ಕಲಂ: 423, 427, 506, 504, 418, 406, 420, 447, 465, 458, 417 ,ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀ ಶಿವಲಿಂಗಪ್ಪ ತಂದೆ ಮಲ್ಲಿಕಾರ್ಜುನ ಮಾಲಿಪಾಟೀಲ ಸಾ:ಭವಾನಿ ನಗರ ಗುಲಬರ್ಗಾ ರವರು, ದಿನಾಂಕ 30-11-2011 ರಂದು ನಾಗೀಂದ್ರಪ್ಪ ತಂದೆ ಈರಪ್ಪಾ ಮರತನೂರ ಇತನು ತನ್ನ ಹಿರೋ ಹೊಂಡಾ ಸಿಡಿ 100 ಕೆಎ 32 ಎಚ 4254 ನೇದ್ದು ಅತಿವೇಗದಿಂದ ನಡೆಸುತ್ತಾ ಹೊರಟಾಗ ಆಳಂದ ಚೆಕ್ಕ ಪೋಸ್ಟ ಹತ್ತಿರ ರೋಡಿನ ತಗ್ಗಿನಲ್ಲಿ ಮೋಟಾರ ಸೈಕಲ್ದೊಂದಿಗೆ ಸ್ಕಿಡ ಆಗಿ ಬಿದ್ದಿದ್ದರಿಂದ ತಲೆ ಭಾರಿ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 360/2011 ಕಲಂ 279, 338 ಐಪಿಸಿ ಪ್ರಕರಣ ದಾಖಲಾಗಿದೆ.

No comments: