POLICE BHAVAN KALABURAGI

POLICE BHAVAN KALABURAGI

15 June 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮುಕಿಂದ ತಂದೆ ಗೋಲ್ಲಪ್ಪ ಕುಶಾಳಕರ ಸಾ : ಬೆಲೂರ ಜೆ  ರವರ ಮಗ ಯಲ್ಲಾಲಿಂಗ ಇತನು ಹೊಂಡಾ ಎಕ್ಟೀವ ಕೆಎ 32  ಇಕೆ 5432 ನೇದ್ದರ ಮೇಲೆ ಬಂದು ತನ್ನ ತಂದೆಗೆ ಮಾತಾಡಿಸಿ ಸಂಘದ ಎನೊ ಕೆಲಸವಿದೆ ಅಂತಾ ಹೇಳಿ ಹೋದನು. ಮಧ್ಯಾಹ್ನ 12-15 ಗಂಟೆ ಸುಮಾರಿಗೆ ಬೇಲೂರ ಗ್ರಾಮದ ಯಲ್ಲಪ್ಪ  ಕುಶಾಳಕರ ಇತನು ಪೋನ ಮಾಡಿ  ನಿಮ್ಮ ಮಗ ಯಲ್ಲಾಲಿಂಗ ಇತನು ಒಬ್ಬನೆ ಮೋಟರ್ ಸೈಕಲ್ ಮೇಲೆ ಬೇಲೂರ (ಜೆ) ಗ್ರಾಮದ ಕಡೆಗೆ ಬರುವ ಕುರಿತು ಬೇಲೂರ    (ಜೆ) ತಾಂಡಾದ ಕಡೆಯಿಂದ ಬೇಲೂರ  (ಜೆ) ಗ್ರಾಮದ ಕಡೆಗೆ ಬರುವ ಕುರಿತು ಬೇಲೂರ (ಜೆ) ಗ್ರಾಮದ ಸಿಮಾಂತರದ  ಮನಸೂರ ಕಂಕಾರ ಮಶೀನ್ ಎದುರುಗಡೆ ಬರುತ್ತಿದ್ದಾಗ, ಆಗ ಹಿಂದಿನಿಂದ ಯಾವುದೋ ಭಾರಿ ವಾಹನ ಯಲ್ಲಾಲಿಂಗ ಇತನ ಮೋಟಾರ ಸೈಕಲಕ್ಕೆ  ಡಿಕ್ಕಿಕೊಟ್ಟು ಅಪಘಾತಪಡಿಸಿದಾಗ ಆಗ ಯಲ್ಲಾಲಿಂಗ  ಇತನು ರೋಡಿನ ಮೇಲೆ ಬಿದ್ದಾಗ ಸದರಿ ವಾಹನ ಚಾಲಕನು ಆತನ ತಲೆಯ ಮೆಲಿಂದ ಹಾಯಿಸಿಕೊಂಡು ಹೋಗಿದ್ದರಿಂದ ಆತನ ತಲೆಯು ಪೂರ್ತಿ ಚಚ್ಚಿದಂತೆ ಆಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.ಸದರಿ ಅಪಘಾತಪಡಿಸಿದ ವಾಹನ ಚಾಲಕನು ವಾಹನ ನಿಲ್ಲಿಸದೇ ಹಾಗೇಯೇ ಓಢಿಸಿಕೊಂಡು ಹೋಗಿರುತ್ತಾನೆ.  ಈ ಘಟನೇಯು ಅಂದಾಜು 11-30 ಎಮ ದಿಂದ 11-45 ಎಮದ ಅವದಿಯಲ್ಲಿ ಜರುಗಿರುತ್ತದೆ ಅಂತಾ ತಿಳಿಸಿದಾಗ, ಆಗ ನಾನು ಗಾಭರಿಗೊಂಡು ಸ್ಥಳಕ್ಕೆ ಬಂದು ನನ್ನ ಮಗನಿಗೆ ನೋಡಲಾಗಿ ನನ್ನ ಮಗನ ತಲೆಯಿಂದ ಒಡೆದು ಮಾಂಸ ಖಂಡಗಳು ಹೊರಬಂದು ಮೃತಪಟ್ಟಿದ್ದು ನೋಡಿರುತ್ತೇನೆ. ಕಾರಣ ನನ್ನ ಮಗನಿಗೆ ಯಾವುದೋ ಭಾರಿ ಗಾತ್ರದ ವಾಹನ ಚಾಲಕನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಮಗ ಕುಳಿತುಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಹಿಂದುಗಡೆಯಿಂದ ಅಪಘಾತಪಡಿಸಿ, ನನ್ನ ಮಗನ ತಲೆಯ ಮೇಲಿಂದ ವಾಹನವನ್ನು ಹಾಯಿಸಿಕೊಂಡು ಹೋಗಿದ್ದರಿಂದ ನನ್ನ ಮಗನ ತಲೆ ಒಡೆದು ಮಾಂಸ ಖಂಡ ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮನುಷ್ಯ ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಅನಿತಾ ಗಂಡ ಹಣಮಂತ ಹುಲಿಮನಿ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಇವರ ಮಗ ಶರಣಪ್ರಕಾಶ ಮತ್ತು ಮಗಳು ರೂಪಾ ಇವರ ಜೊತೆಗೆ ವಾಸವಾಗಿದ್ದು. ನನ್ನ ಗಂಡನು ವಿವೇಕಾನಂದ ನಗರದ ನ್ಯೂ ಪ್ರದೀಪ ಮೇಡಿಕಲ್‌‌ ಶಾಪನಲ್ಲಿ ದಿನಾಂಕ:07/06/2018 ಗುರುವಾರದಂದು ಬೆಳಗ್ಗೆ 11.00 ಗಂಟೆಗೆ ಕೆಲಸಕ್ಕೆ ಎಂದು ಹೋದವರು ರಾತ್ರಿಯಾದರು ಮನೆಗೆ ಬಂದಿರುವದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ ನಮ್ಮ ಸಂಬಂಧಿಕರನ್ನು ಪೋನ ಮಾಡಿ ಕೇಳಿದರು ಯಾರ ಹತ್ತಿರವು ಬಂದಿರುವದಿಲ್ಲಾ ಎಂದು ತಿಳಿಸಿರುತ್ತಾರೆ. ನನ್ನ ಗಂಡನು ಬೀಳಿ ಬಣ್ಣ ದುಂಡು ಮುಖ 55’’ ಅಡಿ ಎತ್ತರ ದುಂಡನೆಯ ಮೈಕಟ್ಟುವುಳ್ಳವರಾಗಿದ್ದು ಗದ್ದದ ಕೆಳಗೆ 8 ಟಾಕಿಗಳ ಗಾಯದ ಗುರುತನ್ನು ಹೊಂದಿದ್ದು ಎಡ ಕೈ ಅಂಗೈ ಮೇಲಗಡೆ ಕ್ರೀಮ ಬಣ್ಣದ ಅಂಗಿ ಮತ್ತು ಬ್ಲಾಕ್‌ ಬಣ್ಣದ ಪ್ಯಾಂಟ ಹಾಕಿ ಕೊಂಡಿರುತ್ತಾರೆ. ದಿನಾಂಕ:07/06/2018 ರಿಂದ ಕಾಣಿಯಾದ ನನ್ನ ಗಂಡನನ್ನು ಹುಡುಕಿ ಕೊಡಬೇಕೆಂದು ಸಲ್ಲಿಸಿದ ದೂರು ಸಾಶರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 June 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಪ್ರಕಾಶ ತಂದೆ ಮೈಲಾರಪ್ಪ ಸಂಗೊಳಗಿ ಸಾಃ ಹತಗುಂದಾ ತಾಃಜಿಃ ಕಲಬುರಗಿ ಇವರ ಮಗನಾದ ಗಣೇಶವ ಇತನು ಮತ್ತು ನಮ್ಮ ಸಂಭಂಧಿಕರಾದ ಬೀರಪ್ಪ ತಂದೆ ಮಲ್ಲೇಶಪ್ಪ ರಾಜವಳ್ಳಿ ಇಬ್ಬರು ಕೂಡಿ ಮೊಟಾರಸೈಕಲ ನಂಬರ ಕೆಎ-32-ವಾಯ್-3940 ನೇದ್ದರ ಮೇಲೆ ಕುಳಿತುಕೊಂಡು ದಿನಾಂಕ  12.06.2018 ರಂದು ಮದ್ಯಾಹ್ನ ಕಲಬುರಗಿ ನಮ್ಮ ಮನೆಯಿಂದ ಜೇವರಗಿ ತಾಲೂಕಿನ ಗಂವ್ಹಾರ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆಹೊಗಿಬರುತ್ತೆವೆ. ಎಂದು ಹೇಳಿ ಮನೆಯಿಂದ ಹೋದರು, ರಾತ್ರಿ 8.30 ಗಂಟೆಯ ಸುಮಾರಿಗೆ ಬೀರಪ್ಪ ಇತನು ನನಗೆ ಪೋನ ಮಾಡಿ ಜೇವರಗಿ ಶಹಾಪೂರ ರೋಡ ಕೆಲ್ಲೂರ ಗ್ರಾಮದ ಹತ್ತಿರ ರೋಡಿನಲ್ಲಿ ಮೊಟಾರಸೈಕಲ್ ಎಕ್ಸಿಡೆಂಟ್ ಆಗಿರುತ್ತದೆ ಗಣೇಶ ಈತನಿಗೆ ಬಾರಿಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ನನಗೆ ಗಾಯವಾಗಿದ್ದು ನಾನು ಉಪಚಾರ ಕುರಿತು ಅಂಬುಲೇನ್ಸ್ನಲ್ಲಿ ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ಬರುತ್ತಿದ್ದೆವೆ ಎಂದು ಹೇಳಿದಕೂಡಲೆ ನಾನು ಮತ್ತು ನಮ್ಮ ಸಂಭಂಧಿಕರಾದ ನಿಂಗಣ್ಣಾ ತಂದೆ ಶಿವಶರಣಪ್ಪ ಪೂಜಾರಿ ಇಬ್ಬರೂ ಕೂಡಿಕೊಂಡು ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ಹೋಗಿ ನೋಡಲಾಗಿ ಬೀರಪ್ಪ ಇತನಿಗೆ ತಲೆಗೆ ಮತ್ತು ತುಟಿಯ ಹತ್ತಿರ ಬಾರಿ ರಕ್ತಗಾಯವಾಗಿತ್ತು ಅವನಿಗೆ ಘಟನೆಯ ಬಗ್ಗೆ ಕೇಳಲಾಗಿ ಅವನು ಹೇಳಿದ್ದೆನೆಂದರೆ ನಾನು ಮತ್ತು ಗಣೇಶ ಇಬ್ಬರೂ ಕೂಡಿ ಜೇವರಗಿ ತಾಲೂಕಿನ ಗಂವ್ಹಾರಗ್ರಾಮದಲ್ಲಿ ಮದುವೆ ಕಾರ್ಯಕ್ರಮಮುಗಿಸಿಕೊಂಡು ಮರಳಿ ನಾವು ಅದೇಮೊಟಾರ್ಸೈಕಲ ಮೇಲೆ ಕುಳಿತುಕೊಂಡು ಗಂವ್ಹಾರದಿಂದ ಕಲಬುರಗಿಗೆ ಬರುತ್ತಿದ್ದೆವು. ಮೊಟಾರ್ಸೈಕಲನ್ನು ಗಣೇಶ ಇತನು ನಡೆಯಿಸುತ್ತಿದ್ದನು. ಗಂವ್ಹಾರದಿಂದ ಕಲಬುರಗಿ ಕಡೆಗೆ ಸಾಯಂಕಾಲ 7.30 ಗಂಟೆಯ ಸುಮಾರಿಗೆ ಜೇವರಗಿ- ಶಹಾಪೂರ ರೋಡ ಕೆಲ್ಲೂರ ಗ್ರಾಮದ ಸಮೀಪ ರೋಡಿನಲ್ಲಿ ಬರುತ್ತಿದಂತೆ ಗಣೇಶನು ತನ್ನ ಮೊಟಾರಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನಲ್ಲಿ ನಿಂತಲಾರಿಯ ಹಿಂದಿನ ಬದಿಗೆ ಡಿಕ್ಕಿಪಡಿಸಿದನು. ಆಗ ನಾನು ಮೊಟಾರ ಸೈಕಲ್ ಮೇಲಿಂದ ಕೆಳಗೆಬಿದ್ದೆನು. ಗಣೇಶನು ಮೊಟಾರಸೈಕಲ್ ದೊಂದಿಗೆ ಲಾರಿ ಹಿಂದಿನ ಬಾಗದೊಳಗೆ ಹೋಗಿ ಸಿಕ್ಕಿಬಿದ್ದನು ಗಣೇಶನಿಗೆ ಹಣೆಯ ಮೇಲೆ ಮತ್ತು ಮುಖಕ್ಕೆ ಬಾರಿ ಗಾಯವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ನಂತರ ಲಾರಿ ನಂಬರ ನೊಡಲಾಗಿ ಅದರ ನಂಬರ ಕೆಎ-16--7444 ನೇದ್ದು ಇದ್ದು ಅದರ ಟಯರ ಪಂಚರ ಆಗಿ  ರೋಡಿನಲ್ಲಿ ನಿಂತಿತ್ತು ಅದರ ಚಾಲಕನು ಸ್ಥಳದಲ್ಲಿ ಯಾವುದೇ ಸಂಚಾರ ನಿಯಮಪಾಲಿಸದೆ, ಅಲ್ಲಿ ಯಾವುದೆ ಮುಂಜಾಗ್ರತೆ ಕ್ರಮಕೈಕೊಳದೆ ಲಾರಿಯನ್ನು ರೋಡಿನಲ್ಲಿ ಅಲಕ್ಷತನದಿಂದ ನಿಲ್ಲಿಸಿದ್ದರಿಂದ ಗಣೇಶನು ಮೊಟಾರ ಸೈಕಲ್ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಲಾರಿಗೆ ಡಿಕ್ಕಿಪಡಿಸಿದರಿಂದ ಈ ಅಫಘಾತ ಸಂಭವಿಸಿರುತ್ತದೆ. ಲಾರಿ ಚಾಲಕನು ಸ್ಥಳದಲ್ಲಿ ಇದ್ದಿರಲಿಲ್ಲಾ. ಗಣೇಶನ ಹೆಣ ಸ್ಥಳದಲ್ಲಿಯೇ ಇರುತ್ತದೆ. ಅಫಘಾತವಾದ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ 108 ಅಂಬುಲೇನಸ್ಸನಲ್ಲಿ ಕುಳಿತು ನಾನು ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತೆನೆ ಎಂದು ತಿಳಿಸಿದನು. ನಂತರ ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಲಾರಿ ನಂಬರ ಕೆಎ-16--7444 ನೇದ್ದು ಇತ್ತು ಲಾರಿ ಹಿಂದಿನ ಭಾಗ ಜಖಂ ಆಗಿದ್ದು, ಅಲ್ಲಿಯೇ ರಕ್ತಸೋರಿದ್ದು ಇತ್ತು ಮತ್ತು ನಮ್ಮ ನೊಟಾರಸೈಕಲ್ ನಂ; ಕೆಎ-32-ವಾಯ್-3940 ನೇದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಶಿವಶರಣಪ್ಪ ತಂದೆ ಬಸಣ್ಣ ಬಂದಿಚೋಡೆ, ಸಾ:ಸಾವಳೇಶ್ವರ ಗ್ರಾಮ ಇವರು  ದಿನಾಂಕ:11/06/2018 ರಂದು ಸೋಮವಾರ ದಿವಸ ನೀಲೂರು ಗ್ರಾಮದಲ್ಲಿ ನಮ್ಮ ಸಂಬಂದಿಕರ ಒಬ್ಬರ ಜವಳ ಕಾರ್ಯಕ್ರಮ ಇರುವುದರಿಂದ ನಾನು ಮತ್ತು ನಮ್ಮ ತಾಯಿಯಾದ ನೀಲಮ್ಮ ಇಬ್ಬರು ಕೂಡಿಕೊಂಡು ನಮ್ಮ ಮೋಟಾರ್ ಸೈಕಲ್ ನಂ ಎಂಹೆಚ್43-ಕೆ1453 ನೇದ್ದರ ಮೇಲೆ ನೀಲೂರ ಗ್ರಾಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಆ ದಿವಸ ರಾತ್ರಿ ಅಲ್ಲೇ ಮುಕ್ಕಮ್ ಮಾಡಿ ಮರುದಿವಸ ದಿನಾಂಕ:12/06/2018 ರಂದು ವಾಪಸ್ಸು ನಮ್ಮೂರಿಗೆ ನಮ್ಮ ಮೋಟಾರ್ ಸೈಕಲ್ ಮೇಲೆ ನಾನು ಮತ್ತು ನಮ್ಮ ತಾಯಿಯವರು ಬರುವಾಗ ಕಡಗಂಚಿ ದಾಟಿ ಲಾಡಚಿಂಚೋಳಿ ಕ್ರಾಸನಲ್ಲಿ  ನಾನು ಮೋಟಾರ್ ಸೈಕಲನ್ನು ರಸ್ತೆಯ ಎಡಬದಿಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಆಳಂದ ಕಡೆಯಿಂದ ಪಿಕಪ್ ವಾಹನ ಚಾಲಕನು ತನ್ನ ಅಧಿನದಲ್ಲಿಯ ಪೀಕಪ್ ವಾಹನ ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ನಾನು ಮತ್ತು ನನ್ನ ತಾಯಿ ಮೋಟಾರ್ ಸೈಕಲ್ ಸಮೇತವಾಗಿ ಕೇಳಗೆ ಬಿದ್ದಿದ್ದರಿಂದ ನನ್ನ ಬಲಗಾಲು ಪಾದಕ್ಕೆ ರಕ್ತಗಾಯವಾಗಿದೆ. ಮತ್ತು ನನ್ನ ತಾಯಿಗೆ ಬಲಗಾಲು ಪಾದಕ್ಕೆ ಸೊಂಟಕ್ಕೆ ಮೊಳಕಾಲಿಗೆ ಭಾರಿರಕ್ತಗಾಯ ವಾಗಿರುತ್ತದೆ. ಸದರಿ ಪೀಕಪ್ ವಾಹನ ಚಾಲಕನು ಸ್ವಲ್ಪ ಮುಂದೆ ಹೋಗಿ ವಾಹನ ನಿಲ್ಲಿಸಿದ್ದು ನಾನು ಅದರ ನಂಬರ ನೋಡಲಾಗಿ ಎಂಹೆಚ್24-ಎಬಿ6685 ಅಂತಾ ಇತ್ತು ಸದರಿಯವನು ನಮಗೆ ಆದ ಗಾಯಗಳನ್ನು ನೋಡಿ ವಾಹನಸ ಸಮೇತವಾಗಿ ಕಲಬುರಗಿ ಕಡೆಗೆ ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಇನಾಯತ್ ಖಾನ್ ತಂದೆ ಅಬ್ದುಲ್ ಜಬ್ಬಾರ ಖಾನ್ ಸಾ|| ಅಣ್ಣಾ ಕೀರಾಣಾ ಅಂಗಡಿ ಹಿಂದುಗಡೆ ಎಕ್ಬಾಲ್ ಕಾಲೋನಿ ಎಮ್ ಎಸ್ ಕೆ ಮಿಲ್ ಕಲಬುರಗಿ ಇವರು ದಿನಾಂಕ; 12/06/2018 ರಂದು ಬೆಳಗಿನ ಜಾವ ನನ್ನ ಹೆಂಡತಿ ಶ್ರೀಮತಿ ಆಸ್ಮಾ ಬೇಗಂ ಇವಳು ತನ್ನ ತವರು ಮನೆಗೆ  ರಂಜಾನ ನಿಮಿತ್ಯ ಹೊಗಿದ್ದು  ಬೆಳಗ್ಗೆ 8;30 ಎಎಮ್ ಸುಮಾರಿಗೆ ನಾನು ನಮ್ಮ ಮನೆಯ ಬಾಗಿಲಿಗೆ ಕೀಲಿ ಹಾಕಿಂಡು ನಾನು ಕೆಲಸಕ್ಕೆ ಹೊಗಿದ್ದು ಮರಳಿ ಸಾಯಂಕಾಲ 4 ಪಿಎಮ್ ಸುಮಾರಿಗೆ ನಾನು ನಮ್ಮ ಮನೆಗೆ ಮರಳಿ ಬಂದು ನೊಡಲಾಗಿ ನಮ್ಮ ಮನೆಯ ಬಾಗಿಲಿಗೆ ಹಾಕಿದ್ದ ಕಿಲಿ ಮುರಿದಿದ್ದು ನೋಡಿ ನಾನು ಗಾಬರಿಗೊಂಡು ಮನೆಯಲ್ಲಿ ಹೊಗಿ ನೋಡಲು ಮನೆಯಲ್ಲಿಯ ಆಲಮೇರಾ ಮುರಿದಿದ್ದು ಅದರಲ್ಲಿಯ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು ನಾನು ಪರಿಸಿಲಿಸಿ ನೋಡಲು ಆಲಮೇರಾದಲ್ಲಿ ಇಟ್ಟಿದ್ದ 17 ಗ್ರಾಂ ಬಂಗಾರದ ನೆಕ್ಲೇಸ್ ಮತ್ತು ಪೆಂಡೆಂಟ್ ಇರಲಿಲ್ಲ ನಾನು ಮನೆಯಲ್ಲಿ ಎಲ್ಲಾ ಕಡೆಗೂ ಹುಡುಕಾಡಿದರೂ ಸಿಗಲಿಲ್ಲ ನಂತರ ನಾನು ನನ್ನ ಹೆಂಡತಿ ಶ್ರೀಮತಿ ಆಸ್ಮಾ ಬೇಗಂ ಇವಳಿಗೆ ತಿಳಿಸಿಲು ನನ್ನ ಹೆಂಡತಿ ಇಂದು ದಿನಾಂಕ; 13/06/2018 ರಂದು ನಮ್ಮ ಮನೆಗೆ ಬಂದ ನಂತರ ಮತ್ತೆ ಮನೆಯಲ್ಲಾ ಪರಿಸಿಲಿಸಿ ನೊಡಿದರೂ ಮನೆಯಲ್ಲಿ ನನ್ನ ಹೆಂಡತಿಯ 17 ಗ್ರಾಂ ಬಂಗಾರದ ನೆಕ್ಲೇಸ್ ಮತ್ತು ಪೆಂಡೆಂಟ್ ಸಿಕ್ಕಿರುವುದಿಲ್ಲಾ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಆಲಮೇರಾ ತೆರದು ಅದರಲ್ಲಿಯ ನನ್ನ ಹೆಂಡತಿಯ 17 ಗ್ರಾಂ ಬಂಗಾರದ ನೆಕ್ಲೇಸ್ ಮತ್ತು ಪೆಂಡೆಂಟ್ ಅ|| ಕಿ|| 24500/- ನೇದ್ದನ್ನು ಕಳ್ಳತನ ಮಢಿಕೊಂಡು  ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 June 2018

KALABURAGI DISTRICT REPORTED CRIMES

ಆಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 11.06.2018 ರಂದು ಸಾಯಂಕಾಲ ಬ್ರಹ್ಮಪೂರ ಬಡಾವಣೆಯ ಆಜಾದ ಚೌಕ ಅಪ್ಪರ ಲೈನ್ ಅನಂತಸೇನ ಗುಡಿ ಹತ್ತಿರ ಮನೆ ಇರುವ ಭೀಮಶ್ಯಾ ತಂದೆ ಶಂಕ್ರೇಪ್ಪ ಪರಿಟ ಮತ್ತು ಅವನ ಮಗ ರವಿ ತಂದೆ ಭೀಮಶ್ಯಾ ಪರಿಟ ಇವರುಗಳು ತಮ್ಮ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಬಾತ್ಮಿ ಬಂದ ಮೇರೆಗೆ ಜಿಲ್ಲಾ ನಿಸ್ತಂತು ಕೊಣೆಗೆ ಮತ್ತು ಮೇಲಾಧಿಕಾರಿಗಳಲ್ಲಿ ಮಾಹಿತಿ ತಿಳಿಸಿದ್ದು, ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಚಿಕ್ಕ ವೆಂಕಟರಮಣಪ್ಪ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಕಲಬುರಗಿ ಇವರಿಗೆ ದಾಳಿ ಕಾಲಕ್ಕೆ ಹಾಜರಿರಲು ಕೊರಿಕೊಂಡಿದ್ದು ಮತ್ತು ಪಂಚರನ್ನಾಗಿ ಸರಕಾರಿ ನೌಕರರಾದ 1.ಶ್ರೀ ಪ್ರೇಮಾನಂದ ಚಿಂಚೊಳ್ಳಿಕರ ಎಪ್.ಡಿ.ಎ. ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳ ಕಾರ್ಯಾಲಯ ಕಲಬುರಗಿ ಗ್ರಾಮೀಣ 2. ಶ್ರೀ ಡಾ: ಮಹಾಂತೇಶ ಭೋವಿ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೇ ಅಫಜಲಪೂರ ಹಾ:ವ: ನೆಹರು ಗಂಜ ಕಲಬುರಗಿ. ಇವರನ್ನು ಬ್ರಹ್ಮಪೂರ ಬಡಾವಣೆಯ ಈಶ್ವರ ಗುಡಿಯ ಹತ್ತಿರ ಬರಮಾಡಿಕೊಂಡಿದ್ದು ಅವರುಗಳಿಗೆ ತಿಳಿ ಹೇಳಿದ್ದು. ಅದರಂತೆ ಶ್ರೀ ಎಸ್.ಎಮ್. ಯಾಳಗಿ ಪಿ.ಐ. ಬ್ರಹ್ಮಪೂರ ಪೊಲೀಸ ಠಾಣೆ ರವರು ಬಂದು ದಾಳಿ ಉಸ್ತುವಾರಿಯನ್ನು ನೋಡಿಕೊಳ್ಳಲು ಕೇಳಿಕೊಂಡಿದ್ದು ಶ್ರೀಮತಿ ಅಕ್ಕಮಹಾದೇವಿ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ , ಶ್ರೀಮತಿ ಸುವರ್ಣ ಪಿ.ಎಸ್.ಐ.(ಪ್ರೋ) ಹಾಗು ಸಿಬ್ಬಂದಿ ಬಾತ್ಮಿಯಂತೆ ಬ್ರಹ್ಮಪೂರ ಬಡಾವಣೆಯ ಆಜಾದ ಚೌಕ ಅಪ್ಪರ ಲೈನ್ ಅನಂತಸೇನ ಗುಡಿ ಹತ್ತಿರ ಮನೆ ಇರುವ ಭೀಮಶ್ಯಾ ತಂದೆ ಶಂಕ್ರೇಪ್ಪ ಪರಿಟ ಮತ್ತು ಅವನ ಮಗ ರವಿ ತಂದೆ ಭೀಮಶ್ಯಾ ಪರಿಟ ಇವರುಗಳ ಮನೆಯ ಒಳಗೆ ಶ್ರೀ ಎಸ್.ಎಮ್. ಯಾಳಗಿ ಸಾಹೇಬರ ಉಸ್ತುವಾರಿಯಲ್ಲಿ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಚಿಕ್ಕ ವೆಂಕಟರಮಣಪ್ಪ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಕಲಬುರಗಿ ಇವರ ಸಮಕ್ಷಮದಲ್ಲಿ ಸದರಿಯವರ ಮನೆಯ ಮೇಲೆ ದಾಳಿ ಮಾಡಿದ್ದು, ಸದರಿ ಮನೆಯಲ್ಲಿ ಇಬ್ಬರು ವ್ಯಕ್ತಿಗಳು ಹಾಜರಿದ್ದು ಅವರ ಹೆಸರು ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಭೀಮಶ್ಯಾ ತಂದೆ ಶಂಕ್ರೇಪ್ಪ ಪರಿಟ 2. ರವಿ ತಂದೆ ಭೀಮಶ್ಯಾ ಪರಿಟ ಅಂತ ತಿಳಿಸಿದ್ದು. ನಂತರ ನಾನು ಮತ್ತು ಪಿ.ಐ. ಸಾಹೇಬರು ಸದರಿಯವನ ಮನೆಯನ್ನು ಪರಿಶೀಲಿಸಿ ನೋಡಲು ಮನೆಯಲ್ಲಿ ಒಂದು ತೆಳುವಾದ ಕೈ ಚೀಲ ಇದ್ದು. ಕೈ ಚೀಲದ ಒಳಗೆ ಗಾಂಜಾ ಇದ್ದು ಹಾಗೂ ಪ್ಲಾಸ್ಟೀಕ ಕ್ಯಾರಿ ಬ್ಯಾಗಿನಲ್ಲಿ ಸ್ವಲ್ಪ ಗಾಂಜಾ ಕಟ್ಟಿದ್ದು ಇದ್ದು ಗಾಂಜಾವನ್ನು ತೂಕ ಹಾಕುವ ಕುರಿತು ಕಿರಾಣಾ ಅಂಗಡಿಯ ಶ್ರೀ ಇಸ್ಮಾಯಿಲ್ ತಂದೆ ಬಾಸುಮಿಯಾ ಇವರನ್ನು ತೂಕದ ಯಂತ್ರದೊಂದಿಗೆ ಬರಮಾಡಿಕೊಂಡು ಗಾಂಜಾವನ್ನು ತೂಕ ಹಾಕಿ ನೋಡಲು ಕೈ ಚೀಲದಲ್ಲಿ ಇದ್ದ ಗಾಂಜಾ 730 ಗ್ರಾಂ ಇದ್ದು ಕೈ ಚೀಲದಲ್ಲಿ ಇದ್ದ ಪ್ಲಾಸ್ಟಿಕ ಕ್ಯಾರಿ ಬ್ಯಾಗಿನಲ್ಲಿ ಇದ್ದ ಗಾಂಜಾ ತೂಕ ಹಾಕಿ ನೋಡಲು ಅದು 230 ಗ್ರಾಂ ಇದ್ದು. ಹೀಗೆ ಒಟ್ಟು 960 ಗ್ರಾಂ ಗಾಂಜಾ ಇದ್ದು. ಅಂದಾಜ ಕಿಮ್ಮತ್ತು 6,000/- ರೂ ಆಗುತ್ತದೆ. ಸದರಿ ಗಾಂಜಾ ದೊರೆತ ಕೈ ಚೀಲವನ್ನು ಪರಿಶಿಲಿಸಿ ನೊಡಲಾಗಿ ಅದರ ಮೇಲೆ ಶ್ರೀ ರಾಜ ರಾಜೇಶ್ವರ ಮೇನ್ಸ್ ವೇರ್ ಎ ಕಂಪ್ಲಿಟ ಮಲ್ಟಿ ಬ್ರಾಂಡ್ ಶೊರೂಂ ಶಾಸ್ತ್ರಿ ರೋಡ ಸದಾಶಿವ ಪೇಠ ಡಿಸ್ಟ್: ಮೇದಕ (ಟಿಎಸ್) ಮೊನಂ 9908393936 ಅಂತ ಬರೆಯಲಾಗಿತ್ತು ಸದರಿ ಕೈ ಚೀಲದಲ್ಲಿ ದೊರೆತ 730 ಗಾಂ ಮತ್ತು 230 ಗ್ರಾಂ ಗಾಂಜಾ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಸದರಿ ಆರೊಪಿತರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಕಮಲಾಪೂರ ಟಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ನಾಗಾರೆಡ್ಡಿ ಕಪನೂರ ಮು:ಕಲ್ಮೂಡ ಗ್ರಾಮ ತಾ:ಜಿ: ಕಲಬುರಗಿ ಇವರು ಸೂಮಾರು 26 ವರ್ಷಗಳ ಹಿಂದೆ ಕಲ್ಮೂಡ ಗ್ರಾಮದ ವೆಂಕಾರೆಡ್ಡಿ ಇವರ 3 ನೇ ಮಗನಾದ ನಾಗಾರೆಡ್ಡಿ ಇವರೊಂದಿಗೆ ಮದುವೆ ಮಾಡಿಕೊಂಡಿದ್ದು. ನನಗೆ ರೇಣುಕಾ, ಗೀತಾ ಅಂತಾ ಇಬ್ಬರೂ ಹೆಣ್ಣು ಮಕ್ಕಳಿದ್ದು. ರೇಣುಕಾ ಇವಳ ಎರಡು ಕಾಲುಗಳು ಚಿಕ್ಕವು ಇದ್ದು. ಅಂಗವಿಕಲೆ ಇರುತ್ತಾಳೆ ಅದರಂತೆ ಗೀತಾ ಇವಳಿಗೆ ಎರಡು ಕಣ್ಣುಗಳು ಕುರುಡು ಇರುತ್ತವೆ. ಅದರಂತೆ ರಾಜರೆಡ್ಡಿ, ಹಾಗೂ ಮಾಣಿಕರೆಡ್ಡಿ ಅಂತಾ ಇಬ್ಬರೂ ಗಂಡು ಮಕ್ಕಳಿದ್ದು. ಇನ್ನೂ ಯಾರಿಗೂ ಮದುವೆ ಆಗಿರುವುದಿಲ್ಲ. ನನ್ನ ಗಂಡನ ಹೆಸರಿಗೆ ಕಲ್ಮೂಡ ಗ್ರಾಮ ಸೀಮಾಂತರದಲ್ಲಿ ಹೋಲ ಸರ್ವೇ ನಂ-27 ರಲ್ಲಿ 3 ಎಕರೆ ಜಮೀನ ಇದ್ದು. ನಾವೇಲ್ಲರೂ ಅದರಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತೇವೆ. ಮತ್ತು ಹೋಲದಲ್ಲಿ ಬಾವಿ ಕೂಡಾ ಇರುತ್ತದೆ. ಹೀಗಿದ್ದು ಈಗ್ಗೆ ಸೂಮಾರು 1 ವರ್ಷಗಳ ಹಿಂದೆ ನನ್ನ ಗಂಡ ನಾಗಾರೆಡ್ಡಿ ಇವರು ತನ್ನ ಹೆಸರಿಗೆ ಇರುವ ಹೋಲದಲ್ಲಿ ಬೆಳೆ ಬೆಳೆಯುವ ಸಂಭಂಧ ಕಮಲಾಪೂರ ಗ್ರಾಮದ ಕೆನರಾ ಬ್ಯಾಂಕನಲ್ಲಿ 50 ಸಾವಿರ ರೂಪಾಯಿ ಬೆಳೆ ಸಾಲ ಅಂತಾ ತೆಗೆದುಕೊಂಡಿದ್ದು. ಸರಿಯಾಗಿ ಮಳೆ ಬರದೆ ಬೆಳೆ ಕೂಡಾ ಬೆಳೆಯದೆ ಇದ್ದುದರಿಂದ ನನ್ನ ಗಂಡ ನಾಗಾರೆಡ್ಡಿ ಇವರು ಮನಸ್ಸಿನ ಮೇಲೆ ಬೇಜಾರ ಮಾಡಿಕೊಂಡು ಮನೆಯಲ್ಲಿ ಸರಿಯಾಗಿ ಊಟ ತಿಂಡಿ ಮಾಡದೆ ಯಾರೊಂದಿಗೂ ಸರಿಯಾಗಿ ಮಾತು ಕೂಡಾ ಆಡದೆ ಒಬ್ಬರೆ ಸಾಲ ಮುಟ್ಟಿಸುವ ಬಗ್ಗೆ ಚಿಂತೆ ಮಾಡುತ್ತ ಕೂಡುತ್ತಿದ್ದರು ಅದನ್ನು ನೋಡಿ ನಾನು ಮತ್ತು ನನ್ನ ಮಕ್ಕಳೂ ಹಾಗೂ ನನ್ನ ಭಾವ ಮಲ್ಲರೆಡ್ಡಿ ಮತ್ತು ಇತರರು ಕೂಡಿ ನನ್ನ ಗಂಡನಿಗೆ ಹೀಗೆ ಸಾಲದ ವಿಷಯದಲ್ಲಿ ಚಿಂತೆ ಮಾಡಬೇಡಾ ನಮಗೆ 4 ಜನ ಮಕ್ಕಳಿದ್ದಾರೆ ನಿಮಗೆ ಏನಾದರು ಆದರೆ ನಾನು ಮತ್ತು ಮಕ್ಕಳು ಅನಾಥರಾಗುತ್ತೇವೆ ನಾವೇಲ್ಲರೂ ಕೂಡಿ ಮುಂದೆ ಸಾಲ ಮುಟ್ಟಿಸಿದರಾಯಿತು ಅಂತಾ ಬುದ್ದಿಮಾತು ಹೇಳುತ್ತ ಬಂದಿದ್ದರು ಕೂಡಾ ನನ್ನ ಗಂಡ ಅದೇ ರೀತಿ ಬ್ಯಾಂಕನ ಸಾಲ ತಿರಿಸುವ ವಿಷಯದಲ್ಲಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದರು. ಮತ್ತು ನನ್ನ ಗಂಡನಿಗೆ ಇಜು ಬರುತ್ತಿರಲಿಲ್ಲ. ದಿನಾಂಕ:11-06-2018 ರಂದು ಮುಂಜಾನೆ 07-00 ಗಂಟೆಯ ಸೂಮಾರಿಗೆ ನನ್ನ ಗಂಡ ನಾಗಾರೆಡ್ಡಿ ಇವರು ನಮ್ಮ ಹೋಲದಲ್ಲಿನ ಕಬ್ಬಿನ ಬೆಳೆಗೆ ನಿರು ಬಿಟ್ಟು ಹೋಲದಲ್ಲಿ ಕೆಲಸ ಮಾಡಲು ಹೋಗುತ್ತೇನೆ ನೀನು ಬರುವಾಗ ನನಗೆ ಊಟ ತೆಗೆದುಕೊಂಡು ಬಾ ಅಂತಾ ನನಗೆ ಹೇಳಿ ಮನೆಯಿಂದ ನಮ್ಮ ಹೋಲಕ್ಕೆ ಹೋಗಿದ್ದು. ನಂತರ ನಾನು ಕೂಡಾ ಇಂದು ಮದ್ಯಾಹ್ನ 12-00 ಗಂಟೆಯ ಸೂಮಾರಿಗೆ ನನ್ನ ಗಂಡನಿಗೆ ಊಟ ತೆಗೆದುಕೊಂಡು ವಸಂತ ಶೇಠ ಇವರ ಹೋಲದಿಂದ ನಮ್ಮ ಹೋಲಕ್ಕೆ ಹೋಗುತ್ತಿದ್ದಾಗ ನನ್ನ ಗಂಡ ಕೂಡಾ ಅದೇ ಹೋಲದಿಂದ ನಡೆದುಕೊಂಡು ಬರುತ್ತಿದ್ದು. ನಾನು ನನ್ನ ಗಂಡನಿಗೆ ಎಲ್ಲಿಗೆ ಹೋರಟಿದ್ದಿರಿ ಅಂತಾ ವಿಚಾರ ಮಾಡಲು ಅವರು ಊಟ ತರಲು ತಡವಾಗಿದ್ದರಿಂದ ಮನೆ ಕಡೆಗೆ ಹೋರಟಿದ್ದೆ ಅಂತಾ ಹೇಳಿದ್ದು. ನಂತರ ನಾವಿಬ್ಬರೂ ಕೂಡಿ ವಾಪಸ್ಸ ನಮ್ಮ ಹೋಲಕ್ಕೆ ಬಂದು ಹೋಲದಲ್ಲಿ ಊಟ ಮಾಡಿದ್ದು. ನಂತರ ನಾನು ಹೋಲದಲ್ಲಿ ಸದಿ ತೆಗೆಯುತ್ತಿದ್ದು ಮದ್ಯಾಹ್ನ 02.00 ಗಂಟೆಯ ಸೂಮಾರಿಗೆ ನನ್ನ ಗಂಡ ನಮ್ಮ ಹೋಲದಲ್ಲಿನ ಬಾವಿಯ ಹತ್ತಿರ ಹೋಗುತ್ತಿದ್ದು. ಅದನ್ನು ನೋಡಿ ನಾನು ನನ್ನ ಗಂಡನ ಹಿಂದೆ ಹೋಗುತ್ತಿದ್ದಾಗ ನನ್ನ ಗಂಡ ಒಮ್ಮಿಲೆ ಬಾವಿಯ ನಿರಿನಲ್ಲಿ ಹಾರಿದನು. ಅದನ್ನು ನೋಡಿ ನಾನು ಚಿರಾಡುತ್ತಿದ್ದಾಗ ನಮ್ಮ ಬಾಜು ಹೋಲದಲ್ಲಿದ್ದ ನಮ್ಮ ಭಾವ ಭೀಮರೆಡ್ಡಿ ಹಾಗೂ ನಮ್ಮ ಅಣ್ಣತಮ್ಮಕ್ಕಿಯ ವಿಠಲರೆಡ್ಡಿ, ದಿಲೀಪರೆಡ್ಡಿ  ಇವರು ಬಂದು ಬಾವಿಯಲ್ಲಿ ಇಳಿದು ಇಂದು ಮದ್ಯಾಹ್ನ 02-15 ಗಂಟೆಯ ಸೂಮಾರಿಗೆ ನನ್ನ ಗಂಡನಿಗೆ ಬಾವಿಯಿಂದ ಹೋರಗಡೆ ತೆಗೆದು ನೋಡಲಾಗಿ ನನ್ನ ಗಂಡ ಬಾವಿಯ ನಿರಿನಲ್ಲಿ ಬಿದ್ದು ಇಜು ಬಾರದೆ ಉಸಿರುಗಟ್ಟಿ ಬಾಯಿ ತೆರೆದು ಮುಗಿನಿಂದ ಸುಂಬಳ ಬಂದು ಮೃತ ಪಟ್ಟಿದ್ದರು. ನನ್ನ ಗಂಡನಾದ ನಾಗಾರೆಡ್ಡಿ ಇವರು ಕಮಲಾಪೂರ ಗ್ರಾಮದ ಕೆನರಾ ಬ್ಯಾಂಕನಲ್ಲಿ ತೆಗೆದ 50 ಸಾವಿರ ರೂಪಾಯಿ ಬೆಳೆ ಸಾಲವನ್ನು ಮುಟ್ಟಿಸಲು ಆಗದೆ ಮಾನಸಿಕನಾಗಿ ಮನನೊಂದು ಬಾವಿಯ ನಿರಿನಲ್ಲಿ ಹಾರಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂದೀಪ ತಂದೆ ಸಂಜಯ ಖಾಡೆ ಸಾ||ಅಕಲುಜ ತಾ||ಮಾಳಸಿರಸ ಜಿ||ಸೊಲಾಪೂರ ರವರು  ದಿನಾಂಕ 11/06/2018 ರಂದು ಬೆಳಿಗ್ಗೆ ನಮ್ಮ ಕುಟುಂಬದ ಸದಸ್ಯರು ಹಾಗು ಸಂಬಂದಿಕರಾದ 1) ಪ್ರಶಾಂತ ತಂದೆ ಮದುಕರ ಖಾಡೆ 2) ಮಂಗಲ ಗಂಡ ವಿನಾಯಕ 3)ವೈಶಾಲಿ ಗಂಡ ವಿಷ್ಣು 4) ಮಂಗಲ ಗಂಡ ದೀಲಿಪ 5) ಪದ್ಮಿನಿ ಗಂಡ ಬಲಿರಾವ ಕುಂಬಾರ 6) ವಿಷ್ಣು ತಂದೆ ವಿನಾಯಕ ನಾಗರಗೋಜ ಎಲ್ಲರು ಕೂಡಿ ನಮ್ಮ ಕುಟುಂಬದ ಬುಲೆರೋ  ವಾಹನ ನಂ ಎಮ್ ಹೆಚ್ 11 ಸಿಜಿ-8467 ನೇದ್ದನ್ನು ತಗೆದುಕೊಂಡು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಶ್ರೀ ದತ್ತಾತ್ರೇಯ ಮಹಾರಾಜರ ದರ್ಶನಕ್ಕಾಗಿ ದೇವಲ ಗಾಣಗಾಪೂರಕ್ಕೆ ಬಂದು ದರ್ಶನ ಮಾಡಿ  ಮರಳಿ ನಮ್ಮ ಗ್ರಾಮಕ್ಕೆ ಹೋಗುತಿದ್ದಾಗ ನಮ್ಮ  ವಾಹನದ ಚಾಲಕ ವಿಷ್ಣು ತಂದೆ ವಿನಾಯಕ ರವರು ಚಾಲಾಯಿಸುತಿದ್ದರು ಅಫಜಲಪೂರ ಬಸ ಡಿಪೋ ಹತ್ತಿರ ಇದ್ದಾಗ ನಮ್ಮ ಎದುರಿನಿಂದ ಟ್ಯಾಂಕರ ವಾಹನದ ಚಾಲಕ ಸದರಿ ಟ್ಯಾಂಕರನ್ನು ಅತಿವೇಗ ಹಾಗು ನಿನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ BOLERO ವಾಹನಕ್ಕೆ  ಜೋರಾಗಿ ಡಿಕ್ಕಿ ಪಡಿಸಿದಾಗ ನಮ್ಮ  BOLERO  ವಾಹನದ ಮುಂದಿನ ಭಾಗ ಜಕಂ ಆಗಿ ಒಳಗೆ ಕುಳಿತಿದ್ದ ನನಗೆ ಹಣೆಯ ಬಲಭಾಗಕ್ಕೆ ರಕ್ತಗಾಯವಾಗಿದ್ದು ನನ್ನಂತೆ ಮಂಗಲ ಗಂಡ ದೀಲಿಪ ರವರಿಗೆ ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ ಪದ್ಮಿನಿ ಗಂಡ ಬಲಿರಾವ ಕುಂಬಾರ ರವರಿಗೆ ತಲೆಗೆ ರಕ್ತಗಾಯ ಹೊಟ್ಟೆಗೆ ಗುಪ್ತಗಾಯ ಬಾಯಿ ಜೋರಾಗಿ ಬಡಿದು ಬಾಯಿಯಲ್ಲಿನ 2-3 ಹಲ್ಲುಗಳು ಮುರಿದು ಭಾರಿ ರಕ್ತಗಾಯವಾಗಿರುತ್ತದೆ ಸದರಿ ಟ್ಯಾಂಕರ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ ನಾವು ಟ್ಯಾಂಕರ ವಾಹನದ ನಂಬರ ನೋಡಲಾಗಿ ಎಮ್ ಹೆಚ್-12 ಎಲ್ ಟಿ-7425 ಅಂತ ಇರುತ್ತದೆ. ನಂತರ ನಾವು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ಚಿಕಿತ್ಸೆ ಪಡೆಯುತಿದ್ದೇವೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಚಂದ್ರಕಾಂತ ತಂದೆ ಗುಂಡಪ್ಪ ಹಳಕೆ ಸಾ:ಲೇಂಗಟಿ ಇವರು ಈಗ ಮೂರು ವರ್ಷಗಳ ಹಿಂದೆ ನಮ್ಮೂರಿನ  ಶೇಖಪ್ಪ ತಂದೆ ಮಾಹಾರುದ್ರಪ್ಪ ಭೂತೆ, ಇವರ ಮಗಳ ಮದುವೆ ಕಾಲಕ್ಕೆ ಒಂದು ಲಕ್ಷ ರೂಪಾಯಿ ಕೊಟ್ಟಿದ್ದು ಸದರಿ ಹಣ ವಾಪಸ್ಸು ಕೊಡುವರೆಗೆ ಶೇಖಪ್ಪ ಈತನ ಹೊಲ ಸರ್ವೇ ನಂ: 13ರಲ್ಲಿಯ ಒಂದವರೆ ಎಕರೆ ಜಮೀನು ನಾನು ಉಪಭೋಗ ಮಾಡಬೇಕೆಂದು ಮಾತುಕತೆ ಮಾಡಿ ಹಣ ಕೊಟ್ಟಿರುತ್ತೇನೆ ಆದರೆ ಶೇಖಪ್ಪ ಇವರು ನಮ್ಮ ಹಣ ನಮಗೆ ವಾಪಸ್ಸ ಕೊಡದೆ ಸದರಿ ಹೊಲವನ್ನು ತನ್ನ ಕಬ್ಜೆಗೆ ಬಿಟ್ಟು ಕೊಡು ಎಂದು ನನ್ನೊಂದಿಗೆ ಆಗಾಗ ತಕರಾರರು ಮಾಡುತ್ತಾ ಬಂದಿದ್ದು ದಿನಾಂಕ:10/06/2018 ರಂದು ಸದರಿ ಶೇಖಪ್ಪ ಇವರು ನನಗೆ ಕಬ್ಜೆ ಕೊಟ್ಟ ಹೊಲದಲ್ಲಿ ತಾವು ಬಿತ್ತನೆ ಮಾಡುತ್ತಿರುವ ವಿಷಯ ನನಗೆ ಗೊತ್ತಾಗಿ ನಾನು ಮತ್ತು ನಮ್ಮ ಸಂಬಂಧಿಕರಾದ ವಿಠಲ್ ತಂದೆ ಪೀರಪ್ಪ ಅಯ್ಯಪ್ಪಗೋಳ ಇಬ್ಬರು ಕೂಡಿ ಸದರಿ ಹೊಲ ಸರ್ವೇ ನಂ 13 ನೇದ್ದಕ್ಕೆ ಹೋಗಿ ಶೇಖಪ್ಪ ಇವರಿಗೆ ಮಾತುಕತೆ ಪ್ರಕಾರ ಸದರಿ ಹೊಲದಲ್ಲಿ ನಾನು ಬಿತ್ತುತ್ತೇನೆಂದು ಹೇಳುತ್ತಿರುವಾಗ ಶೇಖಪ್ಪ ತಂದೆ ಮಾಹಾರುದ್ರಪ್ಪ ಭೂತೆ, ಮಾಹಾರುದ್ರಪ್ಪ ತಂದೆ ಶೇಖಪ್ಪ ಭೂತೆ, ನಾಗಮ್ಮ ಗಂಡ ಶೇಖಪ್ಪ ಭೂತೆ ಮತ್ತು ಕಸ್ತೂರಬಾಯಿ ಮಹಾರುದ್ರಪಪ್ ಭೂತೆ ಇವರುಗಳೆಲ್ಲರೂ ಕೂಡಿಕೊಂಡು ಭೋಸಡಿ ಮಗನೆ ಹಾಟ್ಯಾ ಭಾಡು ಎಂದು ಅವಾಚ್ಯವಾಗಿ ಬೈಯುತ್ತಾ ನೆಲಕ್ಕೆ ಹಾಕಿ ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದ್ದಿರುತ್ತಾನೆ. ಅಲ್ಲದೇ ಕಸ್ತೂರಬಾಯಿ ಇವಳು ಕೈಯಿಂದ ಕಲ್ಲು ಹಿಡಿದುಕೊಂಡು ಬಲಗಡೆ ಮಗ್ಗಲಿಗೆ ಗುದ್ದಿದ್ದರಿಂದ ಒಳಪೆಟ್ಟು ಆಗಿದೆ. ಆಷ್ಟರಲ್ಲಿ ಇದ್ದ ನಮ್ಮ ಸಂಬಂದಿಕರಾದ ವಿಠಲ್ ತಂದೆ ಪೀರಪ್ಪ ಅಯ್ಯಪ್ಪಗೋಳ ಇವರು ಜಗಳ ನೋಡಿ ಬಿಡಿಸಿದರು ನಂತರ ನಾಲ್ಕುಜನ ಸೇರಿ ನನಗೆ ಇನ್ನಮುಂದೆ ನೀನು ನಮ್ಮ ಹೊಲದಾಗ ಕಾಲಿಟ್ಟರೇ ನೀನಗೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.          
ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಜಯಮ್ಮ ಗಂಡ ನಾರಾಯಣ ಸಾ: ದುದ್ಯಾಲ್ಹಾವ: ತಿಲಕ ನಗರ ಕಲಬುರಗಿ ಇವರ ಮಗಳಾದ ರಾಗಸುಧಾ ಇವಳಿಗೆ ಕಾನಾಗಡ್ಡಾ ಗ್ರಾಮದ ನನ್ನ ಚಿಕ್ಕಮ್ಮನ ಮಗನಾದ ಸಂತೋಷ ಎಂಬುವವರಿಗೆ 2006 ರಲ್ಲಿ ಮದುವೆ ಮಾಡಿಕೊಟ್ಟಿದ್ದು ನನ್ನ ಮಗಳಿಗೆ ಅವಳ ಗಂಡ ಸಂತೋಷ ಇತನು ಮಕ್ಕಳಾಗಿಲ್ಲಾ ಅಂತಾ ಮತ್ತು 1 ಲಕ್ಷರೂಪಾಯಿ ವರದಕ್ಷಣೆ ಹಣ ತೆಗೆದು ಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ತೊಂದರೆ ಕೊಡುತ್ತಿದ್ದು, ಇವನಿಗೆ ನಾವುಗಳು ಬುದ್ದಿವಾದ ಹೇಳಿದರು ಸಹ ನಮ್ಮ ಅಳಿಯನು ನಮ್ಮ ಮಗಳಿಗೆಹೊಡೆ ಬಡೆ ಮಾಡಿ ತಾಳಿ ಕಿತ್ತಿ ಕೊಂಡು ನಮ್ಮ ಮನೆಯಲ್ಲಿ ಇರಬೇಡಾ ತವರು ಮನೆಗೆ ಹೋಗು ಅಂತಾ 06 ತಿಂಗಳ ಹಿಂದೆ ತವರು ಮನೆಗೆ ಕಳುಹಿಸಿದ್ದು, ನಂತರ ನಾವು ನಮ್ಮ ಮಗಳಿಗೆ ಗಂಡನ ಮನಗೆ ಕರೆದು ಕೊಂಡು ಹೋಗಿ ಪಂಚಾಯತ ಮಾಡಿಬಿಟ್ಟು ಬರಲು ಹೋದಾಗ ಅವಳ ಗಂಡನು ನನಗೆ ಈಗ ಆರಾಮಇರುವದಿಲ್ಲಾ ಎರಡು ತಿಂಗಳಾದ ಮೇಲೆ ಬಂದು ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿದ್ದರಿಂದ ನನ್ನ ಮಗಳಿಗೆ ನಮ್ಮ ಮನೆಯಲ್ಲಿಟ್ಟಿ ಕೊಂಡಿದ್ದು ನನ್ನ ಮಗಳು ದಿನಾಂಕ: 25-07-2017 ರಂದು ಅವಳ ಗಂಡನಿಗೆ ಫೋನಮಾಡಿ ನಾನು ಊರಿಗೆ ಬರುತ್ತಿದ್ದೇನೆ ಅಂತಾ ಹೇಳಿದ್ದು, ಅವನು ನೀನು ಊರಿಗೆ ಬರಬೇಡಾ ಅಲ್ಲಿ ಎಲ್ಲಾದರು ಬಿದ್ದುಸಾಯಿ, ನೀನು ಒಂದು ವೇಳೆ ಊರಿಗೆ ಬಂದರೆ, ನಿಮ್ಮ ಮನೆಯಲ್ಲಿ ಎಲ್ಲರಿಗೆ ಹೊಡೆದು ಖಲಾಸ ಮಾಡುತ್ತೇನೆ ಅಂತಾ ಬೇದರಿಕೆ ಹಾಕಿದ್ದರಿಂದ ನನ್ನ ಮಗಳು ಮಾನಸಿಕ ಮಾಡಿಕೊಂಡು ದಿನಾಂಕ: 25-07-17 ರಂದು ಮದ್ಯಾಹ್ನ ನನ್ನ ಮಗಳು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿ ರೈಲ್ವೆ ಪಟ್ರಿಯಲ್ಲಿ ಬಿದ್ದು ಆತ್ಮ ಹತ್ತೆಮಾಡಿಕೊಂಡಿರುತ್ತಾಳೆ ನನ್ನ ಮಗಳ ಸಾವಿಗೆ ಅವಳ ಗಂಡನ ಮೇಲೆ ಕಾನೂನಿನ ಕ್ರಮಕೈಕೊಳ್ಳ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.