POLICE BHAVAN KALABURAGI

POLICE BHAVAN KALABURAGI

11 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 10/03/2018 ರಂದು ಸಂಜೆ ಪಟ್ಟಣ ಗ್ರಾಮದ ಹಳ್ಳದ ಬ್ರೀಡ್ಜ  ರೋಡಿನ ಮೇಲೆ ಟ್ಯಾಕ್ಟ್ರರ ಚಾಲಕ ತನ್ನ ಟ್ಯಾಕ್ಟ್ರರ ಇಂಜನ KA 39 T 2243  ಮತ್ತು ಟ್ರಾಲಿ ನಂಬರ KA 39 T 2244  ನೇದ್ದು ಮಾನವನ ಜೀವಕ್ಕೆ ಅಪಾಯವಾಗುವ ಮತ್ತು ಸಂಚಾರಕ್ಕೆ ಅಡೆ ತಡೆಯಾಗುವ ರೀತಿಯಲ್ಲಿ ಹಾಗೂ ಯಾವುದೇ ಮುನ್ಸೂಚನೇ ಮತ್ತು ಇಂಡಿಕೇಟರ ಹಾಕದೇ ನಿಲ್ಲಿಸಿದ್ದರಿಂದ ಮತ್ತು ನನ್ನ ತಮ್ಮ ಮಲ್ಲಿಕಾರ್ಜುನ ತಂದೆ ಶಾಂತಪ್ಪ  ನಾಟೀಕರ ಇತನು ತನ್ನ ವಶದಲ್ಲಿದ್ದ ಹಿರೋ ಹೊಂಡಾ ಸಿಡಿ 100 KA 05 X 3352 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಬಂದು ಟ್ಯಾಕ್ಟ್ರರದ ಟ್ರಾಲಿಯ ಹಿಂದುಗಡೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಅವನಿಗೆ ಎಡತಲೆಯ ಮೇಲೆ ಭಾರಿ ರಕ್ತಗಾಯ ಮತ್ತು ಬಲತಲೆಯ ಮೇಲೆ ಹರಿದ ಭಾರಿ ರಕ್ತಗಾಯ, ಮೂಗಿನಿಂದ ರಕ್ತ ಸೋರಿದ್ದು. ಎಡರಟ್ಟೆಯ ಮೇಲೆ ಅಲ್ಲಿಲ್ಲಿ ರಕ್ತಗಾಯ, ಬಲಭುಜದ ಮೇಲೆ ರಕ್ತಗಾಯ, ಎಡಮೊಳಕಾಲ ಮೇಲೆ ತರಚಿದ ರಕ್ತಗಾಯ ಮತ್ತು ಕೆಳೆಗೆ ತರಚಿದ ಗಾಯಗಳಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದು ಅವನಿಗೆ ಉಪಚಾರ ಕುರಿತು ಗಂಗಾ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದಾಗ ಇತನಿಗೆ ಆದ ಭಾರಿ ರಕ್ತಗಾಯಗಳಿಂದ ವೈದ್ಯರು ಉಪಚರಿಸುತ್ತಿರುವ ಕಾಲಕ್ಕೆ  ಗುಣ ಮುಖ ಹೊಂದದೇ ದಿನಾಂಕ 10/03/2018 ರಂದು ರಾತ್ರಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಈರಣ್ಣಾ ತಂದೆ ಶಾಂತಪ್ಪಾ ನಾಟೀಕರ ಸಾ : ಪಟ್ಟಣ  ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 10/03/2018 ರಂದು ಮೃತ ಸೋಫಾನರಾವ ಇತನು ಯಾವುದೋ ಕೆಲಸದ ನಿಮತ್ಯಾ ಆಳಂದ ಕಡೆಗೆ ಹೋಗಿ ಮರಳಿ ಕಲಬುರಗಿಗೆ ಬರುವಾಗ ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನಂ KA-32 EE-1169  ನೇದ್ದನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ರಾತ್ರಿ ಸುಮಾರಿಗೆ ಕೇರಿ ಭೋಸಗಾ ಕ್ರಾಸ ಹತ್ತಿರ ಇರುವ ಪೆಟ್ರೋಲ್ ಪಂಪದ ಎದರುಗಡೆ ರೋಡ ಜಂಪನಲ್ಲಿ ಮುಂದೆ ಹೋಗುತ್ತಿದ್ದ ಯಾವುದೋ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಯಾವುದೇ ಇಂಡಿಕೇಟರ್ ವಗೈರೇ ಮತ್ತು ಯಾವುದೇ ಸೂಚನೆ ನೀಡದೇ ಹೋಗು ಬರುವ ವಾಹನ ಚಾಲಕರಿಗೆ ಅಪಾಯವಾಗುವ ರೀತಿಯಲ್ಲಿ ಕಾರನ್ನು ಒಮ್ಮಲೇ ರೋಡಿನ ಮೇಲೆ ನಿಲ್ಲಿಸಿದಾಗ ಮೃತ ಸೋಪನರಾವ ಇತನು ತನ್ನ ಮೋಟಾರ ಸೈಕಲ್  ಸದರಿ ಕಾರಿನ ಹಿಂದುಗಡೆ ಅಪಘಾತ ಪಡಿಸಿದ್ದರಿಂದ್ದ ಮೃತನ  ಹಣೆಗೆ ಮತ್ತು ಕುತ್ತಿಗಿಗೆ ಭಾರಿ ರಕ್ತಗಾಯವಾಗಿ ಮತ್ತು ಇತರೇ ಕಡೆಗಳಲ್ಲಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಸುನೀತಾ ಗಂಡ ಸೋಫಾನರಾವ ಸೂರ್ಯವಂಶಿ ಸಾ : ಆಶ್ರಯ ಕಾಲೋನಿ ರಾಣೇಶಪೀರ ದರ್ಗಾ ಹತ್ತಿರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ: 08-03-18 ರಂದು ಮೊಟಾರ ಸೈಕಲ್ ನಂ. ಕೆಎ32ಇಕ್ಯೂ1564 ನೆದ್ದರ ಮೇಲೆ ಗಂಡ ನಾಗೇಂದ್ರಪ್ಪ ಇಬ್ಬರೂ ಕೂಡಿಕೊಂಡು ಕುರಕುಂಟಾ ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ವಾಪಾಸು ಹೋಗುವಾಗ ಬಟಗೇರಾ(ಕೆ) ಗೇಟ ಹತ್ತಿರ ಕುರಕುಂಟಾ ಕ್ರಾಸ ಹತ್ತಿರ ಒಬ್ಬ ಮೊಟಾರ ಸೈಕಲ್ ನಂ.ಕೆಎ32ಇಆರ್3186 ನೆದ್ದರ ಚಾಲಕನು ಅತಿ ವೇಗದಿಂದ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಗಂಡ ಚಲಾಯಿಸುತ್ತಿದ್ದ ಮೊಟಾರ ಸೈಕಲ್ ಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿ, ಮೊಟಾರ ಸೈಕಲ್ ಸಮೇತ ಆರೋಪಿತನು ಓಡಿ ಹೋಗಿರುತ್ತಾನೆ ಅಂತಾ ಶ್ರೀಮತಿ ಸುನಂದಾ ಗಂಡ ನಾಗೇಂದ್ರಪ್ಪ ರಾಜಾಪೂರ ಸಾ|| ಸಣ್ಣ ಅಗಸಿ ಸೇಡಂ, ಹಾ.ವ|| ವಿ.ಸಿ.ಎಫ್ ಕಾಲೋನಿ ಸೇಡಂ, ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10-03-2018 ರಂದು ಅಫಜಲಪೂರ ಪಟ್ಟಣದ ದುಧನಿ ರಸ್ತೆಗೆ ಇರುವ ಸಾಮ್ರಾಟ ಪೇಟ್ರೊಲ ಪಂಪ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಾಮ್ರಾಟ ಪೇಟ್ರೊಲ ಪಂಪ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಪೆಟ್ರೊಲ ಪಂಪ ಪಕ್ಕದ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ 04 ಜನರನ್ನು ಹಿಡಿದು  ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಾಳಪ್ಪ ತಂದೆ ಚಂದ್ರಾಮ ಹುಲ್ಲೂರ ಸಾ|| ಅಮೋಗಸಿದ್ದ ಗುಡಿ ಹತ್ತಿರ ಅಫಜಲಪೂರ 2) ತುಕಾರಾಮ ತಂದೆ ಲಕ್ಷ್ಮಣ ಬಂಗಿ ಸಾ|| ಅಫಜಲಪೂರ 3) ಸುರೇಶ ತಂದೆ ದುಂಡಪ್ಪ ಹಿಂಚಗೇರಾ ವಯ|| 52 ವರ್ಷ ಜಾ|| ಕುರುಬ || ಲಾರಿ ಚಾಲಕ ಸಾ|| ಅಫಜಲಪೂರ 4) ಬಸವರಾಜ ತಂದೆ ತುಳುಜಪ್ಪ ಕುಮಸಗಿ ಸಾ|| ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 5620/- ರೂ ಹಾಗು 52 ಇಸ್ಪೇಟ  ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಜಾತಿ ನಿಂದನೆ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಲಕ್ಷ್ಮಮ್ಮ ಗಂಡ ಕಾಶಪ್ಪ ಕೊಲಕುಂದಾ, ಸಾ|| ಭೂತಪೂರ, ತಾ|| ಸೇಡಂ, ಜಿ|| ಕಲಬುರಗಿ.
ರವರು ದಿನಾಂಕ: 09-03-2018 ರಂದು ಸಿಂಧನಮಡು ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಪಿ.ಡಿ.ಓ ರಾಮಪ್ಪ ಇವರು ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಚೆಕ್ಗಳ ಮೇಲೆ ಮತ್ತು ಮನೆ ಹಂಚಿಕೆಯ ದಾಖಲಾತಿಗಳ ಮೇಲೆ ಸಹಿ ಮಾಡಲು ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮಮ್ಮ ಇವರಿಗೆ ಹೇಳಿದಾಗ, ಆಗ ಫಿರ್ಯಾದಿದಾರರು ನನಗೆ ಓದು ಬರಹ ಬರುವುದಿಲ್ಲ, ಓದಿ ಬರಹ ಬಲ್ಲವರಿಗೆ ಕೇಳಿ ವಿಷಯ ತಿಳಿದುಕೊಂಡು ಸಹಿ ಮಾಡುವುದಾಗಿ ಹೇಳಿದ್ದು, ಅದಕ್ಕೆ ಪಿ.ಡಿ.ಓ ರವರು ಫಿರ್ಯಾದಿಗೆ ನೀನು ಮುದುಕಿ ಆಗಿದ್ದಿ, ನಿನಗೆ ಕೆಲಸ ಬರುವುದಿಲ್ಲ ಅಂದರೆ ರಾಜಿನಾಮೆ ಕೊಟ್ಟು ಹೋಗು, ನಿನ್ನಿಂದ ಈ ಕೆಲಸ ಆಗುವುದಿಲ್ಲ ಅಂತಾ ಏಕ ವಚನದಲ್ಲಿ ಬೈಯ್ದು, ಮಾದೀಗ ಜನಾಂಗದವರಿಗೆ ಯಾಕೆ ಅಧ್ಯಕ್ಷ ಕೊಟ್ಟಿರುತ್ತಾರೆ ಅಂತಾ ಬೈಯ್ದಿದ್ದು, ಸದರಿ ಪಿ.ಡಿ.ಓ ರಾಮಪ್ಪ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾನಿ ಮಾಡಿದ ಪ್ರಕರಣ :
ಸೇಡಂ ಠಾಣೆ : ದಿನಾಂಕ: 07-03-18 ರಂದು 04:00 ಪಿ.ಎಮ್ ಕ್ಕೆ ಶ್ರೀ ಸಿಮೆಂಟ ಫ್ಯಾಕ್ಟರಿ ಕೊಡ್ಲಾ-ಬೆನಕನಳ್ಳಿಯಲ್ಲಿನ ಕಾಖರ್ಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನಾದ ಮಹ್ಮದ ಮುನೀಫ್ ಸಾ|| ಮುಜಫರಪುರ ಬಿಹಾರ ಇತನು ಕೆಲಸ ಮಾಡುವ ಸಮಯದಲ್ಲಿ ಅವನ ತಲೆಯ ಮೇಲೆ ರಾಡಗಳು ಬಿದ್ದು ತಲೆಗೆ ಭಾರಿ ರಕ್ತಗಾಯಗಳಾಗಿ ಉಪಚಾರ ಕುರಿತು ಕಲಬುರಗಿಯ ಎ.ಎಸ್.ಎಮ್ ಆಸ್ಪತ್ರೆಯಲ್ಲಿ ಹೋಗಿದ್ದು, ಆ ವೇಳೆಯಲ್ಲಿ ವೈದ್ಯರು ಪರಿಶೀಲಿಸಿ ಮೃತಪಟ್ಟಿದ್ದ ಬಗ್ಗೆ ತಿಳಿಸಿದ್ದು, ಈ ವಿಷಯವನ್ನು ಇಟ್ಟಿಕೊಂಡು ದಿನಾಂಕ: 08-03-18 ರಂದು 08:20 ಎ.ಎಮ್ ಸುಮಾರಿಗೆ ಮೇ|| ಪೆಟ್ರಾನ್ ಕಂಪನಿಯ ಸಬ್ ಕಾಂಟ್ರಾಕ್ಟರರಾದ ಸುನೀಲಕುಮಾರ ವಿ. ಕಾಂಟ್ರಕ್ಟರ್ ಹತ್ತಿರ ಕೆಲಸ ಮಾಡುವ ಸುಭೋದಕುಮಾರ ಹಾಗು  ಇತರೆ ಗುತ್ತಿಗೆ ಕಾರ್ಮಿಕರು ಸುಮಾರು 45-50 ಜನ ಕಾರ್ಮಿಕರು ಪೂರ್ವದ ಗೇಟನಿಂದ ಪೆಟ್ರಾನ್ ಆಫೀಸ್ ಕಡೆಗೆ ನುಗ್ಗಿ, ನಂತರ ಫ್ಯಾಕ್ಟರಿಯ ಟಿ ಜಂಕ್ಷನ್ ಹತ್ತಿರ ನಿಂತಿದ್ದ ಹೊಸ ಬಸ್ಸಿಗೆ ಕಲ್ಲುಗಳಿಂದ ಹೊಡೆದು ಅದರ ಎಲ್ಲಾ ಗಾಜುಗಳನ್ನು ಒಡೆದು ಬಸ್ಸಿಗೆ ಹಾನಿ ಮಾಡಿ ನಂತರ ಪೆಟ್ರಾನ್ ಕಂಪನಿ ಹತ್ತಿರ ಇದ್ದ ಎರಡು ವಾಹನಗಳಿಗೆ ಕಲ್ಲುಗಳಿಂದ ಹೊಡೆದು ಹಾನಿ ಪಡಿಸಿರುತ್ತಾರೆ ಅಂತಾ ಶ್ರೀ ಮನೋಜಕುಮಾರ ಬಗೋರಿಯಾ ಎಡಿ.ಜಿ.ಎಮ್ ಶ್ರೀ ಸಿಮೆಂಟ ಫ್ಯಾಕ್ಟರಿ ಕೊಡ್ಲಾ-ಬೆನಕನಳ್ಳಿ, ತಾ|| ಸೇಡಂ, ಜಿ|| ಕಲಬುರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 March 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 07.03.2018 ರಂದು ಸಾಯಂಕಾಲ ಚಿಂಚೋಳ್ಳಿ ಲೇಔಟದಲ್ಲಿ ಇರುವ ಎಸ್.ಬಿ.ಹೆಚ್ ಬ್ಯಾಂಕ ಪಕ್ಕದಲ್ಲಿರುವ ರಸ್ತೆಯಲ್ಲಿ  ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಚಿಂಚೋಳ್ಳಿ ಲೇಔಟದಲ್ಲಿ ಇರುವ ಎಸ್.ಬಿ.ಹೆಚ್ ಬ್ಯಾಂಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಬ್ಯಾಂಕ ಪಕ್ಕದಲ್ಲಿರುವ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ  ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವರನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಲಕ್ಷ್ಮಿಕಾಂತ ತಂದೆ ರಾಚಣ್ಣ ರಾಯಗೊಂಡ ಸಾ: ಪಟ್ಟಣ ತಾ:ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1620/- ರೂ 2) 4 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್  ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 06/03/2018 ರಂದು ಸಾಯಂಕಾಲ ನಮ್ಮೂರಿನ ಶ್ರೀನಾಥ ನಾಕಮನ ಇತನು ನನಗೆ ಪೋನ್ ಮಾಡಿ ತಿಳಿಸಿದೆನೆಂದರೆ ನಾನು ಮತ್ತು ಸಿದ್ರಾಮ ಕಗ್ಗನಮಡ್ಡಿ  ಇಬ್ಬರು ಕೂಡಿಕೊಂಡು ನಮ್ಮೂರಿನಿಂದ ಸಿರಗಾಪೂರ ಕ್ರಾಸನ್ ಕಡೆಗೆ ಹೋಗುತ್ತಿದ್ದಾಗ ನಮ್ಮ ಹಿಂದಿನಿಂದ ಒಂದು ಇನೊವಾ ಕಾರ ಚಾಲಕನು ತನ್ನ ಕಾರನ್ನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮಗೆ  ಸೈಡ ಹೊಡೆದು ಮುಂದೆ ಹೋಗಿ ಭೂಸಣಗಿ ಸಿಮಾಂತರ ಚನ್ನಬಸಪ್ಪ ಮಹಾಜನ ಇವರ ಹೊಲದ ಹತ್ತಿರ ರೋಡಿನ ಬದಿಗೆ ತಗ್ಗಿನಲ್ಲಿ ತನ್ನ ಕಾರನ್ನು ಪಲ್ಟಿ ಮಾಡಿ ಅಪಘಾತ ಪಡಿಸಿದ್ದು ಆಗ ಹಿಂದಿನಿಂದ ಬರುತ್ತಿದ ನಾನು ಮತ್ತು ಸಿದ್ರಾಮ ಕಗ್ಗನಮಡಿ ಇಬ್ಬುರು ಸಮೀಪ ಹೋಗಿ ನೊಡಲಾಗಿ ಅಪಘಾತಕಿಡಾದ ಇನೊವಾ ಕಾರನಲ್ಲಿ ನಮ್ಮೂರ ತುಳಜಪ್ಪ ತಂದೆ ಮರಗಪ್ಪ ನಾಕಮನ ಮತ್ತು ಕಲಹಂಗರಗಾ ಗ್ರಾಮದ ಲಕ್ಷ್ಮಣ ತಂದೆ ತಿಮ್ಮಯ್ಯ ಮಂಜಾಳಕರ ಇವರು ಇದ್ದು ತುಳಜಪ್ಪ ಇತನಿಗೆ ತಲೆ ಹಿಂದೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಕ್ಷ್ಮಣ ತಂದೆ ತಿಮ್ಮಯ್ಯ ಇತನಿಗೆ ಹಣೆಯ ಮೇಲೆ ಕಣ್ಣಿನ ಮೇಲೆ ತಲೆಯ ಹಿಂದೆ ಮತ್ತು ಕುತ್ತಿಗೆ ಸಾದ ಮತ್ತು ಭಾರಿ ರಕ್ತಗಾಯವಾಗಿದ್ದು ನಾವಿಬ್ಬರು ಕೂಡಿಕೊಂಡು ತುಳಜಪ್ಪಾ ಮತ್ತು ಲಕ್ಷ್ಮಣ ಇವರನ್ನು ಕಾರಿನಿಂದ ಹೊರಗೆ ತೆಗೆದೇವು ಕಾರು ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಸಿದ್ದಬಸವ ತಂದೆ ಶ್ರೀಮಂತ ಕಣ್ಣೂರ ಸಾ|| ಬಬಲಾದ (ಐ.ಕೆ) ಅಂತ ಹೇಳಿರುತ್ತಾನೆ ಅಂತ ನನಗೆ ತಿಳಿಸಿದ್ದು ಆಗ ನಾನು ಮತ್ತು ನಮ್ಮೂರಿನ ಇತರರು ಕೂಡಿಕೊಂಡು ಬಬಲಾದದಿಂದ ಬೂಸಣಗಿ ಸಿಮಾಂತರದ ಚನ್ನಬಸಪ್ಪ ಮಹಾಜನ ಇವರ ಹೊಲದ ಹತ್ತಿರ ಹೋಗಿ ನೊಡಲಾಗಿ ಶ್ರೀನಾಥ ನಾಕಮನ ಇವನು ಹೇಳಿದಂತೆ ಘಟನೆ ಜರುಗಿದ್ದು ನಾವೇಲ್ಲರು ಬಂದಿರುವುದನ್ನು ನೋಡಿ ಕಾರ ಚಾಲಕ ಸಿದ್ದಬಸವನು ತನ್ನ ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ .ಇನೊವಾ ಕಾರ ನಂ ಕೆ.ಎ-32 ಎಂ.ಬಿ-8001 ನೇದರ ಚಾಲಕ ಸಿದ್ದಬಸವ ತಂದೆ ಶ್ರೀಮಂತ ಸಾ|| ಬಬಲಾದ (ಐ.ಕೆ)  ಇತನ ಮೇಲೆ ಕಾನೂನು ಕ್ರಮ ಕೈಗೊಳಬೇಕು ಅಂತಾಶ್ರೀ ಭವಾನಿ ತಂದೆ ಮರಗಪ್ಪ ನಾಕಮನ  ಸಾ :| ಬಬಲಾದ ಐಕೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ  ಮಲ್ಲಿಕಾರ್ಜುನ ಶಿರಗಾಪೂರ ಸಾ||ಲಿಂಗನವಾಡಿ ಇವರ ತಂದೆ-ತಾಯಿಗೆ ನಾನು ಮತ್ತು ಮಹಾದೇವಪ್ಪಾ ಅಂತಾ ಇಬ್ಬರು ಗಂಡು ಮಕ್ಕಳಿದ್ದು ನಮ್ಮ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು ಪಿತ್ರಾರ್ಜಿತ ಜಮೀನು ಹಂಚಿಕೊಂಡಿರುತ್ತೇವೆ. ಸದರಿ ಜಮೀನು ಸರ್ವೆಗಾಗಿ ಅರ್ಜಿ ಸಲ್ಲಿದ್ದು ಅದಂತೆ ಈಗ 2-3 ದಿವಸಗಳ ಹಿಂದೆ ಸರ್ವೇಮಾಡಿದ್ದು ಸದರಿ ಸರ್ವೆೇ ಕಾಲಕ್ಕೆ ಸರಪಳಿ ಹಿಡಿಯುವ ವಿಷಯವಾಗಿ ನಮ್ಮ ಅಣ್ಣನ ಮಗನಾದ ಗಿರಿಯಪ್ಪ ಈತನು ತನ್ನೊಂದಿಗೆ ತಕರಾರು ಮಾಡಿದ್ದು ಅವಾಗಿನಿಂದ ನಮ್ಮ ಅಣ್ಣ ಹಾಗೂ ಅವರ ಪರಿವಾರದವರು ನಮ್ಮ ಮೇಲೆ ಧ್ವೇಷ ಸಾದಿಸುತ್ತಿದ್ದು ದಿನಾಂಕ:06-03-2018 ರಂದು ಮುಂಜಾನೆ ನಾನು ನನ್ನ ಮಗನಾದ ಸಿದ್ರಾಮಪ್ಪಾ ಹಾಗೂ ನನ್ನ ಹೆಂಡತಿಯಾದ ಸುಮಂಗಲಾಬಾಯಿ ರವರು ಮಾತನಾಡುತ್ತಾ ನಮ್ಮ ಮನೆಯ ಮುಂದೆ ನಿಂತಿರುವಾಗ 1)ಮಹಾದೇವಪ್ಪ ತಂದೆ ಬೀಮಶ್ಯಾ ಶಿರಗಾಪುರ, 2)ಗಿರೇಪ್ಪ ತಂದೆ ಮಹಾದೇವಪ್ಪಾ ಶಿರಗಾಪೂರ 3)ಶಿವಪ್ಪ @ ಶಿವಕುಮಾರ ತಂದೆ ಮಹಾದೇವಪ್ಪಾ ಶಿರಗಾಪೂರ, 4)ವಿಜಯಕುಮಾರ ತಂದೆ ಮಹಾದೇವಪ್ಪ ಶಿರಗಾಪೂರ, 5)ಸವಿತಾಬಾಯಿ ಗಂಡ ಮಹಾದೇವಪ್ಪ ಶಿರಗಾಪೂರ, 6)ಜಗದೇವಿ ಗಂಡ ಗಿರೇಪ್ಪ ಶಿರಗಾಪೂರ ಮತ್ತು 7)ಶರಣಮ್ಮ ಗಂಡ ಶಿವಪ್ಪ ಶಿರಗಾಪೂರ ರವರುಗಳು ಎಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಮುಂದೆ ನಿಂತು ನನಗೆ ಏ ಸೋಳೆ ಮಗನಾ ಸರ್ವೇ ಮಾಡುವ ಕಾಲಕ್ಕೆ ನನಗೆ ಬೈದಿದ್ದಿಯ್ಯಾ ಎಂದು ಗಿರೇಪ್ಪ ಇತನು ಅವಾಚ್ಯವಾಗಿ ಬೈಯ್ಯುತ್ತಿರುವಾಗ ನಾನು ಮತ್ತು ನನ್ನ ಮಗ ಸಿದ್ರಾಮಪ್ಪಾ ಹಾಗೂ ನನ್ನ ಹೆಂಡತಿ ಸುಮಂಗಲಾಬಾಯಿ ರವರುಗಳು ಕೂಡಿ ಅವರ ಹತ್ತಿರ ಹೋಗಿ ವಿಚಾರಿಸುತ್ತಿರುವಾಗ ಮಹಾದೇವಪ್ಪ ಮತ್ತು ಗಿರೇಪ್ಪ ಇವರುಗಳು ಬಡೆಗೆಯಿಂದ ನನ್ನ ಎಡಗಡೆ ಕಿವಿಗೆ ಹಾಗೂ ಹಣೆಗೆ ಹೊಡೆದ್ದಿದ್ದರಿಂದ ಕಿವಿಗೆ ಭಾರಿಗಾಯವಾಗಿ ಹರಿದಂತೆ ಕಂಡುಬರುತ್ತಿದೆ. ಅಷ್ಟರಲ್ಲಿಯೇ ನನ್ನ ಮಗನಾದ ಸಿದ್ರಾಮಪ್ಪಾ ಈತನು ಜಗಳ ಬಿಡಿಸಲು ಬಂದಾಗ ಶಿವಪ್ಪ ಮತ್ತು ವಿಜಯಕುಮಾರ ಇವರುಗಳು ಬಡಿಗೆಯಿಂದ ನನ್ನ ಮಗನ ತಲೆಗೆ ಬೆನ್ನಿಗೆ ಎಡಗಾಲ ತೊಡೆಗೆ ಹೊಡೆದ್ದಿದ್ದರಿಂದ ಒಳಪೆಟ್ಟಾಗಿದೆ ಸುಮಿತ್ರಾಬಾಯಿ ಜಗದೇವಿ ಶರಣಮ್ಮ ರವರುಗಳು ಕೂಡಿ ನನಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ನನ್ನ ಹೆಂಡತಿಯಾದ ಸುಮಂಗಲಾಬಾಯಿ ಹಾಗೂ ನಮ್ಮ ಗ್ರಾಮದ ಮಲ್ಲಣ್ಣ ತಂದೆ ಚನ್ನಬಸಪ್ಪ ಇಂಡಿ ಮತ್ತು ಮಹಾದೇವಪ್ಪ ತಂದೆ ಸಿದ್ರಾಮಪ್ಪ ಇಂಡಿ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ಗಿರೇಪ್ಪ ಹಾಗೂ ಶಿವಪ್ಪ ನನಗೆ ಹಾಗೂ ನನ್ನ ಮಗನಿಗೆ ಇವತ್ತು ನೀವು ಉಳಿದ್ದಿದ್ದಿ ಮಕ್ಕಳ್ಳೆ ಮುಂದೆ ಒಂದ್ದಾಲ್ಲ ಒಂದು ದಿವಸ ನಿಮಗೆ ಖಲಾಸ ಮಾಡುತ್ತೇವೆ ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 March 2018

KALABURAGI DISTRICT REPORTED CRIMes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ  ಠಾಣೆ :ದಿನಾಂಕ: 05/03/2018 ರಂದು ಲಾಡಚಿಂಚೋಳಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಾಡಚಿಂಚೋಳಿ  ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ  ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸರ್ಕಾರಿ ಶಾಲೆಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಶಾಂತಪ್ಪ ತಂದೆ ಧರ್ಮಣ್ಣಾ ಪೂಜಾರಿ, ಸಾ:ಲಾಡಚಿಂಚೋಳಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1] ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 850/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಸುಬಾಷ ತಂದೆ ಕೇಸು ಜಾಧವ ಸಾ|| ರಾಂಪೂರ (ಪಿಎ) ತಾಂಡಾ ತಾ|| ಸಿಂದಗಿ ರವರು ದಿನಾಂಕ 01-03-2018 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಸಂಭಂದಿಕನಾದ ಶಂಕರ ತಂದೆ ಮೇಗು ರಾಠೋಡ ಸಾ|| ರಾಂಪೂರ (ಪಿಎ) ತಾಂಡಾ ಇಬ್ಬರು ಕೂಡಿ ಶಂಕರನ ಮೋಟರ ಸೈಕಲ ನಂ ಕೆಎ-28 ಇಡಿ-3487 ನೇದ್ದರ ಮೇಲೆ ನಮ್ಮ ತಾಂಡಾದಿಂದ ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ದೆವರ ಜಾತ್ರೆಗೆ ಹೋಗಿರುತ್ತೇವೆ. ಮೋಟರ ಸೈಕಲ ಶಂಕರನೆ ನಡೆಸುತ್ತಿದ್ದು, ನಾನು ಅವನ ಹಿಂದೆ ಕುಳೀತಿರುತ್ತೇನೆ. ಜಾತ್ರೆ ಮುಗಿಸಿಕೊಂಡು ಮರಳಿ ಮೋಟರ ಸೈಕಲ ಮೇಲೆ ನಮ್ಮ ತಾಂಡಾಕ್ಕೆ ಹೊರಟಿರುತ್ತೇವೆ. ಸಾಯಂಕಾಲ ನಾವು ಅಫಜಲಪೂರ ಕರಜಗಿ ರೋಡಿಗೆ ಇರುವ ಸಿರವಾಳ ಕ್ರಾಸ ಹತ್ತಿರ ರೋಡಿನ ಮೇಲೆ ನಮ್ಮ ಸೈಡಿಗೆ ನಾವು ಬರುತ್ತಿದ್ದಾಗ, ಎದರುಗಡೆಯಿಂದ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದನು. ಡಿಕ್ಕಯಿಂದ ನಾನು ಮೋಟರ ಸೈಕಲ ಮೇಲಿಂದ ಹಾರಿ ಕೆಳಗೆ ಬಿದ್ದೆನು. ಮೋಟರ ಸೈಕಲ ನಡೆಸುತ್ತಿದ್ದ ಶಂಕರನು ಮೋಟರ ಸೈಕಲ ಸಮೇತ ಕೆಳಗೆ ಬಿದ್ದನು. ಸದರಿ ಮೋಟರ ಸೈಕಲ ಡಿಕ್ಕಿಯಿಂದ ನನಗೆ ಅಷ್ಟೇನು ಗಾಯಗಳು ಆಗಿರುವುದಿಲ್ಲ. ನಂತರ ಎದ್ದು ಶಂಕರನಿಗೆ ನೋಡಲಾಗಿ ಅವನ ಬಲಗಾಲು ಮೋಳಕಾಲು ಕೆಳಗೆ ಕಾಲು ಮುರಿದಿತ್ತು. ತಲೆಗೆ ಮತ್ತು ಎಡಗಾಲು ತೊಡೆಗೆ ಒಳಪೆಟ್ಟುಗಳಾಗಿ  ಮೈ ಕೈಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳು ಮತ್ತು ಬಾರಿ ಗುಪ್ತಗಾಯಗಳು ಆಗಿದ್ದವು, ನಮಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ಸವಾರನು ಘಟನೆ ಆದ ತಕ್ಷಣ ಮೋಟರ ಸೈಕಲನ್ನು ಅಲ್ಲೆ ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ. ಸದರಿ ನಮಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂ ನೊಡಲಾಗಿ ಅದರ ನಂ ಕೆಎ-32 ಇಬಿ-6782 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ :ಶ್ರೀಮತಿ.ಗಂಗಮ್ಮಾ ಗಂಡ ಗುಂಡಪ್ಪಾ ಶೆಳ್ಳಗಿ ಮು||ಭೂಪಾಲ ತೆಗನೂರ ಇವರು ದಿನಾಂಕ:04-03-2018 ರಂದು ನನ್ನ ತವರು ಮನೆಗೆ ನಮ್ಮ ತಾಯಿಯಾದ ರಾಚಮ್ಮಗೆ ಆರಾಮ ಇಲ್ಲದ ಕಾರಣ ದಣ್ಣೂರ ಗ್ರಾಮಕ್ಕೆ ನನ್ನ ತಂಗಿಯಾದ ಮಹಾನಂದಳ ಮನೆಗೆ ಸಾಯಾಂಕಾಲ ಬಂದು ನನ್ನ ತಾಯಿ ರಾಚಮ್ಮ ನನ್ನ ತಂಗಿ ಮಹಾನಂದಳ ಮನೆಯಲ್ಲೆ ಇದ್ದಳು. ಮೂರು ನಾಲ್ಕು ದಿನದ ಹಿಂದೆ ಅದೇ ಗ್ರಾಮ ದಣ್ಣೂರ ನನ್ನ ಅಕ್ಕಳಾದ ಭೀಮಾಬಾಯಿ ಗಂಡ ಸಿದ್ದರಾಮ ಮನೆಗೆ ಕರೆದುಕೊಂಡು ಹೋಗ್ಯಾಳ ಅಂತಾ ನನ್ನ ತಂಗಿ ಮಹಾನಂದ ಹೇಳಿದಳು. ನಾನು ತಂಗಿ ಮಹಾನಂದಗೆ ಕೇಳಿ ನನ್ನ ತಾಯಿಗೆ ಹಣ್ಣು ಹಂಪಲ ತಗೆದುಕೊಂಡು ಹೋಗಿ ಮಾತಾಡಿದೆ. ನನ್ನ ತಾಯಿಗೆ ಹಣ್ಣು ತಿನಿಸಿ ಮಾತಾಡುತ್ತಿದ್ದಾಗ ನನ್ನ ಅಕ್ಕನ ಮಗನಾದ ಪ್ರಕಾಶ ಮತ್ತು ಸಿದ್ದಾರಾಮ ನನ್ನ ಅಕ್ಕಳಾದ ಭೀಮಾಬಾಯಿ ಬಂದಿದೆ ತಡ ಪ್ರಕಾಶ ಏ ರಂಡಿ ಗಂಗಿ ನೀ ಎಲ್ಲಿಗೆ ಹೋಗುತ್ತಿ ಅಂತಾ ತಡೆದು ನಿಲ್ಲಿಸಿ ನೀ ನಮ್ಮ ಮನೆಗೆ ಏಕೆ ಬಂದಿದಿ ಭೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈ ಹಿಡಿದು ಕಾಪಳಕ್ಕೆ ಹೊಡೆದನು. ಅಸ್ಟರಲ್ಲಿ ನನ್ನ ಅಕ್ಕನ ಗಂಡನಾದ ಸಿದ್ದರಾಮ ಅಕ್ಕ ಭೀಮಾಬಾಯಿ ಕೂಡಿ ಹಾದರಗಿತ್ತಿ ರಂಡಿ ಭೋಸಡಿ ಎಂದು ಬೈಯುತ್ತಿದ್ದರು. ಅಷ್ಟರಲ್ಲೆ ನನ್ನ ತಂಗಿ ಗುಂಡಮ್ಮ ಗಂಡ ಬಸವರಾಜ ಡಿಗ್ಗಿ ಗಂಡ ಹೆಂಡತಿ ಬಂದು ಈ ಬೋಸಡಿ ಗಂಗಿಗೆ ಬಿಡಬೇಡರಿ ನನ್ನ ತಾಯಿಯ ಜಾಗದ ಮೇಲೆ ಮನೆ ಮಹಾನಂದಗ ಮಾಡಿಸ್ಯಾಳ ಗಂಗಿ ರಂಡಿಗಿ ಬಿಡಬ್ಯಾಡ ಏ ಪ್ರಕಾಶ ಗಂಗಿ ಜೀವನೆ ಕಲಸನಾಡು ಅಂದಿದನು ನಾವು ನೋಡುಕೊಳ್ಳುತ್ತೀವಿ ಎಂದಾಗ ಹೊಡಿಬಡಿ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ :ಶ್ರೀ  ಶಂಕರ ಹಂಗರಗಿ ಸಾ||ಗೋಳಾ(ಬಿ) ಇವರು ದಿನಾಂಕ:05-03-2018 ರಂದು ನಮ್ಮ ಮನೆಯ ಮುಂದೆಯೇ ನಮ್ಮ ಅಣ್ಣತಮ್ಮಕಿಯವರಾದ ರವೀಂದ್ರ ತಂದೆ ಬೀರಪ್ಪ ಹಂಗರಗಿ ಇವರ ಮನೆಯ ಇದ್ದು. ಸದರಿಯವರ ಮನೆಯ ಹತ್ತಿರವೇ ನಮ್ಮ ಮನೆಗೆ ಹೋಗಿಬರುವ ದಾರಿ ಇರುತ್ತದೆ. ನಾವು ನಮ್ಮ ಮನೆಗೆ ಹೋಗುವಾ ಕಾಲಕ್ಕೆ ರವೀಂದ್ರ ಹಾಗೂ ಅವರ ಕುಟುಂಬದವರು ನಾವು ಹೋಗಲು ಬರದಂತೆ ರಸ್ತೆಯ ಮೇಲೆ ಕುಳಿತುಕೊಳ್ಳುವುದು ಮತ್ತು ನಮ್ಮನ್ನು ನೋಡಿ ಯ್ಯಾಸಿದಿಗಡಿ ಮಾತನಾಡುವುದು ಮಾಡುತ್ತಿರುತ್ತಾರೆ. ಅದರಂತೆ ಮೊನ್ನೆ ರಾತ್ರಿ ಕೂಡ ರವೀಂದ್ರ ಈತನು ತನ್ನ ಹೆಂಡಿತಿಯಾದ ಮಹಾನಂದಳೊಂದಿಗೆ ಮಾತನಾಡುತ್ತಾ ಸದರಿ ರಸ್ತೆಯ ಮೇಲೆ ಕುಳಿತ್ತಿದ್ದರಿಂದ ನಾನು ನನಗೆ ಹೋಗಿಬರಲು ದಾರಿಬಿಟ್ಟು ಕುಳಿತುಕೊಳ್ಳಿ ಎಂದು ಹೇಳಿ ನಮ್ಮ ಮನೆಗೆ ಹೋಗಿದ್ದು  ದಿನಾಂಕ:04-03-2018 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಅಶೋಕ ಮತ್ತು ಶ್ರೀಶೈಲ ರವರುಗಳು ಮಾತನಾಡುತ್ತಾ ನಮ್ಮ ಓಣಿಯಲ್ಲಿರುವ ಸಿದ್ದಾರಾಮ ಸೌಕಾರ ಇವರ ಗಿರಿಣ ಹತ್ತಿರ ನಿಂತಿರುವಾಗ ನಮ್ಮ ಅಣ್ಣತಮ್ಮಕಿಯರಾದ 1)ರವೀಂದ್ರ ತಂದೆ ಬೀರಪ್ಪ ಹಂಗರಗಿ, 2)ಹಣಮಂತ ತಂದೆ ರಾಮಣ್ಣಾ ಹಂಗರಗಿ, 3)ರುಕ್ಮಣ್ಣ ತಂದೆ ಬೀರಪ್ಪ ಹಂಗರಗಿ, 4)ಮಹಾನಂದ ಗಂಡ ರವೀಂದ್ರ ಹಂಗರಗಿ ಮತ್ತು 5)ಜಗದೇವಿ ತಂದೆ ಬೀರಪ್ಪ ಹಂಗರಗಿ ಎಲ್ಲರೂ ಕೂಡಿಕೊಂಡು ಬಂದು ರವೀಂದ್ರ ಹಾಗೂ ರುಕ್ಮಣ್ಣ ಇವರು ನನಗೆ ಏ ಬೋಸಡಿ ಮಗನೆ ನಿನ್ನೆ ರಾತ್ರಿ ನಮಗೆ ಬೈಯ್ಯುತ್ತಾ ನಿಮ್ಮಮನೆಗೆ ಹೋಗುತ್ತಿದ್ದಿಯಾ ಮತ್ತು ನಿಮ್ಮ ಮನೆಗೆ ಹೋಗಲು ರಸ್ತೆ ಕೊಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ರವೀಂದ್ರನು ಅಲ್ಲೆ ಬಿದ್ದಿರುವ ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು ರುಕ್ಮಣ್ಣನು ಸಹ ಕಲ್ಲಿನಿಂದ ಎಡಗಡೆ ರಟ್ಟೆಯ ಭಾಗಗಕ್ಕೆ ಹೊಡೆದಿದ್ದರಿಂದ ತರಚಿದ ಗಾಯವಾಗಿರುತ್ತದೆ. ಆಗ ನನ್ನ ಮಕ್ಕಳಾದ ಶ್ರೀಶೈಲ ಮತ್ತು ಅಶೋಕ ಜಗಳ ಬಿಡಿಸಲು ಬಂದಾಗ ಹಣಮಂತನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೇ ರವೀಂದ್ರನು ಅಶೋಕನ ಎಡಗೈ ಮಣಿಕಟ್ಟಿನ ಹತ್ತಿರ ಹಲ್ಲಿನಿಂದ ಕಚ್ಚಿರುತ್ತಾನೆ. ರುಕ್ಮಣ್ಣ ಶ್ರೀಶೈಲನ ಹೊಟ್ಟಯ ಮೇಲ್ಭಾಗಗಕ್ಕೆ ಬಲಗಡೆ ಹಲ್ಲಿನಿಂದ ಕಚ್ಚಿದ್ದು ಅಲ್ಲದೇ ಕಲ್ಲಿನಿಂದ ಅವನ ಎಡಗಾಲ ಹೆಬ್ಬರಳಿಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಷ್ಟರಲ್ಲಿಯೇ ವಿಷಯ ಗೊತ್ತಾಗಿ ಜಗಳ ಬಿಡಿಸುತ್ತಿರುವಾಗ ಮಹಾನಂದ ಮತ್ತು ಜಗದೇವಿ ಇವರುಗಳು ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಜಗದೇವಿ ಇವಳಿಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆಬಡಿ ಮಾಡಿ ಕಾಲಿನಿಂದ ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ರವೀಂದ್ರ ಹಂಗರಗಿ ಸಾ||ಗೋಳಾ(ಬಿ) ಇವರ ಮನೆಯ ಹಿಂದೆಯೇ ನಮ್ಮ ಅಣ್ಣತಮ್ಮಕಿಯವರಾದ ಶಂಕರ ತಂದೆ ಸಾಯಣ್ಣಾ ಹಂಗರಗಿ ಇವರ ಮನೆಯಿದ್ದು ಅವರ ಮನೆಗೆ ಹೋಗಿಬರಲು ನಮ್ಮ ಜಾಗದಿಂದಲೆ ರಸ್ತೆ ಇರುತ್ತದೆ. ಸದರಿ ಶಂಕರ ಹಾಗೂ ಅವರ ಕುಟುಂಬದವರು ಸದರಿ ರಸ್ತೆಯ ಬದಿಯಿಂದ ಹೋಗಿಬರುವ ಕಾಲಕ್ಕೆ ಯ್ಯಾಸಿದಿಗಡಿ ಮಾತನಾಡುವುದು ಮತ್ತು ಯಾಗಲು ಹಾದಿಯಲ್ಲಿಯೇ ಕುಳಿತಿರಿತ್ತಿರಿ ಎಂದು ನಮ್ಮೊಂದಿಗೆ ತಕರಾರು ಮಾಡುವುದು ಮಾಡುತಾರುತ್ತಾರೆ ಅಲ್ಲದೇ ಮೊನ್ನೆ ರಾತ್ರಿ ಕೂಡ ನನ್ನ ಹೆಂಡತಿಯೊಂದಿಗೆ ಸದರಿ ದಾರಿಯ ವಿಷಯವಾಗಿ ತಕರಾರು ಮಾಡಿರುತ್ತಾನೆ. ದಿನಾಂಕ:04-03-2018 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು, ನಮ್ಮ ಚಿಕ್ಕಪ್ಪನಾದ ಹಣಮಂತ ತಂದೆ ರಾಣಪ್ಪ ಹಂಗರಗಿ, ಹಾಗೂ ನಮ್ಮೂರಿನ ತಿಪ್ಪಣ್ಣ ತಂದೆ ಸಿದ್ರಾಮ ಜಮಾದಾರ ಮತ್ತು ಇಬ್ರಾಹಿಂ ತಂದೆ ಮೈಬೂಬಸಾಬ ಕೂಡಿ ರವರುಗಳು ಮಾತನಾಡುತ್ತಾ ನಮ್ಮ ಒಣಿಯಲ್ಲಿರುವ ಸಿದ್ರಾಮ ಸೌಕಾರ ಇವರ ಹಿಟ್ಟಿನ ಗಿರಿಣಿಯ ಹತ್ತಿರ ಮಾತಾಡುತ್ತಾ ಕುಳಿತಿರುವಾಗ ಶಂಕರ ತಂದೆ ಸಾಯಬಣ್ಣಾ ಹಂಗರಗಿ, ಶ್ರೀಶೈಲ ತಂದೆ ಶಂಕರ ಹಂಗರಗಿ, ಅಶೋಕ ತಂದೆ ಶಂಕರ ಹಂಗರಗಿ ಮತ್ತು ಜಗದೇವಿ ಗಂಡ ಶಂಕರ ಹಂಗರಗಿ ರವರುಗಳು ಕೂಡಿಕೊಂಡು ಬಂದು ಶಂಕರನು ನನಗೆ ಏ ಸೂಳೆ ಮನಗೆ ನಿನ್ನ ರಾತ್ರಿ ದಾರಿ ವಿಷಯವಾಗಿ ನನ್ನ ಹೆಂಡತಿಯೊಂದಿಗೆ ತಕರಾರು ಮಾಡಿದಂತೆ ಯಾಕೆ ಎಂದು ಏರುಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರಾವಗ ಅವನ ಮಗನಾದ ಶ್ರೀಶೈಲನು ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ಅಲ್ಲಿಯೇ ಇದ್ದ ನನ್ನ ಚಿಕ್ಕಪ್ಪನಾದ ಹಣಮಂತ ತಂದೆ ರಾಮಣ್ಣಾ ಹಂಗರಗಿ ಇವರು ಜಗಳ ಬಿಡಿಸಲು ಬಂದಾಗ ಅಶೋಕನು ಕೊಡಲಿಯ ತುಂಬಿನಿಂದ ನನ್ನ ಎಡಗೈ ಮುಂಗೈಗೆ ಹೊಡೆದ್ದಿದ್ದರಿಂದ ಭಾರಿ ರಕ್ತಗಾಯ ವಾಗಿರುತ್ತದೆ ನಂತರ ಶಂಕರನು ಕಬ್ಬಿಣದ ರಾಡಿನಿಂದ ಹಣಮಂತ ಇವರ ತಲೆಗೆ, ಬೆನ್ನಿಗೆ ಬಲಗಡೆ ಮಗ್ಗಲಿಗೆ ಹೊಡೆದಿದ್ದರಿಂದ ಗಾಯಗಳಗಾರಿತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.