POLICE BHAVAN KALABURAGI

POLICE BHAVAN KALABURAGI

05 November 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 04.11.2018 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ಮೃತ ಪೂರ್ವಿಕಾ ಇವಳು ಕೈಲಾಸ ನಗರದಲ್ಲಿರುವ ಪುಷ್ಕರ್ ಪ್ಲಾಜಾ ಅಪಾರ್ಟಮೆಂಟ್ ಪಕ್ಕದ ರೋಡಿನ ಮೇಲೆ ಆಟವಾಡುತ್ತೀರುವಾಗ ಆರೋಪಿತನು ಖಾಲಿ ನಿವೇಶನದಲ್ಲಿ ನಿಲ್ಲಿಸಿದ ಬುಲೆರೋ ಜೀಪ ನಂ ಕೆಎ-32/ಸಿ-1724 ನೇದ್ದರ ಚಾಲಕನಾದ ರುದ್ರಯ್ಯಾ ಮಠಪತಿ ಇವನು ಚಾಲು ಮಾಡಿ ನಿಷ್ಕಾಳಜಿತನದಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರಿವರ್ಸ ಚಲಾಯಿಸಿ ಆಟ ಆಡುತ್ತೀರುವ ಪೂರ್ವಿಕಾ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿದ್ದರಿಂದ ಪೂರ್ವಿಕಾ ಇವಳಿಗೆ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಮದ್ಯಾಹ್ನ 12-00 ಗಂಟೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ನೋಡಿ ಆಸ್ಪತ್ರೆಗೆ ಬರುವದಕ್ಕಿಂತ ಮುಂಚಿತವಾಗಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದ್ದು ಪೂವರ್ಿಕಾ ಇವಳಿಗೆ ಅಪಘಾತದಲ್ಲಿ ಭಾರಿಗಾಯವಾಗಿದ್ದರಿಂದ ಬೆಳಿಗ್ಗೆ 11-15 ಗಂಟೆಯಿಂದ ಮದ್ಯಾಹ್ನ 12-00 ಗಂಟೆಯ ಮದ್ಯಾಹ್ಷನದಲ್ಲಿ ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯ ಮೃತಪಟ್ಟಿದ್ದು ಇರುತ್ತದೆ .ಅಂತಾ ಶ್ರೀ ರಾಜೇಂದ್ರ ತಂದೆ ಪಾರಪ್ಪಾ ಬಿರಾದಾರ  ಸಾ: ಪುಷ್ಕರ್ ಪ್ಲಾಜಾ  ಅಪಾರ್ಟಮೆಂಟ್ ಶೆಟ್ಟಿ ಟಾಕೀಜ್ ಹಿಂದುಗಡೆ ಕೈಲಾಸ ಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ನರೋಣಾ ಠಾಣೆ : ದಿನಾಂಕ:04/11/2018 ರಂದು ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಒಬ್ಬ ವ್ಯಕ್ತಿಯು ಅಕ್ರಮವಾಗಿ ಸರಾಯಿ ತುಂಬಿದ ಪೌಚಗಳು ತನ್ನ ಅಧೀನದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ.ರುಕ್ಮೊದ್ದನ  ಎ.ಎಸ್‌.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಹನುಮಾನ ದೇವಸ್ಥಾನದ ಮುಂದಿನ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ತನ್ನ ಮುಂದೆ ಒಂದು ರಟ್ಟಿನ ಡಬ್ಬಾದಲ್ಲಿ ಮದ್ಯ ತುಂಬಿ ಪ್ಯಾಕ್ ಮಾಡಿದ ಪೌಚಗಳನ್ನು ಸಂಗ್ರಹಿಸಿ ಇಟ್ಟಿಕೊಂಡು ಜನರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಲಾಗಿ ಸಾರಾಯಿ ಖರೀದಿಸಲು ಬಂದ ಜನರು ಓಡಿಹೋಗಿದ್ದು ಸರಾಯಿ ಮಾರಾಟ ಮಾಡುತ್ತಿದ್ದ   ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂದೆ ಶರಣಪ್ಪಾ ತೋಳನೂರ @ ಶಟಗಾರ, ಸಾ:ಬೆಳಮಗಿ ಗ್ರಾಮ ಅಂತಾ ಹೇಳಿದನು, ಸದರಿಯವನಿಗೆ ಮದ್ಯ ಮಾರಾಟ ಮಾಡಲು ಪರವಾನಿಗೆ ಅಥವಾ ದಾಖಲಾತಿಗಳ ಬಗ್ಗೆ ವಿಚಾರಿಸಲು ಅನಧಿಕೃತವಾಗಿ ತನ್ನ  ಅಧೀನದಲ್ಲಿ ಇಟ್ಟುಕೊಂಡು ಮಾರಾಟ ಮತ್ತು ಸಾಗಾಣೆ ಮಾಡುತ್ತಿರುವ ಬಗ್ಗೆ ತಿಳಿಸಿದನು. ಸದರಿಯವನ ಮುಂದೆ ಒಂದು ರಟ್ಟಿನ ಡಬ್ಬಾದಲ್ಲಿ ಸಂಗ್ರಹಿಸಿ ಇಟ್ಟಿರುವ ಮದ್ಯದ ಡಬ್ಬಿಗಳನ್ನು ನಾವುಗಳು ಪರಿಶೀಲಿಸಿ ನೋಡಲಾಗಿ 180 ಎಂ.ಎಲ್ ಮದ್ಯ ತುಂಬಿದ Original choice Deluxe Whisky ಎಂಬ 32 ಮದ್ಯದ ಪೌಚಗಳು ಅಂದಾಜು ಕಿಮತ್ತು 1940/- ರೂಪಾಯಿ ಹಾಗೂ ಸದರಿಯವನ ಅಂಗ ಶೋದನೆ ಮಾಡಲಾಗಿ ಈತನ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ 150/- ರೂ. ದೊರೆತವು ಅವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

04 November 2018

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಂಗ್ರಹಿಸದ್ದರ ಮೇಲೆ ದಾಳಿ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 28 ನೇದ್ದರ ಪಟ್ಟೇದಾರರಾದ 1) ಬಸವರಾಜ ತಂದೆ ಶರಣಪ್ಪ ಮೇಲ್ಕೇರಿ 2)ಬಸವರಾಜ ತಂದೆ ತೋಪಣ್ಣ ತಳವಾರ 3)ದತ್ತಪ್ಪ ತಂದೆ ಲಚ್ಚಪ್ಪ 4) ನಿಂಗಪ್ಪ ತಂದೆ ಲಚ್ಚಪ್ಪ 5)ಲಕ್ಷ್ಮಿಬಾಯಿ ಗಂಡ ಮಹಾದೇವಪ್ಪ ರವರು 225 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 03/11/2018 ರಂದು  ಬೆಳಿಗ್ಗೆ 11.45 ಗಂಟೆಯಿಂದ 12.45 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 11,25,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 28 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು 10.00 ಎಎಮ್ ಗಂಟೆಗೆ ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 33 ನೇದ್ದರ ಪಟ್ಟೇದಾರರಾದ 1)ಸುರೇಶ ತಂದೆ ಮಲ್ಕಪ್ಪ ತಳವಾರ 2)ಭಾಗವ್ವ ಗಂಡ ಶರಣಪ್ಪ ತಳವಾರ ರವರು 140 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 7,00,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 33 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು 10.00 ಎಎಮ್ ಗಂಟೆಗೆ ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 38 ನೇದ್ದರ ಪಟ್ಟೇದಾರರಾದ 1) ಭೀಮಶ್ಯಾ ತಂದೆ ಲಚ್ಚಪ್ಪ ಸರ್ವೇ ನಂ 39 ನೇದ್ದರ ಪಟ್ಟೇದಾರರಾದ 2) ಪ್ರಧಾನಿ ತಂದೆ ಶಂಕರ ರವರು 70 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 3,50,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 38,39 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದತ್ತು ಧನಸಿಂಗ್ ಪವಾರ ಸಾ|| ಗೋಬ್ಬುರವಾಡಿ ರವರದು 1998ರಲ್ಲಿ ಬಳುರ್ಗಿ ತಾಂಡಾದ ಬೇಬಿಬಾಯಿ ಎಂಬುವವಳೊಂದಿಗೆ ಮದುವೆಯಾಗಿದ್ದು ನನಗೆ 1) ಪೂರ್ಣಚಂದ್ರ 2) ಬಸವರಾಜ 3) ಮಂಜುನಾಥ  ಅಂತಾ 3 ಮಕ್ಕಳಿರುತ್ತಾರೆ. 13 ವರ್ಷಗಳಹಿಂದೆ ನನಗೂ ಮತ್ತು ನನ್ನ ಹೆಂಡತಿಗೂ ಸಂಸಾರದ ವಿಷಯದಲ್ಲಿ ಜಗಳವಾಗಿ ಅಂದಿನಿಂದ ನನ್ನ ಹೆಂಡತಿ ಮೂರು ಜನ ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆಯಾದ ಬಳುರ್ಗಿ ತಾಂಡಾದಲ್ಲಿ ಮಕ್ಕಳೊಂದಿಗೆ ವಾಸವಿರುತ್ತಾಳೆ 2004ರಲ್ಲಿ ನನ್ನ ಹೆಂಡತಿ ನನ್ನ ಮೇಲೆ ಕಿರುಕುಳ ಕೋಡುತ್ತಿದ್ದಾನೆ ಅಂತಾ ಕೇಸ ಮಾಡಿದ್ದು ಸದರಿ ಕೇಸ ನ್ಯಾಯಾಲಯದಲ್ಲಿ ಸುಳ್ಳು ಅಂತಾ ಆದೇಶವಾಗಿರುತ್ತದೆ. ಪುನಃ 2012 ರಲ್ಲಿ ನನ್ನ ಹೆಂಡತಿ ನನ್ನ ಮೇಲೆ ನಾನು ಎರಡನೇಯ ಮದುವೇಯಾಗಿದ್ದೇನೆ ಅಂತಾ ನ್ಯಾಯಾಲಯದಲ್ಲಿ ಕೇಸ ಮಾಡಿದ್ದು ಸದರಿ ಕೇಸ ನ್ಯಾಯಾಲಯದ ವಿಚಾರಣೆಯಲ್ಲಿದ್ದು ದಿನಾಂಕ 27-10-2018 ರಂದು ಅಂತಿ ಆಧೇಶದಲ್ಲಿರುತ್ತದೆ. ದಿನಾಂಕ 27-10-2018 ರಂದು ನಾನು ನನ್ನ ಹೆಂಡತಿ ಮಾಡಿದ ಕೇಸಿನ ವಿಚಾರವಾಗಿ ಅಫಜಲಪೂರದ ಜೆಎಮ್ಎಫ್ಸಿ ನ್ಯಾಯಾಲಯಕ್ಕೆ ಬಂದು ನ್ಯಾಯಾಲಯದಲ್ಲಿ ಹಾಜರಿ ಮುಗಿಸಿಕೊಂಡು ನ್ಯಾಯಾಲಯದಿಂದ 2.15 ಪಿಎಮ್ ಸುಮಾರಿಗೆ ಹೊರಗೆ ನ್ಯಾಯಾಲಯದ ಮುಂದೆ ನಾನು ಮತ್ತು 1) ಶಂಖರ ತಂದೆ ರಾಮು ರಾಠೋಡ 2) ರಾಘವೇಂದ್ರ ತಂದೆ ಗುರಣ್ಣಾ ರಾಠೋಡ ಮೂರು ಜನರು ಹೋಗುತ್ತಿದ್ದಾಗ ನನ್ನ ಹೆಂಡತಿಯಾದ 1) ಬೇಬಿಬಾಯಿ ನನ್ನ ಹೆಂಡತಿಯ ಅಣ್ಣನಾದ 2) ಮನೋಹರ ತಂದೆ ರತನಸಿಂಗ ರಾಠೋಡ ಹಾಗೂ ನನ್ನ ಮಕ್ಕಳಾದ 3) ಬಸವರಾಜ 4) ಪೂರ್ಣಚಂದ್ರ ಮತ್ತು ನನ್ನ ಹೆಂಡತಿಯ ಅತ್ತೆಯ ಮಗನಾದ 5) ಲಾಲು ತಂದೆ ಹೀರು ರಾಠೋಡ ಸಾ|| ಎಲ್ಲರೂ ಬಳೂರ್ಗಿ ತಾಂಡಾ ಇವರೆಲ್ಲರೂ ನನ್ನ ಹತ್ತಿರ ಬಂಧು ನನಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ನ್ಯಾಯಾಲಯದಲ್ಲಿ ಕೇಸ ಗೆಲ್ಲಬಹುದು ಆದರೆ ನಾವು ನಿನಗೆ  ಸುಮ್ಮನೆ ಬಿಡುವುದಿಲ್ಲಾ ಅಂತಾ ಹೇಳಿ ಎಲ್ಲರೂ ಕೂಡಿ ಜಗಳ ತೆಗೆದು ನನ್ನ ಹೆಂಡತಿ ಚಪ್ಪಲಿಯಿಂದ ಹೊಡೆದಿರುತ್ತಾಳೆ, ಮತ್ತು ಮಕ್ಕಳು ನನ್ನನ್ನು ಕೈಯಿಂದ ಹೊಡೆದು ನೆಲ್ಲಕೆ ಕೇಡುವಿ ಕಾಲಿನಿಂದ ಒದ್ದಿರುತ್ತಾರೆ, ಮನೋಹರ ರಾಠೋಡ ಇತನು ಅಲ್ಲೆ ಕಂಪೌಂಡ ಹತ್ತಿರ ಬಿದ್ದಿದ್ದ ರಾಡನ್ನು ತೆಗೆದುಕೊಂಡು ಬಂದು ರಾಡಿನಿಂದ ನನ್ನ ಸೊಂಟದ ಮೇಲೆ ಹೊಡೆದಿರುತ್ತಾನೆ, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ಜೋತೆಗೆಯಿದ್ದ ಶಂಕರ ರಾಠೋಡ ರಾಘವೇಂದ್ರ ರಾಠೋಡ ಇನ್ನೂ ಕೆಲವು ಜನರು ಕೂಡಿ ಹೊಡೆಯುವುದನ್ನು ಬಿಡಿಸಿರುತ್ತಾರೆ, ಆಗ ನನ್ನ ಹೆಂಡತಿ ಮತ್ತು ಮಕ್ಕಳು ಹಾಗೂ ಮನೋಹರ ರಾಠೊಡ ಲಾಲು ರಾಠೋಡ ಎಲ್ಲರೂ ನನಗೆ ಮುಂದೆ ನೀನು ಹೇಗೆ ನೌಕರಿ ಮಾಡುತ್ತಿ ನೋಡುತ್ತೇವೆ ನಿನಗೆ ಜೀವಸಹಿತ ಬಿಡುವುದಿಲ್ಲಾ ಎಂದು ಜೀವ ಭಯಹಾಕಿ ರಾಡನಿಂದ ಮತ್ತು ನನ್ನ ಹೆಂಡತಿ ಚಪ್ಪಲಿಯಿಂದ ಹೊಡೆದಾಗ ಚಪ್ಪಲಿ ಹರಿದಿದ್ದರಿಂದ ಅಲ್ಲೆ ಬಿಸಾಕಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಶಿವಕುಮಾರ ತಂದೆ ಭೀಮರಾಯ ವಸ್ತಾರಿ ಸಾಃ ಮಾರಡಗಿ (ಎಸ್.ಎ) ಗ್ರಾಮ ತಾಃ ಜೇವರಗಿ ರವರ ಊರವನಾದ ದೇವಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ, ಈತನು ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಸಿದ್ದಮ್ಮ ಇವಳಿಗೆ ಚುಡಾಯಿಸುವದು ಮತ್ತು ಅವಳು ಹೋದಲೆಲ್ಲ ಹಿಂದೆ ಹಿಂದೆ ಹೋಗುವದು ಮಾಡಿ ನಮ್ಮ ಮಗಳಿಗೆ ಸಲುಗೆಯಿಂದ ಮಾತನಾಡಿ ನಾನು ನಿನಗೆ ಪ್ರೀತಿ ಮಾಡುತ್ತಿದ್ದೆನೆ ಮತ್ತು ನಿನಗೆ ಮದುವೆಯಾಗುತ್ತೆನೆ ಎಂದು ಹೇಳಿ ಅವಳಿಗೆ ಸುಮಾರು 2 ವರ್ಷದಿಂದ ತೊಂದರೆ ಕೊಟ್ಟಿರುತ್ತಾನೆ. ಈ ವಿಷಯ ನಮ್ಮ ಮಗಳು ನಮಗೆ ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ದೇವಪ್ಪನ ಮನೆಗೆ ಹೋಗಿ ದೇವಪ್ಪನಿಗೆ ಮತ್ತು ಅವನ ಅಣ್ಣಂದಿರರಿಗೆ ಹಾಗೂ ತಾಯಿಯವರಿಗೆ ನಮ್ಮ ಮಗಳು ಚಿಕ್ಕವಳಿರುತ್ತಾಳೆ. ಹೀಗೆ ಮಾಡುವುದು ಸರಿಯಲ್ಲಾ ಎಂದು ಬುದ್ದಿವಾದ ಹೇಳಿದ್ದು ದಿನಾಂಕ 30.10.2018 ರಂದು ರಾತ್ರಿ ನಾನು ಮತ್ತು ನನ್ನ ನನ್ನ ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿ ಊಟ ಮಾಡಿ ಮನೆಯಲ್ಲಿ ಮಗಿಕೊಂಡಿರುತ್ತೆವೆ. ರಾತ್ರಿ 11-45 ಗಂಟೆಯ ಸುಮಾರಿಗೆ ಮನೆಯಲ್ಲಿ ಸಪ್ಪಳ ಆಗಿದ್ದರಿಂದ ಎದ್ದು ನೋಡಲಾಗಿ ನನ್ನ ಮಗಳು ಸಿದ್ದಮ್ಮ ಇವಳು ಏಕಿ ಮಾಡಲು ಎದ್ದಿರುತ್ತೆನೆಂದು ಹೇಳಿ ಮನೆಯಿಂದ ಹೊರಗೆ ನಮ್ಮ ಮನೆಯ ದೊಡ್ಡಿಯ ಕಡೆಗೆ ಹೋದಳು. ಅವಳು ಬಹಳ ಸಮಯವಾದರು ಮರಳಿ ಮನೆಯೊಳಗೆ ಬರಲಿಲ್ಲ ಅದಕ್ಕೆ ನಾನು ಮನೆಯಿಂದ ಹೊರಗೆ ಬಂದು ದೊಡ್ಡಿಯ ಕಡೆಗೆ ಹೋಗಿ ನೋಡಲು ನಮ್ಮ ಮಗಳು ಅಲ್ಲಿ ಕಾಣಲಿಲ್ಲ. ನಾನು ನನ್ನ ಹೆಂಡತಿಗೆ ವಿಷಯ ತಿಳಿಸಿ ನಾವಿಬ್ಬರು ಅಕ್ಕಪ್ಪಕ್ಕದ ಮನೆಯವರಿಗೆ ಕೇಳಿ ಊರಲ್ಲಿ ಹುಡುಕಾಡಿದರು ನಮ್ಮ ಮಗಳು ಸಿಕ್ಕಿರುವುದಿಲ್ಲ. ದಿನಾಂಕ;. 31.10.2018 ರಂದು ಮುಂಜಾನೆ 6.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ನಮ್ಮ ಮಗಳಿಗೆ ಹುಡುಕುತ್ತಾ ನಮ್ಮೂರ ಮಸೂದಿಯ ಹತ್ತಿರ ಬಂದಾಗ ಅಲ್ಲಿ ನಮ್ಮ ಸಂಭಂಧಿಕರಾದ ಬಸವರಾಜ ತಂದೆ ಚಂದಪ್ಪ ಹೇರೂರ ಈತನು ಸಿಕ್ಕಾಗ ಅವನಿಗೆ ನಮ್ಮ ಮಗಳು ಸಿದ್ದಮ್ಮಳು ರಾತ್ರಿ ಮನೆಯಿಂದ ಏಕಿ ಮಾಡಲು ಹೊರಗೆ ಬಂದು ಮರಳಿ ಬಂದಿರುವುದಿಲ್ಲಾ ಎಲ್ಲಿಗೆ ಹೋಗಿರುತ್ತಾಳೆಂಬುದು ಗೊತ್ತಾಗಿರುವುದಿಲ್ಲಾ ಎಲ್ಲಿಯಾದರು ನೋಡಿದ್ದಿಯೇನು ಎಂದು ಕೇಳಿದಾಗ ಅವನು ಹೇಳಿದ್ದೆನೆಂದರೆ ದಿನಾಂಕ; 31/10/2018 ರಂದು ರಾತ್ರಿ 12-05 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಹೊರಗಡೆ ಎತ್ತುಗಳಿಗೆ ಮೇವು ಹಾಕಲು ಬಂದಿದ್ದಾಗನಮ್ಮೂರ ದೇವಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ ಇತನು ತನ್ನ ಟಂ-ಟಂ ದಲ್ಲಿ ಸಿದ್ದಮ್ಮಳಿಗೆ ಕೂಡಿಸಿಕೊಂಡು ಮುದಬಾಳ(ಬಿ) ಕ್ರಾಸ್ ಕಡೆಗೆ ಹೋಗುವುದು ನಾನು ನೊಡಿರುತ್ತೇನೆ. ನಾನು ಕೈ ಮಾಡಿದರು ಟಂ-ಟಂ ನಿಲ್ಲಿಸದೆ ಹಾಗೇ ನಡೆಯಿಸಿಕೊಂಡು ಹೋಗಿರುತ್ತಾನೆ. ಕತ್ತಲಲ್ಲಿ ಟಂಟಂ ವಾಹನದ ನಂಬರ ಕಂಡಿರುವುದಿಲ್ಲ. ಎಂದು ತಿಳಿಸಿದನು. ನಂತರ ದಿನಾಂಕ; 31/10/2018 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ದೇವಪ್ಪ ಈತನ ಮನೆಗೆ ಹೋಗಿ ವಿಚಾರಿಸಲು ದೇವಪ್ಪ ಇತನು ಮನೆಯಲ್ಲಿ ಇದ್ದಿರಲಿಲ್ಲ. ನಮ್ಮ ಮಗಳ ಬಗ್ಗೆ ಅವರಿಗೆ ಕೇಳಲಾಗಿ, ದೇವಪ್ಪನ ಅಣ್ಣಂದಿರಾದ 1) ಸಾಯಿಬಣ್ಣಾ ತಂದೆ ಭೀಮರಾಯ ಸೊಮನಾಥಹಳ್ಳಿ, 2) ಸಿದ್ದಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 3) ಮಲ್ಲಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 4) ಅಂಬಮ್ಮ ಗಂಡ ಭೀಮರಾಯ ಸೊಮನಾಥಹಳ್ಳಿ 5) ಲಕ್ಷ್ಮೀಬಾಯಿ ಗಂಡ ಭೀಮರಾಯ ಸೊಮನಾಥಹಳ್ಳಿ ಇವರೆಲ್ಲರೂ ಕೂಡಿ ನನಗೆ ಏ ಬೊಸಡಿ ಮಗನೆ ದೇವಪ್ಪ ನಿನ್ನ ಮಗಳಿಗೆ ತೆಗೆದುಕೊಂಡು ಹೋಗಿದ್ದರೆ ನಾವೇನು ಮಾಡಬೇಕು?. ನಾವೇ ಕಳಿಸಿದ್ದೆವೆ. ರಂಡಿ ಮಕ್ಕಳೆ ನೀವು ನಮ್ಮದು ಏನು ಕಿತ್ತಿಕೊಳಲಿಕ್ಕೆ ಆಗುವುದಿಲ್ಲ. ನಮ್ಮ ಹಿಂದೆ ಮಹಾದೇವಯ್ಯ ತಂದೆ ಮಹಾಂತಯ್ಯ ಸ್ವಾಮಿ ಇದ್ದಾನೆ ನೀವು ನಮ್ಮ ತಂಟೆಗೆ ಬಂದರೆ ಉಳಿಯುವದಿಲ್ಲ ಎಂದು ಜೀವದ ಭೆದರಿಕೆ ಹಾಕಿರುತ್ತಾರೆ, ನಂತರ ನಮ್ಮೂರ ಭೀಮರಾಯ ತಂದೆ ಹುಲೇಪ್ಪ ಹೇರೂರ, ಭೀಮರಾಯ ತಂದೆ ದೇವಪ್ಪ ವಸ್ತಾರಿ ಇವರು ಬಂದು ತಿಳಿ ಹೇಳಿ ಅಲ್ಲಿಂದ ಕಳಿಸಿರುತ್ತಾರೆ. \ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಸಿದ್ದಮ್ಮ ಇವಳಿಗೆ ಚುಡಾಯಿಸಿ, ಪ್ರೀತಿ ಮಾಡುತ್ತೆನೆ ಮತ್ತು ಮದುವೆ ಮಾಡಿಕೊಳುತ್ತೆನೆ ಎಂದು ಅವಳಿಗೆ ನಂಬಿಸಿ ತಲೆ ಕೆಡಿಸಿ ಪುಸಲಾಯಿಸಿ ಅಪಹರಿಸಿಕೊಂಡು ಟಂ-ಟಂದ ಲ್ಲಿ ಕರೆದುಕೊಂಡು ಹೋಗಿರುತ್ತಾನೆ. ಅದಕ್ಕೆ 1) ಸಾಯಿಬಣ್ಣಾ ತಂದೆ ಭೀಮರಾಯ ಸೊಮನಾಥಹಳ್ಳಿ, 2) ಸಿದ್ದಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 3) ಮಲ್ಲಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 4) ಅಂಬಮ್ಮ ಗಂಡ ಭೀಮರಾಯ ಸೊಮನಾಥಹಳ್ಳಿ 5) ಲಕ್ಷ್ಮೀಬಾಯಿ ಗಂಡ ಭೀಮರಾಯ ಸೊಮನಾಥಹಳ್ಳಿ ಮತ್ತು 6) ಮಹಾದೇವಯ್ಯ ತಂದೆ ಮಹಾಂತಯ್ಯ ಸ್ವಾಮಿ ಇವರೆಲ್ಲರು ಕುಮ್ಮಕ್ಕು ನೀಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 November 2018

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನೀಲಮ್ಮ ಗಂಡ ಸಂತೋಷ ಇವರು ಆರೋಪಿ ಸಂತೋಷ ತಂದೆ ಶಿವಶರಣಪ್ಪ ಸಾ: ಕೂಕನೂರ ಇತನೊಂದಿಗೆ ಮದುವೆಯಾಗಿದ್ದು ಇರುತ್ತದೆ. ಸದ್ಯ ಪಿರ್ಯಾದಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇರುತ್ತದೆ. ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು ನಿನ್ನ ಚರಾ ಆಸ್ತಿ ಮತ್ತು ಸ್ಥಿರ ಆಸ್ತಿ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಾ ದಿನಾಂಕ   23-01-2018 ರಂದು 9-30 ಎ ಎಂ ಕ್ಕೆ ಕೂಕನೂರ ಗ್ರಾಮದಲ್ಲಿ ಸಂತೋಷ ತಂದೆ ಶಿವಶರಣಪ್ಪ ಸಂಗಡ 3 ಜನರು ಸಾ: ಎಲ್ಲರೂ ಕೂಕನೂರ ಗ್ರಾಮ. ರವರು  ನನ್ನ ಮನೆಗೆ ಬಂದು ಅವಾಚ್ಯವಾಗಿ ಬೈದು, ಅವಳಿಗೆ ಹಲ್ಲೆ ಮಾಡಿ, ಜೀವ ಬೇದರಿಕೆ ಹಾಕಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿರಾಜ್ ತಂದೆ ಇಸ್ಮಾಯಿಲ್ ನಗರ್ಚಿ ಸಾ||ನಿಚೆಗಲ್ಲಿ ಅಫಜಲಪೂರ ರವರ ತಂದೆಯಾದ ಇಸ್ಮಾಯಿಲ್ ತಂದೆ ಉಮರಸಾಬ ನಗರ್ಚಿ ರವರು ಆಗಾಗ ಗ್ಯಾರೇಜಕ್ಕೆ ಬಂದು ಹೋಗುತಿದ್ದರುದಿನಾಂಕ 02-11-2018 ರಂದು ಬೆಳಿಗ್ಗೆ ನಾನು ಹಾಗು ಮಹಿಬೂಬಪಾಶಾ ತಂದೆ ಸೊಂದುಸಾಬ ನಗರ್ಚಿ ಇಬ್ಬರು ನಮ್ಮ ಗ್ಯಾರೇಜದಲ್ಲಿದ್ದಾಗ ನಮ್ಮ ತಂದೆ ನಮ್ಮ ಮೋಟಾರ್ ಸೈಕಲ್ ಬಜಾಜ ಪ್ಲಾಟಿನಾ ನಂ ಕೆಎ-32 ಇಎಸ್-4466 ನೇದ್ದನ್ನು ತಗೆದುಕೊಂಡು ನಮ್ಮ ಗ್ಯಾರಜಗೆ  ಬಂದು ಅಲ್ಲೆ ಸ್ವಲ್ಪ ಸಮಯ ನಿಂತು ನಂತರ ನಮ್ಮ ತಂದೆ ನಮ್ಮ ಗ್ಯಾರೇಜ್ ಮುಂದೆ ರೋಡಿನ ಬಾಜು ನಮ್ಮ ಮೋಟಾರ್ ಸೈಕಲ್ ಮೇಲೆ ಕುಳಿತು ನನಗೆ ಮಡ್ನಳ್ಳಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಮೋಟಾರ್ ಸೈಕಲ್ ಚಾಲು ಮಾಡಿದಾಗ ಎದುರಿನಿಂದ ಅಂದರೆ ಬಸವೇಶ್ವರ ವೃತ್ತದ ಕಡೆಯಿಂದ ಮೌಂಟವೇವ್ ಶಾಲೆಯ ವಾಹನದ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ವಾಹನ ಚಲಾಯಿಸಿಕೊಂಡು ಬಂದು ನಮ್ಮ  ತಂದೆ ಕುಳಿತಿದ್ದ ಮೋಟಾರ್ ಸೈಕಲ್ ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಮ್ಮ ಮೋಟಾರ್  ಸೈಕಲದಿಂದ ಕೆಳಗೆ ಬಿದ್ದರು ಸದರಿ ಶಾಲಾ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು ಆಗ ಅಲ್ಲೆ ಇದ್ದ ನಾನು ಹಾಗು  ಮಹಿಬೂಬಪಾಶಾ ಹಾಗು ಅಲ್ಲೆ ಆಜು ಬಾಜು ಅಂಗಡಿಯ ಜನರು ಓಡಿ ಬಂದು ನಮ್ಮ ತಂದೆಗೆ ನೋಡಲಾಗಿ ತಲೆಗೆ ಭಾರಿ ರಕ್ತಗಾಯವಾಗಿ   ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸೋರುತಿತ್ತು ನಮ್ಮ ತಂದೆಯ ಎಡಗಾಲಿನ ಪಾದಕ್ಕೆ ಭಾರಿ ರಕ್ತಗಾಯವಾಗಿ ನಮ್ಮ ತಂದೆ ಮಾತನಾಡುವ ಸ್ಥೀತಿಯಲ್ಲಿರಲಿಲ್ಲಾ ನಾನು ಹಾಗು ಮಹಿಬೂಬಪಾಶಾ ಅಲ್ಲೆ ಇದ್ದ ಕೆಲವು ಜನರು ಕೂಡಿ ನಮ್ಮ ತಂದೆಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರಗೆ ಬಂದು ಅಲ್ಲಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ 108 ಅಂಬ್ಯೂಲೆಸ್ನದಲ್ಲಿ ನಮ್ಮ ತಂದೆಗೆ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನಮ್ಮ ತಂದೆ ಉಪಚಾರ ಫಲಕಾರಿಯಾಗದೆ ದಿನಾಂಕ 02-11-2018 ರಂದು  ಮೃತಪಟ್ಟಿರುತ್ತಾರೆ  ಮೌಂಟವೇವ್ ಶಾಲಾ ವಾಹನ ನಂ ಕೆಎ32 ಸಿ-6422 ನೇದ್ದರ ಚಾಲಕ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮ ತಂದೆ ಕುಳಿತಿದ್ದ ಮೋಟಾರ್ ಸೈಕಲ್ ನಂ ಕೆಎ-32 ಇಎಸ್-4466 ನೇದ್ದಕ್ಕೆ ಜೋರಾಗಿ ಡಿಕ್ಕಿ ಪಡಿಸಿ ನಮ್ಮ ತಂದೆಗೆ ತಲೆಗೆ ಭಾರಿ ರಕ್ತಗಾಯ ಪಡಿಸಿದ್ದು ನಮ್ಮ ತಂದೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ. ಸದರಿ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆರಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 31/10/18 ರಂದು 10.30 ಪಿ.ಎಮಕ್ಕೆ ಫಹತಾಬಾದ ಗ್ರಾಮದ ನ್ಯೂ ಶಕ್ತಿ ವೈನ ಶಾಪ ಹತ್ತಿರ ಶ್ರೀ ಸಿದ್ದಪ್ಪ ತಂದೆ ಹುಲ್ಲೆಪ್ಪ ಸನಾದಿ ಸಾಃ ಮಾಹೂರ ತಾಝ ಜೇವರಗಿ ಹಾ.ವಃ ಫರಹತಾಬಾದ ಗ್ರಾಮ  ರವರು  ಮಹ್ಮದ ಬಂಕೂರ  ರವರಿಗೆ  ಕುಡಿಯಲು ಸಾರಾಯಿ ಕೇಳಿದ್ದು, ಬಾರ್ ಬಂದ್ ಆಗಿರುತ್ತದೆ ಅಂತಾ ತಿಳಿಸಿದ್ದರಿಂದ, ಸಂಗಡ ಇನ್ನೂ 6 ಜನರು ಕುಡಿಕೊಂಡು  ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಖಾಲಿ ಬೀಯರ ಬಾಟಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದಲ್ಲದೆ ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ಮಾಹಾಗಾಂವ ಠಾಣೆ :  ಠಾಣೆ : ಶ್ರೀ ಶರಣಪ್ಪಾ ಹೆಚ್.ಸಿ 74 ಮಹಾಗಾಂವ ಪೊಲೀಸ ಠಾಣೆ ರವರು ದಿನಾಂಕ:01/11/2018 ರಂದು ನಾನು ಮಧ್ಯಾಹ್ನ 12-00 ಗಂಟೆಗ ಮಾನ್ಯ ಪಿಎಸ್ಐ ಸಾಹೇಬರ ಆದೇಶದಂತೆ ಏರಿಯಾದಲ್ಲಿ ಪೆಟ್ರೋಲಿಂಗ್ ಕುರಿತು ಹೊರಟು ಚಂದ್ರನಗರ, ಮಹಾಗಾಂವ ಕ್ರಾಸ ಭೇಟಿ ನೀಡಿ ನಂತರ 2-00 ಪಿಎಂಕ್ಕೆ ಕುರಿಕೋಟಾ ಗ್ರಾಮಕ್ಕೆ ಹೋದಾಗ ಬಾತ್ಮಿ ತಿಳಿದು  ಬಂದಿದ್ದೇನೆಂದರೆ. ಕುರಿಕೋಟಾ ಹೊಸ ಸೇತುವೆ ಸಮೀಪ ಒಬ್ಬ ಅನಾಮಧೇಯ ಹೆಣ್ಣು ಮಗಳು ಯಾವುದೋ ಕಾರಣಕ್ಕಾಗಿ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ ಅಂತಾ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ, ಒಬ್ಬ ಹೆಣ್ಣು ಮಗಳ ಶವವು ನೀರಿನಲ್ಲಿ ಬೋರಲಾಗಿ ಬಿದ್ದು ಕಂಡು ಬಂದಿದ್ದು ನಂತರ ಕುರಿಕೋಟಾ ಗ್ರಾಮದ ಮೀನುಗಾರರ ಸಹಾಯದಿಂದ ನೀರಿನಲ್ಲಿ ಮುಳಗಿ ಮೃತಪಟ್ಟ ಹೆಣ್ಣು ಮಗಳ ಶವವನ್ನು ಹೊರಗೆ ತೆಗೆದು ನೋಡಲಾಗಿ, ಸುಮಾರು 20 ವರ್ಷದ ವಯಸ್ಸಿನ ಹೆಣ್ಣು ಮಗಳಿದ್ದು ಅಂದಾಜು 4' 7 ಎತ್ತರವಿದ್ದು ಸದೃಡ ಮೈಕಟ್ಟು ದುಂಡನೆ ಮುಖ, ಗೋದಿ ಮೈಬಣ್ಣ ಹೊಂದಿದ್ದು, ಕಪ್ಪು & ಕೆಂಪು ಬಣ್ಣದ ಚೂಡಿದಾರ ಮತ್ತು ಕಪ್ಪು ಬಣ್ಣದ ಲೇಗಿನ್ಸ ಮತ್ತು ಕಂದು ಬಣ್ಣದ ಸ್ವಟರ್ ಧರಿಸಿದ್ದು ಕೊರಳಲ್ಲಿ ತಾಳಿ, ಕಿವಿಯಲ್ಲಿ ಬಂಗಾರದ ಝುಮಕಿ ಮತ್ತು ಬೆಳ್ಳಿ ಕಾಲುಂಗುರ ಹಾಗು ಬೆಳ್ಳಿಯ ರಿಂಗ್ ಇರುತ್ತದೆ. ಮೃತಳ ಹೆಸರು & ವಿಳಾಸ ಗೊತ್ತಾಗಿರುವುದಿಲ್ಲಾ. ಮತ್ತು ಯಾವುದೋ ಕಾರಣದಿಂದ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ. ಇವಳ ಮರಣದಲ್ಲಿ ಸಂಶಯವಿರುತ್ತದೆ ಅಂತಾ ವರದಿ ಹಾಜರು ಪಡಿಸಿದ ಸಾರಾಂಶದ ಮೇಲಿಂದ  ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಬಸವಲಿಂಗ ತಂದೆ ವಾಸುದೇವ ದೇವದುರ್ಗ ಸಾ: ಗಂಗಾ ನಗರ ಕಲಬುರಗಿ ರವರ ತಂದೆಯಾದ ವಾಸುದೇವ ತಂದೆ ಶಶಿಗಿರಿರಾವ ದೇವದುರ್ಗ ಇವರು ಅತಿಯಾಗಿ ಮಧ್ಯ ಸೇವನೆ ಮಾಡುತ್ತಾ ಬಂದಿದ್ದು ಅವರಿಗೆ ನಾನು ಹಾಗೂ ನಮ್ಮ ಮನೆಯವರು ಹೇಳಿ ನಮ್ಮ ತಂದೆಗೆ ಸುಮಾರು ಸಲ ತಿಳಿ ಹೇಳಿದರು ಕೂಡಾ ನಮ್ಮ ತಂದೆಯವರು ಮಧ್ಯ ಸೇವನೆ ಮಾಡುವದನ್ನು ಬಿಟ್ಟಿರುವದಿಲ್ಲ ದಿನಾಂಕ 29.10.2018 ರಂದು ಸಾಯಂಕಾಲ 5: ಗಂಟೆಯ ಸುಮಾರಿಗೆ ನಮ್ಮ ತಂದೆಯವರು ಅತಿಯಾಗಿ ಮಧ್ಯ ಸೇವನೆ ಮಾಡಿ ಮನೆಗೆ ಬಂದಿದ್ದು ಮನೆಯಲ್ಲಿ ವಾಂತಿ ಮಾಡಿಕೊಳ್ಳುವದು ಮಾಡುತ್ತಿದ್ದು ಅವರಿಗೆ ತ್ರಾಸ ಆಗುತ್ತಿದ್ದರಿಂದ ನಾನು, ನಮ್ಮ ತಾಯಿ ರಾಜೇಶ್ವರಿ ಹಾಗೂ ನಮ್ಮ ದೊಡ್ಡಮ್ಮಳಾದ ಯಶೋದಾ ಕೂಡಿಕೊಂಡು ನಮ್ಮ ತಂದೆಯವರಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೇಗೆ ಸೇರಿಕೆ ಮಾಡಿದ್ದು ಇರುತ್ತದೆ. ದಿನಾಂಕ 29.10.2018 ನಮ್ಮ ತಂದೆಯವಗೆ ಜಿಲ್ಲಾ ಸರಕಾರಿ ಆಸ್ಪತ್ರೇಯಲ್ಲಿ ಉಪಚಾರ ನೀಡುತ್ತಿದ್ದು ಇಂದು ದಿನಾಂಕ 01.11.2018 ರಂದು ನಮ್ಮ ತಂದೆಯವರು ಉಪಚಾರ ದಿಂದ ಗುಣ ಮುಖ ಹೊಂದದೆ ಆಸ್ಪತ್ರೇಯಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.